Monday, 28 September 2020
ಛಾಂದೋಗ್ಯ ಉಪನಿಷತ್ ಸಾರಸಂಗ್ರಹ
ಮೂಲ ಲೇಖಕರು: ಸ್ವಾಮಿ ಆದಿದೇವಾನಂದ
ಶ್ರೀರಾಮಕೃಷ್ಣ ಆಶ್ರಮ
ಯಾದವಗಿರಿ:ಮೈಸೂರು570020
ಸಂಗ್ರಹ:ಡಾ.ರವಿಂೀದ್ರ ಹೊಸದುಗ೯
ಐದನೆಯ ಮುದ್ರಣ,1೯೯5
..................................................
ಪ್ರಸ್ತಾವನೆ(ಮುನ್ನುಡಿ):
1) ಸಾಮವೇದಕ್ಕೆ ಸೇರಿರುವ ಛಾಂದೋಗ್ಯ ಉಪನಿಷತ್ತು ವೇದಾಂತ ದಶ೯ನಕ್ಕೆ ಮೂಲ ವಿಷಯಗಳನ್ನು ಒದಗಿಸಿರುವ ಅತ್ಯಂತ ಪ್ರಾಚೀನವಾದ ಆಕರ ಗ್ರಂಥವಾಗಿದೆ.(ಪುಟ 5 ಮುನ್ನುಡಿ)
2)ಈ ಉಪನಿಷತ್ತು ತಾಂಡಿಗಳ ಶಾಖೆಗೆ ಸೇರಿರಬಹುದೆಂದು ಕೆಲವರು ಅಭಿಪ್ರಾಯಪಟ್ಟಿರುತ್ತಾರೆ.(ಪುಟ 5 ಮುನ್ನುಡಿ)
3)ಸೂತ್ರ ಭಾಷ್ಯದಲ್ಲಿ ಈ ಉಪನಿಷತ್ತಿನಿಂದ ಆರಿಸಿಕೊಂಡಿರುವ ವಿಷಯವಾಕ್ಯಗಳ ಸಂಖ್ಯೆಯನ್ನು ನೋಡಿದರೆ ವೇದಾಂತ ದಶ೯ನದಲ್ಲಿ ಈ ಉಪನಿಷತ್ತಿಗೆ ವಿಶೇಷ ಪ್ರಾಧಾನ್ಯವಿದೆ ಎಂಬುದು ಸ್ಪಷ್ಟವಾಗುತ್ತದೆ.ಛಾಂದೋಗ್ಯ ಉಪನಿಷತ್ತು ಬಹು ಮುಖ್ಯವಾದ ದಹರವಿದ್ಯೆ,ಶಾಂಡಿಲ್ಯ ವಿದ್ಯೆ ಮೊದಲಾದ ಉಪಾಸನೆಗಳನ್ನು ಒಳಗೊಂಡಿದೆ.ಈ ಉಪಾಸನೆಗಳು ಛಾಂದೋಗ್ಯ ಉಪನಿಷತ್ತಿಮ ಒಂದು ವೈಶಿಷ್ಟ್ಯ.(ಪುಟ 5 ಮುನ್ನುಡಿ)
3)ಈಗ ನಮಗೆ ಸಿಕ್ಕಿರುವ ಛಾಂದೋಗ್ಯ ಉಪನಿಷತ್ ಭಾಷ್ಯಗಳಲ್ಲಿ ಶ್ರೀ ಶಕರಾಚಾಯ೯ರ ಭಾಷ್ಯವು ಅತ್ಯಂತ ಪ್ರಾಚೀನವಾಗಿದೆ.(ಪುಟ 5 ಮುನ್ನುಡಿ)
ಮೊದಲನೆಯ ಅಧ್ಯಾಯ:
4)ಶಾಸ್ತ್ರವು ತಿಳಿಸಿಕೊಡುವ ಒಂದು ಆಲಂಬನವನ್ನು ತೆಗೆದುಕೊಂಡು ಅದರಲ್ಲಿ ಸಮಾನ ಚಿತ್ತವೃತ್ತಿಯನ್ನುಂಟು ಮಾಡುವುದು ಉಪಾಸನೆ.(ಪುಟ 6 ಮುನ್ನುಡಿ)
5)ಉಪಾಸನೆಯು ಸತ್ವಶುದ್ಧಿಯನ್ನುಂಟು ಮಾಡಿ ವಸ್ತುತತ್ವವನ್ನು ಪ್ರಕಾಶಿಸುವುದರಿಂದ ಅದ್ವೈತ ಜ್ಞಾನಕ್ಕೆ ಉಪಕಾರವಾಗಿರುತ್ತದೆ.(ಪುಟ 6 ಮುನ್ನುಡಿ)
6)ಕಮ೯ದಲ್ಲಿಯೇ ಧೃಢವಾದ ಮನಸ್ಸುಳ್ಳ ಸಾಧಕನಿಗೆ ಕಮ೯ವನ್ನು ಬಿಟ್ಟು ಉಪಾಸನೆಯಲ್ಲಿ ಮನಸ್ಸನ್ನು ತಿರುಗಿಸುವುದು ಕಷ್ಟಸಾಧ್ಯವಾದುದರಿಂದ ಉಪನಿಷತ್ತು ಕಮಾ೯ಂಗ ವಿಷಯವಾದ ಉಪಾಸನೆಯನ್ನೇ ಮೊದಲು ಪ್ರಾರಂಭಿಸುತ್ತದೆ. (ಪುಟ 6)
7)ಮೊದಲನೆಯ ಅಧ್ಯಾಯಕ್ಕೆ ಹದಿಮೂರು ಖಂಡಗಳಿವೆ. ಉದ್ಗೀತದ ಅವಯವವಾದ ಓಂಕಾರದ ಉಪಾಸನೆಯು ಮೊದಲನೆಯ ಖಂಡದ ವಿಷಯವಾಗಿದೆ.(ಪುಟ 6 ಮುನ್ನುಡಿ)
8)ವಿಗ್ರಹವು ಪರಮಾತ್ಮನ ಪ್ರತೀಕವಾಗಿರುವಂತೆ ಓಂಕಾರವು ಬ್ರಹ್ಮದ ಪತೀಕವಾಗಿದೆ.(ಪುಟ 6 ಮುನ್ನುಡಿ)
೯) ಓಂಕಾರವು ನಾಮವೂ ಪ್ರತೀಕವೂ ಆಗಿ ಪರಮಾತ್ಮನ ಉಪಾಸನೆಗೆ ಶ್ರೇಷ್ಠವಾದ ಸಾಧನವಾಗಿರುತ್ತದೆ.(ಪುಟ 6 ಮುನ್ನುಡಿ)
10)ಸಾಮದ ಭಾಗಗಳಿಗೆ ಭಕ್ತಿಗಳೆಂದು ಹೆಸರು.ಉದ್ಗಾತೃವು ಹಾಡುವ ಭಾಗವು ಉದ್ಗೀಥವೆನಿಸಿದೆ.ಇವನು ಓಂ ಎಂದು ಹಾಡುವುದರಿಂದ ಓಂಕಾರವು ಉದ್ಗೀತವೆನಿಸಿದೆ.ಉದ್ಗೀಥವು ಜ್ಯೋತಿಷ್ಟೋಮ ಕಮ೯ದ ಅಂಗವಾಗಿದ್ದರೂ ಇಲ್ಲಿ ಸ್ವತಂತ್ರವಾದ ಉಪಾಸನೆಯಾಗಿದೆ.(ಪುಟ 6 ಮುನ್ನುಡಿ)
11) ಎರಡನೆಯ ಖಂಡದಲ್ಲಿ ಉದ್ಗೀಥವನ್ನು ಪ್ರಾಣವೆಂದೇ ಉಪಾಸಿಸಬೇಕೆಂದು ಹೇಳಿದೆ.(ಪುಟ7 ಮುನ್ನುಡಿ)
12)ಮೂರನೆಯ ಖಂಡದಲ್ಲಿ ಆದಿತ್ಯದೃಷ್ಟಿಯಿಂದ ಉದ್ಗೀಥೋಪಾಸನೆಯನ್ನು ಹೇಳಿದೆ.ಪ್ರಾಣ ಆದಿತ್ಯ ಇವರಿಗೆ ಸ್ಥಾನಭೇದವಿದ್ದರೂ ತತ್ವ ಭೇದವಿಲ್ಲ.ತತ್ವವು ಅಭಿನ್ನವಾಗಿರುವುದರಿಂದ ಉದ್ಗೀಥವನ್ನು ಪ್ರಾಣನೆಂದೂ ಉಪಾಸಿಸಬೇಕು.(ಪುಟ 7 ಮುನ್ನುಡಿ)
13)ನಾಲ್ಕನೆಯ ಖಂಡದಲ್ಲಿ ಓಂಕಾರೋಪಾಸನೆಯು ಮುಂದುವರಿಯುತ್ತದೆ.ಓಂಕಾರವು ಅಮೃತವೂ ಅಭಯವೂ ಆಗಿರುತ್ತದೆ.ಓಂಕಾರವು ಅಮೃತ,ಅಭಯ ಎಂಬ ಗುಣಗಳಿಂದ ಕೂಡಿರುವುದೆಂದು ಯಾವನು ಉಪಾಸಿಸುವನೊ ಅವನು ಅಮೃತನೂ ಅಭಯನೂ ಆಗುತ್ತಾನೆ.(ಪುಟ 7 ಮುನ್ನುಡಿ)
14)ಋಗ್ವೇದದಲ್ಲಿ ಉಕ್ತವಾಗಿರುವ ಪ್ರಣವವೇ ಸಾಮವೇದಕ್ಕೆ ಸೇರಿದ ಛಾಂದೋಗ್ಯದಲ್ಲಿ ಉದ್ಗೀಥಶಬ್ದ ವಾಚ್ಯವಾಗಿದೆ.(ಪುಟ 7 ಮುನ್ನುಡಿ)ಆಖ್ಯಾಯಿಕಾ ರೂಪದಿಂದ ಎಂಡನೆಯ ಮತ್ತು ಒಂಬತ್ತನೆಯಖಂಡಗಳಲ್ಲಿ ಹೇಳಿದೆ.)
15)ಆರನೆಯ ಖಂಡದಲ್ಲಿ ಸವ೯ಫಲ-ಸಂಪತ್ತಿಗಾಗಿ ಉದ್ಗೀಥದ ಇನ್ನೊಂದು ಉಪಾಸನೆಯನ್ನು ವಿಧಿಸಿದೆ(ಪುಟ 7 ಮುನ್ನುಡಿ)
16) ಏಳನೆಯ ಖಂಡದಲ್ಲಿ ಓಂಕಾರವನ್ನು ಆದಿತ್ಯ ಚಕ್ಷುಪುರುಷನ ದೃಷ್ಟಿಯಿಂದ ಉಪಾಸಿಸಬೇಕೆಂದು ಹೇಳಿದೆ.(ಪುಟ 7 ಮುನ್ನುಡಿ)
17)ಪರೋವರೀಯ ಸತ್ವ-ಗುಣವೆಂಬ ಫಲವುಳ್ಳ (ಎಂದರೆ ಉತ್ತರೋತ್ತರ ಉತ್ಕøಷ್ಟಗುಣವಿಶಿಷ್ಟವಾದ ಫಲವುಳ್ಳ)ಉದ್ಗೀತದ ಬೇರೊಂದು ಉಪಾಸನೆಯನ್ನು ಆಖ್ಯಾಯಿಕಾ ರೂಪದಿಂದ ಎಂಟನೆಯ ಮತ್ತು ಒಂಬತ್ತನೆಯ ಖಂಡಗಳಲ್ಲಿ ಹೇಳಿದೆ.)
18)ಉದ್ಗೀತೋಪಾಸನೆಯ ಪ್ರಸಂಗದಲ್ಲಿ ಪ್ರಸ್ತಾವ,ಪ್ರತಿಹಾರ ಎಂಬ ಹೆಸರುಳ್ಳ ಸಾಮ ಭಕ್ತಿಗಳ ಉಪಾಸನೆಯನ್ನು ಹೇಳಲು ಪ್ರಸ್ತಾವ,ಉದ್ಗೀತ,ಪ್ರತಿಹಾರ ಎಂಬ ಈ ಭಕ್ತಿಗಳನ್ನು ಪ್ರಾಣ,ಆದಿತ್ಯ,ಅನ್ನ ಇವುಗಳ ದೃಷ್ಟಿಯಿಂದ ಉಪಾಸಿಸಬೇಕೆಂದು ಈ ಖಂಡದ ಮತ್ತು ಮುಂದಿನ ಖಂಡದ ಒಟ್ಟಥ೯.ಪ್ರಾಣಾದಿ ದೇವತೆಗಳ ಭಾವವನ್ನು ಪಡೆಯುವುದು ಅಥವಾ ಕಮ೯ಸಮೃದ್ಧಿ ಈ ಉಪಾಸನೆಯ ಫಲ.(ಪುಟ 8 ಮುನ್ನುಡಿ)
1೯)ಹನ್ನೆರಡನೆಯ ಖಂಡ:ದೇವತೆಗಳ ರೂಪದಲ್ಲಿರುವ ನಾಯಿಗಳಿಗೆ ಗೋಚರವಾದ ಶೌವ ಉದ್ಗೀಥವನ್ನು ಅನ್ನ ಲಾಭಕ್ಕೋಸ್ಕರ ಈ ಖಂಡದಲ್ಲಿ ಹೇಳಿದೆ.(ಪುಟ 8 ಮುನ್ನುಡಿ)
20)ಹದಿಮೂರನೆಯ ಖಂಡ: ಸ್ತೋಭಾಕ್ಷರ ವಿಷಯವಾದ ಬೇರೆ ಬೇರೆ ಉಪಾಸನೆಯನ್ನು ಒಟ್ಟುಗೂಡಿಸಿ ಹೇಳಿದೆ.(ಪುಟ 8 ಮುನ್ನುಡಿ)
ಎರಡನೆಯಅಧ್ಯಾಯ:
21) ಮೊದಲನೆಯ ಅಧ್ಯಾಯದಲ್ಲಿ ಸಾಮಾಯವಯವ ವಿಷಯವಾದ ಅನೇಕ ಫಲಗಳುಳ್ಳ ಉಪಾಸನೆಯನ್ನೂ ಅನಂತರ ಸ್ತೋಭಾಕ್ಷರ ವಿಷಯವಾದ ಉಪಾಸನೆಯನ್ನೂ ಹೇಳಿದ್ದಾಯಿತು.ಆದರೆ ಅದು ಸಾಮದ ಏಕದೇಶಕ್ಕೇ ಸಂಬಂಧ ಪಟ್ಟಿರುವುದರಿಂದ ಈಗ ಎರಡನೆಯ ಅಧ್ಯಾಯದಲ್ಲಿ ಸಮಸ್ತಸಾಮದಲ್ಲಿ ಸಮಸ್ತ ಸಾಮವಿಷಯವಾದ ಉಪಾಸನೆಗಳನ್ನು ಉಪದೇಶಿಸಿದೆ.(ಪುಟ 8 ಮುನ್ನುಡಿ)
22) ಎರಡನೆಯ ಅಧ್ಯಾಯದಲ್ಲಿ ಇಪ್ಪತ್ನಾಲ್ಕು ಖಂಡಗಳಿವೆ.
ಮೊದಲನೆಯ ಖಂಡ: ಸಮಸ್ತ ಅವಯವಗಳಿಂದ ಕೂಡಿದ ಸಾಮದಲ್ಲಿ ಸಾಧುದೃಷ್ಟಿಯನ್ನು ವಿಧಿüಸಿರುವುದು ಮೊದಲನೆಯ ಖಂಡದ ತಾತ್ಪಯ೯.(ಪುಟ 8 ಮುನ್ನುಡಿ)
23)ಆದರೆ ಸಾಮದ ಏಕದೇಶೋಪಾಸನೆಯು ಅಸಾಧುವೆಂದು ತಿಳಿಯಕೂಡದು.ಉದ್ಗಾತೃವೇ ಮೊದಲಾದವರು ಪಠಿಸುವ ಸಾಮದ ಅವಯವಗಳಿಗೆ ಭಕ್ತಿಗಳೆಂದು ಹೆಸರು.ಹಿಂಕಾರ,ಪ್ರಸ್ತಾವ,ಉದ್ಗೀಥ ಪ್ರತಿಹಾರ,ನಿಧನ-ಇವು ಸಾಮದ ಪಂಚ ಅವಯವಗಳು.ಈ ಪಂಚವಿಧಸಾಮಗಳನ್ನು
1)ಪೃಥಿವ್ಯಾದಿ-ಲೋಕದೃಷ್ಟಿಯಿಂದಲೂ
2)ಪುರೋವಾತಾದಿ ಲೋಕ-ವೃಷ್ಟಿದೃಷ್ಟಿಯಿಂದಲೂ
3)ಮೇಘವೇ ಮೊದಲಾದ ನೀರಿನ ದೃಷ್ಟಿಯಿಂದಲೂ
4) ವಸಂತಾದಿ ಋತು ದೃಷ್ಟಿಯಿಂದಲೂ
5) ಆಡು ಕುರಿ ಮೊದಲಾದ ಪಶು ದೃಷ್ಟಿಯಿಂದಲೂ
6) ಪ್ರಾಣ ದೃಷ್ಟಿಯಿಂದಲೂ
ಉಪಾಸಿಸಬೇಕೆಂದು 2-7 ಅಧ್ಯಾಯಗಳಲ್ಲಿ ಹೇಳಿದೆ.(ಪುಟ 8 ಮುನ್ನುಡಿ)
24) ಪಂಚವಿಧ ಸಾಮಕ್ಕೆ ಆದಿ, ಉಪದ್ರವಗಳನ್ನು ಸೇರಿಸಿದರೆ ಸಪ್ತವಿಧ ಸಾಮವಾಗುವುದು.ಸಾಮದ ಸಪ್ತವಿಧ ಸಾಮವನ್ನು ವಾಗ್-ದೃಷ್ಟಿಯಿಂದ ಉಪಸಿಸಬೇಕೆಂಬುದು ಎಂಟನೆಯ ಖಂಡದ ವಿಷಯ.ಅನ್ನಾದನೂ ಅನ್ನವಂತನೂ ಆಗುವುದು ಈ ಉಪಾಸನೆಯ ಫಲ.(ಪುಟ ೯ ಮುನ್ನುಡಿ)
25) ಒಂಬತ್ತನೆಯ ಖಂಡ: ಹಿಂದೆ ಅವಯವ ಮಾತ್ರವಾದ ಆದಿತ್ಯದೃಷ್ಟಿಯನ್ನು ಇಡಬಾಕೆಂದು ಹೇಳಿದೆ.ಈ ಆದಿತ್ಯನನ್ನು ಸಮಸ್ತಸಾಮದಲ್ಲಿ ಅವಯವ-ವಿಭಾಗಶಃ ಅಭ್ಯಾಸ ಮಾಡಿಕೊಂಡು ಸಪ್ತವಿಧ ಸಾಮವನ್ನು ಉಪಾಸಿಸಬೇಕೆಂದು ಒಂಬತ್ತೆನೆಯ ಖಂಡದಲ್ಲಿ ಉಪದೇಶಿಸಿದೆ.ಇಂಥ ಉಪಾಸಕನು ಆದಿತ್ಯನ ದೃಷ್ಟಿಯನ್ನೇ ಪಡೆಯುತ್ತಾನೆ.(ಪುಟ ೯ ಮುನ್ನುಡಿ)
26)1,3,6ರಲ್ಲಿ ಉದ್ಗೀಥ ಭಕ್ತಿಯ ನಾಮಾಕ್ಷರಗಳನ್ನು ಉತ್-ಗೀ-ಥ ಎಂದು ಉಪಾಸಿಸ ಬೇಕೆಂದು ಹೇಳಿದೆ. (ಪುಟ ೯ ಮುನ್ನುಡಿ)
27) ಮನಸ್ಸು,ವಾಕ್ಕು,ಚಕ್ಷುಸ್ಸು, ಶ್ರೋತ್ರ,ಪ್ರಾಣ-ಇವುಗಳ ದೃಷ್ಟಿಯಿಂದ ಗಾಯತ್ರ ಸಾಮವನ್ನು ಉಪಸ್ಸಬೇಕೆಂದು ಹನ್ನೊಂದನೆಯ ಖಂಡದಲ್ಲಿ ಹೇಳಿದೆ.(ಪುಟ ೯ ಮುನ್ನುಡಿ)
28)ಹನ್ನೆರಡನೆಯ ಸಾಮದಲ್ಲಿ ಮಂಥನ, ಧೂಮ, ಜ್ವಾಲೆ, ಅಂಗಾರ,ಉಪಶಾಂತಿ,ಸಂಶಾಂತಿ-ಇವುಗಳ ದೃಷ್ಟಿಯಿಂದ ರಥಾಂತರ ಸಾಮವನ್ನು ಉಪಾಸಿಸ ಬೇಕೆಂದು ಹನ್ನೆರಡನೆಯ ಖಂಡದಲ್ಲಿ ಹೇಳಿದೆ.(ಪುಟ ೯ ಮುನ್ನುಡಿ)
28)ಹದಿಮೂರನೆಯ ಸಾಮ: ಇದರಲ್ಲಿ ಉಪಮಂತ್ರಣಾದಿಗಳ ದೃಷ್ಟಿಯಿಂದ ವಾಮದೇವ ಸಾಮವನ್ನು ಉಪಾಸಿಸ ಬೇಕೆಂದು ಹೇಳಿದೆ.(ಪುಟ ೯ ಮುನ್ನುಡಿ)
2೯) 14 ರಿಂದ 21 ಖಂಡಗಳು:
1)ಆದಿತ್ಯ ದೃಷ್ಟಿಯಿಂದ ಬೃಹತ್ಸಾಮ ಉಪಾಸನೆಯನ್ನೂ
2)ಅಭ್ರಾದಿ ದೃಷ್ಟಿಯಿಂದ ವೈರೂಪ- ಸಾಮೋಪಾಸನೆಯನ್ನು
ವಸಂತಾದಿ ದೃಷ್ಟಿಯಿಂದ ವೈರಾಜ- ಸಾಮೋಪಾಸನೆಯನ್ನು
3) ಪೃಥಿವ್ಯಾದಿ ದೃಷ್ಟಿಯಿಂದಲೂ ಶಕ್ವರೀ- ಸಾಮೋಪಾಸನೆಯನ್ನು
ಆಡು ಮೊದಲಾದವುಗಳ ದೃಷ್ಟಿಯಿಂದ ರೇವತಿ-ಸಾಮೋಪಾಸನೆಯನ್ನು
4)ಲೋಮಾದಿ ದೃಷ್ಟಿಯಿಂದ ಯಜ್ಞಾ-ಯಜ್ಞೇಯ-ಸಾಮೋಪಾಸನೆಯನ್ನು
5)ಅಗ್ನ್ಯಾದಿ ದೃಷ್ಟಿಯಿಂದ ರಾಜನ-ಸಾಮೋಪಾಸನೆಯನ್ನು
6)ತ್ರಯೀವಿದ್ಯಾ ದೃಷ್ಟಿಯಿಂದ ಸಾಮ ಸಾಮೋಪಾಸನೆಯನ್ನೂ 14 ರಿಂದ 21ನೆಯ ಖಂಡದಲ್ಲಿ ವಿಧಿಸಿದೆ.
ಹೀಗೆ ಸವಾ೯ತ್ಮಕ ಸಾಮವನ್ನು ಅರಿತುಕೊಂಡಿರುವವನು ಸವಾ೯ತ್ಮಕನಾಗುವನು.(ಪುಟ 10 ಮುನ್ನುಡಿ)
30)ಇಪ್ಪತ್ತೆರಡನೆಯ ಖಂಡ: ಸಾಮೋಪಾಸನೆಯ ಪ್ರಸಂಗದಿಂದ ಉದ್ಗಾತೃವಿಗೆ ಗಾನ ವಿಶೇಷಾದಿ ಸಂಪತ್ತಿಯನ್ನು ಉಪದೇಶಿಸಿದೆ.(ಪುಟ 10 ಮುನ್ನುಡಿ)
31)ಇಪ್ಪತ್ತಮೂರನೆಯ ಖಂಡ: ಇಲ್ಲಿ ಓಂಕಾರೋಪಾಸನೆಯನ್ನು ವಿಧಿಸಿದೆ.ಗೃಹಸ್ಥಾದಿಗಳಿಗೆ ಸ್ವಧಮಾ೯ಚರಣೆಯಿಂದ ಪುಣ್ಯಲೋಕ ಪ್ರಾಪ್ತಿಯು ಫಲವಾಗಿದ್ದರೂ ಓಂಕಾರೋಪಾಸಕನಿಗೆ ಅಮೃತತ್ವವೆಂಬ ವಿಶಿಷ್ಟ ಫಲವು ಪ್ರಾಪ್ತಯಾಗುತ್ತದೆ. (ಪುಟ 10 ಮುನ್ನುಡಿ)
32) ಇಪ್ಪತ್ತನಾಲ್ಕನೆಯ ಖಂಡ:ಪ್ರಾಸಂಗಿಕವಾದ ಓಂಕಾರಸ್ತುತಿಯನ್ನು ಬಿಟ್ಟು ಈಗ ಪುನಃ ಯಜ್ಞಾಂಗವಾದ ಸಾಮ,ಹೋಮ,ಮಂತ್ರ,ಉತ್ಥಾನ ಇವುಗಳನ್ನು ಶ್ರುತಿಯು ಈ ಅಧ್ಯಾಯದ ಕೊನೆಯ ಖಂಡದಲ್ಲಿ ಹೇಳಿದೆ.ಆಯಾ ಸಾಮಗಳನ್ನು ಆಯಾ ಸವನದಲ್ಲಿ ಹಾಡಿ ,ಆಯಾ ಮಂತ್ರಗಳಿಂದ ಹೋಮವನ್ನೂ ಉತ್ಥಾನವನ್ನೂ ಮಾಡಿದರೆ ಸವನದೇವತೆಗಳು ಸವನದ ಫಲವನ್ನು ಅನುಗ್ರಹಿಸುತ್ತಾರೆ.(ಪುಟ 10 ಮುನ್ನುಡಿ)
ಮೂರನೆಯ ಅಧ್ಯಾಯ:
33)ಹಿಂದೆ ಯಜ್ಞಾಂಗವೂ ಯಜ್ಞವಿಷಯಕವೂ ಆದ ಸಾಮ,ಹೋಮ,ಮಂತ್ರೋತ್ಥಾನಗಳನ್ನು ಆಯಾ ವಿಶಿಷ್ಟ ಫಲ ಪ್ರಾಪ್ತಿಗಾಗಿ ಹೇಳಿದ್ದಾಯಿತು.(ಪುಟ 10 ಮುನ್ನುಡಿ)
34)ಸವ೯ಯಜ್ಞಗಳ ಕಾಯ೯ಸಿದ್ಧಿರೂಪನಾದ ಆದಿತ್ಯನು ಮಹದೈಶ್ವಯ೯ದಿಂದ ಪ್ರಕಾಶಿಸುತ್ತಿದ್ದಾನೆ.ಸವ೯ ಪ್ರಾಣಿಗಳ ಕಮ೯ಫಲಸ್ವರೂಪನಾದ ಇವನನ್ನು ಆಶ್ರಯಿಸಿ ಎಲ್ಲರೂ ಜೀವಿಸುತ್ತಾರೆ.(ಪುಟ 10 ಮುನ್ನುಡಿ)
35)ಆದುದರಿಂದ ಯಜ್ಞದ ನಿರೂಪಣೆಯು ಆದಮೇಲೆ ಅದರ ಕಾಯ೯ವಾದ ಆದಿತ್ಯ ವಿಷಯಕ ಉಪಾಸನೆಯನ್ನು -ಅದು ಸವ೯ ಪುರುಷಾಥ೯ಗಳಿಗಿಂತಲೂ ಶ್ರೇಷ್ಠ ಫಲವುಳ್ಳದ್ದಾದುದರಿಂದ -ವಿಧಿಸಲು ಈ ಅಧ್ಯಾಯವು ಪ್ರಾರಂಭವಾಗಿರುತ್ತದೆ.(ಪುಟ 10 ಮುನ್ನುಟಿ)
36)ಮೊದಲ ಹನ್ನೊಂದು ಖಂಡಗಳಲ್ಲಿ ಮಧುವಿದ್ಯೆಯನ್ನು ಹೇಳಿದೆ.ಆದಿತ್ಯನು ದೇವತೆಗಳಿಗೆ ಮಧು.ಎಂದರೆ ಜೇನುತುಪ್ಪದಂತೆ ಮೋದವನ್ನುಂಟು ಮಾಡುತ್ತಾನೆ.ಈ ಮಧುವಿಗೆ ದ್ಯುಲೋಕವು ಅಡ್ಡತೊಲೆ,ಅಂತರಿಕ್ಷವು ಜೇನುಗೂಡು ಮತ್ತು ರಶ್ಮಿಗಳಲ್ಲಿರುವ ಜಲಬಿಂದುಗಳು ಮೊಟ್ಟೆಗಳು,ಆದಿತ್ಯನ ಪೂವ೯ ರಶ್ಮಿಗಳು ಜೇನುಗೂಡಿನಲ್ಲಿzರುವ ರಂದ್ರಗಳು.(ಪುಟ 11 ಮುನ್ನುಡಿ)
37)ಈ ಕಮ೯ದಿಂದಲೇ ಯಶಸ್ಸು ಮೊದಲಾದ ರಸವು ಉತ್ಪನ್ನವಾಗುತ್ತದೆ.ಈ ರಸವು ಆದಿತ್ಯನ ಲೋಹಿತರೂಪ.ಅನುಷ್ಠಿಸಲ್ಪಟ್ಟ ಕಮ೯ದ ಫಲವು ಆದಿತ್ಯನನ್ನು ಆಶ್ರಯಿಸುತ್ತದೆ.ಹೀಗೆಯೆ ರೂಪಕವು ಯಜಸ್ಸು ಸಾಮ,ಅಥವ೯ಇವುಗಳ ವಿಷಯದಲ್ಲಿ ಮುಂದುವರೆಯುತ್ತದೆ.( ಪುಟ 11ಮುನ್ನುಡಿ)
38)12-13ನೆಯ ಖಂಡಗಳು ಗಾಯತ್ರೀ ಬ್ರಹ್ಮೋಪಾಸನೆಯನ್ನು ಹೊಂದಿವೆ.ಇಲ್ಲಿ ಗಾಯತ್ರೀದ್ವಾರದಿಂದ ಬ್ರಹ್ಮವನ್ನು ಉಪದೇಶಿಸಲು ಅನೇಕ ಕಾರಣಗಳಿವೆ.1)ದೇವತೆಗಳು ಇತರ ಛಂದಸ್ಸುಗಳ ಮೂಲಕ ಸೋಮವನ್ನು ತರಲು ವಿಫಲರಾದಾಗ ಗಾಯತ್ರಿಯು ಅದನ್ನು ದ್ಯುಲೋಕದಿಂದ ತಂದಿತು.2) ಜಗತೀ-ತ್ರಿಷ್ಟುಪ್-ಛಂದಸ್ಸುಗಳು ತಮ್ಮ ಕೆಲವು ಅಕ್ಷರಗಳನ್ನು ಬಿಟ್ಟುಬಂದಾಗ ಗಾಯತ್ರಿಯು ಅವುಗಳನ್ನು ತಂದಿತು.3)ಇದಕ್ಕೆ ಯಜ್ಞದಲ್ಲಿ ಪ್ರಾಧಾನ್ಯವಿದೆ.4)ಇದು ಬ್ರಾಹ್ಮಣನಿಗೆ ಸಾರವಾಗಿದೆ.ಶಬ್ದರೂಪವಾದ ವಾಕ್ಕು ಗಾಯತ್ರಿಯೇ.ಏಕೆಂದರೆ ವಾಕ್ಕೇ ಪ್ರಾಣಿಗಳನ್ನೆಲ್ಲ ಹೆಸರಿಸುತ್ತದೆ(ಗಾಯತಿ) ಮತ್ತು ಕಾಪಾಡುತ್ತದೆ.(ತ್ರಾಯತೇ).ಆದುದರಿಂದ ಸ್ಥಾವರ ,ಜಂಗಮ ರೂಪದಲ್ಲಿ ಇರುವುದೆಲ್ಲ ಗಾಯತ್ರಿಯೇ..ಹೀಗೆಯೇ ಭೂತಗಳು,ಪೃಥ್ವಿ,ಶರೀರ,ಹೃದಯ,ಪ್ರಾಣ-ಇವೂ ಕೂಡಾ ಗಾಯತ್ರಿಯೇ.ಈ ಆರು ರೂಪಗಳನ್ನೂ ನಾಲ್ಕು ಪಾದಗಳನ್ನೂ ಪಡೆದಿರುವ ಗಾಯತ್ರಿಯ ಮಹಿಮೆಯು ವಿಕಾರ ರೂಪವಾದ ಗಾಯತ್ರೀ ಬ್ರಹ್ಮಕ್ಕಿಂತಲೂ ಸಮಸ್ತ ಗಾಯತ್ರಿಯ ಆತ್ಮನೂ ಪರಮಾಥ೯ ಸತ್ಯ ಸ್ವರೂಪನೂ ಆದ ಪುರುಷನು ದೊಡ್ಡವನು(ಪುಟ 12 ಮುನ್ನುಡಿ)
3೯)ಈ ಜಗತ್ತೆಲ್ಲ ಇವನ ಒಂದು ಪಾದವು.ಉಳಿದ ಮೂರು ಪಾದಗಳು ದ್ಯುಲೋಕದಲ್ಲಿ (ಎಂದರೆ ತನ್ನ ಸ್ವರೂಪದಲ್ಲಿ ) ಇವೆ.ಗಾಯತ್ರೀ ದ್ವಾರದಿಂದ ಹೇಳಿದ ಬ್ರ್ಮವೇ ನಮ್ಮ ಹೊರಗಿನ ಆಕಾಶವಾಗಿದೆ.(ಪುಟ 12 ಮುನ್ನುಡಿ)
40)ಹೊರಗಿರುವ ಆಕಾಶವು ನಮ್ಮ ಒಳಗಿನ ಆಕಾಶವಾಗಿದೆ.ಒಳಗಿರುವ ಆಕಾಶವೇ ನಮ್ಮ ಹೃದಯಾಕಾಶವಾಗಿದೆ.(ಪುಟ 12 ಮುನ್ನುಡಿ)
41) ಹೃದಯಾಕಾಶದಲ್ಲಿ ಧ್ಯಾನಿಸಲ್ಪಡುವ ಬ್ರಹ್ಮವು ಪೂವ೯ವು ,ಅವಿನಾಶಿ ಎಂದು ಉಪಾಸಿಸಬೇಕು.(ಪುಟ 12 ಮುನ್ನುಡಿ)
42)ಹದಿನಾಲ್ಕನೆಯ ಖಂಡದಲ್ಲಿ ಶಾಂಡಿಲ್ಯ ವಿದ್ಯೆಯನ್ನು ಉಪದೇಶಿಸಿದೆ.ಮನುಷ್ಯನು ಮರಣಕಾಲದಲ್ಲಿ ಯಾವ ನಿಶ್ಚಯದಿಂದ ದೇಹವನ್ನು ಬಿಡುವನೋ ಅದಕ್ಕೆ ಅನುಸಾರವಾಗಿ ಅದರ ಫಲವನ್ನೇ ಹೊಂದುವನು.(ಪುಟ 12 ಮುನ್ನುಡಿ)(ಇದರ ಪ್ರಕಾರ ಬ್ರಹ್ಮನಿಶ್ಚಯವನ್ನು ಮಾಡಿದವನಿಗೆ ಬ್ರಹ್ಮವೇ ಪ್ರಾಪ್ತಿ ಎಂದಾಯಿತು)
43)ಬ್ರಹ್ಮದಿಂದ ತೇಜಸ್ಸು,ನೀರು ಅನ್ನ ಮೊದಲಾದ ಎಲ್ಲವೂ ಹುಟ್ಟಿವೆ.ಆದುದರಿಂದ ಅದು ತಜ್ಜಮ್,ಹೀಗೆಯೇ ಎಲ್ಲವೂ ಪ್ರತಿಲೋಮದಿಂದ ಬ್ರಹ್ಮದಲ್ಲಿಯೇ ಲಯವಾಗಿ ಬ್ರಹ್ಮರೂಪದಿಂದ ಉಳಿದುಕೊಳ್ಳುತ್ತವೆ.ಆದುದರಿಂದ ಅದುತಲ್ಲಮ್.ಇದೇ ರೀತಿಯಲ್ಲಿಎಲ್ಲವೂ ಬ್ರಹ್ಮದಲ್ಲಿಯೇ ಪ್ರಾಣನ ಕ್ರಿಯೆಯನ್ನು ಮಾಡಿಕೊಂಡಿರುತ್ತವೆ.ಆದುದರಿಂದ ಅದು ತದನಂ.ಹೀಗೆ ಜಗತ್ತು ತ್ರಿಕಾಲದಲ್ಲಿಯೂ ಬ್ರಹ್ಮಸ್ವರೂಪದಲ್ಲಿ ಇರುವುದರಿಂದ ಅದು ಬ್ರಹ್ಮವೇ.(ಪುಟ12 ಮುನ್ನುಡಿ)
(ತಜ್ಜಮ್,ತಲ್ಲಮ್,ತದನಮ್)
44)ಸಾಧಕನು ರಾಗದ್ವೇಷಾದಿಗಳಿಲ್ಲದೆ ಶಾಂತನಾಗಿ ಎಲ್ಲವೂ ಆದ ಬ್ರಹ್ಮವನ್ನು ಮನೋಮಯತ್ವಾದಿಗುಣಗಳಿಂದ ಉಪಾಸಿಸಬೇಕು.(ಪುಟ 12 ಮುನ್ನುಡಿ)
45)ಹದಿನೈದನೆಯ ಖಂಡ: ಇಲ್ಲಿ ವೀರ ಪುತ್ರನ ದೀಘ೯ ಆಯುಸ್ಸಿಗೋಸ್ಕರ ಕೋಶವಿದ್ಯೆಯನ್ನು ಉಪದೇಶಿಸಿದೆ.(ಪುಟ 12 ಮುನ್ನುಡಿ)
46)ಹದಿನಾರನೆಯ ಖಂಡ ಹದಿನೇಳನೆಯ ಖಂಡದಲ್ಲಿ ಪುರುಷವಿದ್ಯೆಯನ್ನು ಹೇಳಿದೆ.ಮಹೀದಾಸ ಐತರೇಯನು ಈ ಯಜ್ಞ ದಶ೯ನವನ್ನು ಅರಿತುಕೊಂಡು ರೋಗವನ್ನು ಕುರಿತು ಹೀಗೆ ಹೇಳಿದನು.'ರೋಗವೆ ನನ್ನನ್ನು ಏಕೆ ಉಪತಪಿಸುತ್ತೀಯೆ? ನಾನು ಇದರಿಂದ ಸಾಯುವುದಿಲ್ಲ!' ಹೀಗೆ ಉಪಾಸಿಸುವವನು ಮಹೀದಾಸನಂತೆ ನೂರಾಹದಿನಾರು ವಷ೯ಗಳ ಕಾಲ ಜೀವಿಸುತ್ತಾನೆ.(ಪುಟ 13 ಮುನ್ನುಡಿ)
47)ಹದಿನೆಂಟನೆಯ ಖಂಡ:ಇಲ್ಲಿ ಮನ-ಆಕಾಶಗಳಲ್ಲಿ ಸಮಸ್ತ ಮನೋದೃಷ್ಟಿಯನ್ನು ವಿಧಿಸುವುದಕ್ಕಾಗಿ ಮನೋಬ್ರಹ್ಮವನ್ನು ಹೇಳಿದೆ.(ಪುಟ 13 ಮುನ್ನುಡಿ)
48)ಹತ್ತೊಂಬತ್ತನೆಯ ಖಂಡ:ಆದಿತ್ಯನು ಬ್ರಹ್ಮ ಎಂದು ಆದೇಶ.ಆದಿತ್ಯ ಬ್ರಹ್ಮವನ್ನು ಉಪಾಸಿಸುವವನ
ಬಳಿಗೆ ಮಂಗಳ ಘೋಷಗಳು ಬರುತ್ತವೆ ಹಾಗೂ ಸುಖವನ್ನುಟು ಮಾಡುತ್ತವೆ.(ಪುಟ 13 ಮುನ್ನುಡಿ)
ನಾಲ್ಕನೆಯ ಅಧ್ಯಾಯ:
4೯)ಈ ಅಧ್ಯಾಯಕ್ಕೆ ಹದಿನೇಳು ಖಂಡಗಳು.ವಾಯು -ಪ್ರಾ£ಣಗಳು ಬ್ರಹ್ಮದ ಪಾದಗಳೆಂದು ಹಿಂದೆ ಹೇಳಿದೆ.ಈಗ ಅವುಗಳನ್ನು ಸಾಕ್ಷಾತ್ ಬ್ರಹ್ಮವೆಂದೇ ಉಪಾಸಿಸಬೇಕೆಂದು ಶ್ರುತಿಯು ಹೇಳುತ್ತದೆ.
ಶ್ರದ್ಧೆ,ಅನ್ನದಾನ,ವಿನಯ-ಇವು ವಿದ್ಯಾ ಪ್ರಾಪ್ತಿಗೆ ಸಾಧನಗಳೆಂಬುದನ್ನೂ ತಿಳಿಸಿದೆ.(ಪುಟ 13 ಮುನ್ನುಡಿ)
50)ರಾಜನಾದ ಜಾನಶ್ರುತಿ ಪೌತ್ರಾಯಣನು ಅನ್ನದಾನಿಯೆಂದು ಪ್ರಸಿದ್ಧನಾಗಿದ್ದನು. ಒಂದು ರಾತ್ರಿ ರಾಜನು ಅರಮನೆಯ ಉಪ್ಪರಿಗೆಯ ಮೇಲೆ ಇದ್ದಾಗ ಕೆಲವು ಹಂಸಗಳು ಹಾರಿಹೋದವು.ಆಗ ಒಂದು ಹಂಸವು ಇನ್ನೊsಂದು ಹಂಸಕ್ಕೆ ಹೇಳಿತು.'ಹೋ ಭಲ್ಲಾಕ್ಷ!ಜಾನಶ್ರುತಿಯ ಈ ಜ್ಯೋತಿಯು ದ್ಯುಲೋಕದಂತೆ ಹರಡಿಕೊಂಡಿದೆ.ಅದನ್ನು ಸೋಂಕಬೇಡ,ಅದು ನಿನ್ನನ್ನು ಸುಡದಿರಲಿ!'ಎಂದು ಹೇಳಿತು.'ಆ ಗಾಡಿ ರೈಕ್ವನು ಎಂಥವನು?' ಎಂದು ಕೇಳಲಾಗಿ ಹಂಸವು ರೈಕ್ವನನ್ನು ತುಂಬಾ ಪ್ರಶಂಸೆ ಮಾಡಿತು.ಅನಂತರ ರಾಜನು ಇವನನ್ನು ನೋಡಲು ಇವನಿದ್ದಲ್ಲಿಗೆ ಬಂದನು.ರೈಕ್ವನು ಒಂದು ಗಾಡಿಯ ಕೆಳಗೆ ಕುಳಿತಿದ್ದನು.ರಾಜನು ಬೆಲೆಯುಳ್ಳ ವಸ್ತುಗಳನ್ನು ದಾನಮಾಡಿ,'ಭಗವಂತನೆ,ನೀನು ಯಾವ ದೇವತೆಯನ್ನು ಉಪಾಸಿಸುತ್ತೀಯೋ ಆ ದೇವತೆಯನ್ನು ನನಗೆ ಉಪದೇಶಿಸು' ಎಂದು ಬೇಡಿಕೊಂಡನು. ರೈಕ್ವನು ಜಾನಶ್ರುತಿಗೆ 'ಸಂವಗ೯ವಿದ್ಯೆ'ಯನ್ನು ಹೇಳಿಕೊಟ್ಟನು.ಯಾವುದು ತನ್ನಲ್ಲಿ ಎಳೆದುಕೊಂಡು ಲಯ ಮಾಡಿಕೊಳ್ಳುವುದೊ ಅದು ಸಂವಗ೯.ದೇವತೆಗಳಲ್ಲಿ ವಾಯುವನ್ನೂ ಇಂದ್ರಿಯಗಳಲ್ಲಿ ಪ್ರಾಣವನ್ನೂ ಸಂವಗ೯ವೆಂದು ಉಪಾಸಿಸಬೇಕು.(ಪುಟ 14 ಮುನ್ನುಡಿ)
51)ನಾಲ್ಕನೆಯ ಖಂಡ:ಅನ್ನ-ಅನ್ನಾದತ್ವ ರೂಪದಿಂದ ಸಂಸ್ತುತವೂ ವಾಗಾದಿ-ಅಗ್ನ್ಯಾದಿ ರೂಪದಿಂದಿರುವುದೂ ಆದ ಜಗತ್ತನ್ನು ಕಾರಣರೂಪದಿಂದ ಏಕವೆಂದು ಭಾವಿಸಿ,ಹದಿನಾರು ಪ್ರಕಾರದಿಂದ ವಿಂಗಡಿಸಿ
ಅದರಲ್ಲಿ ಬ್ರಹ್ಮದೃಷ್ಟಿಯನ್ನಿಡಬೇಕೆಂದು ನಾಲ್ಕನೆಯ ಖಂಡವನ್ನು ಹೇಳಿದೆ.ಇದಕ್ಕೆ ಷೋಡಶಕಲವಿದ್ಯೆ ಎಂದು ಹೆಸರು.(ಪುಟ 14 ಮುನ್ನುಡಿ)
52)ಶ್ರದ್ಧಾ-ತಪಸ್ಸುಗಳು ಬ್ರಹ್ಮೋಪಾಸನೆಗೆ ಅಂಗವೆಂಬುದನ್ನು ತಿಳಿಸಲು ಸತ್ಯಕಾಮನ ಕಥೆಯು ಬಂದಿದೆ.ವಾಯು(ಋಷಭ),ಅಗ್ನಿ,ಸೂಯ೯(ಹಂಸ) ಮತ್ತು ಪ್ರಾಣ(ನೀರುಕೋಳಿ)-ಇವರು ಸತ್ಯಕಾಮನಿಗೆ ಬ್ರಹ್ಮದ ನಾಲ್ಕು ಪಾದಗಳನ್ನು ತಿಳಿಸಿಕೊಡುತ್ತಾರೆ.
ನಾಲ್ಕು -ಬ್ರಹ್ಮದ ಮೊದಲನೆಯ ಪಾದವು-ಇದಕ್ಕೆ 'ಪ್ರಕಾಶವಾನ್' ಎಂದು ಹೆಸರು.
ಪೃಥ್ವಿ,,ಅಂತರಿಕ್ಷ,ದ್ಯುಲೋಕ,ಸಮುದ್ರ-ಇವು ಬ್ರಹ್ಮನ 'ಅನಂತವಾನ್' ಎಂಬ ಎರಡನೆಯ ಪಾದವು.
ಅಗ್ನಿ,ಸೂಯ೯,ಚಂದ್ರ,ಮಿಂಚು-ಇವು ಬ್ರಹ್ಮದ 'ಜ್ಯೋತಿಷ್ಮಾನ್' ಎಂಬ ಮೂರನೆಯ ಪಾದವು.
ಪ್ರಾಣ,ಕಣ್ಣು,ಕಿವಿ,ಮನಸ್ಸು -ಇವು ಬ್ರಹ್ಮದ ಆಯತನವೆಂಬ ನಾಲ್ಕನೆಯ ಪಾದವು.ಸತ್ಯಕಾಮನು ದೇವತೆಗಳಿಂದ ಷೋಡಶಕಲ ವಿದ್ಯೆಯನ್ನು ಪಡೆದಿದ್ದರೂ ತನ್ನ ಆಚಾಯ೯ನಾದ ಹಾರಿದ್ರುಮನಿಂದ ಇದೇ
ವಿದ್ಯೆಯನ್ನು ಪುನಃ ಪಡೆಯುತ್ತಾನೆ.ಇಲ್ಲಿಗೆ ಒಂಬತ್ತನೆಯ ಖಂಡವು ಮುಗಿಯುತ್ತದೆ.(ಪುಟ 14 ಮುನ್ನುಡಿ)
53)ಹತ್ತನೆಯ ಖಂಡ:ಇನ್ನೊಂದು ಪ್ರಕಾರದಿಂದ ಬ್ರಹ್ಮವಿದ್ಯೆಯನ್ನೂ ಬ್ರಹ್ಮಜ್ಞಾನಿಯ ಗತಿಯನ್ನೂ ಅಗ್ನಿ ವಿದ್ಯೆಯನ್ನು ಇಲ್ಲಿ ತಿಳಿಸಿದೆ. ಉಪಕೋಸಲ ಕಾಮಲಾಯನನು ಸತ್ಯಕಾಮ ಜಾಬಾಲನ ಮನೆಯಲ್ಲಿ ಬ್ರಹ್ಮಚಯ೯ವಾಸ ಮಾಡಿದನು.ಸತ್ಯಕಾಮನು ಇತರ ಶಿಷ್ಯರಿಗೆ ಉಪದೇಶ ಮಾಡಿದ್ದರೂ ಉಪಕೋಸಲನಿಗೆ ಮಾತ್ರ ಉಪದೇಶ ಮಾಡಿರಲಿಲ್ಲ.ಮಾನಸ ದುಃಖದಿಂದ ಸಂತ್ರಪ್ತನಾದ ಉಪಕೋಸಲನು ಉಪವಾಸ ಮಾಡಲು ಪ್ರಾರಂಭಿಸಿದನು.ಅನಂತರ ಅಗ್ನಿಗಳು ಒಂದೊಂದಾಗಿಯೂ ಒಟ್ಟಾಗಿಯೂತಮ್ಮ ತಮ್ಮ ವಿದ್ಯೆಗಳನ್ನು ಹೇಳಿಕೊಟ್ಟವು.ಅನಂತರ ಅಗ್ನಿಗಳು ಉಪಕೋಸಲನಿಗೆ ಉಪದೇಶ ಮಾಡಿದ್ದು ತಿಳಿಯಿತು. ಅವನು ಅಗ್ನಿಗಳು ನಿನಗೆ ಲೋಕಗಳನ್ನು ಮಾತ್ರ ಉಪದೇಶಿಸಿರುತ್ತವೆ.ಆದರೆ ನಾನು ಬ್ರಹ್ಮವನ್ನು ಉಪದೇಶಿಸುತ್ತೇನೆ.ಪದ್ಮಪತ್ರಕ್ಕೆ ನೀರು ಅಂಟಿಕೊಳ್ಳದಂತೆ ಬ್ರಹ್ಮಜ್ಞಾನಿಗೆ ಪಾಪವು ಅಂಟಿಕೊಳ್ಳುವುದಿ
ಲ್ಲ' ಎಂದು ಹೇಳಿದನು.(ಪುಟ 15 ಮುನ್ನುಡಿ)
ಐದನೆಯ ಅಧ್ಯಾಯ:
54)ಹಿಂದೆ ಸಗುಣೋಪಾಸನೆಗೆ ಉತ್ತರಾಯಣದ ಗತಿಯು ಫಲವೆಂದು ಹೇಳಿದ್ದಾಯಿತು.(ಪುಟ 15ಮುನ್ನುಡಿ)
55)ಈಗ ಐದನೆಯ ಅಧ್ಯಾಯದಲ್ಲಿ ಪಂಚಾಗ್ನಿಗಳನ್ನು ಅರಿತುಕೊಂಡಿರುವ ಗೃಹಸ್ಥರಿಗೂ ಮತ್ತು ಅನ್ಯೋಪಾಸಕರಾದ ಊಧ್ವ೯ರೇತಸ್ಕರಿಗೂ ಉತ್ತರ ಮಾಗ೯ವೇ ಗತಿಯೆಂದು ಹೇಳಲಗುತ್ತದೆ.(ಪುಟ 15 ಮುನ್ನುಡಿ)
56)ಅನಂತರ ಕೇವಲ ಕಮಿ೯ಗಳಿಗೆ ಪುನರಾವೃತ್ತಿ ರೂಪವಾದ ಮತ್ತು ಧೂಮಾದಿ ಲಕ್ಷಣವುಳ್ಳ ದಕ್ಷಿಣಗತಿಯನ್ನು ಹೇಳಲಾಗುತ್ತದೆ.(ಪುಟ 15 ಮುನ್ನುಡಿ)
57)ಬ್ರಹ್ಮಜ್ಞಾನಕ್ಕೆ ಸಾಧನವಾದ ವೈರಾಗ್ಯವನ್ನು ಉಪಾಸಕರಲ್ಲಿ ಹುಟ್ಟಿಸುವುದೇ ಈ ಸಮಸ್ತ ವಣ೯ನೆಯ ಉದ್ದೇಶ.ಈ ಅಧ್ಯಾಯದಲ್ಲಿ ಇಪ್ಪತ್ನಾಲ್ಕು ಅಧ್ಯಾಯಗಳಿವೆ.(ಪುಟ16 ಮುನ್ನುಡಿ)
58)ಮೊದಲನೆಯ ಮತ್ತು ಎರಡನೆಯ ಖಂಡದಲ್ಲಿ ಪ್ರಾಣೋಪಾಸನೆಯನ್ನೂ ,ಪ್ರಾಣೋಪಾಸಕನಿಗೆ ಶ್ರೀಮಂಥ ಕಮ೯ವನ್ನೂ ವಿಧಿಸಿದೆ.ಪ್ರಾಣವೇ ಜ್ಯೇಷ್ಠ ಮತ್ತು ಶ್ರೇಷ್ಠ ಎಂಬುದನ್ನು ರೂಪಕದ ಮೂಲಕ ಹೇಳಿದೆ.(ಪುಟ 16 ಮುನ್ನುಡಿ)
5೯)ಸತ್ಯಕಾಮ ಜಾಬಾಲನು ಈ ಪ್ರಾಣೋಪಾಸನೆಯನ್ನು ಗೋಶ್ರುತು ವೈಯಘ್ರಪದ್ಯನಿಗೆ 'ಇದನ್ನು ಒಣಗಿದ ಮೋಟುಮರಕ್ಕೆ ಹೇಳಿದರೂ ಅದರಲ್ಲಿ ಕೊಂಬೆಗಳು ಹುಟ್ಟಿಯೇ ಹುಟ್ಟುವುವು.ಎಲೆಗಳು ಚಿಗುರುವುವು'ಎಂದು ಅದರ ಮಹಿಮೆಯನ್ನು ಹೊಗಳಿರುತ್ತಾನೆ.(ಪುಟ16 ಮುನ್ನುಡಿ)
60)ಮಹತ್ವ ಉಂಟಾದರೆ ಧನವು ಒದಗುತ್ತದೆ.ಧನವು ಒದಗಿದರೆ ಕಮ೯ವನ್ನು ಮಾಡಬಹುದು.(ಪುಟ 16 ಮುನ್ನುಡಿ)
61)ಕಮ೯ದಿಂದಲೇ ದೇವಯಾನ ಅಥವಾ ಪಿತೃಯಾಣ ಎಂಬ ಮಾಗ೯ವನ್ನು ಹೊಂದಬಹುದು.ಇಂಥವನು ಶ್ರೀಮಂಥ ಕಮ೯ವನ್ನು ಮಾಡಬೇಕೇ ಹೊರತು ವಿಷಯ ಭೋಗಿಯಲ್ಲ.(ಪುಟ 16 ಮುನ್ನುಡಿ)
62)ಮೂರನೆಯ ಖಂಡ:ಪಂಚಾಗ್ನಿ ವಿದ್ಯೆಯನ್ನು ಹೇಳಲಾಗುತ್ತದೆ. ಪ್ರವಾಹಣ ರಾಜನು ಶ್ವೇತಕೇತುವಿಗೆ
ಐದು ಪ್ರಶ್ನೆಗಳನ್ನು ಹಾಕುತ್ತಾನೆ.
1) ಈ ಜನರು ಮೃತರಾದ ಮೇಲೆ ಬೇರೆ ಬೇರೆ ಮಾಗ೯ಗಳಲ್ಲಿ ಹೇಗೆ ಹೋಗುವರು?
2)ಮತ್ತೆ ಇವರು ಈ ಲೋಕಕ್ಕೆ ಹೇಗೆ ಹಿಂತಿರುಗುವರು?
3) ಹೀಗೆ ಬಹು ಜನರು ಪುನಃ ಪುನಃ ಸಾಯುತ್ತಿದ್ದರೂ ಹೇಗೆ ಈ ಲೋಕವು ತುಂಬುತ್ತಿಲ್ಲ?
4)ಎಷ್ಟನೆಯ ಆಹುತಿಯನ್ನು ಹೋಮಮಾಡಿದ ಮೇಲೆ ನೀರು ಪುರುಷವಾಕ್ಕಾಗಿ ಎದ್ದು ನಿಂತು ಮಾತಾಡುತ್ತದೆ?
5)ಯಾವ ಕಮ೯ದಿಂದ ದೇವಯಾನ ಅಥವಾ ಪಿತೃಯಾನೆವೆಂಬ ಪಥವನ್ನು ಜನರು ಪಡೆಯುತ್ತಾರೊ ಅವುಗಳನ್ನು ನೀನು ಅರಿತಿರುವೆಯಾ?ಎಂಬುದಾಗಿ ಐದು ಪ್ರಶ್ನೆಗಳನ್ನು ಕೇಳಿದನು.ಇವುಗಳಲ್ಲಿ ಯಾವ ಒಂದು ಪ್ರಶ್ನೆಯೂ ಶ್ವೇತಕೇತುವಿಗೆ ಗೊತ್ತಿರಲಿಲ್ಲ.
63)ಅನಂತರ ಶ್ವೇತಕೇತುವಿನ ತಂದೆಯಾದ ಗೌತಮನಿಗೆ ಪ್ರವಾಹಣ ರಾಜನು ಪಂಚಾಗ್ನಿ ವಿದ್ಯೆಯನ್ನು
ಉಪದೇಶಿಸುತ್ತಾನೆ.(ಪುಟ 16 ಮುನ್ನುಡಿ)
64)ಹನ್ನೊಂದನೆಯ ಖಂಡದಿಂದ ವೈಶ್ವಾನರ ವಿದ್ಯೆಯು ಆರಂಭವಾಗುತ್ತದೆ.ಐದು ಜನ ಶ್ರೋತ್ರಿಯರು
ವೈಶ್ವಾನರನನ್ನು ಕುರಿತು ಅರಿತುಕೊಳ್ಳಲು ಉದ್ಧಾಲಕ ಅರುಣಿಯೊಂದಿಗೆ ಅಶ್ವಪತಿ ಕೈಕೇಯನ ಬಳಿಗೆ ಬರುತ್ತಾರೆ.ರಾಜನು ಅವರನ್ನು ಒಬ್ಬೊಬ್ಬರನ್ನಾಗಿ 'ನೀನು ಯಾರನ್ನು ವೈಶ್ವಾನರಾತ್ಮನೆಂದು ಉಪಾಸಿಸುತ್ತೀಯೆ'ಎಂದು ಪ್ರಶ್ನಿಸುತ್ತಾನೆ.ಇವರೆಲ್ಲರಿಗೂ ಆತ್ಮನ ಒಂದು ಅವಯವವು ಮಾತ್ರ ಗೊತ್ತಿತ್ತೇವಿನಾಪೂಣಾತ್ಮನ ಜ್ಞಾನವಿರಲಿಲ್ಲ.(ಪುಟ 17 ಮುನ್ನುಡಿ)
65)ಅನಂತರ ರಾಜನು ಇವರನ್ನು ಕುರಿತು 'ಯಾವನು ಪ್ರಾದೇಶ ಮಾತ್ರನೊ ಅಭಿಮಾನಿಯೂ ಆದ ಈ ವೈಶ್ವಾನರನನ್ನು ಹೀಗೆ ಉಪಾಸಿಸುವನೊ ಅವನು ಸವ೯ ಲೋಕಗಳಲ್ಲಿಯೂ ಸವ೯ ಪ್ರಾಣಿಗಳಲ್ಲಿಯೂ ಸವ೯ರ ಆತ್ಮಗಳಲ್ಲಿಯೂ ಆತ್ಮವನ್ನು ತಿನ್ನುತ್ತಾನೆ'ಎಂದು ಉಪದೇಶಿಸುತ್ತಾನೆ.ಈ ಉಪಾಸಕನು ತನ್ನ ಭೋಜನ ಕ್ರಿಯೆಯನ್ನೇ ಪ್ರಾಣಾಗ್ನಿಹೋತ್ರವೆಂದು ಕಲ್ಪಿಸಿಕೊಳ್ಳಬೇಕು.ಊಟಮಾಡುವಾಗ
1)ಮೊದನೆಯ ಅನ್ನ-ಪ್ರಾಣಾಯ ಸ್ವಾಹಾ
2)ಎರಡನೆಯ ಅನ್ನವನ್ನು-ವ್ಯಾನಾಯ ಸ್ವಾಹಾ
3)ಮೂರನೆಯ ಅನ್ನವನ್ನು -ಅಪಾನಾಯ ಸ್ವಾಹಾ
4)ನಾಲ್ಕನೆಯ ಅನ್ನ-ಸಮಾನಾಯ ಸ್ವಾಹಾ
5) ಐದನೆಯ ಅನ್ನವನ್ನು-ಉದಾನಾಯ ಸ್ವಾಹಾ
ಎಂದು ಹೇಳುತ್ತಾ ಬಾಯಿಗೆ ಹಾಕಿಕೊಳ್ಳಬೇಕು.
ಪ್ರತಿಯೊಂದು ಆಹುತಿಗೂ ನಿದಿ೯ಷ್ಟವಾದ ಫಲವಿದೆ.
ಈ ವೈಶ್ವಾನರ ದಶ೯ನವನ್ನು ಅರಿತುಕೊಳ್ಳದೆ ಅಗ್ನಿಹೋತ್ರವನ್ನು ಮಾಡಿದರೆ ಅದು ಕೆಂಡವಿಲ್ಲದ ಬೂದಿಯಲ್ಲಿ ಹೋಮಮಾಡಿದಂತಾಗುವುದು.ಇದನ್ನು ಅರಿತುಕೊಂಡು ಹೋಮ ಮಾಡುವವನ ಆಹುತಿಯು ಸವ೯ಲೋಕಗಳಲ್ಲಿಊ ಸವ೯ ಸವ೯ಪ್ರಾಣಿಗಳಲ್ಲಿಯೂ ಸವ೯ ಆತ್ಮರಲ್ಲಿಯೂ ಹುತವಾಗುವುದು.ಇವನ ಧಮ೯ ಅಧಮ೯ಗಳೆಲ್ಲ ನಾಶವಾಗಿ ,ಪ್ರಾರಬ್ಧ ಕಮ೯ವು ಮುಗಿದ ಮೇಲೆ ವೈಶ್ವಾನರನನ್ನೇ ಪಡೆದು ಕೊಳ್ಳುತ್ತಾನೆ.(ಪುಟ 17)
ಆರನೆಯ ಅಧ್ಯಾಯ:
66)ಐದನೆಯ ಅಧ್ಯಾಯದಲ್ಲಿ ಪ್ರಾಣೋಪಾಸಕನು ಊಟ ಮಾಡಿದರೆ ಜಗತ್ತೆಲ್ಲವೂ ತೃಪ್ತವಾಗುತ್ತದೆ ಎಂದು ಹೇಳಿದ್ದಾಯಿತು.ಆತ್ಮನು ಏಕಮಾತ್ರನಾಗಿದ್ದರೆ ಮಾತ್ರ ಇದು ಸಾಧ್ಯವೇ ಹೊರತು ಆತ್ಮನು ಅನೇಕರಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.ಆದುದರಿಂದ ಆತ್ಮನ ಏಕತ್ವವನ್ನು ಪ್ರತಿಪಾದಿಸಲು ಆರನೆಯ ಅಧ್ಯಾಯವು ಪ್ರಾರಂಭವಾಗಿದೆ.(ಪುಟ 17 ಮುನ್ನುಡಿ)
67)ಇಲ್ಲಿ ತತ್ವೋಪದೇಶವೇ ಮುಖ್ಯವಾಗಿರುವುದರಿಂದ ಈ ಭಾಗವು ಛಾಂದೊಗ್ಯ ಉಪನಿಷತ್ತಿನಲ್ಲೆಲ್ಲ
ಅತ್ಯಂತ ಮುಖ್ಯವೆಂದು ಹೇಳಬಹುದು.ಈ ಅಧ್ಯಾಯಕ್ಕೆ ಹದಿನಾರು ಖಂಡಗಳಿವೆ.(ಪುಟ 17 ಮುನ್ನುಡಿ)
68)ಶ್ವೇತಕೇತುವು ಹನ್ನೆರಡು ವಷ೯ಗಳವರೆಗೆ ವೇದಗಳನ್ನೆಲ್ಲ ಅಧ್ಯಯನ ಮಾಡಿದನು.ಆದರೆ ಅವನು ನಿರಹಂಕಾರಿಯೂ ವಿನೀತ ಸ್ವಭಾವದವನೂ ಆಗಲಿಲ್ಲ.ತನ್ನ ಮಗನ ಮನಸ್ಸನ್ನು ಅರಿತುಕೊಂಡ ಉದ್ಧಾಲಕ ಅರುಣಿಯು ಅವನನ್ನು ಹೀಗೆ ಪ್ರಶ್ನಿಸಿದನು.'ಯಾವುದರಿಂದ ಅಶ್ರುತವು ಶ್ರುತವಾಗುವುದೊ,ಅಮತವು ಮತವಾಗುವುದೊ,,ಅವಿಜ್ಞಾತವು ಜ್ಞಾತವಾಗುವುದೊ ಆ ಆದೇಶವನ್ನು ಕೇಳಿದೆಯಾ?'.ಶ್ವೇತಕೇತುವಿಗೆ ಆ ಆದೇಶವು ತಿಳಿದಿರಲಿಲ್ಲ.ವೇದಗಳನ್ನೆಲ್ಲ ಅಧ್ಯಯನ ಮಾಡಿದ್ದರೂ ಆತ್ಮತತ್ವವನ್ನು ತಿಳಿದುಕೊಳ್ಳದ್ದರಿಂದ ಅವನು ಅಕೃತಾಥ೯ನಾಗಿಯೇ ಇದ್ದನು.ಅನಂತರ ಉದ್ಧಾಲಕನು 1)ಮಣ್ಣಿನ ಮುದ್ದೆ2) ಚಿನ್ನದ ಗಟ್ಟಿ 3) ಕಬ್ಬಿಣದ ಉಗುರು ಕತ್ತರಿ ಎಂಬ ಮೂರು ದೃಷ್ಟಾಂತಗಳಿಂದ ಕಾಯ೯ಕಾರಣಗಳ ಅಭೇದವನ್ನು ತಿಳಿಸುತ್ತಾನೆ.ಗಡಿಗೆ ಮುಂತಾದುವಕ್ಕೆ ಮಣ್ಣು ಮುದ್ಧೆಯು ಕಾರಣವಾಗಿದೆ.ಕಾಯ೯ವೂ ಕಾರಣವೂ ಅನನ್ಯವಾಗಿರುವುದರಿಂದ ಒಂದನ್ನು ಅರಿತುಕೊಂಡರೆ ಇನ್ನೊಂದನ್ನು ಅರಿತುಕೊಂಡಂತೆ ಆಗುವುದು.(ಪುಟ 18 ಮುನ್ನುಡಿ)
68) ವಸ್ತುವಿನ ಪರಿಣಾಮವು ವಾಕ್ಕನ್ನು ಅವಲಂಬಿಸಿರುವ ಹೆಸರೇ.(ಪುಟ 18 ಮುನ್ನುಡಿ)
6೯) 'ಇದು ಕಾರಣ.ಇದು ಅದರ ಪರಿಣಾಮ'ಎಂಬ ಲೋಕವ್ಯವಹಾರಕ್ಕೆ ಇದು ಉತ್ತರ.(ಪುಟ 18ಮುನ್ನುಡಿ).
70)ಸೃಷ್ಟಿಗೆ ಮೊದಲು ಈಜಗತ್ತು ಏಕವಾದ ಸತ್ಸ್ವರೂಪವೇ ಆಗಿತ್ತು.ಆ ಸದ್ವಸ್ತುವು ತಾನು ಬಹುವಾಗುವೆನೆಂದು ಸಂಕಲ್ಪಿಸಿ ತೇಜಸ್ಸನ್ನು ಸೃಷ್ಟಿಸಿತು.ಅನಂತರ ತೇಜಸ್ಸಿನಿಂದ ನೀರೂ ,ನೀರಿನಿಂದ ಪೃಥ್ವಿಯೂ ಸೃಷ್ಟಿಸಲ್ಪಟ್ಟವು.
71) ಈ ತೇಜೋಬನ್ನ ಕಾಯ೯ವಾದ (ಎಂದರೆ ತೇಜಸ್ಸು,ನೀರು.ಪೃಥ್ವಿ ಇವುಗಳ ಕಾಯ೯ವಾದ)ಭೂತಗಳಲ್ಲಿ ಮೂಲಕಾರಣವಾದ ಸದ್ವಸ್ತುವು ಜೀವರೂಪದಿಂದ ಪ್ರವೇಶಿಸಿ ನಾಮ ರೂಪಗಳನ್ನು ವಿಂಗಡಿಸಿತು.ಹೀಗೆ ನಾಮರೂಪಗಳನ್ನು ವಿಂಗಡಿಸುವಾಗ ತೇಜೋ ಬನ್ನಾದಿಗಳಲ್ಲಿ ಒಂದೊಂದನ್ನೂ ಮೂರು ಮೂರಾಗಿ ಮಾಡಿತು.ಇದಕ್ಕೆ ತ್ರಿವೃತ್ಕರಣವೆಂದು ಹೆಸರು. ತ್ರಿವೃತ್ಕರಣದಲ್ಲಿ ಒಂದು ಭೂತದ ಅಂಶವು ಹೆಚ್ಚಾಗಿಯೂ ಉಳಿದ ಎರಡು ಭೂತಗಳ ಅಂಶವು ಕಡಿಮೆಯಾಗಿಯೂ ಇರುತ್ತವೆ.(ಪುಟ 18 ಮುನ್ನುಡಿ).
72) ಎಲ್ಲವೂ ಸದ್ವಸ್ತುವಿನ ವಿಕಾರವಾದ್ದರಿಂದ ಸದ್ವಸ್ತುವನ್ನು ಅರಿತುಕೊಂಡರೆ ಎಲ್ಲವನ್ನೂ ಅರಿತುಕೊಂಡಂತೆ ಆಗುವುದು.(ಪುಟ 18 ಮುನ್ನುಡಿ)
73)ಹೀಗೆ ಪ್ರತಿಯೊಂದು ವಸ್ತುವೂ ತ್ರಿವೃತ್ಕøತವಾಗಿದೆ.(ಪುಟ 18 ಮುನ್ನುಡಿ )
74) ಆದುದರಿಂದ ಎಲ್ಲಾ ಭೇದಗಳಿಗೂ ವಿಕಾರಗಳಿಗೂ ನಾಮಗಳಿಗೂ ಸದ್ವಸ್ತುವೇ ಆಧಾರವಾಗಿದೆ.(ಪುಟ 1೯ ಮುನ್ನುಡಿ)
75)ಮನುಷ್ಯನು ಹೇಗೆ ಹದಿನಾರು ಕಲೆಗಳುಳ್ಳವನು ಎಂಬುದನ್ನು ಹೇಳಿದೆ.(ಪುಟ 1೯ ಮುನ್ನುಡಿ)
76)ಎಂಟನೆಯ ಖಂಡ:ಜೀವನು ಮನೋಮಯನಾಗಿರುವುದರಿಂದ ಶ್ರವಣ-ಮನನಗಳು ಸಾಧ್ಯ.ಮನಸ್ಸು ಸುಷುಪ್ತಿಯಲ್ಲಿ ಉಪರತಿಯನ್ನು ಹೊಂದಿದಾಗ ಜೀವನು ಪರಮಾತ್ಮ ಸ್ವರೂಪವನ್ನು ¥ಡೆದು ಕೊಳ್ಳುತ್ತಾನೆ ಎಂಬುದನ್ನು ಎಂಟನೆಯ ಖಂಡದಲ್ಲಿ ಹೇಳಿದೆ.(ಪುಟ 1೯ ಮುನ್ನುಡಿ)
77)ಮನುಷ್ಯನು ಯಾವಾಗ ನಿದ್ರಿಸುತ್ತಾನೆ ಎನ್ನಿಸಿಕೊಳ್ಳುವನೊ ಆಗ ಪರದೇವತೆಯೊಂದಿಗೆ ಏಕೀಭೂತನಾಗಿರುತ್ತಾನೆ.ಸ್ವರೂಪವನ್ನು ಹೊಂದಿರುತ್ತಾನೆ.ಆದುದರಿಂದ ಇವನನ್ನು 'ಸ್ವಪಿತಿ' ಎನ್ನುತ್ತಾರೆ.(ಪುಟ 1೯ ಮುನ್ನುಡಿ)
78)ದಾರದಿಂದ ಕಟ್ಟಲ್ಪಟ್ಟಿರುವ ಪಕ್ಷಿಯು ದಿಕ್ಕುದಿಕ್ಕಿಗೆ ಹಾರಾಡಿ ಮತ್ತೆಲ್ಲಿಯೂ ಆಶÀ್ರಯವನ್ನು ಪಡೆಯದೆ
,ತನ್ನನ್ನು ಬಂಧಿಸಿರುವ ಸ್ಥಳಕ್ಕೇ ಹೇಗೆ ಬರುವುದೊ ಹಾಗೆಯೆ ಮನಸ್ಸೆಂಬ ಉಪಾಧಿಯನ್ನು ಪಡೆದು ಜೀವನು ಸುಷುಪ್ತಿಯಲ್ಲಿ ಪರದೇವತೆಯನ್ನೇ ಸೇರಿಕೊಳ್ಳುತ್ತಾನೆ.(ಪುಟ 1೯ ಮುನ್ನುಡಿ)
2೯)ಸಾಯುತ್ತಿರುವ ಮನುಷ್ಯನಲ್ಲಿ ವಾಕ್ಕು ಮನಸ್ಸಿನಲ್ಲಿಯೂ ,ಮನಸ್ಸು ಪ್ರಾಣದಲ್ಲಿಯೂ,ಪ್ರಾಣವು ತೇಜಸ್ಸಿನಲ್ಲಿಯೂ ,ತೇಜಸ್ಸು ಪರದೇವತೆಯಲ್ಲಿಯೂ ಉಪಸಂಹೃತವಾಗುತ್ತದೆ.ಮುಕ್ತನಾದವನು ಹಿಂತಿರುಗುವುದಿಲ್ಲ.ಆದರೆ ಅಜ್ಞಾನಿಯು -ನಿದ್ರೆಯಿಂದ ಎಚ್ಚರಗೊಂಡವನಂತೆ -ತನ್ನ ಮೂಲವಾದ ಸದ್ವಸ್ತುವಿನಿಂದ ಪುನಃ ದೇಹಜಾಲವನ್ನು ಪಡೆಯುತ್ತಾನೆ.(ಪುಟ 1೯ ಮುನ್ನುಡಿ)
80)ಯಾವುದು ಸೂಕ್ಷ್ಮತಮವಾದ ಜಗನ್ಮೂಲವೊ ಅದರಿಂದಲೇ ಈ ಜಗತ್ತೆಲ್ಲವೂ ಆತ್ಮವಂತವಾಗಿದೆ.ಅದೇ ಸತ್ಯವು,ಅದೇ ಆತ್ಮನು.'ಓ ಶ್ವೇತಕೇತು ಅದೇ ನೀನಾಗಿರುವೆ' ಎಂದು ಉದ್ಧಾಲPನು ಮಗನಿಗೆ ಹೇಳುತ್ತಾನೆ.(ಪುಟ 1೯ ಮುನ್ನುಡಿ)
81)ಜೇನು ಹುಳುಗಳು ನಾನಾ ವೃಕ್ಷಗಳ ದಸಗಳನ್ನು ಶೇಖರಿಸುತ್ತವೆ.ಆದರೆ ಆ ರಸಗಳು 'ನಾನು ಆಮರದ ರಸ ನಾನು ಈಮರದ ರಸ' ಎಂಬ ವಿವೇಕವನ್ನು ಪಡೆದಿರುವುದಿಲ್ಲ. ಹಾಗೆಯೇ ಈ ಪ್ರಾಣಿಗಳೆಲ್ಲ ಸದ್ವಸ್ತುವಿನಲ್ಲಿ ಲಯವಾಗಿ ನಾವು ಸದ್ವಸ್ತುವಿನಲ್ಲಿ ಲಯವಾಗಿದ್ದೇವೆ ಎಂದು ಅರಿಯವು.(ಪುಟ 20 ಮುನ್ನುಡಿ)
82) ಹಾಗೆಯೇ ನದಿಗಳು ಬೇರೆ ಬೇರೆ ದಿಕ್ಕುಗಳಿಗೆ ಹರಿದು ಸಮುದ್ರದಲ್ಲಿ ಒಂದಾಗುತ್ತವೆ.ಅವು ಸಮುದ್ರವನ್ನು ಸೇರಿದಾಗ 'ನಾನು ಗಂಗೆ ನಾನು ಯಮುನೆ' ಎಂಬುದನ್ನು ಅರಿಯವು.(ಪುಟ 21 ಮುನ್ನುಡಿ)
83)ಇದೇ ರೀತಿಯಲ್ಲಿ ಜೀವನು ಶರೀರವನ್ನು ಬಿಟ್ಟರೆ ಅದು ಒಣಗಿ ಸಾಯುತ್ತದೆ.ಜೀವನು ಸಾಯುವುದಿಲ್ಲ.(ಪುಟ 21 ಮುನ್ನುಡಿ)
84)ಅನಂತರ ಶ್ವೇತಕೇತುವು ಅತ್ಯಂತ ಸೂಕ್ಷ್ಮವೂ ನಾಮರಹಿತವೂ ಆದಸದ್ವಸ್ತುವಿನಿಂದ ಅತ್ಯಂತ ಸ್ಥೂಲವೂ ಆದ ಪೃಥಿವ್ಯಾದಿ ನಾಮರೂಪಗಳಗುಳ್ಳದ್ದೂ ಆದ ಈ ಜಗತ್ತು ಹೇಗೆ ಉಂಟಾಯಿತೆಂದು ಪ್ರಶ್ನಿಸುತ್ತಾನೆ.
ಮೂರು ಉದಾಹರಣೆಗಳು:
1)ಆಲದ ಮರದ ಹಣ್ಣಿನ ಉದಾಹರಣೆ:ಆಲದ ಮರದ ಬೀಜದಿಂದ ದೊಡ್ಡ ಆಲದಮರ ಉಂಟಾಗುವುದು.
2) ಉಪ್ಪು -ನೀರಿನ ಉದಾಹರಣೆ:ನೀರಿಗೆ ಉಪ್ಪನ್ನು ಹಾಕಿದರೆ ಕರಗಿ ಹೋಗುತ್ತದೆ.ಅದನ್ನು ನೀರಿನಿಂದ ತೆಗೆಯಲು ಆಗುವುದಿಲ್ಲ.ಆದರೆ ಆ ನೀರನ್ನು ಯಾವುದೇ ಭಾಗದಿಂದ ಸವಿದರೂ ಎಲ್ಲೆಲ್ಲಿಯೂ ಉಪ್ಪೇ ಆಗಿರುತ್ತದೆ.ಹಾಗೆಯೇ ಜಗನ್ಮೂಲವಾದ ಸದ್ವಸ್ತುವು ನಮ್ಮ ಶರೀರದಲ್ಲಿದೆ.ಇಂದ್ರಿಯಗಳಿಗೆ ಗೋಚರವಾಗುವುದಿಲ್ಲ.ಆದರೆ ಬೇರೊಂದು ಉಪಾಯದಿಂದ ಈ ಜಗನ್ಮೂಲವನ್ನು ಕಂಡು ಹಿಡಿಯಬಹುದು.
3)ಗಾಂಧಾರ ದೇಶದವನ ಕಥೆ: ಗಂಧಾರದೇಶದ ಮನುಷ್ಯನೊಬ್ಬನನ್ನು ಕಣ್ಣು ಕಟ್ಟಿ ಕರೆತಂದು ಅವನನ್ನು ಒಂದು ನಿಜ೯ನ ಪ್ರದೇಶದಲ್ಲಿ ಬಿಟ್ಟರು.ಅವನು ಅರಚಿಕೊಳ್ಳುತ್ತಾ ಸಹಾಯವನ್ನು ಬೇಡುತ್ತಿದ್ದನು.ಆಗ ಕಾರುಣಿಕನಾದ ಗುರುವೊಬ್ಬನು ಅವನ ಕಣ್ಣುಗಳ ಕಟ್ಟನ್ನು ಬಿಚ್ಚಿ ಗಂಧಾರದೇಶದ ದಿಕ್ಕನ್ನು ತೋರಿಸಿದನು.ಹಾಗೆಯೇ ಈ ಸಂಸಾರದಲ್ಲಿ ಅಜ್ಞಾನಿಯಾದವನು ಆಚಾಯ೯ನ ಉಪದೇಶದಿಂದ ಆತ್ಮನನ್ನು ಅರಿತುಕೊಳ್ಳುತ್ತಾನೆ.(ಪುಟ 22 ಮುನ್ನುಡಿ)
85)ಹಾಗೆಯೇ ಪ್ರಾರಬ್ಧ ಕಮ೯ವು ನಾಶವಾದ ಮೇಲೆ ಅವನು ಸದ್ವಸ್ತುವಿನಲ್ಲಿಯೇ ಸೇರಿಕೊಂಡು ಮುಕ್ತನಾಗುತ್ತಾನೆ.(ಪುಟ 22 ಮುನ್ನುಡಿ)
86)ಹದಿನೈದನೆಯ ಖಂಡ:ಇಲ್ಲಿ ಮುಮುಕ್ಷುವು ಸದ್ವಸ್ತುವಿನಲ್ಲಿ ಸೇರುವ ಕ್ರಮವನ್ನು ಉಪದೇಶಿಸಿದೆ.(ಪುಟ 22 ಮುನ್ನುಡಿ)
87)ಅಜ್ಞಾನಿಯು ತನ್ನ ಹಿಂದಿನ ಕಮ೯ದ ಪ್ರಕಾರ ಪುನಃ ಹುಟ್ಟುತ್ತಾನೆ.ಜ್ಞಾನಿಯು ಶಾಸ್ತ್ರಾಚಾಯ೯ರ ಉಪದೇಶದಿಂದ ಸದ್ಬ್ರಹ್ಮವನ್ನು ಪ್ರವೇಶಿಸಿ ಪುನಃ ಹುಟ್ಟುವುದಿಲ್ಲ.(ಪುಟ 22 ಮುನ್ನುಡಿ)
88)ಉದ್ಧಾಲಕನು ಶೇತಕೇತುವಿಗೆ 'ಅದೇ ನೀನಾಗಿರುವೆ'(ತತ್ವಮಸಿ)(ತತ್ ತ್ವಮ್ -ಅಸಿ) ಎಂದು ಹೀಗೆ ಉದಾಹರಣೆಗಳ ಮೂಲಕ ಉಪದೇಶಿಸುತ್ತಾನೆ.(ಪುಟ 23 ಮುನ್ನುಡಿ)
ಏಳನೆಯ ಅಧ್ಯಾಯ:
8೯)ಪರಮಾಥ೯ ತತ್ವವೇ ಪ್ರಧಾನವಾಗಿದ್ದ ಆರನೆಯ ಅಧ್ಯಾಯದಲ್ಲಿ ಬ್ರಹ್ಮ-ಜೀವರ ಏಕತ್ವವು ನಿಣ೯ಯಿಸಲ್ಪಟ್ಟಿತು.(ಪುಟ 23 ಮುನ್ನುಡಿ)
೯0)ಶಾಖಾ ಚಂದ್ರ ನ್ಯಾಯದಲ್ಲಿ ಶಾಖೆಯನ್ನು ನೆಪಮಾಡಿಕೊಂಡು ಚಂದ್ರನನ್ನು ನಿದೇ೯ಶಿಸುವಂತೆ ನಾಮಾದಿ ತತ್ವಗಳನ್ನು 'ಭೂಮ'ಎಂಬ ಹೆಸರಿನ ನಿರತಿಶಯ ತತ್ವವನ್ನು ಉಪದೇಶಿಸಲು ಏಳನೆಯ ಅಧ್ಯಾಯವನ್ನು ಪ್ರಾರಂಭಿಸಿದೆ.(ಪುಟ 23 ಮುನ್ನುಡಿ)
೯1)ಏಕೆಂದರೆ ಸದ್ವಸ್ತುವಿಗಿಂತ ಈಚೆಯಿರುವ ತತ್ವಗಳನ್ನು ನಿದೇ೯ಶಿಸದೆ ಸದ್ವಸ್ತುವೊಂದನ್ನೇ ಉಪದೇಶಿಸಿದರೆ ಇನ್ನೂ ಯಾವುದೊ ಒಂದು ತತ್ವವು ಅವಿಜ್ಞಾತವಾಗಿರಬಹುದೆಂಬ ಸಂದೇಹವುಂಟಾಗಬಹುದು.(ಪುಟ 23 ಮುನ್ನುಡಿ)
೯2)ನಾರದ -ಸನತ್ಕುಮಾರರ ಆಖ್ಯಾಯಿಕೆಯು ಪರವಿದ್ಯೆಯ ಸ್ತುತಿಗಾಗಿ ಬಂದಿದೆ.ದೇವಷಿ೯ಯಾದ ನಾರದನು ಸವ೯ವಿದ್ಯೆಗಳನ್ನು ಅರಿತುಕೊಂಡಿದ್ದರೂ ಆತ್ಮನನ್ನು ಅರಿತುಕೊಳ್ಳದೆ ಇರುವುದರಿಂದ ಶೋಕಿಸುತ್ತಿದ್ದನು.ನಾರದನ ಅವಸ್ಥೆಯೇ ಹೀಗಿರುವಾಗ ಅಲ್ಪಜ್ಞನೂ ಪುಣ್ಯರಹಿತನೂ ಅಕೃತಕೃತ್ಯನೂ ಆದ ಸಂಸಾರಿ ಜೀವನ ದುಃಖವನ್ನು ವಿವರಿಸಬೇಕಾಗಿಲ್ಲ.(ಪುಟ 23 ಮುನ್ನುಡಿ)
೯3)ನಾರದನು ಬ್ರಹ್ಮವಿದ್ಯೆಯನ್ನು ಕಲಿಯಲು ಸನತ್ಕುಮಾರನ ಬಳಿಗೆ ಬಂದಾಗ,ಅವನು ಕಲಿತೆದ್ದೆಲ್ಲಾ ನಾಮವೆಂದೂ ,ನಾಮವನ್ನೇ ಬ್ರಹ್ಮವೆಂದು ಉಪಾಸಿಸಬೇಕೆಂದು ಸನತ್ಕುಮಾರನು ಹೇಳುತ್ತಾನೆ.ಆಗ ನಾರದನು ನಾಮಕ್ಕಿಂತ ಅಧಿಕವಾದುದು ಇದೆಯೇ ?ಎಂದು ಕೇಳಲು ಅದಕ್ಕಿಂತ ವಾಕ್ಕು ಹೆಚ್ಚಿನದೆಂದು ಹೇಳುತ್ತಾನೆ.ಹೀಗೆಯೇ ನಾಮ,ವಾಕ್ಕು ಮನಸ್ಸು,ಸಂಕಲ್ಪ ,ಚಿತ್ತ,ಧ್ಯಾನ,ವಿಜ್ಞಾನ,ಅನ್ನ,ನೀರು ತೇಜಸ್ಸು,ಆಕಾಶ,ಸ್ಮøತಿ,ಆಶೆ,ಪ್ರಾಣ-ಇವು ಒಂದಕ್ಕಿಂತ ಒಂದು ಅಧಿಕವಾದುದೆಂದೂ ,ಪ್ರತಿಯೊಂದನ್ನೂ ಬ್ರಹ್ಮವೆಂದು ಉಪಾಸಿಸಬೇಕೆಂದೂ ಹೇಳುತ್ತಾನೆ. (ಪುಟ 23 ಮುನ್ನುಡಿ)
೯4)ಪ್ರಾಣಾತ್ಮವಾದಿಯು ನಿಜವಾದ ಅತಿವಾದಿಯಲ್ಲ.ಯಾವನು 'ಭೂಮ' ಎಂಬ ಹೆಸರಿನ ಎಲ್ಲವನ್ನೂ ಅತಿಕ್ರಮಿಸಿರುವ ಪರಮಾಥ೯ ತತ್ವವನ್ನು ಅರಿತಿರುವನೋ ಅವನೇ ನಿಜವಾದ ಅತಿವಾದಿ.(ಪುಟ 24 ಮುನ್ನುಡಿ)
೯5) ಪರಮಾಥ೯ ತತ್ವವನ್ನು ಅರಿತುಕೊಳ್ಳುವುದೇ ವಿಜ್ಞಾನವು.(ಪುಟ 24 ಮುನ್ನುಡಿ)
೯6)ವಿಜ್ಞಾನಕ್ಕೆ ಮನನವೂ ,ಮನನಕ್ಕೆ ಶ್ರದ್ಧೆಯೂ,,ಶ್ರದ್ಧೆಗೆ ನಿಷ್ಠೆಯೂ,,ನಿಷ್ಠೆಗೆ ಇಂದ್ರಿಯ ಸಂಯಮವೂ,ಇಂದ್ರಿಯ ಸಂಯಮಕ್ಕೆ ಸುಖವೂ ಆಶ್ರಯವಾಗಿರುತ್ತದೆ.(ಪುಟ 24 ಮುನ್ನುಡಿ)
೯7)ಆ ಸುಖವು ಭೂಮವು.ಅಲ್ಪದಲ್ಲಿ ಸುಖವಿಲ್ಲ.ಭೂಮವನ್ನೇ ತಿಳಿದುಕೊಳ್ಳಲು ಬಯಸಬೇಕು.(ಪುಟ 24 ಮುನ್ನುಡಿ)
೯8) 'ಎಲ್ಲಿ ಬೇರೊಂದನ್ನು ನೋಡುವುದಿಲ್ಲವೊ,ಬೇರೊಂದನ್ನು ಕೇಳುವುದಿಲ್ಲವೊ,ಬೇರೊಂದನ್ನು ಅರಿಯುವುದಿಲ್ಲವೊ ಅದೇ ಭೂಮವು'ಎಂದು ಸನತ್ಕುಮಾರನು ಉಪದೇಶಿಸುತ್ತಾನೆ.(ಪುಟ 24 ಮುನ್ನುಡಿ)
೯೯) ಭೂಮವು ಯಾವುದರಲ್ಲಿ ಪ್ರತಿಷ್ಠಿತವಾಗಿದೆಯೆಂದು ನಾರದನು ಕೇಳುತ್ತಾನೆ.'ತನ್ನ ಮಹಿಮೆಯಲ್ಲಿ' ಎನ್ನಬಹುದು.ಆದರೆ ಭೂಮವು ತನ್ನ ಮಹಿಮೆಯಲ್ಲಿಯೂ ಪ್ರತಿಷ್ಠಿತವಾಗಿಲ್ಲವೆಂಬುದು ಉತ್ತರ.ಭೂಮಕ್ಕೆ ನಿಜವಾಗಿ ಯಾವ ಪ್ರತಿಷ್ಠೆಯೂ ಇಲ್ಲ.ಆ ಭೂಮವೇ ಮೇಲೆ ಕೆಳಗೆ, ಎಲ್ಲೆಲ್ಲಿಯೂ ಇದೆ.ಅದೇ ಎಲ್ಲೆಲ್ಲಿಯೂ ನಾನು ಎಂದು ಕರೆಸಿಕೊಳ್ಳತಕ್ಕದ್ದು.ಆದರೆ ಅವಿವೇಕಿಗಳು ಅರಿಯು 'ನಾನು'ಎಂಬ ದೇಹಾದಿ ಸಂಘಾತವಲ್ಲ.ಕೇವಲ ಸದ್ರೂಪನಾದ ಆತ್ಮನೇ ಭೂಮವು.ಹೀಗೆ ಅರಿತುಕೊಂಡವನು 'ಸ್ವರಾಟ್' ಆಗುತ್ತಾನೆ. ಅವನಿಗೆ ಸವ೯ಲೋಕಗಳಲ್ಲಿಯೂ ಸ್ವಚ್ಛಂದ ಗತಿಯಿರುತ್ತದೆ.ಇದಕ್ಕಿಂತ ಬೇರೆಯಾಗಿ ಅರಿತುಕೊಂಡವರು ಕ್ಷರವಾದ ಲೋಕಗಳಲ್ಲಿ ವಾಸಿಸುತ್ತಾರೆ.ಇಲ್ಲಿಗೆ ಇಪ್ಪತ್ತೈದನೆಯ ಖಂಡವು ಮುಗಿಯುತ್ತದೆ.(ಪುಟ 25 ಮುನ್ನುಡಿ)
100)ಹೀಗೆ ಸಮಸ್ತ ವ್ಯವಹಾರವೂ ಸ್ವಾರಾಜ್ಯವನ್ನು ಹೊಂದಿದ ಜ್ಞಾನಿಗೆ ತನ್ನ ಆತ್ಮನಿಂದಲೇ ಉಂಟಾಗುತ್ತಿರುವುದು.ಇಂಥ ತತ್ವವಿದನಿಗೆ ಮೃತ್ಯು ರೋಗ, ದುಃಖ ಮೊದಲದ ಅನಥ೯ಗಳೂ ಇರುವುದಿಲ್ಲ.ಅವನು ಎಲ್ಲವೂ ಆಗಿ ಎಲ್ಲವನ್ನೂ ಪಡೆದುಕೊಳ್ಳುತ್ತಾನೆ.ಸೃಷ್ಟಿಗೆ ಮೊದಲು ಅವನು ಅದ್ವಯನಾಗಿದ್ದರೂ ಅನಂತರ ಸ್ವಲ್ಪಕಾಲದಲ್ಲಿ ನಾನಾ ಬಗೆಯಾಗಿ ತೋರಿಕೊಂಡು ಪುನಃ ಸಂಹಾರಕಾಲದಲ್ಲಿ ಮೂಲವಾಗಿರುವ ತನ್ನ ಪಾರಮಾಥಿ೯ಕ ಅದ್ವಯ ಭಾವವನ್ನೇ ಪಡೆಯುತ್ತಾನೆ.(ಪುಟ25 ಮುನ್ನುಡಿ)
101)ಇಂಥ ಜ್ಞಾನವನ್ನು ಪಡೆಯಲು ಆಹಾರಶುದ್ದಿಯು ,ಎಂದರೆ ರಾಗದ್ವೇಷ ಮೋಹಗಳೆಂಬ ದೋಷಗಳಿಲ್ಲದ ವಿಷಯ ಜ್ಞಾನವು ಅತ್ಯಾವಶ್ಯಕವಾಗಿದೆ.ಆಹಾರವು ಶುದ್ಧಿಯಾದಾಗ ಅಂತಃಕರಣವು
ಶುದ್ಧಿಯಾಗುತ್ತದೆ.ಅಂತಃಕರಣವು ಶುದ್ಧವಾದಾಗ ಭೂಮಾತ್ಮನಲ್ಲಿ ಧ್ರುವವಾದ ಸ್ಮøತಿಯುಂಟಾಗುತ್ತದೆ.
(ಪುಟ 25 ಮುನ್ನುಡಿ)
102)ಸನತ್ಕುಮಾರನನ್ನು ಸ್ಕಂದನೆಂದು ಕರೆಯುgತ್ತಾರೆ.(ಪುಟ 25 ಮುನ್ನುಡಿ)
ಎಂಟನೆಯ ಅಧ್ಯಾಯ:
103) ದಿಕ್ಕು ದೇಶ ಕಾಲಾದಿಗಳಿಲ್ಲದ ಬ್ರಹ್ಮವು ಏಕವೂ ಅದ್ವಿತೀಯವೂ ಆದ ಸದ್ವಸ್ತುವೆಂದು ಹಿಂದಿನ ಎರಡು ಅಧ್ಯಾಯಗಳಲ್ಲಿ ಹೇಳಲ್ಪಟ್ಟಿತು(ಪುಟ 26 ಮುನ್ನುಡಿ)
104)ಆ ಬ್ರಹ್ಮ ಸಾಕ್ಷಾತ್ಕಾರಕ್ಕಾಗಿ ಹೃದಯಪದ್ಮವೆಂಬ ದೇಶವನ್ನು(ಸ್ಥಳವನ್ನು) ಹೇಳಬೇಕಾಗಿದೆ.(ಪುಟ 26 ಮುನ್ನುಡಿ)
105)ಆತ್ಮತತ್ವವು ನಿಗು೯ಣವಾದರೂ ಸಾಮನ್ಯ ಜನರಿಗೆ ಸಗುಣ ಭಾವವು ಇಷ್ಟವಾದ್ದರಿಂದ ಅದು ಸತ್ಯಕಾಮಾದಿ ಗುಣಗಳಿಂದ ಕೂಡಿರುವುದೆಂದು ಉಪದೇಶಿಸ ಬೇಕಾಗಿದೆ.(ಪುಟ 26 ಮುನ್ನುಡಿ)
106)ಬ್ರಹ್ಮವಿದರಿಗೆ ವಿಷಯಗಳಿಂದ ಉಪರತಿಯು ತಾನೇ ಉಂಟಾಗ ಬಹುದಾಗಿದ್ದರೂ ,ಪೂವ೯ಜನ್ಮಗಳ ವಿಷಯ ಸೇವಾಭ್ಯಾಸದಿಂದ ಉಂಟಾದ ವಿಷಯ ತೃಷ್ಣೆಯನ್ನು ಕೂಡಲೇ ತೊಡಗಿಸಲು ಕಷ್ಟವಾದುದರಿಂದ ಬ್ರಹ್ಮಚಯಾ೯ದಿ ಸಾಧನ ವಿಶೇಷವನ್ನು ವಿಧಿಸಬೇಕಾಗಿದೆ.(ಪುಟ 26 ಮುನ್ನುಡಿ)
107)ಗಂತೃ-ಗಮನ-ಗಂತವ್ಯಗಳು(ಹೋಗುವುದು-ಬರುವುದು)ಬ್ರಹ್ಮವಿದನಿಗೆ ಇಲ್ಲದ್ದರಿಂದ ಅವನಿಗೆ ತನ್ನ ಆತ್ಮನಲ್ಲಿಯೇ ಲಯ ಉಂಟಾಗುವುದು.ಆದರೆ ಸಾಮಾನ್ಯ ಜನರಿಗೆ ನೆತ್ತಿಯ ನಾಡಿಯ ಮೂಲಕ ಗತಿಯನ್ನು ಹೇಳಬೇಕಾಗಿದೆ.(ಪುಟ 26 ಮುನ್ನುಡಿ)
108)ಈ ಅಧ್ಯಾಯದಲ್ಲಿ ಒಟ್ಟು ಹದಿನೈದು ಖಂಡಗಳಿವೆ.
ಮೊದಲ ಖಂಡದಲ್ಲಿ 'ದಹರವಿದ್ಯೆ'ಯನ್ನು ಹೇಳಿದೆ. 'ದಹರ'ಎಂದರೆ ಸಣ್ಣ ಎಂದಥ೯.ಬ್ರಹ್ಮಪುರವಾದ ನಮ್ಮ ಶರೀರದಲ್ಲಿ ಹೃದಯಪದ್ಮವೆಂಬ ಮನೆಯಿದೆ.ಅದರಲ್ಲಿರುವ ದಹರಾಕಾಶದಲ್ಲಿ ಯಾವುದಿದೆಯೊ ಅದನ್ನು ಅನ್ವೇಶಿಸಬೇಕು.ಅದನ್ನೇ ಅರಿತುಕೊಳ್ಳಲು ಬಯಸಬೇಕು.ಈ ದಹರಾಕಾಶವೇ ಬ್ರಹ್ಮ.ಬ್ರಹ್ಮಕ್ಕೆ ಆಕಾಶವೆಂಬುದು ಪ್ರಸಿದ್ಧವಾದ ಹೆಸರು.ಹೃದಯದಲ್ಲಿರುವ ಆಕಾಶವನ್ನು ಬ್ರಹ್ಮವೆಂದು ಹೇಳಿರುವುದರಿಂದ ಅದು ಹೃದಯಾಕಾಶದಷ್ಟೇ ಸಣ್ಣದೆಂದು ಭಾವಿಸಬಾರದು.ಇಲ್ಲಿ ದ್ಯುಲೋಕ-ಪೃಥ್ವಿಗಳ ಅಗ್ನಿ ವಯುಗಳು ,ಸೂಯ೯-ಚಂದ್ರರು ಮತ್ತು ಏನೇನಿದೆಯೊ ಏನೇನಿಲ್ಲವೋ(ಕಾಣುವ ಹಾಗೂ ಕಾಣದ)ಎಲ್ಲವೂ ಅಂತಗ೯ತವಗಿವೆ.(ಪುಟ 27 ಮುನ್ನುಡಿ)
10೯)ಶರೀರದ ಮುಪ್ಪಿನಿಂದ ಆಕಾಶವೆಂಬ ಬ್ರಹ್ಮಕ್ಕೆ ಮುಪ್ಪಿಲ್ಲ.(ಪುಟ 27 ಮುನ್ನುಡಿ)
110)ಯಾರು ಇಲ್ಲಿ ಆತ್ಮನನ್ನು ಉಪಾಸಿಸಿ ದೇಹತ್ಯಾಗ ಮಾಡುವರೊ ಅವರು ಸವ೯ಲೋಕಗಳಲ್ಲಿಯೂ
ಸ್ವತಂತ್ರಗತಿಯನ್ನು ಪಡೆಯುತ್ತಾರೆ.ಇದು ಮೊದಲನೆಯ ಖಂಡದ ವಿಷಯ(ಪುಟ 27 ಮುನ್ನುಡಿ)
111)ಎರಡನೆಯ ಖಂಡ:ಇವರು -ಭೂಮಿಯಲ್ಲಿ ಅಡಗಿರುವ ನಿಧಿಯ ಮೇಲೆ ನಡೆಯುತ್ತಿದ್ದರೂ ಅದನ್ನು ಅರಿಯದ ಅಜ್ಞಾನಿಗಳಂತೆ -ಬ್ರಹ್ಮಲೋಕವನ್ನು ಪ್ರತಿದಿನವೂ ಸೇರುತ್ತಿದ್ದರೂ ಅದನ್ನು ಪಡೆದುಕೊಳ್ಳದೆ ಇರುವರು.(ಪುಟ 27 ಮುನ್ನುಡಿ)
112)ಅಪಹತ- ಪಾಪತ್ವವೇ ಮೊದಲಾದ ಗುಣಗಳಿಂದ ಆತ್ಮನು ಹೃದಯದಲ್ಲಿರುತ್ತಾನೆ.(ಪುಟ 27 ಮುನ್ನುಡಿ)
113)ಮೂರನೆಯ ಖಂಡ:ಹೀಗೆ ಸುಷುಪ್ತಿ ಕಾಲದಲ್ಲಿ ಸದ್ವಸ್ತುವಿನೊಂದಿಗೆ ಸಂಪನ್ನನಾದ ಪುರುಷನು ಶರೀರವೆಂಬ ಭಾವನೆಯನ್ನು ಬಿಟ್ಟು ಪರಮಾತ್ಮನ ಲಕ್ಷಣವಾದ ಜ್ಯೋತಿಯನ್ನು ಸೇರಿ ತನ್ನ ಸ್ವರೂಪದಲ್ಲಿಯೇ ನಿಲ್ಲುತ್ತಾನೆ.ಇವನೇ ಆತ್ಮನು,ಅಮೃತ,ಅಭಯ ಬ್ರಹ್ಮ.ಈ ಬ್ರಹ್ಮಕ್ಕೆ ಸತ್ಯವೆಂಬುದು ಹೆಸರು.(ಪುಟ 27 ಮುನ್ನುಡಿ)
114) ನಾಲ್ಕನೆಯ ಖಂಡ: ಈ ಲೋಕಗಳು ನಾಶವಾಗದಿರಲು ಆತ್ಮನು ಸೇತುವಾಗಿದ್ದಾನೆ.(ಪುಟ 28 ಮುನ್ನುಡಿ)
105)ಬ್ರಹ್ಮಲೋಕವು ಸದಾ ಪ್ರಕಾಶಿಸುತ್ತಲೇ ಇರುತ್ತದೆ.ಬ್ರಹ್ಮಲೋಕವನ್ನು ಬ್ರಹ್ಮಚಯ೯ದಿಂದಲೇ ಪಡೆದುಕೊಳ್ಳಬೇಕು.(ಪುಟ 28 ಮುನ್ನುಡಿ)
106) ಈ ಸೇತುವನ್ನು ದಾಟಿದರೆ ತಮೋ ರೂಪವಾದ ರಾತ್ರಿಯೂ ಚೈತನ್ಯ ಜ್ಯೋತಿಯೆಂಬ ಹಗಲೇ ಆಗುತ್ತದೆ.(ಪುಟ 28 ಮುನ್ನುಡಿ)
107)ಯಜ್ಞವೇ ಬ್ರಹ್ಮಚಯ೯ವು.ಏಕೆಂದರೆ ಜ್ಞಾತೃವಾದವನು ಯಜ್ಞಫಲವನ್ನು ಬ್ರಹ್ಮಚಯ೯ದಿಂದಲೇ ಹೊಂದುತ್ತಾನೆ. ಹೀಗೆಯೇ ಇಷ್ಟ,ಸತ್ತ್ರಾಯಣ,ಮೌನ,ಉಪವಾಸ,ಅರಣ್ಯವಾಸ ಇವೂ ಬ್ರಹ್ಮಚಯ೯ವೇ.ಏಕೆಂದರೆ ಇವೆಲ್ಲವೂ ಆತ್ಮಲಾಭಕ್ಕೆ ನಾನಾವಿಧವಾಗಿ ಕಾರಣಗಳಾಗಿರುವುವು.(ಪುಟ 28 ಮುನ್ನುಡಿ)
ಐದನೆಯ ಖಂಡ:
108)ಬ್ರಹ್ಮಲೋಕದಲ್ಲಿ ಅರ ಮತ್ತು ಣ್ಯ ಎಂಬ ಎರಡು ಸರೋವರಗಳಿವೆ.ಐರಂಮದೀಯವೆಂಬ ಸರಸ್ಸಿದೆ.ಸೋಮಸವನವೆಂಬ ಅಶ್ವತ್ಥವಿದೆ.ಅಲ್ಲಿ ಬ್ರಹ್ಮನ ಅಪರಾಜಿತಾ ಎಂಬ ಸರೋವರವಿದೆ.ಅಲ್ಲಿ ಬ್ರಹ್ಮನು ನಿಮಿ೯ಸಿರುವ ಹಿರಣ್ಮಯ ಮಂಟಪವಿದೆ.ಬ್ರಹ್ಮಚಯ೯ವುಳ್ಳ ಉಪಾಸಕರಿಗೆ ಬ್ರಹ್ಮಲೋಕವೂ ಸ್ವತಂತ್ರಗತಿಯೂ ಇರುತ್ತದೆ.(ಪುಟ 28 ಮುನ್ನುಡಿ)
105)ಆತ್ಮತತ್ವವು ನಿಗು೯ಣವಾದರೂ ಸಾಮಾನ್ಯ ಜನರಿಗೆ ಸಗುಣ ಭಾವವು ಇಷ್ಟವಾದ್ದರಿಂದ ಅದು ಸತ್ಯಕಾಮಾದಿ ಗುಣಗಳಿಂದ ಕೂಡಿರುವುದೆಂದು ಉಪದೇಶಿಸ ಬೇಕಾಗಿದೆ.(ಪುಟ 26 ಮುನ್ನುಡಿ)
106)ಬ್ರಹ್ಮವಿದರಿಗೆ ವಿಷಯಗಳಿಂದ ಉಪರತಿಯು ತಾನೇ ಉಂಟಾಗ ಬಹುದಾಗಿದ್ದರೂ ,ಪೂವ೯ಜನ್ಮಗಳ ವಿಷಯ ಸೇವಾಭ್ಯಾಸದಿಂದ ಉಂಟಾದ ವಿಷಯ ತೃಷ್ಣೆಯನ್ನು ಕೂಡಲೇ ತೊಡಗಿಸಲು ಕಷ್ಟವಾದುದರಿಂದ ಬ್ರಹ್ಮಚಯಾ೯ದಿ ಸಾಧನ ವಿಶೇಷವನ್ನು ವಿಧಿಸಬೇಕಗಿದೆ.(ಪುಟ 26 ಮುನ್ನುಡಿ)
107)ಗಂತೃ-ಗಮನ-ಗಂತವ್ಯಗಳು(ಹೋಗುವುದು-ಬರುವುದು)ಬ್ರಹ್ಮವಿದನಿಗೆ ಇಲ್ಲದ್ದರಿಂದ ಅವನಿಗೆ ತನ್ನ ಆತ್ಮನಲ್ಲಿಯೇ ಲಯ ಉಂಟಾಗುವುದು.ಆದರೆ ಸಾಮನ್ಯ ಜನರಿಗೆ ನೆತ್ತಿಯ ನಾಡಿಯ ಮೂಲಕ ಗತಿಯನ್ನು ಹೇಳಬೇಕಾಗಿದೆ.(ಪುಟ 26 ಮುನ್ನುಡಿ)
108)ಈ ಅಧ್ಯಾಯದಲ್ಲಿ ಒಟ್ಟು ಹದಿನೈದು ಖಂಡಗಳಿವೆ.
ಮೊದಲ ಖಂಡದಲ್ಲಿ 'ದಹರವಿದ್ಯೆ'ಯನ್ನು ಹೇಳಿದೆ. 'ದಹರ'ಎಂದರೆ ಸಣ್ಣ ಎಂದಥ೯.ಬ್ರಹ್ಮಪುರವಾದ ನಮ್ಮ ಶರೀರದಲ್ಲಿ ಹೃದಯಪದ್ಮವೆಂಬ ಮನೆಯಿದೆ.ಅದರಲ್ಲಿರುವ ದಹರಾಕಾಶದಲ್ಲಿ ಯಾವುದಿದೆಯೊ ಅದನ್ನು ಅನ್ವೇಶಿಸಬೇಕು.ಅದನ್ನೇ ಅರಿತುಕೊಳ್ಳಲು ಬಯಸಬೇಕು.ಈ ದಹರಾಕಾಶವೇ ಬ್ರಹ್ಮ.ಬ್ರಹ್ಮಕ್ಕೆ ಆಕಾಶವೆಂಬುದು ಪ್ರಸಿದ್ಧವಾದ ಹೆಸರು.ಹೃದಯದಲ್ಲಿರುವ ಆಕಾಶವನ್ನು ಬ್ರಹ್ಮವೆಂದು ಹೇಳಿರುವುದರಿಂದ ಅದು ಹೃದಯಾಕಾಶದಷ್ಟೇ ಸಣ್ಣದೆಂದು ಭಾವಿಸಬಾರದು.ಇಲ್ಲಿ ದ್ಯುಲೋಕ-ಪೃಥ್ವಿಗಳ ಅಗ್ನಿ ವಯುಗಳು ,ಸೂಯ೯-ಚಂದ್ರರು ಮತ್ತು ಏನೇನಿದೆಯೊ ಏನೇನಿಲ್ಲವೋ(ಕಾಣುವ ಹಾಗೂ ಕಾಣದ)ಎಲ್ಲವೂ ಅಂತಗ೯ತವಗಿವೆ.(ಪುಟ 27 ಮುನ್ನುಡಿ)
10೯)ಶರೀರದ ಮುಪ್ಪಿನಿಂದ ಆಕಾಶವೆಂಬ ಬ್ರಹ್ಮಕ್ಕೆ ಮುಪ್ಪಿಲ್ಲ.(ಪುಟ 27 ಮುನ್ನುಡಿ)
110)ಯಾರು ಇಲ್ಲಿ ಆತ್ಮನನ್ನು ಉಪಾಸಿಸಿ ದೇಹತ್ಯಾಗ ಮಾಡುವರೊ ಅವರು ಸವ೯ಲೋಕಗಳಲ್ಲಿಯೂ
ಅವರು ಸವ೯ಲೋಕಗಳಲ್ಲಿಯೂ ಸ್ವತಂತ್ರಗತಿಯನ್ನು ಪಡೆಯುತ್ತಾರೆ.ಇದು ಮೊದಲನೆಯ ಖಂಡದ ವಿಷಯ(ಪುಟ 27 ಮುನ್ನುಡಿ)
111)ಎರಡನೆಯ ಖಂಡ:ಇವರು -ಭೂಮಿಯಲ್ಲಿ ಅಡಗಿರುವ ನಿಧಿಯ ಮೇಲೆ ನಡೆಯುತ್ತಿದ್ದರೂ ಅದನ್ನು ಅರಿಯದ ಅಜ್ಞಾನಿಗಳಂತೆ -ಬ್ರಹ್ಮಲೋಕವನ್ನು ಪ್ರತಿದಿನವೂ ಸೇರುತ್ತಿದ್ದರೂ ಅದನ್ನು ಪಡೆದುಕೊಳ್ಳದೆ ಇರುವರು.(ಪುಟ 27 ಮುನ್ನುಡಿ)
112)ಅಪಹತ- ಪಾಪತ್ವವೇ ಮೊದಲಾದ ಗುಣಗಳಿಂದ ಆತ್ಮನು ಹೃದಯದಲ್ಲಿರುತ್ತಾನೆ.(ಪುಟ 27 ಮುನ್ನುಡಿ)
113)ಮೂರನೆಯ ಖಂಡ:ಹೀಗೆ ಸುಷುಪ್ತಿ ಕಾಲದಲ್ಲಿ ಸದ್ವಸ್ತುವಿನೊಂದಿಗೆ ಸಂಪನ್ನನಾದ ಪುರುಷನು ಶರೀರವೆಂಬ ಭಾವನೆಯನ್ನು ಬಿಟ್ಟು ಪರಮಾತ್ಮನ ಲಕ್ಷಣವಾದ ಜ್ಯೋತಿಯನ್ನು ಸೇರಿ ತನ್ನ ಸ್ವರೂಪದಲ್ಲಿಯೇ ನಿಲ್ಲುತ್ತಾನೆ.ಇವನೇ ಆತ್ಮನು,ಅಮೃತ,ಅಭಯ ಬ್ರಹ್ಮ.ಈ ಬ್ರಹ್ಮಕ್ಕೆ ಸತ್ಯವೆಂಬುದು ಹೆಸರು.(ಪುಟ 27 ಮುನ್ನುಡಿ)
ಆರನೆಯ ಖಂಡ(ನಾಡೀ ಖಂಡ):
114)ಬ್ರಹ್ಮಚಯಾ೯ದಿ ಸಾಧನಗಳಿಂದ ಕೂಡಿ ಅನೃತವಾದ ಬಾಹ್ಯವಿಷಯಗಳಲ್ಲಿ ತೃಷ್ಣೆಯನ್ನು ಬಿಟ್ಟು
ಹೃದಯ ಪುಂಡರೀಕದಲ್ಲಿರುವ ಬ್ರಹ್ಮವನ್ನು ಉಪಾಸಿಸುವವನಿಗೆ ನೆತ್ತಿಯ ಮೂಲಕ ಹೋಗುವ ನಾಡಿಯಿಂದ ಗತಿಯನ್ನು ಹೇಳಲು ಈ ನಾಡೀಖಂಡವನ್ನು ಆರಂಭಿಸಿದೆ. ಹೃದಯದಿಂದ ನೂರೊಂದು ಮಾಡಿಗಳು ಹೊರಟಿವೆ.ಒಂದು ಮಹಾಪಥವು ಎರಡು ಗ್ರಾಮಗಳನ್ನು ಕೂಡಿಸುವಂತೆ ಅದಿತ್ಯನ ರಶ್ಮಿಗಳು ಹೃದಯವನ್ನೂ ಆದಿತ್ಯ ಮಂಡಲವನ್ನೂ ಕೂಡಿಸುತ್ತವೆ.ಜೀವನು ಸುಷುಪ್ತಿ ಕಾಲದಲ್ಲಿ ಈ ನಾಡಿಗಳಲ್ಲಿ ಪ್ರವೇಶಿಸಿ ಹೃದಯಾಕಾಶವನ್ನು ಪ್ರವೇಶಿಸುತ್ತಾನೆ.ಅಲ್ಲಿ ಯಾವ ಪಾಪವೂ ಅವನನ್ನು ಸೋಂಕುವುದಿಲ್ಲ.ಏಕೆಂದರೆ ದೇಹೇಂದ್ರಿಯಗಳಿಂದ ಕೂಡಿರುವವನನ್ನೇ ಪಾಪವು ಸೋಂಕುತ್ತದೆ.ಅದರೆ ಸದ್ವಸ್ತುವಿನಿಂದ ಸಂಪನ್ನನಾದವನಿಗೆ ಇಂಥ ಅನುಭವವುಂಟಾಗುವುದಿಲ್ಲ.(ಪುಟ 2೯ ಮುನ್ನುಡಿ)
115)ಏಳನೆಯ ಖಂಡ:'ಈ ಸಂಪ್ರಸಾದನು ಶರೀರದಿಂದ ಎದ್ದು ಪರಂಜ್ಯೋತಿಯನ್ನು ಸೇರಿ ತನ್ನ
ಸ್ವರೂಪದಲ್ಲಿ ಸ್ಥಿತಿಯನ್ನು ಪಡೆಯುತ್ತಾನೆ. ಇವನೇ ಆತ್ಮನು ಎಂದು ಹೇಳಿದ್ದಾನೆ.(ಪುಟ 2೯ ಮುನ್ನುಡಿ)
116)'ಯಾವ ಆತ್ಮನು ಪಾಪರಹಿತನೂ ...ಸತ್ಯಕಾಮನೂ ಸತ್ಯಸಂಕಲ್ಪನೂ ಆಗಿರುವನೊ ಅವನನ್ನೆ ಅನ್ವೇಶಿಸವೇಕು.ಅವನನ್ನೇ ಅರಿತುಕೊಳ್ಳಲು ಬಯಸಬೇಕು.ಯಾವನು ಈ ಆತ್ಮನನ್ನು ಕಂಡುಹಿಡಿದು ಅರಿತುಕೊಳ್ಳುವನೋ ಅವನು ಸವ೯ಲೋಕಗಳನ್ನೂ ಸವ೯ಕಮ೯ಗಳನ್ನೂ ಪಡೆದುಕೊಳ್ಳುತ್ತಾನೆ.'
ಎಂಬ ಪ್ರಜಾಪತಿಯ ಮಾತನ್ನು ದೇವಾಸುರರು ಕೇಳಿದರು.ಈ ಆತ್ಮವನ್ನು ಅರಿತುಕೊಳ್ಳಲು ದೇವತೆಗಳಲ್ಲಿ ಇಂದ್ರನೂ ಅಸುರರಲ್ಲಿ ವಿರೋಚನನೂ ಸಮಿತ್ಪಾಣಿಯಾಗಿ ಹೊರಟು ಪ್ರಜಾಪತಿಯನ್ನು ಸೇರಿದರು.ಇಲ್ಲಿ ಪ್ರಜಾಪತಿ-ಇಂದ್ರ-ವಿರೋಚನ ಸಂವಾದವು ನಿರೂಪಿಸಲ್ಪಟ್ಟಿದೆ.(ಪುಟ 31 ಮುನ್ನುಡಿ)
117)ಜ್ಞಾನವು ಇಂದ್ರತ್ವಕ್ಕಿಂತಲೂ ಗುರುತರವಾದುದು.(ಪುಟ 31 ಮುನ್ನುಡಿ)
118)ಇಂದ್ರನಿಗೆ ಅವಸ್ಥಾತ್ರಯ ದೋಷದ ಸಂಬಂಧವಿಲ್ಲದ ಮತ್ತು ಅಪಹತಪಾಪ್ಮತ್ವಾದಿ ಲಕ್ಷಣಗಳುಳ್ಳ ಆತ್ಮಸ್ವರೂಪವನ್ನು ಪ್ರಜಾಪತಿಯು ಉಪದೇಶಿಸುತ್ತಾನೆ.(ಪುಟ 31 ಮುನ್ನುಡಿ)
11೯)'ಈ ಶರೀರವು ಮತ್ಯ೯ವೇ,ಮೃತ್ಯುವಿನಿಂದ ಗ್ರಸ್ತವಾಗಿರುತ್ತದೆ.ಇದು ಅಮೃತನೂ ಅಶರೀರನೂ ಆದ ಆತ್ಮನಿಗೆ ಅಧಿಷ್ಠಾನ.ಶರೀರವುಳ್ಳವನು ಪ್ರಿಯಾ ಪ್ರಿಯಗಳಿಂದ ಗ್ರಸ್ತನಾಗಿರುತ್ತಾನೆ.ಅವನಿಗೆ ಪ್ರಿಯಾ ಪ್ರಿಯಗಳ ನಾಶವು ಇಲ್ಲವೇ ಇಲ್ಲ.ಶರೀರವಿಲ್ಲದವನನ್ನು ಪ್ರಿಯಾ ಪ್ರಿಯಗಳು ಸೋಕುವುದೇ ಇಲ್ಲ.'(ಪುಟ 31 ಮುನ್ನುಡಿ)
120)'ನಾನು ಶರೀರವು ಶರೀರವೇ ನಾನು 'ಎಂಬ ಅವಿವೇಕದಿಂದ ತಾದಾತ್ಮ್ಯವನ್ನು ಪಡೆದಿರುವವನು ಶರೀರವುಳ್ಳವನು';ದೇಹಾಭಿಮಾನದಿಂದ ಬಿಡುಗಡೆಯನ್ನು ಹೊಂದಿ ಅಶರೀರ ಸ್ವರೂಪ-ವಿಜ್ಞಾನದಿಂದ ಅವಿವೇಕ ಜ್ಞಾನವನ್ನು ತೊಲಗಿಸಿಕೊಂಡಿರುವವನು 'ಶರೀರವಿಲ್ಲದವನು'(ಪುಟ 32 ಮುನ್ನುಡಿ)
121)ಹನ್ನೆರಡನೆಯ ಖಂಡ:ಅಶರೀರನೂ ಸಂಪ್ರಸಾದ ಗುಣವುಳ್ಳವನೂ ಆದ ಆತ್ಮನು ತನ್ನ ಶರೀರತ್ವವನ್ನು ಬಿಟ್ಟು ಪರಮಾತ್ಮ ಜ್ಯೋತಿಯನ್ನು ಸೇರಿಕೊಂಡು ತನ್ನ ರೂಪದಿಂದ ಕಾಣಿಸಿಕೊಳ್ಳುತ್ತಾನೆ.ಇವನೇ ಉತ್ತಮ ಪುರುಷನು(ಪುಟ 32 ಮುನ್ನುಡಿ)
122) ಮುಕ್ತನು ಸವಾ೯ತ್ಮ ಭಾವವನ್ನು ಹೊಂದಿ ಸವ೯ಕಾಮಗಳನ್ನೂ ಪಡೆಯುತ್ತಾನೆ.(ಪುಟ 32 ಮುನ್ನುಡಿ)
123) ವಿಶೇಷ ಜ್ಞಾನವು ಚಕ್ಷುಸ್ಸೇ ಮೊದಲಾದ ಕರಣಗಳಿಂದ ಉಂಟಾಗುತ್ತಿದ್ದರೂ ಚೈತನ್ಯ ಸ್ವರೂಪವು ಆತ್ಮನದೇ.(ಪುಟ 32 ಮುನ್ನುಡಿ)
124)'ಶ್ಯಾಮಾಚ್ಛಬಲಂ ಪ್ರಪದ್ಯೇ' ಎಂಬ ಪವಿತ್ರವಾದ ಮಂತ್ರವನ್ನು ಧ್ಯನಕ್ಕಾಗಿ ಹೇಳಿದೆ.(ಪುಟ 32 ಮುನ್ನುಡಿ)
125)ಹದಿನಲ್ಕನೆಯ ಖಂಡ: ಆಕಾಶವೆಂಬ ಹೆಸರಿನಿಂದ ಪ್ರಸಿದ್ಧವಾದ ಬ್ರಹ್ಮವು ನಾಮರೂಪಗಳನ್ನು ವಿಂಗಡಿಸುತ್ತದೆ.ನಾಮ ರೂಪಗಳು ಯಾವುದರಲ್ಲಿ ಇವೆಯೊ ಅದು ಬ್ರಹ್ಮವು,ಅಮೃತವು.
126)ಕೊನೆಯ ಮೂರು ಅಧ್ಯಾಯಗಳಲ್ಲಿ ಬ್ರಹ್ಮವಿದ್ಯೆಯು ಸಫಲವೆಂದು ನಿಧ೯ರಿಸಲ್ಪಟ್ಟಿದ್ದgರೂ ಯಜ್ಞಾದಿ ಕಮ೯ಗಳಿಂದ ಯಾವ ಪ್ರಯೋಜನವೂ ಇಲ್ಲವೆಂದು ಭಾವಿಸಬಾರದು.ಅಂಥ ತಪ್ಪು ಜ್ಞಾನವನ್ನು ಪರಿಹರಿಸಲು ಜ್ಞಾನಿಗಳು ಮಾಡುವ ಕಮ೯ಕ್ಕೂ ವಿಶಿಷ್ಟ ಫಲವಿದೆ ಎಂದು ಹೇಳಲಾಗಿದೆ.(ಪುಟ 32 ಮುನ್ನುಡಿ)
127) ಇಲ್ಲಿಯೂ ಕೂಡ ತಾತ್ಪಯ೯ ಟಿಪ್ಪಣಿಗಳು ಶಂಕರ ಭಾಷ್ಯವನ್ನೇ ಅವಲಂಬಿಸಿವೆ.(ಪುಟ 32 ಮುನ್ನುಡಿ)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಮೊದಲನೆಯ ಅಧ್ಯಾಯ:
ಶಾಂತಿಪಾಠ:
ಅಪ್ಯಾಯಂತು ಮಮಾಂಗಾನಿ ವಾಕ್ ಪ್ರಾಣ ಚಕ್ಷುಃ
ಶ್ರೋತ್ರಮಥೋ ಬಲಮಿಂದ್ರಿಯಾಣಿಚ ಸವಾ೯ಣಿ
ಸವ೯ಂಬ್ರಹ್ಮೌಪನಿಷದಂ ಮಾಹಂ ಬ್ರಹ್ಮ ನಿರಾಕುಯಾ೯ಂ
ಮಾ ಮಾ ಬ್ರಹ್ಮನಿರಾಕರೋದನಿರಾಕರಣಮಸ್ತ್ವ ನಿರಾಕರಣಂ
ಮೇಸ್ತು ತದಾತ್ಮನಿ ನಿರತೇಯ ಉಪನಿಷತ್ಸು
ಧಮಾ೯ಸ್ತೇ ಮಯಿ ಸಂತು ತೇ ಮಯಿಸಂತು||
ಓಂ ನನ್ನ ಅವಯವಗಳೂ ವಾಕ್ಕೂ ಪ್ರಾಣವೂ ಚಕ್ಷುಸ್ಸೂ ಶ್ರೋತ್ರವೂ ಬಲವೂ ಮತ್ತು ಎಲ್ಲ
ಇಂದ್ರಿಯಗಳು ಪುಷ್ಟಿಯನ್ನು ಹೊಂದಲಿ ,ಎಲ್ಲವೂ ಉಪನಿಷತ್ ಪ್ರತಿಪಾದ್ಯವಾದ ಬ್ರಹ್ಮವೇ.ನಾನು ಬ್ರಹ್ಮವನ್ನು ನಿರಾಕರಿಸದಿರಲಿ.ಬ್ರಹ್ಮವು ನನ್ನನ್ನು ನಿರಾಕರಿಸದಿರಲಿ,ನಿರಾಕರಣವೇ ಇಲ್ಲದಿರಲಿ;ನನ್ನಿಂದಲೂ ನಿರಾಕರಣವಿಲ್ಲದಿರಲಿ.ಉಪನಿಷತ್ತುಗಳಲ್ಲಿ ಉಕ್ತವಾಗಿರುವ ಧಮ೯ಗಳು ಆತ್ಮನಿರತನಾದ ನನ್ನಲ್ಲಿ ಇರಲಿ;ಅವು ನನ್ನಲ್ಲಿರಲಿ.
ಓಂ ಶಾಂತಿಃ ಶಾಂತಿಃ ಶಾಂತಿಃ
ಮೊದಲನೆಯ ಅಧ್ಯಾಯ:
ಮೊದಲನೆಯ ಖಂಡ:
1)ಉದ್ಗೀಥ-ಶಬ್ದವಾಚ್ಯವಾದ ಓಂ ಎಂಬ ಈ ಅಕ್ಷರವನ್ನು ಉಪಸಿಸಬೇಕು;ಏಕೆಂದರೆ ಈ ಉದ್ಗಾತೃವು ಓಂಕಾರದಿಂದ ಪ್ರಾರಂಭಿಸಿಯೇ ಹಾಡುತ್ತಾನೆ.ಓಂಕಾರದ ಉಪವ್ಯಾಖ್ಯಾನವು ಪ್ರಾರಂಭಿಸಲ್ಪಡುತ್ತದೆ.(ಪುಟ 3)
2)ಆದುದರಿಂದ ಸಂಸಾರದ ಮೂರೂ ಗತಿಗಳನ್ನು ನಿರಾಕರಿಸಿ ಕಮ೯ನಿರಪೇಕ್ಷವಾದ (ಕಮ೯ವನ್ನು ಅಪೇಕ್ಷಿಸದ)ಅದ್ವೈತಾತ್ಮ- ವಿಜ್ಞಾನವನ್ನು ಉಪದೇಶಿಸಲು ಉಪನಿಷತ್ತನ್ನು ಪ್ರಾರಂಭಿಸಿದೆ.(ಪುಟ 3)
(ಸಂಸಾರದ ಮೂರುಗತಿಗಳು ಈ ರೀತಿ ಇವೆ.1)ಉಪಾಸನಾ ಸಹಿತವಾದ ಕಮ೯ದ ಮೂಲಕ ಅಚಿ೯ರಾದಿ ಮಾಗ೯ದಿಂದ ಅಪರಬ್ರಹ್ಮ ಪ್ರಾಪ್ತಿ 2)ಉಪಾಸನಾ ರಹಿತವಾದ ಕಮ೯ದ ಮೂಲಕ ಧೂಮಾದಿ ಮಾಗ೯ದಿಂದ ಚಂದ್ರಲೋಕದ ಅಥವಾ ಪಿತೃಲೋಕದ ಪ್ರಾಪ್ತಿ 3) ಶಾಸ್ತ್ರಚೋದನೆಯ್ಲ್ಲದೆ ತಮ್ಮ ಸ್ವಭಾವವನ್ನೇ ಅನುಸರಿಸುವವರಾಗಿ ಉಭಯ ಮಾಗ೯ಗಳಿಂದಲೂ ಭ್ರಷ್ಟರಾದವರ ಅಧೋಗತಿ.)
3)ತನ್ನ ಸ್ವರೂಪದಲ್ಲಿಯೇ ಇರುವವನೂ ಅವಿಕ್ರಿಯನೂ ಆದ ಆತ್ಮನಲ್ಲಿ ಕತ್ರಾ೯ದಿ -ಕಾರಕಗಳು ,ಕ್ರಿಯೆ,ಫ¯ ಎಂಬ ಭೇದಜ್ಞಾನವನ್ನು ತೊಲಗಿಸುವುದು ಅದ್ವೈತ ಜ್ಞಾನ(ಪುಟ 3)
4) ಶಾಸ್ತ್ರವು ತಿಳಿಸಿಕೊಡುವ ಒಂದು ಆಲಂಬನವನ್ನು ತೆಗೆದುಕೊಂಡು ಅದರಲ್ಲಿ ಸಮಾನ ಚಿತ್ತವೃತ್ತಿಯನ್ನು -ಅದಕ್ಕಿಂತ ಭಿನ್ನವಾದ ಪ್ರತ್ಯಯವು ಬಾರದಂತೆ -ಉಂಟು ಮಾಡುವುದು ಉಪಾಸನೆ.(ಪುಟ 3)
5)ಈ ಉಪಾಸನೆಗಳು ಸತ್ವಶುದ್ಧಿಯನ್ನುಂಟುಮಾಡಿ ವಸ್ತುತತ್ವವನ್ನು ಪ್ರಕಾಶಿಸುವುದರಿಂದ ಅದ್ವೈತ ಜ್ಞಾನಕ್ಕೆ ಉಪಕಾರವಾಗಿರುತ್ತವೆ.(ಪುಟ 3)
6)ಉದ್ಗೀಥವು ಜ್ಯೋತಿಷ್ಟೋಮಯಾಗದ ಅಂಗವಾಗಿದ್ದರೂ ಇಲ್ಲಿ ಸ್ವತಂತ್ರವಾದ ಉಪಾಸನೆಯಾಗಿದೆ.
(ಪುಟ 4)
7)ನಾಮವೂ ಪ್ರತೀಕವೂ ಆಗಿ ಓಂಕಾರವು ಪರಮಾತ್ಮೋಪಾಸನೆಗೆ ಶ್ರೇಷ್ಠವಾದ ಸಾಧನವಾಗಿದೆ.(ಪುಟ 4)
8)ಉಪಾಸನೆ ,ಫಲ,ವಿಭೂತಿ-ಇವುಗಳನ್ನು ವಿಸ್ತಾರವಾಗಿ ತಿಳಿಸುವುದಕ್ಕೆ ಉಪವ್ಯಾಖ್ಯಾನವೆಂದು ಹೆಸರು.(ಪುಟ 4)
೯)ಪೃಥ್ವಿಯು ಚರಾಚರ ಭೂತಗಳ ರಸವು.ನೀರು ಪೃಥ್ವಿಯ ರಸವು.ಓಷಧಿಗಳು ನೀರಿನ ರಸವು.ಪುರುಷ ಶರೀರವು ಓಷಧಿಗಳ ರಸವು.ವಾಗಿಂದ್ರಿಯವು ಪುರುಷನ (ಅವಯವಗಳ) ರಸವು.ಋಕ್ಕು ವಾಗಿಂದ್ರಿಯದ ರಸವು.ಸಾಮವು ಋಕ್ಕಿನ ರಸವು.ಉದ್ಗೀಥವು ಸಾಮದ ರಸವು.(ಪುಟ 4)
10)ಈ ಓಂಕಾರವು ರಸಗಳಿಗೆಲ್ಲ ರಸತಮವು. ಪರಮವು ,ಪರಾಥ೯ವು ಮತ್ತು ಎಂಟನೆಯದು(ಪುಟ 5)
(ಪೃಥಿವ್ಯಾದಿ ರಸಗಳಲ್ಲಿ ಕ್ರಮವಾಗಿ ಎಂಟನೆಯದು)
11) ಯಾವುದು ಋಕ್ಕು?ಯಾವುದು ಸಾಮವು? ಯಾವುದು ಉದ್ಗೀಥವು-ಇವುಗಳನ್ನು ಈಗ ವಿಮಶಿ೯ಸ ಬೇಕಾಗಿದೆ.(ಪುಟ 6)
12)ವಾಕ್ಕೇ ಋಕ್ಕು,ಪ್ರಾಣವು ಸಾಮವು ,ಓಂ ಎಂಬ ಈ ಅಕ್ಷರವು ಉದ್ಗೀಥವು.(ಪುಟ6)
13) ಯಾವನು ಉದ್ಗೀಥವೆಂಬ ಅಕ್ಷರವನ್ನು ಹೀಗೆ ಅರಿತುಕೊಂಡು ಉಪಾಸಿಸುತ್ತಾನೆಯೊ ಅವನು ಯಜಮಾನನ ಕಾಮಗಳನ್ನು ಪಡೆಯುವವನಾಗುತ್ತಾನೆ(ಪುಟ 7)
14) ಓಂಕಾರವೇ ಅನುಮತಿಯನ್ನು ಸೂಚಿಸುವ ಅಕ್ಷರವು(ಪುಟ 8)
15( ಲೌಕಿಕ -ವೈದಿಕ ವ್ಯವಹಾರಗಳಲ್ಲಿ ಓಂ ಎಂದು ಹೇಳುವುದು ಸಮ್ಮತಿಯನ್ನು ಸೂಚಿಸುತ್ತದೆ.(ಪುಟ 8)
16)ವೈದಿಕ ಕಮ೯ಗಳೆಲ್ಲ ಪರಮಾತ್ಮನ ಪೂಜೆಗಾಗಿಯೇ ಪ್ರವೃತ್ತವಾಗಿವೆ.(ಗೀತೆ18-46)(ಪುಟ 8)
17)ಪ್ರಣವೋಚ್ಛಾರಣ ಪೂವ೯ಕವಾಗಿ ಮಾಡಿದ ಯಜ್ಞದಿಂದ ಮಳೆ,ಅನ್ನ,ಪ್ರಾಣ,ಇವುಗಳು ಉತ್ಪನ್ನವಾಗಿ ಪುನಃ ಯಜ್ಞಕ್ಕೆ ಉಪಕರಣವಾಗುವುದರಿಂದ ಪ್ರಣವದ ಮಹಿಮೆಯಿಂದಲೂ ರಸದಿಂದಲೂ ಕಮ೯ವಾಗುತ್ತದೆ ಎಂದಥ೯.(ಪುಟ ೯)
18)ಆದುದರಿಂದ ಬ್ರಹ್ಮವಾದಿಗಳು ಓಂ ಎಂದು ಉಚ್ಛರಿಸಿ ಶಾಸ್ತ್ರಸಮ್ಮತವಾದ ಯಜ್ಞ-ದಾನ-ತಪಸ್ಸು-ಕ್ರಿಯೆಗಳನ್ನು ಯಾವಾಗಲೂ ಪ್ರಾರಂಭಿಸುತ್ತಾರೆ.(ಪುಟ ೯)
1೯)ಇವೆಲ್ಲವೂ ಈ ಅಕ್ಷರದ ಉಪವ್ಯಾಖ್ಯಾನವಾಗಿರುತ್ತದೆ.(ಪುಟ ೯)
ಎರಡನೆಯ ಖಂಡ:
20)ಅವರು ಉದ್ಗೀಥವನ್ನು ನಾಸಿಕದಲ್ಲಿರುವ ಘ್ರಾಣವೆಂದು ಉಪಾಸಿಸಿದರ.ು ಅದನ್ನು ಪಾಪದಿಂದ ಭೇದಿಸಿದರು.ಆದುದರಿಂದ ಘ್ರಾಣದ ದ್ವಾರಾ ಸುಗಂಧ-ದುಗ೯ಂದಾದಿಗಳೆರಡನ್ನೂ ಮೂಸುತ್ತಾನೆ.ಏಕೆಂದರೆ ಇದು ಪಾಪದಿಂದ ಭೇದಿಸಲ್ಪಟ್ಟಿದೆ.(ಪುಟ 11)
21) ಅದೇ ರೀತಿಯಲ್ಲಿ ಉದ್ಗೀಥವನ್ನು
1) ವಾಗ್ದೇವತೆಯೆಂದು ಉಪಾಸಿಸಿದರು-ಅಸುರರು ಪಾಪದಿಂದ ಭೇದಿಸುವುದು-ಆದುದರಿಂದ ವಾಕ್ಕಿನ ದ್ವಾರಾ-ಸತ್ಯ ಮತ್ತು ಸುಳ್ಳು ಎರಡನ್ನೂ ಹೇಳುತ್ತಾನೆ.
2)ಚಕ್ಷುದೇ೯ವತೆಯ ಉಪಾಸನೆ-ಅಸುರರ ಭೇದಿಸುವಿಕೆ-ಒಳ್ಳೆಯದು ಮತ್ತು ಕೆಟ್ಟದ್ದನ್ನು ನೋಡುತ್ತಾನೆ.
3)ಶ್ರೋತ್ರದೇವತೆ ಉಪಾಸನೆ-ಅಸುರರ ಭೇದಿಸುವಿಕೆ-ಒಳ್ಳೆಯ ಮತ್ತು ಕೆಟ್ಟ ಆಲೋಚನೆಗಳು
ಅಥವಾ ಸಂಕಲ್ಪಿಸತಕ್ಕದ್ದು-ಸಂಕಲ್ಪಿಸಬಾರದ್ದು ಎರಡನ್ನೂ)
4)ಮುಖ್ಯಪ್ರಾಣ ಉಪಾಸನೆ-ಅಸುರರ ಭೇದಿಸುವಿಕೆ-ಆದರದೆ ಆಗ ಅಸುರರು ಕಲ್ಲಿನಮೆಲೆ ಹೊಡೆಯಲ್ಪಟ್ಟಮಣ್ಣು ಹೆಂಟೆಯು ಪುಡಿ ಪುಡಿಯಾಗುವಂತೆ-ಅಸುರರು ನಾಶವಾದರು.(ಪುಟ 13)
5)ಪ್ರಾಣೋಪಾಸಕನು ಅಭೇದ್ಯವಾದ ಕಲ್ಲಿನಂತೆ ಇರುತ್ತಾನೆ.(ಪುಟ 14)
22)ಅಂಗಿರಸ್ಸು ಉದ್ಗೀಥವನ್ನು ಪ್ರಾಣನೆಂದು ಉಪಾಸಿಸಿದನು. ಪ್ರಾಣನು ಅಂಗಗಳ ರಸ.ಆದುದರಿಂದ ಇವನನ್ನೇ ಅಂಗಿರಸನೆಂದು ಕರೆಯುತ್ತಾರೆ.(ಪುಟ15)
23)ಹಾಗೆಯೇ ಬೃಹಸ್ಪತಿಯು ಉದ್ಗೀಥವನ್ನು ಪ್ರಾಣನೆಂದು ಉಪಾಸಿಸಿದನು.ವಾಕ್ಕು-ಬೃಹತಿ.ಪ್ರಾಣನು ಅದರ ಪತಿಯಾದ್ದರಿಂದ ಬೃಹಸ್ಪತಿ.(ವಾಕ್ಕು -ಬೃಹತಿ, ಪ್ರಾಣನು -ಬೃಹಸ್ಪತಿ) (ಪುಟ16)
24)ಪ್ರಾಣನು ಬಾಯಿಂದ ಬರುವ ಕಾರಣ ಇವನನ್ನು ಆಯಾಸ್ಯನೆಂದು ಕರೆಯುತ್ತಾರೆ.(ಪುಟ 16)
ಮೂರನೆಯ ಖಂಡ:
25)ವಾಕ್ಕು ಋಕ್ಕು.ಋಕ್ಕು ಸಾಮವು.ಆದುದರಿಂದ ಮನುಷ್ಯನು ಉಸಿರನ್ನು ಬಿಡದಿರುವಾಗ ತೆಗೆದುಕೊಳ್ಳದಿರುವಾಗ ಸಾಮಗಾನ ಮಾಡುತ್ತಾನೆ.ಸಾಮವು ಉದ್ಗೀಥವು.(ಪುಟ 20)
26)ಉದ್ಗೀಥವನ್ನು ವ್ಯಾನವೆಂದೇ ಉಪಾಸಿಸಬೆಕು.(ಪುಟ 21)
27)ಉದ್ಗೀಥದ ಅಕ್ಷರಗಳನ್ನು ಉತ್-ಗೀ-ಥ ಎಂದು ಉಪಾಸಿಸಬೇಕು.ಪ್ರಾಣವೇ ಉತ್.ಏಕೆಂದರೆ ಮನುಷ್ಯನು ಪ್ರಾಣದಿಂದಲೆ ಮೇಲಕ್ಕೆ ಏಳುತ್ತಾನೆ.ವಾಕ್ಕು ಗೀ.ಏಕೆಂದರೆ ವಾಕ್ಕುಗಳನ್ನು ಶಿಷ್ಯರು ಗಿರಃ ಎಂದು ಹೇಳುತ್ತಾರೆ.ಅನ್ನವು ಏಕೆಂದರೆ ಇದೆಲ್ಲವೂ ಅನ್ನದಲ್ಲಿಯೇ ಸ್ಥಿತವಾಗಿದೆ.(ಪುಟ 21)
28) ದ್ಯುಲೋಕವೇ ಉತ್,ಅಂತರಿಕ್ಷವು ಗೀ, ಪೃಥ್ವಿಯು ಥ.
ಆದಿತ್ಯನೇ ಉತ್ ವಾಯುವು ಗೀ,ಅಗ್ನಿಯು ಥ.
ಸಾಮವೇದವೇ ಉತ್,ಯಜುವೇ೯ದವು ಗೀ ,ಋಗ್ವೇದವು ಥ.ಯಾವನು ಹೀಗೆ ತಿಳಿದುಕೊಂಡು ಉಪಾಸಿಸುತ್ತಾನೆಯೊ ವಾಕ್ಕು ಅವನಿಗೆ ತನ್ನ ಫಲವೇ ಆದ ಹಾಲನ್ನು ಕರೆಯುತ್ತದೆ.ಅವನು ಅನ್ನವಂತನೂ ಅನ್ನವನ್ನು ತಿನ್ನುವವನೂ ಆಗುತ್ತಾನೆ.(ಪುಟ 22)
ನಾಲ್ಕನೆಯ ಖಂಡ:
2೯)ಉದ್ಗೀಥವಾದ ಓಂ ಎಂಬ ಅಕ್ಷರವನ್ನು ಉಪಾಸಿಸಬೇಕು.ಏಕೆಂದರೆ ಉದ್ಗಾತೃವು ಓಂಕಾರದಿಂದ ಪ್ರಾರಂಭಿಸಿಯೇ ಹಾಡುತ್ತಾನೆ.ಓಂಕಾರದ ಉಪವ್ಯಾಖ್ಯಾನವು ಪ್ರಾರಂಭಿಸಲ್ಪಡುತ್ತದೆ.(ಪುಟ 25)
30) ಯಾವಾಗ ಮನುಷ್ಯನು ಋಗ್ವೇದ,ಯಜುವೇ೯ದ,ಸಾಮವೇದ ಇವುಗಳನ್ನು ಅಧ್ಯಯನದ ಮೂಲಕ ಪಡೆಯುವಾಗ ಓಂ ಎಂದೇ ಆದರದಿಂದ ಉಚ್ಛರಿಸುತ್ತಾನೆ.ಈ ಅಕ್ಷರವೇ ಸ್ವರವು.ಇದು ಅಮೃತವು ಮತ್ತು ಅಭಯವು.(ಪುಟ 27)
ಐದನೇ ಖಂಡ:
31)ಉದ್ಗೀಥವು ಪ್ರಣವವು,ಪ್ರಣವವು ಉದ್ಗೀಥವು.ಆ ಆದಿತ್ಯನೇ ಉದ್ಗೀಥವು ಮತ್ತು ಪ್ರಣವವು.ಏಕೆಂದರೆ ಅವನು ಓಂ ಎಂದು ಉಚ್ಛರಿಸುತ್ತಾ ಹೋಗುತ್ತಾನೆ.(ಪುಟ 28)
32)ಈಗ ಅಧ್ಯಾತ್ಮೋಪಾಸನೆ.ಬಾಯಲ್ಲಿರುವ ಪ್ರಾಣನನ್ನೇ ಉದ್ಗೀಥವೆಂದು ಉಪಾಸಿಸಬೇಕು.ಏಕೆಂದೆ ಇವನು ಓಂ ಎಂದು ಉಚ್ಛರಿಸುತ್ತ ಹೋಗುತ್ತಾನೆ.(ಪುಟ 2೯)
ಆರನೆಯ ಖಂಡ:
33)ಈ ಪೃಥ್ವಿಯೇ ಋಕ್ಕು,ಅಗ್ನಿಯು ಸಾಮ,ಅಗ್ನಿಯೆಂಬ ಆ ಸಾಮವು ಪೃಥ್ವಿಯೆಂಬ ಈ ಋಕ್ಕಿನ ಮೇಲೆ ಅಧಿಷ್ಠಿತವಗಿದೆ.ಪೃಥ್ವಿಯೇ ಸಾ,ಅಗ್ನಿಯೇ ಅಮ ಅದು ಸಾಮ.(ಪುಟ 31)
34)ಅಂತರಿಕ್ಷವೇ ಋಕ್ಕು. ವಾಯುವು ಸಾಮ.ಆ ಸಾಮವು ಈಋಕ್ಕಿನ ಮೇಲೆ ಅಧಿಷ್ಠಿತವಾಗಿದೆ.ಅಂತರಿಕ್ಷವೇ ಸಾ.ವಾಯುವೇ ಅಮ;ಅದು ಸಾಮ.(ಪುಟ 32)
35) ದ್ಯುಲೋಕವೇ ಋಕ್ಕು.ಆದಿತ್ಯನು ಸಾಮ.ದ್ಯುಲೋಕವೇ ಸಾ ,ಆದಿತ್ಯನೇ ಅಮ.ಅದು ಸಾಮ.(ಪುಟ 32)
36)ನಕ್ಷತ್ರಗಳೇ ಋಕ್ಕು,ಚಂದ್ರನು ಸಾಮನಕ್ಷತ್ರಗಳೇ ಸಚಂದ್ರನು ಅಮ;ಅದು ಸಾಮ(ಪುಟ 33)
37)ಆದಿತ್ಯನ ಈ ಶುಭ್ರ ದೀಪ್ತಿಯೇ ಸಾ.ಕಪ್ಪನ್ನು ಅತಿಶಯಿಸಿರುವ ನೀಲದೀಪ್ತಿಯೇ ಅಮ;ಅದು ಸಾಮವು.ಇನ್ನು ಆದಿತ್ಯ ಮಂಡಲದಲ್ಲಿ ಕಾಣುತ್ತಿರುವ ಜ್ಯೋತಿಮ೯ಯನಾದ ಈ ಪುರುಷನು ಜ್ಯೋತಿಮ೯ಯನಾದ ದಾರಿಯುಳ್ಳವನು,ಕೇಶವುಳ್ಳವನು ಮತ್ತು ಉಗುರಿನವರೆಗೂ ಎಲ್ಲವೂ ಜ್ಯೋತಿಮ೯ಯನಾಗಿಯೇ ಇರುತ್ತಾನೆ.(ಪುಟ 34)
38)ಇಲ್ಲಿ ಪುರುಷನೆಂದರೆ ಪರಮ ಪುರುಷನು.ಆದಿತ್ಯ ಪುರುಷನಲ್ಲ.(ಪುಟ 34)
3೯) ಜಗತ್ತನ್ನು ತನ್ನ ಸ್ವರೂಪದಿಂದ ವ್ಯಾಪಿಸಿಕೊಂಡಿರುವುದರಿಂದ ಪುರುಷನು.ಇಂದ್ರಿಯಗಳನ್ನು ಹಿಂತಿರುಗಿಸಿ ಬ್ರಹ್ಮಚಯಾ೯ದಿ ಸಾಧನಗಳಿಂದ ಕೂಡಿ ಸಮಾಹಿತ ಚಿತ್ತರಾಗಿರುವವರಿಗೆ ಮಾತ್ರ ಇವನನ್ನು ನೋಡಲು ಸಾಧ್ಯ.(ಪುಟ 34)
40)ಅವನಿಗೆ (ಪುರುಷನಿಗೆ) ಕೆಂದಾವರೆಯತೆ ಕೆಂಪಗಿರುವ ಕಣ್ಣುಗಳಿರುವುವು.ಅವನಿಗೆ ಉತ್ ಎಂದು ಹೆಸರು.ಇವನು ಸಮಸ್ತ ಪಾಪಗಳನ್ನೂ ಬಿಟ್ಟು ಎದ್ದಿರುತ್ತಾನೆ.ಯಾವನು ಹೀಗೆ ಅvರಿತುಕೊಂಡಿರುವನೊ ಅವನು ಸಮಸ್ತ ಪಾಪಗಳನ್ನೂ ಬಿಟ್ಟು ಎದ್ದೇಳುತ್ತಾನೆ.(ಪುಟ 35)
41)ಇವನು (ಪುರುಷನು) ಸಮಸ್ತ ಪಾಪಗಳಿಂದಲೂ ಅವುಗಳ ಕಾಯ೯ಗಳಿಂದಲೂ ಎದ್ದಿರುತ್ತಾನೆ.ಯ ಆತ್ಮಾ ಅಪಹತಪಾಪ್ಮಾ(8,7,1)ಎಂದು ಶ್ರುತಿಯು ಮುಂದೆ ಹೇಳುತ್ತದೆ.(ಪುಟ 35)
42)ಋಕ್ ಸಾಮಗಳು ಅವನ ಎರಡು ಕೀಲುಗಳು.ಆದುದರಿಂದ ಅವನು ಉದ್ಗೀಥನು.ಅವನು ಉತ್ತನ್ನು ಹಾಡುವುದರಿಂದ ಉದ್ಗಾತೃವೆನಿಸಿರುವನು.ಇದು ಅಧಿದೈವತವು.(ದೈವಕ್ಕೆ ಸಂಬಂಧಪಟ್ಟಿದ್ದು)(ಪುಟ 35)
ಏಳನೆಯ ಖಂಡ:
43)ಈಗ ಅಧ್ಯಾತ್ಮೋಪಾಸನೆಯು:ವಾಕ್ಕೇ ಋಕ್ಕು,ಪ್ರಾಣವು ಸಾವi,ಸಾಮವು ವಾಕ್ಕೆಂಬ ಈ ಋಕ್ಕಿನಮೇಲೆ ಅಧಿಷ್ಠಿತವಾಗಿದೆ.ಆದ್ದರಿಂದ ಋಕ್ಕಿನಮೇಲೆ ಅಧಿಷ್ಠಿತವಾಗಿರುವಂತೆ ಸಾಮವನ್ನು ಹಾಡುತ್ತಾರೆ.ವಾಕ್ಕೇ ಸಾ ಪ್ರಾಣವು ಅಮ;ಅದು ಸಾಮ(ಪುಟ 36)
44)ಋಕ್ಕಿನಲ್ಲಿ ವಾಕ್ದೃಷ್ಟಿಯನ್ನೂ ಸಾಮದಲ್ಲಿ ಪ್ರಾಣದೃಷ್ಟಿಯನ್ನೂ ಇಡಬೇಕು.ಹೀಗೆಯೆ ಉಳಿದಕಡೆಗಳಲ್ಲಿಯೂ ಅನ್ವಯಿಸಿಕೊಳ್ಳಬೇಕು.(ಪುಟ 36)
45) ಚಕ್ಷುಸ್ಸೇ ಋಕ್ಕು,ಚಕ್ಷುಸ್ಸಿನಲ್ಲಿ ಪ್ರತಿಬಿಂಬಿತವಾದ ದೇಹಚ್ಛಾಯೆಯು ಸಾಮ.ಛಾಯೆಯೆಂಬ ಆ ಸಾಮವು ಚಕ್ಷುಸ್ಸೆಂಬ ಈ ಋಕ್ಕಿನ ಮೇಲೆ ಪ್ರತಿಷ್ಠಿತವಾಗಿದೆ.ಆದುದರಿಂದ ಋಕ್ಕಿನ ಮೆಲೆ ಅಧಿಷ್ಠಿತವಾಗಿರುವಂತೆ ಸಾಮವನ್ನು ಹಾಡುತ್ತಾರೆ.ಚಕ್ಷುಸ್ಸು ಸಾ.ಛಾಯೆಯೇ ಅಮ;ಅದು ಸಾಮ(ಪುಟ 36)
45)ಅದೇ ರೀತಿಯಲ್ಲಿ
1) ಶ್ರೋತ್ರವೇ ಋಕ್ಕುಮನಸ್ಸು ಸಾಮ
2)ಕಣ್ಣಿನ ಶುಭ್ರ ದೀಪ್ತಿಯು ಋಕ್ಕು.ಕಪ್ಪನ್ನು ಆಶ್ರಯಿಸಿರುವ ನೀಲದೀಪ್ತಿಯು ಸಾಮ
3)ಕಣ್ಣಿನಲ್ಲಿ ಕಾಣುತ್ತಿರುವ ಪುರುಷನೇ ಋಕ್ಕು,ಸಾಮವು ಉಕ್ಥ,ಯಜುಸ್ಸು, ಮತ್ತು ವೇದಗಳು
46)ಯಾವನು ಹೀಗೆ ಅರಿತುಕೊಂಡು ಸಾಮಗಾನ ಮಾಡುತ್ತಾನೆಯೋ,ನಿಜವಾಗಿಯೂ ಸಾಮಗಾನದಿಂದ ಉದ್ಗಾನ ಮಡುತ್ತಾನೆಯೊ ಅವನೇ ಉದ್ಗಾನದಿಂದ ಕಾಮನೆಯನ್ನು ಸಂಪಾದಿಸಲು ಸಮಥ೯ನಾಗುತ್ತಾನೆ.(ಪುಟ40)
ಎಂಟನೆಯ ಖಂಡ:
47) ಹಿಂದೆ ಶಿಲಕ ಶಾಲಾವತ್ಯ,ಚೈಕಿತಾಯನ ದಾಲ್ಭ್ಯ,ಪ್ರವಾಹಣ ಜೈವಲಿ ಎಂಬ ಮೂವರು ಉದ್ಗೀಥ ಜ್ಞಾನದಲ್ಲಿ ನಿಪುಣರಾಗಿದ್ದರು.ಅವರು ಹೀಗೆ ಹೇಳಿದರು:ನಾವು ಉದ್ಗೀಥ ಜ್ಞಾನದಲ್ಲಿ ನಿಪುಣರಾಗಿದ್ದೇವೆ.ಉದ್ಗೀಥ ವಿಷಯದಲ್ಲಿ ವಾದ ಮಾಡೋಣ.(ಪುಟ 41)
48) ಶಿಲಕ ಶಾಲಾವತ್ಯ:ಉದ್ಗೀಥದ ಗತಿಯು ಯಾವುದು.
ಜೈಕಿತಾಯನ:'ಸ್ವರ'
ಶಿಲಕ:ಸ್ವರದ ಗತಿ ಯಾವುದು?
ಜೈಕಿತಾಯನ: 'ಪ್ರಾಣವು.'
ಶಿಲಕ:'ಪ್ರಾಣದ ಗತಿಯಾವುದು?'
ಜೈಕಿತಾಯನ;'ಅನ್ನವು'
ಶಿಲಕ:ಅನ್ನದ ಗತಿ ಯಾವುದು?
ಜೈಕಿತಾಯನ:'ನೀರು'
ಏಕೆಂದರೆ ಸ್ವರವು ಪ್ರಾಣದಿಂದಲೇ ಉಂಟಾಗುತ್ತದೆ.,ಪ್ರಾಣವು ಅನ್ನವನ್ನು ಆಶ್ರಯಿಸಿರುತ್ತದೆ.ಅನ್ನವು ನೀರಿನಿಂದ ಉಂಟಾಗುತ್ತದೆ.(ಪುಟ 43)
4೯)ಶಿಲಕ:ನೀರಿನ ಗತಿಯಾವುದು?
ಜೈ: 'ಆ ಲೋಕವು'
ಶಿ: 'ಆ ಲೋಕದ ಗತಿ ಯಾವುದು?
ಜೈ:'ಸ್ವಗ೯ಲೋಕದ ಆಚೆಗೆ ಸಾಮವನ್ನು ಒಯ್ಯಬಾರದು.'
ನಾವು ಸ್ವಗ೯ಲೋಕದಲ್ಲಿ ಸಾಮವನ್ನು ಸ್ಥಾಪಿಸಿರುತ್ತೇವೆ.ಏಕೆಂದರೆ ಸಾಮವೇ ಸ್ವಗ೯ವೆಂದು ಸ್ತುತಿಸಲ್ಪಟ್ಟಿದೆ'.(ಪುಟ 47)
50)ಸ್ವಗ೯ಲೋಕವೇ ಸಾಮವೇದವು.(ಸ್ವಗೋ೯ ವೈ ಲೋಕಃ ಸಾಮವೇದಃ ಎಂದು ಶ್ರುತಿಯು ಹೇಳುತ್ತದೆ.(ಪುಟ 43)
51)ಶಿಲಕ: ನಿನ್ನ ಸಾಮವು ಪ್ರತಿಷ್ಠಿತವಾಗಿಲ್ಲ.ಈಗ ಯಾವನಾದರೂ "ನಿನ್ನ ತಲೆಯು ಬೀಳುವುದು"ಎಂದು ಹೇಳಿದರೆ ನಿನ್ನ ತಲೆಯು ಬೀüಳುವುದು"ಎಂದು ಹೇಳಿದರೆ ನಿನ್ನ ತಲೆಯು ಬಿದ್ದೇ ಹೋಗುವುದು.
51)
ಚೈಕಿತಾಯನ: 'ಅನುಮತಿ ಕೊಟ್ಟರೆ ನಾನು ಪೂಜ್ಯನಾದ ನಿನ್ನಿಂದ ಅರಿತುಕೊಳ್ಳುತ್ತೇನೆ'
ಶಿಲಕ:'ಅರಿತುಕೊ'
ಚೈಕಿತಾಯನ: 'ಆ ಲೋಕದ ಗತಿ ಯಾವುದು?'
ಶಿಲಕ: ಈ ಭೂಮಿಯು
ಚೈಕಿತಾಯನ: 'ಈ ಭೂಮಿಯ ಗತಿ ಯಾವುದು.?'
ಶಿಲಕ: ಪ್ರತಿಷ್ಠಾ ಭೂಮಿಯ ಆಚೆಗೆ ಸಾಮವನ್ನು ಒಯ್ಯಬಾರದು:ನಾವು ಪ್ರತಿಷ್ಠಾ ಭೂಮಿಯಲ್ಲಿ ಸಾಮವನ್ನು ಸ್ಥಾಪಿಸಿರುತ್ತೇವೆ.ಏಕೆಂದರೆ ಸಾಮವೇ ಪ್ರತಿಷ್ಠೆಯೆಂದು ಸ್ತುತಿಸಲ್ಪಟ್ಟಿದೆ'.(ಪುಟ 45)
52)ಯಾಗ-ದಾನ-ಹೋಮಾದಿಗಳಿಂದ ಈ ಲೋಕವು ಆ ಲೋಕವನ್ನು ಪೋಷಿಸುತ್ತಿರುವುದರಿಂದ ಅದಕ್ಕೆ ಗತಿಯಾಗಿದೆ.(ಪುಟ 45)
53)ಈ ಲೋಕವು ಸವ೯ ಪ್ರಾಣಿಗಳಿಗೂ ಪ್ರತಿಷ್ಠೆಯೆಂಬುದು ಪ್ರತ್ಯಕ್ಷವಾಗಿರುವುದರಿಂದ ಸಾಮಕ್ಕೂ ಇದು ಪ್ರತಿಷ್ಠೆಯೆಂಬುದು ಯುಕ್ತವು.(ಪುಟ 45)
54) 'ಈ ಭೂಮಿಯೇ ರಥಂತರವು'("ಇಯಂ ವೈ ರಥಂತರಮ್" ತಾಂಡ್ಯನ್ರಾಹ್ಮಣ(18,6,11)).ಆದುದರಿಂದ ರಥಂತರಸಾಮವು ಉದ್ಗೀತದ ಪ್ರತಿಷ್ಠೆಯಾಗಿರುವುದು. ಯುಕ್ತವು.(ಪುಟ45)
ಒಂಬತ್ತನೆಯ ಖಂಡ:
55)ಶಿಲಕ: 'ಈ ಲೋಕದ ಗತಿಯಾವುದು?'
ಪ್ರವಾಹಣ ಜೈವಲಿ:ಆಕಾಶವುಈ ಭೂತಗಳೆಲ್ಲವೂ ಆಕಾಶದಿಂದಲೇ ಉತ್ಪನ್ನವಾಗುತ್ತವೆ.ಆಕಾಶದಲ್ಲಿಯೇ ಲಯವಾಗುತ್ತವೆ.ಏಕೆಂದರೆ ಆಕಾಶವೇ ಇವುಗಳಿಗಿಂತ ಮಹತ್ತರವು.ಆಕಾಶವೇ ಮೂರುಕಾಲಗಳಲ್ಲಿಯೂ ಪ್ರತಿಷ್ಠೆ.(ಇಲ್ಲಿ ಆಕಾಶವನ್ನೇ ಪರಮಾತ್ಮನೆಂದು ಹೇಳಿದೆ)(ಪುಟ47)
ಹತ್ತನೆಯಖಂಡ:
56)ಕುರು ದೇಶದ ಸಸ್ಯಗಳು ಆಲಿಕಲ್ಲು ಮಳೆಯಿಂದ ನಾಶವಾಗಲುಉಷಸ್ತಿ ªಚಾಕ್ರಾಯಣನು ಅತ್ಯಂತ ದುರವಸ್ಥೆಯನ್ನು ಹೊಂದಿ ತನ್ನ ಪತ್ನಿಯೊಂದಿಗೆ ಇಭ್ಯ ಗ್ರಾಮದಲ್ಲಿ ವಾಸಿಸುತ್ತಿದ್ದನು(ಪುಟ 4೯)
57)ಉದ್ಗೀಥೋಪಾಸನೆಯ ಪ್ರಸಂಗದಲ್ಲಿ ಪ್ರಸ್ತಾವ,ರತಿಹಾರ,ಎಂಬ ಹೆಸರಿನ ಸಾಮ ಭಕ್ತಿಗಳ ಉಪಾಸನೆಯನ್ನು ಹೇಳಲು ಈ ಖಂಡವು ಆರಂಭವಾಗಿದೆ.(ಪುಟ 4೯)
58)ಅವನು ಕುತ್ಸಿತವಾದ ಉದ್ದನ್ನು ತಿನ್ನುತ್ತಿರುವ ಮಾವಟಿಗನನ್ನು ಆಹಾರಕ್ಕಾಗಿ ಬೇಡಿದನು.ಮಾವಟಿಗನು ಅವನಿಗೆ ಹೀಗೆ ಹೇಳಿದನು;'ನನಗೆ ಬಡಿಸಿರುವ ಇದನ್ನು ಬಿಟ್ಟರೆ ಬೇರೆ ಕಾಳುಗಳಿಲ್ಲ'.
'ಇದರಲ್ಲಿಯೇ ಸ್ವಲ್ಪವನ್ನು ಕೊಡು' ಎಂದು ಉಷಸ್ತಿಯು ಕೇಳಿದನುಆ ಮಾವಟಿಗನು ಉದ್ದನ್ನು ಅವನಿಗೆ ಕೊಟ್ಟು 'ಇಗೋ ಕುಡಿಯುವ ನೀರು'ಎಂದು ಹೇಳಿದನು'ಇದನ್ನು ನಾನು ಕುಡಿದರೆ ಉಚ್ಛಿಷ್ಟವನ್ನೇ ಕುಡಿದಂತೆ ಆದೀತು'ಎಂದು ಉಷಸ್ತಿಯು ಹೇಳಿದನು.(ಪುಟ 50)
5೯)'ಇದು ಉಚ್ಛಿಷ್ಟವಲ್ಲವೇ' ಎಂದು ಮಾವಟಿಗನು ಕೇಳಿದನು'ಇದನ್ನು ತಿನ್ನದಿದ್ದರೆ ನಾನು ಬದುಕುತ್ತಲೇ ಇರಲಿಲ್ಲ.ಆದರೆ ನೀರು ನನಗೆ ಬೇಕಾದಷ್ಟು ಸಿಗುತ್ತದೆ'ಎಂದು ಉಷಸ್ತಿಯು ಹೇಳಿದನು(ಪುಟ 50)
(ಜ್ಞಾನಿಯಾದವನು ಸ್ವೇಚ್ಛೆಯಾಗಿ ಏನನ್ನೂ ಮಾಡಬಾರದು ಎಂಬ ಭಾವ)(ಪುಟ50)
60) ಉಷಸ್ತಿಯು ಅದನ್ನು ತಿಂದುಉಳಿದುದನ್ನು ಪತ್ನಿಗೆ ಕೊಟ್ಟನು.ಆಕೆಯು ಮೊದಲೇ ಭಿಕ್ಷೆಯನ್ನು ಪಡೆದಿದ್ದರಿಂದ ಅದನ್ನು ತೆಗೆದುಕೊಂಡು ಒಂದುಕಡೆ ಇಟ್ಟಳು.(ಪುಟ 50)
61)ಬೆಳಗ್ಗೆ ಎದ್ದಕೂಡಲೇ ಹೀಗೆ ಹೇಳಿದನು.'ಅಯ್ಯೋ ನಮಗೆ ಸ್ವಲ್ಪ ಆಹಾರ ದೊರಕುವುದಾದರೆ
ಸ್ವಲ್ಪ ಧನವೂ ದೊರಕೀತು!ಇಲ್ಲಿಯ ರಾಜನು ಯಾಗಮಾಡುವನು;ಅವನು ನಮ್ಮನ್ನು ಸಮಸ್ತ ಋತ್ವಿಕ್ಕಮ೯ಗಳಿಗೂ ಆರಿಸಿಯಾನು.'(ಪುಟ 51)
62)ಯಜ್ಞಕ್ಕೆ ಬಂದು ಸ್ತೋತ್ರ ಭೂಮಿಯಲ್ಲಿ ಸ್ತುತಿಸಲ್ಪಡುವ ಉದ್ಗಾತೃಗಳ ಬಳಿಯಲ್ಲಿ ಕುಳಿತುಕೊಂಡನು.ಅವನು ಪಸ್ತೋತೃವನ್ನು ಕುರಿತು ಹೀಗೆ ಹೇಳಿದನು. (ಪುಟ 52)
63)ಪ್ರಸ್ತೋತೃವೆ ,ಪ್ರಸ್ತಾವಕ್ಕೆ ಅನುಗತವಾದ ದೇವತೆಯನ್ನು ಅರಿತುಕೊಳ್ಳದೆ(ನನ್ನ ಸಮ್ಮುಖದಲ್ಲಿ)ಪ್ರಸ್ತಾವ ಮಾಡುವೆಯಾದರೆ ನಿನ್ನತಲೆಯು ಬಿದ್ದು ಹೋಗುವುದು.
64)ಉಪಾಸನೆಯನ್ನು ಅರಿಯದೆ ಕೇವಲ ಕಮ೯ವನ್ನು ತಿಳಿದವರು ವಿದ್ವಾಂಸರ ಸಮ್ಮುಖದಲ್ಲಿ ಅವರ ಅನುಮತಿಯಿಲ್ಲದೆ ಕಮ೯ವನ್ನು ಮಾಡಕೂಡದು.ಆದರೆ ಅವರಿಗೆ ಕಮ೯ದಲ್ಲಿ ಅಧಿಕಾರವಿಲ್ಲವೆಂದು ತಿಳಿಯಬಾರದು.ಏಕೆಂದರೆ ಅಜ್ಞಾನಿಗಳ ಕಮ೯ವು ದಕ್ಷಿಣಮಾಗ೯ದಲ್ಲಿ ಕಮಿ೯ಯನ್ನು ಒಯ್ಯುವುದೆಂದು
ಸ್ರುತಿಗಳು ಹೇಳುತ್ತವೆ.(ಪುಟ 52)
65)ಅವನು ಮೊದಲು ಉದ್ಗಾತೃವನ್ನು ಕೇಳಿದನು.:ಉದ್ಗಾತೃವೆ ಉದ್ಗೀತಕ್ಕೆ ಅನುಗತವಾದ ದೇವತೆಯನ್ನು ಅರಿತುಕೊಳ್ಳದೆ ನನ್ನ ಸಮ್ಮುಖದಲ್ಲಿಪ್ರತೀಹಾರ ಮಾಡುವೆಯಾದರೆ ನಿನ್ನ ತಲೆಯು ಬೀಳುವುದು.ಅವರು ತಮ್ಮ ಕಮ೯ಗಳನ್ನು ನಿಲ್ಲಿಸಿ ಸುಮ್ಮನೆ ಹಾಗೆಯೇ ಕುಳಿತುಕೊಂಡರು.(ಪುಟ 53)
66) ಅದೇರೀತಿ
1) ಅವನು ಪ್ರಸ್ತೋತೃ-ಪ್ರಸ್ತಾವ
2)ಉದ್ಗಾತೃ -ಉದ್ಗಾನ
3)ಪ್ರತಿಹತೃ೯-ಪ್ರತಿಹಾರ
ಇವರಿಗೂ ಹೇಳಿದನು.ಇವಕ್ಕೆ ಕ್ರಮವಾಗಿ ದೇವತೆಗಳು 1)ಪ್ರಾಣ 2) ಆದಿತ್ಯ 3)ಅನ್ನ ಆದೇವತೆಗಳು.
ಪ್ರಸ್ತಾವ,ಉದ್ಗೀಥ,ಪ್ರತಿಹಾರ ಎಂಬ ಈ ಭಕ್ತಿಗಳನ್ನು ಪ್ರಾಣ,ಆದಿತ್ಯ,ಅನ್ನ ಇವುಗಳ ದೃಷ್ಟಿಯಿಂದ
ಉಪಾಸನೆ ಮಡಬೇಕು ಎನ್ನುವುದು ಈ ಎರಡು ಖಂಡಗಳ ಒಟ್ಟಾಥ೯.(ಪುಟ 58)
ಹನ್ನೆರಡನೆಯ ಖಂಡ:
67)ದೇವತೆಗಳ ರೂಪದಲ್ಲಿರುವ ನಾಯಿಗಳಿಗೆ ಗೋಚರವಾದ ಶೌವ ಉದ್ಗೀಥವನ್ನು ಅನ್ನಲಾಭಕ್ಕೋಸ್ಕರ ಹೇಳಿದೆ.(ಪುಟ 58)
ಹದಿಮೂರನೆಯ ಖಂಡ:
68)ಸಾಮದ ಅವಯವಗಳಾದ ಉದ್ಗೀಥವೇ ಮೊದಲಾದ ಭಕ್ತಿಗಳ ವಿಷಯದಲ್ಲಿ ಉಪಾಸನೆಯನ್ನು ಹಿಂದೆ ತಿಳಿಸಿದೆ.ಈಗ ಸಾಮದ ಮತ್ತೊಂದು ಅವಯವವಾದ ಸ್ತೋಭಾಕ್ಷರಗಳನ್ನು ವಿಷಯವಾಗಿ ಉಳ್ಳ ಬೇರೆ ಬೇರೆ ಉಪಾಸನೆಗಳನ್ನು ಒಟ್ಟುಗೂಡಿಸಿ ಇಲ್ಲಿ ಹೇಳಲಗಿದೆ.ಸಾಮಗಾನಕ್ಕಾಗಿ ಮಧ್ಯೆ ಮಧ್ಯೆ ಸೇರಿಸಿಕೊಂಡಿರುವ ಅಥ೯ಶೂನ್ಯವಾದ ಅಕ್ಷರ ವಿಶೇಷಗಳಿಗೆ ಸ್ತೋಭವೆಂದು ಹೆಸರು.ಈ ಖಂಡದಲ್ಲಿ ಹಾಉ,ಹಾಇ,ಅಥ,ಈಊ,ಏ,ಔಹೋಯಿ ಹಿಂ,ಸ್ವರ,ಯಾ,ವಿರಾಟ್,ಮತ್ತು ಅನಿರುಕ್ತವಾದ ಹುಂಕಾರ ಇವೇ ಮೊದಲಾದ ಸ್ತೋಭಗಳು ಬರುತ್ತವೆ.ಇಂತಿಂಥ ಸ್ತೋಭಗಳು ಇಂತಿಂಥ ಸ್ಥಾನದಲ್ಲಿ ಬರುತ್ತವೆಂದು ಭಾಷ್ಯಕಾರರು ಹೇಳಿದ್ದಾರೆ.(ಪುಟ62)
6೯)
1)ಹಾಉ-ಕಾರವು-ರಥಂತರಸಾಮದಲ್ಲಿ ಈಲೋಕವೆಂದು ಉಪಾಸಿಸಬೇಕು.
2)ಹಾಇ-ಕಾರ-ವಾಮದೇವ್ಯಸಾಮ-ವಾಯು ನೀರು ಇವುಗಳ ಸಂಬಂಧ ಉಪಾಸಿಸಬೇಕು.
3)ಅಥ-ಕಾರ- ಈ ಜಗತ್ತು ಅನ್ನದಲ್ಲಿಯೇಸ್ಥಿತವಾಗಿದೆ-ಚಂದ್ರ ದೃಷ್ಟಿಯಿಂದ ಉಪಾಸನೆ.
4)ಇಹಕಾರವು- ಆತ್ಮನೆಂದು ಉಪಾಸಿಸಬೇಕು.
5)ಈ-ಕಾರವು-ಆಗ್ನೇಯ ಸಾಮ-ಅಗ್ನಿಯೆಂದು ಉಪಾಸಿಸಬೇಕು.(ಪುಟ 62)
70) ಯಾವನು ಹೀಗೆ ಈ ಸಾಮಗಳ ದಶ೯ನವನ್ನು ಅರಿತುಕೊಳ್ಳುವನೊ -ಸಾಮಗಳ ದಶ೯ನವನ್ನು ಅರಿತುಕೊಳ್ಳುವನೊ -ಅವನಿಗೆ ವಾಕ್ಕು ತನ್ನ ಫಲವೇ ಆದ ಹಾಲನ್ನು ಕರೆಯುತ್ತದೆ.ಅವನು ಅನ್ನವಂತನೂ ಅನ್ನವನ್ನು ತಿನ್ನುವವನೂ ಆಗುತ್ತಾನೆ.ಸ್ತೋಭಾಕ್ಷರಗಳ ಉಪಾಸನೆಯ ಫಲವನ್ನು ಇಲ್ಲಿ ಹೇಳಿದೆ.
(ಪುಟ 64)
,,,,,,,,,,,,,,,,,,,,,,,,,,,,,,,,,,,ಮೊದಲನೆಯ ಅಧ್ಯಾಯ ಮುಕ್ತಾಯವಾಯಿತು,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಎರಡನೆಯ ಅಧ್ಯಾಯ: (ಸಾಮೋಪಾಸನೆ)
1)ಓಂ,ಸಮಸ್ತವಾದ ಸಾಮದ ಉಪಾಸನೆಯು ಸಾಧುವು.ಯಾವುದು ಸಾಧುವೊ ಅದನ್ನು ಸಾಮವೆಂದು ಕರೆಯುತ್ತಾರೆ.ಯಾವುದು ಅಸಾಧುವೊ ಅದನ್ನು ಅಸಾಮವೆಂದು ಕರೆಯುವರು.(ಪುಟ 65)
2)ಯಾವನು ಅದನ್ನು ಹೀಗೆ ಅರಿತುಕೊಂಡು ಸಾಮವನ್ನು ಸಾಧುವೆಂದು ಉಪಾಸಿಸುವನೊ ಅವನನ್ನು ಸಾಧುಧಮ೯ಗಳು ಬಳಿಸಾರುವವು ಮತ್ತು ಅವನಿಗೆ ಭೋಗ್ಯಗಳಾವುವುವು.(ಪುಟ 67)
ಎರಡನೆಯ ಖಂಡ:
3) ಪಂಚವಿಧ ಸಾಮವನ್ನು ಪೃಥಿವಾದಿಲೋಕಗಳೆಂದು ಉಪಾಸಿಸಬೇಕು.
ಪೃಥ್ವಿಯು ಹಿಂಕಾರವು,ಅಗ್ನಿಯು ಪ್ರಸ್ತಾವವು,ಅಂತರಿಕ್ಷವು ಉದ್ಗೀಥವು,ಆದಿತ್ಯನು ಪ್ರತಿಹಾರವು,ದ್ಯುಲೋಕವು ನಿಧನವು.ಹೀಗೆ ಊಧ್ವಲೋಕಗಳ ವಿಷಯದಲ್ಲಿ ಉಪಾಸನೆಗಳು(ಪುಟ 68)
3) ಇನ್ನು ಕೆಳಗಿರುವ ಲೋಕಗಳ ವಿಷಯದಲ್ಲಿ:ದ್ಯುಲೋಕವು ಹಿಂಕಾರವು,ಆದಿತ್ಯನು ಪ್ರಸ್ತಾವವು,
ಅಂತರಿಕ್ಷವು ಉದ್ಗೀಥವು,ಅಗ್ನಿಯು ಪ್ರತಿಹಾರವು.ಪೃಥ್ವಿಯು ನಿಧನವು.(ಪುಟ 68)
4)ಹೀಗೆ ಇದನ್ನು ಅರಿತುಕೊಂಡು ಪಂಚವಿಧ ಸಾಮವನ್ನು ಲೋಕಗಳೆಂದು ಉಪಾಸಿಸುತ್ತಾನೆಯೊ,ಅವನಿಗೆ ಊಧ್ವ೯ವಾದ ಮತ್ತು ಅಧೋಮುಖವಾದ ಲೋಕಗಳು ಭೋಗ್ಯವಾಗುತ್ತವೆ.(ಪುಟ 6೯)
ಮೂರನೆಯ ಖಂಡ:
5) ಪಂಚವಿಧ ಸಾಮವನ್ನು ಮಳೆ ಎಂದು ಉಪಾಸಿಸಬೇಕು.ಪುರೋವಾತವು ಹಿಂಕಾರವು,ಹುಟ್ಟುತ್ತಿರುವ ಮೇಘವು ಹಿಂಕಾರವು,ಮಳೆಗರೆಯುವುದು ಉದ್ಗೀಥವು,ಮಿಂಚುವುದು ಗುಡುಗುವುದು ಪ್ರತಿಹಾರವು,ಮಳೆ ನಿಲ್ಲುವುದು ನಿಧನವು.ಯಾವನು ಇದನ್ನು ಅರಿತುಕೊಂಡು ಪಂಚವಿಧಸಾಮವನ್ನು ಮಳೆಯೆಂದು ಉಪಾಸಿಸುತ್ತಾನೆಯೊ ಅವನಿಗೆ ಮಳೆಗರೆಯುತ್ತದೆ.(ಪುಟ 70)
ನಾಲ್ಕನೆಯ ಖಂಡ:
6)ಎಲ್ಲ ನೀರಿನಲ್ಲಿಯೂ ಪಂಚವಿಧ ಸಾಮವನ್ನು ಉಪಾಸಿಸಬೇಕು. ಒಟ್ಟುಗೂಡುವ ಮೇಘವು ಹಿಂಕಾರವು,ಅದು ಮಳೆಗರೆದಾಗ ಪ್ರಸ್ತಾವವು,ಪೂವ೯ದಿಕ್ಕಿಗೆ ಪ್ರವಹಿಸುವ ನೀರು ಉದ್ಗೀಥವು.ಪಶ್ಚಿಮದಿಕ್ಕಿಗೆ ಪ್ರವಹಿಸುವುದು ಪ್ರತಿಹಾರವು,ಸಮುದ್ರವು ನಿಧನವು(ಪುಟ 71)
7)ಯಾರು ಹೀಗೆ ಇದನ್ನು ಅರಿತುಕೊಂಡು ಎಲ್ಲ ನೀರಿನಲ್ಲಿಯೂ ಪಂಚವಿಧ ಸಾಮವನ್ನು ಉಪಾಸಿಸುತ್ತಾನೆಯೊ ಅವನು ನೀರಿನಲ್ಲಿ ಸಾಯುವುದಿಲ್ಲ.,ಜಲಸಂಪನ್ನನೂ ಆಗುತ್ತಾನೆ.(ಪುಟಟ 71)
ಐದನೆಯ ಖಂಡ:
8) ಪಂಚವಿಧ ಸಾಮವನ್ನು ಋತುಗಳೆಂದು ಉಪಾಸಿಸಬೇಕು.ವಸಂತವು ಹಿಂಕಾರವು,ಬೇಸಿಗೆಯು ಪ್ರಸ್ತಾವವು,ಮಳೆಗಾಲವು ಉದ್ಗೀಥವು,ಶರದೃತುವು ಪ್ರತಿಹಾರವು,ಹೇಮಂತವು ನಿಧನವು.(ಪುಟ 72)
೯) ಯಾವನು ಹೀಗೆ ಅರಿತುಕೊಂಡು ಪಂಚವಿಧ ಸಾಮವನ್ನು ಋತುಗಳೆಂದು ಉಪಾಸಿಸುವನೊ ಅವನಿಗೆ ಋತುಗಳು ಭೋಗ್ಯವಾಗುವುವು.ಅವನು ಋತುಮಂತನೂ ಆಗುವನು (ಪುಟ72)
ಆರನೆಯ ಖಂಡ:
10)ಪಂಚವಿಧ ಸಾಮಗಳನ್ನು ಪಶುಗಳಲ್ಲಿ ಉಪಾಸಿಸಬೇಕು.ಆಡುಗಳು ಹಿಂಕಾರ,ಕುರಿಗಳು ಪ್ರಸ್ತಾವವು,ಗೋವುಗಳು ಉದ್ಗೀಥವು,ಕುದುರೆಗಳು ಪ್ರತಿಹಾರವು.ಪುರುಷನು ನಿಧನವು.(ಪುಟ 73)
11) ಯಾವನು ಹೀಗೆ ಇದನ್ನು ಅರಿತುಕೊಂಡು ಪಂಚವಿಧ ಸಾಮವನ್ನು ಉಪಾಸಿಸುತ್ತಾನೆಯೊ ಅವನಿಗೆ ಪಶುಗಳು ಭೋಗ್ಯವಾಗುತ್ತವೆ.ಅವನು ಪಶುವಂತನೂ ಆಗುತ್ತಾನೆ.(ಪುಟ 73)
ಏಳನೆಯ ಖಂಡ:
12)ಪಂಚವಿಧ ಸಾಮಗಳನ್ನು ಇಂದ್ರಿಯಗಳೆಂದು ಉಪಾಸಿಸಬೇಕು.ಘ್ರಾಣೇಂದ್ರಿಯವು ಹಿಂಕಾರವು,ವಾಕ್ಕು ಪ್ರಸ್ತಾವವು,ಚಕ್ಷುಸ್ಸು ಉದ್ಗೀಥವು,ಶ್ರೋತ್ರವು ಪ್ರತಿಹಾರವು,ಮನಸ್ಸು ನಿಧನವು,ಇವೇ ಉತ್ತರೋತ್ತರ
ಅಧಿಕತರ ಗುಣವುಳ್ಳವು.(ಪುಟ 74)
13)ಯಾವನುಹೀಗೆ ಅರಿತುಕೊಂಡು ಪಂಚವಿಧ ಸಾಮಗಳನ್ನು ಇಂದ್ರಿಯಗಳೆಂದು ಉಪಾಸಿಸುವನೊ ಅವನಿಗೆ ಉತ್ತರೋತ್ತರ ಉತ್ಕøಷ್ಟತರವಾದ ಜೀವನವು ಆಗುತ್ತದೆ.(ಪುಟ 75)
ಎಂಟನೆಯ ಖಂಡ:
14)ಈಗ ಸಪ್ತವಿಧ ಸಾಮದ ಉಪಾಸನೆ.ಸಪ್ತವಿಧ ಸಾಮವನ್ನು ವಾಕ್ಕಿನಲ್ಲಿ ಉಪಾಸಿಸಬೇಕು.ವಾಕ್ಕಿನಲ್ಲಿ ಯಾವುದು ಹುಂ ಎಂದಿರುವುದೊ ಅದು ಹಿಂಕಾರ;ಯಾವುದು ಪ್ರ ಎಂದಿರುವುದೊಅದು ಪ್ರಸ್ತಾವ,ಯಾವುದು ಆ ಎಂದಿರುವುದೊ ಅದು ಆದಿ,ಯಾವುದು ಉತ್ ಎಂದಿರುವುದೊ ಅದು
ಉದ್ಗೀಥ,ಯಾವುದು ಪ್ರತಿಎಂದಿರುವುದೊ ಅದು ಪ್ರತಿಹಾರ,ಯಾವುದು ಉಪ ಎಂದಿರುವುದೊ ಅದು ಉಪದ್ರವ,ಯಾವುದು ನಿ ಎಂದಿರುವುದೊ ಅದು ನಿಧನ.(ಪುಟ 76)
15)ಯಾವನು ಹೀಗೆ ತಿಳಿದುಕೊಂಡು ವಾಕ್ಕಿನಲ್ಲಿ ಸಪ್ತ ವಿಧ ಸಾಮವನ್ನು ಉಪಾಸಿಸುತ್ತಾನೆಯೊ ಅವನಿಗೆ ವಾಕ್ಕು ತನ್ನ ಫಲವೇ ಆದ ಹಲನ್ನು ಕರೆಯುತ್ತದೆ.ಅವನು ಅನ್ನವಂತನೂ ಅನ್ನವನ್ನು ತಿನ್ನುವವನೂ ಆಗುತ್ತಾನೆ(ಪುಟ76)
ಒಂಬತ್ತನೆಯ ಖಂಡ:
16)ಈಗ ಸಪ್ತವಿಧ ಸಾಮವನ್ನು ಆದಿತ್ಯನೆಂದು ಉಪಾಸಿಸಬೇಕು.ಅವನು ಯಾವಾಗಲೂ ಸಮನಾಗಿರುವುದರಿಂದ ಸಾಮನು.ನನಗೆ ಅಭಿಮುಖನಾಗಿದ್ದಾನೆ,ನನಗೆ ಅಭಿಮುಖನಾಗಿದ್ದಾನೆ ಎಂದು ಎಲ್ಲರಿಗೂ ಸಮನಾಗಿರುವುದರಿಂದ ಸಮವು.(ಪುಟ 77)
17)ಈ ಭೂತಗಳೆಲ್ಲವೂ ಆದಿತ್ಯನಲ್ಲಿ ಅನುಗತವಾಗಿವೆ ಎಂದು ಅರಿತುಕೊಳ್ಳಬೇಕು.
ಉದಯಕ್ಕೆ ಮೊದಲು ಯಾವರೂಪವಿದೆಯೊ ಅದು ಹಿಂಕಾರವು,ಪಶುಗಳು ಆದಿತ್ಯನೆಂಬ ಸಾಮದ (ಹಿಂಕಾರ -ಭಕ್ತಿಯಲ್ಲಿ) ಅನುಗತವಾಗಿದೆ.ಆದುದರಿಂದ ಅವು ಓಂಕಾರವನ್ನು ಮಾಡುತ್ತವೆ.ಏಕೆಂದ್ರೆ ಅವು ಈ ಸಾಮದ ಹೊಂಕಾರಕ್ಕೆ ಭಾಗಿಗಳಾಗಿವೆ(ಪುಟ 78)
18)ಉದಯಿಸಿದ ಕೂಡಲೇ ಸೂಯ೯ನಿಗೆ ಯಾವ ರೂಪವಿರುವುದೊ ಅದೇ ಪ್ರಸ್ತಾವವು.ಮನುಷ್ಯರು ಆದಿತ್ಯನೆಂಬ ಸಾಮದ (ಪ್ರಸ್ತಾವ ಭಕ್ತಿಯಲ್ಲಿ)ಅನುಗತರಾಗಿದ್ದಾರೆ(ಪುಟ 78)
1೯)
1) ಆದಿತ್ಯನು ಉದಯಿಸುವಕಾಲ(ಸಂಗಮವೇಳೆ)-ಆದಿ
2) ಮಧ್ಯಾನ್ಹ ಕಾಲ-ಉದ್ಗೀಥವು
3)ಮಧ್ಯಾನ್ಹದವೇಳೆ ಮತ್ತು ಅಪರಾನ್ಹಕ್ಕೆ ಮೊದಲು-ಪ್ರತಿಹಾರ
4)ಅಪರಾನ್ಹದ ನಂತರ ಮತ್ತು ಅಸ್ತಮಿಸುವುದಕ್ಕೆ ಮೊದಲು-ಉಪದ್ರವ
5) ಸೂಯ೯ನು ಅಸ್ತಮಿಸಿದ ಕೂಡಲೇ ಇರುವ ರೂಪವು -ನಿಧನ
20)ಇಲ್ಲಿಂದ ಸಪ್ತವಿಧ ಸಾಮದ ಉಪಾಸನೆ:
1) ಹಿಂಕಾರ 2)ಪ್ರಸ್ತಾವ 3)ಆದಿ 4)ಉದ್ಗೀಥ 5)ಪ್ರತಿಹಾರ 6) ಉಪದ್ರವ 7))ನಿಧನ
ಇವೇ ಸಪ್ತಾವಯವ ಸಾಮದ ಇಪ್ಪತ್ತೆರಡು ಅಕ್ಷರಗಳು.
21)ಯಾವನು ಹೀಗೆ ಅರಿತುಕೊಂಡು ಸಮ್ಮಿತವೂ ಅತಿಮೃತ್ಯುವೂ ಆದ ಸಪ್ತವಿಧ ಸಾಮವನ್ನು ಉಪಾಸಿಸುತ್ತಾನೆಯೊ ಅವನು ಮೃತ್ಯುವನ್ನು ಜಯಿಸುತ್ತಾನೆ.ಮೃತ್ಯುವಿನ ಜಯಕ್ಕಿಂತಲೂ ಹೆಚ್ಚಿನ ಜಯವು ಇವನಿಗೆ ಆಗುವುದು.(ಪುಟ 85)
22) ಮೃತ್ಯುವನ್ನು ಜಯಿಸಲು ಕಾರಣವಾಗಿರುವುದರಿಂದ ಅತಿಮೃತ್ಯು(ಪುಟ 82)
ಹನ್ನೊಂದನೆಯ ಖಂಡ:
23)ಹಿಂದೆ ಸಾಮದ ಹೆಸರನ್ನು ಹೇಳದೆ ಪಂಚವಿಧ ಹಗೂ ಸಪ್ತವಿಧ ಸಾಮೋಪಾಸನೆಯನ್ನು ಹೇಳಿದ್ದಾಯಿತು.ಈಗ ಗಾಯತ್ರವೇ ಮೊದಲಾದ ವಿಶಿಷ್ಟ ಫಲಗಳುಳ್ಳ ಸಾಮೋಪಾಸನೆಯನ್ನು ನಾ-ಗ್ರಹಣ ಪೂವ೯ಕವಾಗಿ ಹೇಳಲಾಗುತ್ತದೆ.(ಪುಟ 85)
24)ಮನಸ್ಸು ಹಿಂಕಾರ,ವಾಕ್ಕು ಪ್ರಸ್ತಾವ,ಚಕ್ಷುಸ್ಸು ಉದ್ಗೀಥ,ಶ್ರೋತ್ರವು ಪ್ರತಿಹಾರ,ಪ್ರಾಣವು ನಿಧನ,ಈ ಗಾಯತ್ರ ಸಾಮವು ಪ್ರಾಣಗಳಲ್ಲಿ ಪ್ರೋತವಾಗಿದೆ.(ಪುಟ 85)
25) 'ಪ್ರಾಣವೇ ಗಾಯತ್ರಿ'(ಪ್ರಾಣೋವೈ ಗಾಯತ್ರೀ'ಎಂದು ಶ್ರುತಿಯು ಹೇಳುತ್ತದೆ.) ಪುಟ 85)
26) ಅಕ್ಷಂದ್ರ ಚಿತ್ತ ಎಂದರೆ ಉದಾರ ಹೃದಯದವನು ಎಂದಥ೯(ಪುಟ 86)
ಹನ್ನೆರಡನೆಯ ಖಂಡ:
27)ಈ ರಥಂತರ ಸಾಮವು ಅಗ್ನಿಯಲ್ಲಿ ಪ್ರೋತವಾಗಿದೆ.
1) ಅಗ್ನಿಯ ಉತ್ಪತ್ತಿಗಾಗಿ ಅರಣಿಗಳನ್ನು ಕಡೆಯುವುದು-ಹಿಂಕಾರ
2)ಧೂಮೋತ್ಪತ್ತಿಯಾಗುವುದು -ಪ್ರಸ್ತಾವವು
3) ಅಗ್ನಿಯ ಪ್ರಜ್ವಲನವು- ಉದ್ಗೀಥವು
4)ಕೆಂಡಗಳಾಗುವುದು -ಪ್ರತಿಹಾರವು
5)ಅಗ್ನಿಯು ಕ್ಷೀಣವಾಗುವುದು -ನಿಧನವು(ಪುಟ 87)
28) ಹೀಗೆ ಅಗ್ನಿಯಲ್ಲಿ ಪ್ರೋತವಾಗಿರುವ ರಥಂತರ ಸಾಮವನ್ನು ಯಾರು ಅರಿತಿರುವನೊ ಅವನು ಬ್ರಹ್ಮವಚ೯ಸ್ವಿಯೂ ಅನ್ನಾದನೂ ಆಗುತ್ತಾನೆ.ಪೂಣಾ೯ಯುಷ್ಯವನ್ನು ಹೊಂದುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.(ಪುಟ 88)
ಹದಿಮೂರನೆಯ ಖಂಡ:
2೯) ಈ ವಾಮದೇವ್ಯ ಸಾಮವು ಮಿಥುನದಲ್ಲಿ ಪ್ರೋತವಾಗಿದೆ.ಯಾವನು ಹೀಗೆ ಮಿಥುನದಲ್ಲಿ ಪ್ರೋತವಾಗಿರುವ ಈ ವಾಮದೇವ್ಯವನ್ನು ಅರಿತುಕೊಳ್ಳುವನೊ ಅವನು ಮಿಥುನಿಯಾಗುತ್ತಾನೆ.ಅಮೋಘ ವೀಯ೯ನಾಗುತ್ತಾನೆ.ಪುಣಾ೯ಯಸ್ಸನ್ನು ಹೊಂದುತ್ತಾನೆ.ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಮಹಾನ್ ಆಗುತ್ತಾನೆ.ಮಿಥುನಿಯಾಗುತ್ತಾನೆ ಎಂದರೆ ವಿದುರನಾಗುವುದಿಲ್ಲ ಎಂದಥ೯.(ಪುಟ 85)
ಹದಿನಾಲ್ಕನೆಯ ಖಂಡ:
30)
1) ಉದಯಿಸುತ್ತಿರುವ ಆದಿತ್ಯನು-ಹಿಂಕಾರ
2)ಉದಯಿಸಿದ ಆದಿತ್ಯನು - ಪ್ರಸ್ತಾವ
3) ಮಧ್ಯಾನ್ಹದ ಆದಿತ್ಯನು -ಉದ್ಗೀಥ
4)ಅಪರಾನ್ಹದ ಆದಿತ್ಯನು -ಪ್ರತಿಹಾರ
5)ಅಸ್ತಮಿಸುತ್ತಿರುವ ಆದಿತ್ಯನು -ನಿಧನ
ಈ ಬೃಹತ್ಸಾಮವು ಆದಿತ್ಯನಲ್ಲಿ ಪ್ರೋತವಾಗಿದೆ.ಪುಟ 8೯)
30)ಯಾವನು ಹೀಗೆ ಆದಿತ್ಯನಲ್ಲಿ ಪ್ರೋತವಾಗಿರುವ ಬೃಹತ್ಸಾಮವನ್ನು ಅರಿತುಕೊಂಡಿರುವನೊ ಅವನು ತೇಜಸ್ವಿಯೂ ಅನ್ನಾದನೂ ಆಗುತ್ತನೆ.ಪೂಣಾ೯ಯಸ್ಸನ್ನು ಹೊಂದುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಈ ಉಪಾಸಕನ ವ್ರತವು -ಅವನು ತಪಿಸುತ್ತಿರುವ ಸೂಯ೯ನನ್ನು ನಿಂದಿಸಬಾರದು.(ಪುಟ ೯0)
ಹದಿನೈದನೆಯ ಖಂಡ:
31)
1)ಒಟ್ಟುಗೂಡುತ್ತಿರುವ ಅಭ್ರಗಳು -ಹಿಂಕಾರ,
2)ಉತ್ಪನ್ನವಾದ (ಜಲವಷೀ೯) ಮೇಘವು-ಪ್ರಸ್ತಾವ
3)ಮಳೆಗರೆಯುವುದು- ಉದ್ಗೀಥ
4)ಮಿಂಚುವುದು ಮತ್ತು ಗುಡುಗುವುದು -ಪ್ರತಿಹಾರ
5)ಮಳೆ ನಿಲ್ಲುವುದು- ನಿಧನ(ಪುಟ ೯1)
ಈ ವೈರೂಪ ಸಾಮವು ಪಜ೯ನ್ಯದಲ್ಲಿ ಪ್ರೋತವಾಗಿದೆ.
32)ಯಾವನು ಹೀಗೆ ಪಜ೯ನ್ಯದಲ್ಲಿ ಪ್ರೋತವಾಗಿರುವ ಈ ವೈರೂಪ ಸಾಮವನ್ನು ಅರಿತುಕೊಂಡಿರುವನೊ ಅವನು ವಿವಿಧ ರೂಪವನ್ನುಳ್ಳ ಸುರೂಪಿಗಳೂ ಆದ ಪಶುಗಳನ್ನು ಹೊಂದುತ್ತಾನೆ.ಪೂಣಾ೯ಯಸ್ಸನ್ನು ಹೊಂದುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು.-ಅವನು ಮಳೆಗರೆಯುತ್ತಿರುವ ಮೇಘವನ್ನು ನಿಂದಿಸಬಾರದು.(ಪುಟ ೯1)
ಹದಿನಾರನೆಯ ಖಂಡ:
33)ವೈರಾಜ ಸಾಮ:
1)ವಸಂತವು ಹಿಂಕಾರ
2)ಗ್ರೀಷ್ಮವು ಪ್ರಸ್ತಾವ
3)ಮಳೆಗಾಲವು ಉದ್ಗೀಥ
4)ಶರದೃತುವು ಪ್ರತಿಹಾರ
5)ಹೇಮಂತವು ನಿಧನ
ಈ ವೈರಾಜಸಾಮವು ಋತುಗಳಲ್ಲಿ ಪ್ರೋತವಾಗಿದೆ.(ಪುಟ ೯2)
34)ಯಾವನು ಹೀಗೆ ಈ ಋತುಗಳಲ್ಲಿ ಪ್ರೋತವಾಗಿರುವ ಸಾಮವನ್ನು ಅರಿತುಕೊಂಡಿರುವನೊ ಅವನು ಸಂತತಿಯಿಂದಲೂ ಪಶುಗಳಿಂದಲೂ ಬ್ರಹ್ಮವಚ೯ಸ್ಸಿನಿಂದಲೂ ವಿರಾಜಿಸುತ್ತಾನೆ.ಪೂಣಾ೯ಯಸ್ಸನ್ನು ಹೊಂದುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು -ಅವನು ಋತುಗಳನ್ನು ನಿಂದಿಸಕೂಡದು.
ಹದಿನೇಳನೆಯ ಖಂಡ:ಶಕ್ವರೀ ಸಾಮ:
35)
1)ಪೃಥ್ವಿಯು -ಹಿಂಕಾರ
2)ಅಂತರಿಕ್ಷವು- ಪ್ರಸ್ತಾವ
3)ದ್ಯುಲೋಕವು- ಉದ್ಗೀಥ
4) ದಿಕ್ಕುಗಳು -ಪ್ರತಿಹಾರ
5)ಸಮುದ್ರವು -ನಿಧನ
36) ಯಾವನು ಹೀಗೆ ಲೋಕಗಳಲ್ಲಿ ಪ್ರೋತವಾಗಿರುವ ಈ ಶಕ್ವರೀ ಸಾಮವನ್ನು ಅರಿತುಕೊಂಡಿರುವನೊ ಅವನು ಲೋಕಗಾಮಿಯಾಗುತ್ತಾನೆ.ಪೂಣಾ೯ಯಸ್ಸನ್ನು ಹೊಂದುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು -ಅವನು ಲೋಕಗಳನ್ನು ನಿಂದಿಸಕೂಡದು.(ಪುಟ೯5)
ಹದಿನೆಂಟನೆಯ ಖಂಡ(ರೇವತೀ ಸಾಮ):
37)
1) ಆಡುಗಳು -ಹಿಂಕಾರ
2) ಕುರಿಗಳು- ಪ್ರಸ್ತಾವ
3)ಗೋವುಗಳು- ಉದ್ಗೀಥ
4)ಕುದುರೆಗಳು -ಪ್ರತಿಹಾರ
5)ಪುರುಷನು -ನಿಧನ.
ಈ ರೇವತೀ ಸಾಮವು ಪಶುಗಳಲ್ಲಿ ಪ್ರೋತವಾಗಿದೆ.(ಪುಟ ೯5)
38) ಪಶುಗಳು ರೇವತೀ ಸಾಮವು.'ಪಶವೋ ವೈ ರೇವತೀ' ಎಂದು ಶ್ರುತಿಯಲ್ಲಿ ಹೆಳಿದೆ.(ಪುಟ ೯5)
3೯)ಯಾವನು ಹೀಗೆ ಪಶುಗಳಲ್ಲಿ ಪ್ರೋತವಾಗಿರುವ ಈ ರೇವತೀ ಸಾಮವನ್ನು ಅರಿತುಕೊಂಡಿರುವನೊ ಅವನು ಪಶುಗಳನ್ನು ಪಡೆಯುತ್ತಾನೆ.ಪೂಣಾ೯ಯುಸ್ಸನ್ನು ಹೊಂದುತ್ತಾನೆ. ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು -ಇವನು ಪಶುಗಳನ್ನು ನಿಂದಿಸಕೂಡದು.(ಪುಟ ೯5)
ಹತ್ತೊಂಬತ್ತನೆಯ ಖಂಡ(ಯಜ್ಞಾಯಜ್ಞೀಯ ಸಾಮ):
40)
1) ಲೋಮವು -ಹಿಂಕಾರ
2)ಚಮ೯ವು ಪ್ರಸ್ತಾವ
3)ಮಾಂಸವು-ಉದ್ಗೀಥ
4)ಅಸ್ಥಿಯು- ಪ್ರತಿಹಾರ
5)ಮಜ್ಜೆ -ನಿಧನ
ಈ ಯಜ್ಞಾಯಜ್ಞೀಯ ಸಾಮವು ಅಂಗಗಳಲ್ಲಿ ಪ್ರೋತವಾಗಿದೆ.(ಪುಟ ೯6)
41) ಮನುಷ್ಯನ ಅಂಗಗಳೆಲ್ಲವೂ ಅನ್ನರಸದ ವಿಕಾರವಾದುದರಿಂದ ಈ ಸಾಮವು ಅಂಗಗಳಲ್ಲಿ ಪ್ರತಿಷ್ಠಿತವಾಗಿದೆ.(ಪುಟ ೯6)
42) ಯಾವನು ಹೀಗೆ ಅಂಗಗಳಲ್ಲಿ ಪ್ರೋತವಾಗಿರುವ ಈ ಯಜ್ಞಾಯಜ್ಞೀಯ-ಸಾಮವನ್ನು ಅರಿತುಕೊಂಡಿರುವನೊಅವನಿಗೆ ಯಾವ ಅಂಗದಲ್ಲಿಯೂ ಕೊರತೆಯುಂಟಾಗುವುದಿಲ್ಲ. ಪೂಣಾ೯ಯುಸ್ಸನ್ನು ಹೊಂದುತ್ತಾನೆ. ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು -ಅವನು ಒಂದು ವಷ೯ದವರೆಗೆ ಮತ್ಸ್ಯಮಾಂಸಗಳನ್ನು ತಿನ್ನಬಾರದು ಅಥವಾ ಮತ್ಸ್ಯ ಮಾಂಸಗಳನ್ನು ತಿನ್ನಲೇಕೂಡದು.(ಪುಟ ೯7)
ಇಪ್ಪತ್ತನೆಯ ಖಂಡ(ರಾಜನ ಸಾಮ):
43)
1)ಅಗ್ನಿಯು -ಹಿಂಕಾರ
2)ವಾಯುವು -ಪ್ರಸ್ತಾವ
3)ಆದಿತ್ಯನು ಉದ್ಗೀಥ
4)ನಕ್ಷತ್ರಗಳು -ಪ್ರತಿಹಾರ
5)ಚಂದ್ರನು -ವನಿಧನ
ಈ ರಾಜನ-ಸಾಮವು ದೇವತೆಗಳಲ್ಲಿ ಪ್ರೋತವಾಗಿದೆ.(ಪುಟ ೯8)
44) ಯಾವನು ಹೀಗೆ ದೇವತೆಗಳಲ್ಲಿ ಪ್ರೋತವಾಗಿರುವ ರಾಜನ-ಸಾಮವನ್ನು ಅರಿತುಕೊಂಡಿರುವನೊ ಅವನು ಇದೇ ದೇವತೆಗಳ ಸಾಲೋಕ್ಯವನ್ನು ಅಥವಾ ಸಮಾನವಾದ ಋದ್ಧಿಯನ್ನು ಅಥವಾ ಸಾಯುಜ್ಯವನ್ನು ಹೊಂದುತ್ತಾನೆ. ಪೂಣಾ೯ಯುಸ್ಸನ್ನು ಹೊಂದುತ್ತಾನೆ. ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು -ಅವನು ಬ್ರಾಹ್ಮಣರನ್ನು ನಿಂದಿಸಕೂಡದು.(ಪುಟ ೯8)
ಇಪ್ಪತ್ತೊಂದನೆಯ ಖಂಡ(ಸವಾ೯ತ್ಮಕಸಾಮ):
45)
1) ತ್ರಯೀವಿದ್ಯೆಯು- ಹಿಂಕಾರ
2)ಈ ಮೂರು ಲೋಕಗಳು -ಪ್ರಸ್ತಾವ
3)ಅಗ್ನಿ ವಾಯು ಆದಿತ್ಯ ಎಂಬ ದೇವತೆಗಳು ಉದ್ಗೀಥ
4)ನಕ್ಷತ್ರಗಳು ಪಕ್ಷಿಗಳು ಕಿರಣಗಳು-ಪ್ರತಿಹಾರ
5)ಸಪ೯ಗಳು ಗಂಧವ೯ರು ಪಿತೃಗಳು-ಇವರು ನಿಧನ.
ಈ ಸಾಮಸಮುದಾಯವು ಎಲ್ಲ ಪದಾಥ೯ಗಳಲ್ಲಿಯೂ ಪ್ರೋತವಾಗಿದೆ.(ಪುಟ ೯೯)
46)ಯಾವನು ಹೀಗೆ ಸವ೯ವಸ್ತುಗಳಲ್ಲಿಯೂ ಪ್ರೋತವಾಗಿರುವ ಸಾಮಸಮುದಾಯವನ್ನು ಅರಿತುಕೊಂಡಿರುವನೊಅವನು ಸವೇ೯ಶ್ವರನಾಗುತ್ತಾನೆ.(ಪುಟ ಪುಟ 100)
47)'ಎಲ್ಲವೂ ಆಗಿರುವೆನು' ಎಂದು ಉಪಾಸಿಸಬೇಕು.ಅದು ವ್ರತವು.ಅದು ವ್ರತವ.ಯಾರು ಈ ಸವಾ೯ತ್ಮಕ ಸಾಮವನ್ನು ಅರಿತಿರುವನೊ ಅವನು ಎಲ್ಲವನ್ನೂ ಅರಿತಿರುವನು.ಸವ೯ಜ್ಞನಾಗುತ್ತಾನೆ.(ಪುಟ 101)
ಇಪ್ಪತ್ತೆರಡನೆಯ ಖಂಡ:
48)'ಪಶುಗಳಿಗೆ ಗಂಭೀರವೂ ಹಿತಕರವೂ ಆದ ಸಾಮದ ಗಾನವನ್ನು ಪ್ರಾಥಿ೯ಸುತ್ತೇನೆ'ಎಂದು (ಯಜಮಾನನು ಅಥವಾ ಉದ್ಗಾತೃವು ಹೇಳಿದ)ಉದ್ಗಾನವು ಅಗ್ನಿಯದು;ಅನಿರುಕ್ತವು ಪ್ರಜಾಪತಿಯದು,ನಿರುಕ್ತವು ಸೋಮನದು,ಮೃದುವೂ ಕೋಮಲವೂ ಆದುದು ವಾಯುವಿನದು,ಕೋಮಲವೂ ಪ್ರಯತ್ನಸಾಧ್ಯವೂ ಆದುದು ಇಂದ್ರನದು.ಕ್ರೌಂಚಪಕ್ಷಿಯ ಧ್ವನಿಗೆ ಸಮಾನವಾದುದು ಬೃಹಸ್ಪತಿಯು.ಒಡೆದ ಕಂಚಿನ ಧ್ವನಿಗೆ ಸನಾನವಾದುದು ವರುಣನದು.ಇವೆಲ್ಲವನ್ನೂ ಪ್ರಯೋಗಿಸಬೇಕು.ಆದರೆ ವರುಣ ಸಂಬಂಧೀ ಸ್ವರವನ್ನು ಮಾತ್ರ ತ್ಯಜಿಸಬೇಕು.(ಪುಟ 101)
4೯)'ದೇವತೆಗಳಿಗೆ ಅಮೃತವನ್ನು ಗಾನದ ದ್ವಾರಾ ಸಾಧಿಸುವೆನು' ಎಂದು ಯೋಚಿಸುತ್ತ ಗಾನಮಾಡಬೇಕು.
ಪಿತೃಗಳಿಗೆ -ಸ್ವಧೆಯನ್ನೂ
ಮನುಷ್ಯರಿಗೆ- ಆಸೆಯನ್ನೂ
ಪಶುಗಳಿಗೆ- ಹುಲ್ಲು ನೀರುಗಳನ್ನೂ
ಯಜಮಾನನಿಗೆ -ಸ್ವಗ೯ಲೋಕವನ್ನೂ
ನನಗೆ-ಅನ್ನವನ್ನೂ ಗಾನದ ಮೂಲಕ ಸಾಧಿಸುವೆನು.'ಎಂದು ಇವನ್ನು ಮನಸ್ಸಿನಿಂದ ಧ್ಯಾನಿಸುತ್ತ
ಜಾಗರೂಕನಾಗಿ ಸ್ತುತಿಸಬೇಕು.(ಪುಟ 102)
50)ಸ್ವರ,ಊಷ್ಮ,ವ್ಯಂಜನ ಇವುಗಳ ವಿಷಯಗಳಲ್ಲಿ ಸ್ತುತಿಸಬೇಕು.(ಪುಟ 102)
51)ಎಲ್ಲ ಸ್ವರಗಳೂ ಇಂದ್ರನ ಅವಯವಗಳು.
ಎಲ್ಲ ಊಷ್ಮಗಳೂ ಪ್ರಜಾಪತಿಯ ಅವಯವಗಳು
ಎಲ್ಲ ಸ್ಪಶ೯ಗಳೂ ಮೃತ್ಯುವಿನ ಅವಯವಗಳು
ಹೀಗೆ ಅರಿತಿರುವ ಉದ್ಗಾತೃವನ್ನು ಸ್ವರಗಳ ವಿಷಯದಲ್ಲಿ ಯಾರಾದರೂ ನಿಂದಿಸಿದರೆ 'ನಾನು ಇಂದ್ರನನ್ನು ಶರಣು ಹೊಕ್ಕಿರುತ್ತೇನೆ,ಅವನು ನಿನಗೆ ಉತ್ತರವನ್ನು ಕೊಡುವನು'ಎಂದು ಅವನಿಗೆ ಹೇಳಬೇಕು.(ಪುಟ 103)
52)ಹೀಗೆ ಅರಿತಿರುವುದ್ಗತೃವನ್ನು ಊಷ್ಮಗಳ ವಿಷಯದಲ್ಲಿ ಯರಾದರೂ ನಿಂದಿಸಿದರೆ 'ನಾನು ಪ್ರಜಾಪತಿಯನ್ನು ಶರಣು ಹೊಕ್ಕಿರುತೇನೆ.ಅವನು ನಿನ್ನನ್ನು ಪುಡಿ ಪುಡಿ ಮಾಡುವನು'ಂದು ಹೇಳಬೇಕು.(ಪುಟ104)
53)'ನಾನು ಇಂದ್ರನಿಗೆ ಬಲವನ್ನು ಕೊಡುತ್ತೇನೆ'ಎಂದು ಯೋಚಿಸಿ ಎಲ್ಲ ಸ್ವರಗಳನ್ನು ಘೋಷದಿಂದ ಕೂಡಿಯೂ ಬಲದಿಂದ ಕೂಡಿಯೂ ಉಚ್ಛರಿಸಬೇಕು.'ಪ್ರಜಾಪತಿಗೆ ನನ್ನನ್ನು ಕೊಡುತ್ತೇನೆ'ಎಂದು ಯೋಚಿಸಿ ಎಲ್ಲ ಊಷ್ಮಗಳನ್ನು ಒಳಗೆ ನುಂಗದೆ ,ಹೊರಗೆ ಹಾಕದೆ ಸ್ಪಷ್ಟವಾಗಿ ಉಚ್ಛರಿಸಬೇಕು.'ಮೃತ್ಯುವಿನಿಂದ ಬಿಡಿಸಿಕೊಳ್ಳುತ್ತೇನೆ' ಎಂದು ಯೋಚಿಸಿ ಎಲ್ಲ ಸ್ಪಶ೯ಗಳನ್ನು ಮೆಲ್ಲಗೆ ಒಂದಕ್ಕೊಂದನ್ನು ಕೂಡಿಸದೆ ಉಚ್ಛರಿಸಬೇಕು(ಪುಟ 104)
ಇಪ್ಪತ್ತಮೂರನೆಯ ಖಂಡ:
54)ಧಮ೯ ಸ್ಕಂದಗಳು ಮೂರು. ಯಜ್ಞ ಅಧ್ಯಯನ,ದಾನ-ಇವು ಮೊದಲನೆಯದು.ತಪಸ್ಸು ಎರಡನೆಯದು.ಯಾವಜ್ಜೀವವೂ ಆಚಾಯ೯ ಗೃಹದಲ್ಲಿ ವಾಸಿಸುತ್ತ ಅಲ್ಲಿ ದೇಹದಂಡನೆಯನ್ನು ಮಾಡಿಕೊಳ್ಳುತ್ತಿರುವ ಬ್ರಹ್ಮಚಾರಿಯು ಮೂರನೆಯವನು.ಇವರೆಲ್ಲರೂ ಪುಣ್ಯಲೋಕವನ್ನು ಪಡೆಯುತ್ತಾರೆ.ಬ್ರಹ್ಮದಲ್ಲಿ ಸಮ್ಯಕ್ ಸ್ಥಿತನಾಗಿರುವವನು ಅಮೃತತ್ವವನ್ನು ಹೊಂದುತ್ತಾನೆ.(ಪುಟ 105)
55)ಆಚಾಯ೯ಗೃಹದಲ್ಲಿ ಅಧ್ಯಯನಕ್ಕಾಗಿ ವಾಸಮಾಡುವ ಶಿಷ್ಯನಿಗೆ ಉಪಕುವಾ೯ಣ ಬ್ರಹ್ಮಚಾರಿಯೆಂದು ಹೆಸರು.(ಪುಟ106)
56)ಬ್ರಹ್ಮಸಂಸ್ಥ ಶಬ್ದವು ಸವ೯ಕಮ೯ಗಳನ್ನೂ ಅವುಗಳ ಸಾಧನಗಳನ್ನೂ ತ್ಯಜಿಸಿದ ಅತ್ಯಾಶ್ರಮಿಯಾದಪರಮ-ಹಂಸ-ಪರಿವ್ರಾಜಕನಿಗೆ ಮಾತ್ರ ಹೊಂದುತ್ತದೆ.(ಪುಟ 106)
57)ಹೀಗೆ ಚಿಂತಿಸಲ್ಪಟ್ಟ ತ್ರಯೀ ವಿದ್ಯೆಯಿಂದ ಭೂಃ ಭುವಃ ಸುವಃ ಸ್ವಃ ಎಂಬ ಈ ಅಕ್ಷರಗಳು ಹೊರಕ್ಕೆ ಬಂದವು(ಪುಟ106)
58)ಓಂಕಾರವೇ ಇದೆಲ್ಲವೂ ಆಗಿದೆ.(ಏವೇದಂಸವ೯ಮೋಂಕಾರ ಏವೇದಂ ಸವ೯ಂ)(ಪುಟ 107)
5೯)ಅಭಿಧೇಯವಾದ ಪರಮಾತ್ಮನಿಗೂ ಅಭಿದಾನವಾದ ಒಂಕಾರಕ್ಕೂ ಯಾವ ಭೇದವೂ ಇಲ್ಲ.(ಪುಟ 107)
60)ಪ್ರಾಸಂಗಿಕವಾದ ಓಂಕಾರ ಸ್ತುತಿಯನ್ನು ಬಿಟ್ಟು ಈಗ ಪುನಃ ಯಜ್ಞಾಂಗವಾದ ಸಾಮ ಹೋಮ ಮಂತ್ರ,ಉತ್ಥಾನ ಇವುಗಳನ್ನು ಉಪದೇಶಿಸಬೇಕೆಂದು ಶ್ರುತಿಯು ಹೇಳುತ್ತದೆ.(ಪುಟ 108)
61)ಆದರೆ 'ಯಾವನು ಯಾಗ ಮಾಡುತ್ತಾನೆಯೊ ಅವನು ಲೋಕಕ್ಕಾಗಿ ಯಾಗ ಮಡುತ್ತಾನೆ.(ಲೋಕಾಯ ವೈ ಯಜತೇ ಯೋ ಯಜತೇ'ಎಂದು ಶ್ರುತಿಯು ಹೇಳುತ್ತ್ದೆ.(ಪುಟ108)
62)ಯಜಮಾನನು ಗಾಹ೯ಪತ್ಯಾಗ್ನಿಯ ಹಿಂಭಗದಲ್ಲಿ ಉತ್ತರಮುಖನಾಗಿ ಕುಳಿತುಕೊಂಡು ಪ್ರಾತರನುವಾಕವನ್ನು ಪ್ರಾರಂಭಿಸುವುದಕ್ಕೆ ಮೊದಲು ವಾಸವ-ಸಾಮವನ್ನು ಹೀಗೆ ಹಾಡಬೇಕು.'ಹೇ ಅಗ್ನಿ,ಪೃಥ್ವಿ ಲೋಕದ್ವಾರವನ್ನು ತೆರೆ; ಪೃಥ್ವೀಲೋಕದ ಭೋಗಕ್ಕಾಗಿ ನಾವು ನಿನ್ನನ್ನು ಕಾಣುವಂತಾಗಲಿ.(ಪುಟ 10೯)
63)ವಾಸವ-ಸಾಮ ಎಂದರೆ ವಸುಗಳೆಂಬ ದೇವತೆಗಳುಳ್ಳ ಸಾಮವನ್ನು ಎಂದಥ೯(ಪುಟ 10೯)
64)ಪ್ರಾತರನುವಾಕ ಎಂದರೆ ಪ್ರಾತಃಕಾಲದಲ್ಲಿ ಉಚ್ಛರಿಸುವ ಶಸ್ತ್ರವೆಂಬ ಹೆಸರಿನ ಋಕ್ಕುಗಳು.(ಪುಟ 10೯)
65)ಯಜಮಾನನು ದಕ್ಷಿಣಾಗ್ನಿಯ ಹಿಂಭಾಗದಲ್ಲಿ ಕುಳಿತುಕೊಂಡು ಮಾಧ್ಯಂದಿನ-ಸವನವನ್ನು ಪ್ರಾರಂಭಿಸುವುದಕ್ಕೆ ಮೊದಲು ರೌದ್ರಸಾಮವನ್ನು ಹೀಗೆ ಹಾಡಬೇಕು.'ಹೇ ಅಗ್ನಿ,ಅಂತರಿಕ್ಷ ಲೋಕದ ದ್ವಾರವನ್ನು ತೆರೆ;ಅಂತರಿಕ್ಷಲೋಕದ ಭೋಗಕ್ಕಾಗಿ ನಾವು ನಿನ್ನನ್ನು ಕಾಣುವಂತಾಗಲಿ'.(ಪುಟ 111)
66)'ಅನಂತರ ಈ ಹೋಮದಿಂದ ಹೋಮ ಮಾಡಬೇಕು.ಅಂತರಿಕ್ಕ್ಷಲೋಕ ನಿವಾಸಿಯಾದ ವಾಯುವಿಗೆ ನಮಸ್ಕಾರ.ಯಜಮಾನನಾದ ನನಗೆ ಈ ಲೋಕವನ್ನು ಪಡೆಯಿಸು.ಇದಾ ಯಜಮಾನನ ಲೋಕ.ಇಲ್ಲಿ ಯಜ್ಞಮಾಡುತ್ತಿರುವವನು ನಾನು ಆಯಸ್ಸು ಮುಗಿದಮೇಲೆ ಅಂತರಿಕ್ಷಲೋಕಕ್ಕೆ ಹೋಗುವವನಾಗಿದ್ದೇನೆ.ಸ್ವಾಹಾ!' 'ಲೋಕದ್ವಾರದ ಅಗುಳಿಯನ್ನು ತೆಗೆ' ಎಂದು ಹೇಳುತ್ತ ಏಳಬೇಕುರುದ್ರರು ಮಾಧ್ಯಂದಿನ
ಸವನಕ್ಕೆ ಸಂಬಂಧಿಸಿದ ಲೋಕವನ್ನು ಕೊಡುತ್ತಾರೆ.(ಪುಟ 111)
67)ಯಜಮಾನನು ಅಹವನೀಯಾಗ್ನಿಯಲ್ಲಿ ಉತ್ತರಮುಖಿಯಾಗಿ ಕುಳಿತುಕೊಂಡು ತೃತೀಯ ಸವನವನ್ನು ಪ್ರಾರಂಭಿಸುವುದಕ್ಕೆ ಮೊದಲು ಆದಿತ್ಯದೇವತಾಕವಾದ ಸಾಮವನ್ನೂ ವೈಶ್ವದೇವತಾಕವಾದ ಸಾಮವನ್ನೂ ಹಾಡಬೇಕು;'ಹೇ ಅಗ್ನಿ ದ್ಯುಲೋಕದ ದ್ವಾರವನ್ನು ತೆರೆ;ದ್ಯುಲೋಕದ ಸ್ವಾರಾಜ್ಯಕ್ಕಾಗಿ ನಾವು ನಿನ್ನನ್ನು ಕಾಣುವಂತಾಗಲಿ '.ಇದು ಆದಿತ್ಯದೇವತಾಕವಾದ ಸಾಮ:ಹೇ ಅಗ್ನಿ,ದ್ಯುಲೋಕದ ದ್ವಾರವನ್ನು ತೆರೆ.
ದ್ಯುಲೋಕದ ಸಾಮ್ರಾಜ್ಯಕ್ಕಾಗಿ ನಾವು ನಿನ್ನನ್ನು ಕಾಣುವಂತಾಗಲಿ.'(ಪುಟ 112)
68)ಅನಂತರ ಈ ಮಂತ್ರದಿಂದ ಹೋಮಮಾಡಬೇಕು:ದ್ಯುಲೋಕನಿವಾಸಿಗಳಾದ ಆದಿತ್ಯರಿಗೂ ರ್ವಿವೇ ದೇವತೆಗಳಿಗೂ ನಮಸ್ಕಾರ.ಯಜಮಾನನಾದ ನನಗೆ ಈ ಲೋಕವನ್ನು ಪಡೆಯಿಸಿರಿ.ಇದೇ ಯಜಮಾನನ ಲೋಕ.ಇಲ್ಲಿ ಯಜ್ಞಮಾಡುತ್ತಿರುವ ನಾನು ಆಯಸ್ಸು ಮುಗಿದಮೇಲೆ ದ್ಯುಲೋಕಕ್ಕೆ ಹೋಗುವವನಾಗಿದ್ದೇನೆ.ಸ್ವಾಹಾ.'ಲೋಕದ್ವಾರದ ಅಗುಳಿಯನ್ನು ತೆಗೆಯಿರಿ ಎಂದು ಹೇಳುತ್ತ ಏಳಬೇಕು.(ಪುಟ 113)
6೯) ಯಜ್ಞದ ಯಾಥಾತ್ಮ್ಯವನ್ನು ಅರಿತುಕೊಂಡವನಿಗೆ ಅದರ ಅನುಷ್ಠಾನದ ಮೂಲಕ ಆಯಾ ಫಲವು ಉಂಟಾಗುತ್ತದೆ.(ಪುಟ 114)
,,,,,,,,,,,,,,,,,,,,,,,,ಎರಡನೆಯ ಅಧ್ಯಾಯ ಮುಕ್ತಾಯವಾಯಿತು,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಛಾಂದೋಗ್ಯ ಉಪನಿಷತ್ ಸಾರಸಂಗ್ರಹ
ಮೂಲ ಲೇಖಕರು: ಸ್ವಾಮಿ ಆದಿದೇವಾನಂದ
ಶ್ರೀರಾಮಕೃಷ್ಣ ಆಶ್ರಮ
ಯಾದವಗಿರಿ:ಮೈಸೂರು570020
ಸಂಗ್ರಹ:ಡಾ.ರವಿಂೀದ್ರ ಹೊಸದುಗ೯
ಐದನೆಯ ಮುದ್ರಣ,1೯೯5
..................................................
ಪ್ರಸ್ತಾವನೆ(ಮುನ್ನುಡಿ):
1) ಸಾಮವೇದಕ್ಕೆ ಸೇರಿರುವ ಛಾಂದೋಗ್ಯ ಉಪನಿಷತ್ತು ವೇದಾಂತ ದಶ೯ನಕ್ಕೆ ಮೂಲ ವಿಷಯಗಳನ್ನು ಒದಗಿಸಿರುವ ಅತ್ಯಂತ ಪ್ರಾಚೀನವಾದ ಆಕರ ಗ್ರಂಥವಾಗಿದೆ.(ಪುಟ 5 ಮುನ್ನುಡಿ)
2)ಈ ಉಪನಿಷತ್ತು ತಾಂಡಿಗಳ ಶಾಖೆಗೆ ಸೇರಿರಬಹುದೆಂದು ಕೆಲವರು ಅಭಿಪ್ರಾಯಪಟ್ಟಿರುತ್ತಾರೆ.(ಪುಟ 5 ಮುನ್ನುಡಿ)
3)ಸೂತ್ರ ಭಾಷ್ಯದಲ್ಲಿ ಈ ಉಪನಿಷತ್ತಿನಿಂದ ಆರಿಸಿಕೊಂಡಿರುವ ವಿಷಯವಾಕ್ಯಗಳ ಸಂಖ್ಯೆಯನ್ನು ನೋಡಿದರೆ ವೇದಾಂತ ದಶ೯ನದಲ್ಲಿ ಈ ಉಪನಿಷತ್ತಿಗೆ ವಿಶೇಷ ಪ್ರಾಧಾನ್ಯವಿದೆ ಎಂಬುದು ಸ್ಪಷ್ಟವಾಗುತ್ತದೆ.ಛಾಂದೋಗ್ಯ ಉಪನಿಷತ್ತು ಬಹು ಮುಖ್ಯವಾದ ದಹರವಿದ್ಯೆ,ಶಾಂಡಿಲ್ಯ ವಿದ್ಯೆ ಮೊದಲಾದ ಉಪಾಸನೆಗಳನ್ನು ಒಳಗೊಂಡಿದೆ.ಈ ಉಪಾಸನೆಗಳು ಛಾಂದೋಗ್ಯ ಉಪನಿಷತ್ತಿಮ ಒಂದು ವೈಶಿಷ್ಟ್ಯ.(ಪುಟ 5 ಮುನ್ನುಡಿ)
3)ಈಗ ನಮಗೆ ಸಿಕ್ಕಿರುವ ಛಾಂದೋಗ್ಯ ಉಪನಿಷತ್ ಭಾಷ್ಯಗಳಲ್ಲಿ ಶ್ರೀ ಶಕರಾಚಾಯ೯ರ ಭಾಷ್ಯವು ಅತ್ಯಂತ ಪ್ರಾಚೀನವಾಗಿದೆ.(ಪುಟ 5 ಮುನ್ನುಡಿ)
ಮೊದಲನೆಯ ಅಧ್ಯಾಯ:
4)ಶಾಸ್ತ್ರವು ತಿಳಿಸಿಕೊಡುವ ಒಂದು ಆಲಂಬನವನ್ನು ತೆಗೆದುಕೊಂಡು ಅದರಲ್ಲಿ ಸಮಾನ ಚಿತ್ತವೃತ್ತಿಯನ್ನುಂಟು ಮಾಡುವುದು ಉಪಾಸನೆ.(ಪುಟ 6 ಮುನ್ನುಡಿ)
5)ಉಪಾಸನೆಯು ಸತ್ವಶುದ್ಧಿಯನ್ನುಂಟು ಮಾಡಿ ವಸ್ತುತತ್ವವನ್ನು ಪ್ರಕಾಶಿಸುವುದರಿಂದ ಅದ್ವೈತ ಜ್ಞಾನಕ್ಕೆ ಉಪಕಾರವಾಗಿರುತ್ತದೆ.(ಪುಟ 6 ಮುನ್ನುಡಿ)
6)ಕಮ೯ದಲ್ಲಿಯೇ ಧೃಢವಾದ ಮನಸ್ಸುಳ್ಳ ಸಾಧಕನಿಗೆ ಕಮ೯ವನ್ನು ಬಿಟ್ಟು ಉಪಾಸನೆಯಲ್ಲಿ ಮನಸ್ಸನ್ನು ತಿರುಗಿಸುವುದು ಕಷ್ಟಸಾಧ್ಯವಾದುದರಿಂದ ಉಪನಿಷತ್ತು ಕಮಾ೯ಂಗ ವಿಷಯವಾದ ಉಪಾಸನೆಯನ್ನೇ ಮೊದಲು ಪ್ರಾರಂಭಿಸುತ್ತದೆ. (ಪುಟ 6)
7)ಮೊದಲನೆಯ ಅಧ್ಯಾಯಕ್ಕೆ ಹದಿಮೂರು ಖಂಡಗಳಿವೆ. ಉದ್ಗೀತದ ಅವಯವವಾದ ಓಂಕಾರದ ಉಪಾಸನೆಯು ಮೊದಲನೆಯ ಖಂಡದ ವಿಷಯವಾಗಿದೆ.(ಪುಟ 6 ಮುನ್ನುಡಿ)
8)ವಿಗ್ರಹವು ಪರಮಾತ್ಮನ ಪ್ರತೀಕವಾಗಿರುವಂತೆ ಓಂಕಾರವು ಬ್ರಹ್ಮದ ಪತೀಕವಾಗಿದೆ.(ಪುಟ 6 ಮುನ್ನುಡಿ)
೯) ಓಂಕಾರವು ನಾಮವೂ ಪ್ರತೀಕವೂ ಆಗಿ ಪರಮಾತ್ಮನ ಉಪಾಸನೆಗೆ ಶ್ರೇಷ್ಠವಾದ ಸಾಧನವಾಗಿರುತ್ತದೆ.(ಪುಟ 6 ಮುನ್ನುಡಿ)
10)ಸಾಮದ ಭಾಗಗಳಿಗೆ ಭಕ್ತಿಗಳೆಂದು ಹೆಸರು.ಉದ್ಗಾತೃವು ಹಾಡುವ ಭಾಗವು ಉದ್ಗೀಥವೆನಿಸಿದೆ.ಇವನು ಓಂ ಎಂದು ಹಾಡುವುದರಿಂದ ಓಂಕಾರವು ಉದ್ಗೀತವೆನಿಸಿದೆ.ಉದ್ಗೀಥವು ಜ್ಯೋತಿಷ್ಟೋಮ ಕಮ೯ದ ಅಂಗವಾಗಿದ್ದರೂ ಇಲ್ಲಿ ಸ್ವತಂತ್ರವಾದ ಉಪಾಸನೆಯಾಗಿದೆ.(ಪುಟ 6 ಮುನ್ನುಡಿ)
11) ಎರಡನೆಯ ಖಂಡದಲ್ಲಿ ಉದ್ಗೀಥವನ್ನು ಪ್ರಾಣವೆಂದೇ ಉಪಾಸಿಸಬೇಕೆಂದು ಹೇಳಿದೆ.(ಪುಟ7 ಮುನ್ನುಡಿ)
12)ಮೂರನೆಯ ಖಂಡದಲ್ಲಿ ಆದಿತ್ಯದೃಷ್ಟಿಯಿಂದ ಉದ್ಗೀಥೋಪಾಸನೆಯನ್ನು ಹೇಳಿದೆ.ಪ್ರಾಣ ಆದಿತ್ಯ ಇವರಿಗೆ ಸ್ಥಾನಭೇದವಿದ್ದರೂ ತತ್ವ ಭೇದವಿಲ್ಲ.ತತ್ವವು ಅಭಿನ್ನವಾಗಿರುವುದರಿಂದ ಉದ್ಗೀಥವನ್ನು ಪ್ರಾಣನೆಂದೂ ಉಪಾಸಿಸಬೇಕು.(ಪುಟ 7 ಮುನ್ನುಡಿ)
13)ನಾಲ್ಕನೆಯ ಖಂಡದಲ್ಲಿ ಓಂಕಾರೋಪಾಸನೆಯು ಮುಂದುವರಿಯುತ್ತದೆ.ಓಂಕಾರವು ಅಮೃತವೂ ಅಭಯವೂ ಆಗಿರುತ್ತದೆ.ಓಂಕಾರವು ಅಮೃತ,ಅಭಯ ಎಂಬ ಗುಣಗಳಿಂದ ಕೂಡಿರುವುದೆಂದು ಯಾವನು ಉಪಾಸಿಸುವನೊ ಅವನು ಅಮೃತನೂ ಅಭಯನೂ ಆಗುತ್ತಾನೆ.(ಪುಟ 7 ಮುನ್ನುಡಿ)
14)ಋಗ್ವೇದದಲ್ಲಿ ಉಕ್ತವಾಗಿರುವ ಪ್ರಣವವೇ ಸಾಮವೇದಕ್ಕೆ ಸೇರಿದ ಛಾಂದೋಗ್ಯದಲ್ಲಿ ಉದ್ಗೀಥಶಬ್ದ ವಾಚ್ಯವಾಗಿದೆ.(ಪುಟ 7 ಮುನ್ನುಡಿ)ಆಖ್ಯಾಯಿಕಾ ರೂಪದಿಂದ ಎಂಡನೆಯ ಮತ್ತು ಒಂಬತ್ತನೆಯಖಂಡಗಳಲ್ಲಿ ಹೇಳಿದೆ.)
15)ಆರನೆಯ ಖಂಡದಲ್ಲಿ ಸವ೯ಫಲ-ಸಂಪತ್ತಿಗಾಗಿ ಉದ್ಗೀಥದ ಇನ್ನೊಂದು ಉಪಾಸನೆಯನ್ನು ವಿಧಿಸಿದೆ(ಪುಟ 7 ಮುನ್ನುಡಿ)
16) ಏಳನೆಯ ಖಂಡದಲ್ಲಿ ಓಂಕಾರವನ್ನು ಆದಿತ್ಯ ಚಕ್ಷುಪುರುಷನ ದೃಷ್ಟಿಯಿಂದ ಉಪಾಸಿಸಬೇಕೆಂದು ಹೇಳಿದೆ.(ಪುಟ 7 ಮುನ್ನುಡಿ)
17)ಪರೋವರೀಯ ಸತ್ವ-ಗುಣವೆಂಬ ಫಲವುಳ್ಳ (ಎಂದರೆ ಉತ್ತರೋತ್ತರ ಉತ್ಕøಷ್ಟಗುಣವಿಶಿಷ್ಟವಾದ ಫಲವುಳ್ಳ)ಉದ್ಗೀತದ ಬೇರೊಂದು ಉಪಾಸನೆಯನ್ನು ಆಖ್ಯಾಯಿಕಾ ರೂಪದಿಂದ ಎಂಟನೆಯ ಮತ್ತು ಒಂಬತ್ತನೆಯ ಖಂಡಗಳಲ್ಲಿ ಹೇಳಿದೆ.)
18)ಉದ್ಗೀತೋಪಾಸನೆಯ ಪ್ರಸಂಗದಲ್ಲಿ ಪ್ರಸ್ತಾವ,ಪ್ರತಿಹಾರ ಎಂಬ ಹೆಸರುಳ್ಳ ಸಾಮ ಭಕ್ತಿಗಳ ಉಪಾಸನೆಯನ್ನು ಹೇಳಲು ಪ್ರಸ್ತಾವ,ಉದ್ಗೀತ,ಪ್ರತಿಹಾರ ಎಂಬ ಈ ಭಕ್ತಿಗಳನ್ನು ಪ್ರಾಣ,ಆದಿತ್ಯ,ಅನ್ನ ಇವುಗಳ ದೃಷ್ಟಿಯಿಂದ ಉಪಾಸಿಸಬೇಕೆಂದು ಈ ಖಂಡದ ಮತ್ತು ಮುಂದಿನ ಖಂಡದ ಒಟ್ಟಥ೯.ಪ್ರಾಣಾದಿ ದೇವತೆಗಳ ಭಾವವನ್ನು ಪಡೆಯುವುದು ಅಥವಾ ಕಮ೯ಸಮೃದ್ಧಿ ಈ ಉಪಾಸನೆಯ ಫಲ.(ಪುಟ 8 ಮುನ್ನುಡಿ)
1೯)ಹನ್ನೆರಡನೆಯ ಖಂಡ:ದೇವತೆಗಳ ರೂಪದಲ್ಲಿರುವ ನಾಯಿಗಳಿಗೆ ಗೋಚರವಾದ ಶೌವ ಉದ್ಗೀಥವನ್ನು ಅನ್ನ ಲಾಭಕ್ಕೋಸ್ಕರ ಈ ಖಂಡದಲ್ಲಿ ಹೇಳಿದೆ.(ಪುಟ 8 ಮುನ್ನುಡಿ)
20)ಹದಿಮೂರನೆಯ ಖಂಡ: ಸ್ತೋಭಾಕ್ಷರ ವಿಷಯವಾದ ಬೇರೆ ಬೇರೆ ಉಪಾಸನೆಯನ್ನು ಒಟ್ಟುಗೂಡಿಸಿ ಹೇಳಿದೆ.(ಪುಟ 8 ಮುನ್ನುಡಿ)
ಎರಡನೆಯಅಧ್ಯಾಯ:
21) ಮೊದಲನೆಯ ಅಧ್ಯಾಯದಲ್ಲಿ ಸಾಮಾಯವಯವ ವಿಷಯವಾದ ಅನೇಕ ಫಲಗಳುಳ್ಳ ಉಪಾಸನೆಯನ್ನೂ ಅನಂತರ ಸ್ತೋಭಾಕ್ಷರ ವಿಷಯವಾದ ಉಪಾಸನೆಯನ್ನೂ ಹೇಳಿದ್ದಾಯಿತು.ಆದರೆ ಅದು ಸಾಮದ ಏಕದೇಶಕ್ಕೇ ಸಂಬಂಧ ಪಟ್ಟಿರುವುದರಿಂದ ಈಗ ಎರಡನೆಯ ಅಧ್ಯಾಯದಲ್ಲಿ ಸಮಸ್ತಸಾಮದಲ್ಲಿ ಸಮಸ್ತ ಸಾಮವಿಷಯವಾದ ಉಪಾಸನೆಗಳನ್ನು ಉಪದೇಶಿಸಿದೆ.(ಪುಟ 8 ಮುನ್ನುಡಿ)
22) ಎರಡನೆಯ ಅಧ್ಯಾಯದಲ್ಲಿ ಇಪ್ಪತ್ನಾಲ್ಕು ಖಂಡಗಳಿವೆ.
ಮೊದಲನೆಯ ಖಂಡ: ಸಮಸ್ತ ಅವಯವಗಳಿಂದ ಕೂಡಿದ ಸಾಮದಲ್ಲಿ ಸಾಧುದೃಷ್ಟಿಯನ್ನು ವಿಧಿüಸಿರುವುದು ಮೊದಲನೆಯ ಖಂಡದ ತಾತ್ಪಯ೯.(ಪುಟ 8 ಮುನ್ನುಡಿ)
23)ಆದರೆ ಸಾಮದ ಏಕದೇಶೋಪಾಸನೆಯು ಅಸಾಧುವೆಂದು ತಿಳಿಯಕೂಡದು.ಉದ್ಗಾತೃವೇ ಮೊದಲಾದವರು ಪಠಿಸುವ ಸಾಮದ ಅವಯವಗಳಿಗೆ ಭಕ್ತಿಗಳೆಂದು ಹೆಸರು.ಹಿಂಕಾರ,ಪ್ರಸ್ತಾವ,ಉದ್ಗೀಥ ಪ್ರತಿಹಾರ,ನಿಧನ-ಇವು ಸಾಮದ ಪಂಚ ಅವಯವಗಳು.ಈ ಪಂಚವಿಧಸಾಮಗಳನ್ನು
1)ಪೃಥಿವ್ಯಾದಿ-ಲೋಕದೃಷ್ಟಿಯಿಂದಲೂ
2)ಪುರೋವಾತಾದಿ ಲೋಕ-ವೃಷ್ಟಿದೃಷ್ಟಿಯಿಂದಲೂ
3)ಮೇಘವೇ ಮೊದಲಾದ ನೀರಿನ ದೃಷ್ಟಿಯಿಂದಲೂ
4) ವಸಂತಾದಿ ಋತು ದೃಷ್ಟಿಯಿಂದಲೂ
5) ಆಡು ಕುರಿ ಮೊದಲಾದ ಪಶು ದೃಷ್ಟಿಯಿಂದಲೂ
6) ಪ್ರಾಣ ದೃಷ್ಟಿಯಿಂದಲೂ
ಉಪಾಸಿಸಬೇಕೆಂದು 2-7 ಅಧ್ಯಾಯಗಳಲ್ಲಿ ಹೇಳಿದೆ.(ಪುಟ 8 ಮುನ್ನುಡಿ)
24) ಪಂಚವಿಧ ಸಾಮಕ್ಕೆ ಆದಿ, ಉಪದ್ರವಗಳನ್ನು ಸೇರಿಸಿದರೆ ಸಪ್ತವಿಧ ಸಾಮವಾಗುವುದು.ಸಾಮದ ಸಪ್ತವಿಧ ಸಾಮವನ್ನು ವಾಗ್-ದೃಷ್ಟಿಯಿಂದ ಉಪಸಿಸಬೇಕೆಂಬುದು ಎಂಟನೆಯ ಖಂಡದ ವಿಷಯ.ಅನ್ನಾದನೂ ಅನ್ನವಂತನೂ ಆಗುವುದು ಈ ಉಪಾಸನೆಯ ಫಲ.(ಪುಟ ೯ ಮುನ್ನುಡಿ)
25) ಒಂಬತ್ತನೆಯ ಖಂಡ: ಹಿಂದೆ ಅವಯವ ಮಾತ್ರವಾದ ಆದಿತ್ಯದೃಷ್ಟಿಯನ್ನು ಇಡಬಾಕೆಂದು ಹೇಳಿದೆ.ಈ ಆದಿತ್ಯನನ್ನು ಸಮಸ್ತಸಾಮದಲ್ಲಿ ಅವಯವ-ವಿಭಾಗಶಃ ಅಭ್ಯಾಸ ಮಾಡಿಕೊಂಡು ಸಪ್ತವಿಧ ಸಾಮವನ್ನು ಉಪಾಸಿಸಬೇಕೆಂದು ಒಂಬತ್ತೆನೆಯ ಖಂಡದಲ್ಲಿ ಉಪದೇಶಿಸಿದೆ.ಇಂಥ ಉಪಾಸಕನು ಆದಿತ್ಯನ ದೃಷ್ಟಿಯನ್ನೇ ಪಡೆಯುತ್ತಾನೆ.(ಪುಟ ೯ ಮುನ್ನುಡಿ)
26)1,3,6ರಲ್ಲಿ ಉದ್ಗೀಥ ಭಕ್ತಿಯ ನಾಮಾಕ್ಷರಗಳನ್ನು ಉತ್-ಗೀ-ಥ ಎಂದು ಉಪಾಸಿಸ ಬೇಕೆಂದು ಹೇಳಿದೆ. (ಪುಟ ೯ ಮುನ್ನುಡಿ)
27) ಮನಸ್ಸು,ವಾಕ್ಕು,ಚಕ್ಷುಸ್ಸು, ಶ್ರೋತ್ರ,ಪ್ರಾಣ-ಇವುಗಳ ದೃಷ್ಟಿಯಿಂದ ಗಾಯತ್ರ ಸಾಮವನ್ನು ಉಪಸ್ಸಬೇಕೆಂದು ಹನ್ನೊಂದನೆಯ ಖಂಡದಲ್ಲಿ ಹೇಳಿದೆ.(ಪುಟ ೯ ಮುನ್ನುಡಿ)
28)ಹನ್ನೆರಡನೆಯ ಸಾಮದಲ್ಲಿ ಮಂಥನ, ಧೂಮ, ಜ್ವಾಲೆ, ಅಂಗಾರ,ಉಪಶಾಂತಿ,ಸಂಶಾಂತಿ-ಇವುಗಳ ದೃಷ್ಟಿಯಿಂದ ರಥಾಂತರ ಸಾಮವನ್ನು ಉಪಾಸಿಸ ಬೇಕೆಂದು ಹನ್ನೆರಡನೆಯ ಖಂಡದಲ್ಲಿ ಹೇಳಿದೆ.(ಪುಟ ೯ ಮುನ್ನುಡಿ)
28)ಹದಿಮೂರನೆಯ ಸಾಮ: ಇದರಲ್ಲಿ ಉಪಮಂತ್ರಣಾದಿಗಳ ದೃಷ್ಟಿಯಿಂದ ವಾಮದೇವ ಸಾಮವನ್ನು ಉಪಾಸಿಸ ಬೇಕೆಂದು ಹೇಳಿದೆ.(ಪುಟ ೯ ಮುನ್ನುಡಿ)
2೯) 14 ರಿಂದ 21 ಖಂಡಗಳು:
1)ಆದಿತ್ಯ ದೃಷ್ಟಿಯಿಂದ ಬೃಹತ್ಸಾಮ ಉಪಾಸನೆಯನ್ನೂ
2)ಅಭ್ರಾದಿ ದೃಷ್ಟಿಯಿಂದ ವೈರೂಪ- ಸಾಮೋಪಾಸನೆಯನ್ನು
ವಸಂತಾದಿ ದೃಷ್ಟಿಯಿಂದ ವೈರಾಜ- ಸಾಮೋಪಾಸನೆಯನ್ನು
3) ಪೃಥಿವ್ಯಾದಿ ದೃಷ್ಟಿಯಿಂದಲೂ ಶಕ್ವರೀ- ಸಾಮೋಪಾಸನೆಯನ್ನು
ಆಡು ಮೊದಲಾದವುಗಳ ದೃಷ್ಟಿಯಿಂದ ರೇವತಿ-ಸಾಮೋಪಾಸನೆಯನ್ನು
4)ಲೋಮಾದಿ ದೃಷ್ಟಿಯಿಂದ ಯಜ್ಞಾ-ಯಜ್ಞೇಯ-ಸಾಮೋಪಾಸನೆಯನ್ನು
5)ಅಗ್ನ್ಯಾದಿ ದೃಷ್ಟಿಯಿಂದ ರಾಜನ-ಸಾಮೋಪಾಸನೆಯನ್ನು
6)ತ್ರಯೀವಿದ್ಯಾ ದೃಷ್ಟಿಯಿಂದ ಸಾಮ ಸಾಮೋಪಾಸನೆಯನ್ನೂ 14 ರಿಂದ 21ನೆಯ ಖಂಡದಲ್ಲಿ ವಿಧಿಸಿದೆ.
ಹೀಗೆ ಸವಾ೯ತ್ಮಕ ಸಾಮವನ್ನು ಅರಿತುಕೊಂಡಿರುವವನು ಸವಾ೯ತ್ಮಕನಾಗುವನು.(ಪುಟ 10 ಮುನ್ನುಡಿ)
30)ಇಪ್ಪತ್ತೆರಡನೆಯ ಖಂಡ: ಸಾಮೋಪಾಸನೆಯ ಪ್ರಸಂಗದಿಂದ ಉದ್ಗಾತೃವಿಗೆ ಗಾನ ವಿಶೇಷಾದಿ ಸಂಪತ್ತಿಯನ್ನು ಉಪದೇಶಿಸಿದೆ.(ಪುಟ 10 ಮುನ್ನುಡಿ)
31)ಇಪ್ಪತ್ತಮೂರನೆಯ ಖಂಡ: ಇಲ್ಲಿ ಓಂಕಾರೋಪಾಸನೆಯನ್ನು ವಿಧಿಸಿದೆ.ಗೃಹಸ್ಥಾದಿಗಳಿಗೆ ಸ್ವಧಮಾ೯ಚರಣೆಯಿಂದ ಪುಣ್ಯಲೋಕ ಪ್ರಾಪ್ತಿಯು ಫಲವಾಗಿದ್ದರೂ ಓಂಕಾರೋಪಾಸಕನಿಗೆ ಅಮೃತತ್ವವೆಂಬ ವಿಶಿಷ್ಟ ಫಲವು ಪ್ರಾಪ್ತಯಾಗುತ್ತದೆ. (ಪುಟ 10 ಮುನ್ನುಡಿ)
32) ಇಪ್ಪತ್ತನಾಲ್ಕನೆಯ ಖಂಡ:ಪ್ರಾಸಂಗಿಕವಾದ ಓಂಕಾರಸ್ತುತಿಯನ್ನು ಬಿಟ್ಟು ಈಗ ಪುನಃ ಯಜ್ಞಾಂಗವಾದ ಸಾಮ,ಹೋಮ,ಮಂತ್ರ,ಉತ್ಥಾನ ಇವುಗಳನ್ನು ಶ್ರುತಿಯು ಈ ಅಧ್ಯಾಯದ ಕೊನೆಯ ಖಂಡದಲ್ಲಿ ಹೇಳಿದೆ.ಆಯಾ ಸಾಮಗಳನ್ನು ಆಯಾ ಸವನದಲ್ಲಿ ಹಾಡಿ ,ಆಯಾ ಮಂತ್ರಗಳಿಂದ ಹೋಮವನ್ನೂ ಉತ್ಥಾನವನ್ನೂ ಮಾಡಿದರೆ ಸವನದೇವತೆಗಳು ಸವನದ ಫಲವನ್ನು ಅನುಗ್ರಹಿಸುತ್ತಾರೆ.(ಪುಟ 10 ಮುನ್ನುಡಿ)
ಮೂರನೆಯ ಅಧ್ಯಾಯ:
33)ಹಿಂದೆ ಯಜ್ಞಾಂಗವೂ ಯಜ್ಞವಿಷಯಕವೂ ಆದ ಸಾಮ,ಹೋಮ,ಮಂತ್ರೋತ್ಥಾನಗಳನ್ನು ಆಯಾ ವಿಶಿಷ್ಟ ಫಲ ಪ್ರಾಪ್ತಿಗಾಗಿ ಹೇಳಿದ್ದಾಯಿತು.(ಪುಟ 10 ಮುನ್ನುಡಿ)
34)ಸವ೯ಯಜ್ಞಗಳ ಕಾಯ೯ಸಿದ್ಧಿರೂಪನಾದ ಆದಿತ್ಯನು ಮಹದೈಶ್ವಯ೯ದಿಂದ ಪ್ರಕಾಶಿಸುತ್ತಿದ್ದಾನೆ.ಸವ೯ ಪ್ರಾಣಿಗಳ ಕಮ೯ಫಲಸ್ವರೂಪನಾದ ಇವನನ್ನು ಆಶ್ರಯಿಸಿ ಎಲ್ಲರೂ ಜೀವಿಸುತ್ತಾರೆ.(ಪುಟ 10 ಮುನ್ನುಡಿ)
35)ಆದುದರಿಂದ ಯಜ್ಞದ ನಿರೂಪಣೆಯು ಆದಮೇಲೆ ಅದರ ಕಾಯ೯ವಾದ ಆದಿತ್ಯ ವಿಷಯಕ ಉಪಾಸನೆಯನ್ನು -ಅದು ಸವ೯ ಪುರುಷಾಥ೯ಗಳಿಗಿಂತಲೂ ಶ್ರೇಷ್ಠ ಫಲವುಳ್ಳದ್ದಾದುದರಿಂದ -ವಿಧಿಸಲು ಈ ಅಧ್ಯಾಯವು ಪ್ರಾರಂಭವಾಗಿರುತ್ತದೆ.(ಪುಟ 10 ಮುನ್ನುಟಿ)
36)ಮೊದಲ ಹನ್ನೊಂದು ಖಂಡಗಳಲ್ಲಿ ಮಧುವಿದ್ಯೆಯನ್ನು ಹೇಳಿದೆ.ಆದಿತ್ಯನು ದೇವತೆಗಳಿಗೆ ಮಧು.ಎಂದರೆ ಜೇನುತುಪ್ಪದಂತೆ ಮೋದವನ್ನುಂಟು ಮಾಡುತ್ತಾನೆ.ಈ ಮಧುವಿಗೆ ದ್ಯುಲೋಕವು ಅಡ್ಡತೊಲೆ,ಅಂತರಿಕ್ಷವು ಜೇನುಗೂಡು ಮತ್ತು ರಶ್ಮಿಗಳಲ್ಲಿರುವ ಜಲಬಿಂದುಗಳು ಮೊಟ್ಟೆಗಳು,ಆದಿತ್ಯನ ಪೂವ೯ ರಶ್ಮಿಗಳು ಜೇನುಗೂಡಿನಲ್ಲಿzರುವ ರಂದ್ರಗಳು.(ಪುಟ 11 ಮುನ್ನುಡಿ)
37)ಈ ಕಮ೯ದಿಂದಲೇ ಯಶಸ್ಸು ಮೊದಲಾದ ರಸವು ಉತ್ಪನ್ನವಾಗುತ್ತದೆ.ಈ ರಸವು ಆದಿತ್ಯನ ಲೋಹಿತರೂಪ.ಅನುಷ್ಠಿಸಲ್ಪಟ್ಟ ಕಮ೯ದ ಫಲವು ಆದಿತ್ಯನನ್ನು ಆಶ್ರಯಿಸುತ್ತದೆ.ಹೀಗೆಯೆ ರೂಪಕವು ಯಜಸ್ಸು ಸಾಮ,ಅಥವ೯ಇವುಗಳ ವಿಷಯದಲ್ಲಿ ಮುಂದುವರೆಯುತ್ತದೆ.( ಪುಟ 11ಮುನ್ನುಡಿ)
38)12-13ನೆಯ ಖಂಡಗಳು ಗಾಯತ್ರೀ ಬ್ರಹ್ಮೋಪಾಸನೆಯನ್ನು ಹೊಂದಿವೆ.ಇಲ್ಲಿ ಗಾಯತ್ರೀದ್ವಾರದಿಂದ ಬ್ರಹ್ಮವನ್ನು ಉಪದೇಶಿಸಲು ಅನೇಕ ಕಾರಣಗಳಿವೆ.1)ದೇವತೆಗಳು ಇತರ ಛಂದಸ್ಸುಗಳ ಮೂಲಕ ಸೋಮವನ್ನು ತರಲು ವಿಫಲರಾದಾಗ ಗಾಯತ್ರಿಯು ಅದನ್ನು ದ್ಯುಲೋಕದಿಂದ ತಂದಿತು.2) ಜಗತೀ-ತ್ರಿಷ್ಟುಪ್-ಛಂದಸ್ಸುಗಳು ತಮ್ಮ ಕೆಲವು ಅಕ್ಷರಗಳನ್ನು ಬಿಟ್ಟುಬಂದಾಗ ಗಾಯತ್ರಿಯು ಅವುಗಳನ್ನು ತಂದಿತು.3)ಇದಕ್ಕೆ ಯಜ್ಞದಲ್ಲಿ ಪ್ರಾಧಾನ್ಯವಿದೆ.4)ಇದು ಬ್ರಾಹ್ಮಣನಿಗೆ ಸಾರವಾಗಿದೆ.ಶಬ್ದರೂಪವಾದ ವಾಕ್ಕು ಗಾಯತ್ರಿಯೇ.ಏಕೆಂದರೆ ವಾಕ್ಕೇ ಪ್ರಾಣಿಗಳನ್ನೆಲ್ಲ ಹೆಸರಿಸುತ್ತದೆ(ಗಾಯತಿ) ಮತ್ತು ಕಾಪಾಡುತ್ತದೆ.(ತ್ರಾಯತೇ).ಆದುದರಿಂದ ಸ್ಥಾವರ ,ಜಂಗಮ ರೂಪದಲ್ಲಿ ಇರುವುದೆಲ್ಲ ಗಾಯತ್ರಿಯೇ..ಹೀಗೆಯೇ ಭೂತಗಳು,ಪೃಥ್ವಿ,ಶರೀರ,ಹೃದಯ,ಪ್ರಾಣ-ಇವೂ ಕೂಡಾ ಗಾಯತ್ರಿಯೇ.ಈ ಆರು ರೂಪಗಳನ್ನೂ ನಾಲ್ಕು ಪಾದಗಳನ್ನೂ ಪಡೆದಿರುವ ಗಾಯತ್ರಿಯ ಮಹಿಮೆಯು ವಿಕಾರ ರೂಪವಾದ ಗಾಯತ್ರೀ ಬ್ರಹ್ಮಕ್ಕಿಂತಲೂ ಸಮಸ್ತ ಗಾಯತ್ರಿಯ ಆತ್ಮನೂ ಪರಮಾಥ೯ ಸತ್ಯ ಸ್ವರೂಪನೂ ಆದ ಪುರುಷನು ದೊಡ್ಡವನು(ಪುಟ 12 ಮುನ್ನುಡಿ)
3೯)ಈ ಜಗತ್ತೆಲ್ಲ ಇವನ ಒಂದು ಪಾದವು.ಉಳಿದ ಮೂರು ಪಾದಗಳು ದ್ಯುಲೋಕದಲ್ಲಿ (ಎಂದರೆ ತನ್ನ ಸ್ವರೂಪದಲ್ಲಿ ) ಇವೆ.ಗಾಯತ್ರೀ ದ್ವಾರದಿಂದ ಹೇಳಿದ ಬ್ರ್ಮವೇ ನಮ್ಮ ಹೊರಗಿನ ಆಕಾಶವಾಗಿದೆ.(ಪುಟ 12 ಮುನ್ನುಡಿ)
40)ಹೊರಗಿರುವ ಆಕಾಶವು ನಮ್ಮ ಒಳಗಿನ ಆಕಾಶವಾಗಿದೆ.ಒಳಗಿರುವ ಆಕಾಶವೇ ನಮ್ಮ ಹೃದಯಾಕಾಶವಾಗಿದೆ.(ಪುಟ 12 ಮುನ್ನುಡಿ)
41) ಹೃದಯಾಕಾಶದಲ್ಲಿ ಧ್ಯಾನಿಸಲ್ಪಡುವ ಬ್ರಹ್ಮವು ಪೂವ೯ವು ,ಅವಿನಾಶಿ ಎಂದು ಉಪಾಸಿಸಬೇಕು.(ಪುಟ 12 ಮುನ್ನುಡಿ)
42)ಹದಿನಾಲ್ಕನೆಯ ಖಂಡದಲ್ಲಿ ಶಾಂಡಿಲ್ಯ ವಿದ್ಯೆಯನ್ನು ಉಪದೇಶಿಸಿದೆ.ಮನುಷ್ಯನು ಮರಣಕಾಲದಲ್ಲಿ ಯಾವ ನಿಶ್ಚಯದಿಂದ ದೇಹವನ್ನು ಬಿಡುವನೋ ಅದಕ್ಕೆ ಅನುಸಾರವಾಗಿ ಅದರ ಫಲವನ್ನೇ ಹೊಂದುವನು.(ಪುಟ 12 ಮುನ್ನುಡಿ)(ಇದರ ಪ್ರಕಾರ ಬ್ರಹ್ಮನಿಶ್ಚಯವನ್ನು ಮಾಡಿದವನಿಗೆ ಬ್ರಹ್ಮವೇ ಪ್ರಾಪ್ತಿ ಎಂದಾಯಿತು)
43)ಬ್ರಹ್ಮದಿಂದ ತೇಜಸ್ಸು,ನೀರು ಅನ್ನ ಮೊದಲಾದ ಎಲ್ಲವೂ ಹುಟ್ಟಿವೆ.ಆದುದರಿಂದ ಅದು ತಜ್ಜಮ್,ಹೀಗೆಯೇ ಎಲ್ಲವೂ ಪ್ರತಿಲೋಮದಿಂದ ಬ್ರಹ್ಮದಲ್ಲಿಯೇ ಲಯವಾಗಿ ಬ್ರಹ್ಮರೂಪದಿಂದ ಉಳಿದುಕೊಳ್ಳುತ್ತವೆ.ಆದುದರಿಂದ ಅದುತಲ್ಲಮ್.ಇದೇ ರೀತಿಯಲ್ಲಿಎಲ್ಲವೂ ಬ್ರಹ್ಮದಲ್ಲಿಯೇ ಪ್ರಾಣನ ಕ್ರಿಯೆಯನ್ನು ಮಾಡಿಕೊಂಡಿರುತ್ತವೆ.ಆದುದರಿಂದ ಅದು ತದನಂ.ಹೀಗೆ ಜಗತ್ತು ತ್ರಿಕಾಲದಲ್ಲಿಯೂ ಬ್ರಹ್ಮಸ್ವರೂಪದಲ್ಲಿ ಇರುವುದರಿಂದ ಅದು ಬ್ರಹ್ಮವೇ.(ಪುಟ12 ಮುನ್ನುಡಿ)
(ತಜ್ಜಮ್,ತಲ್ಲಮ್,ತದನಮ್)
44)ಸಾಧಕನು ರಾಗದ್ವೇಷಾದಿಗಳಿಲ್ಲದೆ ಶಾಂತನಾಗಿ ಎಲ್ಲವೂ ಆದ ಬ್ರಹ್ಮವನ್ನು ಮನೋಮಯತ್ವಾದಿಗುಣಗಳಿಂದ ಉಪಾಸಿಸಬೇಕು.(ಪುಟ 12 ಮುನ್ನುಡಿ)
45)ಹದಿನೈದನೆಯ ಖಂಡ: ಇಲ್ಲಿ ವೀರ ಪುತ್ರನ ದೀಘ೯ ಆಯುಸ್ಸಿಗೋಸ್ಕರ ಕೋಶವಿದ್ಯೆಯನ್ನು ಉಪದೇಶಿಸಿದೆ.(ಪುಟ 12 ಮುನ್ನುಡಿ)
46)ಹದಿನಾರನೆಯ ಖಂಡ ಹದಿನೇಳನೆಯ ಖಂಡದಲ್ಲಿ ಪುರುಷವಿದ್ಯೆಯನ್ನು ಹೇಳಿದೆ.ಮಹೀದಾಸ ಐತರೇಯನು ಈ ಯಜ್ಞ ದಶ೯ನವನ್ನು ಅರಿತುಕೊಂಡು ರೋಗವನ್ನು ಕುರಿತು ಹೀಗೆ ಹೇಳಿದನು.'ರೋಗವೆ ನನ್ನನ್ನು ಏಕೆ ಉಪತಪಿಸುತ್ತೀಯೆ? ನಾನು ಇದರಿಂದ ಸಾಯುವುದಿಲ್ಲ!' ಹೀಗೆ ಉಪಾಸಿಸುವವನು ಮಹೀದಾಸನಂತೆ ನೂರಾಹದಿನಾರು ವಷ೯ಗಳ ಕಾಲ ಜೀವಿಸುತ್ತಾನೆ.(ಪುಟ 13 ಮುನ್ನುಡಿ)
47)ಹದಿನೆಂಟನೆಯ ಖಂಡ:ಇಲ್ಲಿ ಮನ-ಆಕಾಶಗಳಲ್ಲಿ ಸಮಸ್ತ ಮನೋದೃಷ್ಟಿಯನ್ನು ವಿಧಿಸುವುದಕ್ಕಾಗಿ ಮನೋಬ್ರಹ್ಮವನ್ನು ಹೇಳಿದೆ.(ಪುಟ 13 ಮುನ್ನುಡಿ)
48)ಹತ್ತೊಂಬತ್ತನೆಯ ಖಂಡ:ಆದಿತ್ಯನು ಬ್ರಹ್ಮ ಎಂದು ಆದೇಶ.ಆದಿತ್ಯ ಬ್ರಹ್ಮವನ್ನು ಉಪಾಸಿಸುವವನ
ಬಳಿಗೆ ಮಂಗಳ ಘೋಷಗಳು ಬರುತ್ತವೆ ಹಾಗೂ ಸುಖವನ್ನುಟು ಮಾಡುತ್ತವೆ.(ಪುಟ 13 ಮುನ್ನುಡಿ)
ನಾಲ್ಕನೆಯ ಅಧ್ಯಾಯ:
4೯)ಈ ಅಧ್ಯಾಯಕ್ಕೆ ಹದಿನೇಳು ಖಂಡಗಳು.ವಾಯು -ಪ್ರಾ£ಣಗಳು ಬ್ರಹ್ಮದ ಪಾದಗಳೆಂದು ಹಿಂದೆ ಹೇಳಿದೆ.ಈಗ ಅವುಗಳನ್ನು ಸಾಕ್ಷಾತ್ ಬ್ರಹ್ಮವೆಂದೇ ಉಪಾಸಿಸಬೇಕೆಂದು ಶ್ರುತಿಯು ಹೇಳುತ್ತದೆ.
ಶ್ರದ್ಧೆ,ಅನ್ನದಾನ,ವಿನಯ-ಇವು ವಿದ್ಯಾ ಪ್ರಾಪ್ತಿಗೆ ಸಾಧನಗಳೆಂಬುದನ್ನೂ ತಿಳಿಸಿದೆ.(ಪುಟ 13 ಮುನ್ನುಡಿ)
50)ರಾಜನಾದ ಜಾನಶ್ರುತಿ ಪೌತ್ರಾಯಣನು ಅನ್ನದಾನಿಯೆಂದು ಪ್ರಸಿದ್ಧನಾಗಿದ್ದನು. ಒಂದು ರಾತ್ರಿ ರಾಜನು ಅರಮನೆಯ ಉಪ್ಪರಿಗೆಯ ಮೇಲೆ ಇದ್ದಾಗ ಕೆಲವು ಹಂಸಗಳು ಹಾರಿಹೋದವು.ಆಗ ಒಂದು ಹಂಸವು ಇನ್ನೊsಂದು ಹಂಸಕ್ಕೆ ಹೇಳಿತು.'ಹೋ ಭಲ್ಲಾಕ್ಷ!ಜಾನಶ್ರುತಿಯ ಈ ಜ್ಯೋತಿಯು ದ್ಯುಲೋಕದಂತೆ ಹರಡಿಕೊಂಡಿದೆ.ಅದನ್ನು ಸೋಂಕಬೇಡ,ಅದು ನಿನ್ನನ್ನು ಸುಡದಿರಲಿ!'ಎಂದು ಹೇಳಿತು.'ಆ ಗಾಡಿ ರೈಕ್ವನು ಎಂಥವನು?' ಎಂದು ಕೇಳಲಾಗಿ ಹಂಸವು ರೈಕ್ವನನ್ನು ತುಂಬಾ ಪ್ರಶಂಸೆ ಮಾಡಿತು.ಅನಂತರ ರಾಜನು ಇವನನ್ನು ನೋಡಲು ಇವನಿದ್ದಲ್ಲಿಗೆ ಬಂದನು.ರೈಕ್ವನು ಒಂದು ಗಾಡಿಯ ಕೆಳಗೆ ಕುಳಿತಿದ್ದನು.ರಾಜನು ಬೆಲೆಯುಳ್ಳ ವಸ್ತುಗಳನ್ನು ದಾನಮಾಡಿ,'ಭಗವಂತನೆ,ನೀನು ಯಾವ ದೇವತೆಯನ್ನು ಉಪಾಸಿಸುತ್ತೀಯೋ ಆ ದೇವತೆಯನ್ನು ನನಗೆ ಉಪದೇಶಿಸು' ಎಂದು ಬೇಡಿಕೊಂಡನು. ರೈಕ್ವನು ಜಾನಶ್ರುತಿಗೆ 'ಸಂವಗ೯ವಿದ್ಯೆ'ಯನ್ನು ಹೇಳಿಕೊಟ್ಟನು.ಯಾವುದು ತನ್ನಲ್ಲಿ ಎಳೆದುಕೊಂಡು ಲಯ ಮಾಡಿಕೊಳ್ಳುವುದೊ ಅದು ಸಂವಗ೯.ದೇವತೆಗಳಲ್ಲಿ ವಾಯುವನ್ನೂ ಇಂದ್ರಿಯಗಳಲ್ಲಿ ಪ್ರಾಣವನ್ನೂ ಸಂವಗ೯ವೆಂದು ಉಪಾಸಿಸಬೇಕು.(ಪುಟ 14 ಮುನ್ನುಡಿ)
51)ನಾಲ್ಕನೆಯ ಖಂಡ:ಅನ್ನ-ಅನ್ನಾದತ್ವ ರೂಪದಿಂದ ಸಂಸ್ತುತವೂ ವಾಗಾದಿ-ಅಗ್ನ್ಯಾದಿ ರೂಪದಿಂದಿರುವುದೂ ಆದ ಜಗತ್ತನ್ನು ಕಾರಣರೂಪದಿಂದ ಏಕವೆಂದು ಭಾವಿಸಿ,ಹದಿನಾರು ಪ್ರಕಾರದಿಂದ ವಿಂಗಡಿಸಿ
ಅದರಲ್ಲಿ ಬ್ರಹ್ಮದೃಷ್ಟಿಯನ್ನಿಡಬೇಕೆಂದು ನಾಲ್ಕನೆಯ ಖಂಡವನ್ನು ಹೇಳಿದೆ.ಇದಕ್ಕೆ ಷೋಡಶಕಲವಿದ್ಯೆ ಎಂದು ಹೆಸರು.(ಪುಟ 14 ಮುನ್ನುಡಿ)
52)ಶ್ರದ್ಧಾ-ತಪಸ್ಸುಗಳು ಬ್ರಹ್ಮೋಪಾಸನೆಗೆ ಅಂಗವೆಂಬುದನ್ನು ತಿಳಿಸಲು ಸತ್ಯಕಾಮನ ಕಥೆಯು ಬಂದಿದೆ.ವಾಯು(ಋಷಭ),ಅಗ್ನಿ,ಸೂಯ೯(ಹಂಸ) ಮತ್ತು ಪ್ರಾಣ(ನೀರುಕೋಳಿ)-ಇವರು ಸತ್ಯಕಾಮನಿಗೆ ಬ್ರಹ್ಮದ ನಾಲ್ಕು ಪಾದಗಳನ್ನು ತಿಳಿಸಿಕೊಡುತ್ತಾರೆ.
ನಾಲ್ಕು -ಬ್ರಹ್ಮದ ಮೊದಲನೆಯ ಪಾದವು-ಇದಕ್ಕೆ 'ಪ್ರಕಾಶವಾನ್' ಎಂದು ಹೆಸರು.
ಪೃಥ್ವಿ,,ಅಂತರಿಕ್ಷ,ದ್ಯುಲೋಕ,ಸಮುದ್ರ-ಇವು ಬ್ರಹ್ಮನ 'ಅನಂತವಾನ್' ಎಂಬ ಎರಡನೆಯ ಪಾದವು.
ಅಗ್ನಿ,ಸೂಯ೯,ಚಂದ್ರ,ಮಿಂಚು-ಇವು ಬ್ರಹ್ಮದ 'ಜ್ಯೋತಿಷ್ಮಾನ್' ಎಂಬ ಮೂರನೆಯ ಪಾದವು.
ಪ್ರಾಣ,ಕಣ್ಣು,ಕಿವಿ,ಮನಸ್ಸು -ಇವು ಬ್ರಹ್ಮದ ಆಯತನವೆಂಬ ನಾಲ್ಕನೆಯ ಪಾದವು.ಸತ್ಯಕಾಮನು ದೇವತೆಗಳಿಂದ ಷೋಡಶಕಲ ವಿದ್ಯೆಯನ್ನು ಪಡೆದಿದ್ದರೂ ತನ್ನ ಆಚಾಯ೯ನಾದ ಹಾರಿದ್ರುಮನಿಂದ ಇದೇ
ವಿದ್ಯೆಯನ್ನು ಪುನಃ ಪಡೆಯುತ್ತಾನೆ.ಇಲ್ಲಿಗೆ ಒಂಬತ್ತನೆಯ ಖಂಡವು ಮುಗಿಯುತ್ತದೆ.(ಪುಟ 14 ಮುನ್ನುಡಿ)
53)ಹತ್ತನೆಯ ಖಂಡ:ಇನ್ನೊಂದು ಪ್ರಕಾರದಿಂದ ಬ್ರಹ್ಮವಿದ್ಯೆಯನ್ನೂ ಬ್ರಹ್ಮಜ್ಞಾನಿಯ ಗತಿಯನ್ನೂ ಅಗ್ನಿ ವಿದ್ಯೆಯನ್ನು ಇಲ್ಲಿ ತಿಳಿಸಿದೆ. ಉಪಕೋಸಲ ಕಾಮಲಾಯನನು ಸತ್ಯಕಾಮ ಜಾಬಾಲನ ಮನೆಯಲ್ಲಿ ಬ್ರಹ್ಮಚಯ೯ವಾಸ ಮಾಡಿದನು.ಸತ್ಯಕಾಮನು ಇತರ ಶಿಷ್ಯರಿಗೆ ಉಪದೇಶ ಮಾಡಿದ್ದರೂ ಉಪಕೋಸಲನಿಗೆ ಮಾತ್ರ ಉಪದೇಶ ಮಾಡಿರಲಿಲ್ಲ.ಮಾನಸ ದುಃಖದಿಂದ ಸಂತ್ರಪ್ತನಾದ ಉಪಕೋಸಲನು ಉಪವಾಸ ಮಾಡಲು ಪ್ರಾರಂಭಿಸಿದನು.ಅನಂತರ ಅಗ್ನಿಗಳು ಒಂದೊಂದಾಗಿಯೂ ಒಟ್ಟಾಗಿಯೂತಮ್ಮ ತಮ್ಮ ವಿದ್ಯೆಗಳನ್ನು ಹೇಳಿಕೊಟ್ಟವು.ಅನಂತರ ಅಗ್ನಿಗಳು ಉಪಕೋಸಲನಿಗೆ ಉಪದೇಶ ಮಾಡಿದ್ದು ತಿಳಿಯಿತು. ಅವನು ಅಗ್ನಿಗಳು ನಿನಗೆ ಲೋಕಗಳನ್ನು ಮಾತ್ರ ಉಪದೇಶಿಸಿರುತ್ತವೆ.ಆದರೆ ನಾನು ಬ್ರಹ್ಮವನ್ನು ಉಪದೇಶಿಸುತ್ತೇನೆ.ಪದ್ಮಪತ್ರಕ್ಕೆ ನೀರು ಅಂಟಿಕೊಳ್ಳದಂತೆ ಬ್ರಹ್ಮಜ್ಞಾನಿಗೆ ಪಾಪವು ಅಂಟಿಕೊಳ್ಳುವುದಿ
ಲ್ಲ' ಎಂದು ಹೇಳಿದನು.(ಪುಟ 15 ಮುನ್ನುಡಿ)
ಐದನೆಯ ಅಧ್ಯಾಯ:
54)ಹಿಂದೆ ಸಗುಣೋಪಾಸನೆಗೆ ಉತ್ತರಾಯಣದ ಗತಿಯು ಫಲವೆಂದು ಹೇಳಿದ್ದಾಯಿತು.(ಪುಟ 15ಮುನ್ನುಡಿ)
55)ಈಗ ಐದನೆಯ ಅಧ್ಯಾಯದಲ್ಲಿ ಪಂಚಾಗ್ನಿಗಳನ್ನು ಅರಿತುಕೊಂಡಿರುವ ಗೃಹಸ್ಥರಿಗೂ ಮತ್ತು ಅನ್ಯೋಪಾಸಕರಾದ ಊಧ್ವ೯ರೇತಸ್ಕರಿಗೂ ಉತ್ತರ ಮಾಗ೯ವೇ ಗತಿಯೆಂದು ಹೇಳಲಗುತ್ತದೆ.(ಪುಟ 15 ಮುನ್ನುಡಿ)
56)ಅನಂತರ ಕೇವಲ ಕಮಿ೯ಗಳಿಗೆ ಪುನರಾವೃತ್ತಿ ರೂಪವಾದ ಮತ್ತು ಧೂಮಾದಿ ಲಕ್ಷಣವುಳ್ಳ ದಕ್ಷಿಣಗತಿಯನ್ನು ಹೇಳಲಾಗುತ್ತದೆ.(ಪುಟ 15 ಮುನ್ನುಡಿ)
57)ಬ್ರಹ್ಮಜ್ಞಾನಕ್ಕೆ ಸಾಧನವಾದ ವೈರಾಗ್ಯವನ್ನು ಉಪಾಸಕರಲ್ಲಿ ಹುಟ್ಟಿಸುವುದೇ ಈ ಸಮಸ್ತ ವಣ೯ನೆಯ ಉದ್ದೇಶ.ಈ ಅಧ್ಯಾಯದಲ್ಲಿ ಇಪ್ಪತ್ನಾಲ್ಕು ಅಧ್ಯಾಯಗಳಿವೆ.(ಪುಟ16 ಮುನ್ನುಡಿ)
58)ಮೊದಲನೆಯ ಮತ್ತು ಎರಡನೆಯ ಖಂಡದಲ್ಲಿ ಪ್ರಾಣೋಪಾಸನೆಯನ್ನೂ ,ಪ್ರಾಣೋಪಾಸಕನಿಗೆ ಶ್ರೀಮಂಥ ಕಮ೯ವನ್ನೂ ವಿಧಿಸಿದೆ.ಪ್ರಾಣವೇ ಜ್ಯೇಷ್ಠ ಮತ್ತು ಶ್ರೇಷ್ಠ ಎಂಬುದನ್ನು ರೂಪಕದ ಮೂಲಕ ಹೇಳಿದೆ.(ಪುಟ 16 ಮುನ್ನುಡಿ)
5೯)ಸತ್ಯಕಾಮ ಜಾಬಾಲನು ಈ ಪ್ರಾಣೋಪಾಸನೆಯನ್ನು ಗೋಶ್ರುತು ವೈಯಘ್ರಪದ್ಯನಿಗೆ 'ಇದನ್ನು ಒಣಗಿದ ಮೋಟುಮರಕ್ಕೆ ಹೇಳಿದರೂ ಅದರಲ್ಲಿ ಕೊಂಬೆಗಳು ಹುಟ್ಟಿಯೇ ಹುಟ್ಟುವುವು.ಎಲೆಗಳು ಚಿಗುರುವುವು'ಎಂದು ಅದರ ಮಹಿಮೆಯನ್ನು ಹೊಗಳಿರುತ್ತಾನೆ.(ಪುಟ16 ಮುನ್ನುಡಿ)
60)ಮಹತ್ವ ಉಂಟಾದರೆ ಧನವು ಒದಗುತ್ತದೆ.ಧನವು ಒದಗಿದರೆ ಕಮ೯ವನ್ನು ಮಾಡಬಹುದು.(ಪುಟ 16 ಮುನ್ನುಡಿ)
61)ಕಮ೯ದಿಂದಲೇ ದೇವಯಾನ ಅಥವಾ ಪಿತೃಯಾಣ ಎಂಬ ಮಾಗ೯ವನ್ನು ಹೊಂದಬಹುದು.ಇಂಥವನು ಶ್ರೀಮಂಥ ಕಮ೯ವನ್ನು ಮಾಡಬೇಕೇ ಹೊರತು ವಿಷಯ ಭೋಗಿಯಲ್ಲ.(ಪುಟ 16 ಮುನ್ನುಡಿ)
62)ಮೂರನೆಯ ಖಂಡ:ಪಂಚಾಗ್ನಿ ವಿದ್ಯೆಯನ್ನು ಹೇಳಲಾಗುತ್ತದೆ. ಪ್ರವಾಹಣ ರಾಜನು ಶ್ವೇತಕೇತುವಿಗೆ
ಐದು ಪ್ರಶ್ನೆಗಳನ್ನು ಹಾಕುತ್ತಾನೆ.
1) ಈ ಜನರು ಮೃತರಾದ ಮೇಲೆ ಬೇರೆ ಬೇರೆ ಮಾಗ೯ಗಳಲ್ಲಿ ಹೇಗೆ ಹೋಗುವರು?
2)ಮತ್ತೆ ಇವರು ಈ ಲೋಕಕ್ಕೆ ಹೇಗೆ ಹಿಂತಿರುಗುವರು?
3) ಹೀಗೆ ಬಹು ಜನರು ಪುನಃ ಪುನಃ ಸಾಯುತ್ತಿದ್ದರೂ ಹೇಗೆ ಈ ಲೋಕವು ತುಂಬುತ್ತಿಲ್ಲ?
4)ಎಷ್ಟನೆಯ ಆಹುತಿಯನ್ನು ಹೋಮಮಾಡಿದ ಮೇಲೆ ನೀರು ಪುರುಷವಾಕ್ಕಾಗಿ ಎದ್ದು ನಿಂತು ಮಾತಾಡುತ್ತದೆ?
5)ಯಾವ ಕಮ೯ದಿಂದ ದೇವಯಾನ ಅಥವಾ ಪಿತೃಯಾನೆವೆಂಬ ಪಥವನ್ನು ಜನರು ಪಡೆಯುತ್ತಾರೊ ಅವುಗಳನ್ನು ನೀನು ಅರಿತಿರುವೆಯಾ?ಎಂಬುದಾಗಿ ಐದು ಪ್ರಶ್ನೆಗಳನ್ನು ಕೇಳಿದನು.ಇವುಗಳಲ್ಲಿ ಯಾವ ಒಂದು ಪ್ರಶ್ನೆಯೂ ಶ್ವೇತಕೇತುವಿಗೆ ಗೊತ್ತಿರಲಿಲ್ಲ.
63)ಅನಂತರ ಶ್ವೇತಕೇತುವಿನ ತಂದೆಯಾದ ಗೌತಮನಿಗೆ ಪ್ರವಾಹಣ ರಾಜನು ಪಂಚಾಗ್ನಿ ವಿದ್ಯೆಯನ್ನು
ಉಪದೇಶಿಸುತ್ತಾನೆ.(ಪುಟ 16 ಮುನ್ನುಡಿ)
64)ಹನ್ನೊಂದನೆಯ ಖಂಡದಿಂದ ವೈಶ್ವಾನರ ವಿದ್ಯೆಯು ಆರಂಭವಾಗುತ್ತದೆ.ಐದು ಜನ ಶ್ರೋತ್ರಿಯರು
ವೈಶ್ವಾನರನನ್ನು ಕುರಿತು ಅರಿತುಕೊಳ್ಳಲು ಉದ್ಧಾಲಕ ಅರುಣಿಯೊಂದಿಗೆ ಅಶ್ವಪತಿ ಕೈಕೇಯನ ಬಳಿಗೆ ಬರುತ್ತಾರೆ.ರಾಜನು ಅವರನ್ನು ಒಬ್ಬೊಬ್ಬರನ್ನಾಗಿ 'ನೀನು ಯಾರನ್ನು ವೈಶ್ವಾನರಾತ್ಮನೆಂದು ಉಪಾಸಿಸುತ್ತೀಯೆ'ಎಂದು ಪ್ರಶ್ನಿಸುತ್ತಾನೆ.ಇವರೆಲ್ಲರಿಗೂ ಆತ್ಮನ ಒಂದು ಅವಯವವು ಮಾತ್ರ ಗೊತ್ತಿತ್ತೇವಿನಾಪೂಣಾತ್ಮನ ಜ್ಞಾನವಿರಲಿಲ್ಲ.(ಪುಟ 17 ಮುನ್ನುಡಿ)
65)ಅನಂತರ ರಾಜನು ಇವರನ್ನು ಕುರಿತು 'ಯಾವನು ಪ್ರಾದೇಶ ಮಾತ್ರನೊ ಅಭಿಮಾನಿಯೂ ಆದ ಈ ವೈಶ್ವಾನರನನ್ನು ಹೀಗೆ ಉಪಾಸಿಸುವನೊ ಅವನು ಸವ೯ ಲೋಕಗಳಲ್ಲಿಯೂ ಸವ೯ ಪ್ರಾಣಿಗಳಲ್ಲಿಯೂ ಸವ೯ರ ಆತ್ಮಗಳಲ್ಲಿಯೂ ಆತ್ಮವನ್ನು ತಿನ್ನುತ್ತಾನೆ'ಎಂದು ಉಪದೇಶಿಸುತ್ತಾನೆ.ಈ ಉಪಾಸಕನು ತನ್ನ ಭೋಜನ ಕ್ರಿಯೆಯನ್ನೇ ಪ್ರಾಣಾಗ್ನಿಹೋತ್ರವೆಂದು ಕಲ್ಪಿಸಿಕೊಳ್ಳಬೇಕು.ಊಟಮಾಡುವಾಗ
1)ಮೊದನೆಯ ಅನ್ನ-ಪ್ರಾಣಾಯ ಸ್ವಾಹಾ
2)ಎರಡನೆಯ ಅನ್ನವನ್ನು-ವ್ಯಾನಾಯ ಸ್ವಾಹಾ
3)ಮೂರನೆಯ ಅನ್ನವನ್ನು -ಅಪಾನಾಯ ಸ್ವಾಹಾ
4)ನಾಲ್ಕನೆಯ ಅನ್ನ-ಸಮಾನಾಯ ಸ್ವಾಹಾ
5) ಐದನೆಯ ಅನ್ನವನ್ನು-ಉದಾನಾಯ ಸ್ವಾಹಾ
ಎಂದು ಹೇಳುತ್ತಾ ಬಾಯಿಗೆ ಹಾಕಿಕೊಳ್ಳಬೇಕು.
ಪ್ರತಿಯೊಂದು ಆಹುತಿಗೂ ನಿದಿ೯ಷ್ಟವಾದ ಫಲವಿದೆ.
ಈ ವೈಶ್ವಾನರ ದಶ೯ನವನ್ನು ಅರಿತುಕೊಳ್ಳದೆ ಅಗ್ನಿಹೋತ್ರವನ್ನು ಮಾಡಿದರೆ ಅದು ಕೆಂಡವಿಲ್ಲದ ಬೂದಿಯಲ್ಲಿ ಹೋಮಮಾಡಿದಂತಾಗುವುದು.ಇದನ್ನು ಅರಿತುಕೊಂಡು ಹೋಮ ಮಾಡುವವನ ಆಹುತಿಯು ಸವ೯ಲೋಕಗಳಲ್ಲಿಊ ಸವ೯ ಸವ೯ಪ್ರಾಣಿಗಳಲ್ಲಿಯೂ ಸವ೯ ಆತ್ಮರಲ್ಲಿಯೂ ಹುತವಾಗುವುದು.ಇವನ ಧಮ೯ ಅಧಮ೯ಗಳೆಲ್ಲ ನಾಶವಾಗಿ ,ಪ್ರಾರಬ್ಧ ಕಮ೯ವು ಮುಗಿದ ಮೇಲೆ ವೈಶ್ವಾನರನನ್ನೇ ಪಡೆದು ಕೊಳ್ಳುತ್ತಾನೆ.(ಪುಟ 17)
ಆರನೆಯ ಅಧ್ಯಾಯ:
66)ಐದನೆಯ ಅಧ್ಯಾಯದಲ್ಲಿ ಪ್ರಾಣೋಪಾಸಕನು ಊಟ ಮಾಡಿದರೆ ಜಗತ್ತೆಲ್ಲವೂ ತೃಪ್ತವಾಗುತ್ತದೆ ಎಂದು ಹೇಳಿದ್ದಾಯಿತು.ಆತ್ಮನು ಏಕಮಾತ್ರನಾಗಿದ್ದರೆ ಮಾತ್ರ ಇದು ಸಾಧ್ಯವೇ ಹೊರತು ಆತ್ಮನು ಅನೇಕರಾಗಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.ಆದುದರಿಂದ ಆತ್ಮನ ಏಕತ್ವವನ್ನು ಪ್ರತಿಪಾದಿಸಲು ಆರನೆಯ ಅಧ್ಯಾಯವು ಪ್ರಾರಂಭವಾಗಿದೆ.(ಪುಟ 17 ಮುನ್ನುಡಿ)
67)ಇಲ್ಲಿ ತತ್ವೋಪದೇಶವೇ ಮುಖ್ಯವಾಗಿರುವುದರಿಂದ ಈ ಭಾಗವು ಛಾಂದೊಗ್ಯ ಉಪನಿಷತ್ತಿನಲ್ಲೆಲ್ಲ
ಅತ್ಯಂತ ಮುಖ್ಯವೆಂದು ಹೇಳಬಹುದು.ಈ ಅಧ್ಯಾಯಕ್ಕೆ ಹದಿನಾರು ಖಂಡಗಳಿವೆ.(ಪುಟ 17 ಮುನ್ನುಡಿ)
68)ಶ್ವೇತಕೇತುವು ಹನ್ನೆರಡು ವಷ೯ಗಳವರೆಗೆ ವೇದಗಳನ್ನೆಲ್ಲ ಅಧ್ಯಯನ ಮಾಡಿದನು.ಆದರೆ ಅವನು ನಿರಹಂಕಾರಿಯೂ ವಿನೀತ ಸ್ವಭಾವದವನೂ ಆಗಲಿಲ್ಲ.ತನ್ನ ಮಗನ ಮನಸ್ಸನ್ನು ಅರಿತುಕೊಂಡ ಉದ್ಧಾಲಕ ಅರುಣಿಯು ಅವನನ್ನು ಹೀಗೆ ಪ್ರಶ್ನಿಸಿದನು.'ಯಾವುದರಿಂದ ಅಶ್ರುತವು ಶ್ರುತವಾಗುವುದೊ,ಅಮತವು ಮತವಾಗುವುದೊ,,ಅವಿಜ್ಞಾತವು ಜ್ಞಾತವಾಗುವುದೊ ಆ ಆದೇಶವನ್ನು ಕೇಳಿದೆಯಾ?'.ಶ್ವೇತಕೇತುವಿಗೆ ಆ ಆದೇಶವು ತಿಳಿದಿರಲಿಲ್ಲ.ವೇದಗಳನ್ನೆಲ್ಲ ಅಧ್ಯಯನ ಮಾಡಿದ್ದರೂ ಆತ್ಮತತ್ವವನ್ನು ತಿಳಿದುಕೊಳ್ಳದ್ದರಿಂದ ಅವನು ಅಕೃತಾಥ೯ನಾಗಿಯೇ ಇದ್ದನು.ಅನಂತರ ಉದ್ಧಾಲಕನು 1)ಮಣ್ಣಿನ ಮುದ್ದೆ2) ಚಿನ್ನದ ಗಟ್ಟಿ 3) ಕಬ್ಬಿಣದ ಉಗುರು ಕತ್ತರಿ ಎಂಬ ಮೂರು ದೃಷ್ಟಾಂತಗಳಿಂದ ಕಾಯ೯ಕಾರಣಗಳ ಅಭೇದವನ್ನು ತಿಳಿಸುತ್ತಾನೆ.ಗಡಿಗೆ ಮುಂತಾದುವಕ್ಕೆ ಮಣ್ಣು ಮುದ್ಧೆಯು ಕಾರಣವಾಗಿದೆ.ಕಾಯ೯ವೂ ಕಾರಣವೂ ಅನನ್ಯವಾಗಿರುವುದರಿಂದ ಒಂದನ್ನು ಅರಿತುಕೊಂಡರೆ ಇನ್ನೊಂದನ್ನು ಅರಿತುಕೊಂಡಂತೆ ಆಗುವುದು.(ಪುಟ 18 ಮುನ್ನುಡಿ)
68) ವಸ್ತುವಿನ ಪರಿಣಾಮವು ವಾಕ್ಕನ್ನು ಅವಲಂಬಿಸಿರುವ ಹೆಸರೇ.(ಪುಟ 18 ಮುನ್ನುಡಿ)
6೯) 'ಇದು ಕಾರಣ.ಇದು ಅದರ ಪರಿಣಾಮ'ಎಂಬ ಲೋಕವ್ಯವಹಾರಕ್ಕೆ ಇದು ಉತ್ತರ.(ಪುಟ 18ಮುನ್ನುಡಿ).
70)ಸೃಷ್ಟಿಗೆ ಮೊದಲು ಈಜಗತ್ತು ಏಕವಾದ ಸತ್ಸ್ವರೂಪವೇ ಆಗಿತ್ತು.ಆ ಸದ್ವಸ್ತುವು ತಾನು ಬಹುವಾಗುವೆನೆಂದು ಸಂಕಲ್ಪಿಸಿ ತೇಜಸ್ಸನ್ನು ಸೃಷ್ಟಿಸಿತು.ಅನಂತರ ತೇಜಸ್ಸಿನಿಂದ ನೀರೂ ,ನೀರಿನಿಂದ ಪೃಥ್ವಿಯೂ ಸೃಷ್ಟಿಸಲ್ಪಟ್ಟವು.
71) ಈ ತೇಜೋಬನ್ನ ಕಾಯ೯ವಾದ (ಎಂದರೆ ತೇಜಸ್ಸು,ನೀರು.ಪೃಥ್ವಿ ಇವುಗಳ ಕಾಯ೯ವಾದ)ಭೂತಗಳಲ್ಲಿ ಮೂಲಕಾರಣವಾದ ಸದ್ವಸ್ತುವು ಜೀವರೂಪದಿಂದ ಪ್ರವೇಶಿಸಿ ನಾಮ ರೂಪಗಳನ್ನು ವಿಂಗಡಿಸಿತು.ಹೀಗೆ ನಾಮರೂಪಗಳನ್ನು ವಿಂಗಡಿಸುವಾಗ ತೇಜೋ ಬನ್ನಾದಿಗಳಲ್ಲಿ ಒಂದೊಂದನ್ನೂ ಮೂರು ಮೂರಾಗಿ ಮಾಡಿತು.ಇದಕ್ಕೆ ತ್ರಿವೃತ್ಕರಣವೆಂದು ಹೆಸರು. ತ್ರಿವೃತ್ಕರಣದಲ್ಲಿ ಒಂದು ಭೂತದ ಅಂಶವು ಹೆಚ್ಚಾಗಿಯೂ ಉಳಿದ ಎರಡು ಭೂತಗಳ ಅಂಶವು ಕಡಿಮೆಯಾಗಿಯೂ ಇರುತ್ತವೆ.(ಪುಟ 18 ಮುನ್ನುಡಿ).
72) ಎಲ್ಲವೂ ಸದ್ವಸ್ತುವಿನ ವಿಕಾರವಾದ್ದರಿಂದ ಸದ್ವಸ್ತುವನ್ನು ಅರಿತುಕೊಂಡರೆ ಎಲ್ಲವನ್ನೂ ಅರಿತುಕೊಂಡಂತೆ ಆಗುವುದು.(ಪುಟ 18 ಮುನ್ನುಡಿ)
73)ಹೀಗೆ ಪ್ರತಿಯೊಂದು ವಸ್ತುವೂ ತ್ರಿವೃತ್ಕøತವಾಗಿದೆ.(ಪುಟ 18 ಮುನ್ನುಡಿ )
74) ಆದುದರಿಂದ ಎಲ್ಲಾ ಭೇದಗಳಿಗೂ ವಿಕಾರಗಳಿಗೂ ನಾಮಗಳಿಗೂ ಸದ್ವಸ್ತುವೇ ಆಧಾರವಾಗಿದೆ.(ಪುಟ 1೯ ಮುನ್ನುಡಿ)
75)ಮನುಷ್ಯನು ಹೇಗೆ ಹದಿನಾರು ಕಲೆಗಳುಳ್ಳವನು ಎಂಬುದನ್ನು ಹೇಳಿದೆ.(ಪುಟ 1೯ ಮುನ್ನುಡಿ)
76)ಎಂಟನೆಯ ಖಂಡ:ಜೀವನು ಮನೋಮಯನಾಗಿರುವುದರಿಂದ ಶ್ರವಣ-ಮನನಗಳು ಸಾಧ್ಯ.ಮನಸ್ಸು ಸುಷುಪ್ತಿಯಲ್ಲಿ ಉಪರತಿಯನ್ನು ಹೊಂದಿದಾಗ ಜೀವನು ಪರಮಾತ್ಮ ಸ್ವರೂಪವನ್ನು ¥ಡೆದು ಕೊಳ್ಳುತ್ತಾನೆ ಎಂಬುದನ್ನು ಎಂಟನೆಯ ಖಂಡದಲ್ಲಿ ಹೇಳಿದೆ.(ಪುಟ 1೯ ಮುನ್ನುಡಿ)
77)ಮನುಷ್ಯನು ಯಾವಾಗ ನಿದ್ರಿಸುತ್ತಾನೆ ಎನ್ನಿಸಿಕೊಳ್ಳುವನೊ ಆಗ ಪರದೇವತೆಯೊಂದಿಗೆ ಏಕೀಭೂತನಾಗಿರುತ್ತಾನೆ.ಸ್ವರೂಪವನ್ನು ಹೊಂದಿರುತ್ತಾನೆ.ಆದುದರಿಂದ ಇವನನ್ನು 'ಸ್ವಪಿತಿ' ಎನ್ನುತ್ತಾರೆ.(ಪುಟ 1೯ ಮುನ್ನುಡಿ)
78)ದಾರದಿಂದ ಕಟ್ಟಲ್ಪಟ್ಟಿರುವ ಪಕ್ಷಿಯು ದಿಕ್ಕುದಿಕ್ಕಿಗೆ ಹಾರಾಡಿ ಮತ್ತೆಲ್ಲಿಯೂ ಆಶÀ್ರಯವನ್ನು ಪಡೆಯದೆ
,ತನ್ನನ್ನು ಬಂಧಿಸಿರುವ ಸ್ಥಳಕ್ಕೇ ಹೇಗೆ ಬರುವುದೊ ಹಾಗೆಯೆ ಮನಸ್ಸೆಂಬ ಉಪಾಧಿಯನ್ನು ಪಡೆದು ಜೀವನು ಸುಷುಪ್ತಿಯಲ್ಲಿ ಪರದೇವತೆಯನ್ನೇ ಸೇರಿಕೊಳ್ಳುತ್ತಾನೆ.(ಪುಟ 1೯ ಮುನ್ನುಡಿ)
2೯)ಸಾಯುತ್ತಿರುವ ಮನುಷ್ಯನಲ್ಲಿ ವಾಕ್ಕು ಮನಸ್ಸಿನಲ್ಲಿಯೂ ,ಮನಸ್ಸು ಪ್ರಾಣದಲ್ಲಿಯೂ,ಪ್ರಾಣವು ತೇಜಸ್ಸಿನಲ್ಲಿಯೂ ,ತೇಜಸ್ಸು ಪರದೇವತೆಯಲ್ಲಿಯೂ ಉಪಸಂಹೃತವಾಗುತ್ತದೆ.ಮುಕ್ತನಾದವನು ಹಿಂತಿರುಗುವುದಿಲ್ಲ.ಆದರೆ ಅಜ್ಞಾನಿಯು -ನಿದ್ರೆಯಿಂದ ಎಚ್ಚರಗೊಂಡವನಂತೆ -ತನ್ನ ಮೂಲವಾದ ಸದ್ವಸ್ತುವಿನಿಂದ ಪುನಃ ದೇಹಜಾಲವನ್ನು ಪಡೆಯುತ್ತಾನೆ.(ಪುಟ 1೯ ಮುನ್ನುಡಿ)
80)ಯಾವುದು ಸೂಕ್ಷ್ಮತಮವಾದ ಜಗನ್ಮೂಲವೊ ಅದರಿಂದಲೇ ಈ ಜಗತ್ತೆಲ್ಲವೂ ಆತ್ಮವಂತವಾಗಿದೆ.ಅದೇ ಸತ್ಯವು,ಅದೇ ಆತ್ಮನು.'ಓ ಶ್ವೇತಕೇತು ಅದೇ ನೀನಾಗಿರುವೆ' ಎಂದು ಉದ್ಧಾಲPನು ಮಗನಿಗೆ ಹೇಳುತ್ತಾನೆ.(ಪುಟ 1೯ ಮುನ್ನುಡಿ)
81)ಜೇನು ಹುಳುಗಳು ನಾನಾ ವೃಕ್ಷಗಳ ದಸಗಳನ್ನು ಶೇಖರಿಸುತ್ತವೆ.ಆದರೆ ಆ ರಸಗಳು 'ನಾನು ಆಮರದ ರಸ ನಾನು ಈಮರದ ರಸ' ಎಂಬ ವಿವೇಕವನ್ನು ಪಡೆದಿರುವುದಿಲ್ಲ. ಹಾಗೆಯೇ ಈ ಪ್ರಾಣಿಗಳೆಲ್ಲ ಸದ್ವಸ್ತುವಿನಲ್ಲಿ ಲಯವಾಗಿ ನಾವು ಸದ್ವಸ್ತುವಿನಲ್ಲಿ ಲಯವಾಗಿದ್ದೇವೆ ಎಂದು ಅರಿಯವು.(ಪುಟ 20 ಮುನ್ನುಡಿ)
82) ಹಾಗೆಯೇ ನದಿಗಳು ಬೇರೆ ಬೇರೆ ದಿಕ್ಕುಗಳಿಗೆ ಹರಿದು ಸಮುದ್ರದಲ್ಲಿ ಒಂದಾಗುತ್ತವೆ.ಅವು ಸಮುದ್ರವನ್ನು ಸೇರಿದಾಗ 'ನಾನು ಗಂಗೆ ನಾನು ಯಮುನೆ' ಎಂಬುದನ್ನು ಅರಿಯವು.(ಪುಟ 21 ಮುನ್ನುಡಿ)
83)ಇದೇ ರೀತಿಯಲ್ಲಿ ಜೀವನು ಶರೀರವನ್ನು ಬಿಟ್ಟರೆ ಅದು ಒಣಗಿ ಸಾಯುತ್ತದೆ.ಜೀವನು ಸಾಯುವುದಿಲ್ಲ.(ಪುಟ 21 ಮುನ್ನುಡಿ)
84)ಅನಂತರ ಶ್ವೇತಕೇತುವು ಅತ್ಯಂತ ಸೂಕ್ಷ್ಮವೂ ನಾಮರಹಿತವೂ ಆದಸದ್ವಸ್ತುವಿನಿಂದ ಅತ್ಯಂತ ಸ್ಥೂಲವೂ ಆದ ಪೃಥಿವ್ಯಾದಿ ನಾಮರೂಪಗಳಗುಳ್ಳದ್ದೂ ಆದ ಈ ಜಗತ್ತು ಹೇಗೆ ಉಂಟಾಯಿತೆಂದು ಪ್ರಶ್ನಿಸುತ್ತಾನೆ.
ಮೂರು ಉದಾಹರಣೆಗಳು:
1)ಆಲದ ಮರದ ಹಣ್ಣಿನ ಉದಾಹರಣೆ:ಆಲದ ಮರದ ಬೀಜದಿಂದ ದೊಡ್ಡ ಆಲದಮರ ಉಂಟಾಗುವುದು.
2) ಉಪ್ಪು -ನೀರಿನ ಉದಾಹರಣೆ:ನೀರಿಗೆ ಉಪ್ಪನ್ನು ಹಾಕಿದರೆ ಕರಗಿ ಹೋಗುತ್ತದೆ.ಅದನ್ನು ನೀರಿನಿಂದ ತೆಗೆಯಲು ಆಗುವುದಿಲ್ಲ.ಆದರೆ ಆ ನೀರನ್ನು ಯಾವುದೇ ಭಾಗದಿಂದ ಸವಿದರೂ ಎಲ್ಲೆಲ್ಲಿಯೂ ಉಪ್ಪೇ ಆಗಿರುತ್ತದೆ.ಹಾಗೆಯೇ ಜಗನ್ಮೂಲವಾದ ಸದ್ವಸ್ತುವು ನಮ್ಮ ಶರೀರದಲ್ಲಿದೆ.ಇಂದ್ರಿಯಗಳಿಗೆ ಗೋಚರವಾಗುವುದಿಲ್ಲ.ಆದರೆ ಬೇರೊಂದು ಉಪಾಯದಿಂದ ಈ ಜಗನ್ಮೂಲವನ್ನು ಕಂಡು ಹಿಡಿಯಬಹುದು.
3)ಗಾಂಧಾರ ದೇಶದವನ ಕಥೆ: ಗಂಧಾರದೇಶದ ಮನುಷ್ಯನೊಬ್ಬನನ್ನು ಕಣ್ಣು ಕಟ್ಟಿ ಕರೆತಂದು ಅವನನ್ನು ಒಂದು ನಿಜ೯ನ ಪ್ರದೇಶದಲ್ಲಿ ಬಿಟ್ಟರು.ಅವನು ಅರಚಿಕೊಳ್ಳುತ್ತಾ ಸಹಾಯವನ್ನು ಬೇಡುತ್ತಿದ್ದನು.ಆಗ ಕಾರುಣಿಕನಾದ ಗುರುವೊಬ್ಬನು ಅವನ ಕಣ್ಣುಗಳ ಕಟ್ಟನ್ನು ಬಿಚ್ಚಿ ಗಂಧಾರದೇಶದ ದಿಕ್ಕನ್ನು ತೋರಿಸಿದನು.ಹಾಗೆಯೇ ಈ ಸಂಸಾರದಲ್ಲಿ ಅಜ್ಞಾನಿಯಾದವನು ಆಚಾಯ೯ನ ಉಪದೇಶದಿಂದ ಆತ್ಮನನ್ನು ಅರಿತುಕೊಳ್ಳುತ್ತಾನೆ.(ಪುಟ 22 ಮುನ್ನುಡಿ)
85)ಹಾಗೆಯೇ ಪ್ರಾರಬ್ಧ ಕಮ೯ವು ನಾಶವಾದ ಮೇಲೆ ಅವನು ಸದ್ವಸ್ತುವಿನಲ್ಲಿಯೇ ಸೇರಿಕೊಂಡು ಮುಕ್ತನಾಗುತ್ತಾನೆ.(ಪುಟ 22 ಮುನ್ನುಡಿ)
86)ಹದಿನೈದನೆಯ ಖಂಡ:ಇಲ್ಲಿ ಮುಮುಕ್ಷುವು ಸದ್ವಸ್ತುವಿನಲ್ಲಿ ಸೇರುವ ಕ್ರಮವನ್ನು ಉಪದೇಶಿಸಿದೆ.(ಪುಟ 22 ಮುನ್ನುಡಿ)
87)ಅಜ್ಞಾನಿಯು ತನ್ನ ಹಿಂದಿನ ಕಮ೯ದ ಪ್ರಕಾರ ಪುನಃ ಹುಟ್ಟುತ್ತಾನೆ.ಜ್ಞಾನಿಯು ಶಾಸ್ತ್ರಾಚಾಯ೯ರ ಉಪದೇಶದಿಂದ ಸದ್ಬ್ರಹ್ಮವನ್ನು ಪ್ರವೇಶಿಸಿ ಪುನಃ ಹುಟ್ಟುವುದಿಲ್ಲ.(ಪುಟ 22 ಮುನ್ನುಡಿ)
88)ಉದ್ಧಾಲಕನು ಶೇತಕೇತುವಿಗೆ 'ಅದೇ ನೀನಾಗಿರುವೆ'(ತತ್ವಮಸಿ)(ತತ್ ತ್ವಮ್ -ಅಸಿ) ಎಂದು ಹೀಗೆ ಉದಾಹರಣೆಗಳ ಮೂಲಕ ಉಪದೇಶಿಸುತ್ತಾನೆ.(ಪುಟ 23 ಮುನ್ನುಡಿ)
ಏಳನೆಯ ಅಧ್ಯಾಯ:
8೯)ಪರಮಾಥ೯ ತತ್ವವೇ ಪ್ರಧಾನವಾಗಿದ್ದ ಆರನೆಯ ಅಧ್ಯಾಯದಲ್ಲಿ ಬ್ರಹ್ಮ-ಜೀವರ ಏಕತ್ವವು ನಿಣ೯ಯಿಸಲ್ಪಟ್ಟಿತು.(ಪುಟ 23 ಮುನ್ನುಡಿ)
೯0)ಶಾಖಾ ಚಂದ್ರ ನ್ಯಾಯದಲ್ಲಿ ಶಾಖೆಯನ್ನು ನೆಪಮಾಡಿಕೊಂಡು ಚಂದ್ರನನ್ನು ನಿದೇ೯ಶಿಸುವಂತೆ ನಾಮಾದಿ ತತ್ವಗಳನ್ನು 'ಭೂಮ'ಎಂಬ ಹೆಸರಿನ ನಿರತಿಶಯ ತತ್ವವನ್ನು ಉಪದೇಶಿಸಲು ಏಳನೆಯ ಅಧ್ಯಾಯವನ್ನು ಪ್ರಾರಂಭಿಸಿದೆ.(ಪುಟ 23 ಮುನ್ನುಡಿ)
೯1)ಏಕೆಂದರೆ ಸದ್ವಸ್ತುವಿಗಿಂತ ಈಚೆಯಿರುವ ತತ್ವಗಳನ್ನು ನಿದೇ೯ಶಿಸದೆ ಸದ್ವಸ್ತುವೊಂದನ್ನೇ ಉಪದೇಶಿಸಿದರೆ ಇನ್ನೂ ಯಾವುದೊ ಒಂದು ತತ್ವವು ಅವಿಜ್ಞಾತವಾಗಿರಬಹುದೆಂಬ ಸಂದೇಹವುಂಟಾಗಬಹುದು.(ಪುಟ 23 ಮುನ್ನುಡಿ)
೯2)ನಾರದ -ಸನತ್ಕುಮಾರರ ಆಖ್ಯಾಯಿಕೆಯು ಪರವಿದ್ಯೆಯ ಸ್ತುತಿಗಾಗಿ ಬಂದಿದೆ.ದೇವಷಿ೯ಯಾದ ನಾರದನು ಸವ೯ವಿದ್ಯೆಗಳನ್ನು ಅರಿತುಕೊಂಡಿದ್ದರೂ ಆತ್ಮನನ್ನು ಅರಿತುಕೊಳ್ಳದೆ ಇರುವುದರಿಂದ ಶೋಕಿಸುತ್ತಿದ್ದನು.ನಾರದನ ಅವಸ್ಥೆಯೇ ಹೀಗಿರುವಾಗ ಅಲ್ಪಜ್ಞನೂ ಪುಣ್ಯರಹಿತನೂ ಅಕೃತಕೃತ್ಯನೂ ಆದ ಸಂಸಾರಿ ಜೀವನ ದುಃಖವನ್ನು ವಿವರಿಸಬೇಕಾಗಿಲ್ಲ.(ಪುಟ 23 ಮುನ್ನುಡಿ)
೯3)ನಾರದನು ಬ್ರಹ್ಮವಿದ್ಯೆಯನ್ನು ಕಲಿಯಲು ಸನತ್ಕುಮಾರನ ಬಳಿಗೆ ಬಂದಾಗ,ಅವನು ಕಲಿತೆದ್ದೆಲ್ಲಾ ನಾಮವೆಂದೂ ,ನಾಮವನ್ನೇ ಬ್ರಹ್ಮವೆಂದು ಉಪಾಸಿಸಬೇಕೆಂದು ಸನತ್ಕುಮಾರನು ಹೇಳುತ್ತಾನೆ.ಆಗ ನಾರದನು ನಾಮಕ್ಕಿಂತ ಅಧಿಕವಾದುದು ಇದೆಯೇ ?ಎಂದು ಕೇಳಲು ಅದಕ್ಕಿಂತ ವಾಕ್ಕು ಹೆಚ್ಚಿನದೆಂದು ಹೇಳುತ್ತಾನೆ.ಹೀಗೆಯೇ ನಾಮ,ವಾಕ್ಕು ಮನಸ್ಸು,ಸಂಕಲ್ಪ ,ಚಿತ್ತ,ಧ್ಯಾನ,ವಿಜ್ಞಾನ,ಅನ್ನ,ನೀರು ತೇಜಸ್ಸು,ಆಕಾಶ,ಸ್ಮøತಿ,ಆಶೆ,ಪ್ರಾಣ-ಇವು ಒಂದಕ್ಕಿಂತ ಒಂದು ಅಧಿಕವಾದುದೆಂದೂ ,ಪ್ರತಿಯೊಂದನ್ನೂ ಬ್ರಹ್ಮವೆಂದು ಉಪಾಸಿಸಬೇಕೆಂದೂ ಹೇಳುತ್ತಾನೆ. (ಪುಟ 23 ಮುನ್ನುಡಿ)
೯4)ಪ್ರಾಣಾತ್ಮವಾದಿಯು ನಿಜವಾದ ಅತಿವಾದಿಯಲ್ಲ.ಯಾವನು 'ಭೂಮ' ಎಂಬ ಹೆಸರಿನ ಎಲ್ಲವನ್ನೂ ಅತಿಕ್ರಮಿಸಿರುವ ಪರಮಾಥ೯ ತತ್ವವನ್ನು ಅರಿತಿರುವನೋ ಅವನೇ ನಿಜವಾದ ಅತಿವಾದಿ.(ಪುಟ 24 ಮುನ್ನುಡಿ)
೯5) ಪರಮಾಥ೯ ತತ್ವವನ್ನು ಅರಿತುಕೊಳ್ಳುವುದೇ ವಿಜ್ಞಾನವು.(ಪುಟ 24 ಮುನ್ನುಡಿ)
೯6)ವಿಜ್ಞಾನಕ್ಕೆ ಮನನವೂ ,ಮನನಕ್ಕೆ ಶ್ರದ್ಧೆಯೂ,,ಶ್ರದ್ಧೆಗೆ ನಿಷ್ಠೆಯೂ,,ನಿಷ್ಠೆಗೆ ಇಂದ್ರಿಯ ಸಂಯಮವೂ,ಇಂದ್ರಿಯ ಸಂಯಮಕ್ಕೆ ಸುಖವೂ ಆಶ್ರಯವಾಗಿರುತ್ತದೆ.(ಪುಟ 24 ಮುನ್ನುಡಿ)
೯7)ಆ ಸುಖವು ಭೂಮವು.ಅಲ್ಪದಲ್ಲಿ ಸುಖವಿಲ್ಲ.ಭೂಮವನ್ನೇ ತಿಳಿದುಕೊಳ್ಳಲು ಬಯಸಬೇಕು.(ಪುಟ 24 ಮುನ್ನುಡಿ)
೯8) 'ಎಲ್ಲಿ ಬೇರೊಂದನ್ನು ನೋಡುವುದಿಲ್ಲವೊ,ಬೇರೊಂದನ್ನು ಕೇಳುವುದಿಲ್ಲವೊ,ಬೇರೊಂದನ್ನು ಅರಿಯುವುದಿಲ್ಲವೊ ಅದೇ ಭೂಮವು'ಎಂದು ಸನತ್ಕುಮಾರನು ಉಪದೇಶಿಸುತ್ತಾನೆ.(ಪುಟ 24 ಮುನ್ನುಡಿ)
೯೯) ಭೂಮವು ಯಾವುದರಲ್ಲಿ ಪ್ರತಿಷ್ಠಿತವಾಗಿದೆಯೆಂದು ನಾರದನು ಕೇಳುತ್ತಾನೆ.'ತನ್ನ ಮಹಿಮೆಯಲ್ಲಿ' ಎನ್ನಬಹುದು.ಆದರೆ ಭೂಮವು ತನ್ನ ಮಹಿಮೆಯಲ್ಲಿಯೂ ಪ್ರತಿಷ್ಠಿತವಾಗಿಲ್ಲವೆಂಬುದು ಉತ್ತರ.ಭೂಮಕ್ಕೆ ನಿಜವಾಗಿ ಯಾವ ಪ್ರತಿಷ್ಠೆಯೂ ಇಲ್ಲ.ಆ ಭೂಮವೇ ಮೇಲೆ ಕೆಳಗೆ, ಎಲ್ಲೆಲ್ಲಿಯೂ ಇದೆ.ಅದೇ ಎಲ್ಲೆಲ್ಲಿಯೂ ನಾನು ಎಂದು ಕರೆಸಿಕೊಳ್ಳತಕ್ಕದ್ದು.ಆದರೆ ಅವಿವೇಕಿಗಳು ಅರಿಯು 'ನಾನು'ಎಂಬ ದೇಹಾದಿ ಸಂಘಾತವಲ್ಲ.ಕೇವಲ ಸದ್ರೂಪನಾದ ಆತ್ಮನೇ ಭೂಮವು.ಹೀಗೆ ಅರಿತುಕೊಂಡವನು 'ಸ್ವರಾಟ್' ಆಗುತ್ತಾನೆ. ಅವನಿಗೆ ಸವ೯ಲೋಕಗಳಲ್ಲಿಯೂ ಸ್ವಚ್ಛಂದ ಗತಿಯಿರುತ್ತದೆ.ಇದಕ್ಕಿಂತ ಬೇರೆಯಾಗಿ ಅರಿತುಕೊಂಡವರು ಕ್ಷರವಾದ ಲೋಕಗಳಲ್ಲಿ ವಾಸಿಸುತ್ತಾರೆ.ಇಲ್ಲಿಗೆ ಇಪ್ಪತ್ತೈದನೆಯ ಖಂಡವು ಮುಗಿಯುತ್ತದೆ.(ಪುಟ 25 ಮುನ್ನುಡಿ)
100)ಹೀಗೆ ಸಮಸ್ತ ವ್ಯವಹಾರವೂ ಸ್ವಾರಾಜ್ಯವನ್ನು ಹೊಂದಿದ ಜ್ಞಾನಿಗೆ ತನ್ನ ಆತ್ಮನಿಂದಲೇ ಉಂಟಾಗುತ್ತಿರುವುದು.ಇಂಥ ತತ್ವವಿದನಿಗೆ ಮೃತ್ಯು ರೋಗ, ದುಃಖ ಮೊದಲದ ಅನಥ೯ಗಳೂ ಇರುವುದಿಲ್ಲ.ಅವನು ಎಲ್ಲವೂ ಆಗಿ ಎಲ್ಲವನ್ನೂ ಪಡೆದುಕೊಳ್ಳುತ್ತಾನೆ.ಸೃಷ್ಟಿಗೆ ಮೊದಲು ಅವನು ಅದ್ವಯನಾಗಿದ್ದರೂ ಅನಂತರ ಸ್ವಲ್ಪಕಾಲದಲ್ಲಿ ನಾನಾ ಬಗೆಯಾಗಿ ತೋರಿಕೊಂಡು ಪುನಃ ಸಂಹಾರಕಾಲದಲ್ಲಿ ಮೂಲವಾಗಿರುವ ತನ್ನ ಪಾರಮಾಥಿ೯ಕ ಅದ್ವಯ ಭಾವವನ್ನೇ ಪಡೆಯುತ್ತಾನೆ.(ಪುಟ25 ಮುನ್ನುಡಿ)
101)ಇಂಥ ಜ್ಞಾನವನ್ನು ಪಡೆಯಲು ಆಹಾರಶುದ್ದಿಯು ,ಎಂದರೆ ರಾಗದ್ವೇಷ ಮೋಹಗಳೆಂಬ ದೋಷಗಳಿಲ್ಲದ ವಿಷಯ ಜ್ಞಾನವು ಅತ್ಯಾವಶ್ಯಕವಾಗಿದೆ.ಆಹಾರವು ಶುದ್ಧಿಯಾದಾಗ ಅಂತಃಕರಣವು
ಶುದ್ಧಿಯಾಗುತ್ತದೆ.ಅಂತಃಕರಣವು ಶುದ್ಧವಾದಾಗ ಭೂಮಾತ್ಮನಲ್ಲಿ ಧ್ರುವವಾದ ಸ್ಮøತಿಯುಂಟಾಗುತ್ತದೆ.
(ಪುಟ 25 ಮುನ್ನುಡಿ)
102)ಸನತ್ಕುಮಾರನನ್ನು ಸ್ಕಂದನೆಂದು ಕರೆಯುgತ್ತಾರೆ.(ಪುಟ 25 ಮುನ್ನುಡಿ)
ಎಂಟನೆಯ ಅಧ್ಯಾಯ:
103) ದಿಕ್ಕು ದೇಶ ಕಾಲಾದಿಗಳಿಲ್ಲದ ಬ್ರಹ್ಮವು ಏಕವೂ ಅದ್ವಿತೀಯವೂ ಆದ ಸದ್ವಸ್ತುವೆಂದು ಹಿಂದಿನ ಎರಡು ಅಧ್ಯಾಯಗಳಲ್ಲಿ ಹೇಳಲ್ಪಟ್ಟಿತು(ಪುಟ 26 ಮುನ್ನುಡಿ)
104)ಆ ಬ್ರಹ್ಮ ಸಾಕ್ಷಾತ್ಕಾರಕ್ಕಾಗಿ ಹೃದಯಪದ್ಮವೆಂಬ ದೇಶವನ್ನು(ಸ್ಥಳವನ್ನು) ಹೇಳಬೇಕಾಗಿದೆ.(ಪುಟ 26 ಮುನ್ನುಡಿ)
105)ಆತ್ಮತತ್ವವು ನಿಗು೯ಣವಾದರೂ ಸಾಮನ್ಯ ಜನರಿಗೆ ಸಗುಣ ಭಾವವು ಇಷ್ಟವಾದ್ದರಿಂದ ಅದು ಸತ್ಯಕಾಮಾದಿ ಗುಣಗಳಿಂದ ಕೂಡಿರುವುದೆಂದು ಉಪದೇಶಿಸ ಬೇಕಾಗಿದೆ.(ಪುಟ 26 ಮುನ್ನುಡಿ)
106)ಬ್ರಹ್ಮವಿದರಿಗೆ ವಿಷಯಗಳಿಂದ ಉಪರತಿಯು ತಾನೇ ಉಂಟಾಗ ಬಹುದಾಗಿದ್ದರೂ ,ಪೂವ೯ಜನ್ಮಗಳ ವಿಷಯ ಸೇವಾಭ್ಯಾಸದಿಂದ ಉಂಟಾದ ವಿಷಯ ತೃಷ್ಣೆಯನ್ನು ಕೂಡಲೇ ತೊಡಗಿಸಲು ಕಷ್ಟವಾದುದರಿಂದ ಬ್ರಹ್ಮಚಯಾ೯ದಿ ಸಾಧನ ವಿಶೇಷವನ್ನು ವಿಧಿಸಬೇಕಾಗಿದೆ.(ಪುಟ 26 ಮುನ್ನುಡಿ)
107)ಗಂತೃ-ಗಮನ-ಗಂತವ್ಯಗಳು(ಹೋಗುವುದು-ಬರುವುದು)ಬ್ರಹ್ಮವಿದನಿಗೆ ಇಲ್ಲದ್ದರಿಂದ ಅವನಿಗೆ ತನ್ನ ಆತ್ಮನಲ್ಲಿಯೇ ಲಯ ಉಂಟಾಗುವುದು.ಆದರೆ ಸಾಮಾನ್ಯ ಜನರಿಗೆ ನೆತ್ತಿಯ ನಾಡಿಯ ಮೂಲಕ ಗತಿಯನ್ನು ಹೇಳಬೇಕಾಗಿದೆ.(ಪುಟ 26 ಮುನ್ನುಡಿ)
108)ಈ ಅಧ್ಯಾಯದಲ್ಲಿ ಒಟ್ಟು ಹದಿನೈದು ಖಂಡಗಳಿವೆ.
ಮೊದಲ ಖಂಡದಲ್ಲಿ 'ದಹರವಿದ್ಯೆ'ಯನ್ನು ಹೇಳಿದೆ. 'ದಹರ'ಎಂದರೆ ಸಣ್ಣ ಎಂದಥ೯.ಬ್ರಹ್ಮಪುರವಾದ ನಮ್ಮ ಶರೀರದಲ್ಲಿ ಹೃದಯಪದ್ಮವೆಂಬ ಮನೆಯಿದೆ.ಅದರಲ್ಲಿರುವ ದಹರಾಕಾಶದಲ್ಲಿ ಯಾವುದಿದೆಯೊ ಅದನ್ನು ಅನ್ವೇಶಿಸಬೇಕು.ಅದನ್ನೇ ಅರಿತುಕೊಳ್ಳಲು ಬಯಸಬೇಕು.ಈ ದಹರಾಕಾಶವೇ ಬ್ರಹ್ಮ.ಬ್ರಹ್ಮಕ್ಕೆ ಆಕಾಶವೆಂಬುದು ಪ್ರಸಿದ್ಧವಾದ ಹೆಸರು.ಹೃದಯದಲ್ಲಿರುವ ಆಕಾಶವನ್ನು ಬ್ರಹ್ಮವೆಂದು ಹೇಳಿರುವುದರಿಂದ ಅದು ಹೃದಯಾಕಾಶದಷ್ಟೇ ಸಣ್ಣದೆಂದು ಭಾವಿಸಬಾರದು.ಇಲ್ಲಿ ದ್ಯುಲೋಕ-ಪೃಥ್ವಿಗಳ ಅಗ್ನಿ ವಯುಗಳು ,ಸೂಯ೯-ಚಂದ್ರರು ಮತ್ತು ಏನೇನಿದೆಯೊ ಏನೇನಿಲ್ಲವೋ(ಕಾಣುವ ಹಾಗೂ ಕಾಣದ)ಎಲ್ಲವೂ ಅಂತಗ೯ತವಗಿವೆ.(ಪುಟ 27 ಮುನ್ನುಡಿ)
10೯)ಶರೀರದ ಮುಪ್ಪಿನಿಂದ ಆಕಾಶವೆಂಬ ಬ್ರಹ್ಮಕ್ಕೆ ಮುಪ್ಪಿಲ್ಲ.(ಪುಟ 27 ಮುನ್ನುಡಿ)
110)ಯಾರು ಇಲ್ಲಿ ಆತ್ಮನನ್ನು ಉಪಾಸಿಸಿ ದೇಹತ್ಯಾಗ ಮಾಡುವರೊ ಅವರು ಸವ೯ಲೋಕಗಳಲ್ಲಿಯೂ
ಸ್ವತಂತ್ರಗತಿಯನ್ನು ಪಡೆಯುತ್ತಾರೆ.ಇದು ಮೊದಲನೆಯ ಖಂಡದ ವಿಷಯ(ಪುಟ 27 ಮುನ್ನುಡಿ)
111)ಎರಡನೆಯ ಖಂಡ:ಇವರು -ಭೂಮಿಯಲ್ಲಿ ಅಡಗಿರುವ ನಿಧಿಯ ಮೇಲೆ ನಡೆಯುತ್ತಿದ್ದರೂ ಅದನ್ನು ಅರಿಯದ ಅಜ್ಞಾನಿಗಳಂತೆ -ಬ್ರಹ್ಮಲೋಕವನ್ನು ಪ್ರತಿದಿನವೂ ಸೇರುತ್ತಿದ್ದರೂ ಅದನ್ನು ಪಡೆದುಕೊಳ್ಳದೆ ಇರುವರು.(ಪುಟ 27 ಮುನ್ನುಡಿ)
112)ಅಪಹತ- ಪಾಪತ್ವವೇ ಮೊದಲಾದ ಗುಣಗಳಿಂದ ಆತ್ಮನು ಹೃದಯದಲ್ಲಿರುತ್ತಾನೆ.(ಪುಟ 27 ಮುನ್ನುಡಿ)
113)ಮೂರನೆಯ ಖಂಡ:ಹೀಗೆ ಸುಷುಪ್ತಿ ಕಾಲದಲ್ಲಿ ಸದ್ವಸ್ತುವಿನೊಂದಿಗೆ ಸಂಪನ್ನನಾದ ಪುರುಷನು ಶರೀರವೆಂಬ ಭಾವನೆಯನ್ನು ಬಿಟ್ಟು ಪರಮಾತ್ಮನ ಲಕ್ಷಣವಾದ ಜ್ಯೋತಿಯನ್ನು ಸೇರಿ ತನ್ನ ಸ್ವರೂಪದಲ್ಲಿಯೇ ನಿಲ್ಲುತ್ತಾನೆ.ಇವನೇ ಆತ್ಮನು,ಅಮೃತ,ಅಭಯ ಬ್ರಹ್ಮ.ಈ ಬ್ರಹ್ಮಕ್ಕೆ ಸತ್ಯವೆಂಬುದು ಹೆಸರು.(ಪುಟ 27 ಮುನ್ನುಡಿ)
114) ನಾಲ್ಕನೆಯ ಖಂಡ: ಈ ಲೋಕಗಳು ನಾಶವಾಗದಿರಲು ಆತ್ಮನು ಸೇತುವಾಗಿದ್ದಾನೆ.(ಪುಟ 28 ಮುನ್ನುಡಿ)
105)ಬ್ರಹ್ಮಲೋಕವು ಸದಾ ಪ್ರಕಾಶಿಸುತ್ತಲೇ ಇರುತ್ತದೆ.ಬ್ರಹ್ಮಲೋಕವನ್ನು ಬ್ರಹ್ಮಚಯ೯ದಿಂದಲೇ ಪಡೆದುಕೊಳ್ಳಬೇಕು.(ಪುಟ 28 ಮುನ್ನುಡಿ)
106) ಈ ಸೇತುವನ್ನು ದಾಟಿದರೆ ತಮೋ ರೂಪವಾದ ರಾತ್ರಿಯೂ ಚೈತನ್ಯ ಜ್ಯೋತಿಯೆಂಬ ಹಗಲೇ ಆಗುತ್ತದೆ.(ಪುಟ 28 ಮುನ್ನುಡಿ)
107)ಯಜ್ಞವೇ ಬ್ರಹ್ಮಚಯ೯ವು.ಏಕೆಂದರೆ ಜ್ಞಾತೃವಾದವನು ಯಜ್ಞಫಲವನ್ನು ಬ್ರಹ್ಮಚಯ೯ದಿಂದಲೇ ಹೊಂದುತ್ತಾನೆ. ಹೀಗೆಯೇ ಇಷ್ಟ,ಸತ್ತ್ರಾಯಣ,ಮೌನ,ಉಪವಾಸ,ಅರಣ್ಯವಾಸ ಇವೂ ಬ್ರಹ್ಮಚಯ೯ವೇ.ಏಕೆಂದರೆ ಇವೆಲ್ಲವೂ ಆತ್ಮಲಾಭಕ್ಕೆ ನಾನಾವಿಧವಾಗಿ ಕಾರಣಗಳಾಗಿರುವುವು.(ಪುಟ 28 ಮುನ್ನುಡಿ)
ಐದನೆಯ ಖಂಡ:
108)ಬ್ರಹ್ಮಲೋಕದಲ್ಲಿ ಅರ ಮತ್ತು ಣ್ಯ ಎಂಬ ಎರಡು ಸರೋವರಗಳಿವೆ.ಐರಂಮದೀಯವೆಂಬ ಸರಸ್ಸಿದೆ.ಸೋಮಸವನವೆಂಬ ಅಶ್ವತ್ಥವಿದೆ.ಅಲ್ಲಿ ಬ್ರಹ್ಮನ ಅಪರಾಜಿತಾ ಎಂಬ ಸರೋವರವಿದೆ.ಅಲ್ಲಿ ಬ್ರಹ್ಮನು ನಿಮಿ೯ಸಿರುವ ಹಿರಣ್ಮಯ ಮಂಟಪವಿದೆ.ಬ್ರಹ್ಮಚಯ೯ವುಳ್ಳ ಉಪಾಸಕರಿಗೆ ಬ್ರಹ್ಮಲೋಕವೂ ಸ್ವತಂತ್ರಗತಿಯೂ ಇರುತ್ತದೆ.(ಪುಟ 28 ಮುನ್ನುಡಿ)
105)ಆತ್ಮತತ್ವವು ನಿಗು೯ಣವಾದರೂ ಸಾಮಾನ್ಯ ಜನರಿಗೆ ಸಗುಣ ಭಾವವು ಇಷ್ಟವಾದ್ದರಿಂದ ಅದು ಸತ್ಯಕಾಮಾದಿ ಗುಣಗಳಿಂದ ಕೂಡಿರುವುದೆಂದು ಉಪದೇಶಿಸ ಬೇಕಾಗಿದೆ.(ಪುಟ 26 ಮುನ್ನುಡಿ)
106)ಬ್ರಹ್ಮವಿದರಿಗೆ ವಿಷಯಗಳಿಂದ ಉಪರತಿಯು ತಾನೇ ಉಂಟಾಗ ಬಹುದಾಗಿದ್ದರೂ ,ಪೂವ೯ಜನ್ಮಗಳ ವಿಷಯ ಸೇವಾಭ್ಯಾಸದಿಂದ ಉಂಟಾದ ವಿಷಯ ತೃಷ್ಣೆಯನ್ನು ಕೂಡಲೇ ತೊಡಗಿಸಲು ಕಷ್ಟವಾದುದರಿಂದ ಬ್ರಹ್ಮಚಯಾ೯ದಿ ಸಾಧನ ವಿಶೇಷವನ್ನು ವಿಧಿಸಬೇಕಗಿದೆ.(ಪುಟ 26 ಮುನ್ನುಡಿ)
107)ಗಂತೃ-ಗಮನ-ಗಂತವ್ಯಗಳು(ಹೋಗುವುದು-ಬರುವುದು)ಬ್ರಹ್ಮವಿದನಿಗೆ ಇಲ್ಲದ್ದರಿಂದ ಅವನಿಗೆ ತನ್ನ ಆತ್ಮನಲ್ಲಿಯೇ ಲಯ ಉಂಟಾಗುವುದು.ಆದರೆ ಸಾಮನ್ಯ ಜನರಿಗೆ ನೆತ್ತಿಯ ನಾಡಿಯ ಮೂಲಕ ಗತಿಯನ್ನು ಹೇಳಬೇಕಾಗಿದೆ.(ಪುಟ 26 ಮುನ್ನುಡಿ)
108)ಈ ಅಧ್ಯಾಯದಲ್ಲಿ ಒಟ್ಟು ಹದಿನೈದು ಖಂಡಗಳಿವೆ.
ಮೊದಲ ಖಂಡದಲ್ಲಿ 'ದಹರವಿದ್ಯೆ'ಯನ್ನು ಹೇಳಿದೆ. 'ದಹರ'ಎಂದರೆ ಸಣ್ಣ ಎಂದಥ೯.ಬ್ರಹ್ಮಪುರವಾದ ನಮ್ಮ ಶರೀರದಲ್ಲಿ ಹೃದಯಪದ್ಮವೆಂಬ ಮನೆಯಿದೆ.ಅದರಲ್ಲಿರುವ ದಹರಾಕಾಶದಲ್ಲಿ ಯಾವುದಿದೆಯೊ ಅದನ್ನು ಅನ್ವೇಶಿಸಬೇಕು.ಅದನ್ನೇ ಅರಿತುಕೊಳ್ಳಲು ಬಯಸಬೇಕು.ಈ ದಹರಾಕಾಶವೇ ಬ್ರಹ್ಮ.ಬ್ರಹ್ಮಕ್ಕೆ ಆಕಾಶವೆಂಬುದು ಪ್ರಸಿದ್ಧವಾದ ಹೆಸರು.ಹೃದಯದಲ್ಲಿರುವ ಆಕಾಶವನ್ನು ಬ್ರಹ್ಮವೆಂದು ಹೇಳಿರುವುದರಿಂದ ಅದು ಹೃದಯಾಕಾಶದಷ್ಟೇ ಸಣ್ಣದೆಂದು ಭಾವಿಸಬಾರದು.ಇಲ್ಲಿ ದ್ಯುಲೋಕ-ಪೃಥ್ವಿಗಳ ಅಗ್ನಿ ವಯುಗಳು ,ಸೂಯ೯-ಚಂದ್ರರು ಮತ್ತು ಏನೇನಿದೆಯೊ ಏನೇನಿಲ್ಲವೋ(ಕಾಣುವ ಹಾಗೂ ಕಾಣದ)ಎಲ್ಲವೂ ಅಂತಗ೯ತವಗಿವೆ.(ಪುಟ 27 ಮುನ್ನುಡಿ)
10೯)ಶರೀರದ ಮುಪ್ಪಿನಿಂದ ಆಕಾಶವೆಂಬ ಬ್ರಹ್ಮಕ್ಕೆ ಮುಪ್ಪಿಲ್ಲ.(ಪುಟ 27 ಮುನ್ನುಡಿ)
110)ಯಾರು ಇಲ್ಲಿ ಆತ್ಮನನ್ನು ಉಪಾಸಿಸಿ ದೇಹತ್ಯಾಗ ಮಾಡುವರೊ ಅವರು ಸವ೯ಲೋಕಗಳಲ್ಲಿಯೂ
ಅವರು ಸವ೯ಲೋಕಗಳಲ್ಲಿಯೂ ಸ್ವತಂತ್ರಗತಿಯನ್ನು ಪಡೆಯುತ್ತಾರೆ.ಇದು ಮೊದಲನೆಯ ಖಂಡದ ವಿಷಯ(ಪುಟ 27 ಮುನ್ನುಡಿ)
111)ಎರಡನೆಯ ಖಂಡ:ಇವರು -ಭೂಮಿಯಲ್ಲಿ ಅಡಗಿರುವ ನಿಧಿಯ ಮೇಲೆ ನಡೆಯುತ್ತಿದ್ದರೂ ಅದನ್ನು ಅರಿಯದ ಅಜ್ಞಾನಿಗಳಂತೆ -ಬ್ರಹ್ಮಲೋಕವನ್ನು ಪ್ರತಿದಿನವೂ ಸೇರುತ್ತಿದ್ದರೂ ಅದನ್ನು ಪಡೆದುಕೊಳ್ಳದೆ ಇರುವರು.(ಪುಟ 27 ಮುನ್ನುಡಿ)
112)ಅಪಹತ- ಪಾಪತ್ವವೇ ಮೊದಲಾದ ಗುಣಗಳಿಂದ ಆತ್ಮನು ಹೃದಯದಲ್ಲಿರುತ್ತಾನೆ.(ಪುಟ 27 ಮುನ್ನುಡಿ)
113)ಮೂರನೆಯ ಖಂಡ:ಹೀಗೆ ಸುಷುಪ್ತಿ ಕಾಲದಲ್ಲಿ ಸದ್ವಸ್ತುವಿನೊಂದಿಗೆ ಸಂಪನ್ನನಾದ ಪುರುಷನು ಶರೀರವೆಂಬ ಭಾವನೆಯನ್ನು ಬಿಟ್ಟು ಪರಮಾತ್ಮನ ಲಕ್ಷಣವಾದ ಜ್ಯೋತಿಯನ್ನು ಸೇರಿ ತನ್ನ ಸ್ವರೂಪದಲ್ಲಿಯೇ ನಿಲ್ಲುತ್ತಾನೆ.ಇವನೇ ಆತ್ಮನು,ಅಮೃತ,ಅಭಯ ಬ್ರಹ್ಮ.ಈ ಬ್ರಹ್ಮಕ್ಕೆ ಸತ್ಯವೆಂಬುದು ಹೆಸರು.(ಪುಟ 27 ಮುನ್ನುಡಿ)
ಆರನೆಯ ಖಂಡ(ನಾಡೀ ಖಂಡ):
114)ಬ್ರಹ್ಮಚಯಾ೯ದಿ ಸಾಧನಗಳಿಂದ ಕೂಡಿ ಅನೃತವಾದ ಬಾಹ್ಯವಿಷಯಗಳಲ್ಲಿ ತೃಷ್ಣೆಯನ್ನು ಬಿಟ್ಟು
ಹೃದಯ ಪುಂಡರೀಕದಲ್ಲಿರುವ ಬ್ರಹ್ಮವನ್ನು ಉಪಾಸಿಸುವವನಿಗೆ ನೆತ್ತಿಯ ಮೂಲಕ ಹೋಗುವ ನಾಡಿಯಿಂದ ಗತಿಯನ್ನು ಹೇಳಲು ಈ ನಾಡೀಖಂಡವನ್ನು ಆರಂಭಿಸಿದೆ. ಹೃದಯದಿಂದ ನೂರೊಂದು ಮಾಡಿಗಳು ಹೊರಟಿವೆ.ಒಂದು ಮಹಾಪಥವು ಎರಡು ಗ್ರಾಮಗಳನ್ನು ಕೂಡಿಸುವಂತೆ ಅದಿತ್ಯನ ರಶ್ಮಿಗಳು ಹೃದಯವನ್ನೂ ಆದಿತ್ಯ ಮಂಡಲವನ್ನೂ ಕೂಡಿಸುತ್ತವೆ.ಜೀವನು ಸುಷುಪ್ತಿ ಕಾಲದಲ್ಲಿ ಈ ನಾಡಿಗಳಲ್ಲಿ ಪ್ರವೇಶಿಸಿ ಹೃದಯಾಕಾಶವನ್ನು ಪ್ರವೇಶಿಸುತ್ತಾನೆ.ಅಲ್ಲಿ ಯಾವ ಪಾಪವೂ ಅವನನ್ನು ಸೋಂಕುವುದಿಲ್ಲ.ಏಕೆಂದರೆ ದೇಹೇಂದ್ರಿಯಗಳಿಂದ ಕೂಡಿರುವವನನ್ನೇ ಪಾಪವು ಸೋಂಕುತ್ತದೆ.ಅದರೆ ಸದ್ವಸ್ತುವಿನಿಂದ ಸಂಪನ್ನನಾದವನಿಗೆ ಇಂಥ ಅನುಭವವುಂಟಾಗುವುದಿಲ್ಲ.(ಪುಟ 2೯ ಮುನ್ನುಡಿ)
115)ಏಳನೆಯ ಖಂಡ:'ಈ ಸಂಪ್ರಸಾದನು ಶರೀರದಿಂದ ಎದ್ದು ಪರಂಜ್ಯೋತಿಯನ್ನು ಸೇರಿ ತನ್ನ
ಸ್ವರೂಪದಲ್ಲಿ ಸ್ಥಿತಿಯನ್ನು ಪಡೆಯುತ್ತಾನೆ. ಇವನೇ ಆತ್ಮನು ಎಂದು ಹೇಳಿದ್ದಾನೆ.(ಪುಟ 2೯ ಮುನ್ನುಡಿ)
116)'ಯಾವ ಆತ್ಮನು ಪಾಪರಹಿತನೂ ...ಸತ್ಯಕಾಮನೂ ಸತ್ಯಸಂಕಲ್ಪನೂ ಆಗಿರುವನೊ ಅವನನ್ನೆ ಅನ್ವೇಶಿಸವೇಕು.ಅವನನ್ನೇ ಅರಿತುಕೊಳ್ಳಲು ಬಯಸಬೇಕು.ಯಾವನು ಈ ಆತ್ಮನನ್ನು ಕಂಡುಹಿಡಿದು ಅರಿತುಕೊಳ್ಳುವನೋ ಅವನು ಸವ೯ಲೋಕಗಳನ್ನೂ ಸವ೯ಕಮ೯ಗಳನ್ನೂ ಪಡೆದುಕೊಳ್ಳುತ್ತಾನೆ.'
ಎಂಬ ಪ್ರಜಾಪತಿಯ ಮಾತನ್ನು ದೇವಾಸುರರು ಕೇಳಿದರು.ಈ ಆತ್ಮವನ್ನು ಅರಿತುಕೊಳ್ಳಲು ದೇವತೆಗಳಲ್ಲಿ ಇಂದ್ರನೂ ಅಸುರರಲ್ಲಿ ವಿರೋಚನನೂ ಸಮಿತ್ಪಾಣಿಯಾಗಿ ಹೊರಟು ಪ್ರಜಾಪತಿಯನ್ನು ಸೇರಿದರು.ಇಲ್ಲಿ ಪ್ರಜಾಪತಿ-ಇಂದ್ರ-ವಿರೋಚನ ಸಂವಾದವು ನಿರೂಪಿಸಲ್ಪಟ್ಟಿದೆ.(ಪುಟ 31 ಮುನ್ನುಡಿ)
117)ಜ್ಞಾನವು ಇಂದ್ರತ್ವಕ್ಕಿಂತಲೂ ಗುರುತರವಾದುದು.(ಪುಟ 31 ಮುನ್ನುಡಿ)
118)ಇಂದ್ರನಿಗೆ ಅವಸ್ಥಾತ್ರಯ ದೋಷದ ಸಂಬಂಧವಿಲ್ಲದ ಮತ್ತು ಅಪಹತಪಾಪ್ಮತ್ವಾದಿ ಲಕ್ಷಣಗಳುಳ್ಳ ಆತ್ಮಸ್ವರೂಪವನ್ನು ಪ್ರಜಾಪತಿಯು ಉಪದೇಶಿಸುತ್ತಾನೆ.(ಪುಟ 31 ಮುನ್ನುಡಿ)
11೯)'ಈ ಶರೀರವು ಮತ್ಯ೯ವೇ,ಮೃತ್ಯುವಿನಿಂದ ಗ್ರಸ್ತವಾಗಿರುತ್ತದೆ.ಇದು ಅಮೃತನೂ ಅಶರೀರನೂ ಆದ ಆತ್ಮನಿಗೆ ಅಧಿಷ್ಠಾನ.ಶರೀರವುಳ್ಳವನು ಪ್ರಿಯಾ ಪ್ರಿಯಗಳಿಂದ ಗ್ರಸ್ತನಾಗಿರುತ್ತಾನೆ.ಅವನಿಗೆ ಪ್ರಿಯಾ ಪ್ರಿಯಗಳ ನಾಶವು ಇಲ್ಲವೇ ಇಲ್ಲ.ಶರೀರವಿಲ್ಲದವನನ್ನು ಪ್ರಿಯಾ ಪ್ರಿಯಗಳು ಸೋಕುವುದೇ ಇಲ್ಲ.'(ಪುಟ 31 ಮುನ್ನುಡಿ)
120)'ನಾನು ಶರೀರವು ಶರೀರವೇ ನಾನು 'ಎಂಬ ಅವಿವೇಕದಿಂದ ತಾದಾತ್ಮ್ಯವನ್ನು ಪಡೆದಿರುವವನು ಶರೀರವುಳ್ಳವನು';ದೇಹಾಭಿಮಾನದಿಂದ ಬಿಡುಗಡೆಯನ್ನು ಹೊಂದಿ ಅಶರೀರ ಸ್ವರೂಪ-ವಿಜ್ಞಾನದಿಂದ ಅವಿವೇಕ ಜ್ಞಾನವನ್ನು ತೊಲಗಿಸಿಕೊಂಡಿರುವವನು 'ಶರೀರವಿಲ್ಲದವನು'(ಪುಟ 32 ಮುನ್ನುಡಿ)
121)ಹನ್ನೆರಡನೆಯ ಖಂಡ:ಅಶರೀರನೂ ಸಂಪ್ರಸಾದ ಗುಣವುಳ್ಳವನೂ ಆದ ಆತ್ಮನು ತನ್ನ ಶರೀರತ್ವವನ್ನು ಬಿಟ್ಟು ಪರಮಾತ್ಮ ಜ್ಯೋತಿಯನ್ನು ಸೇರಿಕೊಂಡು ತನ್ನ ರೂಪದಿಂದ ಕಾಣಿಸಿಕೊಳ್ಳುತ್ತಾನೆ.ಇವನೇ ಉತ್ತಮ ಪುರುಷನು(ಪುಟ 32 ಮುನ್ನುಡಿ)
122) ಮುಕ್ತನು ಸವಾ೯ತ್ಮ ಭಾವವನ್ನು ಹೊಂದಿ ಸವ೯ಕಾಮಗಳನ್ನೂ ಪಡೆಯುತ್ತಾನೆ.(ಪುಟ 32 ಮುನ್ನುಡಿ)
123) ವಿಶೇಷ ಜ್ಞಾನವು ಚಕ್ಷುಸ್ಸೇ ಮೊದಲಾದ ಕರಣಗಳಿಂದ ಉಂಟಾಗುತ್ತಿದ್ದರೂ ಚೈತನ್ಯ ಸ್ವರೂಪವು ಆತ್ಮನದೇ.(ಪುಟ 32 ಮುನ್ನುಡಿ)
124)'ಶ್ಯಾಮಾಚ್ಛಬಲಂ ಪ್ರಪದ್ಯೇ' ಎಂಬ ಪವಿತ್ರವಾದ ಮಂತ್ರವನ್ನು ಧ್ಯನಕ್ಕಾಗಿ ಹೇಳಿದೆ.(ಪುಟ 32 ಮುನ್ನುಡಿ)
125)ಹದಿನಲ್ಕನೆಯ ಖಂಡ: ಆಕಾಶವೆಂಬ ಹೆಸರಿನಿಂದ ಪ್ರಸಿದ್ಧವಾದ ಬ್ರಹ್ಮವು ನಾಮರೂಪಗಳನ್ನು ವಿಂಗಡಿಸುತ್ತದೆ.ನಾಮ ರೂಪಗಳು ಯಾವುದರಲ್ಲಿ ಇವೆಯೊ ಅದು ಬ್ರಹ್ಮವು,ಅಮೃತವು.
126)ಕೊನೆಯ ಮೂರು ಅಧ್ಯಾಯಗಳಲ್ಲಿ ಬ್ರಹ್ಮವಿದ್ಯೆಯು ಸಫಲವೆಂದು ನಿಧ೯ರಿಸಲ್ಪಟ್ಟಿದ್ದgರೂ ಯಜ್ಞಾದಿ ಕಮ೯ಗಳಿಂದ ಯಾವ ಪ್ರಯೋಜನವೂ ಇಲ್ಲವೆಂದು ಭಾವಿಸಬಾರದು.ಅಂಥ ತಪ್ಪು ಜ್ಞಾನವನ್ನು ಪರಿಹರಿಸಲು ಜ್ಞಾನಿಗಳು ಮಾಡುವ ಕಮ೯ಕ್ಕೂ ವಿಶಿಷ್ಟ ಫಲವಿದೆ ಎಂದು ಹೇಳಲಾಗಿದೆ.(ಪುಟ 32 ಮುನ್ನುಡಿ)
127) ಇಲ್ಲಿಯೂ ಕೂಡ ತಾತ್ಪಯ೯ ಟಿಪ್ಪಣಿಗಳು ಶಂಕರ ಭಾಷ್ಯವನ್ನೇ ಅವಲಂಬಿಸಿವೆ.(ಪುಟ 32 ಮುನ್ನುಡಿ)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಮೊದಲನೆಯ ಅಧ್ಯಾಯ:
ಶಾಂತಿಪಾಠ:
ಅಪ್ಯಾಯಂತು ಮಮಾಂಗಾನಿ ವಾಕ್ ಪ್ರಾಣ ಚಕ್ಷುಃ
ಶ್ರೋತ್ರಮಥೋ ಬಲಮಿಂದ್ರಿಯಾಣಿಚ ಸವಾ೯ಣಿ
ಸವ೯ಂಬ್ರಹ್ಮೌಪನಿಷದಂ ಮಾಹಂ ಬ್ರಹ್ಮ ನಿರಾಕುಯಾ೯ಂ
ಮಾ ಮಾ ಬ್ರಹ್ಮನಿರಾಕರೋದನಿರಾಕರಣಮಸ್ತ್ವ ನಿರಾಕರಣಂ
ಮೇಸ್ತು ತದಾತ್ಮನಿ ನಿರತೇಯ ಉಪನಿಷತ್ಸು
ಧಮಾ೯ಸ್ತೇ ಮಯಿ ಸಂತು ತೇ ಮಯಿಸಂತು||
ಓಂ ನನ್ನ ಅವಯವಗಳೂ ವಾಕ್ಕೂ ಪ್ರಾಣವೂ ಚಕ್ಷುಸ್ಸೂ ಶ್ರೋತ್ರವೂ ಬಲವೂ ಮತ್ತು ಎಲ್ಲ
ಇಂದ್ರಿಯಗಳು ಪುಷ್ಟಿಯನ್ನು ಹೊಂದಲಿ ,ಎಲ್ಲವೂ ಉಪನಿಷತ್ ಪ್ರತಿಪಾದ್ಯವಾದ ಬ್ರಹ್ಮವೇ.ನಾನು ಬ್ರಹ್ಮವನ್ನು ನಿರಾಕರಿಸದಿರಲಿ.ಬ್ರಹ್ಮವು ನನ್ನನ್ನು ನಿರಾಕರಿಸದಿರಲಿ,ನಿರಾಕರಣವೇ ಇಲ್ಲದಿರಲಿ;ನನ್ನಿಂದಲೂ ನಿರಾಕರಣವಿಲ್ಲದಿರಲಿ.ಉಪನಿಷತ್ತುಗಳಲ್ಲಿ ಉಕ್ತವಾಗಿರುವ ಧಮ೯ಗಳು ಆತ್ಮನಿರತನಾದ ನನ್ನಲ್ಲಿ ಇರಲಿ;ಅವು ನನ್ನಲ್ಲಿರಲಿ.
ಓಂ ಶಾಂತಿಃ ಶಾಂತಿಃ ಶಾಂತಿಃ
ಮೊದಲನೆಯ ಅಧ್ಯಾಯ:
ಮೊದಲನೆಯ ಖಂಡ:
1)ಉದ್ಗೀಥ-ಶಬ್ದವಾಚ್ಯವಾದ ಓಂ ಎಂಬ ಈ ಅಕ್ಷರವನ್ನು ಉಪಸಿಸಬೇಕು;ಏಕೆಂದರೆ ಈ ಉದ್ಗಾತೃವು ಓಂಕಾರದಿಂದ ಪ್ರಾರಂಭಿಸಿಯೇ ಹಾಡುತ್ತಾನೆ.ಓಂಕಾರದ ಉಪವ್ಯಾಖ್ಯಾನವು ಪ್ರಾರಂಭಿಸಲ್ಪಡುತ್ತದೆ.(ಪುಟ 3)
2)ಆದುದರಿಂದ ಸಂಸಾರದ ಮೂರೂ ಗತಿಗಳನ್ನು ನಿರಾಕರಿಸಿ ಕಮ೯ನಿರಪೇಕ್ಷವಾದ (ಕಮ೯ವನ್ನು ಅಪೇಕ್ಷಿಸದ)ಅದ್ವೈತಾತ್ಮ- ವಿಜ್ಞಾನವನ್ನು ಉಪದೇಶಿಸಲು ಉಪನಿಷತ್ತನ್ನು ಪ್ರಾರಂಭಿಸಿದೆ.(ಪುಟ 3)
(ಸಂಸಾರದ ಮೂರುಗತಿಗಳು ಈ ರೀತಿ ಇವೆ.1)ಉಪಾಸನಾ ಸಹಿತವಾದ ಕಮ೯ದ ಮೂಲಕ ಅಚಿ೯ರಾದಿ ಮಾಗ೯ದಿಂದ ಅಪರಬ್ರಹ್ಮ ಪ್ರಾಪ್ತಿ 2)ಉಪಾಸನಾ ರಹಿತವಾದ ಕಮ೯ದ ಮೂಲಕ ಧೂಮಾದಿ ಮಾಗ೯ದಿಂದ ಚಂದ್ರಲೋಕದ ಅಥವಾ ಪಿತೃಲೋಕದ ಪ್ರಾಪ್ತಿ 3) ಶಾಸ್ತ್ರಚೋದನೆಯ್ಲ್ಲದೆ ತಮ್ಮ ಸ್ವಭಾವವನ್ನೇ ಅನುಸರಿಸುವವರಾಗಿ ಉಭಯ ಮಾಗ೯ಗಳಿಂದಲೂ ಭ್ರಷ್ಟರಾದವರ ಅಧೋಗತಿ.)
3)ತನ್ನ ಸ್ವರೂಪದಲ್ಲಿಯೇ ಇರುವವನೂ ಅವಿಕ್ರಿಯನೂ ಆದ ಆತ್ಮನಲ್ಲಿ ಕತ್ರಾ೯ದಿ -ಕಾರಕಗಳು ,ಕ್ರಿಯೆ,ಫ¯ ಎಂಬ ಭೇದಜ್ಞಾನವನ್ನು ತೊಲಗಿಸುವುದು ಅದ್ವೈತ ಜ್ಞಾನ(ಪುಟ 3)
4) ಶಾಸ್ತ್ರವು ತಿಳಿಸಿಕೊಡುವ ಒಂದು ಆಲಂಬನವನ್ನು ತೆಗೆದುಕೊಂಡು ಅದರಲ್ಲಿ ಸಮಾನ ಚಿತ್ತವೃತ್ತಿಯನ್ನು -ಅದಕ್ಕಿಂತ ಭಿನ್ನವಾದ ಪ್ರತ್ಯಯವು ಬಾರದಂತೆ -ಉಂಟು ಮಾಡುವುದು ಉಪಾಸನೆ.(ಪುಟ 3)
5)ಈ ಉಪಾಸನೆಗಳು ಸತ್ವಶುದ್ಧಿಯನ್ನುಂಟುಮಾಡಿ ವಸ್ತುತತ್ವವನ್ನು ಪ್ರಕಾಶಿಸುವುದರಿಂದ ಅದ್ವೈತ ಜ್ಞಾನಕ್ಕೆ ಉಪಕಾರವಾಗಿರುತ್ತವೆ.(ಪುಟ 3)
6)ಉದ್ಗೀಥವು ಜ್ಯೋತಿಷ್ಟೋಮಯಾಗದ ಅಂಗವಾಗಿದ್ದರೂ ಇಲ್ಲಿ ಸ್ವತಂತ್ರವಾದ ಉಪಾಸನೆಯಾಗಿದೆ.
(ಪುಟ 4)
7)ನಾಮವೂ ಪ್ರತೀಕವೂ ಆಗಿ ಓಂಕಾರವು ಪರಮಾತ್ಮೋಪಾಸನೆಗೆ ಶ್ರೇಷ್ಠವಾದ ಸಾಧನವಾಗಿದೆ.(ಪುಟ 4)
8)ಉಪಾಸನೆ ,ಫಲ,ವಿಭೂತಿ-ಇವುಗಳನ್ನು ವಿಸ್ತಾರವಾಗಿ ತಿಳಿಸುವುದಕ್ಕೆ ಉಪವ್ಯಾಖ್ಯಾನವೆಂದು ಹೆಸರು.(ಪುಟ 4)
೯)ಪೃಥ್ವಿಯು ಚರಾಚರ ಭೂತಗಳ ರಸವು.ನೀರು ಪೃಥ್ವಿಯ ರಸವು.ಓಷಧಿಗಳು ನೀರಿನ ರಸವು.ಪುರುಷ ಶರೀರವು ಓಷಧಿಗಳ ರಸವು.ವಾಗಿಂದ್ರಿಯವು ಪುರುಷನ (ಅವಯವಗಳ) ರಸವು.ಋಕ್ಕು ವಾಗಿಂದ್ರಿಯದ ರಸವು.ಸಾಮವು ಋಕ್ಕಿನ ರಸವು.ಉದ್ಗೀಥವು ಸಾಮದ ರಸವು.(ಪುಟ 4)
10)ಈ ಓಂಕಾರವು ರಸಗಳಿಗೆಲ್ಲ ರಸತಮವು. ಪರಮವು ,ಪರಾಥ೯ವು ಮತ್ತು ಎಂಟನೆಯದು(ಪುಟ 5)
(ಪೃಥಿವ್ಯಾದಿ ರಸಗಳಲ್ಲಿ ಕ್ರಮವಾಗಿ ಎಂಟನೆಯದು)
11) ಯಾವುದು ಋಕ್ಕು?ಯಾವುದು ಸಾಮವು? ಯಾವುದು ಉದ್ಗೀಥವು-ಇವುಗಳನ್ನು ಈಗ ವಿಮಶಿ೯ಸ ಬೇಕಾಗಿದೆ.(ಪುಟ 6)
12)ವಾಕ್ಕೇ ಋಕ್ಕು,ಪ್ರಾಣವು ಸಾಮವು ,ಓಂ ಎಂಬ ಈ ಅಕ್ಷರವು ಉದ್ಗೀಥವು.(ಪುಟ6)
13) ಯಾವನು ಉದ್ಗೀಥವೆಂಬ ಅಕ್ಷರವನ್ನು ಹೀಗೆ ಅರಿತುಕೊಂಡು ಉಪಾಸಿಸುತ್ತಾನೆಯೊ ಅವನು ಯಜಮಾನನ ಕಾಮಗಳನ್ನು ಪಡೆಯುವವನಾಗುತ್ತಾನೆ(ಪುಟ 7)
14) ಓಂಕಾರವೇ ಅನುಮತಿಯನ್ನು ಸೂಚಿಸುವ ಅಕ್ಷರವು(ಪುಟ 8)
15( ಲೌಕಿಕ -ವೈದಿಕ ವ್ಯವಹಾರಗಳಲ್ಲಿ ಓಂ ಎಂದು ಹೇಳುವುದು ಸಮ್ಮತಿಯನ್ನು ಸೂಚಿಸುತ್ತದೆ.(ಪುಟ 8)
16)ವೈದಿಕ ಕಮ೯ಗಳೆಲ್ಲ ಪರಮಾತ್ಮನ ಪೂಜೆಗಾಗಿಯೇ ಪ್ರವೃತ್ತವಾಗಿವೆ.(ಗೀತೆ18-46)(ಪುಟ 8)
17)ಪ್ರಣವೋಚ್ಛಾರಣ ಪೂವ೯ಕವಾಗಿ ಮಾಡಿದ ಯಜ್ಞದಿಂದ ಮಳೆ,ಅನ್ನ,ಪ್ರಾಣ,ಇವುಗಳು ಉತ್ಪನ್ನವಾಗಿ ಪುನಃ ಯಜ್ಞಕ್ಕೆ ಉಪಕರಣವಾಗುವುದರಿಂದ ಪ್ರಣವದ ಮಹಿಮೆಯಿಂದಲೂ ರಸದಿಂದಲೂ ಕಮ೯ವಾಗುತ್ತದೆ ಎಂದಥ೯.(ಪುಟ ೯)
18)ಆದುದರಿಂದ ಬ್ರಹ್ಮವಾದಿಗಳು ಓಂ ಎಂದು ಉಚ್ಛರಿಸಿ ಶಾಸ್ತ್ರಸಮ್ಮತವಾದ ಯಜ್ಞ-ದಾನ-ತಪಸ್ಸು-ಕ್ರಿಯೆಗಳನ್ನು ಯಾವಾಗಲೂ ಪ್ರಾರಂಭಿಸುತ್ತಾರೆ.(ಪುಟ ೯)
1೯)ಇವೆಲ್ಲವೂ ಈ ಅಕ್ಷರದ ಉಪವ್ಯಾಖ್ಯಾನವಾಗಿರುತ್ತದೆ.(ಪುಟ ೯)
ಎರಡನೆಯ ಖಂಡ:
20)ಅವರು ಉದ್ಗೀಥವನ್ನು ನಾಸಿಕದಲ್ಲಿರುವ ಘ್ರಾಣವೆಂದು ಉಪಾಸಿಸಿದರ.ು ಅದನ್ನು ಪಾಪದಿಂದ ಭೇದಿಸಿದರು.ಆದುದರಿಂದ ಘ್ರಾಣದ ದ್ವಾರಾ ಸುಗಂಧ-ದುಗ೯ಂದಾದಿಗಳೆರಡನ್ನೂ ಮೂಸುತ್ತಾನೆ.ಏಕೆಂದರೆ ಇದು ಪಾಪದಿಂದ ಭೇದಿಸಲ್ಪಟ್ಟಿದೆ.(ಪುಟ 11)
21) ಅದೇ ರೀತಿಯಲ್ಲಿ ಉದ್ಗೀಥವನ್ನು
1) ವಾಗ್ದೇವತೆಯೆಂದು ಉಪಾಸಿಸಿದರು-ಅಸುರರು ಪಾಪದಿಂದ ಭೇದಿಸುವುದು-ಆದುದರಿಂದ ವಾಕ್ಕಿನ ದ್ವಾರಾ-ಸತ್ಯ ಮತ್ತು ಸುಳ್ಳು ಎರಡನ್ನೂ ಹೇಳುತ್ತಾನೆ.
2)ಚಕ್ಷುದೇ೯ವತೆಯ ಉಪಾಸನೆ-ಅಸುರರ ಭೇದಿಸುವಿಕೆ-ಒಳ್ಳೆಯದು ಮತ್ತು ಕೆಟ್ಟದ್ದನ್ನು ನೋಡುತ್ತಾನೆ.
3)ಶ್ರೋತ್ರದೇವತೆ ಉಪಾಸನೆ-ಅಸುರರ ಭೇದಿಸುವಿಕೆ-ಒಳ್ಳೆಯ ಮತ್ತು ಕೆಟ್ಟ ಆಲೋಚನೆಗಳು
ಅಥವಾ ಸಂಕಲ್ಪಿಸತಕ್ಕದ್ದು-ಸಂಕಲ್ಪಿಸಬಾರದ್ದು ಎರಡನ್ನೂ)
4)ಮುಖ್ಯಪ್ರಾಣ ಉಪಾಸನೆ-ಅಸುರರ ಭೇದಿಸುವಿಕೆ-ಆದರದೆ ಆಗ ಅಸುರರು ಕಲ್ಲಿನಮೆಲೆ ಹೊಡೆಯಲ್ಪಟ್ಟಮಣ್ಣು ಹೆಂಟೆಯು ಪುಡಿ ಪುಡಿಯಾಗುವಂತೆ-ಅಸುರರು ನಾಶವಾದರು.(ಪುಟ 13)
5)ಪ್ರಾಣೋಪಾಸಕನು ಅಭೇದ್ಯವಾದ ಕಲ್ಲಿನಂತೆ ಇರುತ್ತಾನೆ.(ಪುಟ 14)
22)ಅಂಗಿರಸ್ಸು ಉದ್ಗೀಥವನ್ನು ಪ್ರಾಣನೆಂದು ಉಪಾಸಿಸಿದನು. ಪ್ರಾಣನು ಅಂಗಗಳ ರಸ.ಆದುದರಿಂದ ಇವನನ್ನೇ ಅಂಗಿರಸನೆಂದು ಕರೆಯುತ್ತಾರೆ.(ಪುಟ15)
23)ಹಾಗೆಯೇ ಬೃಹಸ್ಪತಿಯು ಉದ್ಗೀಥವನ್ನು ಪ್ರಾಣನೆಂದು ಉಪಾಸಿಸಿದನು.ವಾಕ್ಕು-ಬೃಹತಿ.ಪ್ರಾಣನು ಅದರ ಪತಿಯಾದ್ದರಿಂದ ಬೃಹಸ್ಪತಿ.(ವಾಕ್ಕು -ಬೃಹತಿ, ಪ್ರಾಣನು -ಬೃಹಸ್ಪತಿ) (ಪುಟ16)
24)ಪ್ರಾಣನು ಬಾಯಿಂದ ಬರುವ ಕಾರಣ ಇವನನ್ನು ಆಯಾಸ್ಯನೆಂದು ಕರೆಯುತ್ತಾರೆ.(ಪುಟ 16)
ಮೂರನೆಯ ಖಂಡ:
25)ವಾಕ್ಕು ಋಕ್ಕು.ಋಕ್ಕು ಸಾಮವು.ಆದುದರಿಂದ ಮನುಷ್ಯನು ಉಸಿರನ್ನು ಬಿಡದಿರುವಾಗ ತೆಗೆದುಕೊಳ್ಳದಿರುವಾಗ ಸಾಮಗಾನ ಮಾಡುತ್ತಾನೆ.ಸಾಮವು ಉದ್ಗೀಥವು.(ಪುಟ 20)
26)ಉದ್ಗೀಥವನ್ನು ವ್ಯಾನವೆಂದೇ ಉಪಾಸಿಸಬೆಕು.(ಪುಟ 21)
27)ಉದ್ಗೀಥದ ಅಕ್ಷರಗಳನ್ನು ಉತ್-ಗೀ-ಥ ಎಂದು ಉಪಾಸಿಸಬೇಕು.ಪ್ರಾಣವೇ ಉತ್.ಏಕೆಂದರೆ ಮನುಷ್ಯನು ಪ್ರಾಣದಿಂದಲೆ ಮೇಲಕ್ಕೆ ಏಳುತ್ತಾನೆ.ವಾಕ್ಕು ಗೀ.ಏಕೆಂದರೆ ವಾಕ್ಕುಗಳನ್ನು ಶಿಷ್ಯರು ಗಿರಃ ಎಂದು ಹೇಳುತ್ತಾರೆ.ಅನ್ನವು ಏಕೆಂದರೆ ಇದೆಲ್ಲವೂ ಅನ್ನದಲ್ಲಿಯೇ ಸ್ಥಿತವಾಗಿದೆ.(ಪುಟ 21)
28) ದ್ಯುಲೋಕವೇ ಉತ್,ಅಂತರಿಕ್ಷವು ಗೀ, ಪೃಥ್ವಿಯು ಥ.
ಆದಿತ್ಯನೇ ಉತ್ ವಾಯುವು ಗೀ,ಅಗ್ನಿಯು ಥ.
ಸಾಮವೇದವೇ ಉತ್,ಯಜುವೇ೯ದವು ಗೀ ,ಋಗ್ವೇದವು ಥ.ಯಾವನು ಹೀಗೆ ತಿಳಿದುಕೊಂಡು ಉಪಾಸಿಸುತ್ತಾನೆಯೊ ವಾಕ್ಕು ಅವನಿಗೆ ತನ್ನ ಫಲವೇ ಆದ ಹಾಲನ್ನು ಕರೆಯುತ್ತದೆ.ಅವನು ಅನ್ನವಂತನೂ ಅನ್ನವನ್ನು ತಿನ್ನುವವನೂ ಆಗುತ್ತಾನೆ.(ಪುಟ 22)
ನಾಲ್ಕನೆಯ ಖಂಡ:
2೯)ಉದ್ಗೀಥವಾದ ಓಂ ಎಂಬ ಅಕ್ಷರವನ್ನು ಉಪಾಸಿಸಬೇಕು.ಏಕೆಂದರೆ ಉದ್ಗಾತೃವು ಓಂಕಾರದಿಂದ ಪ್ರಾರಂಭಿಸಿಯೇ ಹಾಡುತ್ತಾನೆ.ಓಂಕಾರದ ಉಪವ್ಯಾಖ್ಯಾನವು ಪ್ರಾರಂಭಿಸಲ್ಪಡುತ್ತದೆ.(ಪುಟ 25)
30) ಯಾವಾಗ ಮನುಷ್ಯನು ಋಗ್ವೇದ,ಯಜುವೇ೯ದ,ಸಾಮವೇದ ಇವುಗಳನ್ನು ಅಧ್ಯಯನದ ಮೂಲಕ ಪಡೆಯುವಾಗ ಓಂ ಎಂದೇ ಆದರದಿಂದ ಉಚ್ಛರಿಸುತ್ತಾನೆ.ಈ ಅಕ್ಷರವೇ ಸ್ವರವು.ಇದು ಅಮೃತವು ಮತ್ತು ಅಭಯವು.(ಪುಟ 27)
ಐದನೇ ಖಂಡ:
31)ಉದ್ಗೀಥವು ಪ್ರಣವವು,ಪ್ರಣವವು ಉದ್ಗೀಥವು.ಆ ಆದಿತ್ಯನೇ ಉದ್ಗೀಥವು ಮತ್ತು ಪ್ರಣವವು.ಏಕೆಂದರೆ ಅವನು ಓಂ ಎಂದು ಉಚ್ಛರಿಸುತ್ತಾ ಹೋಗುತ್ತಾನೆ.(ಪುಟ 28)
32)ಈಗ ಅಧ್ಯಾತ್ಮೋಪಾಸನೆ.ಬಾಯಲ್ಲಿರುವ ಪ್ರಾಣನನ್ನೇ ಉದ್ಗೀಥವೆಂದು ಉಪಾಸಿಸಬೇಕು.ಏಕೆಂದೆ ಇವನು ಓಂ ಎಂದು ಉಚ್ಛರಿಸುತ್ತ ಹೋಗುತ್ತಾನೆ.(ಪುಟ 2೯)
ಆರನೆಯ ಖಂಡ:
33)ಈ ಪೃಥ್ವಿಯೇ ಋಕ್ಕು,ಅಗ್ನಿಯು ಸಾಮ,ಅಗ್ನಿಯೆಂಬ ಆ ಸಾಮವು ಪೃಥ್ವಿಯೆಂಬ ಈ ಋಕ್ಕಿನ ಮೇಲೆ ಅಧಿಷ್ಠಿತವಗಿದೆ.ಪೃಥ್ವಿಯೇ ಸಾ,ಅಗ್ನಿಯೇ ಅಮ ಅದು ಸಾಮ.(ಪುಟ 31)
34)ಅಂತರಿಕ್ಷವೇ ಋಕ್ಕು. ವಾಯುವು ಸಾಮ.ಆ ಸಾಮವು ಈಋಕ್ಕಿನ ಮೇಲೆ ಅಧಿಷ್ಠಿತವಾಗಿದೆ.ಅಂತರಿಕ್ಷವೇ ಸಾ.ವಾಯುವೇ ಅಮ;ಅದು ಸಾಮ.(ಪುಟ 32)
35) ದ್ಯುಲೋಕವೇ ಋಕ್ಕು.ಆದಿತ್ಯನು ಸಾಮ.ದ್ಯುಲೋಕವೇ ಸಾ ,ಆದಿತ್ಯನೇ ಅಮ.ಅದು ಸಾಮ.(ಪುಟ 32)
36)ನಕ್ಷತ್ರಗಳೇ ಋಕ್ಕು,ಚಂದ್ರನು ಸಾಮನಕ್ಷತ್ರಗಳೇ ಸಚಂದ್ರನು ಅಮ;ಅದು ಸಾಮ(ಪುಟ 33)
37)ಆದಿತ್ಯನ ಈ ಶುಭ್ರ ದೀಪ್ತಿಯೇ ಸಾ.ಕಪ್ಪನ್ನು ಅತಿಶಯಿಸಿರುವ ನೀಲದೀಪ್ತಿಯೇ ಅಮ;ಅದು ಸಾಮವು.ಇನ್ನು ಆದಿತ್ಯ ಮಂಡಲದಲ್ಲಿ ಕಾಣುತ್ತಿರುವ ಜ್ಯೋತಿಮ೯ಯನಾದ ಈ ಪುರುಷನು ಜ್ಯೋತಿಮ೯ಯನಾದ ದಾರಿಯುಳ್ಳವನು,ಕೇಶವುಳ್ಳವನು ಮತ್ತು ಉಗುರಿನವರೆಗೂ ಎಲ್ಲವೂ ಜ್ಯೋತಿಮ೯ಯನಾಗಿಯೇ ಇರುತ್ತಾನೆ.(ಪುಟ 34)
38)ಇಲ್ಲಿ ಪುರುಷನೆಂದರೆ ಪರಮ ಪುರುಷನು.ಆದಿತ್ಯ ಪುರುಷನಲ್ಲ.(ಪುಟ 34)
3೯) ಜಗತ್ತನ್ನು ತನ್ನ ಸ್ವರೂಪದಿಂದ ವ್ಯಾಪಿಸಿಕೊಂಡಿರುವುದರಿಂದ ಪುರುಷನು.ಇಂದ್ರಿಯಗಳನ್ನು ಹಿಂತಿರುಗಿಸಿ ಬ್ರಹ್ಮಚಯಾ೯ದಿ ಸಾಧನಗಳಿಂದ ಕೂಡಿ ಸಮಾಹಿತ ಚಿತ್ತರಾಗಿರುವವರಿಗೆ ಮಾತ್ರ ಇವನನ್ನು ನೋಡಲು ಸಾಧ್ಯ.(ಪುಟ 34)
40)ಅವನಿಗೆ (ಪುರುಷನಿಗೆ) ಕೆಂದಾವರೆಯತೆ ಕೆಂಪಗಿರುವ ಕಣ್ಣುಗಳಿರುವುವು.ಅವನಿಗೆ ಉತ್ ಎಂದು ಹೆಸರು.ಇವನು ಸಮಸ್ತ ಪಾಪಗಳನ್ನೂ ಬಿಟ್ಟು ಎದ್ದಿರುತ್ತಾನೆ.ಯಾವನು ಹೀಗೆ ಅvರಿತುಕೊಂಡಿರುವನೊ ಅವನು ಸಮಸ್ತ ಪಾಪಗಳನ್ನೂ ಬಿಟ್ಟು ಎದ್ದೇಳುತ್ತಾನೆ.(ಪುಟ 35)
41)ಇವನು (ಪುರುಷನು) ಸಮಸ್ತ ಪಾಪಗಳಿಂದಲೂ ಅವುಗಳ ಕಾಯ೯ಗಳಿಂದಲೂ ಎದ್ದಿರುತ್ತಾನೆ.ಯ ಆತ್ಮಾ ಅಪಹತಪಾಪ್ಮಾ(8,7,1)ಎಂದು ಶ್ರುತಿಯು ಮುಂದೆ ಹೇಳುತ್ತದೆ.(ಪುಟ 35)
42)ಋಕ್ ಸಾಮಗಳು ಅವನ ಎರಡು ಕೀಲುಗಳು.ಆದುದರಿಂದ ಅವನು ಉದ್ಗೀಥನು.ಅವನು ಉತ್ತನ್ನು ಹಾಡುವುದರಿಂದ ಉದ್ಗಾತೃವೆನಿಸಿರುವನು.ಇದು ಅಧಿದೈವತವು.(ದೈವಕ್ಕೆ ಸಂಬಂಧಪಟ್ಟಿದ್ದು)(ಪುಟ 35)
ಏಳನೆಯ ಖಂಡ:
43)ಈಗ ಅಧ್ಯಾತ್ಮೋಪಾಸನೆಯು:ವಾಕ್ಕೇ ಋಕ್ಕು,ಪ್ರಾಣವು ಸಾವi,ಸಾಮವು ವಾಕ್ಕೆಂಬ ಈ ಋಕ್ಕಿನಮೇಲೆ ಅಧಿಷ್ಠಿತವಾಗಿದೆ.ಆದ್ದರಿಂದ ಋಕ್ಕಿನಮೇಲೆ ಅಧಿಷ್ಠಿತವಾಗಿರುವಂತೆ ಸಾಮವನ್ನು ಹಾಡುತ್ತಾರೆ.ವಾಕ್ಕೇ ಸಾ ಪ್ರಾಣವು ಅಮ;ಅದು ಸಾಮ(ಪುಟ 36)
44)ಋಕ್ಕಿನಲ್ಲಿ ವಾಕ್ದೃಷ್ಟಿಯನ್ನೂ ಸಾಮದಲ್ಲಿ ಪ್ರಾಣದೃಷ್ಟಿಯನ್ನೂ ಇಡಬೇಕು.ಹೀಗೆಯೆ ಉಳಿದಕಡೆಗಳಲ್ಲಿಯೂ ಅನ್ವಯಿಸಿಕೊಳ್ಳಬೇಕು.(ಪುಟ 36)
45) ಚಕ್ಷುಸ್ಸೇ ಋಕ್ಕು,ಚಕ್ಷುಸ್ಸಿನಲ್ಲಿ ಪ್ರತಿಬಿಂಬಿತವಾದ ದೇಹಚ್ಛಾಯೆಯು ಸಾಮ.ಛಾಯೆಯೆಂಬ ಆ ಸಾಮವು ಚಕ್ಷುಸ್ಸೆಂಬ ಈ ಋಕ್ಕಿನ ಮೇಲೆ ಪ್ರತಿಷ್ಠಿತವಾಗಿದೆ.ಆದುದರಿಂದ ಋಕ್ಕಿನ ಮೆಲೆ ಅಧಿಷ್ಠಿತವಾಗಿರುವಂತೆ ಸಾಮವನ್ನು ಹಾಡುತ್ತಾರೆ.ಚಕ್ಷುಸ್ಸು ಸಾ.ಛಾಯೆಯೇ ಅಮ;ಅದು ಸಾಮ(ಪುಟ 36)
45)ಅದೇ ರೀತಿಯಲ್ಲಿ
1) ಶ್ರೋತ್ರವೇ ಋಕ್ಕುಮನಸ್ಸು ಸಾಮ
2)ಕಣ್ಣಿನ ಶುಭ್ರ ದೀಪ್ತಿಯು ಋಕ್ಕು.ಕಪ್ಪನ್ನು ಆಶ್ರಯಿಸಿರುವ ನೀಲದೀಪ್ತಿಯು ಸಾಮ
3)ಕಣ್ಣಿನಲ್ಲಿ ಕಾಣುತ್ತಿರುವ ಪುರುಷನೇ ಋಕ್ಕು,ಸಾಮವು ಉಕ್ಥ,ಯಜುಸ್ಸು, ಮತ್ತು ವೇದಗಳು
46)ಯಾವನು ಹೀಗೆ ಅರಿತುಕೊಂಡು ಸಾಮಗಾನ ಮಾಡುತ್ತಾನೆಯೋ,ನಿಜವಾಗಿಯೂ ಸಾಮಗಾನದಿಂದ ಉದ್ಗಾನ ಮಡುತ್ತಾನೆಯೊ ಅವನೇ ಉದ್ಗಾನದಿಂದ ಕಾಮನೆಯನ್ನು ಸಂಪಾದಿಸಲು ಸಮಥ೯ನಾಗುತ್ತಾನೆ.(ಪುಟ40)
ಎಂಟನೆಯ ಖಂಡ:
47) ಹಿಂದೆ ಶಿಲಕ ಶಾಲಾವತ್ಯ,ಚೈಕಿತಾಯನ ದಾಲ್ಭ್ಯ,ಪ್ರವಾಹಣ ಜೈವಲಿ ಎಂಬ ಮೂವರು ಉದ್ಗೀಥ ಜ್ಞಾನದಲ್ಲಿ ನಿಪುಣರಾಗಿದ್ದರು.ಅವರು ಹೀಗೆ ಹೇಳಿದರು:ನಾವು ಉದ್ಗೀಥ ಜ್ಞಾನದಲ್ಲಿ ನಿಪುಣರಾಗಿದ್ದೇವೆ.ಉದ್ಗೀಥ ವಿಷಯದಲ್ಲಿ ವಾದ ಮಾಡೋಣ.(ಪುಟ 41)
48) ಶಿಲಕ ಶಾಲಾವತ್ಯ:ಉದ್ಗೀಥದ ಗತಿಯು ಯಾವುದು.
ಜೈಕಿತಾಯನ:'ಸ್ವರ'
ಶಿಲಕ:ಸ್ವರದ ಗತಿ ಯಾವುದು?
ಜೈಕಿತಾಯನ: 'ಪ್ರಾಣವು.'
ಶಿಲಕ:'ಪ್ರಾಣದ ಗತಿಯಾವುದು?'
ಜೈಕಿತಾಯನ;'ಅನ್ನವು'
ಶಿಲಕ:ಅನ್ನದ ಗತಿ ಯಾವುದು?
ಜೈಕಿತಾಯನ:'ನೀರು'
ಏಕೆಂದರೆ ಸ್ವರವು ಪ್ರಾಣದಿಂದಲೇ ಉಂಟಾಗುತ್ತದೆ.,ಪ್ರಾಣವು ಅನ್ನವನ್ನು ಆಶ್ರಯಿಸಿರುತ್ತದೆ.ಅನ್ನವು ನೀರಿನಿಂದ ಉಂಟಾಗುತ್ತದೆ.(ಪುಟ 43)
4೯)ಶಿಲಕ:ನೀರಿನ ಗತಿಯಾವುದು?
ಜೈ: 'ಆ ಲೋಕವು'
ಶಿ: 'ಆ ಲೋಕದ ಗತಿ ಯಾವುದು?
ಜೈ:'ಸ್ವಗ೯ಲೋಕದ ಆಚೆಗೆ ಸಾಮವನ್ನು ಒಯ್ಯಬಾರದು.'
ನಾವು ಸ್ವಗ೯ಲೋಕದಲ್ಲಿ ಸಾಮವನ್ನು ಸ್ಥಾಪಿಸಿರುತ್ತೇವೆ.ಏಕೆಂದರೆ ಸಾಮವೇ ಸ್ವಗ೯ವೆಂದು ಸ್ತುತಿಸಲ್ಪಟ್ಟಿದೆ'.(ಪುಟ 47)
50)ಸ್ವಗ೯ಲೋಕವೇ ಸಾಮವೇದವು.(ಸ್ವಗೋ೯ ವೈ ಲೋಕಃ ಸಾಮವೇದಃ ಎಂದು ಶ್ರುತಿಯು ಹೇಳುತ್ತದೆ.(ಪುಟ 43)
51)ಶಿಲಕ: ನಿನ್ನ ಸಾಮವು ಪ್ರತಿಷ್ಠಿತವಾಗಿಲ್ಲ.ಈಗ ಯಾವನಾದರೂ "ನಿನ್ನ ತಲೆಯು ಬೀಳುವುದು"ಎಂದು ಹೇಳಿದರೆ ನಿನ್ನ ತಲೆಯು ಬೀüಳುವುದು"ಎಂದು ಹೇಳಿದರೆ ನಿನ್ನ ತಲೆಯು ಬಿದ್ದೇ ಹೋಗುವುದು.
51)
ಚೈಕಿತಾಯನ: 'ಅನುಮತಿ ಕೊಟ್ಟರೆ ನಾನು ಪೂಜ್ಯನಾದ ನಿನ್ನಿಂದ ಅರಿತುಕೊಳ್ಳುತ್ತೇನೆ'
ಶಿಲಕ:'ಅರಿತುಕೊ'
ಚೈಕಿತಾಯನ: 'ಆ ಲೋಕದ ಗತಿ ಯಾವುದು?'
ಶಿಲಕ: ಈ ಭೂಮಿಯು
ಚೈಕಿತಾಯನ: 'ಈ ಭೂಮಿಯ ಗತಿ ಯಾವುದು.?'
ಶಿಲಕ: ಪ್ರತಿಷ್ಠಾ ಭೂಮಿಯ ಆಚೆಗೆ ಸಾಮವನ್ನು ಒಯ್ಯಬಾರದು:ನಾವು ಪ್ರತಿಷ್ಠಾ ಭೂಮಿಯಲ್ಲಿ ಸಾಮವನ್ನು ಸ್ಥಾಪಿಸಿರುತ್ತೇವೆ.ಏಕೆಂದರೆ ಸಾಮವೇ ಪ್ರತಿಷ್ಠೆಯೆಂದು ಸ್ತುತಿಸಲ್ಪಟ್ಟಿದೆ'.(ಪುಟ 45)
52)ಯಾಗ-ದಾನ-ಹೋಮಾದಿಗಳಿಂದ ಈ ಲೋಕವು ಆ ಲೋಕವನ್ನು ಪೋಷಿಸುತ್ತಿರುವುದರಿಂದ ಅದಕ್ಕೆ ಗತಿಯಾಗಿದೆ.(ಪುಟ 45)
53)ಈ ಲೋಕವು ಸವ೯ ಪ್ರಾಣಿಗಳಿಗೂ ಪ್ರತಿಷ್ಠೆಯೆಂಬುದು ಪ್ರತ್ಯಕ್ಷವಾಗಿರುವುದರಿಂದ ಸಾಮಕ್ಕೂ ಇದು ಪ್ರತಿಷ್ಠೆಯೆಂಬುದು ಯುಕ್ತವು.(ಪುಟ 45)
54) 'ಈ ಭೂಮಿಯೇ ರಥಂತರವು'("ಇಯಂ ವೈ ರಥಂತರಮ್" ತಾಂಡ್ಯನ್ರಾಹ್ಮಣ(18,6,11)).ಆದುದರಿಂದ ರಥಂತರಸಾಮವು ಉದ್ಗೀತದ ಪ್ರತಿಷ್ಠೆಯಾಗಿರುವುದು. ಯುಕ್ತವು.(ಪುಟ45)
ಒಂಬತ್ತನೆಯ ಖಂಡ:
55)ಶಿಲಕ: 'ಈ ಲೋಕದ ಗತಿಯಾವುದು?'
ಪ್ರವಾಹಣ ಜೈವಲಿ:ಆಕಾಶವುಈ ಭೂತಗಳೆಲ್ಲವೂ ಆಕಾಶದಿಂದಲೇ ಉತ್ಪನ್ನವಾಗುತ್ತವೆ.ಆಕಾಶದಲ್ಲಿಯೇ ಲಯವಾಗುತ್ತವೆ.ಏಕೆಂದರೆ ಆಕಾಶವೇ ಇವುಗಳಿಗಿಂತ ಮಹತ್ತರವು.ಆಕಾಶವೇ ಮೂರುಕಾಲಗಳಲ್ಲಿಯೂ ಪ್ರತಿಷ್ಠೆ.(ಇಲ್ಲಿ ಆಕಾಶವನ್ನೇ ಪರಮಾತ್ಮನೆಂದು ಹೇಳಿದೆ)(ಪುಟ47)
ಹತ್ತನೆಯಖಂಡ:
56)ಕುರು ದೇಶದ ಸಸ್ಯಗಳು ಆಲಿಕಲ್ಲು ಮಳೆಯಿಂದ ನಾಶವಾಗಲುಉಷಸ್ತಿ ªಚಾಕ್ರಾಯಣನು ಅತ್ಯಂತ ದುರವಸ್ಥೆಯನ್ನು ಹೊಂದಿ ತನ್ನ ಪತ್ನಿಯೊಂದಿಗೆ ಇಭ್ಯ ಗ್ರಾಮದಲ್ಲಿ ವಾಸಿಸುತ್ತಿದ್ದನು(ಪುಟ 4೯)
57)ಉದ್ಗೀಥೋಪಾಸನೆಯ ಪ್ರಸಂಗದಲ್ಲಿ ಪ್ರಸ್ತಾವ,ರತಿಹಾರ,ಎಂಬ ಹೆಸರಿನ ಸಾಮ ಭಕ್ತಿಗಳ ಉಪಾಸನೆಯನ್ನು ಹೇಳಲು ಈ ಖಂಡವು ಆರಂಭವಾಗಿದೆ.(ಪುಟ 4೯)
58)ಅವನು ಕುತ್ಸಿತವಾದ ಉದ್ದನ್ನು ತಿನ್ನುತ್ತಿರುವ ಮಾವಟಿಗನನ್ನು ಆಹಾರಕ್ಕಾಗಿ ಬೇಡಿದನು.ಮಾವಟಿಗನು ಅವನಿಗೆ ಹೀಗೆ ಹೇಳಿದನು;'ನನಗೆ ಬಡಿಸಿರುವ ಇದನ್ನು ಬಿಟ್ಟರೆ ಬೇರೆ ಕಾಳುಗಳಿಲ್ಲ'.
'ಇದರಲ್ಲಿಯೇ ಸ್ವಲ್ಪವನ್ನು ಕೊಡು' ಎಂದು ಉಷಸ್ತಿಯು ಕೇಳಿದನುಆ ಮಾವಟಿಗನು ಉದ್ದನ್ನು ಅವನಿಗೆ ಕೊಟ್ಟು 'ಇಗೋ ಕುಡಿಯುವ ನೀರು'ಎಂದು ಹೇಳಿದನು'ಇದನ್ನು ನಾನು ಕುಡಿದರೆ ಉಚ್ಛಿಷ್ಟವನ್ನೇ ಕುಡಿದಂತೆ ಆದೀತು'ಎಂದು ಉಷಸ್ತಿಯು ಹೇಳಿದನು.(ಪುಟ 50)
5೯)'ಇದು ಉಚ್ಛಿಷ್ಟವಲ್ಲವೇ' ಎಂದು ಮಾವಟಿಗನು ಕೇಳಿದನು'ಇದನ್ನು ತಿನ್ನದಿದ್ದರೆ ನಾನು ಬದುಕುತ್ತಲೇ ಇರಲಿಲ್ಲ.ಆದರೆ ನೀರು ನನಗೆ ಬೇಕಾದಷ್ಟು ಸಿಗುತ್ತದೆ'ಎಂದು ಉಷಸ್ತಿಯು ಹೇಳಿದನು(ಪುಟ 50)
(ಜ್ಞಾನಿಯಾದವನು ಸ್ವೇಚ್ಛೆಯಾಗಿ ಏನನ್ನೂ ಮಾಡಬಾರದು ಎಂಬ ಭಾವ)(ಪುಟ50)
60) ಉಷಸ್ತಿಯು ಅದನ್ನು ತಿಂದುಉಳಿದುದನ್ನು ಪತ್ನಿಗೆ ಕೊಟ್ಟನು.ಆಕೆಯು ಮೊದಲೇ ಭಿಕ್ಷೆಯನ್ನು ಪಡೆದಿದ್ದರಿಂದ ಅದನ್ನು ತೆಗೆದುಕೊಂಡು ಒಂದುಕಡೆ ಇಟ್ಟಳು.(ಪುಟ 50)
61)ಬೆಳಗ್ಗೆ ಎದ್ದಕೂಡಲೇ ಹೀಗೆ ಹೇಳಿದನು.'ಅಯ್ಯೋ ನಮಗೆ ಸ್ವಲ್ಪ ಆಹಾರ ದೊರಕುವುದಾದರೆ
ಸ್ವಲ್ಪ ಧನವೂ ದೊರಕೀತು!ಇಲ್ಲಿಯ ರಾಜನು ಯಾಗಮಾಡುವನು;ಅವನು ನಮ್ಮನ್ನು ಸಮಸ್ತ ಋತ್ವಿಕ್ಕಮ೯ಗಳಿಗೂ ಆರಿಸಿಯಾನು.'(ಪುಟ 51)
62)ಯಜ್ಞಕ್ಕೆ ಬಂದು ಸ್ತೋತ್ರ ಭೂಮಿಯಲ್ಲಿ ಸ್ತುತಿಸಲ್ಪಡುವ ಉದ್ಗಾತೃಗಳ ಬಳಿಯಲ್ಲಿ ಕುಳಿತುಕೊಂಡನು.ಅವನು ಪಸ್ತೋತೃವನ್ನು ಕುರಿತು ಹೀಗೆ ಹೇಳಿದನು. (ಪುಟ 52)
63)ಪ್ರಸ್ತೋತೃವೆ ,ಪ್ರಸ್ತಾವಕ್ಕೆ ಅನುಗತವಾದ ದೇವತೆಯನ್ನು ಅರಿತುಕೊಳ್ಳದೆ(ನನ್ನ ಸಮ್ಮುಖದಲ್ಲಿ)ಪ್ರಸ್ತಾವ ಮಾಡುವೆಯಾದರೆ ನಿನ್ನತಲೆಯು ಬಿದ್ದು ಹೋಗುವುದು.
64)ಉಪಾಸನೆಯನ್ನು ಅರಿಯದೆ ಕೇವಲ ಕಮ೯ವನ್ನು ತಿಳಿದವರು ವಿದ್ವಾಂಸರ ಸಮ್ಮುಖದಲ್ಲಿ ಅವರ ಅನುಮತಿಯಿಲ್ಲದೆ ಕಮ೯ವನ್ನು ಮಾಡಕೂಡದು.ಆದರೆ ಅವರಿಗೆ ಕಮ೯ದಲ್ಲಿ ಅಧಿಕಾರವಿಲ್ಲವೆಂದು ತಿಳಿಯಬಾರದು.ಏಕೆಂದರೆ ಅಜ್ಞಾನಿಗಳ ಕಮ೯ವು ದಕ್ಷಿಣಮಾಗ೯ದಲ್ಲಿ ಕಮಿ೯ಯನ್ನು ಒಯ್ಯುವುದೆಂದು
ಸ್ರುತಿಗಳು ಹೇಳುತ್ತವೆ.(ಪುಟ 52)
65)ಅವನು ಮೊದಲು ಉದ್ಗಾತೃವನ್ನು ಕೇಳಿದನು.:ಉದ್ಗಾತೃವೆ ಉದ್ಗೀತಕ್ಕೆ ಅನುಗತವಾದ ದೇವತೆಯನ್ನು ಅರಿತುಕೊಳ್ಳದೆ ನನ್ನ ಸಮ್ಮುಖದಲ್ಲಿಪ್ರತೀಹಾರ ಮಾಡುವೆಯಾದರೆ ನಿನ್ನ ತಲೆಯು ಬೀಳುವುದು.ಅವರು ತಮ್ಮ ಕಮ೯ಗಳನ್ನು ನಿಲ್ಲಿಸಿ ಸುಮ್ಮನೆ ಹಾಗೆಯೇ ಕುಳಿತುಕೊಂಡರು.(ಪುಟ 53)
66) ಅದೇರೀತಿ
1) ಅವನು ಪ್ರಸ್ತೋತೃ-ಪ್ರಸ್ತಾವ
2)ಉದ್ಗಾತೃ -ಉದ್ಗಾನ
3)ಪ್ರತಿಹತೃ೯-ಪ್ರತಿಹಾರ
ಇವರಿಗೂ ಹೇಳಿದನು.ಇವಕ್ಕೆ ಕ್ರಮವಾಗಿ ದೇವತೆಗಳು 1)ಪ್ರಾಣ 2) ಆದಿತ್ಯ 3)ಅನ್ನ ಆದೇವತೆಗಳು.
ಪ್ರಸ್ತಾವ,ಉದ್ಗೀಥ,ಪ್ರತಿಹಾರ ಎಂಬ ಈ ಭಕ್ತಿಗಳನ್ನು ಪ್ರಾಣ,ಆದಿತ್ಯ,ಅನ್ನ ಇವುಗಳ ದೃಷ್ಟಿಯಿಂದ
ಉಪಾಸನೆ ಮಡಬೇಕು ಎನ್ನುವುದು ಈ ಎರಡು ಖಂಡಗಳ ಒಟ್ಟಾಥ೯.(ಪುಟ 58)
ಹನ್ನೆರಡನೆಯ ಖಂಡ:
67)ದೇವತೆಗಳ ರೂಪದಲ್ಲಿರುವ ನಾಯಿಗಳಿಗೆ ಗೋಚರವಾದ ಶೌವ ಉದ್ಗೀಥವನ್ನು ಅನ್ನಲಾಭಕ್ಕೋಸ್ಕರ ಹೇಳಿದೆ.(ಪುಟ 58)
ಹದಿಮೂರನೆಯ ಖಂಡ:
68)ಸಾಮದ ಅವಯವಗಳಾದ ಉದ್ಗೀಥವೇ ಮೊದಲಾದ ಭಕ್ತಿಗಳ ವಿಷಯದಲ್ಲಿ ಉಪಾಸನೆಯನ್ನು ಹಿಂದೆ ತಿಳಿಸಿದೆ.ಈಗ ಸಾಮದ ಮತ್ತೊಂದು ಅವಯವವಾದ ಸ್ತೋಭಾಕ್ಷರಗಳನ್ನು ವಿಷಯವಾಗಿ ಉಳ್ಳ ಬೇರೆ ಬೇರೆ ಉಪಾಸನೆಗಳನ್ನು ಒಟ್ಟುಗೂಡಿಸಿ ಇಲ್ಲಿ ಹೇಳಲಗಿದೆ.ಸಾಮಗಾನಕ್ಕಾಗಿ ಮಧ್ಯೆ ಮಧ್ಯೆ ಸೇರಿಸಿಕೊಂಡಿರುವ ಅಥ೯ಶೂನ್ಯವಾದ ಅಕ್ಷರ ವಿಶೇಷಗಳಿಗೆ ಸ್ತೋಭವೆಂದು ಹೆಸರು.ಈ ಖಂಡದಲ್ಲಿ ಹಾಉ,ಹಾಇ,ಅಥ,ಈಊ,ಏ,ಔಹೋಯಿ ಹಿಂ,ಸ್ವರ,ಯಾ,ವಿರಾಟ್,ಮತ್ತು ಅನಿರುಕ್ತವಾದ ಹುಂಕಾರ ಇವೇ ಮೊದಲಾದ ಸ್ತೋಭಗಳು ಬರುತ್ತವೆ.ಇಂತಿಂಥ ಸ್ತೋಭಗಳು ಇಂತಿಂಥ ಸ್ಥಾನದಲ್ಲಿ ಬರುತ್ತವೆಂದು ಭಾಷ್ಯಕಾರರು ಹೇಳಿದ್ದಾರೆ.(ಪುಟ62)
6೯)
1)ಹಾಉ-ಕಾರವು-ರಥಂತರಸಾಮದಲ್ಲಿ ಈಲೋಕವೆಂದು ಉಪಾಸಿಸಬೇಕು.
2)ಹಾಇ-ಕಾರ-ವಾಮದೇವ್ಯಸಾಮ-ವಾಯು ನೀರು ಇವುಗಳ ಸಂಬಂಧ ಉಪಾಸಿಸಬೇಕು.
3)ಅಥ-ಕಾರ- ಈ ಜಗತ್ತು ಅನ್ನದಲ್ಲಿಯೇಸ್ಥಿತವಾಗಿದೆ-ಚಂದ್ರ ದೃಷ್ಟಿಯಿಂದ ಉಪಾಸನೆ.
4)ಇಹಕಾರವು- ಆತ್ಮನೆಂದು ಉಪಾಸಿಸಬೇಕು.
5)ಈ-ಕಾರವು-ಆಗ್ನೇಯ ಸಾಮ-ಅಗ್ನಿಯೆಂದು ಉಪಾಸಿಸಬೇಕು.(ಪುಟ 62)
70) ಯಾವನು ಹೀಗೆ ಈ ಸಾಮಗಳ ದಶ೯ನವನ್ನು ಅರಿತುಕೊಳ್ಳುವನೊ -ಸಾಮಗಳ ದಶ೯ನವನ್ನು ಅರಿತುಕೊಳ್ಳುವನೊ -ಅವನಿಗೆ ವಾಕ್ಕು ತನ್ನ ಫಲವೇ ಆದ ಹಾಲನ್ನು ಕರೆಯುತ್ತದೆ.ಅವನು ಅನ್ನವಂತನೂ ಅನ್ನವನ್ನು ತಿನ್ನುವವನೂ ಆಗುತ್ತಾನೆ.ಸ್ತೋಭಾಕ್ಷರಗಳ ಉಪಾಸನೆಯ ಫಲವನ್ನು ಇಲ್ಲಿ ಹೇಳಿದೆ.
(ಪುಟ 64)
,,,,,,,,,,,,,,,,,,,,,,,,,,,,,,,,,,,ಮೊದಲನೆಯ ಅಧ್ಯಾಯ ಮುಕ್ತಾಯವಾಯಿತು,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಎರಡನೆಯ ಅಧ್ಯಾಯ: (ಸಾಮೋಪಾಸನೆ)
1)ಓಂ,ಸಮಸ್ತವಾದ ಸಾಮದ ಉಪಾಸನೆಯು ಸಾಧುವು.ಯಾವುದು ಸಾಧುವೊ ಅದನ್ನು ಸಾಮವೆಂದು ಕರೆಯುತ್ತಾರೆ.ಯಾವುದು ಅಸಾಧುವೊ ಅದನ್ನು ಅಸಾಮವೆಂದು ಕರೆಯುವರು.(ಪುಟ 65)
2)ಯಾವನು ಅದನ್ನು ಹೀಗೆ ಅರಿತುಕೊಂಡು ಸಾಮವನ್ನು ಸಾಧುವೆಂದು ಉಪಾಸಿಸುವನೊ ಅವನನ್ನು ಸಾಧುಧಮ೯ಗಳು ಬಳಿಸಾರುವವು ಮತ್ತು ಅವನಿಗೆ ಭೋಗ್ಯಗಳಾವುವುವು.(ಪುಟ 67)
ಎರಡನೆಯ ಖಂಡ:
3) ಪಂಚವಿಧ ಸಾಮವನ್ನು ಪೃಥಿವಾದಿಲೋಕಗಳೆಂದು ಉಪಾಸಿಸಬೇಕು.
ಪೃಥ್ವಿಯು ಹಿಂಕಾರವು,ಅಗ್ನಿಯು ಪ್ರಸ್ತಾವವು,ಅಂತರಿಕ್ಷವು ಉದ್ಗೀಥವು,ಆದಿತ್ಯನು ಪ್ರತಿಹಾರವು,ದ್ಯುಲೋಕವು ನಿಧನವು.ಹೀಗೆ ಊಧ್ವಲೋಕಗಳ ವಿಷಯದಲ್ಲಿ ಉಪಾಸನೆಗಳು(ಪುಟ 68)
3) ಇನ್ನು ಕೆಳಗಿರುವ ಲೋಕಗಳ ವಿಷಯದಲ್ಲಿ:ದ್ಯುಲೋಕವು ಹಿಂಕಾರವು,ಆದಿತ್ಯನು ಪ್ರಸ್ತಾವವು,
ಅಂತರಿಕ್ಷವು ಉದ್ಗೀಥವು,ಅಗ್ನಿಯು ಪ್ರತಿಹಾರವು.ಪೃಥ್ವಿಯು ನಿಧನವು.(ಪುಟ 68)
4)ಹೀಗೆ ಇದನ್ನು ಅರಿತುಕೊಂಡು ಪಂಚವಿಧ ಸಾಮವನ್ನು ಲೋಕಗಳೆಂದು ಉಪಾಸಿಸುತ್ತಾನೆಯೊ,ಅವನಿಗೆ ಊಧ್ವ೯ವಾದ ಮತ್ತು ಅಧೋಮುಖವಾದ ಲೋಕಗಳು ಭೋಗ್ಯವಾಗುತ್ತವೆ.(ಪುಟ 6೯)
ಮೂರನೆಯ ಖಂಡ:
5) ಪಂಚವಿಧ ಸಾಮವನ್ನು ಮಳೆ ಎಂದು ಉಪಾಸಿಸಬೇಕು.ಪುರೋವಾತವು ಹಿಂಕಾರವು,ಹುಟ್ಟುತ್ತಿರುವ ಮೇಘವು ಹಿಂಕಾರವು,ಮಳೆಗರೆಯುವುದು ಉದ್ಗೀಥವು,ಮಿಂಚುವುದು ಗುಡುಗುವುದು ಪ್ರತಿಹಾರವು,ಮಳೆ ನಿಲ್ಲುವುದು ನಿಧನವು.ಯಾವನು ಇದನ್ನು ಅರಿತುಕೊಂಡು ಪಂಚವಿಧಸಾಮವನ್ನು ಮಳೆಯೆಂದು ಉಪಾಸಿಸುತ್ತಾನೆಯೊ ಅವನಿಗೆ ಮಳೆಗರೆಯುತ್ತದೆ.(ಪುಟ 70)
ನಾಲ್ಕನೆಯ ಖಂಡ:
6)ಎಲ್ಲ ನೀರಿನಲ್ಲಿಯೂ ಪಂಚವಿಧ ಸಾಮವನ್ನು ಉಪಾಸಿಸಬೇಕು. ಒಟ್ಟುಗೂಡುವ ಮೇಘವು ಹಿಂಕಾರವು,ಅದು ಮಳೆಗರೆದಾಗ ಪ್ರಸ್ತಾವವು,ಪೂವ೯ದಿಕ್ಕಿಗೆ ಪ್ರವಹಿಸುವ ನೀರು ಉದ್ಗೀಥವು.ಪಶ್ಚಿಮದಿಕ್ಕಿಗೆ ಪ್ರವಹಿಸುವುದು ಪ್ರತಿಹಾರವು,ಸಮುದ್ರವು ನಿಧನವು(ಪುಟ 71)
7)ಯಾರು ಹೀಗೆ ಇದನ್ನು ಅರಿತುಕೊಂಡು ಎಲ್ಲ ನೀರಿನಲ್ಲಿಯೂ ಪಂಚವಿಧ ಸಾಮವನ್ನು ಉಪಾಸಿಸುತ್ತಾನೆಯೊ ಅವನು ನೀರಿನಲ್ಲಿ ಸಾಯುವುದಿಲ್ಲ.,ಜಲಸಂಪನ್ನನೂ ಆಗುತ್ತಾನೆ.(ಪುಟಟ 71)
ಐದನೆಯ ಖಂಡ:
8) ಪಂಚವಿಧ ಸಾಮವನ್ನು ಋತುಗಳೆಂದು ಉಪಾಸಿಸಬೇಕು.ವಸಂತವು ಹಿಂಕಾರವು,ಬೇಸಿಗೆಯು ಪ್ರಸ್ತಾವವು,ಮಳೆಗಾಲವು ಉದ್ಗೀಥವು,ಶರದೃತುವು ಪ್ರತಿಹಾರವು,ಹೇಮಂತವು ನಿಧನವು.(ಪುಟ 72)
೯) ಯಾವನು ಹೀಗೆ ಅರಿತುಕೊಂಡು ಪಂಚವಿಧ ಸಾಮವನ್ನು ಋತುಗಳೆಂದು ಉಪಾಸಿಸುವನೊ ಅವನಿಗೆ ಋತುಗಳು ಭೋಗ್ಯವಾಗುವುವು.ಅವನು ಋತುಮಂತನೂ ಆಗುವನು (ಪುಟ72)
ಆರನೆಯ ಖಂಡ:
10)ಪಂಚವಿಧ ಸಾಮಗಳನ್ನು ಪಶುಗಳಲ್ಲಿ ಉಪಾಸಿಸಬೇಕು.ಆಡುಗಳು ಹಿಂಕಾರ,ಕುರಿಗಳು ಪ್ರಸ್ತಾವವು,ಗೋವುಗಳು ಉದ್ಗೀಥವು,ಕುದುರೆಗಳು ಪ್ರತಿಹಾರವು.ಪುರುಷನು ನಿಧನವು.(ಪುಟ 73)
11) ಯಾವನು ಹೀಗೆ ಇದನ್ನು ಅರಿತುಕೊಂಡು ಪಂಚವಿಧ ಸಾಮವನ್ನು ಉಪಾಸಿಸುತ್ತಾನೆಯೊ ಅವನಿಗೆ ಪಶುಗಳು ಭೋಗ್ಯವಾಗುತ್ತವೆ.ಅವನು ಪಶುವಂತನೂ ಆಗುತ್ತಾನೆ.(ಪುಟ 73)
ಏಳನೆಯ ಖಂಡ:
12)ಪಂಚವಿಧ ಸಾಮಗಳನ್ನು ಇಂದ್ರಿಯಗಳೆಂದು ಉಪಾಸಿಸಬೇಕು.ಘ್ರಾಣೇಂದ್ರಿಯವು ಹಿಂಕಾರವು,ವಾಕ್ಕು ಪ್ರಸ್ತಾವವು,ಚಕ್ಷುಸ್ಸು ಉದ್ಗೀಥವು,ಶ್ರೋತ್ರವು ಪ್ರತಿಹಾರವು,ಮನಸ್ಸು ನಿಧನವು,ಇವೇ ಉತ್ತರೋತ್ತರ
ಅಧಿಕತರ ಗುಣವುಳ್ಳವು.(ಪುಟ 74)
13)ಯಾವನುಹೀಗೆ ಅರಿತುಕೊಂಡು ಪಂಚವಿಧ ಸಾಮಗಳನ್ನು ಇಂದ್ರಿಯಗಳೆಂದು ಉಪಾಸಿಸುವನೊ ಅವನಿಗೆ ಉತ್ತರೋತ್ತರ ಉತ್ಕøಷ್ಟತರವಾದ ಜೀವನವು ಆಗುತ್ತದೆ.(ಪುಟ 75)
ಎಂಟನೆಯ ಖಂಡ:
14)ಈಗ ಸಪ್ತವಿಧ ಸಾಮದ ಉಪಾಸನೆ.ಸಪ್ತವಿಧ ಸಾಮವನ್ನು ವಾಕ್ಕಿನಲ್ಲಿ ಉಪಾಸಿಸಬೇಕು.ವಾಕ್ಕಿನಲ್ಲಿ ಯಾವುದು ಹುಂ ಎಂದಿರುವುದೊ ಅದು ಹಿಂಕಾರ;ಯಾವುದು ಪ್ರ ಎಂದಿರುವುದೊಅದು ಪ್ರಸ್ತಾವ,ಯಾವುದು ಆ ಎಂದಿರುವುದೊ ಅದು ಆದಿ,ಯಾವುದು ಉತ್ ಎಂದಿರುವುದೊ ಅದು
ಉದ್ಗೀಥ,ಯಾವುದು ಪ್ರತಿಎಂದಿರುವುದೊ ಅದು ಪ್ರತಿಹಾರ,ಯಾವುದು ಉಪ ಎಂದಿರುವುದೊ ಅದು ಉಪದ್ರವ,ಯಾವುದು ನಿ ಎಂದಿರುವುದೊ ಅದು ನಿಧನ.(ಪುಟ 76)
15)ಯಾವನು ಹೀಗೆ ತಿಳಿದುಕೊಂಡು ವಾಕ್ಕಿನಲ್ಲಿ ಸಪ್ತ ವಿಧ ಸಾಮವನ್ನು ಉಪಾಸಿಸುತ್ತಾನೆಯೊ ಅವನಿಗೆ ವಾಕ್ಕು ತನ್ನ ಫಲವೇ ಆದ ಹಲನ್ನು ಕರೆಯುತ್ತದೆ.ಅವನು ಅನ್ನವಂತನೂ ಅನ್ನವನ್ನು ತಿನ್ನುವವನೂ ಆಗುತ್ತಾನೆ(ಪುಟ76)
ಒಂಬತ್ತನೆಯ ಖಂಡ:
16)ಈಗ ಸಪ್ತವಿಧ ಸಾಮವನ್ನು ಆದಿತ್ಯನೆಂದು ಉಪಾಸಿಸಬೇಕು.ಅವನು ಯಾವಾಗಲೂ ಸಮನಾಗಿರುವುದರಿಂದ ಸಾಮನು.ನನಗೆ ಅಭಿಮುಖನಾಗಿದ್ದಾನೆ,ನನಗೆ ಅಭಿಮುಖನಾಗಿದ್ದಾನೆ ಎಂದು ಎಲ್ಲರಿಗೂ ಸಮನಾಗಿರುವುದರಿಂದ ಸಮವು.(ಪುಟ 77)
17)ಈ ಭೂತಗಳೆಲ್ಲವೂ ಆದಿತ್ಯನಲ್ಲಿ ಅನುಗತವಾಗಿವೆ ಎಂದು ಅರಿತುಕೊಳ್ಳಬೇಕು.
ಉದಯಕ್ಕೆ ಮೊದಲು ಯಾವರೂಪವಿದೆಯೊ ಅದು ಹಿಂಕಾರವು,ಪಶುಗಳು ಆದಿತ್ಯನೆಂಬ ಸಾಮದ (ಹಿಂಕಾರ -ಭಕ್ತಿಯಲ್ಲಿ) ಅನುಗತವಾಗಿದೆ.ಆದುದರಿಂದ ಅವು ಓಂಕಾರವನ್ನು ಮಾಡುತ್ತವೆ.ಏಕೆಂದ್ರೆ ಅವು ಈ ಸಾಮದ ಹೊಂಕಾರಕ್ಕೆ ಭಾಗಿಗಳಾಗಿವೆ(ಪುಟ 78)
18)ಉದಯಿಸಿದ ಕೂಡಲೇ ಸೂಯ೯ನಿಗೆ ಯಾವ ರೂಪವಿರುವುದೊ ಅದೇ ಪ್ರಸ್ತಾವವು.ಮನುಷ್ಯರು ಆದಿತ್ಯನೆಂಬ ಸಾಮದ (ಪ್ರಸ್ತಾವ ಭಕ್ತಿಯಲ್ಲಿ)ಅನುಗತರಾಗಿದ್ದಾರೆ(ಪುಟ 78)
1೯)
1) ಆದಿತ್ಯನು ಉದಯಿಸುವಕಾಲ(ಸಂಗಮವೇಳೆ)-ಆದಿ
2) ಮಧ್ಯಾನ್ಹ ಕಾಲ-ಉದ್ಗೀಥವು
3)ಮಧ್ಯಾನ್ಹದವೇಳೆ ಮತ್ತು ಅಪರಾನ್ಹಕ್ಕೆ ಮೊದಲು-ಪ್ರತಿಹಾರ
4)ಅಪರಾನ್ಹದ ನಂತರ ಮತ್ತು ಅಸ್ತಮಿಸುವುದಕ್ಕೆ ಮೊದಲು-ಉಪದ್ರವ
5) ಸೂಯ೯ನು ಅಸ್ತಮಿಸಿದ ಕೂಡಲೇ ಇರುವ ರೂಪವು -ನಿಧನ
20)ಇಲ್ಲಿಂದ ಸಪ್ತವಿಧ ಸಾಮದ ಉಪಾಸನೆ:
1) ಹಿಂಕಾರ 2)ಪ್ರಸ್ತಾವ 3)ಆದಿ 4)ಉದ್ಗೀಥ 5)ಪ್ರತಿಹಾರ 6) ಉಪದ್ರವ 7))ನಿಧನ
ಇವೇ ಸಪ್ತಾವಯವ ಸಾಮದ ಇಪ್ಪತ್ತೆರಡು ಅಕ್ಷರಗಳು.
21)ಯಾವನು ಹೀಗೆ ಅರಿತುಕೊಂಡು ಸಮ್ಮಿತವೂ ಅತಿಮೃತ್ಯುವೂ ಆದ ಸಪ್ತವಿಧ ಸಾಮವನ್ನು ಉಪಾಸಿಸುತ್ತಾನೆಯೊ ಅವನು ಮೃತ್ಯುವನ್ನು ಜಯಿಸುತ್ತಾನೆ.ಮೃತ್ಯುವಿನ ಜಯಕ್ಕಿಂತಲೂ ಹೆಚ್ಚಿನ ಜಯವು ಇವನಿಗೆ ಆಗುವುದು.(ಪುಟ 85)
22) ಮೃತ್ಯುವನ್ನು ಜಯಿಸಲು ಕಾರಣವಾಗಿರುವುದರಿಂದ ಅತಿಮೃತ್ಯು(ಪುಟ 82)
ಹನ್ನೊಂದನೆಯ ಖಂಡ:
23)ಹಿಂದೆ ಸಾಮದ ಹೆಸರನ್ನು ಹೇಳದೆ ಪಂಚವಿಧ ಹಗೂ ಸಪ್ತವಿಧ ಸಾಮೋಪಾಸನೆಯನ್ನು ಹೇಳಿದ್ದಾಯಿತು.ಈಗ ಗಾಯತ್ರವೇ ಮೊದಲಾದ ವಿಶಿಷ್ಟ ಫಲಗಳುಳ್ಳ ಸಾಮೋಪಾಸನೆಯನ್ನು ನಾ-ಗ್ರಹಣ ಪೂವ೯ಕವಾಗಿ ಹೇಳಲಾಗುತ್ತದೆ.(ಪುಟ 85)
24)ಮನಸ್ಸು ಹಿಂಕಾರ,ವಾಕ್ಕು ಪ್ರಸ್ತಾವ,ಚಕ್ಷುಸ್ಸು ಉದ್ಗೀಥ,ಶ್ರೋತ್ರವು ಪ್ರತಿಹಾರ,ಪ್ರಾಣವು ನಿಧನ,ಈ ಗಾಯತ್ರ ಸಾಮವು ಪ್ರಾಣಗಳಲ್ಲಿ ಪ್ರೋತವಾಗಿದೆ.(ಪುಟ 85)
25) 'ಪ್ರಾಣವೇ ಗಾಯತ್ರಿ'(ಪ್ರಾಣೋವೈ ಗಾಯತ್ರೀ'ಎಂದು ಶ್ರುತಿಯು ಹೇಳುತ್ತದೆ.) ಪುಟ 85)
26) ಅಕ್ಷಂದ್ರ ಚಿತ್ತ ಎಂದರೆ ಉದಾರ ಹೃದಯದವನು ಎಂದಥ೯(ಪುಟ 86)
ಹನ್ನೆರಡನೆಯ ಖಂಡ:
27)ಈ ರಥಂತರ ಸಾಮವು ಅಗ್ನಿಯಲ್ಲಿ ಪ್ರೋತವಾಗಿದೆ.
1) ಅಗ್ನಿಯ ಉತ್ಪತ್ತಿಗಾಗಿ ಅರಣಿಗಳನ್ನು ಕಡೆಯುವುದು-ಹಿಂಕಾರ
2)ಧೂಮೋತ್ಪತ್ತಿಯಾಗುವುದು -ಪ್ರಸ್ತಾವವು
3) ಅಗ್ನಿಯ ಪ್ರಜ್ವಲನವು- ಉದ್ಗೀಥವು
4)ಕೆಂಡಗಳಾಗುವುದು -ಪ್ರತಿಹಾರವು
5)ಅಗ್ನಿಯು ಕ್ಷೀಣವಾಗುವುದು -ನಿಧನವು(ಪುಟ 87)
28) ಹೀಗೆ ಅಗ್ನಿಯಲ್ಲಿ ಪ್ರೋತವಾಗಿರುವ ರಥಂತರ ಸಾಮವನ್ನು ಯಾರು ಅರಿತಿರುವನೊ ಅವನು ಬ್ರಹ್ಮವಚ೯ಸ್ವಿಯೂ ಅನ್ನಾದನೂ ಆಗುತ್ತಾನೆ.ಪೂಣಾ೯ಯುಷ್ಯವನ್ನು ಹೊಂದುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.(ಪುಟ 88)
ಹದಿಮೂರನೆಯ ಖಂಡ:
2೯) ಈ ವಾಮದೇವ್ಯ ಸಾಮವು ಮಿಥುನದಲ್ಲಿ ಪ್ರೋತವಾಗಿದೆ.ಯಾವನು ಹೀಗೆ ಮಿಥುನದಲ್ಲಿ ಪ್ರೋತವಾಗಿರುವ ಈ ವಾಮದೇವ್ಯವನ್ನು ಅರಿತುಕೊಳ್ಳುವನೊ ಅವನು ಮಿಥುನಿಯಾಗುತ್ತಾನೆ.ಅಮೋಘ ವೀಯ೯ನಾಗುತ್ತಾನೆ.ಪುಣಾ೯ಯಸ್ಸನ್ನು ಹೊಂದುತ್ತಾನೆ.ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಮಹಾನ್ ಆಗುತ್ತಾನೆ.ಮಿಥುನಿಯಾಗುತ್ತಾನೆ ಎಂದರೆ ವಿದುರನಾಗುವುದಿಲ್ಲ ಎಂದಥ೯.(ಪುಟ 85)
ಹದಿನಾಲ್ಕನೆಯ ಖಂಡ:
30)
1) ಉದಯಿಸುತ್ತಿರುವ ಆದಿತ್ಯನು-ಹಿಂಕಾರ
2)ಉದಯಿಸಿದ ಆದಿತ್ಯನು - ಪ್ರಸ್ತಾವ
3) ಮಧ್ಯಾನ್ಹದ ಆದಿತ್ಯನು -ಉದ್ಗೀಥ
4)ಅಪರಾನ್ಹದ ಆದಿತ್ಯನು -ಪ್ರತಿಹಾರ
5)ಅಸ್ತಮಿಸುತ್ತಿರುವ ಆದಿತ್ಯನು -ನಿಧನ
ಈ ಬೃಹತ್ಸಾಮವು ಆದಿತ್ಯನಲ್ಲಿ ಪ್ರೋತವಾಗಿದೆ.ಪುಟ 8೯)
30)ಯಾವನು ಹೀಗೆ ಆದಿತ್ಯನಲ್ಲಿ ಪ್ರೋತವಾಗಿರುವ ಬೃಹತ್ಸಾಮವನ್ನು ಅರಿತುಕೊಂಡಿರುವನೊ ಅವನು ತೇಜಸ್ವಿಯೂ ಅನ್ನಾದನೂ ಆಗುತ್ತನೆ.ಪೂಣಾ೯ಯಸ್ಸನ್ನು ಹೊಂದುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಈ ಉಪಾಸಕನ ವ್ರತವು -ಅವನು ತಪಿಸುತ್ತಿರುವ ಸೂಯ೯ನನ್ನು ನಿಂದಿಸಬಾರದು.(ಪುಟ ೯0)
ಹದಿನೈದನೆಯ ಖಂಡ:
31)
1)ಒಟ್ಟುಗೂಡುತ್ತಿರುವ ಅಭ್ರಗಳು -ಹಿಂಕಾರ,
2)ಉತ್ಪನ್ನವಾದ (ಜಲವಷೀ೯) ಮೇಘವು-ಪ್ರಸ್ತಾವ
3)ಮಳೆಗರೆಯುವುದು- ಉದ್ಗೀಥ
4)ಮಿಂಚುವುದು ಮತ್ತು ಗುಡುಗುವುದು -ಪ್ರತಿಹಾರ
5)ಮಳೆ ನಿಲ್ಲುವುದು- ನಿಧನ(ಪುಟ ೯1)
ಈ ವೈರೂಪ ಸಾಮವು ಪಜ೯ನ್ಯದಲ್ಲಿ ಪ್ರೋತವಾಗಿದೆ.
32)ಯಾವನು ಹೀಗೆ ಪಜ೯ನ್ಯದಲ್ಲಿ ಪ್ರೋತವಾಗಿರುವ ಈ ವೈರೂಪ ಸಾಮವನ್ನು ಅರಿತುಕೊಂಡಿರುವನೊ ಅವನು ವಿವಿಧ ರೂಪವನ್ನುಳ್ಳ ಸುರೂಪಿಗಳೂ ಆದ ಪಶುಗಳನ್ನು ಹೊಂದುತ್ತಾನೆ.ಪೂಣಾ೯ಯಸ್ಸನ್ನು ಹೊಂದುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು.-ಅವನು ಮಳೆಗರೆಯುತ್ತಿರುವ ಮೇಘವನ್ನು ನಿಂದಿಸಬಾರದು.(ಪುಟ ೯1)
ಹದಿನಾರನೆಯ ಖಂಡ:
33)ವೈರಾಜ ಸಾಮ:
1)ವಸಂತವು ಹಿಂಕಾರ
2)ಗ್ರೀಷ್ಮವು ಪ್ರಸ್ತಾವ
3)ಮಳೆಗಾಲವು ಉದ್ಗೀಥ
4)ಶರದೃತುವು ಪ್ರತಿಹಾರ
5)ಹೇಮಂತವು ನಿಧನ
ಈ ವೈರಾಜಸಾಮವು ಋತುಗಳಲ್ಲಿ ಪ್ರೋತವಾಗಿದೆ.(ಪುಟ ೯2)
34)ಯಾವನು ಹೀಗೆ ಈ ಋತುಗಳಲ್ಲಿ ಪ್ರೋತವಾಗಿರುವ ಸಾಮವನ್ನು ಅರಿತುಕೊಂಡಿರುವನೊ ಅವನು ಸಂತತಿಯಿಂದಲೂ ಪಶುಗಳಿಂದಲೂ ಬ್ರಹ್ಮವಚ೯ಸ್ಸಿನಿಂದಲೂ ವಿರಾಜಿಸುತ್ತಾನೆ.ಪೂಣಾ೯ಯಸ್ಸನ್ನು ಹೊಂದುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು -ಅವನು ಋತುಗಳನ್ನು ನಿಂದಿಸಕೂಡದು.
ಹದಿನೇಳನೆಯ ಖಂಡ:ಶಕ್ವರೀ ಸಾಮ:
35)
1)ಪೃಥ್ವಿಯು -ಹಿಂಕಾರ
2)ಅಂತರಿಕ್ಷವು- ಪ್ರಸ್ತಾವ
3)ದ್ಯುಲೋಕವು- ಉದ್ಗೀಥ
4) ದಿಕ್ಕುಗಳು -ಪ್ರತಿಹಾರ
5)ಸಮುದ್ರವು -ನಿಧನ
36) ಯಾವನು ಹೀಗೆ ಲೋಕಗಳಲ್ಲಿ ಪ್ರೋತವಾಗಿರುವ ಈ ಶಕ್ವರೀ ಸಾಮವನ್ನು ಅರಿತುಕೊಂಡಿರುವನೊ ಅವನು ಲೋಕಗಾಮಿಯಾಗುತ್ತಾನೆ.ಪೂಣಾ೯ಯಸ್ಸನ್ನು ಹೊಂದುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು -ಅವನು ಲೋಕಗಳನ್ನು ನಿಂದಿಸಕೂಡದು.(ಪುಟ೯5)
ಹದಿನೆಂಟನೆಯ ಖಂಡ(ರೇವತೀ ಸಾಮ):
37)
1) ಆಡುಗಳು -ಹಿಂಕಾರ
2) ಕುರಿಗಳು- ಪ್ರಸ್ತಾವ
3)ಗೋವುಗಳು- ಉದ್ಗೀಥ
4)ಕುದುರೆಗಳು -ಪ್ರತಿಹಾರ
5)ಪುರುಷನು -ನಿಧನ.
ಈ ರೇವತೀ ಸಾಮವು ಪಶುಗಳಲ್ಲಿ ಪ್ರೋತವಾಗಿದೆ.(ಪುಟ ೯5)
38) ಪಶುಗಳು ರೇವತೀ ಸಾಮವು.'ಪಶವೋ ವೈ ರೇವತೀ' ಎಂದು ಶ್ರುತಿಯಲ್ಲಿ ಹೆಳಿದೆ.(ಪುಟ ೯5)
3೯)ಯಾವನು ಹೀಗೆ ಪಶುಗಳಲ್ಲಿ ಪ್ರೋತವಾಗಿರುವ ಈ ರೇವತೀ ಸಾಮವನ್ನು ಅರಿತುಕೊಂಡಿರುವನೊ ಅವನು ಪಶುಗಳನ್ನು ಪಡೆಯುತ್ತಾನೆ.ಪೂಣಾ೯ಯುಸ್ಸನ್ನು ಹೊಂದುತ್ತಾನೆ. ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು -ಇವನು ಪಶುಗಳನ್ನು ನಿಂದಿಸಕೂಡದು.(ಪುಟ ೯5)
ಹತ್ತೊಂಬತ್ತನೆಯ ಖಂಡ(ಯಜ್ಞಾಯಜ್ಞೀಯ ಸಾಮ):
40)
1) ಲೋಮವು -ಹಿಂಕಾರ
2)ಚಮ೯ವು ಪ್ರಸ್ತಾವ
3)ಮಾಂಸವು-ಉದ್ಗೀಥ
4)ಅಸ್ಥಿಯು- ಪ್ರತಿಹಾರ
5)ಮಜ್ಜೆ -ನಿಧನ
ಈ ಯಜ್ಞಾಯಜ್ಞೀಯ ಸಾಮವು ಅಂಗಗಳಲ್ಲಿ ಪ್ರೋತವಾಗಿದೆ.(ಪುಟ ೯6)
41) ಮನುಷ್ಯನ ಅಂಗಗಳೆಲ್ಲವೂ ಅನ್ನರಸದ ವಿಕಾರವಾದುದರಿಂದ ಈ ಸಾಮವು ಅಂಗಗಳಲ್ಲಿ ಪ್ರತಿಷ್ಠಿತವಾಗಿದೆ.(ಪುಟ ೯6)
42) ಯಾವನು ಹೀಗೆ ಅಂಗಗಳಲ್ಲಿ ಪ್ರೋತವಾಗಿರುವ ಈ ಯಜ್ಞಾಯಜ್ಞೀಯ-ಸಾಮವನ್ನು ಅರಿತುಕೊಂಡಿರುವನೊಅವನಿಗೆ ಯಾವ ಅಂಗದಲ್ಲಿಯೂ ಕೊರತೆಯುಂಟಾಗುವುದಿಲ್ಲ. ಪೂಣಾ೯ಯುಸ್ಸನ್ನು ಹೊಂದುತ್ತಾನೆ. ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು -ಅವನು ಒಂದು ವಷ೯ದವರೆಗೆ ಮತ್ಸ್ಯಮಾಂಸಗಳನ್ನು ತಿನ್ನಬಾರದು ಅಥವಾ ಮತ್ಸ್ಯ ಮಾಂಸಗಳನ್ನು ತಿನ್ನಲೇಕೂಡದು.(ಪುಟ ೯7)
ಇಪ್ಪತ್ತನೆಯ ಖಂಡ(ರಾಜನ ಸಾಮ):
43)
1)ಅಗ್ನಿಯು -ಹಿಂಕಾರ
2)ವಾಯುವು -ಪ್ರಸ್ತಾವ
3)ಆದಿತ್ಯನು ಉದ್ಗೀಥ
4)ನಕ್ಷತ್ರಗಳು -ಪ್ರತಿಹಾರ
5)ಚಂದ್ರನು -ವನಿಧನ
ಈ ರಾಜನ-ಸಾಮವು ದೇವತೆಗಳಲ್ಲಿ ಪ್ರೋತವಾಗಿದೆ.(ಪುಟ ೯8)
44) ಯಾವನು ಹೀಗೆ ದೇವತೆಗಳಲ್ಲಿ ಪ್ರೋತವಾಗಿರುವ ರಾಜನ-ಸಾಮವನ್ನು ಅರಿತುಕೊಂಡಿರುವನೊ ಅವನು ಇದೇ ದೇವತೆಗಳ ಸಾಲೋಕ್ಯವನ್ನು ಅಥವಾ ಸಮಾನವಾದ ಋದ್ಧಿಯನ್ನು ಅಥವಾ ಸಾಯುಜ್ಯವನ್ನು ಹೊಂದುತ್ತಾನೆ. ಪೂಣಾ೯ಯುಸ್ಸನ್ನು ಹೊಂದುತ್ತಾನೆ. ಉಜ್ವಲವಾಗಿ ಜೀವಿಸುತ್ತಾನೆ.ಸಂತತಿಯಿಂದಲೂ ಪಶುಗಳಿಂದಲೂ ಕೀತಿ೯ಯಿಂದಲೂ ಮಹಾನ್ ಆಗುತ್ತಾನೆ.ಇದು ಈ ಉಪಾಸಕನ ವ್ರತವು -ಅವನು ಬ್ರಾಹ್ಮಣರನ್ನು ನಿಂದಿಸಕೂಡದು.(ಪುಟ ೯8)
ಇಪ್ಪತ್ತೊಂದನೆಯ ಖಂಡ(ಸವಾ೯ತ್ಮಕಸಾಮ):
45)
1) ತ್ರಯೀವಿದ್ಯೆಯು- ಹಿಂಕಾರ
2)ಈ ಮೂರು ಲೋಕಗಳು -ಪ್ರಸ್ತಾವ
3)ಅಗ್ನಿ ವಾಯು ಆದಿತ್ಯ ಎಂಬ ದೇವತೆಗಳು ಉದ್ಗೀಥ
4)ನಕ್ಷತ್ರಗಳು ಪಕ್ಷಿಗಳು ಕಿರಣಗಳು-ಪ್ರತಿಹಾರ
5)ಸಪ೯ಗಳು ಗಂಧವ೯ರು ಪಿತೃಗಳು-ಇವರು ನಿಧನ.
ಈ ಸಾಮಸಮುದಾಯವು ಎಲ್ಲ ಪದಾಥ೯ಗಳಲ್ಲಿಯೂ ಪ್ರೋತವಾಗಿದೆ.(ಪುಟ ೯೯)
46)ಯಾವನು ಹೀಗೆ ಸವ೯ವಸ್ತುಗಳಲ್ಲಿಯೂ ಪ್ರೋತವಾಗಿರುವ ಸಾಮಸಮುದಾಯವನ್ನು ಅರಿತುಕೊಂಡಿರುವನೊಅವನು ಸವೇ೯ಶ್ವರನಾಗುತ್ತಾನೆ.(ಪುಟ ಪುಟ 100)
47)'ಎಲ್ಲವೂ ಆಗಿರುವೆನು' ಎಂದು ಉಪಾಸಿಸಬೇಕು.ಅದು ವ್ರತವು.ಅದು ವ್ರತವ.ಯಾರು ಈ ಸವಾ೯ತ್ಮಕ ಸಾಮವನ್ನು ಅರಿತಿರುವನೊ ಅವನು ಎಲ್ಲವನ್ನೂ ಅರಿತಿರುವನು.ಸವ೯ಜ್ಞನಾಗುತ್ತಾನೆ.(ಪುಟ 101)
ಇಪ್ಪತ್ತೆರಡನೆಯ ಖಂಡ:
48)'ಪಶುಗಳಿಗೆ ಗಂಭೀರವೂ ಹಿತಕರವೂ ಆದ ಸಾಮದ ಗಾನವನ್ನು ಪ್ರಾಥಿ೯ಸುತ್ತೇನೆ'ಎಂದು (ಯಜಮಾನನು ಅಥವಾ ಉದ್ಗಾತೃವು ಹೇಳಿದ)ಉದ್ಗಾನವು ಅಗ್ನಿಯದು;ಅನಿರುಕ್ತವು ಪ್ರಜಾಪತಿಯದು,ನಿರುಕ್ತವು ಸೋಮನದು,ಮೃದುವೂ ಕೋಮಲವೂ ಆದುದು ವಾಯುವಿನದು,ಕೋಮಲವೂ ಪ್ರಯತ್ನಸಾಧ್ಯವೂ ಆದುದು ಇಂದ್ರನದು.ಕ್ರೌಂಚಪಕ್ಷಿಯ ಧ್ವನಿಗೆ ಸಮಾನವಾದುದು ಬೃಹಸ್ಪತಿಯು.ಒಡೆದ ಕಂಚಿನ ಧ್ವನಿಗೆ ಸನಾನವಾದುದು ವರುಣನದು.ಇವೆಲ್ಲವನ್ನೂ ಪ್ರಯೋಗಿಸಬೇಕು.ಆದರೆ ವರುಣ ಸಂಬಂಧೀ ಸ್ವರವನ್ನು ಮಾತ್ರ ತ್ಯಜಿಸಬೇಕು.(ಪುಟ 101)
4೯)'ದೇವತೆಗಳಿಗೆ ಅಮೃತವನ್ನು ಗಾನದ ದ್ವಾರಾ ಸಾಧಿಸುವೆನು' ಎಂದು ಯೋಚಿಸುತ್ತ ಗಾನಮಾಡಬೇಕು.
ಪಿತೃಗಳಿಗೆ -ಸ್ವಧೆಯನ್ನೂ
ಮನುಷ್ಯರಿಗೆ- ಆಸೆಯನ್ನೂ
ಪಶುಗಳಿಗೆ- ಹುಲ್ಲು ನೀರುಗಳನ್ನೂ
ಯಜಮಾನನಿಗೆ -ಸ್ವಗ೯ಲೋಕವನ್ನೂ
ನನಗೆ-ಅನ್ನವನ್ನೂ ಗಾನದ ಮೂಲಕ ಸಾಧಿಸುವೆನು.'ಎಂದು ಇವನ್ನು ಮನಸ್ಸಿನಿಂದ ಧ್ಯಾನಿಸುತ್ತ
ಜಾಗರೂಕನಾಗಿ ಸ್ತುತಿಸಬೇಕು.(ಪುಟ 102)
50)ಸ್ವರ,ಊಷ್ಮ,ವ್ಯಂಜನ ಇವುಗಳ ವಿಷಯಗಳಲ್ಲಿ ಸ್ತುತಿಸಬೇಕು.(ಪುಟ 102)
51)ಎಲ್ಲ ಸ್ವರಗಳೂ ಇಂದ್ರನ ಅವಯವಗಳು.
ಎಲ್ಲ ಊಷ್ಮಗಳೂ ಪ್ರಜಾಪತಿಯ ಅವಯವಗಳು
ಎಲ್ಲ ಸ್ಪಶ೯ಗಳೂ ಮೃತ್ಯುವಿನ ಅವಯವಗಳು
ಹೀಗೆ ಅರಿತಿರುವ ಉದ್ಗಾತೃವನ್ನು ಸ್ವರಗಳ ವಿಷಯದಲ್ಲಿ ಯಾರಾದರೂ ನಿಂದಿಸಿದರೆ 'ನಾನು ಇಂದ್ರನನ್ನು ಶರಣು ಹೊಕ್ಕಿರುತ್ತೇನೆ,ಅವನು ನಿನಗೆ ಉತ್ತರವನ್ನು ಕೊಡುವನು'ಎಂದು ಅವನಿಗೆ ಹೇಳಬೇಕು.(ಪುಟ 103)
52)ಹೀಗೆ ಅರಿತಿರುವುದ್ಗತೃವನ್ನು ಊಷ್ಮಗಳ ವಿಷಯದಲ್ಲಿ ಯರಾದರೂ ನಿಂದಿಸಿದರೆ 'ನಾನು ಪ್ರಜಾಪತಿಯನ್ನು ಶರಣು ಹೊಕ್ಕಿರುತೇನೆ.ಅವನು ನಿನ್ನನ್ನು ಪುಡಿ ಪುಡಿ ಮಾಡುವನು'ಂದು ಹೇಳಬೇಕು.(ಪುಟ104)
53)'ನಾನು ಇಂದ್ರನಿಗೆ ಬಲವನ್ನು ಕೊಡುತ್ತೇನೆ'ಎಂದು ಯೋಚಿಸಿ ಎಲ್ಲ ಸ್ವರಗಳನ್ನು ಘೋಷದಿಂದ ಕೂಡಿಯೂ ಬಲದಿಂದ ಕೂಡಿಯೂ ಉಚ್ಛರಿಸಬೇಕು.'ಪ್ರಜಾಪತಿಗೆ ನನ್ನನ್ನು ಕೊಡುತ್ತೇನೆ'ಎಂದು ಯೋಚಿಸಿ ಎಲ್ಲ ಊಷ್ಮಗಳನ್ನು ಒಳಗೆ ನುಂಗದೆ ,ಹೊರಗೆ ಹಾಕದೆ ಸ್ಪಷ್ಟವಾಗಿ ಉಚ್ಛರಿಸಬೇಕು.'ಮೃತ್ಯುವಿನಿಂದ ಬಿಡಿಸಿಕೊಳ್ಳುತ್ತೇನೆ' ಎಂದು ಯೋಚಿಸಿ ಎಲ್ಲ ಸ್ಪಶ೯ಗಳನ್ನು ಮೆಲ್ಲಗೆ ಒಂದಕ್ಕೊಂದನ್ನು ಕೂಡಿಸದೆ ಉಚ್ಛರಿಸಬೇಕು(ಪುಟ 104)
ಇಪ್ಪತ್ತಮೂರನೆಯ ಖಂಡ:
54)ಧಮ೯ ಸ್ಕಂದಗಳು ಮೂರು. ಯಜ್ಞ ಅಧ್ಯಯನ,ದಾನ-ಇವು ಮೊದಲನೆಯದು.ತಪಸ್ಸು ಎರಡನೆಯದು.ಯಾವಜ್ಜೀವವೂ ಆಚಾಯ೯ ಗೃಹದಲ್ಲಿ ವಾಸಿಸುತ್ತ ಅಲ್ಲಿ ದೇಹದಂಡನೆಯನ್ನು ಮಾಡಿಕೊಳ್ಳುತ್ತಿರುವ ಬ್ರಹ್ಮಚಾರಿಯು ಮೂರನೆಯವನು.ಇವರೆಲ್ಲರೂ ಪುಣ್ಯಲೋಕವನ್ನು ಪಡೆಯುತ್ತಾರೆ.ಬ್ರಹ್ಮದಲ್ಲಿ ಸಮ್ಯಕ್ ಸ್ಥಿತನಾಗಿರುವವನು ಅಮೃತತ್ವವನ್ನು ಹೊಂದುತ್ತಾನೆ.(ಪುಟ 105)
55)ಆಚಾಯ೯ಗೃಹದಲ್ಲಿ ಅಧ್ಯಯನಕ್ಕಾಗಿ ವಾಸಮಾಡುವ ಶಿಷ್ಯನಿಗೆ ಉಪಕುವಾ೯ಣ ಬ್ರಹ್ಮಚಾರಿಯೆಂದು ಹೆಸರು.(ಪುಟ106)
56)ಬ್ರಹ್ಮಸಂಸ್ಥ ಶಬ್ದವು ಸವ೯ಕಮ೯ಗಳನ್ನೂ ಅವುಗಳ ಸಾಧನಗಳನ್ನೂ ತ್ಯಜಿಸಿದ ಅತ್ಯಾಶ್ರಮಿಯಾದಪರಮ-ಹಂಸ-ಪರಿವ್ರಾಜಕನಿಗೆ ಮಾತ್ರ ಹೊಂದುತ್ತದೆ.(ಪುಟ 106)
57)ಹೀಗೆ ಚಿಂತಿಸಲ್ಪಟ್ಟ ತ್ರಯೀ ವಿದ್ಯೆಯಿಂದ ಭೂಃ ಭುವಃ ಸುವಃ ಸ್ವಃ ಎಂಬ ಈ ಅಕ್ಷರಗಳು ಹೊರಕ್ಕೆ ಬಂದವು(ಪುಟ106)
58)ಓಂಕಾರವೇ ಇದೆಲ್ಲವೂ ಆಗಿದೆ.(ಏವೇದಂಸವ೯ಮೋಂಕಾರ ಏವೇದಂ ಸವ೯ಂ)(ಪುಟ 107)
5೯)ಅಭಿಧೇಯವಾದ ಪರಮಾತ್ಮನಿಗೂ ಅಭಿದಾನವಾದ ಒಂಕಾರಕ್ಕೂ ಯಾವ ಭೇದವೂ ಇಲ್ಲ.(ಪುಟ 107)
60)ಪ್ರಾಸಂಗಿಕವಾದ ಓಂಕಾರ ಸ್ತುತಿಯನ್ನು ಬಿಟ್ಟು ಈಗ ಪುನಃ ಯಜ್ಞಾಂಗವಾದ ಸಾಮ ಹೋಮ ಮಂತ್ರ,ಉತ್ಥಾನ ಇವುಗಳನ್ನು ಉಪದೇಶಿಸಬೇಕೆಂದು ಶ್ರುತಿಯು ಹೇಳುತ್ತದೆ.(ಪುಟ 108)
61)ಆದರೆ 'ಯಾವನು ಯಾಗ ಮಾಡುತ್ತಾನೆಯೊ ಅವನು ಲೋಕಕ್ಕಾಗಿ ಯಾಗ ಮಡುತ್ತಾನೆ.(ಲೋಕಾಯ ವೈ ಯಜತೇ ಯೋ ಯಜತೇ'ಎಂದು ಶ್ರುತಿಯು ಹೇಳುತ್ತ್ದೆ.(ಪುಟ108)
62)ಯಜಮಾನನು ಗಾಹ೯ಪತ್ಯಾಗ್ನಿಯ ಹಿಂಭಗದಲ್ಲಿ ಉತ್ತರಮುಖನಾಗಿ ಕುಳಿತುಕೊಂಡು ಪ್ರಾತರನುವಾಕವನ್ನು ಪ್ರಾರಂಭಿಸುವುದಕ್ಕೆ ಮೊದಲು ವಾಸವ-ಸಾಮವನ್ನು ಹೀಗೆ ಹಾಡಬೇಕು.'ಹೇ ಅಗ್ನಿ,ಪೃಥ್ವಿ ಲೋಕದ್ವಾರವನ್ನು ತೆರೆ; ಪೃಥ್ವೀಲೋಕದ ಭೋಗಕ್ಕಾಗಿ ನಾವು ನಿನ್ನನ್ನು ಕಾಣುವಂತಾಗಲಿ.(ಪುಟ 10೯)
63)ವಾಸವ-ಸಾಮ ಎಂದರೆ ವಸುಗಳೆಂಬ ದೇವತೆಗಳುಳ್ಳ ಸಾಮವನ್ನು ಎಂದಥ೯(ಪುಟ 10೯)
64)ಪ್ರಾತರನುವಾಕ ಎಂದರೆ ಪ್ರಾತಃಕಾಲದಲ್ಲಿ ಉಚ್ಛರಿಸುವ ಶಸ್ತ್ರವೆಂಬ ಹೆಸರಿನ ಋಕ್ಕುಗಳು.(ಪುಟ 10೯)
65)ಯಜಮಾನನು ದಕ್ಷಿಣಾಗ್ನಿಯ ಹಿಂಭಾಗದಲ್ಲಿ ಕುಳಿತುಕೊಂಡು ಮಾಧ್ಯಂದಿನ-ಸವನವನ್ನು ಪ್ರಾರಂಭಿಸುವುದಕ್ಕೆ ಮೊದಲು ರೌದ್ರಸಾಮವನ್ನು ಹೀಗೆ ಹಾಡಬೇಕು.'ಹೇ ಅಗ್ನಿ,ಅಂತರಿಕ್ಷ ಲೋಕದ ದ್ವಾರವನ್ನು ತೆರೆ;ಅಂತರಿಕ್ಷಲೋಕದ ಭೋಗಕ್ಕಾಗಿ ನಾವು ನಿನ್ನನ್ನು ಕಾಣುವಂತಾಗಲಿ'.(ಪುಟ 111)
66)'ಅನಂತರ ಈ ಹೋಮದಿಂದ ಹೋಮ ಮಾಡಬೇಕು.ಅಂತರಿಕ್ಕ್ಷಲೋಕ ನಿವಾಸಿಯಾದ ವಾಯುವಿಗೆ ನಮಸ್ಕಾರ.ಯಜಮಾನನಾದ ನನಗೆ ಈ ಲೋಕವನ್ನು ಪಡೆಯಿಸು.ಇದಾ ಯಜಮಾನನ ಲೋಕ.ಇಲ್ಲಿ ಯಜ್ಞಮಾಡುತ್ತಿರುವವನು ನಾನು ಆಯಸ್ಸು ಮುಗಿದಮೇಲೆ ಅಂತರಿಕ್ಷಲೋಕಕ್ಕೆ ಹೋಗುವವನಾಗಿದ್ದೇನೆ.ಸ್ವಾಹಾ!' 'ಲೋಕದ್ವಾರದ ಅಗುಳಿಯನ್ನು ತೆಗೆ' ಎಂದು ಹೇಳುತ್ತ ಏಳಬೇಕುರುದ್ರರು ಮಾಧ್ಯಂದಿನ
ಸವನಕ್ಕೆ ಸಂಬಂಧಿಸಿದ ಲೋಕವನ್ನು ಕೊಡುತ್ತಾರೆ.(ಪುಟ 111)
67)ಯಜಮಾನನು ಅಹವನೀಯಾಗ್ನಿಯಲ್ಲಿ ಉತ್ತರಮುಖಿಯಾಗಿ ಕುಳಿತುಕೊಂಡು ತೃತೀಯ ಸವನವನ್ನು ಪ್ರಾರಂಭಿಸುವುದಕ್ಕೆ ಮೊದಲು ಆದಿತ್ಯದೇವತಾಕವಾದ ಸಾಮವನ್ನೂ ವೈಶ್ವದೇವತಾಕವಾದ ಸಾಮವನ್ನೂ ಹಾಡಬೇಕು;'ಹೇ ಅಗ್ನಿ ದ್ಯುಲೋಕದ ದ್ವಾರವನ್ನು ತೆರೆ;ದ್ಯುಲೋಕದ ಸ್ವಾರಾಜ್ಯಕ್ಕಾಗಿ ನಾವು ನಿನ್ನನ್ನು ಕಾಣುವಂತಾಗಲಿ '.ಇದು ಆದಿತ್ಯದೇವತಾಕವಾದ ಸಾಮ:ಹೇ ಅಗ್ನಿ,ದ್ಯುಲೋಕದ ದ್ವಾರವನ್ನು ತೆರೆ.
ದ್ಯುಲೋಕದ ಸಾಮ್ರಾಜ್ಯಕ್ಕಾಗಿ ನಾವು ನಿನ್ನನ್ನು ಕಾಣುವಂತಾಗಲಿ.'(ಪುಟ 112)
68)ಅನಂತರ ಈ ಮಂತ್ರದಿಂದ ಹೋಮಮಾಡಬೇಕು:ದ್ಯುಲೋಕನಿವಾಸಿಗಳಾದ ಆದಿತ್ಯರಿಗೂ ರ್ವಿವೇ ದೇವತೆಗಳಿಗೂ ನಮಸ್ಕಾರ.ಯಜಮಾನನಾದ ನನಗೆ ಈ ಲೋಕವನ್ನು ಪಡೆಯಿಸಿರಿ.ಇದೇ ಯಜಮಾನನ ಲೋಕ.ಇಲ್ಲಿ ಯಜ್ಞಮಾಡುತ್ತಿರುವ ನಾನು ಆಯಸ್ಸು ಮುಗಿದಮೇಲೆ ದ್ಯುಲೋಕಕ್ಕೆ ಹೋಗುವವನಾಗಿದ್ದೇನೆ.ಸ್ವಾಹಾ.'ಲೋಕದ್ವಾರದ ಅಗುಳಿಯನ್ನು ತೆಗೆಯಿರಿ ಎಂದು ಹೇಳುತ್ತ ಏಳಬೇಕು.(ಪುಟ 113)
6೯) ಯಜ್ಞದ ಯಾಥಾತ್ಮ್ಯವನ್ನು ಅರಿತುಕೊಂಡವನಿಗೆ ಅದರ ಅನುಷ್ಠಾನದ ಮೂಲಕ ಆಯಾ ಫಲವು ಉಂಟಾಗುತ್ತದೆ.(ಪುಟ 114)
,,,,,,,,,,,,,,,,,,,,,,,,ಎರಡನೆಯ ಅಧ್ಯಾಯ ಮುಕ್ತಾಯವಾಯಿತು,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
Subscribe to:
Post Comments (Atom)
No comments:
Post a Comment