Wednesday, 23 June 2021

'goudapada hrudaya'by swamy sri sri sacchidanandendra saraswathi ,published by adhyathma prakasha karyalaya ,hnp,sangraha:by dr.raveendra hosadurga

 

 

 

 

 

 

ಗೌಡಪಾದ ಹೃದಯ : ಮೂಲ ಲೇಖಕರು:ಶ್ರೀಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು ಪ್ರಕಾಶಕರು:ಅಧ್ಯಾತ್ಮ ಪ್ರಕಾಶ ಕಾಯಾ೯ಲಯ ಹೊಳೆನರಸೀಪುರ-573211 ಹಾಸನ ಜಿಲ್ಲೆ.ಕನಾ೯ಟಕ ಸಂಪಾದಕರು:ಹೆಚ್.ಎಸ್.ಲಕ್ಮೀನರಸಿಂಹಮೂತಿ೯ ಗೌಡಪಾದ ಹೃದಯ ಸಾರಸಂಗ್ರಹ: ಸಂಗ್ರಹ:ಡಾ.ರವೀಂದ್ರ ಹೊಸದುಗ೯ ಮೂರನೆಯ ಮುದ್ರಣ:2018 ................................................. ಮೂಲ ಲೇಖಕರಿಗೂ, ಸಂಪಾದಕರಾದ ಹಚ್.ಎಸ್.ಲಕ್ಷ್ಮೀನರಸಿಂಹಮೂತಿ೯ಯವರಿಗೂ, ಪ್ರಕಾಶಕರಿಗೂ ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯದ ಆಡಳಿತವಗ೯ ಮತ್ತು ಸಿಬ್ಬಂದಿವಗ೯ಕ್ಕೂ ನನ್ನ ನಮನಗಳು ಹಾಗೂ ಕೃತಜ್ಞತೆಗಳು. ..................................................................................................................................................... ಗೌಡಪಾದರೇ ಅದ್ವೈತ ವೇದಾಂತ ಪ್ರವತ೯ಕರಲ್ಲಿ ಮೊದಲನೆಯವರೆನ್ನಬಹುದು.ಇವರು ತಮ್ಮ ಮಾಂಡೂಕ್ಯಕಾರಿಕೆಯಲ್ಲಿ ಸಮಗ್ರವಾಗಿ ಸಪ್ರಮಾಣವಾಗಿ ಸಿದ್ದಾಂತ ಮಾಡಿದ್ದಾರೆ.ಈ ಕಾರಿಕೆಯಲ್ಲಿ ನಾಲ್ಕು ಅಧ್ಯಾಯ(ಪ್ರಕರಣ)ಗಳಿವೆ. 1)ಆಗಮ ಪ್ರಕರಣ:ಇದರಲ್ಲಿ ಮಾಂಡೂಕ್ಯೋಪನಿಷತ್ತಿನ ವಾಕ್ಯಗಳಿಗೆ ವ್ಯಾಖ್ಯಾ ವಿವರಗಳಿವೆ.ಇಲ್ಲಿ ತಮ್ಮ ಸಿದ್ಧಾಂತವು ಅನುಮಾನ ಮತ್ತು ಶಬ್ದ ಪ್ರಮಾಣಗಳಿಂದ ಸಿದ್ಧವಾಗುವುದೆಂದು ತೋರಿಸಿದ್ದಾರೆ. 2)ವೈತಥ್ಯ ಪ್ರಕರಣ :ಪ್ರಪಂಚದ ಮಿಥ್ಯಾತ್ವವನ್ನು ಸಾಧಿಸಿದ್ದಾರೆ. 3)ಅದ್ವೈತ ಪ್ರಕರಣ :ಪಾರಮಾಥಿ೯ಕವಾಗಿ ಅದ್ವೈತವೇ ಸತ್ಯವೆಂಬುದನ್ನು ಸಿದ್ದಾಂತ ಮಾಡಿದ್ದಾರೆ 4)ಅಲಾತಶಾಂತಿ ಪ್ರಕರಣ: ಒಂದು ದೀವಟಿಗೆಯನ್ನು ಕ್ಥಯಲ್ಲಿ ಹಿಡಿದು ಸುತ್ತುತ್ತಾ ಇದ್ದರೆ ಅದು ಚಕ್ರಾಕಾರವಾಗಿ ಉರಿಯುತ್ತಿರುವಂತೆ ತೋರುತ್ತದೆ.ಈ ಭ್ರಾಂತಿಯನ್ನು ಅಲಾತಚಕ್ರವೆಂದು ನಿದೇ೯ಶಿಸಿದ್ದಾರೆ.ಈ ದೀವಟಿಗೆ ಸುತ್ತುವುದನ್ನೂ ನಿಲ್ಲಿಸಿದರೆ ಅದು ಕೇವಲ ಒಂದಾಗಿ ಕಾಣುತ್ತದೆ. ಪರಿಭ್ರಮಣದಲ್ಲಿರುವ ದೀವಟಿಗೆ ನಾನಾತ್ವದಿಂದ ತೋರಿ ಚಕ್ರಾಕಾರದ ಬ್ರಾಂತಿುiÀುನ್ನುಂಟು ಮಾಡಿದರೂ ಅಲಾತ ಶಾಂತಿಯಾದ ಮೇಲೆ ಕಾಣುವುದು ಒಂದೇ ದೀವಟಿಗೆ.ಹಾಗೆಯೇ ಮಾಯಾವರಣದಿಂದ ಕೂಡಿದ ನಾಮರೂಪಾತ್ಮಕವಾದ ಪ್ರಪಂಚವು ನಾನತ್ವವನ್ನು ಹೊಂದಿರುವಂತೆ ಕಂಡರೂ,ಆ ಭ್ರಾಂತಿಯ ನಿರಸನವಾದಮೇಲೆ ಅದ್ವೈತ ತತ್ವವೊಂದೇ ಕಾಣುತ್ತದೆ ಎಂಬುದು ಇದರ ಅಭಿಪ್ರಾಯ.ಈ ಅಲಾತ ಚಕ್ರದ ಉಪಮಾನವು ಬೌದ್ಧಮತದ ಮಾಧ್ಯಮಿಕರಲ್ಲಿ ಸಾಧಾರಣವಾಗಿ ಇರುವ ನಿದಶ೯ನ. ಶ್ರೀಗೋವಿಂದ ಭಗವತ್ಪಾದರು ಶ್ರೀ ಶಂಕರಾಚಾಯ೯ರ ಗುರುಗಳು. ಶ್ರೀ ಗೌಡಪಾದರು ಶ್ರೀ ಗೋವಿಂದ ಭಗವತ್ಪಾದರ ಗುರುಗಳು. 1)ಆಗಮಪ್ರಕರಣ: ಶ್ರೀ ಗೌಡಪಾದಾಚಾಯ೯ರು ಬರೆದಿರುವ ಆಗಮಪ್ರಕರಣವು ಮಾಂಡೂಕ್ಯೋಪನಿಷತ್ತಿನ ಉಪದೇಶವನ್ನು ಪ್ರಧಾನವಾಗಿ ಒಳಗೊಂಡಿವೆ. 1)ಇದೆಲ್ಲವೂ ಓಂ ಎ0ಬೀ ಅಕ್ಷರವು.ಅದರ ಉಪವ್ಯಾಖ್ಯಾನವಿದು: ಆಗಿಹೋಗಿರುವುದು,ಇರುವುದು,ಆಗಲಿರುವುದು-ಎಂಬಿದೆಲ್ಲವೂಓಂಕಾರವೇ.ಇನ್ನು ತ್ರಿಕಾಲಾತೀತವಾಗಿ ಏನಿರುವುದೋ ಅದೂ ಓಂಕಾರವೇ.(ಪುಟ 5) 2)ಇದೆಲ್ಲವೂ ಬ್ರಹ್ಮವೇ.ಈ ಆತ್ಮನೇ ಬ್ರಹ್ಮವು.ಈ ಆತ್ಮನು ನಾಲ್ಕು ಪಾದಗಳುಳ್ಳವನು.(ಪುಟ 5) 3)ಜಾಗರಿತವೆಂಬ ಸ್ಥಾನವುಳ್ಳವನೂ ಬಹಿಃಪ್ರಜ್ಞನೂ ಸಪ್ತಾಂಗನೂ ಹತ್ತೊಂಬತ್ತು ಮುಖವುಳ್ಳವನೂ ಸ್ಥೂಲಭೋಗವುಳ್ಳವನೂ ಆದ ವೈಶ್ವಾನರನು ಒಂದನೆಯ ಪಾದವು.(ಪುಟ6) 4)ಸ್ವಪ್ನವೆಂಬ ಸ್ಥಾನವುಳ್ಳವನೂ ಅಂತಃಪ್ರಜ್ಞನೂ ಸಪ್ತಾಂಗನೂ ಹತ್ತೊಂಬತ್ತು ಮುಖವುಳ್ಳವನೂ ಸೂಕ್ಷ್ಮಭೋಗವುಳ್ಳವನೂ ಆದ ತೈಜಸನು ಎರಡನೆಯ ಪಾದವು.(ಪುಟ6) 5)ಎಲ್ಲಿ ನಿದ್ರಿಸಿದವನು ಯಾವ ಕಾಮವನ್ನೂ ಬಯಸುವುದಿಲ್ಲವೋ ಯಾವ ಕನಸನ್ನೂ ಕಾಣುವುದಿಲ್ಲವೋ ಅದು ಸುಷುಪ್ತವು.ಸುಷುಪ್ತ ಸ್ಥಾನದಲ್ಲಿರುವವನಾಗಿ ಏಕೀಭೂತನಾಗಿ ಪ್ರಜ್ಞಾನಘನವೇ ಆಗಿ ಆನಂದಮಯನಾಗಿ ಆನಂದ ಭೋಗವುಳ್ಳವನಾಗಿ ಚೇತೋಮುಖನಾಗಿರುವ ಪ್ರಾಜ್ಞನು ಮೂರನೆಯ ಪಾದವು.(ಪುಟ 6) 6)ಈತನೇ ಸವೇ೯ಶ್ವರನು,ಈತನೇ ಸವ೯ಜ್ಞನು, ಈತನೇ ಎಲ್ಲಕ್ಕೂ ಯೋನಿಯು,ಭೂತಗಳ ಪ್ರಭವಾಪ್ಯಯವು(ಪುಟ 6) 2)ಪಾದತ್ರಯ ಕಾರಿಕೆಗಳು: 1) ಇಲ್ಲಿ ಈ ಶ್ಲೋಕಗಳಿರುತ್ತವೆ.ಹೊರಗಿನ ಅರಿವುಳ್ಳ ವಿಭುವು ವಿಶ್ವನು;ಒಳಗಿನ ಅರಿವುಳ್ಳವನಾದರೊ,ತೈಜಸನು.ಹಾಗೂ ಘನಪ್ರಜ್ಞನಾದವನು ಪ್ರಾಜ್ಞನು.ಒಬ್ಬನೇ ಮೂರು ಬಗೆಯವನು ಎನಿಸಿಕೊಳ್ಳುತ್ತಾನೆ.(ಪುಟ 7) ವಿಶ್ವಾದಿಗಳ ಅನುಭವವು ಜಾಗ್ರದವಸ್ಥೆಯಲ್ಲಿಯೂ ಇದೆ. 2)ಬಲಗಣ್ಣಿನ ದ್ವಾರದಲ್ಲಿ ವಿಶ್ವನು,ಮನಸ್ಸಿನ ಒಳಗೋ ಎಂದರೆ ತೈಜಸನು,ಹೃದಯದ ಆಕಾಶದಲ್ಲಿ ಪ್ರಾಜ್ಞನು.ಹೀಗೆ ದೇಹದಲ್ಲಿ ಮೂರು ಬಗೆಯಾಗಿರುತ್ತಾನೆ.(ಪುಟ 18) 3-4)ವಿಶ್ವನು ನಿತ್ಯವಾಗಿ ಸ್ಥೂಲ ಭೋಕ್ತø;ತೈಜಸನು ಪ್ರವಿವಿಕ್ತ ಭೋಕ್ತø ಮತ್ತು ಪ್ರಾಜ್ಞನು ಅವಿಭಕ್ತ ಭೋಕ್ತø.ಹಿಗೆ ಭೋಗವು ಮೂರು ಬಗೆ ಎಂದು ತಿಳಿಯಿರಿ.ಸ್ಥೂಲವು ವಿಶ್ವನಿಗೆ ತೃಪ್ತಿಯನ್ನುಂಟು ಮಾಡುವುದು.ಪ್ರವಿವಿಕ್ತವಾದದ್ದು ತೈಜಸನಿಗೂ ಮತ್ತು ಆನಂದವು ಪ್ರಾಜ್ಞನಿಗೂ ತ್ರಪ್ತಿಯನ್ನುಂಟು ಮಾಡುವುದು.ಹೀಗೆ ತೃಪ್ತಿಯು ಮೂರು ಬಗೆ ಎಂದು ತಿಳಿಯಿರಿ.(ಪುಟ 27) 5)ಮೂರು ಸ್ಥಳಗಳಲ್ಲೂ ಯಾವುದು ಭೋಗ್ಯವೋ,ಯಾವನು ಭೋಕ್ತನೆಂದು ಹೇಳಲ್ಪಟ್ಟಿರುವನೋ ಇವೆರಡನ್ನೂ ಅರಿತುಕೊಂಡವನು ಉಂಡರೂ ಲೇಪವನ್ನು ಹೊಂದುವುದಿಲ್ಲ.(ಪುಟ28) 3) ಸೃಷ್ಟಿಕಾರಿಕೆಗಳು: 6)ಮೊದಲೇ ಇರುವ ಸವ೯ಭಾವಗಳಿಗೇ ಉತ್ಪತ್ತಿಯು ಎಂದು ನಿಶ್ಚಯವು.ಪ್ರಾಣವೆಂಬ ಪುರುಷನು ಎಲ್ಲವನ್ನೂ ,ಚೇತಸ್ಸಿನ ಕಿರಣಗಳನ್ನು ,ಬೇರೆ ಬೇರೆಯಾಗಿ ಹುಟ್ಟಿಸುತ್ತಾನೆ.(ಪುಟ30) 7-8-೯)ಕೆಲವರು ಸೃಷ್ಟಿಚಿಂತಕರು ಸೃಷ್ಟಿಯು ವಿಭೂತಿ ಎಂದು ಬಗೆಯುತ್ತಾರೆ;ಅದು ಸ್ವಪ್ಮಮಾಯೆಗಳ ಸರೂಪವಾಗಿದೆ ಎಂದು ಮತ್ತೆ ಕೆಲವರು ವಿಕಲ್ಪಿಸಿರುತ್ತಾರೆ;ಸೃಷ್ಟಿಯು ಪ್ರಭುವಿನ ಇಚ್ಛಾಮಾತ್ರವು ಎಂದು ಸೃಷ್ಟಿಯಲ್ಲಿ ನಿಶ್ಚಿತಬುದ್ಧಿಯುಳ್ಳವರೆನ್ನುತ್ತಾರೆ;ಕಾಲದಿಂದ ಸೃಷ್ಟಿ ಎಂದು ಕೆಲವರು ಕಾಲಚಿಂತಕರು ಬಗೆಯುತ್ತಿರುವರು;ಭೋಗಕ್ಕಾಗಿ ಸೃಷ್ಟಿ ಎಂದು ಕೆಲವರು.ಇದು ದೇವನ ಸ್ವಭಾವವೇ.ಆಪ್ತಕಾಮನಿಗೆ ಎಲ್ಲಿಯ ಇಚ್ಛೆ?(ಪುಟ 43) 4)ತುರೀರಕಾರಿಕೆಗಳು: 10) ಈ ಶ್ಲೋಕಗಳಿರುತ್ತವೆ:ತುಯ೯ನು ಸವ೯ದುಃಖಗಳ ನಿವೃತ್ತಿಗೂ ಈಶಾನನು,ಪ್ರಭುವು,ಅವ್ಯಯನು, ,ಸವ೯ಭಾಗಳೊಳಗೆ ಇರುವ ಅದ್ವೈತನು,ಜೀವನು,ವಿಭುವೆನಿಸಿರುವನು.(ಪುಟ 52) 11)ಆ ವಿಶ್ವತೈಜಸರು ಕಾಯ೯ಕಾರಣ ಬದ್ದರೆಂದು ಒಪ್ಪಲಾಗಿದೆ.ಆದರೆ ಪ್ರಾಜ್ಞನು ಕಾರಣ ಬದ್ಧನು.ಇವೆರಡೂ ತುಯ೯ನಲ್ಲಿ ಸಿದ್ಧಿಸುವುದಿಲ್ಲ.(ಪುಟ55) 12)ಪ್ರಾಜ್ಞನು ತನ್ನನ್ನಾಗಲೀ ಮತ್ತೊಬ್ಬರನ್ನಾಗಲೀ,ಸತ್ಯವನ್ನಾಗಲಿ,ಅನೃತವನ್ನಾಗಲಿ,ಸ್ವಲ್ಪವೂ ಅರಿಯನು.ತುಯ೯ವೊ ಎಂದರೆ ಅದು ಯಾವಾಗಲೂ ಸವ೯ದೃಕ್ಕೇ ಆಗಿರುತ್ತದೆ.(ಪುಟ 63) ಪ್ರಾಜ್ಞತುರೀಯರ ವೈಲಕ್ಷಣ್ಯ: 13)ದ್ವೈತವನ್ನು ಅರಿಯದಿರುವುದು ಪ್ರಾಜ್ಞ,ತುಯ೯-ಇಬ್ಬರಿಗೂ ಸಮಾನವಾಗಿರುತ್ತದೆ.ಪ್ರಾಜ್ಞನು ಬೀಜನಿದ್ರೆಯಿಂದ ಕೂಡಿರುತ್ತಾನೆ.ಆ ನಿದ್ರೆಯು ತುಯ೯ನಲ್ಲಿ ಇರುವುದಿಲ್ಲ.(ಪುಟ6೯) 14)ಮೊದಲನೆಯ ಇಬ್ಬರೂ ಕನಸು ನಿದ್ರೆಗಳಿಂದ ಕೂಡಿರುವರು.ಪ್ರಾಜ್ಞನಾದರೋ ಕನಸಿಲ್ಲದ ನಿದ್ರೆಯಿಂದ ಕೂಡಿರುತ್ತಾನೆ.ತತ್ವ ನಿಶ್ಚಯವುಳ್ಳವರಿಗೆ ತುಯ೯ನಲ್ಲಿ ನಿದ್ರೆಯು ಕಾಣಿಸುವುದಿಲ್ಲ.ಸ್ವಪ್ಮವೂ ಕಾಣಿಸುವುದೇ ಇಲ್ಲ. (ಪುಟ71) 15)ಬೇರೆಯಾಗಿ ತಿಳಿಯುವವನಿಗೆ ಸ್ವಪ್ನವು.ತತ್ವವನ್ನು ಅರಿಯದೆ ಇರುವವನಿಗೆ ನಿದ್ರೆ.ಇವೆರಡರ ತಪ್ಪು ಕಲ್ಪನೆಯು ಕ್ಷಯವಾದರೆ ತುರೀಯ(ನಾಲ್ಕನೆಯ) ಸ್ಥಾನವನ್ನು ಪಡೆದುಕೊಳ್ಳುತ್ತಾನೆ.(ಪುಟ74) 16)ಅನಾದಿ ಮಾಯೆಯಿಂದ ನಿದ್ರೆ ಮಾಡುತ್ತಿರುವ ಜೀವನು ಯಾವಾಗ ಎಚ್ಚರುವನೋ ಆಗ ಅಜನೂ ಅನಿದ್ರನೂ ಅಸ್ವಪ್ನನೂ ಅಗಿರುವ ಅದ್ವೈತವನ್ನು ಅರಿತುಕೊಳ್ಳುವನು.(ಪುಟ77) 17)ಪ್ರಪಂಚವು ಇರುವುದಾದರೆ ಹೋದೀತು,ಸಂಶಯವಿಲ್ಲ.ಈ ದ್ವೈತವು ಮಾಯಾಮಾತ್ರ.ಪರಮಾಥ೯ದಿಂದ ಅದ್ವೈತವೇ.(ಪುಟ80) 18)ವಿಕಲ್ಪವು ಯಾರಿಂದಲಾದರೂ ಕಲ್ಪಿತವಾಗಿದ್ದಿದ್ದರೆ ಹೋಗಬಹುದಾಗಿತ್ತು.ಈ ವಾದವು ಉಪದೇಶಕ್ಕಾಗಿ;ತಿಳಿದಮೇಲೆ ದ್ವೈತವಿಲ್ಲ.(ಪುಟ83) ಮಾತ್ರಾತ್ರಯಕಾರಿಕೆಗಳು: (ಉಪನಿಷತ್) 8)ಅ ಈ ಆತ್ಮನು ಅಧ್ಯಕ್ಷರವಾಗಿ ಓಂಕಾರವು.ಇವನು ಅಧಿಮಾತ್ರನಾಗಿರುವನು.ಪಾದಗಳೇ ಮಾತ್ರೆಗಳು,ಮಾತ್ರೆಗಳೇ ಪಾದಗಳು;ಅಕಾರ ,ಉಕಾರ,ಮಕಾರ-ಎಂಬಿವೇ ಮಾತ್ರೆಗಳು.(ಪುಟ86) ೯)ಜಾಗರಿಕವೆಂಬ ಸ್ಥಾನವುಳ್ಳ ವೈಶ್ವಾನರನು ಅಕಾರವೆಂಬ ಒಂದನೆಯ ಮಾತ್ರೆಯು,ಅಸ್ತಿ ಅಥವಾ ಆದಿಮತ್ತ್ವ-ಎಂಬ ಹೋಲಿಕೆಗಳು ಈ ಎರಡರಲ್ಲಿಯೂ ಇವೆ.ಯಾವನು ಹೀಗೆಂದು ಅರಿತುಕೊಲಳುವನೋ ಅವನು ಸವ೯ಕಾಮಗಳನ್ನೂ ಪಡೆದುಕೊಳ್ಳುವನು.(ಪುಟ86) 10)ಸಪ್ನವೆಂಬ ಸ್ಥಾನವುಳ್ಳ ತೈಜಸನು ಉಕಾರವೆಂಬ ಎರಡನೆಯ ಮಾತ್ರೆಯು.ಏಕೆಂದರೆ ಉಭಯತ್ವ ಅಥವಾ ಉತ್ಕಷ೯-ಎಂಬ ಹೋಲಿಕೆಗಳಿವೆ.ಯಾವನು ಹೀಗೆಂದು ಅರಿತುಕೊಳ್ಳುವನೋ ಅವನು ಜ್ಞಾನ ಸಂತಾನವನ್ನು ಉತ್ಲಷ೯ಗೊಳಿಸಿಕೊಳ್ಳುವನು.ಸಮಾನನೂ ಆಗುವನು.ಅವನ ಕುಲದಲ್ಲಿ ಯಾವನೂ ಬ್ರಹ್ಮವನ್ನು ಅರಿಯದವನು ಇರುವುದಿಲ್ಲ(ಪುಟ87) 11) ಆ ಈ ಆತ್ಮನು ಅಧ್ಯಕ್ಷರವಾಗಿ ಓಂಕಾರವು.ಇವನು ಅಧಿಮಾತ್ರನಾಗಿರುವನು.ಪಾದಗಳೇ ಮಾತ್ರೆಗಳು,ಮಾತ್ರೆಗಳೇ ಪಾದಗಳು.ಅಕಾರ,ಉಕಾರ,ಮಕಾರ-ಎಂಬಿವೇ ಮತ್ರೆಗಳು.(ಪುಟ87) 1೯)ಇಲ್ಲಿ ಈ ಶ್ಲೋಕಗಳಿರುತ್ತವೆ.ವಿಶ್ವನಿಗೆ ಅತ್ವವನ್ನು ಹೇಳುವ ಇಚ್ಛೆಯಿರುವಲ್ಲಿ,ಮಾತ್ರೆ ಎಂದು ಇಟ್ಟುಕೊಳ್ಳುವಗ,ಆದಿತ್ವ ಸಾಮಾನ್ಯವು ಉತ್ಕಟವಾಗಿರುತ್ತದೆ.ಆಪ್ತಿ ಸಾಮಾನ್ಯವೂ ಉತ್ಕಟವಾಗಿರುತ್ತದೆ.(ಪುಟ 87) 20)ತೈಜಸನನ್ನು ಉತ್ವವೆಂದು ಅರಿಯುವಲ್ಲಿ,ಉಕಾರ ರೂಪವಾದ ಮಾತ್ರೆಯೆಂದು ಇಟ್ಟುಕೊಳ್ಳುವಾಗ,ಉತ್ಕಷ೯ವು ಸ್ಫುಟವಾಗಿ ಕಾಣುತ್ತದೆ.ಉಭಯತ್ವವೂ ಹಾಗೆಯೇ(ಪುಟ8೯) 21) ಪ್ರಾಜ್ಞನು ಮಕಾರವಾಗುವಲ್ಲಿ ,(ಮಕಾರವೆಂಬ)ಮಾತ್ರೆಯೆಂದಿಟ್ಟುಕೊಳ್ಳುವುದರಲ್ಲಿಯಾದರೋ,ಮಾನ ಎಂಬ ಹೋಲಿಕೆಯೂ ಉತ್ಕಟವಾಗಿರುತ್ತದೆ.(ಪುಟ8೯) 2223)ಮೂರು ಸ್ಥಿತಿಗಳಲ್ಲಿಯೂ ಸಮಾನವಾಗಿರುವ ಹೋಲಿಕೆಯನ್ನು ಯಾವನು ನಿಶ್ಚಯಿಸಿ (ಅರಿತುಕೊಂಡಿರುವನೋ,ಅವನು ಸವ೯ಭೂತಗಳಿಗೂ ಪೂಜ್ಯನು).ಆ ಮಹಾಮುನಿಯೇ ವಂದ್ಯನೂ ಆಗಿರುತ್ತಾನೆ.ಅಕಾರವು ವಿಶ್ವನಲ್ಲಿಗೆ ಒಯ್ಯುವುದು;ಉಕಾರವು ತೈಜಸನಲ್ಲಿಗೆ ಒಯ್ಯುವುದು. ಮಕಾರವಾದರೊ ಪ್ರಾಜ್ಞನಲ್ಲಿಗೆ ಒಯ್ಯುವುದು.ಅಮಾತ್ರದಲ್ಲಿ ಗತಿಯಿರುವುದಿಲ್ಲ.(ಪುಟ೯0) 6)ಪ್ರಣವ ಕಾರಿಕೆಗಳು: 12)ಅಮಾತ್ರವಾಗಿರುವ ನಾಲ್ಕನೆಯದು ಅವ್ಯವಹಾಯಕವೂ ಪ್ರಪಂಚೋಪಶಮವೂ ಶಿವವೂ ಅದ್ವೈತವೂ ಆಗಿರುತ್ತದೆ.ಹೀಗಿರುವ ಓಂಕಾರವು ಆತ್ಮನೇ. ಯಾವನು ಹೀಗೆಂದು ಅರಿತುಕೊಳ್ಳುವನೋ ಅವನು ಆತ್ಮರೂಪದಿಂದ ಆತ್ಮರೂಪವನ್ನು ಒಳಹೊಗುವನು.(ಪುಟ೯1) 24)ಇಲ್ಲಿ ಈ ಶ್ಲೋಕಗಳು ಬಂದಿರುತ್ತವೆ.ಓಂಕಾರವನ್ನು ಪಾದ ಪಾದವಾಗಿಅರಿತುಕೊಳ್ಳಬೇಕು,ಪಾದಗಳೇ ಮಾತ್ರೆಗಳೆಂಬುದಕ್ಕೆ ಸಂಶಯವಿಲ್ಲ,ಓಂ ಕಾರವನ್ನು ಪಾದ ಪಾದವಾಗಿ ಅರಿತುಕೊಂಡವನು ಏನನ್ನೂ ಚಿಂತಿಸಲಾರನು.(ಪುಟ೯2) 25-26)ಪ್ರಣವದಲ್ಲಿ ಚಿತ್ತವನ್ನು ನೆಲೆನಿಲ್ಲಿಸಿಕೊಳ್ಳಬೇಕು.ಪ್ರಣವವೇ ನಿಭ೯ಯವಾದ ಬ್ರಹ್ಮವು.ಪ್ರಣವದಲ್ಲಿ ಯಾವಾಗಲೂ ಮನಸ್ಸನ್ನು ನಿಲ್ಲಿಸಿಕೊಂಡವನಿಗೆ ಎತ್ತಲೂ ಭಯವಿಲ್ಲ.ಪ್ರಣವವೇ ಕಡಿಮೆಯ ಬ್ರಹ್ಮವು. ಪ್ರಣವವೇ ಹೆಚ್ಚಿನ ಬ್ರಹ್ಮವು.ಪ್ರಣವವೇ ಹಿಂದಿಲ್ಲದ್ದು,ಮುಂದಿಲ್ಲದ್ದು ್ದ,ಒಳಗಿಲ್ಲದ್ದು,ಹೊರಗಿಲ್ಲದ್ದು,ಅವ್ಯಯವಾದದ್ದು.(ಪುಟ೯3) 27)ಎಲ್ಲಕ್ಕೂ ಪ್ರಣವವೇ ಮೊದಲು,ನಡುವೆ ಮತ್ತು ಕೊನೆ.ಹೀಗೆಂದೇ ಪ್ರಣವವನ್ನು ಅರಿತುಕೊಂಡರೆ ಅನಂತರವಾಗಿಯೇ ಅದನ್ನು ಒಳಹೊಗುತ್ತಾನೆ.(ಪುಟ೯4) 28)ಪ್ರಣವವನ್ನೇ ಪ್ರತಿಯೊಬ್ಬನ ಹೃದಯದಲ್ಲಿರುವ ಈಶ್ವರನೆಂದು ತಿಳಿಯಬೇಕು.ಓಂಕಾರವು ಸವ೯ವ್ಯಾಪಿಯೆಂದು ಅರಿತಿರುವ ಧೀರನು ಶೋಕಿಸುವುದಿಲ್ಲ.(ಪುಟ ೯4) 2೯)ಅಮಾತ್ರವಾದ ಆನಂತಮಾತ್ರವಾದ ದ್ವೈತದ ಉಪಶಮವಾಗಿರುವ ಮಂಗಳಕರವಾದ ಓಂಕಾರವು ಯಾವನಿಗೆ ವಿದಿತವಾಗಿರುವುದೋ ಅವನೇ ಮುನಿ.ಉಳಿದ ಜನರಲ್ಲ.(ಪುಟ ೯5) ,,,,,,,,,,,,,,,,,,,,,,,,,ಆಗಮ ಪ್ರಕರಣವು ಸಂಪೂಣ೯,,,,,,,,,,,,,,,,,,,,,,,,,,,,,,,,,,,,,,,,,,,,,,,,,,, 2) ವೈತಥ್ಯ ಪ್ರಕರಣ: ಸಪ್ತವ್ಯತಥ್ಯ ಕಾರಿಕೆಗಳು: 1)ಭಾವಗಳು ಒಳಗೆ ಸಂವ್ರೃತವಾಗಿರುವವೆಂಬ ಕಾರಣದಿಂದ ಪಂಡಿತರು ಕನಸಿನಲ್ಲಿರುವ ಎಲ್ಲಾ ಭಾವಗಳಿಗೂ ವೈತಥ್ಯವನ್ನು ಹೇಳುತ್ತಾರೆ.(ಪುಟ101) 2)ಕಾಲವು ತಕ್ಕಷ್ಟು ದೀಘ೯ವಾಗಿಲ್ಲವಾದ್ದರಿಂದ ಆಯಾ ದೇಶಗಳಿಗೆ ಹೋಗಿ ಪದಾಥ೯ಗಳನ್ನು ನೋಡುತ್ತಾನೆಂಬುದಿಲ್ಲ ಮತ್ತು ಎಚ್ಚೆತ್ತವನು ಯಾವನೂ ಆ ದೇಶದಲ್ಲಿ ಇರುವುದೂ ಇಲ್ಲ.(ಪುಟ102) 3)ಕನಸಿನಲ್ಲಿ ರಥಾದಿಗಳು ಇಲ್ಲವೆಂದೂ ನ್ಯಾಯಪೂವ೯ಕವಾಗಿ ಶ್ರುತಿಯಲ್ಲಿ ಹೇಳಿರುತ್ತದೆ.ಅದರಿಂದ ಸ್ವಪ್ನವಿಷಯದಲ್ಲಿ ತಿಳಿದಿರುವ ವೈತಥ್ಯವನ್ನೇ ಅಲ್ಲಿ ತಿಳಿಸಿರುತ್ತದೆ- ಎನ್ನುವರು.(ಪುಟ14) 4)ಆದ್ದರಿಂದ ಎಚ್ಚರದಲ್ಲಿರುವ ಭೇದಗಳಿಗೂ ಅಲ್ಲಿ ಹೇಗೋ ಹಾಗೆ ಇಲ್ಲಿಯೂ ವೈತಥ್ಯವನ್ನು ಹೇಳುತ್ತಾರೆ.ಆದರೆ ಸ್ವಪ್ನದಲ್ಲಿ ಅಂತಃಸ್ಥಾನವಾಗಿರುವುದರಿಂದಲೂ ಸಂವೃತವಾಗಿರುವುದರಿಂದಲೂ ಬೇರೆಯಾಗಿರುತ್ತದೆ.(ಪುಟ107) 5)ಕನಸು ಎಚ್ಚರ -ಎಂಬೀ ಎರಡು ಸ್ಥಾನಗಳೂ ಒಂದೇ. ಏಕೆಂದರೆಪ್ರಸಿದ್ಧವಾದ ಹೇತುವಿನಿಂದ (ಅವುಗಳೊಳಗಿರುವ) ಭೇದಗಳು ಸಮವಾಗಿರುತ್ತವೆ-ಎಂದು ವಿವೇಕಿಗಳು ಹೇಳುತ್ತಾರೆ.(ಪುಟ114) 6)ಮೊದಲಲ್ಲಿಯೂ ಕೊನೆಯಲ್ಲಿಯೂ ಯಾವುದು ಇರುವುದಿಲ್ಲವೋ ಅದು ಈಗಲೂ ಹಾಗೆಯೇ(ಇರುವುದಿಲ್ಲ).ಮಿಥ್ಯಾ ವಸ್ತುವಿಗೆ ಸಮಾನವಾಗಿದ್ದುಕೊಂಡೇ ಸತ್ಯವಾಗಿರುವಂತೆ ಕಾಣುತ್ತಿರುವುವು.(ಪುಟ 115) 7)ಅವುಗಳಿಗಿರುವ ಸಪ್ರಯೋಜನತ್ವವು ಕನಸಿನಲ್ಲಿ ವಿರುದ್ಧವಾದ ಅಭಿಪ್ರಾಯಕ್ಕೆಡೆಯಾಗಿರುತ್ತದೆ.ಆದ್ದರಿಂದ ಆದ್ಯಂತಗಳಿರುವುದರಿಂದ ಅವು ಮಿಥ್ಯೆಯೆಂದೇ ಎನಿಸಿಕೊಳ್ಳುತ್ತವೆ.(ಪುಟ117) 8)ಅಪೂವ೯ವಾದದ್ದು ಸ್ಥಾನಿರ ಧಮ೯ವೇ.ಸ್ವಗ೯ನಿವಾಸಿಗಳಿಗೆ ಹೇಗೆ (ಅಪೂವ೯ಧಮ೯ವಿರುತ್ತದೆಯೋ ಹಾಗೆಯೇ ಇದು).ಇಲ್ಲಿ ಸುಶಿಕ್ಷಿತನಾದವನು ಹೇಗೋ ಹಾಗೆಯೇ ಇವನು ಅವುಗಳನ್ನು (ಅಲ್ಲಿಗೆ) ಹೋಗಿ ಕಾಣುತ್ತಾನೆ.(ಪುಟ120) ೯-10)ಸ್ವಪ್ನವೃತ್ತಿಯಲ್ಲಿಯೂ ಒಳಗೆ ಚಿತ್ತದಿಂದ ಕಲ್ಪಿತವಾದರೆ ಅಸತ್ತು,ಹೊರಗೆ ಚಿತ್ತದಿಂದ ಗೃಹೀತವಾದದ್ದು ಸತ್ತು;ಇವೆರಡಕ್ಕು ವೈತಥ್ಯವು ಕಂಡಿದೆ.ಜಾಗ್ರದ್ವøತ್ತಿಯಲ್ಲಿಯೂ ಒಳಗೆ ಚಿತ್ತದಿಂದ ಕಲ್ಪಿತವಾದದ್ದು ಅಸತ್ತು.ಹೊರಗೆ ಚಿತ್ತದಿಂದ ಗೃಹೀತವಾದದ್ದು ಸತ್ತು.ಆದ್ದರಿಂದ ಇವೆರಡಕ್ಕೂ ವೈತಥ್ಯವು ಯುಕ್ತವು.(ಪುಟ122) 11)ಎರಡೂ ಸ್ಥಾನಗಳಲ್ಲಿರುವ ಭೇದಗಳು ಮಿಥ್ಯೆಯೆಂದೇ ಆದರೆ ಈ ಭೇದಗಳನ್ನು ಅರಿಯುವಾತನು ಯಾರು?ಇವುಗಳನ್ನು ವಿಕಲ್ಪಿಸುವವನು ಯಾರು?(ಪುಟ 126) 12)ದೇವನಾದ ಆತ್ಮನೇ ತನ್ನ ಮಾಯೆಯಿಂದ ತನ್ನನ್ನೇ ತಾನೇ ಕಲ್ಪಿಸುತ್ತಾನೆ.ಆತನೆ ಭೇದಗಳನ್ನು ಅರಿಯುತ್ತಾನೆ.ಹೀಗೆಂದು ವೇದಾಂತದ ನಿಶ್ಚಯವು.(ಪುಟ127) 13)ಒಳಗೆ ಚಿತ್ತದಲ್ಲಿದ್ದು ಕೊಂಡಿರುವ ಅಪರ ಭಾವಗಳನ್ನೂ ಮಾಪ೯ಡಿಸುತ್ತಾನೆ.ನಿಯತವಾದ ಭಾವಗಳನ್ನೂ ಬಹಿಶ್ಚಿತ್ತನಾಗಿ ಮಾಪ೯ಡಿಸುತ್ತಾನೆ.ಹೀಗೆ ಪ್ರಭುವು ಕಲ್ಪಿಸುತ್ತಾನೆ.(13೯) 14)ಒಳಗೆ ಯಾವುವು ಚಿತ್ತಕಾಲದ ಭಾವಗಳಾಗಿರುವವೋ ಮತ್ತೆ ಹೊರಗೆ ಯಾವವು ದ್ವಯಕಾಲವುಳ್ಳವರಾಗಿರುವವೋ ಅವೆಲ್ಲವೂ ಕಲ್ಪಿತವೇ,ಅವುಗಳ ವಿಶೇಷಕ್ಕೆ ಮತ್ತೆ ಬೇರೆ ಕಾರಣವಿರುವುದಿಲ್ಲ. 15)ಯಾವವು ಒಳಗೆ ಅವ್ಯಕ್ತವಾಗಿರುವವೋ ಮತ್ತು ಯಾವುವು ಹೊರಗೆ ಸ್ಫುಟವಾಗಿ ಇರುವವೋ,ಅವೆಲ್ಲವೂ ಕಲ್ಪಿತವೇ,ವಿಶೇಷವಾದರೂ ,ಇಂದ್ರಿಯಾಂತರದಲ್ಲಿ ಇರುತ್ತದೆ.(ಪುಟ142) 16)ಮೊದಲು ಜೀವನನ್ನು ಕಲ್ಪಿಸುತ್ತಾನೆ.ಆಮೇಲೆ ಬೇರೆ ಬೇರೆ ಪ್ರಕಾರದ ಹೊರಗಿನ ಮತ್ತು ಒಳಗಿನ ಭಾವಗಳನ್ನು ಕಲ್ಪಿಸುತ್ತಾನೆ.ಎಂತ ವಿದ್ಯೆಯುಳ್ಳವನೋ ಅಮಥ ಸ್ಮøತಿಯವನಾಗಿ ಕಲ್ಪಿಸುತ್ತಾನೆ. (ಪುಟ 143) 17-18) ಇದು ಇಂಥದೆಂದು ನಿಶ್ಚಿತವಾಗಿ ಗೊತ್ತಾಗಿಲ್ಲದ ಹಗ್ಗವು ಕತ್ತಲೆಯಲ್ಲಿ ಹಾವು,ನೀರಿನ ಕೋಡಿ-ಮುಂತಾದ ಭಾವಗಳೆಂದು ಹೇಗೆ ವಿಕಲ್ಪವಾಗುತ್ತಿರುವುದೋ ಅದರಂತೆ ಆತ್ಮನು ಬೇರೆ ಬೇರೆ ಪ್ರಕಾರಗಳಿಂದ ವಿಕಲ್ಪನಾಗಿರುತ್ತಾನೆ.ಹಗ್ಗವು ಎಂದು ವಿಕಲ್ಪವು ತೊಲಗುವುದೋ ,ಹಗ್ಗವೇ ಎಂದು ಒಂದೇ ವಸ್ತುವಾಗಿ ಬಿಡುವುದೋ ಅದರಂತೆ ಆತ್ಮನ ನಿಶ್ಚಯವು ಒಂದೇ ಎಂದಾಗಿ ಬಿಡುವುದು. (ಪುಟ146) 1೯)ಪ್ರಾಣನೇ ಮುಂತಾದ ಈ ಲೆಕ್ಖವಿಲ್ಲದಷ್ಟು ಭಾವಗಳಾಗಿ ಆತ್ಮನು ವಿಕಲ್ಪಿತನಾಗಿರುತ್ತಾನೆ.ಇದು ಆ ದೇವನ ಮಾಯೆ, ಅದರಿಂದ ತಾನೇ ಮೋಹಿತನಾಗಿರುತ್ತಾನೆ(ಪುಟ150) 20)ಪ್ರಾಣನೆಂದು ಪ್ರಾಣವನ್ನು ಬಲ್ಲವರು;ಭೂತಗಳೆಂದು ಅವನನ್ನು ಬಲ್ಲವರು;ಗುಣಗಳು ಎಂದು ಗುಣಗಳನ್ನು ಬಲ್ಲವರು;ತತ್ವಗಳು ಎಂದು ಅವನ್ನು ಬಲ್ಲವರು.(ಪುಟ353) 21)ಪಾದಗಳೆಂದು ಪಾದಗಳನ್ನು ಬಲ್ಲವರು;ವಿಷಯಗಳು ಎಂದು ವಿಷಯಗಳನ್ನು ಬಲ್ಲವರು,ಲೋಕಗಳು ಎಂದು ಲೋಕಗಳನ್ನು ಬಲ್ಲವರು ಮತ್ತು ದೇವತೆಗಳು ಎಂದು ದೇವತೆಗಳನ್ನು ಬಲ್ಲವರು.(ಪುಟ153) 22)ವೇದಗಳು ಎಂದು ವೇದಗಳನ್ನು ಬಲ್ಲವರು;ಯಜ್ಞಗಳು ಎಂದು ಯಜ್ಞಗಳನ್ನು ಬಲ್ಲವರು; ಭೋಕ್ತø ಎಂದು ಭೋಕ್ತøವನ್ನು ಬಲ್ಲವರು ,ಭೋಜ್ಯವು ಎಂದು ಅದನ್ನು ಬಲ್ಲವರು ಹೇಳುತ್ತಾರೆ.(ಪುಟ153) 23)ಸೂಕ್ಷ್ಮವೆಂದು ಸೂಕ್ಷ್ಮವನ್ನು ಬಲ್ಲವರು.ಸ್ಥೂಲವೆಂದು ಸ್ಥೂಲವನ್ನು ಬಲ್ಲವರು,ಮೂತ೯ವೆಂದು ಮೂತ೯ವನ್ನು ಬಲ್ಲವರು ಮತ್ತು ಅಮೂತ೯ವೆಂದು ಅದನ್ನು ಬಲ್ಲವರು.(ಪುಟ154) 24)ಕಾಲವೆಂದು ಕಾಲವನ್ನು ಬಲ್ಲವರು ,ದಿಕ್ಕುಗಳು ಎಂದು ಅವನ್ನು ಬಲ್ಲವರು,ವಾದಗಳು ಎಂದು ವಾದವನ್ನು ಬಲ್ಲವರು,ಭುವನಗಳು ಎಂದು ಅವುಗಳನ್ನು ಬಲ್ಲವರು.(ಪುಟ154) 25)ಮನಸ್ಸೆಂದು ಮನಸ್ಸನ್ನು ಬಲ್ಲವರು,ಬುದ್ಧಿ ಎಂದು ಅದನ್ನು ಬಲ್ಲವರು,ಚಿತ್ತವೆಂದು ಚಿತ್ತವನ್ನು ಬಲ್ಲವರು,ಧಮ೯ದಮ೯ಗಳು ಎಂದು ಅವುಗಳನ್ನು ಬಲ್ಲವರು.(ಪುಟ154) 26)ಇಪ್ಪತ್ತೈದನೆಯವನೆಂದು ಕೆಲವರು,ಇಪ್ಪತ್ತಾರನೆಯವನೆಂದು ಕೆಲವರು, ಮೂವತ್ತೊಂದನೆಯವನೆಂದು ಕೆಲವರು,ಅನಂತನು ಎಂದು ಮತ್ತೆ ಕೆಲವರು.(ಪುಟ 154) 27)ಜನರು ಎಂದು ಜನವನ್ನು ಬಲ್ಲವರು ಹೇಳುತ್ತಿದ್ದಾರೆ,ಆಶ್ರಮ ಎಂದು ಅವನ್ನು ಬಲ್ಲವರು ಹೇಳುತ್ತಿರುವರು,ಲಿಂಗವನ್ನು ಬಲ್ಲವರು ಗಂಡು,ಹೆಣ್ಣು ಅಥವಾ ನಪುಂಸಕ ಎನ್ನುತ್ತಿರುವರು.ಪರನೆಂದೂ ಅಪರನೆಂದೂ ಮತ್ತೆ ಕೆಲವರು ಹೇಳುತ್ತಿರುವರು.(154) 28)ಸೃಷ್ಟಿಯೆಂದು ಸೃಷ್ಟಿಯನ್ನು ಬಲ್ಲವರು,ಲಯವೆಂದು ಲಯವನ್ನು ಬಲ್ಲವರು,ಸ್ಥಿತಿ ಎಂದು ಸ್ಥಿತಿಯನ್ನು ಬಲ್ಲವರು ಹೆಳುತ್ತಿರುವರು,ಆದರೆ ಇವೆಲ್ಲವೂ ಯಾವಾಗಲೂ ಅಗಿರುತ್ತಾನೆ.(ಪುಟ155) 2೯-30)ಯಾವನಿಗೆ ಭಾವವನ್ನು ಗುರುವು ಗುರುವು ತೋರಿಸುತ್ತಾನೋ ಅ ಭಾವವೇ ಅವನಿಗೆ ಕಾಣಿಸುತ್ತದೆ.ಮತ್ತು ಅದು ಈ ಆತ್ಮನಗಿ ಅದನ್ನು ಕಾಪಾಡಿಕೊಳ್ಲುತ್ತದೆ.ಅದರ ಗ್ರಹಣೆಯೆ ಅವನನ್ನು ಬಂದು ಸೇರಿಕೊಳ್ಳುತ್ತದೆ.ಈ ಬೇರೆಯಲ್ಲದ ಭಾವಗಳ ರೂಪದಿಂದ ಈ ಆತ್ಮನು ಬೆರೆಯೆ ಎಂದು ಕಾಣುತ್ತಿರುವನು.ಹೀಗೆಂದು ಯಾವನು ಅರಿತುಕೊಳ್ಳುವನೋ ಅವನು ಯವ ಶಂಕೆಯೂ ಇಲ್ಲದೆ ಕಲ್ಪಿಸುವನು.(157) 31)ಸಪ್ತಮಾಯೆಗಳು ಹೇಗೆ ಕಾಣುತ್ತಿರುವವೋ, ಗಂಧವ೯ನಗರವು ಹೇಗೆ ಕಾಣುತ್ತದೆಯೋ,ಹಾಗೆಯೇ ಈ ವಿಶ್ವವು ವೇದಾಥ೯ಗಳಲ್ಲಿ ವಿಚಕ್ಷಣರಾದವರಿಗೆ ಕಂಡು ಬಂದಿರುವುದು.(15೯) 32)ನಿರೋಧವಿಲ್ಲ,ಉತ್ಪತ್ತಿಯೂ ಇಲ್ಲ,ಬದ್ಧನಿಲ್ಲ,ಸಾಧಕನೂ ಇಲ್ಲ;ಮುಕ್ತನೂ ಇಲ್ಲ.ಇಂತಿದು ಪರಮಾಥ೯ವು.(ಪುಟ160) 33)ಈ ಆತ್ಮನು ಅಸತ್ತೇ ಆಗಿರುವ ಭವಗಳ ರೂಪದಿಂದಲೂ ,ಅದ್ವಯರೂಪದಿಂದಲೂ, ಕಲ್ಪಿತನಾಗಿರುತ್ತಾನೆ.ಭವಗಳೂ ಅದ್ವಯ ರೂಪದಿಂದಲೇ ಕಲ್ಪಿತವಾಗಿರುವವು.ಆದ್ದರಿಂದ ಅದ್ವಯತ್ವವೇ ಶಿವವು. (ಪುಟ168) 34)ಇದು ಆತ್ಮರೂಪದಿಂದಲೂ ನಾನಾ ರೂಪವಾಗಿಲ್ಲ.ತನ್ನರೂಪದಿಂದಲೂ ಹೇಗೂ ಇರುವುದಿಲ್ಲ.ಯವುದೂ ಬೆರೆಯಲ್ಲ,ಬೇರೆಯಲ್ಲದೆಯು ಅಲ್ಲ.ಹೀಗೆಂದು ತತ್ವವಿದರು ತಿಳಿದಿರುತ್ತಾರೆ.(ಪುಟ 173) 35)ವೀತರಾಗ ಭಯ ಕ್ರೋಧರಾದ ,ವೇದ ಪಾರಂಗತರಾದ ಮುನಿಗಳು ನಿವಿ೯ಕಲ್ಪನೂ ಪ್ರಪಂಚೋಪಶಮನೂ ಅದ್ವಯನೂ ಆದ ಈ ಆತ್ಮನನ್ನು ಕಂಡಿರುವರು.(ಪುಟ175) 36)ಆದ್ದರಿಂದ ಹೀಗೆಂದು ಅರಿತುಕೊಂಡು ಅದ್ವೈತದಲ್ಲಿ ಸ್ಮøತಿಯನ್ನು ಯೋಜನೆ ಮಾಡಿಕೊಳ್ಳಬೇಕು. ಅದ್ವೈತವನ್ನು ಪಡೆದುಕೊಂಡು ಜಡನಂತೆ ಲೋಕವ್ಯವಹಾರವನ್ನು ಮಾಡಬೇಕು.(ಪುಟ 176) 37)ಯತಿಯಾದವನು ಸ್ತೋತ್ರಮಡುವುದಿಲ್ಲದೆ,ನಮಸ್ಕಾರಮಾಡುವುದಿಲ್ಲದೆ,ಸ್ವಧಾಕಾರವಿಲ್ಲದೆ ಚಲಾಚಲನಿಕೇತನೂ ಆಗಿ ಯಾದೃಚ್ಛಿಕನಾಗಿರಬೇಕು.(ಪುಟ180) 38)ಒಳಗಿರುವುದನ್ನು ತತ್ವವೆಂದರಿತುಕೊಂಡು,ಹೊರಗಿರುವುದನ್ನು ತತ್ವವೆಂದರಿತುಕೊಂಡು ,ತತ್ವವೇ ತಾನಾಗಿ ಅದರಲ್ಲಿ ಪೂಣ೯ರತನಾಗಿದ್ದುಕೊಂಡು ತತ್ವದಿಂದ ಜಾರಿಬೀಳದೇ ಇರಬೇಕು.(ಪುಟ38) .......................................................................................................................... 3)ಅದ್ವೈತ ಪ್ರಕರಣ: 1-2)ಉಪಾಸನೆಯನ್ನಾಶ್ರಯಿಸಿರುವ ಧಮ೯ನು ಉತ್ಪತ್ತಿಗೆ ಮೊದಲು ಎಲ್ಲವೂ ಅಜವು ಎಂಬ ಜಾತ ಬ್ರಹ್ಮದಲ್ಲಿ ಇದ್ದುಕೊಂಡಿರುತ್ತಾನೆ.ಅದರಿಂದ ಅವನು ಕೃಪಣನೆನಿಸುವನು.ಆದ್ದರಿಂದ ಅಕಾಪ೯ಣ್ಯವಾದ ,ಹುಟ್ಟಿಲ್ಲದ ಸಮತೆಯನ್ನು ಹೊಂದಿರುವ, ಬ್ರಹ್ಮವು ಎಲ್ಲೆಲ್ಲಿಯೂ ಹುಟ್ಟುತ್ತಿದ್ದರೂ ಸ್ಬಲ್ಪವೂ ಹುಟ್ಟುವುದಿಲ್ಲ ವೆಂಬುದು ಹೇಗೆಂಬುದನ್ನು ಹೇಳುವೆನು.(ಪುಟ 1೯೯) 3)ಆತ್ಮನು -ಆಕಾಶವು ಘಟಾಕಾಶಗಳ ರೂಪದಿಂದ ಹುಟ್ಟುವಹಾಗೆ-ಜೀವರುಗಳ ರೂಪದಿಂದಲೂ,ಆಕಾಶವು ಘಟಾದಿಗಳ ರೂಪದಿಂದ ಹುಟ್ಟುತ್ತಿರುವಂತೆ -ಸಂಘಾತಗಳ ರೂಪದಿಂದಲೂ ಹುಟ್ಟುತ್ತಿರುವನು.ಹುಟ್ಟಿಗೆ ಇದು ನಿದಶ೯ನವು.(ಪುಟ204) 4-5)ಗಡಿಗೆಯೇ ಮುಂತಾದವುಗಳು ನಾಶವಾದರೆ ಹೇಗೆ ಆಕಾಶದಲ್ಲಿ ಅಡಗುವವೋ ಅದರಂತೆ ಇಲ್ಲಿ ಜೀವರು ಆತ್ಮನಂತೆ ಅಡಗುವರು.ಹೇಗೆ ಒಂದು ಘಟಾಕಾಶವು ಧೂಳು ಮುಂತಾದವುಗಳಿಂದ ಕೂಡಿದ್ದರೆ ಎಲ್ಲಾ (ಘಟಾಕಾಶಗಳೂ ಅವುಗಳೊಡನೆ)ಸೇರುವುದಿಲ್ಲವೋ ಅದರಂತೆ ಜೀವರು ಸುಖಾದಿ ಗಳೊಡನೆ(ಎಲ್ಲವೂ ಸೇರುವುದಿಲ್ಲ).(ಪುಟ206) 6)ಮತ್ತು ರೂಪ,ಕಾಯ೯,ಹೆಸರು -ಇವುಗಳು ಹೇಗೆ ಅಲ್ಲಲ್ಲಿ ಬೇರೆಬೇರೆಯಾಗಿರುವವೋ ಆಕಾಶಕ್ಕೆ ಮಾತ್ರ ಹೇಗೆ ಭೇದವಿರುವುದಿಲ್ಲವೋ ಅದರಂತೆ ಜೀವರುಗಳ ವಿಷಯದಲ್ಲಿಯೂ ನಿಣ೯ಯವು.(ಪುಟ 211) 7)ಹೇಗೆ ಆಕಾಶಕ್ಕೆ ಘಟಾಕಾಶವು ವಿಕಾರವೂ ಅಲ್ಲವೋ ಹಾಗೆಯೇ ಅವಯವವೂ ಅಲ್ಲವೋ ಹಾಗೆಯೇ ಪರಮಾತ್ಮನಿಗೆ ಜೀವನು ವಿಕಾರವೂ ಅಲ್ಲ,ಅವಯವವೂ ಅಲ್ಲ.(ಪುಟ212) 8)ಹೇಗೆ ಆಕಾಶವು ಬಾಲರಿಗೆ ಮಲಗಳಿಂದ ಮಲಿನವಾಗಿರುವುದೋ ಹಾಗೆ ಅಬುದ್ಧರಿಗೆ ಆತ್ಮನೂ ಮಲಗಳಿಂದ ಮಲಿನನಾಗಿರುತ್ತಾನೆ.(ಪುಟ 214) ೯)ಸಾಯುವಲ್ಲಿಯೂ ಹುಟ್ಟುವಲ್ಲಿಯೂ ಹೋಗುವಿಕೆ ಬರುವಿಕೆಗಳಲ್ಲಿಯೂ ನಿಂತಿರುವುದರಲ್ಲಿಯೂ ಎಲ್ಲಾ ಶರೀರಗಳಲ್ಲಿಯೂ ಜೀವನು ಆಕಾಶಕ್ಕಿಂತ ವಿಲಕ್ಷಣನಲ್ಲದೆ ಇರುತ್ತಾನೆ.(ಪುಟ215) 10)ಸಂಘಾತಗಳು ಕನಸಿನಂತೆ ಆತ್ಮಮಾಯೆಯಿಂದ ಸೃಷ್ಟಿಯಾಗಿರುತ್ತವೆ.ಅವು ಕೆಲವು ಮಿಕ್ಕವುಗಳಿಗಿಂತ ಹೆಚ್ಚೆಂದಾಗಲೀ,ಎಲ್ಲವೂ ಒಂದಕ್ಕೊದು ಸಮವೆಂದಾಗಲೀ ಹೆಳುವುದಕ್ಕೆ ಯುಕ್ತಿಯಿರುವುದೇ ಇಲ್ಲ.(ಪುಟ 216) 11) ರಸವೇ ಮುಂತಾದ ಕೋಶಗಳನ್ನು ತೈತ್ತಿರೀಯದಲ್ಲಿ ವಿವರಿಸಿದೆಯಷ್ಟೇ?ಅವುಗಳಿಗೆ ಆತ್ಮನಾದ ಪರಜೀವನನ್ನೆ ಆಕಾಶದಂತೆ ಎಂದು ನಾವು ತೋರಿಸಿಕೊಟ್ಟಿರುವುದು.(ಪುಟ221) 12)ಆಕಾಶವನ್ನು ನಾವು ತಿಳಿಸಿರುವಂತೆಯೇ ಮಧುಜ್ಞಾನದಲ್ಲಿ ಪೃಥ್ವಿಯಲ್ಲಿಯೂ ಉದರದಲ್ಲಿಯೂ -ಎಂದು ಎರಡೆರಡಾಗಿ ಪರಬ್ರಹ್ಮವನ್ನುತಿಳಿಸಿರುತ್ತದೆ.(ಪುಟ225) 13)ಜೀವಾತ್ಮರುಗಳಿಗೆ ಅಭೇದವಿರುವುದರಿಂದ ಅವರು ಬೇರೆ ಬೇರೆ ಎಂಬುದನ್ನು ನಿಂದಿಸಿರುವುದು ಹೀಗಾದರೇ ಸಮಂಜಸವಾಗುತ್ತದೆ.(ಪುಟ 225) 14)ಉತ್ಪತ್ತಿಗಿಂತ ಮೊದಲು ಜೀವಾತ್ಮರುಗಳಿಗೆ ಪೃಥಕ್ತ್ವವನ್ನು ಹೇಳಿದೆಯಷ್ಟೆ?ಅದು ಭವಿಷದ್ವøತ್ತಿಯಿಂದ ಗೌಣವಾಗಿ ಹೇಳಿದ್ದು.ಏಕೆಂದರೆ ಮುಖ್ಯತ್ವವು ಯುಕ್ತವಾಗಿರುವುದಿಲ್ಲ.(ಪುಟ 227) 15)ಮಣ್ಣು,ಕಬ್ಬಿಣ,ಕಿಡಿ-ಮುಂತಾದ ದೃಷ್ಟಾಂತಗಳಿಂದ ಬೇರೆ ಬೇರೆ ಪ್ರಕಾರದ ಸೃಷ್ಟಿಯನ್ನು ಹೇಳಿದೆಯಷ್ಟೆ?ಅದು ತತ್ವಜ್ಞಾನಕ್ಕೆ ಬುದ್ಧಿಯನ್ನು ತಂದಿಳಿಸುವ ಉಪಾಯವೇ,ಹೇಗೂ ಭೇದವಿರುವುದಿಲ್ಲ.(ಪುಟ230) 16)ಹೀನ,ಮಧ್ಯಮ,ಉತ್ಕøಷ್ಟ-ಎಂದು ಬೇರೆ ಬೇರೆ ದೃಷ್ಟಿಯುಳ್ಳ ಆಶ್ರಮಿಗಳು ಮೂರು ಬಗೆ.ಈ ಉಪಾಸನೆಯು ಅವರಿಗೋಸ್ಕರ ಕನಿಕರದಿಂದ ಉಪದಿಷ್ಟವಾಗಿರುತ್ತದೆ.(ಪುಟ23೯) 17)ತಮ್ಮ ತಮ್ಮ ಸಿದ್ಧಾಂತಗಳ ವ್ಯವಸ್ಥೆಯಲ್ಲಿ ದ್ವೈತಿಗಳು ನಿಶ್ಚಯವನ್ನು ಮಾಡಿಕೊಂಡಿವುದುದರಿಂದ ಒಬ್ಬರಿಗೊಬ್ಬರು ವಿರುದ್ಧವಾಗಿರುತ್ತಾರೆ.ಇದು ಅವರಿಗೆ ವಿರುದ್ಧವಾಗಿರುವುದಿಲ್ಲ.(ಪುಟ245) 18)ಏಕೆಂದರೆ ಅದ್ವೈತವು ಪರಮಾಥ೯ವು;ದ್ವೈತವು ಅದರ ಭೇದವೆನಿಸಿರುತ್ತದೆ.ವರಿಗೆ ಎರಡು ಪ್ರಕಾರದಿಂದಲೂ ದ್ವೈತವೇ247) 1೯)ಇದು ಮಾಯೆಯಿಂದಲೇ ಭಿನ್ನವಾಗಿರುತ್ತದೆ. ಇನ್ನು ಬೇರೆ ಯಾವಪ್ರಕಾರದಿಂದಲೂ ಅಜವಾದದ್ದು ಭಿನ್ನವಾಗಲಾರದು.(ಪುಟ251) 20)ಅಜಾತವೇ ಆದ ವಸ್ತುವಿಗೆ ವಾದಿಗಳು ಜನ್ಮವನ್ನು ಒಪ್ಪಿರುತ್ತಾರೆ.ಅಜಾತವೂ ಅಮೃತವೂ ಆದ ವಸ್ತುವು ಹೇಗೆ ತಾನೇ ಮತೃ೯ತ್ವವನ್ನು ಹೊಂದೀತು?(ಪುಟ253) 21-22)ಅಮೃತವಾದದ್ದು ಮತ್ಯ೯ವಾಗಲಾರದು.ಮತ್ಯ೯ವಾದದ್ದು ಅಮೃತವೂ ಆಗಲಾರದು.ಏಕೆಂದರೆ ಸ್ವಭಾವವು ಬೇರೊಂದು ತೆರವಾಗುವುದೆಂಬುದು ಹೇಗೂ ಆಗಲಾರದು.ಸ್ವಭಾವದಿಂದಲೇ ಅಮೃತವಾಗಿರುವ ಭಾವವು ಮತ್ಯ೯ವಾಗುವುದೆಂದು ಯಾವ ವಾದಿಯ ಮತವಿರುವುದೋ ಆ ವಾದಿಯ ಮತದಲ್ಲಿ ಅಮೃತವಾಗಿರುವುದೆಂಬುದು ಕೃತಕವಾಗಿರುವುದರಿಂದ ಅದು ತಾನು ಇದ್ದಂತೆಯೇ ಇರುವುದೆಂಬುದು ಹೇಗೆ ಆದೀತು?(ಪುಟ 258) 23)ಸೃಷ್ಟಿಯು ನಿಜವಾಗಿರಲಿ,ಹುಸಿಯಾಗಿರಲಿ-ಶ್ರುತಿಯು ಎರಡಕ್ಕೂ ಸಮನಾಗಿರುತ್ತದೆ.ಆದ್ದರಿಂದ ಯಾವುದು ನಿಶ್ಚಿತವಾಗಿಯೂ ಯುಕ್ತಿಯುಕ್ತವಾಗಿಯೂ ಇರುವುದೋ ಅದೇ ಶ್ರುತ್ಯಥ೯ವಾದೀತೇ ಹೊರತು ಮತ್ತೊಂದಾಗದು.(ಪುಟ262) 24) ಇಲ್ಲಿ ನಾನಾತ್ವವಿಲ್ಲ' ಎಂದು ಶ್ರುತಿಯಿರುವುದರಿಂದಲೂ 'ಇಂದ್ರನು ಮಾಯೆಗಳಿಂದ'(ಬಹುವಿಧವಾಗಿ ತೋರುತ್ತಾನೆ) ಎಂದಿರುವುದರಿಂದಲೂ 'ಹುಟ್ಟದೆ ಇರುವವನಾದರೂ ಬಹು ಪ್ರಕಾರವಾಗಿ ಅವನು ಹುಟ್ಟುತ್ತಾನೆ(ಎಂದಿರುವುದರಿಂದಲೂ ಇದೇ ಶ್ರುತ್ಯಥ೯) 25)ಸಂಭೂತ್ಯುಪಾಸನೆಯನ್ನು ಶ್ರುತಿಯು ನಿಂದಿಸುತ್ತಿರುವುದರಿಂದ ಹುಟ್ಟುವಿಕೆಯನ್ನು ಅಲ್ಲಗಳೆದಂತಾಯಿತು.'ಇವನನ್ನು ಮತ್ತೆ ಯಾರು ಉಂಟುಮಾಡುವವನು'ಎಂಬುದರಿಂದ ಕಾರಣವನ್ನು ಅಲ್ಲಗಳೆದಂತಾಯಿತು.270) 26)"ಆ ಇವನು ನೇತಿ ನೇತಿ(ಎಂಬ ಆತ್ಮನು)" ಎಂದು ಮೊದಲು ಹೇಳಿದ್ದನ್ನೆಲ್ಲ ಅದು ಅಗ್ರಾಹ್ಯವೆಂಬ ಕಾರಣದಿಂದ ಅಲ್ಲಗಳೆಯುತ್ತದೆ. ಆಗ ಅಜತತ್ವವು ತಾನೇ ಬೆಳಗುತ್ತದೆ.(ಪುಟ375) 27) ಸತ್ತಿಗೆ(ಇರುವುದಕ್ಕೆ) ಮಾಯೆಯಿಂದ ಜನ್ಮವೆಂಬುದು ಯುಕ್ತವಾಗಿರುತ್ತದೆ.ಆದರೆ ನಿಜವಾಗಿಯೂ ಅದಕ್ಕೆ ಜನ್ಮ ಎಂಬುದು ಯುಕ್ತವಾಗಲಾರದು. ಯಾವನ ಮತದಲ್ಲಿ ನಿಜವಾಗಿಯೂ ಹುಟ್ಟುವುದೇ ಹುಟ್ಟುತ್ತದೆಯೋ ಅವನ ಮತದಲ್ಲಿ ಹುಟ್ಟಿದ್ದೇ ಹುಟ್ಟುವುದೆಂಬಂತೆ ಆಗುತ್ತದೆ.(ಪುಟ284) 28) ಅಸತ್ತಿಗೆ (ತಾನೇ ಇಲ್ಲದಿರುವುದಕ್ಕೆ) ಮಾಯೆಯಿಂದಲಾಗಲೀ ,ನಿಜವಾಗಿಯಾಗಲೀ ಹುಟ್ಟುವುದೆಂಬುದು ಸಲ್ಲುವುದಿಲ್ಲ.ಬಂಜೆಯಮಗನು ನಿಜವಾಗಿಯಾಗಲಿ,ಮಾಯೆಯಿಂದಲಾಗಲಿ ಹುಟ್ಟಬಾರದಷ್ಟೆ?(ಪುಟ288) 2೯-30)ಹೇಗೆ ಸ್ವಪ್ನದಲ್ಲಿ ದ್ವಯದ ಆಕಾರದಲ್ಲಿ ಮನಸ್ಸು ಮಾಯೆಯಿಂದ ಅಲುಗಾಡುವುದೋ,ಹಾಗೆಯೇ ಎಚ್ಚರದಲ್ಲಿಯೂ ಮಾಯೆಯಿಂದಲೇ ಮನಸ್ಸು ಅಲುಗಾಡುವುದು.ಸ್ವಪ್ನದಲ್ಲಿ ಮನಸ್ಸು ಅದ್ವಯವೇ ಆಗಿದ್ದು ದ್ವಯದಂತೆ ತೋರುವುದೆಂಬುದರಲ್ಲಿ ಸಂಶಯವಿಲ್ಲ; ಹಾಗೆಯೇ ಎಚ್ಚರದಲ್ಲಿಯೂ ಮನಸ್ಸು ಅದ್ವಯವೇ ಆಗಿದ್ದು ದ್ವಯದಂತೆ ತೋರುವುದು.ಇದರಲ್ಲಿ ಸಂಶಯವಿಲ್ಲ.(ಪುಟ2೯2) 31)ಈ ಚರಾಚರತ್ಮಕವಾದ ದ್ವೈತವೆಲ್ಲವೂ ಮನೋದೃಶ್ಯವಾಗಿರುತ್ತದೆ.ಏಕೆಂದರೆ ಮನಸ್ಸು ಅಮನೀಭಾವವನ್ನು ಹೊಂದಿದರೆ ದ್ವೈತವು ತೋರುವುದೇ ಇಲ್ಲ.(ಪುಟ 2೯3) (ದ್ವೈತವೆಂಬುದು ಹಗ್ಗದ ಹಾವಿನಂತೆ ತೋರುವ ಮನೋವಿಕಲ್ಪ ಮಾತ್ರವೇ ) 32)ಆತ್ಮ ಚಸತ್ಯಾನು ಬೋಧದಿಂದ ಯಾವಗ ಸಂಕಲ್ಪಿಸದಿರುವುದೋ ಆಗ ಮನಸ್ಸು ಅಮನಸ್ಸಾಗುವುದು.ಏಕೆಂದರೆ ಗ್ರಾಹ್ಯವಿಲ್ಲದ್ದರಿಂದ ಅದು ಏನನ್ನೂ ಗ್ರಹಿಸುವುದಿಲ್ಲ.(ಪುಟ2೯4) 33)ಅಕಲ್ಪಕವೂ ಅಜವೂ ಆದ್ದರಿಂದ ಆತ್ಮಜ್ಞಾನವು ಜ್ಞೇಯಕ್ಕಿಂತ ಬೇರೆಯಾಗಿರುತ್ತದೆ.ಅದಕ್ಕೆ ಬ್ರಹ್ಮವೇ ಜ್ಞೇಯವು.ಅದು ಅಜವು ನಿತ್ಯವು;ಅಜವಾದ ಜ್ಞಾನದಿಂದಲೇ ಅಜವಾದ ಜ್ಞಾನವನ್ನು ಅರಿತುಕೊಳ್ಳುತ್ತಾನೆ. (ಪುಟ2೯6) 34)ವಿವೇಕ ಜ್ಞಾನವುಳ್ಳಾತನ ನಿರುದ್ಧವಾದ ನಿವಿ೯ಕಲ್ಪವಾದ ಮನಸ್ಸಿನ ಪ್ರಚಾರವನ್ನು ಅರಿತುಕೊಳ್ಳಬೇಕು.ಸುಷುಪ್ತಿಯಲ್ಲಿರುವ ಪ್ರಚಾರವು ಬೇರೆ,ಅದಕ್ಕೆ ಸಮನಲ್ಲ.(ಪುಟ2೯8) 35)ಏಕೆಂದರೆ ಸುಷುಪ್ತಿಯಲ್ಲಿ ಮನಸ್ಸು ಲಯವಾಗುತ್ತದೆ.ಅದನ್ನೇ ಆತ್ಮಜ್ಞಾನದಿಂದ ನಿಗ್ರಹ ಮಾಡಿಕೊಂಡರೆ ಲಯವಾಗುವುದಿಲ್ಲ.ಅದೇ ನಿಭ೯ಯವಾದ ಬ್ರಹ್ಮವು.,ಎಲ್ಲೆಲ್ಲಿಯೂ ತೋರುವ ಜ್ಞಾನದ ಬೆಳಕು.(ಪುಟ302) 36)ಇದು ಅಜವು,ಅನಿದ್ರವು,ಅಸ್ವಪ್ನವು,ನಾಮರಹಿತವಾದದ್ದು,ರೂಪರಹಿತವಾದದ್ದು,ಎಂದೆಂದಿಗೂ ಬೆಳಗತಕ್ಕದ್ದು ಸವ೯ಜ್ಞವು,ಹೇಗೂ ಉಪಚಾರವೆಂಬುದೇ ಇಲ್ಲ.(ಪುಟ305) 37) ಯಾ ವಾಕ್ಕೂ ಇಲ್ಲದವನು,ಎಲ್ಲಾ ಚಿಂತೆಗಳನ್ನೂ ಬಿಟ್ಟೆದ್ದಿರುವವನು,ಸುಪ್ರಶಾಂತನು,ಸಕೃಜ್ಜ್ಯೋತಿಯು,ಸಮಾಧಿಯು,ಅಚಲನು,ಅಭಯನು(ಪುಟ308) 38)ಎಲ್ಲಿ ಚಿಂತೆಯೇ ಇರುವುದಿಲ್ಲವೋ, ಅಲ್ಲಿಗ್ರಹಣವಿರುವುದಿಲ್ಲ,ಉತ್ಸಗ೯ವೂ ಇರುವುದಿಲ್ಲ.ಆಗ ಜ್ಞಾನವು ಆತ್ಮನಲ್ಲಿ ನಿಂತು ಬಿಟ್ಟಿರುತ್ತದೆ. ಅಜಾತಿಯಾಗಿ ಸಮತೆಯನ್ನು ಹೊಂದಿರುತ್ತದೆ.(ಪುಟ310) 3೯)ಇದು ಅಸ್ಪಶ೯ಯೋಗವೆಂದು ಪ್ರಸಿದ್ಧವಾಗಿರುತ್ತದೆ.ಇದು ಯಾವ ಯೋಗಿಗಳಿಗೂ ಕಾಣತಕ್ಕದ್ದಲ್ಲ.ಇದು ಅಭಯವಾಗಿದ್ದರೂ ಯೋಗಿಗಳು ಭಯವನ್ನು ಕಾಣುತ್ತಾ ಇದಕ್ಕೆ ಅಂಜುತ್ತಾರೆ.(ಪುಟ312) 40)ಯೋಗಿಗಳಿಗೆಲ್ಲ ಮನಸ್ಸಿನ ನಿಗ್ರಹದಿಂದಲೇ ಅಭಯವೂ ದುಃಖಕ್ಷಯವೂ ಜ್ಞಾನವೂ ಅಕ್ಷಯವಾದ ಶಾಂತಿಯೂ ಉಂಟಾಗುವುದು.(ಪುಟ314) 41)ಸಮುದ್ರವನ್ನು ಕುಶಾಗ್ರದಿಂದ ಒಂದೊಂದು ತೊಟ್ಟಾಗಿ ಎತ್ತಿಹಾಕುವುದು ಹೇಗೋ ಅದರಂತೆ ಬೇಸರವಿಲ್ಲದೆ ಮನಸ್ಸಿನ ನಿಗ್ರಹವಾಗುವುದು(ಪುಟ 317) 42)ಕಾಮಭೋಗಗಳಲ್ಲಿ ಚದರಿರುವ ಚಿತ್ತವನ್ನು ಬಿಗಿ ಹಿಡಿದುಕೊಳ್ಳಬೇಕು.ಲಯವಾಗಿ ಸುಪ್ರಸನ್ನವಾದರೆ ಅದನ್ನು ನಿಗ್ರಹಿಸಿಕೊಳ್ಳಬೇಕು.ಕಾಮವು ಹೇಗೋ ಹಾಗೆಯೇ ಲಯವೂ ಅಡ್ಡಿ(ಪುಟ317) 43)ಎಲ್ಲವೂ ದುಃಖವೇ ಎಂಬುದನ್ನು ಮನದಂದುಕೊಂಡು ಕಾಮಭೋಗದಿಂದ ಹಿಂತಿರುಗಿಸಿಕೊಳ್ಳಬೇಕು.ಎಲ್ಲವೂ ಅಜನೇ ಎಂದು ಮನದಂದುಕೊಂಡರೆ ಹುಟ್ಟಿದ್ದೇ ಕಾಣುವುದಿಲ್ಲ.(ಪುಟ318) 44)ಲಯವಾದರೆ ಚಿತ್ತವನ್ನು ಎಚ್ಚರಗೊಳಿಸಿಕೊಳ್ಳಬೇಕು.ವಿಕ್ಷೇಪವಾದರೆ ಮತ್ತೆ ಚಿತ್ತವನ್ನು ವಶಪಡಿಸಿಕೊಳ್ಳಬೇಕು.ಕಷಾಯಯುಕ್ತವಾದದ್ದನ್ನು ಅರಿತುಕೊಳ್ಳಬೇಕು.ಸಮಪ್ರಾಪ್ತಿಯಾದರೆ ಅಲುಗಾಡಿಸಬಾರದು.(ಪುಟ31೯) 45)ಅಲ್ಲಿ ದೊರಕುವ ಸವಿಯನ್ನು ಸವಿಯಬಾರದು.ಅದರಲ್ಲಿ ಸಂಗವಿಲ್ಲದೆ ಪ್ರಜ್ಞೆಯಿಂದೊಡಗೂಡಿರಬೇಕು.ನಿಶ್ಚಲವಾದ ಚಿತ್ತವು ಹೊರಕ್ಕೆ ಹೊರಟರೆ ಪ್ರಯತ್ನಪೂವ೯ಕವಾಗಿ ಒಂದುಗೂಡಿಸಬೇಕು.(ಪುಟ 321) 46)ಯಾವಾಗ ಚಿತ್ತವು ಲಯವಾಗದೆ ಇರುವದೋ ಮತ್ತೆ ವಿಕ್ಷಿಪ್ತವಾಗದೆಯೇ ಇರುವುದೋ,ಅಲುಗಾಡದೆ,ಅಭಾಸವೂ ಇಲ್ಲದೆ ಇರುವುದೋ ಆಗ ಬ್ರಹ್ಮವಾಯಿತು.(ಪುಟ 322) 47)ಇದು ಸ್ವಸ್ಥವು,ಶಾಂತವು,ಸನಿವಾ೯ಣವು,ಹೀಗೆಂದು ನಿಶ್ಚಯಿಸಿ ಹೇಳಲಾಗದ ಉತ್ತಮ ಸುಖವು,ಅಜವು,ಅಜವಾದ ಜ್ಞೇಯಕ್ಕಿಂತ ಅಭಿನ್ನವಾದದ್ದು,ಸವ೯ಜ್ಞವು-ಎಂದು ಹೇಳಲ್ಪಡುತ್ತದೆ.(ಪುಟ324) 48)ಯಾವ ಜೀವವೂ ಹುಟ್ಟುವುದಿಲ್ಲ,ಅವನಿಗೆ ಸಂಭವವೆ ಇರುವುದಿಲ್ಲ,ಯಾವುದರಲ್ಲಿ ಒಂದಿಷ್ಟೂ ಹುಟ್ಟುವುದಿಲ್ಲವೋ,ಅದೇ ಉತ್ತಮ ಸತ್ಯವು.(ಪುಟ325) ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, 4)ಅಲಾತ ಶಾಂತಿ ಪ್ರಕರಣ: ಮಂಗಲಾಚರಣೆ: 1)ಆಕಾಶದಂತಿರುವ ಜ್ಞೇಯಾ ಬಿನ್ನವಾದ ಜ್ಞಾನದಿಂದ ಆಕಾಶದಂತಿರುವ ಧಮ೯ರುಗಳನ್ನು(ಎಂದರೆ ಪರಮತ್ಮನನು) ಯಾವನು ಅರಿತುಕೊಂಡಿರುವನೋ ಆ ಪುರುಷಶ್ರೇಷ್ಠನನ್ನು ವಂದಿಸುತ್ತೇನೆ. (ಪುಟ 332) 2)ಅಸ್ಪಶ೯ಯೋಗವೆಂಬ ಹೆಸರಿನ,ಸವ೯ಪ್ರಾಣಿಗಳಿಗೂ ಸುಖವಾಗಿಯೂ ಹಿತವಾಗಿಯೂ ಇರುವ,ವಿವಾದವಿಲ್ಲದ,ವಿರುದ್ಧವಲ್ಲದ-ಯಾವ ದಶ೯ನವು ಶಾಸ್ತ್ರದಲ್ಲಿ ಉಪದಿಷ್ಟವಾಗಿರುತ್ತದೆಯೋ ಅದನ್ನು ನಮಸ್ಕರಿಸುತ್ತೇನೆ.(ಪುಟ336) 3-4)ಇರುವುದಕ್ಕೆ ಜನ್ಮವುಂಟೆಂದುಕೆಲವರು ವದಿಗಳು ಮತ್ರವೇ ಒಪ್ಪುತ್ತಾರೆ.ಇಲ್ಲದ್ದಕ್ಕೆ ಜನ್ಮವುಂಟೆಂದು ಇನ್ನು ಕೆಲವು ಧೀರರು ಒಪ್ಪುತ್ತಾರೆ.ಇರುವ ವಸ್ತು ಯಾವುದೂ ಹುಟ್ಟುವುದಿಲ್ಲ,ಇಲ್ಲದೆ ಇರುವ ವಸ್ತುವು ಹುಟ್ಟುವುದೆ ಇಲ್ಲ.ಹೀಗೆ ಒಬ್ಬರೊಡನೊಬ್ಬರು ವಿವಾದ ಮಾಡುತ್ತಿರುವ ಆದ್ವೈತಿಗಳು ಅಜಾತಿಯನ್ನು ವ್ಯಾಖ್ಯಾನ ಮಾಡುತ್ತಿರುವರು.(ಪುತ 340) 5)ಅವರು ಹೊರಪಡಿಸುವ ಅಜಾತಿಯನ್ನು ನಾವೂ ಅನುಮೋದಿಸುತ್ತೇವೆಯೇ ಹೊರತು ಅವರೊಡನೆ ವಿವಾದವನ್ನೇನೂ ಮಾಡುತ್ತಿಲ್ಲ.ಹೀಗೆ ನಮ್ಮ ಪಕ್ಷದಲ್ಲಿ ಅವಿವಾದವಿದೆ ಎಂಬುದನ್ನು ತಿಳಿದುಕೊಳ್ಳಿರಿ.(ಪುಟ342) 6-7-8)ವಾದಿಗಳು ಅಜಾತವದ ವಸ್ತುವಿಗೇ ಜನ್ಮವನ್ನು ಒಪ್ಪುತ್ತಿರುತ್ತಾರೆ.ಅಜಾತವೂ ಅಮೃತವೂ ಆಗಿರುವ ಧಮ೯ವು ಹೇಗೆ ಮತ್ಯ೯ತ್ವವನ್ನು ಹೊಂದೀತು?ಅಮೃತವಾದದ್ದು ಮತ್ಯ೯ವಾಗಲಾರದು.ಹಾಗೆಯೇ ಮತ್ಯ೯ವಾದದ್ದು ಅಮೃತವಾಗಲರದು;ಸ್ವಭಾವವು ಬೇರೆಯಾಗುವುದೆಂಬುದು ಎಂದಿಗೂ ಆಗಲಾರದು.ಅಮೃತವಾದ ವಸ್ತುವು ಯಾವನ ಮತದಲ್ಲಿ ಮತ್ಯ೯ವಾಗುತ್ತದೆಯೋ ಅವನ ಮತದಲ್ಲಿ ಕೃತಕವಾಗಿ ಅಮೃತವಾಗಿರುವ ಅದು ಹೇಗೆ ತಾನೇ ನಿಶ್ಚಲವಾಗಿ ಉಳಿದುಕೊಂಡೀತು ?(ಪುಟ343) ೯)ಸಾಂಸಿದ್ಧಿಕ,ಸ್ವಾಭಾವಿಕ,ಸಹಜ,ಅಕೃತ-ಎಂಬುವು ಪ್ರಕೃತಿಯೆನಿಸುವುವು.ಆ ಪ್ರಕೃತಿಯು ಸ್ವಭಾವವನ್ನು ಎಂದಿಗೂ ಬಿಡುವುದಿಲ್ಲ.(ಪುಟ344) 10)ಎಲ್ಲ ಧಮ೯ರೂ ಸ್ವಭಾವದಿಂದಲೇ ಜರಾಮರಣ ರಹಿತರಾಗಿರುತ್ತಾರೆ.ಜರಮರಣವನ್ನು ಒಪ್ಪಿಕೊಂಡು ಅದೇ ಭಾವನೆಯಿಂದ ಚ್ಯುತರಾಗುತ್ತಿರುವರು.(ಪುಟ347) 11)ಯಾವನಮತದಲ್ಲಿ ಕಾರಣವೇ ಕಾಯ೯ವೋ,ಅವನ ಮತದಲ್ಲಿ ಕಾರಣವೇ ಹುಟ್ಟುತ್ತದೆ.ಹುಟ್ಟುವುದು ಹೇಗೆ ಅಜವಾದೀತು?ಭಿನ್ನವಾದರೆ ಅದು ನಿತ್ಯವಾದದ್ದೆಂದಾದರೂ ಹೇಗೆ? 12)ಕಾರಣಕ್ಕಿಂತ ಅನನ್ಯವಾಗಿರುವುದು ಅಜವು ಎನ್ನುವುದಾದರೆ ಹುಟ್ಟು ಕಾಯ೯ರೂಪದಿಂದ ಕಾರಣವು ಹೇಗೆತಾನೇ ದ್ರುವವಾದೀತು?(ಪುಟ351) 13)ಅಜದಿಂದ ಕಾಯ೯ವು ಯಾವನ ಮತದಲ್ಲಿ ಹುಟ್ಟುತ್ತದೆಯೋ ಅವನಿಗೆ ದೃಷ್ಟಾಂತವು ಇರುವುದಿಲ್ಲ.ಹುಟ್ಟುವದರಿಂದ ಅದು ಹುಟ್ಟುವುದಾದರೆ ವ್ಯವಸ್ಥೆಯಿಲ್ಲವೆಂದೇ ಆಗುತ್ತದೆ.(ಪುಟ353) 14)ಯಾವ ಹೇತುವಿಗೆ ಫಲವು ಆದಿಯೆಂದು ಒಪ್ಪಿರುವರೋ ಫಲಕ್ಕೂ ಹೇತುವು ಆದಿಯೆಂದು ಒಪ್ಪಿರುವರೋ ಅವರು ಹೇತುವಿಗೂ ಫಲಕ್ಕೂ ಅನಾದಿತ್ವವನ್ನು ಹೇಳುವುದು ಹೇಗೆ ಸರಿಯಾದೀತು?(ಪುಟ355) 15)ಹೇತುವಿಗೆ ಆದಿಯು ಫಲವೆಂದೂ ಹೇತುವು ಫಲಕ್ಕೆ ಆದಿಯೆಂದೂ ಯಾರಮತವಿರುವುದೋ ಅವರಿಗೆ ಪುತ್ರನಿಂದ ಪಿತೃವಿಗೆ ಜನ್ಮವೆಂಬುದು ಹೇಗೋ ಹಾಗೆ ಜನ್ಮವೆಂಬುದು ಯುಕ್ತವಾದೀತು.(ಪುಟ357) 16)ಹೇತು ಫಲಗಳಗಿಗೆ ಉತ್ಪತ್ತಿಯಾಗುವಲ್ಲಿ ನೀನು ಕ್ರಮವನ್ನು ಒಪ್ಪಬೇಕು.ಏಕೆಂದರೆ ಒಂದೇ ಕಾಲದಲ್ಲಿ ಹುಟ್ಟುವುದಾದರೆ ಕೋಡುಗಳಂತೆ ಪರಸ್ಪರ ಸಂಬಂಧವೇ ಇಲ್ಲದಂತೆ ಆಗುವುದು.(ಪುಟ357) 17)ನಿನ್ನ ಮನದಲ್ಲಿ ಫಲವೊಂದು ಹುಟ್ಟುವುದಾದರ್ರೆ ಹೇತುವು ಸಿದ್ದವಾಗುವುದಿಲ್ಲ.ತಾನೇ ಹುಟ್ಟದೆ ಇರುವ ಹೇತು ಹೇಗೆ ತಾನೇ ಫಲವನ್ನುಂಟು ಮಾಡೀತು?(ಪುಟ358) 18)ಹೇತುವಿಗೆ ಫಲದಿಂದ ಸಿದ್ಧಿ,ಫಲಕ್ಕೆ ಸಿದ್ಧಿಯೂ ಹೇತುವಿನಿಂದಲೇ-ಎನ್ನುವೆಯಾದರೆ ಇವೆರಡರಲ್ಲಿ ಯಾವುದು ಮೊದಲು ಹುಟ್ಟಿತು,ಮೊದಲು ಹುಟ್ಟಿದ್ದರಿಂದಲ್ಲವೆ ಇನ್ನೊದು ಸಿದ್ಧವಾಗಬೇಕು.(ಪುಟ358) 1೯)ಅಶಕ್ತಿ,ಅಪರಿಜ್ಞಾನ ಅಥವಾ ಕ್ರಮಕೋಪ ಇವುಗಳೊಳಗೆ ಒಂದು ಅಂಟುತ್ತದೆ. ಈ ರೀತಿತಲ್ಲಿ ಸವ೯ಪ್ರಕಾರದಲ್ಲಿಯೂ ಬುದ್ದರು ಅಜಾತಿಯನ್ನೇ ಬೆಳಕಿಗೆ ಹಿಡಿದಂತಾಗುವರು.(35೯) 20)ಬೀಜಾಂಕುರವೆಂಬ ಹೆಸರಿನ ದೃಷ್ಟಾಂತವುಯಾವಗಲೂ ಸಧ್ಯಕ್ಕೆ ಸಮವಾಗಿರುತ್ತದೆ.ಸಾದ್ಯಸಮವಾಗಿರುವ ಹೇತುವು ಸಾಧ್ಯವನ್ನು ಸಿದ್ಧಪಡಿಸುವುದಕ್ಕೆ ಸರಿಯಾಗಲಾರದಷ್ಟೆ?(ಪದುಟ360) 21) ಹಿಂದಿನದು ಯಾವುದು,ಆಮೇಲೆ ಉಂಟಾಗುವುದು ಯಾವುದು-ಎಂಬುದನ್ನು ಅರಿಯದಿರುವುದು ಅಜಾತಿಯನ್ನೇ ಬೆಳಕಿಗೆ ಹಿಡಿಯುತ್ತದೆ.ಒಂದು ಧಮ೯ವು ಹುಟ್ಟುತ್ತಿರುವಲ್ಲಿ ಅದರ ಹಿಂದಿನದು ತಿಳಿಯಬರಲಿಲ್ಲವೆಂಬುದು ಹೇಗೆ ಸರಿ?(ಪುಟ363) 22)ಯಾವುದೊಂದು ವಸ್ತುವು ತಾನೆ ಆಗಲಿ,ಮತ್ತೊಂದರಿಂದಾಗಲಿ ಹುಟ್ಟುವುದಿಲ್ಲ. ಸತ್ತು,ಅಸತ್ತು,ಸದಸತ್ತು-ಹೇಗಿದ್ದರೂ ಯಾವವಸ್ತುವೂ ಹುಟ್ಟುವುದಿಲ್ಲ.(ಪುಟ363) 23)ಅನಾದಿಯಾದಫಲದಿಂದ ಅಥವಾ ಅನಾದಿಯಾಗಿರುವುದರಿಂದ ಹೇತುವು ಹುಟ್ಟುವಂತಿಲ್ಲ.ಫಲವೂ ಸ್ವಭಾವದಿಂದ ಹುಟ್ಟುವಂತಿಲ್ಲ.ಯಾವುದಕ್ಕೆ ಆದಿಯಿಲ್ಲವೋ ಅದಕ್ಕೆ ಹುಟ್ಟುವುದೆಂಬುದು ಇರಲಾರದು.(ಪುಟ 371) 24)ಪ್ರಜ್ಞಪ್ತಿಯು ಸನಿಮಿತ್ತವಾಗಿರಬೇಕು.ಇಲ್ಲದಿದ್ದರೆ ದ್ವಯವು ಇಲ್ಲವಾಗುವುದು.ಸಂಕ್ಲೇಶವು ತೋರಿಬರುತ್ತಿರುವುದರಿಂದಲೂ ಪರತಂತ್ರವು ಇದೆ ಎಂಬುದು ನಮ್ಮ ಅಭಿಪ್ರಾಯ.(ಪುಟ373) 25)ಪ್ರಜ್ಞಪ್ತಿಗೆ ನ್ಮಿತ್ತವಿರಬೇಕೆಂಬುದನ್ನು ಯುಕ್ತಿಯನ್ನು ಕಂಡು ಒಪ್ಪಿರುತ್ತೀರಿ.ನಿಮಿತ್ತವು ನಿಮಿತ್ತವಲ್ಲವೆಂಬ್ಯದನ್ನು ನಾವು ಭೂತದಶ೯ನದಿಂದ ಒಪ್ಪಿರುತ್ತೇವೆ.(ಪುಟ376) 26)ಚಿತ್ತವು ಪದಾಥ೯ವನ್ನು ಮುಟ್ಟುವುದಿಲ್ಲ.ಅಂತೆಯೇ ಅಥಾ೯ಭಾಸವನ್ನೂ ಮುಟ್ಟುವುದಿಲ್ಲ.ಏಕೆಂದರೆ ಪದಾಥ೯ವು ಅಭೂತವೇ ಆಗಿರುತ್ತದೆ.ಆದ್ದರಿಂದ ಅದಕ್ಕಿಂತ ಬೇರೆಯಾಗಿ ಅಥಾ೯ಭಾಸವೂ ಇರುವುದಿಲ್ಲ.(ಪುಟ 26) 27)ಚಿತ್ತವು ಮೂರು ಹಾದಿಗಳಲ್ಲೂ ನಿಮಿತ್ತವನ್ನು ಯಾವಾಗಲೂ ಮುಟ್ಟುವುದೇ ಇಲ್ಲ.ಅದಕ್ಕೆ ನಿಮಿತ್ತವಿಲ್ಲದೆ ವಿಪಯಾ೯ಸವು ಹೇಗೆ ಆದೀತು?(ಪುಟ383) 28)ಆದ್ದರಿಂದ ಚಿತ್ತವು ಹುಟ್ಟುವುದಿಲ.ಚಿತ್ತದೃಶ್ಯವೂ ಹುಟ್ಟುವುದಿಲ್ಲ;ಅದರ ಹುಟ್ಟನ್ನು ಯಾರು ಕಾಣುವರೋ ಅವರು ಆಕಾಶದಲ್ಲಿಯೆ ಹೆಜ್ಜೆಯ ಗುರುತನ್ನು ಕಾಣುವರು.(ಪುಟ385) 2೯)ಹುಟ್ಟದೆ ಇದ್ದುಕೊಂಡಿರುವುದೇ ಹುಟ್ಟುತ್ತಿರುವುದಷ್ಟೆ?ಆದ್ದರಿಂದ ಅಜಾತಿಯು ಪ್ರಕೃತಿಯು.ಪ್ರಕೃತಿಯು ಬೇಪ೯ಡುವುದೆಂಬುದು ಹೇಗೂ ಆಗಲೇಆರದು.(ಪುಟ401) 30)ಅನಾದಿಯಾದ ಸಂಸಾರವು ಅಂತವುಳ್ಳದ್ದೆಂಬುದು ಸಿದ್ಧವಾಗಲಾರದು.ಆದಿಯುಳ್ಳ ಮೋಕ್ಷವು ಅನಂತವೆಂಬುದೂ ಆಗಲಾರದು.(ಪುಟ402) 31-32)ಮೊದಲಲ್ಲಿಯೂ ಕೊನೆಯಲ್ಲಿಯೂ ಯಾವುದು ಇರುವುದಿಲ್ಲವೋ ಅದು ಈಗಿನ ಕಾಲ ದಲ್ಲಿಯೂ ಹಾಗೆಯೇ ಇರುವುದಿಲ್ಲ.ಹುಸಿಯಾಗಿರುವುದಕ್ಕೆ ಸಮಾನವಾಗಿದ್ದುಕೊಂಡೇ ಪದಾಥ೯ಗಳು ಹುಸಿಯಲ್ಲವೆಂಬಂತೆ ಕಾಣುತ್ತಿರುವುವು.ಅದಕ್ಕೆ ಪ್ರಯೋಜನವಿದೆ ಎಂಬುದು ಸ್ವಪ್ನದಲ್ಲಿ ವಿರುದ್ಧಾಭಿಪ್ರಾಯಕ್ಕೆ ಎಡೆಯಾಗುತ್ತದೆ.ಅದ್ದರಿಂದ ಮೊದಲು ಕೊನೆಗಳಿರುವವಾದ್ದರಿಂದ ಅವು ಮಿಥ್ಯೆಯೇ ಎನಿಸುವವು.(ಪುಟ404) 33)ಕನಸಿನಲ್ಲಿ ಕಾಣುವ ಎಲ್ಲ ಧಮ೯ಗಳೂ ಸುಳ್ಳೇ.ಏಕೆಂದರೆ ಅವು ಶರೀರದ ಒಳಗೆ ಕಂಡುಬರುತ್ತವೆ.ಸಂಕುಚಿತವಾದ ಈ ಪ್ರದೇಶದಲ್ಲಿ ಭೂತಗಳನ್ನು ಕಾಣುವುದೆಲ್ಲಿ ಬಂತು?(ಪುಟ405) 34)ಹೋಗಿ ಪದಾಥ೯ಗಳನ್ನು ನೋಡುತ್ತಾರೆಂಬುದು ಯುಕ್ತವಲ್ಲ.ಏಕೆಂದರೆ ಅಲ್ಲಿ ಹೋಗುವುದಕ್ಕೆ ಬೇಕಾದಷ್ಟು ಕಾಲದ ನಿಯಮವಿರುವುದಿಲ್ಲ ಮತ್ತು ಎಚ್ಚೆತ್ತವನು ಯಾವನೂ ಆ ದೇಶದಲ್ಲಿರುವುದಿಲ್ಲ. 35)ಮಿತ್ರರೇ ಮುಂತಾದವರೊಡನೆ ಆಲೋಚನೆ ಮಾಡಿ ಎಚ್ಚೆತ್ತವನು ಅದನ್ನು ನಂಬುವುದಿಲ್ಲ ಮತ್ತು ಯಾವುದನ್ನಾದರೂ ತೆಗೆದುಕೊಂಡಿದ್ದರೆ ಅದನ್ನು ಎಚ್ಚೆತ್ತವನು ಕಾಣುವುದಿಲ್ಲ.(ಪುಟ406) 36)ಕನಸಿನಲ್ಲಿರುವ ಶರೀರವು ಅಸತ್ಯವೇ.ಏಕೆಂದರೆ ಅದಕ್ಕಿಂತ ಬೇರೆಯಾದ ಮತ್ತೊಂದು ದೇಹವು ಕಂಡು ಬರುತ್ತದೆ.ಶರೀರವು ಹೇಗೋ ಹಾಗೆ ಚಿತ್ತದೃಶ್ಯವಾದದ್ದೆಲ್ಲವೂ ಅಸತ್ಯವೇ.(ಪುಟ407) 37)ಜಾಗರಿತದಂತೆಯೇ ಕಾಣಬರುವುದರಿಂದ ಸ್ವಪ್ನವು ಅದನ್ನೇ ಹೇತುವಾಗಿ ಉಳ್ಳದ್ದು ಎನಿಸುವುದು.ಅದನ್ನೇ ಹೇತುವಾಗಿ ಉಳ್ಳದ್ದಾಗಿರುವುದರಿಂದ ಅವನಿಗೇ ಎಚ್ಚರವು ಇರತಕ್ಕದ್ದು ಎನಿಸುತ್ತದೆ.(ಪುಟ40೯) 38)ಹುಟ್ಟುವುದೇ ಅಪ್ರಸಿದ್ಧವಾಗಿರುವುದರಿಂದ ಎಲ್ಲವೂ ಅಜವೆಂದು ಹೇಳಲ್ಪಟ್ಟಿರುತ್ತದೆ.ನಿಜವಾಗಿರುವುದರಿಂದ ಇಲ್ಲದ್ದು ಹುಟ್ಟುವುದೆಂಬುದು ಹೇಗೂ ಆಗಲಾರದು.(ಪುಟ410) 3೯)ಎಚ್ಚರದಲ್ಲಿ ಅಸತ್ತಾಗಿರುವುದನ್ನು ಕಂಡು ತನ್ಮಯನಾಗಿ ಕನಸಿನಲ್ಲಿಯೂ ಅದನ್ನು ಕಾಣುತ್ತಾನೆ.ಕನಸಿನಲ್ಲಿಯೂ ಅಸತ್ತಾದುದನ್ನು ಕಂಡು ಎಚ್ಚೆತ್ತವನು ಅದನ್ನು ಕಾಣುವುದಿಲ್ಲ.(ಪುಟ412) 40)ಅಸತ್ತಾದ ಹೇತುವಿರುವ ಅಸತ್ತು ಇಲ್ಲ,ಅಸತ್ತಾದ ಹೇತುವುಳ್ಳ ಸತ್ತೂ ಇರುವುದಿಲ್ಲ.ಸತ್ತು ಹೇತುವಾಗಿರುವ ಸತ್ತೂ ಇರುವುದಿಲ್ಲ.ಸತ್ತು ಹೇತುವಾಗಿರುವ ಅಸತ್ತು ಎಲ್ಲಿಯದು?(413) 41)ಹೇಗೆ ಎಚ್ಚರದಲ್ಲಿ ವಿಪಯಾ೯ಸದಿಂದ ಅಚಿಂತ್ಯವಾದ ಧಮ೯ಗಳನ್ನು ನಿಜವಾಗಿರುವಂತೆ ಮುಟ್ಟುತ್ತಿರುವುನೋ ಹಾಗೆಯೇ ಸ್ವಪ್ನದಲ್ಲಿಯೂ ವಿಪಯಾ೯ಸದಿಂದ ದಮ೯ಗಳನ್ನು ಅಲ್ಲಿಯೇ ಕಾಣುತ್ತಿರುವನು. (ಪುಟ 415) 42)ತೋರುವುದರಿಂದಲೂ ಆಚರಣೆಯಿಂದಲೂ ವಸ್ತುವಿದೆ ಎನ್ನುತ್ತಿರುವವರಿಗಾಗಿ,ಯಾವಾಗಲೂ ಅಜಾತಿಗೆ ಹೆದರುತ್ತಿರುವವರಿಗಾಗಿ ಬುದ್ಧರಿಂದ ಜಾತಿಯು ಉಪದಿಷ್ಟವಾಗಿರುತ್ತದೆ.(ಪುಟ 416) 43)ವಸ್ತುವು ತೋರುತ್ತಿದೆ ಎನ್ನುವ ಕರಣದಿಂದ ಅಜಾತಿಗೆ ಅಂಜಿ ಯಾರು ಅದನ್ನು ಬಿಟ್ಟಿರುವರೋ,ಅವರಿಗೆ ಜನ್ಮವನ್ನೊಪ್ಪಿರುವ ದೋಷಗಳು ಸಿದ್ಧವಾಗುವುದಿಲ್ಲ.ದೋಷವೂ ಸ್ವಲ್ಪವೆ ಆಗುವುದು.(ಪುಟ41೯) 44)ತೋರುತ್ತಿರುವುದರಿಂದಲೂ ಹಾಗೆಯೇ ಆಚರಣೆಯಾಗುತ್ತಿರುವುದರಿಂದಲೂ ಮಾಯಾ ಹಸ್ತಿಯು ಹೇಗೆ ಆನೆ ಎನಿಸುವುದೋ ಹಾಗೆಯೇ ತೋರುತ್ತಿರುವುದರಿಂದಲೂ ಧಮಾಚರಣೆಯಿಂದಲೂ ಬಾಹ್ಯವಸ್ತುವು ಇದೆ ಎನಿಸುತ್ತದೆ.(ಪುಟ420) 45)ಜಾತ್ಯಾಭಾಸ,ಚಲಾಭಾಸ,ಹಾಗೂ ವಸ್ತ್ವಾಭಾಸವು ,ಆದರೂ ವಿಜ್ಞಾನವು,ಅಜವು,ಅಚಲವು,ಅವಸ್ತು, ಹಾಗೂ ಶಾಂತವು,ಅದ್ವಯವು.(ಪುಟ 421) 46)ಹೀಗೆ ಚಿತ್ತವು ಹುಟ್ಟಿರುವುದಿಲ್ಲ,ಹೀಗೆ ಧಮ೯ರುಗಳು ಅಜರೆನಿಸುವರು.ಹೀಗೆಂದೇ ಅರಿತುಕೊಂಡವರು ವಿಪರೀತ ಜ್ಞಾನಕ್ಕೆ ಬೀಳದೆ ಇರುವರು.(ಪುಟ 423) 47)ನೆಟ್ಟಗಿರುವುದು ,ಸೊಟ್ಟಗಿರುವುದು-ಮುಂತಾದ್ದರಂತೆ ತೋರಿಕೊಳ್ಳುವುದು ಹೇಗೆ ಕೊಳ್ಳಿಯ ತಿರುಗಿವಿಕೆಯೋ,ಅರಿಯುವಿಕೆ,ಅರಿಯುವವನು-ಎಂಬರೂಪದಲ್ಲಿ ತೋರುವುದೊ ಹಾಗೆಯೇ ವಿಜ್ಞಾನದ ಚಲನೆಯೇ (ಪುಟ 425) 48)ಅಲುಗಾಡದೆ ಇರುವ ಕೊಳ್ಳಿಯು ಹೇಗೆ ಬೇರೆಯ ರೂಪದಿಂದ ತೋರಿಕೊಳ್ಳದೆ ಅಜವಾಗಿರುವುದೋ,ಹಾಗೆಯೇ ಅಲುಗಾಡದೆ ಇರುವ ವಿಜ್ಞಾನವು ಬೇರೆಯ ರೂಪದಿಂದ ತೋರಿಕೊಳ್ಳದೆ ಅಜವಾಗಿರುವುದು.(ಪುಟ426) 4೯-50)ಕೊಳ್ಳಿಯು ಸುತ್ತುತ್ತಿರುವಾಗ ತೋರಿಕೆಗಳು ಮತ್ತೊಂದು ಕಡೆಯಿಂದೇನೂ ಬಂದಿರುವುದಿಲ್ಲ.ಸುತ್ತದೆ ಇರುವಾಗ ಅವು ಅದನ್ನು ಬಿಟ್ಟು ಮತ್ತೊಂದುಕಡೆಗೆ ಹೋಗುವುದೂ ಇಲ್ಲ. ಅಥವಾ ಕೊಳ್ಳಿಯನ್ನು ಪ್ರವೇಶಿಸುವುದೂ ಇಲ್ಲ.ಅವು ಕೊಳ್ಳಿಯಿಂದ ಹೊರಟು ಬಂದಿರುವುದೂ ಇಲ್ಲ.ಏಕೆಂದರೆ ಅವು ನಿಜವಾದ ವಸ್ತುಗಳಲ್ಲ.ವಿಜ್ಞಾನದ ವಿಷಯದಲ್ಲಿಯೂ ಆ ತೋರಿಕೆಗಳು ಹೀಗೆಯೇ ಇರಬೇಕು.ಏಕೆಂದರೆ ಅವು ತೋರಿಕೆಯೆಂಬುದು ಸಮಾನವಾಗಿರುತ್ತದೆ.(ಪುಟ427) 51-52)ವಿಜ್ಞಾನವು ಅಲುಗಾಡುತ್ತಿರುವಾಗ ತೋರಿಕೆಗಳು ಮತ್ತೊಂದರಿಂದ ಬಂದಿರುವುದಿಲ್ಲ.ಅಲುಗಾಡದೆ ಇರುವಾಗ ಅ ವಿಜ್ಞಾನದಿಂದ ಬೇರೊಂದು ಕಡೆಗೆ ಹೋಗುವುದೂ ಇಲ್ಲ,ಅವು ವಿಜ್ಞಾನವನ್ನು ಸೇರಿಕೊಳ್ಳುವುದೂ ಇಲ್ಲ.ಅವು ವಿಜ್ಞಾನದಿಂದ ಹೊರಟು ಬಂದಿರುವುದಿಲ್ಲ.ಏಕೆಂದರೆ ಅವಕ್ಕೆ ವಸ್ತು ಸ್ವಬಾವವೇ ಇಲ್ಲ.ಕಾಯ೯ಕಾರಣ ಭಾವವು ಇಲ್ಲದ್ದರಿಂದ ಅವು ಎಂದೆಂದಿಗೂ ಅಚಿಂತ್ಯಗಳಾಗಿಯೇ ಇರುತ್ತವೆ.(ವಿಜ್ಞಾನ ಎಂದರೆ ಆತ್ಮ)(427) 53)ದ್ರವ್ಯವು ದ್ರವ್ಯಕ್ಕೆ ಹೇತುವಾದೀತು.ಒಂದು ಮತ್ತೊಂದಕ್ಕೆ ಹೇತುವಾದೀತು.ಆದರೆ ಧಮ೯ರುಗಳು ದ್ರವ್ಯವೆಂಬುದಾಗಲಿ ಮತ್ತೊಂದಕ್ಕಿಂತ ಬೇರೆ ಎಂಬುದಾಗಲಿ ಹೊಂದುವುದಿಲ್ಲ.(ಪುಟ42೯) 54)ಹೀಗೆ ಧಮ೯ಗಳು ಚಿತ್ತದಿಂದ ಹುಟ್ಟಿರುವುವುದಿಲ್ಲ. ಚಿತ್ತವೂ ಧಮ೯ದಿಂದ ಹುಟ್ಟಿರುವುದಿಲ್ಲ.ಈ ರೀತಿಯಲ್ಲಿ ವಿವೇಕಿಗಳಾದವರು ಹೇತು ಫಲಗಳು ಹುಟ್ಟಿಯೇ ಇಲ್ಲವೆಂಬ ಮತವನ್ನು ಪ್ರವೇಶಿಸುವರು.(ಪುಟ431) 55)ಹೇತು ಫಲಗಳ ಆವೇಶವಿರುವವರೆಗೆ ಹೇತು ಫಲಗಳು ಹುಟ್ಟುತ್ತಿರುವುವು.ಹೇತುಫಲಗಳ ಆವೇಶವು ಕ್ಷಯವಾದರೆ ಹೇತು ಫಲಗಳು ಹುಟ್ಟುವುದಿಲ್ಲ.(ಪುಟ 55) 56)ಹೇತು ಫಲಾವೇಶವು ಇರುವವರೆಗೆ ಸಂಸಾರವು ಹರಡಿಕೊಂಡಿರುವುದು.ಹೇತು ಫಲಾವೇಶವು ಸವೆದ ಮೇಲೆಸಂಸಾರವನ್ನು ಪಡೆಯದೆ ಇರುತ್ತಾನೆ.ಏಕೆಂದರೆ ಆಗ ಸಂಸಾರಕ್ಕೆ ಕಾರಣವಾದ ಧಮಾ೯ಧಮ೯ಗಳೇ ಇರುವುದಿಲ್ಲ.(ಪುಟ433) 57)ಸಂವೃತಿಯ ದೃಷ್ಟಿಯಿಂದ ಎಲ್ಲವೂ ಹುಟ್ಟುತ್ತದೆ.ಆದ್ದರಿಂದ ಶಾಶ್ವತವೆಂಬುದೇ ಇಲ್ಲ.ಪರಮಾಥ೯ ದೃಷ್ಟಿಯಿಂದ ಎಲ್ಲವೂ ಅಜವೇ,ಅದರಿಂದ ಉಚ್ಛೇದವೆಂದುದೇ ಇಲ್ಲ.(ಪುಟ434) 58)ಯಾವ ಧಮ೯ಗಳು ಹೀಗೆ ಹುಟ್ಟುವವೋ ಅವು ನಿಜವಾಗಿ ಹುಟ್ಟುವುದಿಲ್ಲ.ಅವುಗಳ ಜನ್ಮವು ಮಾಯೋಪಮವು.ಆ ಮಾಯೆಯೂ ಇರುವುದಿಲ್ಲ.(438) 5೯)ಹೇಗೆ ಮಾಯಾಮಯವಾದ ಬೀಜದಿಂದ ಮಾಯಾಮಯವಾದ ಮೊಳಕೆಯು ಹುಟ್ಟುವುದೋ,ಅದು ಹೇಗೆ ನಿತ್ಯವೂ ಅಲ್ಲವೋ ನಾಶವಾಗತಕ್ಕದ್ದೂ ಅಲ್ಲವೊ ಹಾಗೆಯೇ ಧಮ೯ಗಳಿಗೂ ಹೊಂದಿಸಿ ತಿಳಿದುಕೊಳ್ಳಬೇಕು.(ಪುಟ438) 60)ಅಜರಾದ ಯಾವ ಧಮ೯ಗಳಲ್ಲಿಯೂ ಶಾಶ್ವತ ,ಅಶಾಶ್ವತ ಎಂಬ ಮಾತಿಲ್ಲ.ಎಲ್ಲಿ ವಣ೯ಗಳಿರುವುದಿಲ್ಲವೋ ಅಲ್ಲಿ ವಿವೇಕವನ್ನು ಹೇಳುವುದಿಲ್ಲ.(ಪುಟ43೯) 61-62)(ಗ್ರಂಥದಲ್ಲಿ ಅಥ೯ವನ್ನು ಕೊಟ್ಟಿರುವುದಿಲ್ಲ) 63-66)ಸ್ವಪ್ನವನ್ನು ಕಾಣುವಾತನು ಸ್ವಪ್ನದಲ್ಲಿ ಓಡಾಡುತ್ತಾ ಹತ್ತು ದಿಕ್ಕುಗಳಲ್ಲಿಯೂ ಇರುವ ಅಂಡಜವನ್ನಾಗಲೀ ಸ್ವೇದಜವನ್ನಾಗಲೀ ಯಾವ ಯಾವ ಜೀವರುಗಳನ್ನು ಯಾವಾಗಲೂ ಕಾಣುತ್ತಿರುವನೋ ಅವು ಕನಸು ಕಾಣುವವನ ಚಿತ್ತಕ್ಕೇ ದೃಶ್ಯವಾಗಿರುತ್ತದೆ.ಅದಕ್ಕಿಂತ ಬೇರೆಯಾಗಿ ಇರುವುದಿಲ್ಲ.ಈ ಸ್ವಪ್ನದಶಿ೯ಯ ಚಿತ್ತವೂ ಅವನಿಗೇ ದೃಶ್ಯವಾಗಿರುತ್ತದೆ. ಎಚ್ಚರದಲ್ಲಿ ಓಡಾಡುತ್ತಿರುವವನು ಎಚ್ಚರದಲ್ಲಿ ಹತ್ತು ದಿಕ್ಕುಗಳಲ್ಲಿಯೂ ಅಂಡಜಗಳನ್ನಾಗಲೀ ಸ್ವೇದಜಗಳನ್ನಾಗಲೀ ಯಾವ ಯಾವ ಜೀವರನ್ನು ಯಾವಾಗ ಕಾಣುತ್ತಿರುವನೋ ಅವು ಎಚ್ಚರವಾಗಿರುವ ಚಿತ್ತಕ್ಕೇ ದೃಶ್ಯವಾಗಿರುವವು.ಅದಕ್ಕಿಂತ ಬೇರೆಯಾಗಿರುವುದಿಲ್ಲ.ಹಾಗೆಯೇ ಈ ಎಚ್ಚೆತ್ತವನ ಚಿತ್ತವೂ ಅವನಿಗೆ ದೃಶ್ಯವಾಗಿರುವುದೆಂದು ಒಪ್ಪಬೇಕು.(ಪುಟ 442) 67)ಅವೆರಡೂ ಒಂದಕ್ಕೊಂದು ದೃಶ್ಯವಾಗಿವೆ. ಇರುವುದು ಯಾವುದು ಎಂಬಿದನ್ನು ನಾವು ಹೇಳುವುದಿಲ್ಲ. ಎರಡೂ ಲಕ್ಷಣಾ ಶೂನ್ಯ.ಆ ಬುದ್ಧಿಯಿಂದಲೇ ಅರಿಯಲ್ಪಡುತ್ತದೆ.(443) 68-70)ಕನಸಿನಿಂದಾಗಿರುವ ಜೀವನು ಹೇಗೆ ಹುಟ್ಟಿ ಸಾಯುವನೋ ಅದರಂತೆ ಈ ಜೀವರುಗಳೆಲ್ಲರೂ ಉಂಟಾಗಿ ಇಲ್ಲವಾಗುವರು.ಮಾಯಾಮಯನಾದ ಜೀವನು ಹೇಗೆ ಹುಟ್ಟಿ ಸಾಯುವನೋ ಹಾಗೆಯೇ ಈ ಜೀವರುಗಳೆಲ್ಲರೂ ಉಂಟಾಗಿ ಇಲ್ಲವಾಗುವರು.ಹೇಗೆ ನಿಮಿ೯ತಕ ಜೀವನು ಹುಟ್ಟಿ ಸಾಯುವನೋ ಹಾಗೆಯೇ ಜೀವರುಗಳೆಲ್ಲರೂ ಉಂಟಾಗಿ ಇಲ್ಲವಾಗುವರು.(ಪುಟ445) 71)ಯಾವಜೀವನೂ ಹುಟ್ಟಿರುವುದಿಲ್ಲ.ಇವನಿಗೆ ಹುಟ್ಟುವ ಕಾರಣವೂ ಇರುವುದಿಲ್ಲ.ಎಲ್ಲಿಯಾದರೂ ಒಂದಿಷ್ಟೂ ಹುಟ್ಟುವುದಿಲ್ಲವೋ ಅದೇ ಉತ್ತಮ ಸತ್ಯವು.(ಪುಟ445) 72)ಗ್ರಾಹ್ಯ ಗ್ರಾಹಕ ರೂಪವಾದ ಈ ದ್ವೈತವು ಚಿತ್ತದ ಸ್ಪಂದನೆಯೇ.ಚಿತ್ತವು ನಿವಿ೯ಷಯವಾಗಿದೆ.ಅದರಿಂದ ಅಸಂಗವೆಂದೇ ಹೇಳುತ್ತಾರೆ.(ಪುಟ447) 73) ಯಾವುದು ಕಲ್ಪಿತ ವೃತ್ತಿಯಿಂದ ಇರುತ್ತದೆಯೋ ಅದು ಪರಮಾಥ೯ವಾಗಿರುವುದಿಲ್ಲ.ಪರತಂತ್ರಾಭಿ ಸಂವೃತ್ತಿಯಿಂದ ಇದ್ದೀತು.ಪರಮಾಥವಾಗಿ ಇರುವುದೇ ಇಲ್ಲ.(448) 74)ಅಜನೆಂಬುದೂ ಕಲ್ಪಿತ ಸಂವೃತ್ತಿಯಿಂದಲೇ;ಪರಮಾಥ೯ ದೃಷ್ಟಿಯಿಂದ ಅಜನೂ ಅಲ್ಲ.ಪರತಂತ್ರದ ಅಭಿನಿಷ್ಪತ್ತಿಯಿಂದ ಅವನು ಸಂವೃತಿಯಿಂದಲೇ ಹುಟ್ಟುತ್ತಿರುತ್ತಾನೆ.(ಪುಟ44೯) 75)ಇಲ್ಲದ್ದರಲ್ಲಿ ಅಭಿನಿವೇಶವಿರುತ್ತದೆಯೇ ಹೊರತು ಅಲ್ಲಿ ದ್ವೈತವಿರುವುದಿಲ್ಲ.ದ್ವಯವಿಲ್ಲವೆಂಬುದನ್ನು ಅರಿತಕೂಂಡರೇ ನಿಮಿತ್ತವಿಲ್ಲದಿರುವುದರಿಂದ ಹುಟ್ಟುವುದಿಲ್ಲ.(ಪುಟ453) 76)ಯಾವಾಗ ಉತ್ತಮ,ಅಧಮ,ಮಧ್ಯಮ-ಎಂಬ ಹೇತುಗಳು ಇರುವುದಿಲ್ಲವೋ ಆಗ ಚಿತ್ತವು ಹುಟ್ಟುವುದಿಲ್ಲ. ಹೇತುವಿಲ್ಲದಿದ್ದಾ ಗ ಫಲವೆಲ್ಲಿಂದ ಬರಬೇಕು.(ಪುಟ454) 77)ಅನಿಮಿತ್ತವಾದ ಚಿತ್ತವು ಹುಟ್ಟುವುದೆಂಬುದಿದೆಯಲ್ಲ,ಅದು ಅಜಾತವಾಗಿಯೇ ಎಲ್ಲವೂ ಆಗಿರುವ ಚಿತ್ತದ ಸಮವಾದ ಅದ್ವಯವಾದ ಅನುತ್ಪತ್ತಿಯು.ಏಕೆಂದರೆ ಅದು ಚಿತ್ತದೃಶ್ಯವೇ(ಪುಟ455) 78) ನಿಮಿತ್ತವಿಲ್ಲದಿರುವುದೇ ಸತ್ಯವೆಂದರಿತುಕೊಂಡರೆ ಬೇರೆಯಾಗಿರುವ ಹೇತುವನ್ನು ಸ್ವೀಕರಿಸದೆ ಶೋಕವಿಲ್ಲದ ,ಕಾಮವಿಲ್ಲದ ಅಭಯವಾದ ಸ್ಥಾನವನ್ನು ಸೇರುತ್ತಾನೆ.(ಪುಟ456) 7೯)ಅಭೂತಾಭಿನಿವೇಶದಿಂದಲೇ ಅದಕ್ಕೆ ಸಮಾನವಾದದ್ದರಲ್ಲಿ ಪ್ರವತಿ೯ಸುತ್ತಾನೆ.ವಸ್ತುವಿಲ್ಲವೆಂದು ಅರಿತಕೂಡಲೆ ನಿಸ್ಸಂಗನಾಗಿ ಹಿಂಜರಿಯುತ್ತಾನೆ.(ಪುಟ 457) 80)ಹಿಂತಿರುಗಿ ಮತ್ತೆ ಮುಂದುವರಿಯದೆ ಇರುವ ಚಿತ್ತದ ಆಗಿನ ಸ್ಥಿತಿಯು ನಿಶ್ಚಲವಾಗಿಯೇ ಇರುವುದು.ಇದು ಜ್ಞಾನಿಗಳಿಗೆ ವಿಷಯವಾಗಿರುವುದು,ಸಾಮ್ಯವು,ಅಜವು,ಅದ್ವಯವು.(ಪುಟ458) 81)ಹುಟ್ಟಿಲ್ಲದ್ದು,ನಿದ್ರೆಯಿಲ್ಲದ್ದು,ಕನಸಿಲ್ಲದ್ದು,ತಾನೇ ಬೆಳಗುವಂಥದ್ದು,ಈ ಧಮ೯ವು ಧಾತು ಸ್ವಭಾವದಿಂದ ಒಂದೇ ಸಮನೆ ಬೆಳಗುತ್ತಿರುವುದು.(ಪುಟ45೯) 82)ಯಾವುದಾದರೊಂದು ಧಮ೯ವನ್ನು ಗ್ರಹಿಸುವುದರಿಂದ ಈ ಭಗವಂತನು ಯಾವಾಗಲೂ ಸುಲಭವಾಗಿ ಆವೃತನಾಗುತ್ತಾನೆ.ಯಾವಾಗಲೂ ಕಷ್ಟದಿಂದ ತೋರಿಕೊಳ್ಳುತ್ತಾನೆ.(ಪುಟ462) 83)ಇದ್ದಾನೆ,ಇಲ್ಲ,ಇದ್ದೂ ಇಲ್ಲ-ಎಂದೋ ;ಇಲ್ಲವೆ ಇಲ್ಲ ಎಂದೋ ಚಲ,ಸ್ಥಿರ,ಉಭಯ,ಅಭಾವ-ಇವುಗಳಿಂದ ಬಾಲಿಶನಾದವನು ಮುಚ್ಚುತ್ತಲೇ ಇರುವನು.(ಪುಟ464) 84)ಯಾವ ನಲ್ಕು ಕೋಟಿಗಳನ್ನು ಗ್ರಹಿಸುತ್ತಿರುವುದರಿಂದ ಭಗವಂತನು ಯಾವಗಲೂ ಆವೃತನಾಗಿರುವನೋ,ಇವುಗಳ ಸೋಂಕಿಲ್ಲದೆಯೇ ಇರುವ ಭಗವಂತನನ್ನು ಕಂಡಿರುವವನೆ ಸವ೯ದಶಿ೯ಯು.(ಪುಟ468) 85)ಪೂಣ೯ ಸವ೯ಜ್ಞತೆಯನ್ನೂ ಆದಿಮಧ್ಯಾಂತಗಳನ್ನೂ ಪಡೆಯದ ಅದ್ವಯ ಬ್ರಾಹ್ಮಣ್ಯವನ್ನೂ ಪಡೆದುಕೊಂಡಿರುವುದರಿಂದ ಇನ್ನು ಮುಂದೆ ಏತಕ್ಕೆ ಕಮ೯ಗಳನ್ನು ಮಾಡಿಯಾನು?(ಪುಟ470) 86)ವಿಪ್ರರಿಗೆ ವಿನಯವು ಇದೇ.ಇದೇ ಸ್ವಾಬಾವಿಕವಾದ ಶಮವೆನಿಸುತ್ತದೆ.ಸ್ವಭಾವದಿಂದ ದಾಂತವಾಗಿರುವುದರಿಂದ ಇದೇ ದಮ.ಹೀಗೆಂದು ತಿಳಿದವನು ಶಮವನ್ನು ಹೊಂದುವನು.(ಪುಟ471) 87-88)ವಸ್ತುವುಳ್ಲದ್ದೂ ಅರಿವಿನೊಡನಿರುವುದೂ ಆಗಿರುವ ದ್ವೈತವು ಲೌಕಿಕವೆನಿಸುವುದು.ವಸ್ತುರಹಿತವಾಗಿ ಉಪಲಂಭವುಳ್ಳದ್ದಾಗಿರುವುದನ್ನು ಶುದ್ಧ ಲೌಕಿಕವೆನ್ನುತ್ತಾರೆ.ವಸ್ತುವಿಲ್ಲದೆ,ಅರಿವೂ ಇಲ್ಲದೆ,ಇರುವುದು ಲೋಕೋತ್ತರವೆನಿಸುತ್ತದೆ.ಹೀಗೆ ಜ್ಞಾನ,ಜ್ಞೇಯ ಮತ್ತು ವಿಜ್ಞೇಯಿವನ್ನು ಬುದ್ದರು ಯಾವಾಗಲೂ ಹೇಳುತ್ತಿರುತ್ತಾರೆ.(ಪುಟ472) 8೯)ಜ್ಞಾನವನ್ನೂ ಮೂರುಬಗೆಯ ಜ್ಞೇಯವನ್ನೂ ಅರಿತುಕೊಂಡರೆ,ಅಂಥ ಮಹಾಬುದ್ದಿವಂತನಿಗೆ ಎಲ್ಲೆಲ್ಲಿಯೂ ಸವ೯ಜ್ಞತ್ವವು ತಾನೇ ಇಲ್ಲಿಯೇ ಉಂಟಾಗುವುದು.(478) ೯0)ಹೇಯ,ಜ್ಞೇಯ,ಆಪ್ಯ,ಪಾಕ್ಯ-ಇವುಗಳನ್ನು ಅಗ್ರಯಾಣವಾಗಿ ಚೆನ್ನಾಗಿ ಅರಿತುಕೊಳ್ಳಬೆಕು.ಅವುಗಳೊಳಗೆ ವಿಜ್ಞೇಯವನ್ನುಳಿದು ಮೂರರಲ್ಲಿ ಅರಿವು ಇರುತ್ತದೆ ಎನ್ನುವರು.(ಪುಟ481) ೯1)ಧಮ೯ರುಗಳೆಲ್ಲರೂ ಸ್ವಭಾವದಿಂದಲೇ ಆಕಾಶದಂತೆ ಅನದಿಯಾ ಗಿರುತ್ತಾರೆ ಎಮದು ತಿಳಿಯಬೇಕು.ಅವರಲ್ಲಿ ಎಲ್ಲಿಯೂ ನಾನಾತ್ವವೆಂಬುದು ಇರುವುದೇ ಇಲ್ಲ.(ಪುಟ484) ೯2)ಎಲ್ಲ ಧಮ೯ರುಗಳೂ ಪ್ರಕೃತಿಯಿಂದಲೇ ಆದಿಬುದ್ಧರೆಂದು ಸುನಿಶ್ಚಿತರಾಗಿರುತ್ತಾರೆ.ಯಾವನಿಗೆ ಹೀಗೆಂಬ ಕ್ಷಾಂತಿಯಿರ್ರುವುದೋ ಅವನು ಅಮೃತತ್ವಕ್ಕೆ ತಕ್ಕವನಾಗುವನು.(ಪುಟ486) ೯3)ಎಲ್ಲಾ ಧಮ೯ರುಗಳೂ ಆದಿಶಾಂತರು,ಹುಟ್ಟದೆ ಇರುವರು,ಸ್ವಭಾವದಿಂದಲೆ ಸುನಿವೃ೯ತರಾಗಿರುತ್ತಾರೆ.ಸಮವಾಗಿ ಅಭಿನ್ನರಾಗಿರುವರು.ಅಜವು,ಸಾಮ್ಯವು,ವಿಶಾರದವು.(ಪುಟ487) ೯4)ಯಾವಾಗಲೂ ಭೇದದಲ್ಲಿ ಸಂಚರಿಸುತ್ತಿರುವವರಿಗೆ ವೈಶಾರದ್ಯವೆಂಬುದು ಇರುವುದಿಲ್ಲ.ಬೇರೆ ಎಂಬ ವಾದಿಗಳು ಭೇದದ ಕಡೆಗೆ ವಾಲಿರುವರು.ಆದ್ದರಿಂದ ಅವರು ಕೃಪಣರೆನಿಸುವರು.(ಪುಟ4೯0) ೯5)ಅಜವೂ ಸಾಮ್ಯವೂ ಆಗಿರುವ ಪರಮಾಥ೯ ತತ್ವದಲ್ಲಿ ಸುನಿಶ್ಚಿತರಾಗಿರುವವರು ಯಾರೇ ಆಗಿರಲಿ,ಅವರೇ ಲೋಕದಲ್ಲಿ ಮಹಾಜ್ಞಾನಿಗಳು.ಅದನ್ನು ಲೋಕವು ಅರಿಯದು.(ಪುಟ4೯0) ೯6)ಅಜರಾದ ಧಮ೯ರುಗಳಲ್ಲಿ ಅಜಜ್ಞಾನವು ಸಂಕ್ರಾಂತವಾಗದೆ ಇರುತ್ತದೆ-ಎನ್ನುವರು.ಜ್ಞಾನವು ಮತ್ತೊಂದು ಕಡೆಗೆ ಹೋಗದೆ ಇರುವುದಷ್ಟೆ?ಅದರಿಂದ ಅದನ್ನು ಅಸಂಗವೆಂದು ಹೇಳುತ್ತಾರೆ.(ಪುಟ4೯1) ೯7)ಅರಿಯದವನಿಗೆ ವೈಧಮ್ಯ೯ವು ಒಂದಿಷ್ಟು ಆದರೂ ಅಸಂಗತ್ವವು ಎಂದಿಗೂ ಇರುವುದಿಲ್ಲ.ಇನ್ನು ಆವರಣಚ್ಯುತಿಯು ಇರುವುದಿಲ್ಲವೆಂದು ಹೇಳುವುದೇನು?(ಪುಟ4೯2) ೯8)ಎಲ್ಲ ಧಮ೯ರುಗಳೂ ಆವರಣವಿಲ್ಲದವರೇ,ಸ್ವಭಾವದಿಂದಲೇ ನಿಮ೯ಲರು.ಮೊದಲಿನಿಂದಲೂ ಬುದ್ಧರು,ಮುಕ್ತರು.ಸಮಥ೯ರಾಗಿರುವುದರಿಂದ ಅರಿಯುವವರು.(ಪುಟ4೯3) ೯೯)ತಾಯಿಯಾದ ಬುದ್ಧನ ಜ್ಞಾನವು ಧಮ೯ಗಳಲ್ಲಿ ಹೋಗಿ ಸೇರುವುದಿಲ್ಲ.ಅಲ್ಲ ಧಮ೯ರುಗಳೂ ಜ್ಞಾನವೂ ಹೀಗೆಯೇ.ಇದನ್ನು ಬುದ್ಧನು ಹೇಳಿರುವುದಿಲ್ಲ.(ಪುಟ4೯4) 100)ದುದ೯ಶ೯ವೂ ಅತಿಗಂಭೀರವೂ ಅಜವೂ ಸಾಮ್ಯವೂ ವಿಶಾರದವೂ ಆಗಿದ್ದು ನಾನಾತ್ವವಿಲ್ಲದ ಪದವನ್ನು ಅರಿತುಕೊಂಡು ಬಲವಿದ್ದಷ್ಟು ಮಟ್ಟಿಗೆ ನಮಸ್ಕರಿಸುವೆವು.(ಪುಟ500) ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,ಸ,,,,,,,,,,,,,,,,,,,,,,,,,,,,,,,,,,,,,,,,,, ಭಾಷ್ಯಕಾರರು ರಚಿಸಿರುವ ಮಂಗಳಶ್ಲೋಕಗಳ ಸಂಗ್ರಹ: 1)ಈ ಶ್ಲೋಕದ ಅಭಿಪ್ರಾಯವೇನೆಂದರೆ :1)ವೇದಾಂತ ಪ್ರಸಿದ್ಧವಾದ ಬ್ರಹ್ಮವು ತಾನು ಅಜವೇ ಆಗಿರುತ್ತಿದ್ದರೂ ತನ್ನ ಐಶ್ವಯ೯ಯೋಗದಿಂದ ಎಂದರೆ ತನ್ನ ಅಧೀನದಲ್ಲಿರುವ ಮಾಯಾಶಕ್ತಿಯ ಸಂಬಂಧದಿಂದ ಜನ್ಮ ಸಂಬಂಧವನ್ನು ಪಡೆದಿರುತ್ತದೆ.ಎಂದರೆ ಸ್ಥಾವರ ಜಂಗಮಪ್ರಾಣಿಗಳ ರೂಪವಾಗಿಯೂ ಚೇತನಾಚೇತನಾ ರೂಪವಾಗಿಯೂ ಕಾಣಿಸಿಕೊಂಡಿರುತ್ತದೆ.ದೇವತೆಗಳು,ಋಷಿಗಳು-ಮೊದಲಾದವರು ಹೇಗೆ ತಮ್ಮ ಪ್ರಭಾವದಿಂದ ಮತ್ತೊಂದು ಸಾಧನ ಸಾಮಗ್ರಿಯನ್ನು ಬಯಸದೆ ಧ್ಯಾನ ಮಾತ್ರದಿಂದ ಬೇಕಾದ ರೂಪವನ್ನು ಪಡೆದುಕೊಳ್ಳುತ್ತಾರೋ ಹಾಗೆ ಬ್ರಹ್ಮವು ಸಾಧಕರುಗಳ ಅನುಗ್ರಹಾಥವಾಗಿ ತನ್ನ ಇಚ್ಚಾ ಮಾತ್ರದಿಂದ ಬೇರೆ ಬೇರೆಯ ರೂಪವನ್ನು ಹೊಂದಿ ಮಾಯಾಜನ್ಮವನ್ನು ಪಡೆದಿರುತ್ತದೆ. 2)ತಾನು ಅಗತಿಯಾಗಿದ್ದುಕೂಟಸ್ಥವೂ ಅಚಲವೂ ಆಗಿರುತ್ತಿದ್ದರೂ ಯಾವ ಕಾಯ೯ಕರಣಗಳೂ ಇಲ್ಲದೆಯೇ ಗತಿಮಂತವಾಗಿರುತ್ತದೆ.ಎಂದರೆಗಂತೃ(ಹೋಗುವವನು),ಗಂತವ್ಯ(ಹೋಗಿಸೇರತಕ್ಕದ್ದು) ಗತಿ(ಗಮನ,ಹೋಗುವುದು)ಎಂಬ ವಿಭಾಗವನ್ನು ದೇವಯಾನ,ಪಿತೃಯಾನ,ಕ್ಷುದ್ರಜನ್ಮ-ಎಂಬ ಗತಿತ್ರಯ ವಿಭಾಗವನ್ನು ಪಡೆದುಕೊಂಡಿರುತ್ತದೆ. 3) ತನಗೆರಡನೆಯದಿಲ್ಲದ ಏಕವೇ ಆಗಿರುತ್ತಿದ್ದರೂ ಅನೇಕತ್ವವನ್ನು ಎಂದರೆ ಜೀವರು,ಜಗತ್ತು,ಈಶ್ವರ-ಎಂಬ ರೂಪಗಳನ್ನು ಪಡೆದಿರುತ್ತದೆ.(ಪುಟ 503) ಪರಮಗುರುಗಳಿಗೆ ನಮಸ್ಕಾರ: ಈ ಶ್ಲೋಕದ ಅಭಿಪ್ರಾಯವೇನೆಂದರೆ ಅವಿರತ ಜನನ ಗ್ರಾಹಘೂೀರವಾದ,ಎಡೆಬಿಡದೆಶರೀರವನ್ನು ಧರಿಸುತ್ತಿರುವುದೆಂಬ,ದುಷ್ಟ ಮೊಸಳೆಗಳಿಂದ ಭಯಂಕರವಾಗಿರುವ ಈ ಸಂಸಾರ ಸಮುದ್ರದಲ್ಲಿ ಮುಳುಗುತ್ತಿರುವ ಪ್ರಾಣಿಗಳನ್ನು ಕಂಡು,ತಮ್ಮ ಪ್ರಜ್ಞೆಯೆಂಬ ಕಡಗೋಲಿನಿಂದ ಪೂವ೯ದಲ್ಲಿ ವೇದವೆಂಬ ಕ್ಷೀರಸಾಗರವನ್ನು ಕಡೆದು ಅದರೊಳಗಿನಿಂದ ನಾರಾಯಣನ ಅನುಗ್ರಹದಿಂದ ಕಷ್ಟಪಟ್ಟು ಸಂಪಾದಿಸಿದ -ಸಮುದ್ರ ಮಥನದಿಂದ ಅಮೃತವನ್ನು ಪಡೆದುಕೊಂಡ ದೇವತೆಗಳಿಗೂ ಸಿಕ್ಕಲಾರದ-ಈ ಬ್ರಹ್ಮಜ್ಞಾನವೆಂಬ ಅಮೃತವನ್ನು ಸಂಸಾರದಲ್ಲಿ ಮುಳುಗಿರುವ ಜೀವರ ಮೇಲಿನ ಕರುಣೆಯಿಂದ ತೆಗೆದುಕೊಟ್ಟರಲ್ಲ,ಆ ಗೌಡಪಾದಾಚಾಯ೯ರೆಂಬ,ಪೂಜ್ಯರಿಗೂ ಪೂಜ್ಯರೆನಿಸಿಕೊಂಡಿರುವ ಪರಮಗುರುಗಳನ್ನು ಅವರ ಪಾದಗಳಿಗೆರಗಿ ನಮಸ್ಕರಿಸುವೆನು.(ಪುಟ504) ಗುರು ನಮಸ್ಕಾರ: ಈ ಶ್ಲೋಕದಲ್ಲಿ ಅಡಗಿರುವ ಅಭಿಪ್ರಾಯವಿದು.ಮತ್ತೆ ಮತ್ತೆ ಹುಟ್ಟಿಬರುವುದೆಂಬ ಭಯಂಕರ ಸಮುದ್ರದಲ್ಲಿ ಮುಳುಗುವುದು,ತೇಲುವುದು-ಹೀಗೆ ಸಂಕಟಪಡುತ್ತಿದ್ದನನ್ನ ಹೃದಯದ ಅಂಧಕಾರವು ಯಾರ ಪಾದಗಳ ಬೆಳಕಿನ ಕಾಂತಿಯಿಂದ ಸಂಪೂಣ೯ವಾಗಿ ತೊಲಗಿತೋ,ಯಾರ ಅಡಿಗಳನ್ನು ಆಶ್ರಯಿಸಿದವರಿಗೆ ಎಲ್ಲಕ್ಕೂ ಹೆಚ್ಚಿನ ಅಮೂಲ್ಯವಾದ ತತ್ವ ಶ್ರವಣವೂ ಶಾಂತಿಯೂ ವಿನಯವೂ ದೊರಕಿದವೋ ಅಂಥ ಪವಿತ್ರವಾದ ಸಂಸಾರದ ಭಯವನ್ನು ಹೋಗಲಾಡಿಸುವ,ಆ ಗೋವಿಂದ ಭಗವತ್ಪಾದರ ಅಡಿಗಳನ್ನು ಸವ೯ಭಾವಗಳಿಂದಲೂ ನಮಸ್ಕರಿಸುತ್ತೇನೆ.(ಪುಟ505) ,,,,,,,,,,,,,,,,,,,,,,,,,,,,,,,,,,,,,ಗೌಡಪಾದ ಹೃದಯ ಗ್ರಂಥವು ಸಂಪೂಣ೯,,,,,,,,,,,,,,,,,,,,,,, ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, ಸಾರಾಂಶ: 1) ಆಗಮ ಪ್ರಕರಣ: 1-5)ಎಚ್ಚರದವಸ್ಥೆಯಲ್ಲಿರುವ ಹೊರ ಅರಿವಿನ ಅತ್ಮನಿಗೆ ವಿಶ್ವನೆಂದು ಹೆಸರು.ಕನಸಿನಲ್ಲಿರುವ ಒಳ ಅರಿವಿನ ಆತ್ಮನಿಗೆ ತೈಜಸನೆಂದು ಹೆಸರು.ತನಿನಿದ್ರೆ(ಸುಷುಪ್ತಿ) ಯಲ್ಲಿರುವ ಬರಿ ಅರಿವಿನ ಗಟ್ಟಿಯಾದ ಆತ್ಮನಿಗೆ ಪ್ರಾಜ್ಞನೆಂದು ಹೆಸರು.ಒಬ್ಬ ಆತ್ಮನೇ ಹೀಗೆ ಅವಸ್ಥೆಗಳ ಉಪಾಧಿಯಿಂದ ಮೂರು ಬಗೆಯಾಗಿ ತೋರುತ್ತಿರುವನು.ಇಂದ್ರಿಯಗಳ ಮೂಲಕ ಅರಿಯುವ ವಿಶ್ವನು ,ಮನಸ್ಸಿನ ಮೂಲಕ ನೆನಪಿಗೆ ತಂದುಕೊಳ್ಳುವತೈಜಸನು,ಈ ಎರಡು ಬಗೆಯ ಅನುಭವವೂ ಇಲ್ಲದ ಪ್ರಾಜ್ಞನು -ಎಂದು ಮೂರು ಬಗೆಯಲ್ಲಿಯೂ ಆತ್ಮನು ಎಚ್ಚರದಲ್ಲಿಯೇ ತೋರಿಬರುತ್ತಿರುವನು.ಸ್ಥೂಲವಾದ ವಿಷಯಗಳು ವಿಶ್ವನಿಗೆ,ಸೂಕ್ಷ್ಮವಾದ ವಿಷಯಗಳ ಭೋಗವು ತೈಜಸನಿಗೆ,ವಿಷಯಭೋಗದ ಆಯಾಸವಿಲ್ಲದ ಆನಂದ ಭೋಗವು ಪ್ರಾಜ್ಷನಿಗೆ-ಹೀಗೆ ಭೋಗಗಳ ಉಪಾಧಿಯಿಂದಲೂ ಅತ್ಮನು ಒಬ್ಬನೇ ಮೂರುವಿಧವಾಗಿ ತೋರುತ್ತಿರುವನು.(ಪುಟ ೯7) 6-೯)ಸುಷುಪ್ತಿಯ ಅತ್ಮನಾದ ಪ್ರಾಣನೇ ಜಗತ್ಸ್ರಷ್ಟøವಾದ ಪ್ರಾಣನು. ಆ ಪ್ರಾಣನಿಂದಲೇ ಚೇತನ ಅಚೇತನಾತ್ಮಕವಾದ ಜಗತ್ತೆಲ್ಲವೂ ಹುಟ್ಟುವುದು. ಪ್ರಾಣನು ಜಗದ್ರೂಪವಾಗುವ ಸೃಷ್ಟಿಯನ್ನು ವಾದಿಗಳು ಬಗೆ ಬಗೆಯಾಗಿ ವಿಕಲ್ಪಿಸಿರುತ್ತಾರೆ.ಆದರೆ ಅವಿದ್ಯೆಯೆಂಬ ಸ್ವಭಾವವೊಂದಲ್ಲದೆ ಈ ಸೃಷ್ಟಿಗೆ ಬೇರೆಯಾವ ಕಾರಣವೂ ಇರುವುದಿಲ್ಲ. 10-15)ನಿಜವಾಗಿ ನೋಡಿದರೆ ಆತ್ಮನಲ್ಲಿ ವಿಶ್ವ,ತೈಜಸ,ಪ್ರಾಜ್ಞ-ಎಂಬ ಮೂರು ರೂಪಗಳು ಇರುವುದಿಲ್ಲ. ಅವನು ಈ ಮೂರು ರೂಪಕ್ಕಿಂತಲೂ ಬೇರೆಯವನಾದ ತುರೀಯನು.ನಾಲ್ಕನೆಯವನು;ಅದ್ವಿತೀಯನು.ಪ್ರಾಜ್ಞ ರೂಪದಲ್ಲಿ ಏನನ್ನೂ ಅರಿಯದ್ದೆಂಬ ಕಾರಣ ಅಜ್ಞಾನವಿರುತ್ತದೆ;ವಿಶ್ವತೈಜಸರಲ್ಲಿ ಈ ಕಾರಣವೂ ಇದರಿಂದಾಗುವ ತಪ್ಪು ತಿಳುವಳಿಕೆಯೆಂಬ ಕಾಯಾ೯ಜ್ಞಾನವೂ ಇರುತ್ತದೆ.ಕಾರಣಾ ಅಜ್ಞಾನರೂಪವಾದ ನಿದ್ರೆಯಾಗಲೀ ಕಾಯ೯ ಅಜ್ಞಾನರೂಪವಾದ ಕನಸಾಗಲೀ ಇಲ್ಲದೆ ತನ್ನ ಚೈತನ್ಯರೂಪವಾದ ಎಚ್ಚರದಲ್ಲಿಯೇ ಇರುವವನು ತುರೀಯನು.ಅಜ್ಞಾನವೂ ಅನ್ಯಥಾ ಜ್ಞಾನವೂ ಆತ್ಮನಿಗೆ ನಿಜವಾಗಿಲ್ಲವೆಂದು ಯಾವನು ಅರಿತುಕೊಳ್ಳುವನೋ ಅವನೇ ನಿಜವಾಗಿ ಆತ್ಮಸ್ವರೂಪವನ್ನು ಪಡೆದುಕೊಂಡವನು.(ಪುಟ ೯7) 16-18)ಜೀವನಿಗೆ ಅನಾದಿ ಮಾಯೆಯಿಂದ ಅಜ್ಞಾನ ಅನ್ಯಥಾ ಜ್ಞಾನಗಳೆಂಬ ಕನಸು ಆಗಿರುತ್ತದೆಯೇ ಹೊರತು ಅವನಲ್ಲಿ ಇವು ಪರಮಾಥ೯ವಾಗಿರುವುದಿಲ್ಲ.ಈ ಕನಸಿನಿಂದ ಎಚ್ಚೆತ್ತಕೂಡಲೇ ಆತ್ಮತತ್ವವು ಹುಟ್ಟಿಲ್ಲದ್ದು,ಯಾವ ನಿದ್ರೆಯಾಗಲೀ ಕನಸಾಗಲೀ ಇಲ್ಲದ್ದು,ತನಗೆರಡನೆಯದಿಲ್ಲದ್ದು ಎಂಬ ಅರಿವು ಆಗುವುದು.ಈಗ ಅವಸ್ಥೆಗಳು ವಿಶ್ವತೈಜಸಾದಿರೂಪಗಳು ಎಂಬ ಪ್ರಪಂಚವಿದೆಯೆಂದೂ ಜ್ಞಾನದಿಂದ ಅದು ಹೋಗುವುದೆಂದೂ ಅಭಿಪ್ರಾಯವಲ್ಲ.ಅದು ಪರಮಾಥ೯ವಾಗಿಲ್ಲವೇ ಇಲ್ಲ.ಆತ್ಮನು ನಿಜವಾಗಿ ಯಾವಾಗಲೂ ಅದ್ವೈತನೇ ಆಗಿರುತ್ತಾನೆ.-ಎಂದು ಅರಿತುಕೊಳ್ಳುವುದೇ ಅದ್ವೈತ ಪ್ರಾಪ್ತಿಯು.ಈ ಜ್ಞಾನವನ್ನು ತಿಳಿಸುವ ಗುರು,ಅದನ್ನರಿಯುವ ಶಿಷ್ಯ -ಎಂಬ ಭೇದವೂ ಪರಮಾಥ೯ವಲ್ಲ.ಅವಿದ್ಯಾಕೃತವಾದ ಈ ಭೇದವು ಪರಮಾಥ೯ಜ್ಞಾನವಾಗುವವರೆಗೆ ನಿಜವೆಂದು ತೋರಿಬರುತ್ತದೆ.ಜ್ಞಾನವುಂಟಾದ ಬಳಿಕ ಈ ಭೇದವೂ ಮಾಯಾಮಾತ್ರವೇ ಎಂಬ ಅರಿವು ಉಂಟಾಗಿಬಿಡುತ್ತದೆ.(ಪುಟ ೯8) 1೯-23)ಆತ್ಮನಲ್ಲಿ ವಾಚ್ಯವಾಚಕರೂಪವಾದ ಭೇದವೂ ಇರುವುದಿಲ್ಲ.ವಾಚ್ಯ ದೃಷ್ಟಿಯಿಂದ ಆತ್ಮನು ಬ್ರಹ್ಮವು.ವಾಚಕ ದೃಷ್ಟಿಯಿಂದ ನೋಡಿದರೆ ಆತ್ಮನು ಓಂಕಾರವು.ವಾಚ್ಯವಾಚಕ ವಿಭಾಗ ರಹಿತನಾದ ತುರೀಯಾತ್ಮನನ್ನು ಓಂಕಾರವೆಂದಾಗಲೀ ಬ್ರಹ್ಮವೆಂದಾಗಲೀ ಕರೆಯುವುದಕ್ಕಿಲ್ಲ.ಬೆಹ್ಮರೂಪವಾದ ಆತ್ಮನಲ್ಲಿ ವಿಶ್ವ,ತೈಜಸ,ಪ್ರಾಜ್ಞ-ಎಂಬ ಪಾದಗಳು ಕಲ್ಪಿತವಾಗಿರುವಂತೆ ಓಂಕಾರರೂಪನಾದ ಆತ್ಮನಲ್ಲಿ ಅಕಾರ,ಉಕಾರ,ಮಕಾರ-ಎಂಬ ಪಾದವಾಚಕಗಳಾದ ಮಾತ್ರೆಗಳು ಕಲ್ಪಿತವಗಿರುವುವು.ಕಲ್ಪಿತ ಪಾದಗಳಿಗಿಂತ ವಿಲಕ್ಷಣನದ ತುರೀಯಾತ್ಮನೇ ಕಲ್ಪಿತಮಾತ್ರೆಗಳಿಗಿಂತ ವಿಲಕ್ಷಣವಾದ ಓಂಕಾರವು.ತುರೀ ಯ ತತ್ವವು ಪಾದವೂ ಅಲ್ಲ,ಮಾತ್ರೆಯೂ ಅಲ್ಲ.(ಪುಟ ೯8) 24-2೯)ಇಂಥ ವಾಚ್ಯವಾಚಕ ಭಾವ ವಿಲಕ್ಷಣವಾದ ಓಂಕಾರವೇ ಪ್ರಣವವು.ಇದನ್ನು ಪಾದಗಳು ಮಾತ್ರೆಗಳು ಎಂಬ ಕಲ್ಪಿತೋಪಾಯದಿಂದ ತಿಳಿದುಕೊಂಡು ಅದರಲ್ಲಿಯೇ ಚಿತ್ತವನ್ನು ಇಟ್ಟುಕೊಂಡವರಿಗೆ ಅಂಜಿಕೆಯಿಲ್ಲ.ಪರಬ್ರಹ್ಮವೆಂದೂ ಅಪರ ಬ್ರಹ್ಮವೆಂದೂ ಶ್ರುತಿಯು ಹೇಳುವುದು ಈ ಪ್ರಣವವನ್ನೇ.ಇದು ಆದಿಮಧ್ಯಾಂತ ರಹಿತವಾದದ್ದು.ಎಲ್ಲಕ್ಕೂ ಅದಿ ಮಧ್ಯಾಂತವು ಇದೇ.ಇದೇ ಜೀವರ ಹೃದಯದಲ್ಲಿರುವ ಈಶ್ವರನೆಂಬುದು.ಈ ಅಮಾತ್ರವಾದ ಅಪರಿಚ್ಛಿನ್ನವಾದ ಪ್ರಪಂಚೋಪಶಮವಾದ ಓಂಕಾರವನ್ನು ಯಾವನು ಅರಿತಿರುವನೋ ಅವನೇ ಮುನಿಯು.(ಪುಟ ೯8) 2) ವೈತಥ್ಯ ಪ್ರಕರಣ: ಆಗಮ ಪ್ರಕರಣಗಳಲ್ಲಿ ತೋರಿಸಿರುವಂತೆ ಅಭಿದಾನ ಅಭಿದೇಯಗಳಿಂದ ವಿಲಕ್ಷಣನಾಗಿರುವ ಆತ್ಮನು ನಿಷ್ಪ್ರಪಂಚನೂಊ ನಿವಿ೯ಕಲ್ಪನೂ ಆಗಿದ್ದರೂ ಎಚ್ಚರ ಕನಸುಗಳಲ್ಲಿ ತಪ್ಪು ತಿಳುವಳಿಕೆಯಿಂದ ಸಪ್ರಪಂಚನೂ ಸವಿಕಲ್ಪನೂ ಆಗಿ ತೋರುವುದರಿಂದ ಶ್ರುತ್ಯಥ೯ವು ಕೇವಲ ಉಪದೇಶ ಮಾತ್ರದಿಂದಲೇ ಮಂದಮಧ್ಯಮ ಬುದ್ಧಿಯುಳ್ಳವರಿಗೆ ನಿಶ್ಚಯವಾಗದೆ ಇರುತ್ತದೆ.ಆದ್ದರಿಂದ ದ್ವೈತವು ಮಿಥ್ಯೆಯೆಂಬುದನ್ನು ಯುಕ್ತಿಯಿಂದಲೂ ತೋರಿಸಿಕೊಡುವುದಕ್ಕಾಗಿ ಈ ಪ್ರಕರಣವನ್ನು ಪ್ರಾರಂಭಿಸಿರುತ್ತದೆ. 1-3)ಸ್ವಪ್ನದಲ್ಲಿ ಕಾಣುವ ದೃಶ್ಯಗಳು ಸಂಕುಚಿತವಾಗಿರುವ ದೇಹದೊಳಗಿನ ಭಾಗದಲ್ಲಿ ಕಂಡು ಬರುತ್ತಿರುವುದರಿಂದಲೂ ಅವಕ್ಕೆ ಬೇಕಾಗಿರುವಷ್ಟು ದೇಶಕಾಲ ನಿಮಿತ್ತಗಳು ಅಲ್ಲಿ ಇರುವುದಿಲ್ಲವದ್ದರಿಂದಲೂ ಎಚ್ಚೆತ್ತ ಕೂಡಲೇ ಅವು ಬಾಧಿತವಾಗುವುದರಿಂದಲೂ ಅವು ಹುಸಿ ಎಂಬ ವಿಷಯವು ಬಲುಮಟ್ಟಿಗೆ ಎಲ್ಲರಿಗೂ ಒಪ್ಪಾಗಿರುತ್ತದೆ.(ಪುಟ 1೯3) 4-10)ಇದರಂತೆಯೇ ಎಚ್ಚರದಲ್ಲಿರುವ ನಮ್ಮೊಳಗಿನ ಮತ್ತು ಹೊರಗಿನ ಪದಾಥ೯ಗಳು ಹುಸಿಯೆಂದೇ ಒಪ್ಪಬೇಕು.ಏಕೆಂದರೆ ಅವೂ ಸ್ವಪ್ನದ ಪದಾಥ೯ಗಳಂತೆ ದೃಶ್ಯವೇ ಆಗಿರುತ್ತವೆ.ಸ್ವಪ್ನ ಪದಾಥ೯ಗಳು ಒಳಗೆ ಸಂಕುಚಿತ ಪ್ರದೇಶದಲ್ಲಿದೆ ಎಂಬ ವಿಶೇಷವಿರುವುದು ನಿಜ.ಆದರೆ ಸರಿಯಾಗಿ ವಿಚಾರ ಮಾಡಿದರೆ ಈ ಎರಡವಸ್ಥೆಗಳಿಗೂ ಒಂದೇ ಬೆಲೆ ಇದೆ ಎಂದು ನಿಶ್ಚಯವಾಗುವುದು.ಹೇಗೆಂದರೆ ಈ ಎರಡವಸ್ಥೆಗಳಲ್ಲಿಯೂ ವಸ್ತುಗಳು ಗ್ರಾಹ್ಯ,ಗ್ರಾಹಕ ಎಂದು ವಿಭಕ್ತವಾಗಿಯೇ ತೋರುತ್ತಿರುವುವು.ಈ ಎರಡು ಅವಸ್ಥೆಗಳೂ ಆತ್ಮನಲ್ಲಿಯೇ ತೋರುತ್ತಿರುತ್ತವೆ.ತೋರುವ ಕಾಲಕ್ಕಿಂತ ಹಿಂದೆ ಇರಲಿಲ್ಲ,ಬಾಧಿತವಾದ ಮೇಲೆ ಇರುವುದಿಲ್ಲ-ಎಂಬುದು ಈ ಎರಡಕ್ಕೂ ಸಮಾನವಾಗಿರುತ್ತದೆ.ಅವು ಮತ್ತೊಂದು ಅವಸ್ಥೆಯಲ್ಲಿಲ್ಲ.ಆಯಾ ಅವಸ್ಥೆಯಲ್ಲಿಯೇ ಅವು ಆತ್ಮನಿಗೆ ಸೇರಿದಂತೆ ಕಾಣುತ್ತಿರುವುದು.ಆದ್ದರಿಂದ ಅವು ಪರಮಾಥ೯ವೆನಿಸಲಾರವು.ಒಳಗೆ ಮನಸ್ಸಿನಲ್ಲೇ ತೋರಿಕೊಂಡು ಮರೆಯಾಗುವ ಭಾವಗಳು,ಹೊರಗೆ ಒಂದರ ಜೊತೆಗೆ ಮತ್ತೊಂದು ಇರುವಂತೆ ತೋರುವ ಭಾವಗಳು.ಒಳಗೆ ಅವ್ಯಕ್ತವಾಗಿ ತೋರುವ ಮತ್ತು ಹೊರಗೆ ವ್ಯಕ್ತವಾಗಿ ಕಾಣಿಸುವ ಭಾವಗಳು-ಇವೆಲ್ಲವೂ ಕಲ್ಪಿತವಾಗಿಯೇ ಇರುತ್ತವೆ.ಅವುಗಳು ತೋರಿಕೊಳ್ಳುವ ಬಗೆಯಲ್ಲಿ ಯಾವ ವೈಲಕ್ಷಣ್ಯವೂ ಇರುವುದೇ ಇಲ್ಲ.ಸ್ವಪ್ನದೃಶ್ಯಗಳಿಗೆ ದೇಶಕಾಲಗಳು ತಕ್ಕಷ್ಟು ಇರುವುದಿಲ್ಲವೆನ್ನುವುದಾದರೂ ಎಚ್ಚರದ ದೃಷ್ಟಿಯಿಂದ ನೋಡಿದಾಗ ಸರಿ;ಆದರೆ ಅಷ್ಟುಮಾತ್ರದಿಂದ ಈ ಎರಡು ಒಂದಕ್ಕಿಂತ ಒಂದು ವಿಲಕ್ಷಣವೆಂದೇನೂ ಆಗುವ ಹಾಗಿಲ್ಲ.ಆದ್ದರಿಂದ ಈ ಎರಡೂ ಅವಸ್ಥೆಗಳೂ ಹುಸಿ ಎಂಬುದೇ ಸರಿ. 11-18)ಈ ಎರಡು ಅವಸ್ಥೆಗಳೂ ಹುಸಿಯೇ ಎಂದಾದ್ದರಿಂದ ಬೌದ್ಧರ ಸಿದ್ಧಾಯವೇ ಕೊನೆಯೆಂದು ಆಗುವುದಿಲ್ಲ.ಏಕೆಂದರೆ ಈ ಅವಸ್ಥೆಗಳಲ್ಲಿ ತೋರುವ ವಿಕಲ್ಪಗಳಿಗೆಲ್ಲ ಆಸ್ಪದವಾಗಿ ಒಬ್ಬ ಆತ್ಮನು ಇರುತ್ತಾನೆಂಬುದೇ ಈ ವಿಚಾರದಿಂದ ಏಪ೯ಡುತ್ತದೆ.ಆದ್ದರಿಂದ ಆತ್ಮನನ್ನೇ ಕತೃ೯,ಕಮ೯,ಕರಣ--ಎಂದು ವಿಕಲ್ಪಿಸಿಕೊಳ್ಳುತ್ತಾರೆ-ಎಂಬುದು ವೇದಾಂತ ಸಿದ್ಧಾಂತ.ಹೇಗೆಂದರೆ ಯಾವ ವಿಕಲ್ಪಗಳೀ ಇಲ್ಲದ ಆತ್ಮನಲ್ಲಿ ಜೀವತ್ವವೂ, ಆ ಜೀವನಿಗಾಗಿ ಕ್ರಿಯೆ,ಕಾರಕ,ಫಲ-ಎಂದು ವಿಂಗಡಿಸಿಕೊಂಡು ತೋರುವ ಬಗೆಬಗೆಯಭಾವಗಳೂ ವಿಕಲ್ಪಿತವಾಗಿರುತ್ತವೆ.ಹೀ ಗೆ ಅವಿದ್ಯೆಯಾದ ಅನಾದಿಯ ನಿಮಿತ್ತದಿಂದ ಆತ್ಮನಲ್ಲಿ ಧಮಾಧಮ೯ಗಳೆಂಬ ಹೇತು ದೇಹಾಂತರ ಪ್ರಾಪ್ತಿಯೆಂಬ ಫಲ-ಇವುಗಳೂ ಆತ್ಮನಲ್ಲಿ ವಿಜ್ಞಾನಗಳೂ ,ಸ್ಮøತಿಗಳೂ ಪರಸ್ಪರ ನೈಮಿತ್ತಿಕ ಭಾವದಿಂದ ಕಲ್ಪಿತವಾಗಿರುತ್ತವೆ. ಇದೇ ಸಂಸಾರವೆಂಬುದು.ಇದು ಹಗ್ಗ ಎಂದು ನಿಶ್ಚಯಿಸಿಕೊಳ್ಳದೆ ಇರುವಾಗ ಹಾವು,ನೀರುಕೋಡಿ-ಎಂದು ಮುಂತಾಗಿ ವಿಕಲ್ಪಿತವಾಗಿರುವಂತೆಯೇ ಇದನ್ನು ತಿಳಿಯಬೇಕು.ಹಗ್ಗವೆಂದು ನಿಶ್ಚಯಿಸಿಕೊಂಡ ಬಳಿಕ ಹೇಗೆ ಹಾವೇ ಮುಂತಾದ ವಿಕಲ್ಪಗಳೆಲ್ಲವೂ ತೊಲಗುವವೋ ಹಾಗೆಯೇ 'ಅದ್ವೈತಾತ್ಮನೊಬ್ಬನೇ ಪರಮಾಥ೯ವು,ಅವನೇ ನಾನು'ಎಂಬ ನಿಶ್ಚಯವಾಗುತ್ತಲೂ ಸಂಸಾರ ವಿಕಲ್ಪಗಳೆಲ್ಲವೂ ತೊಲಗುವವು 20-28)ಅದ್ವೈತಾತ್ಮನಲ್ಲಿ 'ಪ್ರಾಣ','ಭೂತಗಳು','ಗುಣಗಳು' 'ತತ್ವಗಳು''ವಾದಗಳು''ವಿಷಯಗಳು','ಲೋಕಗಳು','ದೇವತೆಗಳು','ವೇದಗಳು',ಯಜ್ಞಗಳು,'ಭೋಕ್ತø', 'ಭೋಗ್ಯ','ಸೂಕ್ಷ್ಮ','ಸ್ಥೂಲ','ಮೂತ೯','ಅಮೂತ8','ಕಾಲ','ದಿಕ್ಕುಗಳು','ಪಾದಗಳು','ಭುವನಗಳು','ಮನಸ್ಸು','ಬುದ್ಧಿ','ಚಿತ್','ಧಮಾಧಮ೯ಗಳು','ಇಪ್ಪತ್ತೈದನೆಯವನು','ಇಪ್ಪತ್ತಾರನೆಯವನು','ಮೂವತ್ತೊಂದನೆಯವನು','ಅಸಂಗನು','ಸ್ರೀ ಪುರುಷ ನಪುಂಸಕ','ಪರ,ಅಪರ',ಸೃಷ್ಟಿ,ಸ್ಥಿತಿ,ಲಯ'-ಎಂದು ಮುಂತಾಗಿರುವ ಎಲ್ಲಾ ವಿಕಲ್ಪಗಳೂ ಅಭಿನಿವೇಶಮಾತ್ರದಿಂದ ತೋರುತ್ತಿರುತ್ತದೆ.ಅದ್ದರಿಂದ ಗುರುವು ಹೆಗೆ ಉಪದೇಶಮಾಡುವನೋ ಹಾಗೇ ಸರಿ-ಎಂದು ಸಾಧಕನಿಗೆ ತೋರುತ್ತದೆ.ಅ ನಿಶ್ಚಯದಿಂದ ಮಿಕ್ಕ ಯಾವ ಭಾವನೆಗಳೂ ಅವನ ಮನಸ್ಸಿಗೆ ಒಗ್ಗದಂತೆ ಆಗುವುದು.ನಿಜವಾಗಿ ನೋಡಿದರೆ ಈ ಭಾವಗಳೆಲ್ಲದರ ತತ್ವವೇ ಅವನು.(ಪುಟ 1೯4) 2೯-32) ಆತ್ಮನಲ್ಲಿ ಕಲ್ಪಿತವಾಗಿರುವ ಪ್ರಾಣದಿ ಭಾವಗಳು ಆಯಾ ಅಭಿಮಾನದಿಂದಲೇ ತೋರುತ್ತಿರುತ್ತವೆ.ಆದ್ದರಿಂದ ಯಾವನ ಉಪದೇಶದಿಂದ ಯಾವನು ಅದೇ ತತ್ವವೆಂದು ತಿಳಿದುಕೊಳ್ಳುವನೋ ಅವನಿಗೆ ಅದೇ ಆತ್ಮನಲ್ಲಿ ಆ ಭಾವವನ್ನು ಕಂಡುಕೊಂಡದ್ದರಿಂದ ಮಿಕ್ಕ ಭಾವಗಳನ್ನೂ ಕಾಣದಂತೆ ಆಗುವುದು.ನಿಜವಾಗಿ ಈ ಭಾವಗಳಿಗೆಲ್ಲ ಅದ್ವೈತವೇ ತತ್ವವು ಎಂದು ಯಾವನು ಅರಿತುಕೊಳ್ಳುವನೋ ಅವನಿಗೇ ವೇದಾಥ೯ದ ವಿಜವು ಗೊತ್ತಾಗಿರುತ್ತದೆ.ಭೇದಗಳೆಲ್ಲ ನಮ್ಮ ನಮ್ಮ ಕನಸಿನಂತೆಯೂ ಮಾಯೆಯಂತೆಯೂ ಗಂಧವ೯ನಗರವೇ ಮುಂತಾದದ್ದರಂತೆಯೂ ಹುಸಿಯಾಗಿಯೇ ಇದ್ದುಕೊಂಡು ಸತ್ಯವಾಗಿರುವಂತೆ ಕಾಣಿಸಿಕೊಳ್ಲುತ್ತಿರುವವು.ಅದರೆ ನಿಜವೇನೆಂದರೆ ಸೃಷ್ಟಿ,ಪ್ರಳಯ-ಮುಂತಾದ ಯಾವ ವಿಕಲ್ಪವೂ ಆತ್ಮನಲ್ಲಿ ನಿಜವಾಗಿಯೂ ಇರುವುದಿಲ್ಲ.ಸಾಧ್ಯ,ಸಾಧನ-ಮುಂತಾದ ವಿಂಗಡವು ನಿಜವಾಗಿಲ್ಲವೇ ಇಲ್ಲ-ಎಂಬುದೇ ವೇದಾಂತೋಕ್ತವಾಗಿರುವ ಪರಮಾಥ೯ವು.(ಪುಟ1೯4) 33-38)ಆತ್ಮನು ಯಾವಾಗಲೂ ಅದ್ವೈತ ಸ್ವರೂಪನೇ ಆಗಿರುವುದರಿಂದ ಅವನಲ್ಲಿ ಯಾವ ದ್ವೈತವೂ ಇರುವುದೇ ಇಲ್ಲ.ಆದ್ದರಿಂದ ಅದ್ವೈತವೇ ಮಂಗಲಕರವಾದದ್ದು.ವಿಕಲ್ಪಗಳು ತಾವು ತೋರುವ ರೂಪದಿಂದ ಒಂದಕ್ಕಿಂತ ಒಂದು ಬೇರೆಯೂ ಇಲ್ಲ.ಒಂದೇ ತತ್ವವೂ ಅಲ್ಲ.ಇವೆಲ್ಲವೂ ಆತ್ಮನೆ ಎಂಬುದನ್ನು ಕಂಡುಕೊಂಡಾಗಲೂ ಇವು ಇರುವುದೇ ಇಲ್ಲ-ಎಂಬುದು ತತ್ವಜ್ಞಾನಿಗಳ ಅಭಿಪ್ರಾಯ.ಈ ಅದ್ವೈತಾತ್ಮತತ್ವವು ಸವ೯ಪ್ರಪಂಚಶೂನ್ಯವಾಗಿರುವ ಮಂಗಲಕರವಾದದ್ದು.ರಾಗ,ಭಯ,ಕ್ರೋಧ-ಮುಂತಾದ ಚಿತ್ತದೋಷಗಳು ಯಾವುವೂ ಇಲ್ಲದವರೂ ವೇದಾಂತದ ಮಮ೯ವನ್ನು ಬಲ್ಲವರೂ ಆದ ಮುನಿಗಳಿಗೆ ಮಾತ್ರ ಇದು ತಿಳಿಯುವುದು.ಅವರಿಗೆ ಅದ್ವೈತಾನುಸಂಧಾನವು ನಿತ್ಯಸಿದ್ಧವಾಗಿರುತ್ತದೆ.ಅಂತವರು ತಮ್ಮ ವಿದ್ಯೆ,ವಿನಯ-ಇವುಗಳನ್ನು ತೋರಿಸಿಕೊಳ್ಳದೆ ಪರಮಹಂಸ ಪರಿವ್ರಾಜಕರಾಗಿ ತಮಗೆ ಒದಗಿದಷ್ಟೂ ಜೀವನಸಾಧನದಿಂದ ಸಂತುಷ್ಟರಾಗಿ ವ್ಯವಹರಿಸುತ್ತಿರುವರು.ಅಂತೂ ಹೀಗೆ ಹೊರಗೆ ಕಾಣುವ ದ್ವೈತವನ್ನೂ ಒಳಗಿನ ದ್ವೈತವನ್ನೂ ಎಲ್ಲವೂ ಆತ್ಮನಲ್ಲಿ ಕಲ್ಪಿತವಾಗಿರುವ ಹುಸಿತೋರಿಕೆಯೆಂಬುದನ್ನು ಗೊತ್ತು ಮಾಡಿಕೊಂಡು ಸವ೯ಕ್ಕೂ ಆಧಾರವಾಗಿರುವ ತತ್ವವೇ ತಾನಾಗಿ ಯಾರು ತತ್ವದಿಂದ ಸ್ವಲ್ಪವೂ ಕದಲದೆ ತತ್ವನಿಷ್ಠರಾಗಿರುವರೋ ಅವರು ಕೃತಕೃತ್ಯರು.(ಪುಟ 1೯5) 3) ಅದ್ವೈತ ಪ್ರಕರಣದ ಸಾರ: ವೈತಥ್ಯ ಪ್ರಕರಣದಲ್ಲಿ ದ್ವೈತವೆಲ್ಲವೂ ತೋರುವ ರೂಪದಿಂದ ಮಿಥ್ಯೆಯೆಂದು ನಿಶ್ಚಯಿಸಿರಿವುದರಿಂದಲೇ ಅದ್ವೈತವೇ ಪರಮಾಥ೯ವೆಂದು ನಿಶ್ಚಿತವಾಗುತ್ತದೆಯಾದರೂ ದ್ವೈತದಂತೆ ಅದ್ವೈತವೂ ಏತಕ್ಕೆ ಮಿಥ್ಯೆಯಾಗಿರಬಾರದು ?-ಎಂದು ಮಂದ ಮತಿಗಳಾದವರು ಯಾರಾದರೂ ಶಂಕಿಸಬಹುದು.ಆ ಶಂಕೆಯನ್ನು ಪರಿಹರಿಸುವುದಕ್ಕಾಗಿ ತಕ೯ದಿಂದಲೂ ಅದ್ವೈತವನ್ನು ಸಾದಿಸುವುದಕ್ಕಾಗಿ ಈ ಪ್ರಕರಣವನ್ನು ಪ್ರಾರಂಭಿಸಿರುತ್ತದೆ. 1-2)ವೇದಾಂತಗಳೆಲ್ಲವೂ ಉಪಾಸನಾ ವಿಧಿಪರವೆಂದೂ ಬ್ರಹ್ಮವು ಜಗದ್ರೂಪವಾಗಿ ಪರಿಣಮಿಸಿರುವುದರಿಂದ ,ಜೀವನು ಬ್ರಹ್ಮೋಪಾಸನೆಯನ್ನು ಮಾಡಿಅಜಾದ್ವಯ ಬ್ರಹ್ಮಸ್ವರೂಪವನ್ನು ಪಡೆಯಬೇಕಾಗಿದೆಯೆಂದೂ ಹೇಳುವ ವಾದಿಗಳ ಮತವು ಮಿಥ್ಯಾಜ್ಞಾನ ನಿಮಿತ್ತವಾಗಿದೆ ಎಂಬುದನ್ನು ತೋರಿಸಿಕೊಡುವುದಕ್ಕಗಿ ಮೊಟ್ಟ ಮೊದಲು ಅಜಾದ್ವಯ ಬ್ರಹ್ಮ ವಾದವನ್ನು ಜಿಜ್ಞಾಸುಗಳಿಗೆ ಮನಗಾಣಿಸುವುದಕ್ಕಾಗಿ ಅಜಾತವಾದವನ್ನು ಪ್ರಾರಂಭಿಸಿದೆ.(ಪುಟ 327) 3-10)ಜೀವರುಗಳಾಗಲೀ ಅವರ ಉಪಾಧಿಗಳಾಗಿರುವ ಕಾಯ೯ಕರಣಸಂಘಾತಗಳಾಗಲಿ ನಿಜವಾಗಿ ಹುಟ್ಟುವಂತಿಲ್ಲ.ಸ್ರುತಿಗಳು ಕೆಲವು ಇವುಗಳ ಉತ್ಪತ್ತಿಯನ್ನು ಹೇಳುವಂತೆ ತೋರುತ್ತಿರುವುದುಂಟು. ಆಕಾಶವು ಘಟಾದಿಗಳ ರೂಪದಿಂದಲೂ ಘಟಾಕಾಶಾದಿಗಳ ರೂಪದಿಂದಲೂ ತೋರಿಕೊಳ್ಳುತ್ತಿರುವಂತೆಯೇ ಅಜಾದ್ವಿತೀಯವಾದ ಬ್ರಹ್ಮವೆ ಜೀವರ ಮತ್ತು ಜೀವರ ಉಪಾಧಿಗಳಾದ ಕಾಯ೯ಕರಣ ಸಂಘಾತಗಳ ರೂಪದಿಂದ ತೋರುತ್ತಿದೆ.ಇದೇ ಉತ್ಪತ್ತಿ ಎಂದು ತಿಳಿಸಿಕೊಡುವುದೇ ಶ್ರುತಿಗಳ ಉದ್ದೇಶ.ಜೀವರ ಉತ್ಪತ್ತಿಯು ಹೇಗೆ ಕೇವಲ ಬರಿಯ ತೋರಿಕೆಯೋ ಹಾಗೆಯೇ ಸ್ಥಿತಿ,ಗತ್ಯಾಗತಿ,ಮರಣ-ಇವೆಲ್ಲವೂ ಘಟಾಕಾಶದ ಸ್ಥಿತ್ಯಾದಿಗಳಂತೆ ಉಪಾಧಿ ನಿಮಿತ್ತವೆಂದು ತಿಳಿಯಬೇಕು; ಉಪಾಧಿಗಳಾದ ಸಂಘಾತಗಳು ವೈತಥ್ಯ ಪ್ರಕರಣದಲ್ಲಿ ಹೇಳಿರುವ ಯುಕ್ತಿಗನುಸಾರವಾಗಿ ಕನಸಿನಲ್ಲಿ ತೋರುವ ಕಾಯ೯ಕರಣ ಸಂಘಾತಗಳಂತೆಯೇ ಮಿಥ್ಯೆಯಾಗಿರುತ್ತದೆ. ಆದ್ದರಿಂದ ಆತ್ಮರು ಅನೇಕರು ಬೇರೆ ಬೇರೆ,ಒಬ್ಬರಿಗಿಂತ ಒಬ್ಬರು ವಿಲಕ್ಷಣ ಸ್ವಭಾವದವರು-ಎಂದು ಹೇಳುವುದು ನಿಯು೯ಕ್ತಿಕವಾಗಿದೆ.(ಪುಟ327) 11-15) ಇ ಅತ್ಮೈಕತ್ಯವನ್ನು ತೈತ್ತಿರೀಯೋಪನಿಷತ್ತಿನ ಬ್ರಹ್ಮಾನಂದವಲ್ಲಿಯಲ್ಲಿಯೂ ಬೃಹದಾರಣ್ಯಕದ ಮಧುಬ್ರಾಹ್ಮಣದಲ್ಲಿಯೂ ಹೆಳಿದೆ.ಜೀವ ಪರಮಾತ್ಮರು ಬೇರೆಯಲ್ಲವೆಂಬುದನ್ನೂ ಶ್ರುತಿಸ್ಮøತಿಗಳಲ್ಲಿ ಹೊಗಳಿರುತ್ತದೆ.ಅವರು ಬೇರೆ ಬೇರೆ ಎಂಬ ಅಭಿಪ್ರಾಯವನ್ನು ನಿಂದಿಸಿರುತ್ತದೆ.ಇವೆರಡೂ ಅಜಾದ್ವಯ ಬ್ರಹ್ಮವಾದಕ್ಕೆ ಹೊಂದುತ್ತವೆಯೇ ಹೊರತು ಜೀವರುಗಳು ನಿಜವಾಗಿಯೂ ಬೇರೆಬೇರೆಯಾಗಿ ಹುಟ್ಟಿರುತ್ತಾರೆ ಎಂಬುದರ ಮತಕ್ಕೆ ಹೊಂದುವುದಿಲ್ಲ.ಎಲ್ಲೆಲ್ಲಿ ಮಣ್ನು,ಲೋಹ,ಕಿಡಿಗಳು-ಮುಂತದ ದೃಷ್ಟಾಂತಗಳಿಂದ ಸೃಷ್ಟಿಯನ್ನು ಹೇಳಿರುವಂತೆ ಕಂಡು ಬರುತ್ತದೆಯೋ ಅಲ್ಲೆಲ್ಲ ಕಾಯ೯ವು ವಾಚಾರಂಭಣ-ಬರಿಯ ಮಾತಿನಿಂದ ತೋರುವ ಬರಿಯ ವಿಕಲ್ಪವೆಂದು ಶ್ರುತಿಯು ಸ್ಪಷ್ಟವಾಗಿ ಹೇಳಿದೆ.ಸೃಷ್ಟಿಶ್ರುತಿಗಳು ಅದ್ವೈತ ಜ್ಞಾನಕ್ಕೆ ಶ್ರೋತೃವಿನ ಚಿತ್ತವನ್ನು ಅಣಿಮಾಡುವುದಕ್ಕೆ ಉಪಾಯ ಮಾತ್ರವೆಂದು ಗೊತ್ತಾಗುತ್ತದೆ.(ಪುಟ328) 16)ಇದೇ ಸಿದ್ಧಾಂತವಾದರೆ ಶ್ರುತಿಗಳಲ್ಲಿ ಉಪಾಸನೆಯನ್ನೂ ಕಮ೯ವನ್ನೂ ಹೇಳಿರುವುದೇಕೆ?-ಎಂಬ ಶಂಕೆಗೆ ಪರಿಹಾರವೇನೆಂದರೆ ,ಅಧಿಕಾರಿಗಳು ಉತ್ತಮ,ಮಧ್ಯಮ ,ಅಧಮ-ಎಂದು ಮೂರು ತರಗತಿಯವರಾಗಿರುವುದರಿಂದ ಮಂದ ಮಧ್ಯಮಾಧಿಕಾರಿಗಳಿಗಾಗಿ ವೇದವು ಉಪಾಸನೆಯನ್ನೂ ಕಮ೯ವನ್ನೂ ವಿಧಿಸಿರುತ್ತದೆ.ಆ ಅಧಿಕಾರಿಗಳೂ ಕ್ರಮವಾಗಿ ಈ ಉತ್ತಮವಾದ ಆತ್ಮೈಕತ್ವದೃಷ್ಟಿಯನ್ನು ಸಂಪಾದಿಸಿಕೊಳ್ಳಲಿ ಎಂಬುದೇ ಹಾಗೆ ವಿಧಿಸಿರುವುದರ ಉದ್ದೇಶ.ಆದ್ದರಿಂದ ಶ್ರುತಿಯಲ್ಲಿ ಉಪಾಸನೆಯನ್ನೂ ಕಮ೯ವನ್ನು ಉಪದೇಶ ಮಾಡಿದೆ ಎಂಬುದೇನೂ ಅಜಾದ್ವರ ಬ್ರಹ್ಮವಾದಕ್ಕೆ ಅಡ್ಡಿಯಾಗಲಾರದು.(ಪುಟ 328) 17-18)ಅಜಾದ್ವಯ ದಶ೯ನವು ದ್ವೈತಿಗಳ ದಶ೯ನಕ್ಕೆ ವಿರುದ್ಧವೆಂಬ ಕಾರಣದಿಂದಲೂ ಪರಿತ್ಯಾಜ್ಯವಲ್ಲ.ಏಕೆಂದರೆ ದ್ವೈತಿಗಳ ದಶ೯ನಗಳು ಒಂದಕ್ಕೊಂದು ವಿರುದ್ಧವಾಗಿರುತ್ತವೆ.ಶಾಸ್ತ್ರವಿರುದ್ಧವೂ ಆಗಿದೆ.ಆದ್ದರಿಂದ ಅವು ಯಥಾಥ೯ದಶ೯ನಗಳಲ್ಲ.ಅದ್ವೈತವಾದರೋ ಶಾಸ್ತ್ರ ಯುಕ್ತಿಗಳೆರಡಕ್ಕೂ ಸಮ್ಮತವಾಗಿರುವುದರಿಂದ ಪರಮಾಥ೯ವಾಗಿವೆ.ದ್ವೈತವು ಅದ್ವೈತದಲ್ಲಿ ಹುಟ್ಟುಗಟ್ಟಿರುವ ವಿಕಲ್ಪವಾದ್ದರಿಂದ ಈ ಅದ್ವೈತವಾದವು ದ್ವೈತ ದಶ೯ನಗಳಿಗೆ ವಿರುದ್ಧವೆಂದು ಆಕ್ಷೇಪಿಸುವಂತಿಲ್ಲ.(ಪುಟ328) 1೯-27)ಅದ್ವೈತವೇ ಪರಮಾಥ೯ವಾಗಿದ್ದು ದ್ವೈತದಂತೆ ಕಾಣುತ್ತದೆ-ಎಂದು ಒಪ್ಪದಿದ್ದರೆ ಅಮೃತವಾದ ಬ್ರಹ್ಮವು ಮತ್ಯ೯ವಾದ ಜೀವರಾಗಿ ಮಾಪ೯ಡುವದೆಂದೂ ಈಗ ಮತ್ಯ೯ವಾಗಿರುವ ಜೀವರು ಮುಕ್ತಿಯಲ್ಲಿ ಅಮೃತರಾಗಿ ಮಾಪ೯ಡುವರೆಂದೂ ಹೇಳಬೇಕಾಗುವುದು.ಆದರೆ ವಸ್ತುಸ್ವಭಾವವು ಎಂದಿಗೂ ಮಾಪ೯ಡಲಾರದು.ಆದ್ದರಿಂದ ಈ ದೋಷವನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಅಜಾತಿ(ಯಾವುದೂ ಹುಟ್ಟುವುದಿಲ್ಲ) ಎಂಬುದೇ ಪರಮಾಥ೯.ಜಾತಿ(ಹುಟ್ಟುವಿಕೆ)ಎಂಬುದು ಮಾಯಿಕ-ಎಂದು ಎಲ್ಲಾ ವಾದಿಗಳೂ ಒಪ್ಪಬೇಕು.ಆಗ ಸೃಷ್ಟಿ ಶ್ರುತಿಗಳು ಮಾಯಾ ಸೃಷ್ಟಿಯನ್ನು ಹೇಳುತ್ತವೆಯೆಂದು ಹೇಳಬಹುದಾಗುತ್ತದೆ.ಅಷ್ಟರಿಂದಲೇ ಸೃಷ್ಟಿವಾಕ್ಯಗಳೆಲ್ಲವೂ ಆತ್ಮೈಕತ್ವಜ್ಞಾನಕ್ಕೆ ಉಪಾಯ ಮಾತ್ರವೆಂದು ಹೇಳುವುದಕ್ಕೂ ಬರುತ್ತದೆ. ದೈತವನ್ನು ಶ್ರುತಿಯಲ್ಲಿ ಅಲ್ಲಗಳೆದಿರುವದೂ ಆತ್ಮೈಕತ್ವನ್ನು ತಿಳಿಸುವುದಕ್ಕೆ ಬಳಸಿದ್ದ ಉಪಾಯವನ್ನೆಲ್ಲಾ 'ಹೀಗಲ್ಲ,ಹೀಗಲ್ಲ' ಎಂದು ಅಲ್ಲಗಳೆದಿರುವುದೂ ಈ ಮತದಲ್ಲಿಯೇ ಸಮಂಜಸವಾಗುವುದು.ಆದ್ದರಿಂದ ಅದ್ವೈತವು ಮಾಯೆಯಿಂದ ಜನ್ಮವನ್ನು ಪಡೆದಂತೆ ತೋರಿಕೊಳ್ಳುತ್ತಿದೆ ಎಂಬುದೇ ಸರಿ.(ಪುಟ 32೯) 28-30)ಅಸತ್ಕಾಯ೯ವೂ ಸರಿಯೆಂದಾಗಲಿ!ಎಂದು ವಾದಿಸುವುದು ಸರಿಯಾಗಲಾರದು.ಏಕೆಂದರೆ ಅಸತ್ಪದಾಥ೯ಕ್ಕೆ ನಿಜವಾಗಿಯಾಗಲೀ ಮಾಯೆಯಿಂದಾಗಲೀ ಜನ್ಮವು ಉಂಟಾಗಲಾರದು.ಆದ್ದರಿಂದ ಸ್ವಪ್ನದಲ್ಲಿ ನಾನೊಬ್ಬನೇ ಇರುವ ಆತ್ಮನೇ ಮನಃಸ್ಪಂದನ ಮಾತ್ರದಿಂದ ದ್ವೈತ ಪ್ರಪಂಚವಾಗಿ ತೋರುತ್ತಿರುವಂತೆಯೇ ಎಚ್ಚರದಲ್ಲಿಯೂ ಅದ್ವಯಾತ್ಮನಲ್ಲಿ ಮನಃಸ್ಪಂದನದಿಂದಲೇ ದ್ವೈತವು ತೋರುತ್ತಿದೆ -ಎಂದು ಒಪ್ಪಬೇಕು.(ಪುಟ32೯) 31-47)ಈ ವಾದವು ಅನುಭವಸಾರಿಯಾಗೂ ಇರುತ್ತದೆ.ಹೇಗೆಂದರೆ ಮನಸ್ಸಿರುವಗ ದ್ವೈತವು ಕಾಣುತ್ತಿರುತ್ತದೆ.ನಸ್ಸು ಅಮನೀ ಭಾವವನ್ನು ಪಡೆದರೆ ದ್ವೈತವು ಕಾಣಿಸುವುದೇ ಇಲ್ಲ.ಅಮನೀ ಭಾವವು ಅಧಿಕಾರಿ ತಾರತಮ್ಯದಿಂದ ಎರಡು ಮಾಗ೯ಗಳಿಂದ ಪ್ರಾಪ್ತವಾಗಬಹುದಾಗಿರುತ್ತದೆ.ಶ್ರುತ್ಯಾಚಾಯ೯ರುಗಳ ಉಪದೇಶದಿಂದ ಆತ್ಮನೊಬ್ಬನೇ ಸತ್ಯವೆಂಬುದನ್ನು ಯಾರು ಕಂಡಿರುವರೋ ಅವರಿಗೆ ಆತ್ಮಸತ್ಯಾನುಭೋಧದಿಂದಲೇ ಮನಸ್ಸು ಅಮನಸ್ಸಾಗಿ ಬಿಡುತ್ತದೆ.ಎಂದರೆ ಅದು ಆತ್ಮಸ್ವರೂಪದಲ್ಲಿಯೇ ಅಡಕವಾಗಿ ಬಿಡುತ್ತದೆ. ಆಗ ಅದ್ವೈತವೇ ಪರಮಾಥ೯ವೆಂಬುದು ಮನದಟ್ಟಾಗಿ ಬಿಡುತ್ತದೆ.ಆದ್ದರಿಂದ ಅವರು ಮಾಡತಕ್ಕದ್ದೇನೂ ಉಳಿದಿರುವುದಿಲ್ಲ. ಆದರೆ ಇನ್ನೂ ಸಾಧನ ಮಾಗ೯ದಲ್ಲಿರುವ ಮಧ್ಯಮಾಧಿಕಾರಿಗಳಿಗೆ ಮನಸ್ಸು ಆತ್ಮನಿಗೆ ಸೇರಿರುತ್ತದೆ ಎಂಬ ಬುದ್ಧಿಯೇ ಇದ್ದುಕೊಂಡಿರುವುದರಿಂದ ಅವರಿಗೆ ಮನೋನಿಗ್ರಹ ಎಂಬ ಉಪಾಯದಿಂದ ಮನಸ್ಸಿಗೆ ಅಮನೀ ಭಾವವು ಪ್ರಾಪ್ತವಾಗಬೇಕಾಗಿರುತ್ತದೆ.ಮನಸ್ಸಿನ ಲಯ,ವಿಷೇಪ,ಸಕಷಾಯತ್ವ,ರಸಾಸ್ವಾದ-ಎಂಬ ವಿಘ್ನಗಳನ್ನು ಪರಿಹಾರ ಮಾಡಿಕೊಂಡಾಗ ಅಧಿಕಾರಿಗಳ ಮನಸ್ಸು ಅಜಾದ್ವಯ ಬ್ರಹ್ಮವೇ ಆಗಿಬಿಡುತ್ತದೆ.ಆಗ ಅಜವಾದ ಬ್ರಹ್ಮವು ಸ್ವಾನುಭವಗೋಚರವಾಗುತ್ತದೆ.(ಪುಟ 32೯) 48) ಈ ಪ್ರಕರಣದಲ್ಲಿ ಹೇಳಿರುವಂತೆ ಉಪಾಸನೆ,ಜಗತ್ಸøಷ್ಟಿ ಮನೋನಿಗ್ರಹ- ಎಂಬ ಉಪಾಯಗಳೂ ಶ್ರುತಿಯಲ್ಲಿ ಉಪದಿಷ್ಟವಾಗಿರುತ್ತವೆಯಾದರೂ ಅವೆಲ್ಲ ಸತ್ಯವೆಂದೇನೂ ಶ್ರುತಿಗೆ ತಾತ್ಪಯ೯ವಿರುವುದಿಲ್ಲ.ಪರಮಾಥ೯ ಸತ್ಯವೆಂದರೆ ಯಾವುದೊಂದೂ ಹೇಗೂ ಹುಟ್ಟಿಯೇ ಇರುವುದಿಲ್ಲ.ಅಜಾದ್ವಯ ಬ್ರಹ್ಮವೊಂದೇ ನಿಜವಾಗಿರತಕ್ಕದ್ದು.(ಪುಟ 32೯) 4) ಅಲಾತಶಾಂತಿ ಪ್ರಕರಣದಸಾರ: ಓಂಕಾರ ನಿಣ೯ಯದ್ವಾರದಿಂದ ಆತ್ಮನು ಅಜಾದ್ವೈತ ತತ್ವನಾಗಿರುತ್ತಾನೆ ಎಂದು ಹೇಳಿತ್ತು.ವೈತಥ್ಯ ಪ್ರಕರಣದಲ್ಲಿ ಹೊರಗಿನ ವಿಷಯಗಳೂ ಅಧ್ಯಾತ್ಮಿಕ ಪ್ರಪಂಚವು ಹುಸಿಯೇ ಎಂದು ಯುಕ್ತಿಪ್ರಧಾನವಾಗಿ ತೋರಿಸಿಕೊಡಲಾಗಿತ್ತು.ಅಜಾದ್ವೈತ ಆತ್ಮನೇ ಪರಮಾಥ೯ ತತ್ವವೆಂಬುದನ್ನು ಶಾಸ್ತ್ರಯುಕ್ತಿಗಳಿಂದ ಅದ್ವೈತ ಪ್ರಕರಣದಲ್ಲಿ ತೋರಿಸಿಕೊಡಲಾಗಿದೆ.(ಪುಟ 506) 1-2)ಉಪನಿಷತ್ತುಗಳಲ್ಲೆಲ್ಲ ಉಪದಿಷ್ಟವಾಗಿರುವ ಅಜಾದ್ವೈತ ದಶ೯ನವು ಅಸ್ಪಶ೯ಯೋಗವೆಂದು ಪ್ರಸಿದ್ಧವಾಗಿರುತ್ತದೆ.ಇಲ್ಲಿ ಜ್ಞಾತೃ,ಜ್ಞೇಯ,ಜ್ಞಾನ-ಈ ಮೂರೂ ವಿಭಕ್ತವಾಗಿಲ್ಲದೆ ಆಕಾಶದಂತೆ ಅಖಂಡವಾಗಿ ಮತ್ತೊಂದರ ಸಂಸ್ಪಶ೯ವಿಲ್ಲದೆ ಇರುತ್ತವೆ.ಇವನ್ನು ಅನುಭವಗಮ್ಯವೆಂದು ಅರಿತಿರುವ ನಾರಾಯಣಾಖ್ಯನಾದ ಪುರುಷೋತ್ತಮನೇ ಇದಕ್ಕೆ ಸಂಪ್ರದಾಯಕತ೯ನು.ಈ ಯೋಗವು ಅವಿವಾದವೂ ಅವಿರುದ್ಧವೂ ಆಗಿರುತ್ತದೆ.ಸವ೯ಪ್ರಾಣಿಗಳ ಸುಖವೂ ಹಿತವೂ ಆಗಿರುತ್ತದೆ.(ಪುಟ 506) 3-10)ದ್ವೈತಿಗಳ ದಶ೯ನಗಳು ಒಂದಕ್ಕೊಂದು ವಿರುದ್ಧವಾಗಿ ವಿವಾದಾಸ್ಪದವಾಗಿ ಇರುತ್ತದೆ. ಅವರಲ್ಲಿ ಕೆಲವರು ಇರುವುದೇ ಹುಟ್ಟುತ್ತದೆ ಎನ್ನುವರು.ಇನ್ನು ಕೆಲವರು ಮೊದಲು ಇಲ್ಲದ್ಧೇ ಹುಟ್ಟುತ್ತದೆ ಎನ್ನುವರು.ಹೀಗೆ ವಿವಾದವನ್ನು ಮಾಡುತ್ತಿರುವುದರಿಂದ ಅದ್ವೈತ ಸಮ್ಮತವಾದ ಅಜಾತಿಯೇ ಸತ್ಯವೆಂಬುದನ್ನು ಅವರು ಹೊರಪಡಿಸಿದಂತಾಗುತ್ತದೆ.ಅಜಾತವಾದದ್ದೇ ಜೀವಭಾವದಿಂದ ಹುಟ್ಟುವುದೆಂದೂ ಅದು ಮತ್ತೆ ಅಜಾತಬ್ರಹ್ಮವಾಗುವುದೆಂದೂ ಹೇಳುವವರು ಅದ್ವೈತಿಗಳಾಗಿದ್ದರೂ ಸ್ವಭಾವವು ಮಾಪ೯ಡಬಹುದೆಂದವರಾಗುತ್ತಾರೆ.ಆದ್ದರಿಂದ ಎಲ್ಲರೂ ಜರಾಮರಣ ರಹಿತರಾಗಿಯೇ ಇದ್ದು ಅವಿದ್ಯಾವಾಸನೆಯಿಂದಲೇ ಸಂಸಾರದಲ್ಲಿ ತೊಳಲುತ್ತಾರೆಂದು ತಿಳಿಯಬೇಕು.506) 11-41) 1) ಅಜವಾದದ್ದು ಹುಟ್ಟುವುದೆಂದರೆ ಹುಟ್ಟಿದ್ದು ಅಜವೆಂಬ ದೋಷಕ್ಕೆ ಪಾತ್ರವಗುವುದು.ಹುಟ್ಟಿದ್ದು ಹುಟ್ಟುತ್ತದೆ ಎಂಬುದೂ ಯುಕ್ತವಲ್ಲ.ಏಕೆಂದರೆ ಒಂದು ಮೊದಲು ಹುಟ್ಟಿದ ಇನ್ನೊಂದರಿಂದ ಹುಟ್ಟಿದೆ ಎಂದಂತಾಗಿ ಅನವಸ್ಥಾ ದೋಷವು ಗಂಟುಬೀಳುವುದು.ಆದ್ದರಿಂದ ಅಜಾತಿಯೇ ಪರಮಾಥ೯ವು. 2)ಧಮಾ೯ಧಮ೯ಗಳೆಂಬ ಹೇತುವಿನಿಂದ ಶರೀರರೂಪವಾದ ಫಲವು ಹುಟ್ಟುವುದೆಂಬುದಾಗಲೀ,ಶರೀರರೂಪವಾದ ಫಲದಿಂದ ಧಮಾ೯ಧಮ೯ಗಳು ಉಂಟಾಗುತ್ತವೆಂಬುದಾಗಲೀ ಸರಿಯಲ್ಲ.ಹೇತುವಿನಿಂದ ಫಲ,ಫಲದಿಂದ ಹೇತು -ಹೀಗೆ ಒಂದರಿಂದೊಂದು ಹುಟ್ಟುತ್ತವೆ -ಎನ್ನುವವರು ಇವೆರಡರೊಳಗೆ ಯಾವುದು ಮೊದಲು ಹುಟ್ಟುವದೆಂಬುದನ್ನು ಗೊತ್ತುಪಡಿಸಲಾರದಾದ್ದರಿಂದ ಅವರ ಮತವು ದೋಷಯುಕ್ತವಾದದ್ದು..ಬೀಜಾಂಕುರಗಳಂತೆ ಇವು ಅನಾದಿಯಾಗಿ ಹುಟ್ಟುತ್ತಿರುವವು-ಎಂಬುದೂ ಸರಿಯಲ್ಲ.ಏಕೆಂದರೆ ಬೀಜಮತ್ತು ಅಂಕುರ -ಈ ಎರಡನ್ನೂ ಬಿಟ್ಟರೆ ಸಂತತಿ ಎಂಬುದು ಅದಕ್ಕಿಂತ ಬೇರೆಯಾಗಿ ಇಲ್ಲವೇ ಇಲ್ಲ.ಅದ್ದರಿಂದ ಈ ಹೇತುಫಲಗಳು ಹುಟ್ಟಿಲ್ಲವೆಂಬುದೇ ಪರಮಾಥ೯ವೆಂದಾಯಿತು. 3)ಹೀಗೆಯೇ ಬಂಧಮೋಕ್ಷಗಳುಂಟೆಂಬುವರು ಬಂಧವು ಅನಾದಿ ಸಾಂತ ಎಂದು ಹೇಳಬೇಕಾಗುವುದು. ಮೋಕ್ಷವು ಆದಿಯುಳ್ಳದ್ದು ಅನಂತವೂ ಎಂದು ಒಪ್ಪಬೇಕಾಗುವುದು.ಇದು ದೃಷ್ಟವಿರುದ್ಧ.ಆದ್ದರಿಂದ ಬಂಧಮೋಕ್ಷಗಳ ಜನ್ಮವೂ ಇಲ್ಲವೆಂಬುದೇ ಯುಕ್ತ. 4)ಇದರಂತೆ ವೈತಥ್ಯ ಪ್ರಕರಣದಲ್ಲಿ ಸ್ವಪ್ನ ಜಾಗರಿತಗಳು ಆದ್ಯಂತವುಳ್ಳವುಗಳಾದ್ದರಿಂದಲೂ ಸವ೯ಸಮನಾಗಿ ಎರಡೂ ಕನಸಿನಂತೆಯೇ ಇರುವುದರಿಂದಲೂ ಸ್ವಪ್ನಜಾಗರಿತಗಳಂತೆ ನಿಜವಾದ ಕಾಯ೯ಕಾರಣಭಾವವು ಇಲ್ಲವೆಂದೂ ಅವೆರಡರಲ್ಲಿಯೂ ನಮಗೆ ಪರಮಾಥ೯ವಸ್ತುದಶ೯ನವಿಲ್ಲವೇ ಇಲ್ಲವೆಂದೂ ಅಜಾತಿಯೇ ಪರಮಾಥ೯ವೆಂದೂ ಒಪ್ಪಬೇಕಾಗುತ್ತದೆ.(ಪುಟ 507) 42-53)ವೇದಾಂತದಲ್ಲಿಯೀ ವಸ್ತುಗಳ ಜನ್ಮವುಂಟೆಂದು ಹೇಳುವುದೇಕೆಂದರೆ ,ಬಾಹ್ಯವಸ್ತುಗಳು ಕಾಣಬರುತ್ತಿರುವುದರಿಂದಲೂ ಕಮ೯ಕ್ಕೆ ಸಧನವಾಗಿರುವುದರಿಂದಲೂ ನಿಜವಗಿದೆ ಎಂದು ತಿಳಿದುಕೊಂಡಿರುವ ನಿಜವಾಗಿದೆ ಎಂದು ತಿಳಿದುಕೊಂಡಿರುವ ಸ್ಥೂಲಬುದ್ಧಿಗಳಾದ ಆಸ್ತಿಕರಿಗೆ ಕ್ರಮಕ್ರಮವಾಗಿ ಅಜಾತಿ ಸ್ವರೂಪವನ್ನು ತಿಳಿಯಿಸಿಕೊಡುವುದಕ್ಕೆ ಉಪಾಯವಾಗಿ ಸಾಮಾನ್ಯರಿಗೆ ಕಾಣುವ ಮಾಯಾಜನ್ಮವನ್ನು ಅಲ್ಲಿ ಉಪದೇಶಿಸಿರುತ್ತದೆ.ತೋರುವುದು,ಕ್ರಿಯಾಚರಣೆಗೆ ಅಂಗವಾಗಿರುವುದು -ಇವೆರಡು ಇದ್ದ ಮಾತ್ರದಿಂದ ವಸ್ತುವು ನಿಜವಾಗಿಯೂ ಇದೆಯೆಂದು ಹೇಳುವುದಕ್ಕೆ ಆದೀತೇ?ಸ್ವಪ್ನದಲ್ಲಿ ಕಾಣುವ ಪದಾಥ೯ಗಳಲ್ಲಿಯೂ ಮಾಯಾವಿಯು ನಿಮಿ೯ಸಿರುವ ಆನೆಯೇ ಮುಂತಾದವು ಗಳಲ್ಲಿಯೂ ಈ ಎರಡು ಧಮ೯ಗಳು ಇರುತ್ತವೆಯಾದರೂ ಅವು ಸತ್ಯವಾಗಿ ಇರುವುದಿಲ್ಲವೆಂಬುದು ನಮಗೆಲ್ಲ ತಿಳಿದೇ ಇರುತ್ತದೆ.ಅದ್ದರಿಂದ ನಿಜವಾಗಿರುವ ವಸ್ತುಗಳಿಗಿರಬೇಕಾದ ಜನ್ಮವೇ ಮುಂತಾದ ಧಮ೯ಗಳನ್ನುಳ್ಳಂತೆ ವಸ್ತುಗಳು ತೋರುತ್ತಿದ್ದರೂ ನಿಜವಾಗಿ ಅವೆಲ್ಲವೂ ನಿಜ,ಅಚಲ,ಅನಾಭಾಸ(ತೋರದಿರುವ ವಸ್ತು),ಅದ್ವಿತೀಯವಾಗಿರುವ ಚೈತನ್ಯ ಮಾತ್ರವೇ ಎಂದು ನಿಶ್ಚಯಿಸಬೇಕು.ಇದಕ್ಕೆ ಅಲಾತ ಸ್ಪಂದಿತ (ತಿರುಗಿಸಿದ ಕೊಳ್ಳಿಯಂತೆ) ಎಂಬ ದೃಷ್ಟಾಂತವನ್ನು ಕೊಡಬಹುದು. ಆ ದೃಷ್ಟಾಂತದಲ್ಲಿ ನೆಟ್ಟಗೆ ,ಡೊಂಕಾಗಿ ಅಥವಾ ಮತ್ತೊಂದಾಕಾರದಿಂದ ಕಾಣಿಸಿಕೊಳ್ಳುವ ದೃಶ್ಯಗಳು ನಿಜವಾಗಿ ಹುಟ್ಟಿರುವುದಿಲ್ಲ.ಎಲ್ಲಿಂದಲೂ ಬಂದಿರುವುದಿಲ್ಲ,ಮತ್ತೆಲ್ಲಿಗೂ ಹೋಗುವುದೂ ಇಲ್ಲ.ಅಲ್ಲವೆ?ಅದರಂತೆಯೇ ಕೂಟಸ್ಥ ವಿಜ್ಞಪ್ತಿಯ ರೂಪದಲ್ಲಿ ತೋರುವ ಚಿತ್ತ ಚೇತ್ಯಾದಿಗಳೂ ಅವಿದ್ಯೆಯಿಂದಲೇ ತೋರುತ್ತಿರುವವೇ ಹೊರತು,ನಿಜವಾಗಿ ಹುಟ್ಟುವುದಿಲ್ಲ.ಎಲ್ಲಿಂದಾದರೂ ಆ ವಿಜ್ಞಪ್ತಿಗೆ ಬಂದು ಸೇರಿಕೊಂಡಿರುವುದಿಲ್ಲ.ನಾಶವದಾಗ ಅದನ್ನು ಬಿಟ್ಟು ಮತ್ತೆಲ್ಲಿಗೂ ಹೋಗುವುದಿಲ್ಲ-ಎಂದು ತಿಳಿಯಬೇಕು.ಕಾಯ೯ಕಾರಣವಾದಿಗಳು ದ್ರವ್ಯಕ್ಕೆ ದ್ರವ್ಯವು ಕರಣ.,ಅದ್ರವ್ಯಕ್ಕೆ ಅದ್ರವ್ಯವೇ ಕಾರಣ ಎನ್ನುತ್ತಾರೆ.ಆತ್ಮನು ದ್ರವ್ಯವೂ ಅಲ್ಲ ಅದ್ರವ್ಯವೂ ಅಲ್ಲ;ಆದ್ದರಿಂದ ಅವನು ಕಾಯ೯ವೂ ಅಲ್ಲ ಕಾರಣವೂ ಅಲ.(ಪುಟ 508) 54-81)ಹೀಗೆ ಎಲ್ಲವೂ ಆತ್ಮತತ್ವವೆ ಅಗಿರುವುದರಿಂದ ಚಿತ್ತದಿಂದ ಬಾಹ್ಯವಸ್ತುಗಳಾಗಲೀ ,ಬಾಹ್ಯವಸ್ತುಗಳಿಂದ ಚಿತ್ತವಾಗಲೀ ಹುಟ್ಟುವುದಿಲ್ಲ.ಹೀಗೆ ಕಾಯ೯ಕಾರಣ ಭಾವವೇ ಇಲ್ಲವಾದರೂ ಕಮ೯,ಶರೀರಪ್ರಾಪ್ತಿ ಎಂಬ ಹೇತುಫಲಗಳೆಂಬ ಅಭಿನಿವೇಷದಿಂದ ಅಜ್ಞರು ಸಂಸಾರಕ್ಕೆ ಪಕ್ಕಾಗುವರು. ಅವಿದ್ಯೆಯಿಂದ ಎಲ್ಲವೂ ಹುಟ್ಟುತ್ತವೆ,ಪರಮಾಥ೯ ದೃಷ್ಟಿಯಿಂದ ಎಲ್ಲವೂ ಅಜಾತ್ಮತತ್ವವೇ ಆಗಿರುತ್ತದೆ. ಜೀವರುಗಳೆಲ್ಲರೂ ಅಜಸ್ವರೂಪರೇ.ಸ್ವಪ್ನಜಾಗ್ರತ್ತುಗಳಲ್ಲಿರುವ ದ್ವೈತವೆಲ್ಲವೂ ಅಜಾದ್ವೈತವೇ.ಚಿತ್ತಚೇತ್ಯಗಳೆರಡೂ-ಕನಸಿನಲ್ಲಿರುವಂತೆ ಜಗ್ರತ್ತಿನಲ್ಲಿಯೂ -ಆತ್ಮತತ್ವಮಾತ್ರವೇ.ಜೀವರು ಹುಟ್ಟುವುದೇ ಇಲ್ಲ.ಚಿತ್ತವೂ ನಿವಿ೯ಷಯವಾದ ಪರಮತ್ಮನೇ.ಇದೆ ಎಂಬುದು ಅವಿದ್ಯೆಯೇ.ಇಲ್ಲವೆಂಬುದು ವಾದಿಗಳು ಇದೆಯೆನ್ನುವುದನ್ನು ಅಲ್ಲಗಳೆದಿದ್ದೇ.ಅಜನು ಎಂಬುದು ಕಲ್ಪಿತ ಸಂವೃತಿಯೇ.ಎಂದರೆ ಹುಟ್ಟುವನೆಂಬ ವಾದವನ್ನು ಅಲ್ಲಗಳೆಯುವುದಕ್ಕೆ ಹೇಳಿದ್ದೇ.ಇಲ್ಲದ್ದರಲ್ಲಿ ಇದೆ ಎಂಬ ಅಭಿನಿವೇಷವಿದೆ. .ಹೀಗೆ ಚಿತ್ತವು ಹುಟ್ಟುವುದೇ ಇಲ್ಲ ಎಂಬುದನ್ನು ನಿಶ್ಚಯಿಸಿಕೊಂಡವರಿಗೆ ಪುನಜ೯ನ್ಮವಿಲ್ಲ.ಇದು ಜ್ಞಾನಿಗಳಿಗೆ ಮಾತ್ರವೇ ತಿಳಿದಿರುತ್ತದೆ.ಅಜಾನಿದ್ರಾ ಸ್ವಪ್ನನಾದ ಆತ್ಮನೊಬ್ಬನೇ ಪರಮಾಥ೯ವು.(50೯) 82-87)ಇದೆ,ಇಲ್ಲ,ಇದ್ದೂ ಇಲ್ಲ,ಇಲ್ಲವೇ ಇಲ್ಲ-ಎಂಬ ನಾಲ್ಕು ಕೋಟಿಗಳಿಂದ ಪಂಡಿತಮಾನಿಗಳಾದ ಅಜ್ಞವಾದಿಗಳು ತತ್ವಕ್ಕೆ ಆವರಣವನ್ನು ಹಾಕಿರುವರು.ಇವುಗಳ ಸೋಂಕೇ ಇಲ್ಲದ ಪರಮಾಥ೯ವನ್ನು ತಿಳಿದವನೇ ಸವ೯ಜ್ಞನು,ಬ್ರಾಹ್ಮಣನು,ಕೃತಕೃತ್ಯನು,ವಿನಯ,ಶಮ,ದಮ,ಇವುಗಳಿಗೆಲ್ಲ ಜ್ಞಾನಸ್ಥಿತಿಯೆಂಬುದೇ ನಿಜವಾದ ಅಥ೯.(ಪುಟ 50೯) 88-೯5)ಇದನ್ನು ಅರಿತುಕೊಳ್ಳುವುದಕ್ಕೆಂದೇ (ಲೌಕಿಕ,ಜಾಗರಿತ),ಶುದ್ಧ ಲೌಕಿಕ,(ಸ್ವಪ್ನ),ಲೋಕೋತ್ತರ(ಸುಷುಪ್ತ)-ಎಂಬ ಮೂ ರು ಅವಸ್ಥೆಗಳ ಆತ್ಮರನ್ನು ಒಂದರಲ್ಲೊಂದು ಪ್ರವಿಲಯವಾಗಿಸಿ ರಾಗದ್ವೇಷಾದಿ ಕಷಾಯಗಳನ್ನು ಪಕ್ವಗೊಳಿಸಿಕೊಂಡು,ಬಾಲ್ಯ,ಪಾಂಡಿತ್ಯ,ಮೌನಗಳೆಂಬ ಸಾಧನಗಳನ್ನು ಅಳವಡಿಸಿಕೊಂಡು ಸಜ್ಜಾಗಬೇಕು,ಅರಿತುಕೊಂಡ ಬಳಿಕ ಮಾಡಬೇಕಾದ್ದೇನೂ ಉಳಿದಿರುವುದಿಲ್ಲ.(ಪುಟ 50೯) ಜ್ಞಾನದಿಂದ ಅಜ್ಞಾನವು ನಾಶವಾಗುವುದೆಂದೂ ಕಲ್ಪಿತ ಸಂವೃತಿಯಿಂದ ಹೇಳಿದ್ದೇ.ಏಕೆಂದರೆ ಆತ್ಮರುಗಳೆಲ್ಲರೂ ಸ್ವಭಾವದಿಂದಲೇ ಆಕಾಶದಂತೆ ಕೂಟಸ್ಥಚೈತನ್ಯ ಸ್ವರೂಪರಾಗಿರುತ್ತಾರೆ.ಎಲ್ಲರೂ ನಿತ್ಯಶುದ್ಧಬುದ್ಧಮುಕ್ತ ಸ್ವಭಾವದವರಾಗಿರುತ್ತಾರೆ.ಇಂಥ ಅಜಸಾಮ್ಯತತ್ವದಲ್ಲಿ ನಿಂತಿರುವವರೇ ಮಹಾಜ್ಞಾನಿಗಳು.(50೯) ೯6-100)ಜ್ಞಾನತತ್ವವು ಮತ್ತೇನನ್ನೂ ಸೋಂಕದೆ ಇರುತ್ತದೆ.ಅದು ಅಸಂಗವು.ಆತ್ಮರು ನಿತ್ಯಶುದ್ಧಬುದ್ಧ ಮುಕ್ತಸ್ವಭಾವರೇ ಆಗಿರುವುದರಿಂದ ಅವರು ತತ್ವವನ್ನು ಅರಿಯುತ್ತಾರೆಂಬುದೂ ಗೌಣವೃತ್ತಿಯಿಂದ ಹೇಳಿದ್ದು.ಜ್ಞಾತೃ,ಜ್ಞಾನ,ಜ್ಞೇಯ-ಎಂಬ ವಿಭಾಗವಿಲ್ಲದ ಆಕಾಶಕಲ್ಪವಾದ ಅಖಂಡಚೈತನ್ಯವೇ ಪರಮಾಥ೯ವು.ಇದನ್ನು ಗೌತಮಬುದ್ಧನು ಹೇಳಿರುವುದಿಲ್ಲ.ಅಜವೂ ಪರಿಶುದ್ಧವೂ ಸಾಮ್ಯವೂ ಆಗಿರುವ ಈ ತತ್ವಕ್ಕೆ ನಮಸ್ಕಾರ.(ಪುಟ50೯) ಗೌಡಪಾದ ಹೃದಯ : ಮೂಲ ಲೇಖಕರು:ಶ್ರೀಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು ಪ್ರಕಾಶಕರು:ಅಧ್ಯಾತ್ಮ ಪ್ರಕಾಶ ಕಾಯಾ೯ಲಯ ಹೊಳೆನರಸೀಪುರ-573211 ಹಾಸನ ಜಿಲ್ಲೆ.ಕನಾ೯ಟಕ ಸಂಪಾದಕರು:ಹೆಚ್.ಎಸ್.ಲಕ್ಮೀನರಸಿಂಹಮೂತಿ೯ ಗೌಡಪಾದ ಹೃದಯ ಸಾರಸಂಗ್ರಹ: ಸಂಗ್ರಹ:ಡಾ.ರವೀಂದ್ರ ಹೊಸದುಗ೯ ಮೂರನೆಯ ಮುದ್ರಣ:2018 ................................................. ಮೂಲ ಲೇಖಕರಿಗೂ, ಸಂಪಾದಕರಾದ ಹಚ್.ಎಸ್.ಲಕ್ಷ್ಮೀನರಸಿಂಹಮೂತಿ೯ಯವರಿಗೂ, ಪ್ರಕಾಶಕರಿಗೂ ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯದ ಆಡಳಿತವಗ೯ ಮತ್ತು ಸಿಬ್ಬಂದಿವಗ೯ಕ್ಕೂ ನನ್ನ ನಮನಗಳು ಹಾಗೂ ಕೃತಜ್ಞತೆಗಳು. ..................................................................................................................................................... ಗೌಡಪಾದರೇ ಅದ್ವೈತ ವೇದಾಂತ ಪ್ರವತ೯ಕರಲ್ಲಿ ಮೊದಲನೆಯವರೆನ್ನಬಹುದು.ಇವರು ತಮ್ಮ ಮಾಂಡೂಕ್ಯಕಾರಿಕೆಯಲ್ಲಿ ಸಮಗ್ರವಾಗಿ ಸಪ್ರಮಾಣವಾಗಿ ಸಿದ್ದಾಂತ ಮಾಡಿದ್ದಾರೆ.ಈ ಕಾರಿಕೆಯಲ್ಲಿ ನಾಲ್ಕು ಅಧ್ಯಾಯ(ಪ್ರಕರಣ)ಗಳಿವೆ. 1)ಆಗಮ ಪ್ರಕರಣ:ಇದರಲ್ಲಿ ಮಾಂಡೂಕ್ಯೋಪನಿಷತ್ತಿನ ವಾಕ್ಯಗಳಿಗೆ ವ್ಯಾಖ್ಯಾ ವಿವರಗಳಿವೆ.ಇಲ್ಲಿ ತಮ್ಮ ಸಿದ್ಧಾಂತವು ಅನುಮಾನ ಮತ್ತು ಶಬ್ದ ಪ್ರಮಾಣಗಳಿಂದ ಸಿದ್ಧವಾಗುವುದೆಂದು ತೋರಿಸಿದ್ದಾರೆ. 2)ವೈತಥ್ಯ ಪ್ರಕರಣ :ಪ್ರಪಂಚದ ಮಿಥ್ಯಾತ್ವವನ್ನು ಸಾಧಿಸಿದ್ದಾರೆ. 3)ಅದ್ವೈತ ಪ್ರಕರಣ :ಪಾರಮಾಥಿ೯ಕವಾಗಿ ಅದ್ವೈತವೇ ಸತ್ಯವೆಂಬುದನ್ನು ಸಿದ್ದಾಂತ ಮಾಡಿದ್ದಾರೆ 4)ಅಲಾತಶಾಂತಿ ಪ್ರಕರಣ: ಒಂದು ದೀವಟಿಗೆಯನ್ನು ಕ್ಥಯಲ್ಲಿ ಹಿಡಿದು ಸುತ್ತುತ್ತಾ ಇದ್ದರೆ ಅದು ಚಕ್ರಾಕಾರವಾಗಿ ಉರಿಯುತ್ತಿರುವಂತೆ ತೋರುತ್ತದೆ.ಈ ಭ್ರಾಂತಿಯನ್ನು ಅಲಾತಚಕ್ರವೆಂದು ನಿದೇ೯ಶಿಸಿದ್ದಾರೆ.ಈ ದೀವಟಿಗೆ ಸುತ್ತುವುದನ್ನೂ ನಿಲ್ಲಿಸಿದರೆ ಅದು ಕೇವಲ ಒಂದಾಗಿ ಕಾಣುತ್ತದೆ. ಪರಿಭ್ರಮಣದಲ್ಲಿರುವ ದೀವಟಿಗೆ ನಾನಾತ್ವದಿಂದ ತೋರಿ ಚಕ್ರಾಕಾರದ ಬ್ರಾಂತಿುiÀುನ್ನುಂಟು ಮಾಡಿದರೂ ಅಲಾತ ಶಾಂತಿಯಾದ ಮೇಲೆ ಕಾಣುವುದು ಒಂದೇ ದೀವಟಿಗೆ.ಹಾಗೆಯೇ ಮಾಯಾವರಣದಿಂದ ಕೂಡಿದ ನಾಮರೂಪಾತ್ಮಕವಾದ ಪ್ರಪಂಚವು ನಾನತ್ವವನ್ನು ಹೊಂದಿರುವಂತೆ ಕಂಡರೂ,ಆ ಭ್ರಾಂತಿಯ ನಿರಸನವಾದಮೇಲೆ ಅದ್ವೈತ ತತ್ವವೊಂದೇ ಕಾಣುತ್ತದೆ ಎಂಬುದು ಇದರ ಅಭಿಪ್ರಾಯ.ಈ ಅಲಾತ ಚಕ್ರದ ಉಪಮಾನವು ಬೌದ್ಧಮತದ ಮಾಧ್ಯಮಿಕರಲ್ಲಿ ಸಾಧಾರಣವಾಗಿ ಇರುವ ನಿದಶ೯ನ. ಶ್ರೀಗೋವಿಂದ ಭಗವತ್ಪಾದರು ಶ್ರೀ ಶಂಕರಾಚಾಯ೯ರ ಗುರುಗಳು. ಶ್ರೀ ಗೌಡಪಾದರು ಶ್ರೀ ಗೋವಿಂದ ಭಗವತ್ಪಾದರ ಗುರುಗಳು. 1)ಆಗಮಪ್ರಕರಣ: ಶ್ರೀ ಗೌಡಪಾದಾಚಾಯ೯ರು ಬರೆದಿರುವ ಆಗಮಪ್ರಕರಣವು ಮಾಂಡೂಕ್ಯೋಪನಿಷತ್ತಿನ ಉಪದೇಶವನ್ನು ಪ್ರಧಾನವಾಗಿ ಒಳಗೊಂಡಿವೆ. 1)ಇದೆಲ್ಲವೂ ಓಂ ಎ0ಬೀ ಅಕ್ಷರವು.ಅದರ ಉಪವ್ಯಾಖ್ಯಾನವಿದು: ಆಗಿಹೋಗಿರುವುದು,ಇರುವುದು,ಆಗಲಿರುವುದು-ಎಂಬಿದೆಲ್ಲವೂಓಂಕಾರವೇ.ಇನ್ನು ತ್ರಿಕಾಲಾತೀತವಾಗಿ ಏನಿರುವುದೋ ಅದೂ ಓಂಕಾರವೇ.(ಪುಟ 5) 2)ಇದೆಲ್ಲವೂ ಬ್ರಹ್ಮವೇ.ಈ ಆತ್ಮನೇ ಬ್ರಹ್ಮವು.ಈ ಆತ್ಮನು ನಾಲ್ಕು ಪಾದಗಳುಳ್ಳವನು.(ಪುಟ 5) 3)ಜಾಗರಿತವೆಂಬ ಸ್ಥಾನವುಳ್ಳವನೂ ಬಹಿಃಪ್ರಜ್ಞನೂ ಸಪ್ತಾಂಗನೂ ಹತ್ತೊಂಬತ್ತು ಮುಖವುಳ್ಳವನೂ ಸ್ಥೂಲಭೋಗವುಳ್ಳವನೂ ಆದ ವೈಶ್ವಾನರನು ಒಂದನೆಯ ಪಾದವು.(ಪುಟ6) 4)ಸ್ವಪ್ನವೆಂಬ ಸ್ಥಾನವುಳ್ಳವನೂ ಅಂತಃಪ್ರಜ್ಞನೂ ಸಪ್ತಾಂಗನೂ ಹತ್ತೊಂಬತ್ತು ಮುಖವುಳ್ಳವನೂ ಸೂಕ್ಷ್ಮಭೋಗವುಳ್ಳವನೂ ಆದ ತೈಜಸನು ಎರಡನೆಯ ಪಾದವು.(ಪುಟ6) 5)ಎಲ್ಲಿ ನಿದ್ರಿಸಿದವನು ಯಾವ ಕಾಮವನ್ನೂ ಬಯಸುವುದಿಲ್ಲವೋ ಯಾವ ಕನಸನ್ನೂ ಕಾಣುವುದಿಲ್ಲವೋ ಅದು ಸುಷುಪ್ತವು.ಸುಷುಪ್ತ ಸ್ಥಾನದಲ್ಲಿರುವವನಾಗಿ ಏಕೀಭೂತನಾಗಿ ಪ್ರಜ್ಞಾನಘನವೇ ಆಗಿ ಆನಂದಮಯನಾಗಿ ಆನಂದ ಭೋಗವುಳ್ಳವನಾಗಿ ಚೇತೋಮುಖನಾಗಿರುವ ಪ್ರಾಜ್ಞನು ಮೂರನೆಯ ಪಾದವು.(ಪುಟ 6) 6)ಈತನೇ ಸವೇ೯ಶ್ವರನು,ಈತನೇ ಸವ೯ಜ್ಞನು, ಈತನೇ ಎಲ್ಲಕ್ಕೂ ಯೋನಿಯು,ಭೂತಗಳ ಪ್ರಭವಾಪ್ಯಯವು(ಪುಟ 6) 2)ಪಾದತ್ರಯ ಕಾರಿಕೆಗಳು: 1) ಇಲ್ಲಿ ಈ ಶ್ಲೋಕಗಳಿರುತ್ತವೆ.ಹೊರಗಿನ ಅರಿವುಳ್ಳ ವಿಭುವು ವಿಶ್ವನು;ಒಳಗಿನ ಅರಿವುಳ್ಳವನಾದರೊ,ತೈಜಸನು.ಹಾಗೂ ಘನಪ್ರಜ್ಞನಾದವನು ಪ್ರಾಜ್ಞನು.ಒಬ್ಬನೇ ಮೂರು ಬಗೆಯವನು ಎನಿಸಿಕೊಳ್ಳುತ್ತಾನೆ.(ಪುಟ 7) ವಿಶ್ವಾದಿಗಳ ಅನುಭವವು ಜಾಗ್ರದವಸ್ಥೆಯಲ್ಲಿಯೂ ಇದೆ. 2)ಬಲಗಣ್ಣಿನ ದ್ವಾರದಲ್ಲಿ ವಿಶ್ವನು,ಮನಸ್ಸಿನ ಒಳಗೋ ಎಂದರೆ ತೈಜಸನು,ಹೃದಯದ ಆಕಾಶದಲ್ಲಿ ಪ್ರಾಜ್ಞನು.ಹೀಗೆ ದೇಹದಲ್ಲಿ ಮೂರು ಬಗೆಯಾಗಿರುತ್ತಾನೆ.(ಪುಟ 18) 3-4)ವಿಶ್ವನು ನಿತ್ಯವಾಗಿ ಸ್ಥೂಲ ಭೋಕ್ತø;ತೈಜಸನು ಪ್ರವಿವಿಕ್ತ ಭೋಕ್ತø ಮತ್ತು ಪ್ರಾಜ್ಞನು ಅವಿಭಕ್ತ ಭೋಕ್ತø.ಹಿಗೆ ಭೋಗವು ಮೂರು ಬಗೆ ಎಂದು ತಿಳಿಯಿರಿ.ಸ್ಥೂಲವು ವಿಶ್ವನಿಗೆ ತೃಪ್ತಿಯನ್ನುಂಟು ಮಾಡುವುದು.ಪ್ರವಿವಿಕ್ತವಾದದ್ದು ತೈಜಸನಿಗೂ ಮತ್ತು ಆನಂದವು ಪ್ರಾಜ್ಞನಿಗೂ ತ್ರಪ್ತಿಯನ್ನುಂಟು ಮಾಡುವುದು.ಹೀಗೆ ತೃಪ್ತಿಯು ಮೂರು ಬಗೆ ಎಂದು ತಿಳಿಯಿರಿ.(ಪುಟ 27) 5)ಮೂರು ಸ್ಥಳಗಳಲ್ಲೂ ಯಾವುದು ಭೋಗ್ಯವೋ,ಯಾವನು ಭೋಕ್ತನೆಂದು ಹೇಳಲ್ಪಟ್ಟಿರುವನೋ ಇವೆರಡನ್ನೂ ಅರಿತುಕೊಂಡವನು ಉಂಡರೂ ಲೇಪವನ್ನು ಹೊಂದುವುದಿಲ್ಲ.(ಪುಟ28) 3) ಸೃಷ್ಟಿಕಾರಿಕೆಗಳು: 6)ಮೊದಲೇ ಇರುವ ಸವ೯ಭಾವಗಳಿಗೇ ಉತ್ಪತ್ತಿಯು ಎಂದು ನಿಶ್ಚಯವು.ಪ್ರಾಣವೆಂಬ ಪುರುಷನು ಎಲ್ಲವನ್ನೂ ,ಚೇತಸ್ಸಿನ ಕಿರಣಗಳನ್ನು ,ಬೇರೆ ಬೇರೆಯಾಗಿ ಹುಟ್ಟಿಸುತ್ತಾನೆ.(ಪುಟ30) 7-8-೯)ಕೆಲವರು ಸೃಷ್ಟಿಚಿಂತಕರು ಸೃಷ್ಟಿಯು ವಿಭೂತಿ ಎಂದು ಬಗೆಯುತ್ತಾರೆ;ಅದು ಸ್ವಪ್ಮಮಾಯೆಗಳ ಸರೂಪವಾಗಿದೆ ಎಂದು ಮತ್ತೆ ಕೆಲವರು ವಿಕಲ್ಪಿಸಿರುತ್ತಾರೆ;ಸೃಷ್ಟಿಯು ಪ್ರಭುವಿನ ಇಚ್ಛಾಮಾತ್ರವು ಎಂದು ಸೃಷ್ಟಿಯಲ್ಲಿ ನಿಶ್ಚಿತಬುದ್ಧಿಯುಳ್ಳವರೆನ್ನುತ್ತಾರೆ;ಕಾಲದಿಂದ ಸೃಷ್ಟಿ ಎಂದು ಕೆಲವರು ಕಾಲಚಿಂತಕರು ಬಗೆಯುತ್ತಿರುವರು;ಭೋಗಕ್ಕಾಗಿ ಸೃಷ್ಟಿ ಎಂದು ಕೆಲವರು.ಇದು ದೇವನ ಸ್ವಭಾವವೇ.ಆಪ್ತಕಾಮನಿಗೆ ಎಲ್ಲಿಯ ಇಚ್ಛೆ?(ಪುಟ 43) 4)ತುರೀರಕಾರಿಕೆಗಳು: 10) ಈ ಶ್ಲೋಕಗಳಿರುತ್ತವೆ:ತುಯ೯ನು ಸವ೯ದುಃಖಗಳ ನಿವೃತ್ತಿಗೂ ಈಶಾನನು,ಪ್ರಭುವು,ಅವ್ಯಯನು, ,ಸವ೯ಭಾಗಳೊಳಗೆ ಇರುವ ಅದ್ವೈತನು,ಜೀವನು,ವಿಭುವೆನಿಸಿರುವನು.(ಪುಟ 52) 11)ಆ ವಿಶ್ವತೈಜಸರು ಕಾಯ೯ಕಾರಣ ಬದ್ದರೆಂದು ಒಪ್ಪಲಾಗಿದೆ.ಆದರೆ ಪ್ರಾಜ್ಞನು ಕಾರಣ ಬದ್ಧನು.ಇವೆರಡೂ ತುಯ೯ನಲ್ಲಿ ಸಿದ್ಧಿಸುವುದಿಲ್ಲ.(ಪುಟ55) 12)ಪ್ರಾಜ್ಞನು ತನ್ನನ್ನಾಗಲೀ ಮತ್ತೊಬ್ಬರನ್ನಾಗಲೀ,ಸತ್ಯವನ್ನಾಗಲಿ,ಅನೃತವನ್ನಾಗಲಿ,ಸ್ವಲ್ಪವೂ ಅರಿಯನು.ತುಯ೯ವೊ ಎಂದರೆ ಅದು ಯಾವಾಗಲೂ ಸವ೯ದೃಕ್ಕೇ ಆಗಿರುತ್ತದೆ.(ಪುಟ 63) ಪ್ರಾಜ್ಞತುರೀಯರ ವೈಲಕ್ಷಣ್ಯ: 13)ದ್ವೈತವನ್ನು ಅರಿಯದಿರುವುದು ಪ್ರಾಜ್ಞ,ತುಯ೯-ಇಬ್ಬರಿಗೂ ಸಮಾನವಾಗಿರುತ್ತದೆ.ಪ್ರಾಜ್ಞನು ಬೀಜನಿದ್ರೆಯಿಂದ ಕೂಡಿರುತ್ತಾನೆ.ಆ ನಿದ್ರೆಯು ತುಯ೯ನಲ್ಲಿ ಇರುವುದಿಲ್ಲ.(ಪುಟ6೯) 14)ಮೊದಲನೆಯ ಇಬ್ಬರೂ ಕನಸು ನಿದ್ರೆಗಳಿಂದ ಕೂಡಿರುವರು.ಪ್ರಾಜ್ಞನಾದರೋ ಕನಸಿಲ್ಲದ ನಿದ್ರೆಯಿಂದ ಕೂಡಿರುತ್ತಾನೆ.ತತ್ವ ನಿಶ್ಚಯವುಳ್ಳವರಿಗೆ ತುಯ೯ನಲ್ಲಿ ನಿದ್ರೆಯು ಕಾಣಿಸುವುದಿಲ್ಲ.ಸ್ವಪ್ಮವೂ ಕಾಣಿಸುವುದೇ ಇಲ್ಲ. (ಪುಟ71) 15)ಬೇರೆಯಾಗಿ ತಿಳಿಯುವವನಿಗೆ ಸ್ವಪ್ನವು.ತತ್ವವನ್ನು ಅರಿಯದೆ ಇರುವವನಿಗೆ ನಿದ್ರೆ.ಇವೆರಡರ ತಪ್ಪು ಕಲ್ಪನೆಯು ಕ್ಷಯವಾದರೆ ತುರೀಯ(ನಾಲ್ಕನೆಯ) ಸ್ಥಾನವನ್ನು ಪಡೆದುಕೊಳ್ಳುತ್ತಾನೆ.(ಪುಟ74) 16)ಅನಾದಿ ಮಾಯೆಯಿಂದ ನಿದ್ರೆ ಮಾಡುತ್ತಿರುವ ಜೀವನು ಯಾವಾಗ ಎಚ್ಚರುವನೋ ಆಗ ಅಜನೂ ಅನಿದ್ರನೂ ಅಸ್ವಪ್ನನೂ ಅಗಿರುವ ಅದ್ವೈತವನ್ನು ಅರಿತುಕೊಳ್ಳುವನು.(ಪುಟ77) 17)ಪ್ರಪಂಚವು ಇರುವುದಾದರೆ ಹೋದೀತು,ಸಂಶಯವಿಲ್ಲ.ಈ ದ್ವೈತವು ಮಾಯಾಮಾತ್ರ.ಪರಮಾಥ೯ದಿಂದ ಅದ್ವೈತವೇ.(ಪುಟ80) 18)ವಿಕಲ್ಪವು ಯಾರಿಂದಲಾದರೂ ಕಲ್ಪಿತವಾಗಿದ್ದಿದ್ದರೆ ಹೋಗಬಹುದಾಗಿತ್ತು.ಈ ವಾದವು ಉಪದೇಶಕ್ಕಾಗಿ;ತಿಳಿದಮೇಲೆ ದ್ವೈತವಿಲ್ಲ.(ಪುಟ83) ಮಾತ್ರಾತ್ರಯಕಾರಿಕೆಗಳು: (ಉಪನಿಷತ್) 8)ಅ ಈ ಆತ್ಮನು ಅಧ್ಯಕ್ಷರವಾಗಿ ಓಂಕಾರವು.ಇವನು ಅಧಿಮಾತ್ರನಾಗಿರುವನು.ಪಾದಗಳೇ ಮಾತ್ರೆಗಳು,ಮಾತ್ರೆಗಳೇ ಪಾದಗಳು;ಅಕಾರ ,ಉಕಾರ,ಮಕಾರ-ಎಂಬಿವೇ ಮಾತ್ರೆಗಳು.(ಪುಟ86) ೯)ಜಾಗರಿಕವೆಂಬ ಸ್ಥಾನವುಳ್ಳ ವೈಶ್ವಾನರನು ಅಕಾರವೆಂಬ ಒಂದನೆಯ ಮಾತ್ರೆಯು,ಅಸ್ತಿ ಅಥವಾ ಆದಿಮತ್ತ್ವ-ಎಂಬ ಹೋಲಿಕೆಗಳು ಈ ಎರಡರಲ್ಲಿಯೂ ಇವೆ.ಯಾವನು ಹೀಗೆಂದು ಅರಿತುಕೊಲಳುವನೋ ಅವನು ಸವ೯ಕಾಮಗಳನ್ನೂ ಪಡೆದುಕೊಳ್ಳುವನು.(ಪುಟ86) 10)ಸಪ್ನವೆಂಬ ಸ್ಥಾನವುಳ್ಳ ತೈಜಸನು ಉಕಾರವೆಂಬ ಎರಡನೆಯ ಮಾತ್ರೆಯು.ಏಕೆಂದರೆ ಉಭಯತ್ವ ಅಥವಾ ಉತ್ಕಷ೯-ಎಂಬ ಹೋಲಿಕೆಗಳಿವೆ.ಯಾವನು ಹೀಗೆಂದು ಅರಿತುಕೊಳ್ಳುವನೋ ಅವನು ಜ್ಞಾನ ಸಂತಾನವನ್ನು ಉತ್ಲಷ೯ಗೊಳಿಸಿಕೊಳ್ಳುವನು.ಸಮಾನನೂ ಆಗುವನು.ಅವನ ಕುಲದಲ್ಲಿ ಯಾವನೂ ಬ್ರಹ್ಮವನ್ನು ಅರಿಯದವನು ಇರುವುದಿಲ್ಲ(ಪುಟ87) 11) ಆ ಈ ಆತ್ಮನು ಅಧ್ಯಕ್ಷರವಾಗಿ ಓಂಕಾರವು.ಇವನು ಅಧಿಮಾತ್ರನಾಗಿರುವನು.ಪಾದಗಳೇ ಮಾತ್ರೆಗಳು,ಮಾತ್ರೆಗಳೇ ಪಾದಗಳು.ಅಕಾರ,ಉಕಾರ,ಮಕಾರ-ಎಂಬಿವೇ ಮತ್ರೆಗಳು.(ಪುಟ87) 1೯)ಇಲ್ಲಿ ಈ ಶ್ಲೋಕಗಳಿರುತ್ತವೆ.ವಿಶ್ವನಿಗೆ ಅತ್ವವನ್ನು ಹೇಳುವ ಇಚ್ಛೆಯಿರುವಲ್ಲಿ,ಮಾತ್ರೆ ಎಂದು ಇಟ್ಟುಕೊಳ್ಳುವಗ,ಆದಿತ್ವ ಸಾಮಾನ್ಯವು ಉತ್ಕಟವಾಗಿರುತ್ತದೆ.ಆಪ್ತಿ ಸಾಮಾನ್ಯವೂ ಉತ್ಕಟವಾಗಿರುತ್ತದೆ.(ಪುಟ 87) 20)ತೈಜಸನನ್ನು ಉತ್ವವೆಂದು ಅರಿಯುವಲ್ಲಿ,ಉಕಾರ ರೂಪವಾದ ಮಾತ್ರೆಯೆಂದು ಇಟ್ಟುಕೊಳ್ಳುವಾಗ,ಉತ್ಕಷ೯ವು ಸ್ಫುಟವಾಗಿ ಕಾಣುತ್ತದೆ.ಉಭಯತ್ವವೂ ಹಾಗೆಯೇ(ಪುಟ8೯) 21) ಪ್ರಾಜ್ಞನು ಮಕಾರವಾಗುವಲ್ಲಿ ,(ಮಕಾರವೆಂಬ)ಮಾತ್ರೆಯೆಂದಿಟ್ಟುಕೊಳ್ಳುವುದರಲ್ಲಿಯಾದರೋ,ಮಾನ ಎಂಬ ಹೋಲಿಕೆಯೂ ಉತ್ಕಟವಾಗಿರುತ್ತದೆ.(ಪುಟ8೯) 2223)ಮೂರು ಸ್ಥಿತಿಗಳಲ್ಲಿಯೂ ಸಮಾನವಾಗಿರುವ ಹೋಲಿಕೆಯನ್ನು ಯಾವನು ನಿಶ್ಚಯಿಸಿ (ಅರಿತುಕೊಂಡಿರುವನೋ,ಅವನು ಸವ೯ಭೂತಗಳಿಗೂ ಪೂಜ್ಯನು).ಆ ಮಹಾಮುನಿಯೇ ವಂದ್ಯನೂ ಆಗಿರುತ್ತಾನೆ.ಅಕಾರವು ವಿಶ್ವನಲ್ಲಿಗೆ ಒಯ್ಯುವುದು;ಉಕಾರವು ತೈಜಸನಲ್ಲಿಗೆ ಒಯ್ಯುವುದು. ಮಕಾರವಾದರೊ ಪ್ರಾಜ್ಞನಲ್ಲಿಗೆ ಒಯ್ಯುವುದು.ಅಮಾತ್ರದಲ್ಲಿ ಗತಿಯಿರುವುದಿಲ್ಲ.(ಪುಟ೯0) 6)ಪ್ರಣವ ಕಾರಿಕೆಗಳು: 12)ಅಮಾತ್ರವಾಗಿರುವ ನಾಲ್ಕನೆಯದು ಅವ್ಯವಹಾಯಕವೂ ಪ್ರಪಂಚೋಪಶಮವೂ ಶಿವವೂ ಅದ್ವೈತವೂ ಆಗಿರುತ್ತದೆ.ಹೀಗಿರುವ ಓಂಕಾರವು ಆತ್ಮನೇ. ಯಾವನು ಹೀಗೆಂದು ಅರಿತುಕೊಳ್ಳುವನೋ ಅವನು ಆತ್ಮರೂಪದಿಂದ ಆತ್ಮರೂಪವನ್ನು ಒಳಹೊಗುವನು.(ಪುಟ೯1) 24)ಇಲ್ಲಿ ಈ ಶ್ಲೋಕಗಳು ಬಂದಿರುತ್ತವೆ.ಓಂಕಾರವನ್ನು ಪಾದ ಪಾದವಾಗಿಅರಿತುಕೊಳ್ಳಬೇಕು,ಪಾದಗಳೇ ಮಾತ್ರೆಗಳೆಂಬುದಕ್ಕೆ ಸಂಶಯವಿಲ್ಲ,ಓಂ ಕಾರವನ್ನು ಪಾದ ಪಾದವಾಗಿ ಅರಿತುಕೊಂಡವನು ಏನನ್ನೂ ಚಿಂತಿಸಲಾರನು.(ಪುಟ೯2) 25-26)ಪ್ರಣವದಲ್ಲಿ ಚಿತ್ತವನ್ನು ನೆಲೆನಿಲ್ಲಿಸಿಕೊಳ್ಳಬೇಕು.ಪ್ರಣವವೇ ನಿಭ೯ಯವಾದ ಬ್ರಹ್ಮವು.ಪ್ರಣವದಲ್ಲಿ ಯಾವಾಗಲೂ ಮನಸ್ಸನ್ನು ನಿಲ್ಲಿಸಿಕೊಂಡವನಿಗೆ ಎತ್ತಲೂ ಭಯವಿಲ್ಲ.ಪ್ರಣವವೇ ಕಡಿಮೆಯ ಬ್ರಹ್ಮವು. ಪ್ರಣವವೇ ಹೆಚ್ಚಿನ ಬ್ರಹ್ಮವು.ಪ್ರಣವವೇ ಹಿಂದಿಲ್ಲದ್ದು,ಮುಂದಿಲ್ಲದ್ದು ್ದ,ಒಳಗಿಲ್ಲದ್ದು,ಹೊರಗಿಲ್ಲದ್ದು,ಅವ್ಯಯವಾದದ್ದು.(ಪುಟ೯3) 27)ಎಲ್ಲಕ್ಕೂ ಪ್ರಣವವೇ ಮೊದಲು,ನಡುವೆ ಮತ್ತು ಕೊನೆ.ಹೀಗೆಂದೇ ಪ್ರಣವವನ್ನು ಅರಿತುಕೊಂಡರೆ ಅನಂತರವಾಗಿಯೇ ಅದನ್ನು ಒಳಹೊಗುತ್ತಾನೆ.(ಪುಟ೯4) 28)ಪ್ರಣವವನ್ನೇ ಪ್ರತಿಯೊಬ್ಬನ ಹೃದಯದಲ್ಲಿರುವ ಈಶ್ವರನೆಂದು ತಿಳಿಯಬೇಕು.ಓಂಕಾರವು ಸವ೯ವ್ಯಾಪಿಯೆಂದು ಅರಿತಿರುವ ಧೀರನು ಶೋಕಿಸುವುದಿಲ್ಲ.(ಪುಟ ೯4) 2೯)ಅಮಾತ್ರವಾದ ಆನಂತಮಾತ್ರವಾದ ದ್ವೈತದ ಉಪಶಮವಾಗಿರುವ ಮಂಗಳಕರವಾದ ಓಂಕಾರವು ಯಾವನಿಗೆ ವಿದಿತವಾಗಿರುವುದೋ ಅವನೇ ಮುನಿ.ಉಳಿದ ಜನರಲ್ಲ.(ಪುಟ ೯5) ,,,,,,,,,,,,,,,,,,,,,,,,,ಆಗಮ ಪ್ರಕರಣವು ಸಂಪೂಣ೯,,,,,,,,,,,,,,,,,,,,,,,,,,,,,,,,,,,,,,,,,,,,,,,,,,, 2) ವೈತಥ್ಯ ಪ್ರಕರಣ: ಸಪ್ತವ್ಯತಥ್ಯ ಕಾರಿಕೆಗಳು: 1)ಭಾವಗಳು ಒಳಗೆ ಸಂವ್ರೃತವಾಗಿರುವವೆಂಬ ಕಾರಣದಿಂದ ಪಂಡಿತರು ಕನಸಿನಲ್ಲಿರುವ ಎಲ್ಲಾ ಭಾವಗಳಿಗೂ ವೈತಥ್ಯವನ್ನು ಹೇಳುತ್ತಾರೆ.(ಪುಟ101) 2)ಕಾಲವು ತಕ್ಕಷ್ಟು ದೀಘ೯ವಾಗಿಲ್ಲವಾದ್ದರಿಂದ ಆಯಾ ದೇಶಗಳಿಗೆ ಹೋಗಿ ಪದಾಥ೯ಗಳನ್ನು ನೋಡುತ್ತಾನೆಂಬುದಿಲ್ಲ ಮತ್ತು ಎಚ್ಚೆತ್ತವನು ಯಾವನೂ ಆ ದೇಶದಲ್ಲಿ ಇರುವುದೂ ಇಲ್ಲ.(ಪುಟ102) 3)ಕನಸಿನಲ್ಲಿ ರಥಾದಿಗಳು ಇಲ್ಲವೆಂದೂ ನ್ಯಾಯಪೂವ೯ಕವಾಗಿ ಶ್ರುತಿಯಲ್ಲಿ ಹೇಳಿರುತ್ತದೆ.ಅದರಿಂದ ಸ್ವಪ್ನವಿಷಯದಲ್ಲಿ ತಿಳಿದಿರುವ ವೈತಥ್ಯವನ್ನೇ ಅಲ್ಲಿ ತಿಳಿಸಿರುತ್ತದೆ- ಎನ್ನುವರು.(ಪುಟ14) 4)ಆದ್ದರಿಂದ ಎಚ್ಚರದಲ್ಲಿರುವ ಭೇದಗಳಿಗೂ ಅಲ್ಲಿ ಹೇಗೋ ಹಾಗೆ ಇಲ್ಲಿಯೂ ವೈತಥ್ಯವನ್ನು ಹೇಳುತ್ತಾರೆ.ಆದರೆ ಸ್ವಪ್ನದಲ್ಲಿ ಅಂತಃಸ್ಥಾನವಾಗಿರುವುದರಿಂದಲೂ ಸಂವೃತವಾಗಿರುವುದರಿಂದಲೂ ಬೇರೆಯಾಗಿರುತ್ತದೆ.(ಪುಟ107) 5)ಕನಸು ಎಚ್ಚರ -ಎಂಬೀ ಎರಡು ಸ್ಥಾನಗಳೂ ಒಂದೇ. ಏಕೆಂದರೆಪ್ರಸಿದ್ಧವಾದ ಹೇತುವಿನಿಂದ (ಅವುಗಳೊಳಗಿರುವ) ಭೇದಗಳು ಸಮವಾಗಿರುತ್ತವೆ-ಎಂದು ವಿವೇಕಿಗಳು ಹೇಳುತ್ತಾರೆ.(ಪುಟ114) 6)ಮೊದಲಲ್ಲಿಯೂ ಕೊನೆಯಲ್ಲಿಯೂ ಯಾವುದು ಇರುವುದಿಲ್ಲವೋ ಅದು ಈಗಲೂ ಹಾಗೆಯೇ(ಇರುವುದಿಲ್ಲ).ಮಿಥ್ಯಾ ವಸ್ತುವಿಗೆ ಸಮಾನವಾಗಿದ್ದುಕೊಂಡೇ ಸತ್ಯವಾಗಿರುವಂತೆ ಕಾಣುತ್ತಿರುವುವು.(ಪುಟ 115) 7)ಅವುಗಳಿಗಿರುವ ಸಪ್ರಯೋಜನತ್ವವು ಕನಸಿನಲ್ಲಿ ವಿರುದ್ಧವಾದ ಅಭಿಪ್ರಾಯಕ್ಕೆಡೆಯಾಗಿರುತ್ತದೆ.ಆದ್ದರಿಂದ ಆದ್ಯಂತಗಳಿರುವುದರಿಂದ ಅವು ಮಿಥ್ಯೆಯೆಂದೇ ಎನಿಸಿಕೊಳ್ಳುತ್ತವೆ.(ಪುಟ117) 8)ಅಪೂವ೯ವಾದದ್ದು ಸ್ಥಾನಿರ ಧಮ೯ವೇ.ಸ್ವಗ೯ನಿವಾಸಿಗಳಿಗೆ ಹೇಗೆ (ಅಪೂವ೯ಧಮ೯ವಿರುತ್ತದೆಯೋ ಹಾಗೆಯೇ ಇದು).ಇಲ್ಲಿ ಸುಶಿಕ್ಷಿತನಾದವನು ಹೇಗೋ ಹಾಗೆಯೇ ಇವನು ಅವುಗಳನ್ನು (ಅಲ್ಲಿಗೆ) ಹೋಗಿ ಕಾಣುತ್ತಾನೆ.(ಪುಟ120) ೯-10)ಸ್ವಪ್ನವೃತ್ತಿಯಲ್ಲಿಯೂ ಒಳಗೆ ಚಿತ್ತದಿಂದ ಕಲ್ಪಿತವಾದರೆ ಅಸತ್ತು,ಹೊರಗೆ ಚಿತ್ತದಿಂದ ಗೃಹೀತವಾದದ್ದು ಸತ್ತು;ಇವೆರಡಕ್ಕು ವೈತಥ್ಯವು ಕಂಡಿದೆ.ಜಾಗ್ರದ್ವøತ್ತಿಯಲ್ಲಿಯೂ ಒಳಗೆ ಚಿತ್ತದಿಂದ ಕಲ್ಪಿತವಾದದ್ದು ಅಸತ್ತು.ಹೊರಗೆ ಚಿತ್ತದಿಂದ ಗೃಹೀತವಾದದ್ದು ಸತ್ತು.ಆದ್ದರಿಂದ ಇವೆರಡಕ್ಕೂ ವೈತಥ್ಯವು ಯುಕ್ತವು.(ಪುಟ122) 11)ಎರಡೂ ಸ್ಥಾನಗಳಲ್ಲಿರುವ ಭೇದಗಳು ಮಿಥ್ಯೆಯೆಂದೇ ಆದರೆ ಈ ಭೇದಗಳನ್ನು ಅರಿಯುವಾತನು ಯಾರು?ಇವುಗಳನ್ನು ವಿಕಲ್ಪಿಸುವವನು ಯಾರು?(ಪುಟ 126) 12)ದೇವನಾದ ಆತ್ಮನೇ ತನ್ನ ಮಾಯೆಯಿಂದ ತನ್ನನ್ನೇ ತಾನೇ ಕಲ್ಪಿಸುತ್ತಾನೆ.ಆತನೆ ಭೇದಗಳನ್ನು ಅರಿಯುತ್ತಾನೆ.ಹೀಗೆಂದು ವೇದಾಂತದ ನಿಶ್ಚಯವು.(ಪುಟ127) 13)ಒಳಗೆ ಚಿತ್ತದಲ್ಲಿದ್ದು ಕೊಂಡಿರುವ ಅಪರ ಭಾವಗಳನ್ನೂ ಮಾಪ೯ಡಿಸುತ್ತಾನೆ.ನಿಯತವಾದ ಭಾವಗಳನ್ನೂ ಬಹಿಶ್ಚಿತ್ತನಾಗಿ ಮಾಪ೯ಡಿಸುತ್ತಾನೆ.ಹೀಗೆ ಪ್ರಭುವು ಕಲ್ಪಿಸುತ್ತಾನೆ.(13೯) 14)ಒಳಗೆ ಯಾವುವು ಚಿತ್ತಕಾಲದ ಭಾವಗಳಾಗಿರುವವೋ ಮತ್ತೆ ಹೊರಗೆ ಯಾವವು ದ್ವಯಕಾಲವುಳ್ಳವರಾಗಿರುವವೋ ಅವೆಲ್ಲವೂ ಕಲ್ಪಿತವೇ,ಅವುಗಳ ವಿಶೇಷಕ್ಕೆ ಮತ್ತೆ ಬೇರೆ ಕಾರಣವಿರುವುದಿಲ್ಲ. 15)ಯಾವವು ಒಳಗೆ ಅವ್ಯಕ್ತವಾಗಿರುವವೋ ಮತ್ತು ಯಾವುವು ಹೊರಗೆ ಸ್ಫುಟವಾಗಿ ಇರುವವೋ,ಅವೆಲ್ಲವೂ ಕಲ್ಪಿತವೇ,ವಿಶೇಷವಾದರೂ ,ಇಂದ್ರಿಯಾಂತರದಲ್ಲಿ ಇರುತ್ತದೆ.(ಪುಟ142) 16)ಮೊದಲು ಜೀವನನ್ನು ಕಲ್ಪಿಸುತ್ತಾನೆ.ಆಮೇಲೆ ಬೇರೆ ಬೇರೆ ಪ್ರಕಾರದ ಹೊರಗಿನ ಮತ್ತು ಒಳಗಿನ ಭಾವಗಳನ್ನು ಕಲ್ಪಿಸುತ್ತಾನೆ.ಎಂತ ವಿದ್ಯೆಯುಳ್ಳವನೋ ಅಮಥ ಸ್ಮøತಿಯವನಾಗಿ ಕಲ್ಪಿಸುತ್ತಾನೆ. (ಪುಟ 143) 17-18) ಇದು ಇಂಥದೆಂದು ನಿಶ್ಚಿತವಾಗಿ ಗೊತ್ತಾಗಿಲ್ಲದ ಹಗ್ಗವು ಕತ್ತಲೆಯಲ್ಲಿ ಹಾವು,ನೀರಿನ ಕೋಡಿ-ಮುಂತಾದ ಭಾವಗಳೆಂದು ಹೇಗೆ ವಿಕಲ್ಪವಾಗುತ್ತಿರುವುದೋ ಅದರಂತೆ ಆತ್ಮನು ಬೇರೆ ಬೇರೆ ಪ್ರಕಾರಗಳಿಂದ ವಿಕಲ್ಪನಾಗಿರುತ್ತಾನೆ.ಹಗ್ಗವು ಎಂದು ವಿಕಲ್ಪವು ತೊಲಗುವುದೋ ,ಹಗ್ಗವೇ ಎಂದು ಒಂದೇ ವಸ್ತುವಾಗಿ ಬಿಡುವುದೋ ಅದರಂತೆ ಆತ್ಮನ ನಿಶ್ಚಯವು ಒಂದೇ ಎಂದಾಗಿ ಬಿಡುವುದು. (ಪುಟ146) 1೯)ಪ್ರಾಣನೇ ಮುಂತಾದ ಈ ಲೆಕ್ಖವಿಲ್ಲದಷ್ಟು ಭಾವಗಳಾಗಿ ಆತ್ಮನು ವಿಕಲ್ಪಿತನಾಗಿರುತ್ತಾನೆ.ಇದು ಆ ದೇವನ ಮಾಯೆ, ಅದರಿಂದ ತಾನೇ ಮೋಹಿತನಾಗಿರುತ್ತಾನೆ(ಪುಟ150) 20)ಪ್ರಾಣನೆಂದು ಪ್ರಾಣವನ್ನು ಬಲ್ಲವರು;ಭೂತಗಳೆಂದು ಅವನನ್ನು ಬಲ್ಲವರು;ಗುಣಗಳು ಎಂದು ಗುಣಗಳನ್ನು ಬಲ್ಲವರು;ತತ್ವಗಳು ಎಂದು ಅವನ್ನು ಬಲ್ಲವರು.(ಪುಟ353) 21)ಪಾದಗಳೆಂದು ಪಾದಗಳನ್ನು ಬಲ್ಲವರು;ವಿಷಯಗಳು ಎಂದು ವಿಷಯಗಳನ್ನು ಬಲ್ಲವರು,ಲೋಕಗಳು ಎಂದು ಲೋಕಗಳನ್ನು ಬಲ್ಲವರು ಮತ್ತು ದೇವತೆಗಳು ಎಂದು ದೇವತೆಗಳನ್ನು ಬಲ್ಲವರು.(ಪುಟ153) 22)ವೇದಗಳು ಎಂದು ವೇದಗಳನ್ನು ಬಲ್ಲವರು;ಯಜ್ಞಗಳು ಎಂದು ಯಜ್ಞಗಳನ್ನು ಬಲ್ಲವರು; ಭೋಕ್ತø ಎಂದು ಭೋಕ್ತøವನ್ನು ಬಲ್ಲವರು ,ಭೋಜ್ಯವು ಎಂದು ಅದನ್ನು ಬಲ್ಲವರು ಹೇಳುತ್ತಾರೆ.(ಪುಟ153) 23)ಸೂಕ್ಷ್ಮವೆಂದು ಸೂಕ್ಷ್ಮವನ್ನು ಬಲ್ಲವರು.ಸ್ಥೂಲವೆಂದು ಸ್ಥೂಲವನ್ನು ಬಲ್ಲವರು,ಮೂತ೯ವೆಂದು ಮೂತ೯ವನ್ನು ಬಲ್ಲವರು ಮತ್ತು ಅಮೂತ೯ವೆಂದು ಅದನ್ನು ಬಲ್ಲವರು.(ಪುಟ154) 24)ಕಾಲವೆಂದು ಕಾಲವನ್ನು ಬಲ್ಲವರು ,ದಿಕ್ಕುಗಳು ಎಂದು ಅವನ್ನು ಬಲ್ಲವರು,ವಾದಗಳು ಎಂದು ವಾದವನ್ನು ಬಲ್ಲವರು,ಭುವನಗಳು ಎಂದು ಅವುಗಳನ್ನು ಬಲ್ಲವರು.(ಪುಟ154) 25)ಮನಸ್ಸೆಂದು ಮನಸ್ಸನ್ನು ಬಲ್ಲವರು,ಬುದ್ಧಿ ಎಂದು ಅದನ್ನು ಬಲ್ಲವರು,ಚಿತ್ತವೆಂದು ಚಿತ್ತವನ್ನು ಬಲ್ಲವರು,ಧಮ೯ದಮ೯ಗಳು ಎಂದು ಅವುಗಳನ್ನು ಬಲ್ಲವರು.(ಪುಟ154) 26)ಇಪ್ಪತ್ತೈದನೆಯವನೆಂದು ಕೆಲವರು,ಇಪ್ಪತ್ತಾರನೆಯವನೆಂದು ಕೆಲವರು, ಮೂವತ್ತೊಂದನೆಯವನೆಂದು ಕೆಲವರು,ಅನಂತನು ಎಂದು ಮತ್ತೆ ಕೆಲವರು.(ಪುಟ 154) 27)ಜನರು ಎಂದು ಜನವನ್ನು ಬಲ್ಲವರು ಹೇಳುತ್ತಿದ್ದಾರೆ,ಆಶ್ರಮ ಎಂದು ಅವನ್ನು ಬಲ್ಲವರು ಹೇಳುತ್ತಿರುವರು,ಲಿಂಗವನ್ನು ಬಲ್ಲವರು ಗಂಡು,ಹೆಣ್ಣು ಅಥವಾ ನಪುಂಸಕ ಎನ್ನುತ್ತಿರುವರು.ಪರನೆಂದೂ ಅಪರನೆಂದೂ ಮತ್ತೆ ಕೆಲವರು ಹೇಳುತ್ತಿರುವರು.(154) 28)ಸೃಷ್ಟಿಯೆಂದು ಸೃಷ್ಟಿಯನ್ನು ಬಲ್ಲವರು,ಲಯವೆಂದು ಲಯವನ್ನು ಬಲ್ಲವರು,ಸ್ಥಿತಿ ಎಂದು ಸ್ಥಿತಿಯನ್ನು ಬಲ್ಲವರು ಹೆಳುತ್ತಿರುವರು,ಆದರೆ ಇವೆಲ್ಲವೂ ಯಾವಾಗಲೂ ಅಗಿರುತ್ತಾನೆ.(ಪುಟ155) 2೯-30)ಯಾವನಿಗೆ ಭಾವವನ್ನು ಗುರುವು ಗುರುವು ತೋರಿಸುತ್ತಾನೋ ಅ ಭಾವವೇ ಅವನಿಗೆ ಕಾಣಿಸುತ್ತದೆ.ಮತ್ತು ಅದು ಈ ಆತ್ಮನಗಿ ಅದನ್ನು ಕಾಪಾಡಿಕೊಳ್ಲುತ್ತದೆ.ಅದರ ಗ್ರಹಣೆಯೆ ಅವನನ್ನು ಬಂದು ಸೇರಿಕೊಳ್ಳುತ್ತದೆ.ಈ ಬೇರೆಯಲ್ಲದ ಭಾವಗಳ ರೂಪದಿಂದ ಈ ಆತ್ಮನು ಬೆರೆಯೆ ಎಂದು ಕಾಣುತ್ತಿರುವನು.ಹೀಗೆಂದು ಯಾವನು ಅರಿತುಕೊಳ್ಳುವನೋ ಅವನು ಯವ ಶಂಕೆಯೂ ಇಲ್ಲದೆ ಕಲ್ಪಿಸುವನು.(157) 31)ಸಪ್ತಮಾಯೆಗಳು ಹೇಗೆ ಕಾಣುತ್ತಿರುವವೋ, ಗಂಧವ೯ನಗರವು ಹೇಗೆ ಕಾಣುತ್ತದೆಯೋ,ಹಾಗೆಯೇ ಈ ವಿಶ್ವವು ವೇದಾಥ೯ಗಳಲ್ಲಿ ವಿಚಕ್ಷಣರಾದವರಿಗೆ ಕಂಡು ಬಂದಿರುವುದು.(15೯) 32)ನಿರೋಧವಿಲ್ಲ,ಉತ್ಪತ್ತಿಯೂ ಇಲ್ಲ,ಬದ್ಧನಿಲ್ಲ,ಸಾಧಕನೂ ಇಲ್ಲ;ಮುಕ್ತನೂ ಇಲ್ಲ.ಇಂತಿದು ಪರಮಾಥ೯ವು.(ಪುಟ160) 33)ಈ ಆತ್ಮನು ಅಸತ್ತೇ ಆಗಿರುವ ಭವಗಳ ರೂಪದಿಂದಲೂ ,ಅದ್ವಯರೂಪದಿಂದಲೂ, ಕಲ್ಪಿತನಾಗಿರುತ್ತಾನೆ.ಭವಗಳೂ ಅದ್ವಯ ರೂಪದಿಂದಲೇ ಕಲ್ಪಿತವಾಗಿರುವವು.ಆದ್ದರಿಂದ ಅದ್ವಯತ್ವವೇ ಶಿವವು. (ಪುಟ168) 34)ಇದು ಆತ್ಮರೂಪದಿಂದಲೂ ನಾನಾ ರೂಪವಾಗಿಲ್ಲ.ತನ್ನರೂಪದಿಂದಲೂ ಹೇಗೂ ಇರುವುದಿಲ್ಲ.ಯವುದೂ ಬೆರೆಯಲ್ಲ,ಬೇರೆಯಲ್ಲದೆಯು ಅಲ್ಲ.ಹೀಗೆಂದು ತತ್ವವಿದರು ತಿಳಿದಿರುತ್ತಾರೆ.(ಪುಟ 173) 35)ವೀತರಾಗ ಭಯ ಕ್ರೋಧರಾದ ,ವೇದ ಪಾರಂಗತರಾದ ಮುನಿಗಳು ನಿವಿ೯ಕಲ್ಪನೂ ಪ್ರಪಂಚೋಪಶಮನೂ ಅದ್ವಯನೂ ಆದ ಈ ಆತ್ಮನನ್ನು ಕಂಡಿರುವರು.(ಪುಟ175) 36)ಆದ್ದರಿಂದ ಹೀಗೆಂದು ಅರಿತುಕೊಂಡು ಅದ್ವೈತದಲ್ಲಿ ಸ್ಮøತಿಯನ್ನು ಯೋಜನೆ ಮಾಡಿಕೊಳ್ಳಬೇಕು. ಅದ್ವೈತವನ್ನು ಪಡೆದುಕೊಂಡು ಜಡನಂತೆ ಲೋಕವ್ಯವಹಾರವನ್ನು ಮಾಡಬೇಕು.(ಪುಟ 176) 37)ಯತಿಯಾದವನು ಸ್ತೋತ್ರಮಡುವುದಿಲ್ಲದೆ,ನಮಸ್ಕಾರಮಾಡುವುದಿಲ್ಲದೆ,ಸ್ವಧಾಕಾರವಿಲ್ಲದೆ ಚಲಾಚಲನಿಕೇತನೂ ಆಗಿ ಯಾದೃಚ್ಛಿಕನಾಗಿರಬೇಕು.(ಪುಟ180) 38)ಒಳಗಿರುವುದನ್ನು ತತ್ವವೆಂದರಿತುಕೊಂಡು,ಹೊರಗಿರುವುದನ್ನು ತತ್ವವೆಂದರಿತುಕೊಂಡು ,ತತ್ವವೇ ತಾನಾಗಿ ಅದರಲ್ಲಿ ಪೂಣ೯ರತನಾಗಿದ್ದುಕೊಂಡು ತತ್ವದಿಂದ ಜಾರಿಬೀಳದೇ ಇರಬೇಕು.(ಪುಟ38) .......................................................................................................................... 3)ಅದ್ವೈತ ಪ್ರಕರಣ: 1-2)ಉಪಾಸನೆಯನ್ನಾಶ್ರಯಿಸಿರುವ ಧಮ೯ನು ಉತ್ಪತ್ತಿಗೆ ಮೊದಲು ಎಲ್ಲವೂ ಅಜವು ಎಂಬ ಜಾತ ಬ್ರಹ್ಮದಲ್ಲಿ ಇದ್ದುಕೊಂಡಿರುತ್ತಾನೆ.ಅದರಿಂದ ಅವನು ಕೃಪಣನೆನಿಸುವನು.ಆದ್ದರಿಂದ ಅಕಾಪ೯ಣ್ಯವಾದ ,ಹುಟ್ಟಿಲ್ಲದ ಸಮತೆಯನ್ನು ಹೊಂದಿರುವ, ಬ್ರಹ್ಮವು ಎಲ್ಲೆಲ್ಲಿಯೂ ಹುಟ್ಟುತ್ತಿದ್ದರೂ ಸ್ಬಲ್ಪವೂ ಹುಟ್ಟುವುದಿಲ್ಲ ವೆಂಬುದು ಹೇಗೆಂಬುದನ್ನು ಹೇಳುವೆನು.(ಪುಟ 1೯೯) 3)ಆತ್ಮನು -ಆಕಾಶವು ಘಟಾಕಾಶಗಳ ರೂಪದಿಂದ ಹುಟ್ಟುವಹಾಗೆ-ಜೀವರುಗಳ ರೂಪದಿಂದಲೂ,ಆಕಾಶವು ಘಟಾದಿಗಳ ರೂಪದಿಂದ ಹುಟ್ಟುತ್ತಿರುವಂತೆ -ಸಂಘಾತಗಳ ರೂಪದಿಂದಲೂ ಹುಟ್ಟುತ್ತಿರುವನು.ಹುಟ್ಟಿಗೆ ಇದು ನಿದಶ೯ನವು.(ಪುಟ204) 4-5)ಗಡಿಗೆಯೇ ಮುಂತಾದವುಗಳು ನಾಶವಾದರೆ ಹೇಗೆ ಆಕಾಶದಲ್ಲಿ ಅಡಗುವವೋ ಅದರಂತೆ ಇಲ್ಲಿ ಜೀವರು ಆತ್ಮನಂತೆ ಅಡಗುವರು.ಹೇಗೆ ಒಂದು ಘಟಾಕಾಶವು ಧೂಳು ಮುಂತಾದವುಗಳಿಂದ ಕೂಡಿದ್ದರೆ ಎಲ್ಲಾ (ಘಟಾಕಾಶಗಳೂ ಅವುಗಳೊಡನೆ)ಸೇರುವುದಿಲ್ಲವೋ ಅದರಂತೆ ಜೀವರು ಸುಖಾದಿ ಗಳೊಡನೆ(ಎಲ್ಲವೂ ಸೇರುವುದಿಲ್ಲ).(ಪುಟ206) 6)ಮತ್ತು ರೂಪ,ಕಾಯ೯,ಹೆಸರು -ಇವುಗಳು ಹೇಗೆ ಅಲ್ಲಲ್ಲಿ ಬೇರೆಬೇರೆಯಾಗಿರುವವೋ ಆಕಾಶಕ್ಕೆ ಮಾತ್ರ ಹೇಗೆ ಭೇದವಿರುವುದಿಲ್ಲವೋ ಅದರಂತೆ ಜೀವರುಗಳ ವಿಷಯದಲ್ಲಿಯೂ ನಿಣ೯ಯವು.(ಪುಟ 211) 7)ಹೇಗೆ ಆಕಾಶಕ್ಕೆ ಘಟಾಕಾಶವು ವಿಕಾರವೂ ಅಲ್ಲವೋ ಹಾಗೆಯೇ ಅವಯವವೂ ಅಲ್ಲವೋ ಹಾಗೆಯೇ ಪರಮಾತ್ಮನಿಗೆ ಜೀವನು ವಿಕಾರವೂ ಅಲ್ಲ,ಅವಯವವೂ ಅಲ್ಲ.(ಪುಟ212) 8)ಹೇಗೆ ಆಕಾಶವು ಬಾಲರಿಗೆ ಮಲಗಳಿಂದ ಮಲಿನವಾಗಿರುವುದೋ ಹಾಗೆ ಅಬುದ್ಧರಿಗೆ ಆತ್ಮನೂ ಮಲಗಳಿಂದ ಮಲಿನನಾಗಿರುತ್ತಾನೆ.(ಪುಟ 214) ೯)ಸಾಯುವಲ್ಲಿಯೂ ಹುಟ್ಟುವಲ್ಲಿಯೂ ಹೋಗುವಿಕೆ ಬರುವಿಕೆಗಳಲ್ಲಿಯೂ ನಿಂತಿರುವುದರಲ್ಲಿಯೂ ಎಲ್ಲಾ ಶರೀರಗಳಲ್ಲಿಯೂ ಜೀವನು ಆಕಾಶಕ್ಕಿಂತ ವಿಲಕ್ಷಣನಲ್ಲದೆ ಇರುತ್ತಾನೆ.(ಪುಟ215) 10)ಸಂಘಾತಗಳು ಕನಸಿನಂತೆ ಆತ್ಮಮಾಯೆಯಿಂದ ಸೃಷ್ಟಿಯಾಗಿರುತ್ತವೆ.ಅವು ಕೆಲವು ಮಿಕ್ಕವುಗಳಿಗಿಂತ ಹೆಚ್ಚೆಂದಾಗಲೀ,ಎಲ್ಲವೂ ಒಂದಕ್ಕೊದು ಸಮವೆಂದಾಗಲೀ ಹೆಳುವುದಕ್ಕೆ ಯುಕ್ತಿಯಿರುವುದೇ ಇಲ್ಲ.(ಪುಟ 216) 11) ರಸವೇ ಮುಂತಾದ ಕೋಶಗಳನ್ನು ತೈತ್ತಿರೀಯದಲ್ಲಿ ವಿವರಿಸಿದೆಯಷ್ಟೇ?ಅವುಗಳಿಗೆ ಆತ್ಮನಾದ ಪರಜೀವನನ್ನೆ ಆಕಾಶದಂತೆ ಎಂದು ನಾವು ತೋರಿಸಿಕೊಟ್ಟಿರುವುದು.(ಪುಟ221) 12)ಆಕಾಶವನ್ನು ನಾವು ತಿಳಿಸಿರುವಂತೆಯೇ ಮಧುಜ್ಞಾನದಲ್ಲಿ ಪೃಥ್ವಿಯಲ್ಲಿಯೂ ಉದರದಲ್ಲಿಯೂ -ಎಂದು ಎರಡೆರಡಾಗಿ ಪರಬ್ರಹ್ಮವನ್ನುತಿಳಿಸಿರುತ್ತದೆ.(ಪುಟ225) 13)ಜೀವಾತ್ಮರುಗಳಿಗೆ ಅಭೇದವಿರುವುದರಿಂದ ಅವರು ಬೇರೆ ಬೇರೆ ಎಂಬುದನ್ನು ನಿಂದಿಸಿರುವುದು ಹೀಗಾದರೇ ಸಮಂಜಸವಾಗುತ್ತದೆ.(ಪುಟ 225) 14)ಉತ್ಪತ್ತಿಗಿಂತ ಮೊದಲು ಜೀವಾತ್ಮರುಗಳಿಗೆ ಪೃಥಕ್ತ್ವವನ್ನು ಹೇಳಿದೆಯಷ್ಟೆ?ಅದು ಭವಿಷದ್ವøತ್ತಿಯಿಂದ ಗೌಣವಾಗಿ ಹೇಳಿದ್ದು.ಏಕೆಂದರೆ ಮುಖ್ಯತ್ವವು ಯುಕ್ತವಾಗಿರುವುದಿಲ್ಲ.(ಪುಟ 227) 15)ಮಣ್ಣು,ಕಬ್ಬಿಣ,ಕಿಡಿ-ಮುಂತಾದ ದೃಷ್ಟಾಂತಗಳಿಂದ ಬೇರೆ ಬೇರೆ ಪ್ರಕಾರದ ಸೃಷ್ಟಿಯನ್ನು ಹೇಳಿದೆಯಷ್ಟೆ?ಅದು ತತ್ವಜ್ಞಾನಕ್ಕೆ ಬುದ್ಧಿಯನ್ನು ತಂದಿಳಿಸುವ ಉಪಾಯವೇ,ಹೇಗೂ ಭೇದವಿರುವುದಿಲ್ಲ.(ಪುಟ230) 16)ಹೀನ,ಮಧ್ಯಮ,ಉತ್ಕøಷ್ಟ-ಎಂದು ಬೇರೆ ಬೇರೆ ದೃಷ್ಟಿಯುಳ್ಳ ಆಶ್ರಮಿಗಳು ಮೂರು ಬಗೆ.ಈ ಉಪಾಸನೆಯು ಅವರಿಗೋಸ್ಕರ ಕನಿಕರದಿಂದ ಉಪದಿಷ್ಟವಾಗಿರುತ್ತದೆ.(ಪುಟ23೯) 17)ತಮ್ಮ ತಮ್ಮ ಸಿದ್ಧಾಂತಗಳ ವ್ಯವಸ್ಥೆಯಲ್ಲಿ ದ್ವೈತಿಗಳು ನಿಶ್ಚಯವನ್ನು ಮಾಡಿಕೊಂಡಿವುದುದರಿಂದ ಒಬ್ಬರಿಗೊಬ್ಬರು ವಿರುದ್ಧವಾಗಿರುತ್ತಾರೆ.ಇದು ಅವರಿಗೆ ವಿರುದ್ಧವಾಗಿರುವುದಿಲ್ಲ.(ಪುಟ245) 18)ಏಕೆಂದರೆ ಅದ್ವೈತವು ಪರಮಾಥ೯ವು;ದ್ವೈತವು ಅದರ ಭೇದವೆನಿಸಿರುತ್ತದೆ.ವರಿಗೆ ಎರಡು ಪ್ರಕಾರದಿಂದಲೂ ದ್ವೈತವೇ247) 1೯)ಇದು ಮಾಯೆಯಿಂದಲೇ ಭಿನ್ನವಾಗಿರುತ್ತದೆ. ಇನ್ನು ಬೇರೆ ಯಾವಪ್ರಕಾರದಿಂದಲೂ ಅಜವಾದದ್ದು ಭಿನ್ನವಾಗಲಾರದು.(ಪುಟ251) 20)ಅಜಾತವೇ ಆದ ವಸ್ತುವಿಗೆ ವಾದಿಗಳು ಜನ್ಮವನ್ನು ಒಪ್ಪಿರುತ್ತಾರೆ.ಅಜಾತವೂ ಅಮೃತವೂ ಆದ ವಸ್ತುವು ಹೇಗೆ ತಾನೇ ಮತೃ೯ತ್ವವನ್ನು ಹೊಂದೀತು?(ಪುಟ253) 21-22)ಅಮೃತವಾದದ್ದು ಮತ್ಯ೯ವಾಗಲಾರದು.ಮತ್ಯ೯ವಾದದ್ದು ಅಮೃತವೂ ಆಗಲಾರದು.ಏಕೆಂದರೆ ಸ್ವಭಾವವು ಬೇರೊಂದು ತೆರವಾಗುವುದೆಂಬುದು ಹೇಗೂ ಆಗಲಾರದು.ಸ್ವಭಾವದಿಂದಲೇ ಅಮೃತವಾಗಿರುವ ಭಾವವು ಮತ್ಯ೯ವಾಗುವುದೆಂದು ಯಾವ ವಾದಿಯ ಮತವಿರುವುದೋ ಆ ವಾದಿಯ ಮತದಲ್ಲಿ ಅಮೃತವಾಗಿರುವುದೆಂಬುದು ಕೃತಕವಾಗಿರುವುದರಿಂದ ಅದು ತಾನು ಇದ್ದಂತೆಯೇ ಇರುವುದೆಂಬುದು ಹೇಗೆ ಆದೀತು?(ಪುಟ 258) 23)ಸೃಷ್ಟಿಯು ನಿಜವಾಗಿರಲಿ,ಹುಸಿಯಾಗಿರಲಿ-ಶ್ರುತಿಯು ಎರಡಕ್ಕೂ ಸಮನಾಗಿರುತ್ತದೆ.ಆದ್ದರಿಂದ ಯಾವುದು ನಿಶ್ಚಿತವಾಗಿಯೂ ಯುಕ್ತಿಯುಕ್ತವಾಗಿಯೂ ಇರುವುದೋ ಅದೇ ಶ್ರುತ್ಯಥ೯ವಾದೀತೇ ಹೊರತು ಮತ್ತೊಂದಾಗದು.(ಪುಟ262) 24) ಇಲ್ಲಿ ನಾನಾತ್ವವಿಲ್ಲ' ಎಂದು ಶ್ರುತಿಯಿರುವುದರಿಂದಲೂ 'ಇಂದ್ರನು ಮಾಯೆಗಳಿಂದ'(ಬಹುವಿಧವಾಗಿ ತೋರುತ್ತಾನೆ) ಎಂದಿರುವುದರಿಂದಲೂ 'ಹುಟ್ಟದೆ ಇರುವವನಾದರೂ ಬಹು ಪ್ರಕಾರವಾಗಿ ಅವನು ಹುಟ್ಟುತ್ತಾನೆ(ಎಂದಿರುವುದರಿಂದಲೂ ಇದೇ ಶ್ರುತ್ಯಥ೯) 25)ಸಂಭೂತ್ಯುಪಾಸನೆಯನ್ನು ಶ್ರುತಿಯು ನಿಂದಿಸುತ್ತಿರುವುದರಿಂದ ಹುಟ್ಟುವಿಕೆಯನ್ನು ಅಲ್ಲಗಳೆದಂತಾಯಿತು.'ಇವನನ್ನು ಮತ್ತೆ ಯಾರು ಉಂಟುಮಾಡುವವನು'ಎಂಬುದರಿಂದ ಕಾರಣವನ್ನು ಅಲ್ಲಗಳೆದಂತಾಯಿತು.270) 26)"ಆ ಇವನು ನೇತಿ ನೇತಿ(ಎಂಬ ಆತ್ಮನು)" ಎಂದು ಮೊದಲು ಹೇಳಿದ್ದನ್ನೆಲ್ಲ ಅದು ಅಗ್ರಾಹ್ಯವೆಂಬ ಕಾರಣದಿಂದ ಅಲ್ಲಗಳೆಯುತ್ತದೆ. ಆಗ ಅಜತತ್ವವು ತಾನೇ ಬೆಳಗುತ್ತದೆ.(ಪುಟ375) 27) ಸತ್ತಿಗೆ(ಇರುವುದಕ್ಕೆ) ಮಾಯೆಯಿಂದ ಜನ್ಮವೆಂಬುದು ಯುಕ್ತವಾಗಿರುತ್ತದೆ.ಆದರೆ ನಿಜವಾಗಿಯೂ ಅದಕ್ಕೆ ಜನ್ಮ ಎಂಬುದು ಯುಕ್ತವಾಗಲಾರದು. ಯಾವನ ಮತದಲ್ಲಿ ನಿಜವಾಗಿಯೂ ಹುಟ್ಟುವುದೇ ಹುಟ್ಟುತ್ತದೆಯೋ ಅವನ ಮತದಲ್ಲಿ ಹುಟ್ಟಿದ್ದೇ ಹುಟ್ಟುವುದೆಂಬಂತೆ ಆಗುತ್ತದೆ.(ಪುಟ284) 28) ಅಸತ್ತಿಗೆ (ತಾನೇ ಇಲ್ಲದಿರುವುದಕ್ಕೆ) ಮಾಯೆಯಿಂದಲಾಗಲೀ ,ನಿಜವಾಗಿಯಾಗಲೀ ಹುಟ್ಟುವುದೆಂಬುದು ಸಲ್ಲುವುದಿಲ್ಲ.ಬಂಜೆಯಮಗನು ನಿಜವಾಗಿಯಾಗಲಿ,ಮಾಯೆಯಿಂದಲಾಗಲಿ ಹುಟ್ಟಬಾರದಷ್ಟೆ?(ಪುಟ288) 2೯-30)ಹೇಗೆ ಸ್ವಪ್ನದಲ್ಲಿ ದ್ವಯದ ಆಕಾರದಲ್ಲಿ ಮನಸ್ಸು ಮಾಯೆಯಿಂದ ಅಲುಗಾಡುವುದೋ,ಹಾಗೆಯೇ ಎಚ್ಚರದಲ್ಲಿಯೂ ಮಾಯೆಯಿಂದಲೇ ಮನಸ್ಸು ಅಲುಗಾಡುವುದು.ಸ್ವಪ್ನದಲ್ಲಿ ಮನಸ್ಸು ಅದ್ವಯವೇ ಆಗಿದ್ದು ದ್ವಯದಂತೆ ತೋರುವುದೆಂಬುದರಲ್ಲಿ ಸಂಶಯವಿಲ್ಲ; ಹಾಗೆಯೇ ಎಚ್ಚರದಲ್ಲಿಯೂ ಮನಸ್ಸು ಅದ್ವಯವೇ ಆಗಿದ್ದು ದ್ವಯದಂತೆ ತೋರುವುದು.ಇದರಲ್ಲಿ ಸಂಶಯವಿಲ್ಲ.(ಪುಟ2೯2) 31)ಈ ಚರಾಚರತ್ಮಕವಾದ ದ್ವೈತವೆಲ್ಲವೂ ಮನೋದೃಶ್ಯವಾಗಿರುತ್ತದೆ.ಏಕೆಂದರೆ ಮನಸ್ಸು ಅಮನೀಭಾವವನ್ನು ಹೊಂದಿದರೆ ದ್ವೈತವು ತೋರುವುದೇ ಇಲ್ಲ.(ಪುಟ 2೯3) (ದ್ವೈತವೆಂಬುದು ಹಗ್ಗದ ಹಾವಿನಂತೆ ತೋರುವ ಮನೋವಿಕಲ್ಪ ಮಾತ್ರವೇ ) 32)ಆತ್ಮ ಚಸತ್ಯಾನು ಬೋಧದಿಂದ ಯಾವಗ ಸಂಕಲ್ಪಿಸದಿರುವುದೋ ಆಗ ಮನಸ್ಸು ಅಮನಸ್ಸಾಗುವುದು.ಏಕೆಂದರೆ ಗ್ರಾಹ್ಯವಿಲ್ಲದ್ದರಿಂದ ಅದು ಏನನ್ನೂ ಗ್ರಹಿಸುವುದಿಲ್ಲ.(ಪುಟ2೯4) 33)ಅಕಲ್ಪಕವೂ ಅಜವೂ ಆದ್ದರಿಂದ ಆತ್ಮಜ್ಞಾನವು ಜ್ಞೇಯಕ್ಕಿಂತ ಬೇರೆಯಾಗಿರುತ್ತದೆ.ಅದಕ್ಕೆ ಬ್ರಹ್ಮವೇ ಜ್ಞೇಯವು.ಅದು ಅಜವು ನಿತ್ಯವು;ಅಜವಾದ ಜ್ಞಾನದಿಂದಲೇ ಅಜವಾದ ಜ್ಞಾನವನ್ನು ಅರಿತುಕೊಳ್ಳುತ್ತಾನೆ. (ಪುಟ2೯6) 34)ವಿವೇಕ ಜ್ಞಾನವುಳ್ಳಾತನ ನಿರುದ್ಧವಾದ ನಿವಿ೯ಕಲ್ಪವಾದ ಮನಸ್ಸಿನ ಪ್ರಚಾರವನ್ನು ಅರಿತುಕೊಳ್ಳಬೇಕು.ಸುಷುಪ್ತಿಯಲ್ಲಿರುವ ಪ್ರಚಾರವು ಬೇರೆ,ಅದಕ್ಕೆ ಸಮನಲ್ಲ.(ಪುಟ2೯8) 35)ಏಕೆಂದರೆ ಸುಷುಪ್ತಿಯಲ್ಲಿ ಮನಸ್ಸು ಲಯವಾಗುತ್ತದೆ.ಅದನ್ನೇ ಆತ್ಮಜ್ಞಾನದಿಂದ ನಿಗ್ರಹ ಮಾಡಿಕೊಂಡರೆ ಲಯವಾಗುವುದಿಲ್ಲ.ಅದೇ ನಿಭ೯ಯವಾದ ಬ್ರಹ್ಮವು.,ಎಲ್ಲೆಲ್ಲಿಯೂ ತೋರುವ ಜ್ಞಾನದ ಬೆಳಕು.(ಪುಟ302) 36)ಇದು ಅಜವು,ಅನಿದ್ರವು,ಅಸ್ವಪ್ನವು,ನಾಮರಹಿತವಾದದ್ದು,ರೂಪರಹಿತವಾದದ್ದು,ಎಂದೆಂದಿಗೂ ಬೆಳಗತಕ್ಕದ್ದು ಸವ೯ಜ್ಞವು,ಹೇಗೂ ಉಪಚಾರವೆಂಬುದೇ ಇಲ್ಲ.(ಪುಟ305) 37) ಯಾ ವಾಕ್ಕೂ ಇಲ್ಲದವನು,ಎಲ್ಲಾ ಚಿಂತೆಗಳನ್ನೂ ಬಿಟ್ಟೆದ್ದಿರುವವನು,ಸುಪ್ರಶಾಂತನು,ಸಕೃಜ್ಜ್ಯೋತಿಯು,ಸಮಾಧಿಯು,ಅಚಲನು,ಅಭಯನು(ಪುಟ308) 38)ಎಲ್ಲಿ ಚಿಂತೆಯೇ ಇರುವುದಿಲ್ಲವೋ, ಅಲ್ಲಿಗ್ರಹಣವಿರುವುದಿಲ್ಲ,ಉತ್ಸಗ೯ವೂ ಇರುವುದಿಲ್ಲ.ಆಗ ಜ್ಞಾನವು ಆತ್ಮನಲ್ಲಿ ನಿಂತು ಬಿಟ್ಟಿರುತ್ತದೆ. ಅಜಾತಿಯಾಗಿ ಸಮತೆಯನ್ನು ಹೊಂದಿರುತ್ತದೆ.(ಪುಟ310) 3೯)ಇದು ಅಸ್ಪಶ೯ಯೋಗವೆಂದು ಪ್ರಸಿದ್ಧವಾಗಿರುತ್ತದೆ.ಇದು ಯಾವ ಯೋಗಿಗಳಿಗೂ ಕಾಣತಕ್ಕದ್ದಲ್ಲ.ಇದು ಅಭಯವಾಗಿದ್ದರೂ ಯೋಗಿಗಳು ಭಯವನ್ನು ಕಾಣುತ್ತಾ ಇದಕ್ಕೆ ಅಂಜುತ್ತಾರೆ.(ಪುಟ312) 40)ಯೋಗಿಗಳಿಗೆಲ್ಲ ಮನಸ್ಸಿನ ನಿಗ್ರಹದಿಂದಲೇ ಅಭಯವೂ ದುಃಖಕ್ಷಯವೂ ಜ್ಞಾನವೂ ಅಕ್ಷಯವಾದ ಶಾಂತಿಯೂ ಉಂಟಾಗುವುದು.(ಪುಟ314) 41)ಸಮುದ್ರವನ್ನು ಕುಶಾಗ್ರದಿಂದ ಒಂದೊಂದು ತೊಟ್ಟಾಗಿ ಎತ್ತಿಹಾಕುವುದು ಹೇಗೋ ಅದರಂತೆ ಬೇಸರವಿಲ್ಲದೆ ಮನಸ್ಸಿನ ನಿಗ್ರಹವಾಗುವುದು(ಪುಟ 317) 42)ಕಾಮಭೋಗಗಳಲ್ಲಿ ಚದರಿರುವ ಚಿತ್ತವನ್ನು ಬಿಗಿ ಹಿಡಿದುಕೊಳ್ಳಬೇಕು.ಲಯವಾಗಿ ಸುಪ್ರಸನ್ನವಾದರೆ ಅದನ್ನು ನಿಗ್ರಹಿಸಿಕೊಳ್ಳಬೇಕು.ಕಾಮವು ಹೇಗೋ ಹಾಗೆಯೇ ಲಯವೂ ಅಡ್ಡಿ(ಪುಟ317) 43)ಎಲ್ಲವೂ ದುಃಖವೇ ಎಂಬುದನ್ನು ಮನದಂದುಕೊಂಡು ಕಾಮಭೋಗದಿಂದ ಹಿಂತಿರುಗಿಸಿಕೊಳ್ಳಬೇಕು.ಎಲ್ಲವೂ ಅಜನೇ ಎಂದು ಮನದಂದುಕೊಂಡರೆ ಹುಟ್ಟಿದ್ದೇ ಕಾಣುವುದಿಲ್ಲ.(ಪುಟ318) 44)ಲಯವಾದರೆ ಚಿತ್ತವನ್ನು ಎಚ್ಚರಗೊಳಿಸಿಕೊಳ್ಳಬೇಕು.ವಿಕ್ಷೇಪವಾದರೆ ಮತ್ತೆ ಚಿತ್ತವನ್ನು ವಶಪಡಿಸಿಕೊಳ್ಳಬೇಕು.ಕಷಾಯಯುಕ್ತವಾದದ್ದನ್ನು ಅರಿತುಕೊಳ್ಳಬೇಕು.ಸಮಪ್ರಾಪ್ತಿಯಾದರೆ ಅಲುಗಾಡಿಸಬಾರದು.(ಪುಟ31೯) 45)ಅಲ್ಲಿ ದೊರಕುವ ಸವಿಯನ್ನು ಸವಿಯಬಾರದು.ಅದರಲ್ಲಿ ಸಂಗವಿಲ್ಲದೆ ಪ್ರಜ್ಞೆಯಿಂದೊಡಗೂಡಿರಬೇಕು.ನಿಶ್ಚಲವಾದ ಚಿತ್ತವು ಹೊರಕ್ಕೆ ಹೊರಟರೆ ಪ್ರಯತ್ನಪೂವ೯ಕವಾಗಿ ಒಂದುಗೂಡಿಸಬೇಕು.(ಪುಟ 321) 46)ಯಾವಾಗ ಚಿತ್ತವು ಲಯವಾಗದೆ ಇರುವದೋ ಮತ್ತೆ ವಿಕ್ಷಿಪ್ತವಾಗದೆಯೇ ಇರುವುದೋ,ಅಲುಗಾಡದೆ,ಅಭಾಸವೂ ಇಲ್ಲದೆ ಇರುವುದೋ ಆಗ ಬ್ರಹ್ಮವಾಯಿತು.(ಪುಟ 322) 47)ಇದು ಸ್ವಸ್ಥವು,ಶಾಂತವು,ಸನಿವಾ೯ಣವು,ಹೀಗೆಂದು ನಿಶ್ಚಯಿಸಿ ಹೇಳಲಾಗದ ಉತ್ತಮ ಸುಖವು,ಅಜವು,ಅಜವಾದ ಜ್ಞೇಯಕ್ಕಿಂತ ಅಭಿನ್ನವಾದದ್ದು,ಸವ೯ಜ್ಞವು-ಎಂದು ಹೇಳಲ್ಪಡುತ್ತದೆ.(ಪುಟ324) 48)ಯಾವ ಜೀವವೂ ಹುಟ್ಟುವುದಿಲ್ಲ,ಅವನಿಗೆ ಸಂಭವವೆ ಇರುವುದಿಲ್ಲ,ಯಾವುದರಲ್ಲಿ ಒಂದಿಷ್ಟೂ ಹುಟ್ಟುವುದಿಲ್ಲವೋ,ಅದೇ ಉತ್ತಮ ಸತ್ಯವು.(ಪುಟ325) ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, 4)ಅಲಾತ ಶಾಂತಿ ಪ್ರಕರಣ: ಮಂಗಲಾಚರಣೆ: 1)ಆಕಾಶದಂತಿರುವ ಜ್ಞೇಯಾ ಬಿನ್ನವಾದ ಜ್ಞಾನದಿಂದ ಆಕಾಶದಂತಿರುವ ಧಮ೯ರುಗಳನ್ನು(ಎಂದರೆ ಪರಮತ್ಮನನು) ಯಾವನು ಅರಿತುಕೊಂಡಿರುವನೋ ಆ ಪುರುಷಶ್ರೇಷ್ಠನನ್ನು ವಂದಿಸುತ್ತೇನೆ. (ಪುಟ 332) 2)ಅಸ್ಪಶ೯ಯೋಗವೆಂಬ ಹೆಸರಿನ,ಸವ೯ಪ್ರಾಣಿಗಳಿಗೂ ಸುಖವಾಗಿಯೂ ಹಿತವಾಗಿಯೂ ಇರುವ,ವಿವಾದವಿಲ್ಲದ,ವಿರುದ್ಧವಲ್ಲದ-ಯಾವ ದಶ೯ನವು ಶಾಸ್ತ್ರದಲ್ಲಿ ಉಪದಿಷ್ಟವಾಗಿರುತ್ತದೆಯೋ ಅದನ್ನು ನಮಸ್ಕರಿಸುತ್ತೇನೆ.(ಪುಟ336) 3-4)ಇರುವುದಕ್ಕೆ ಜನ್ಮವುಂಟೆಂದುಕೆಲವರು ವದಿಗಳು ಮತ್ರವೇ ಒಪ್ಪುತ್ತಾರೆ.ಇಲ್ಲದ್ದಕ್ಕೆ ಜನ್ಮವುಂಟೆಂದು ಇನ್ನು ಕೆಲವು ಧೀರರು ಒಪ್ಪುತ್ತಾರೆ.ಇರುವ ವಸ್ತು ಯಾವುದೂ ಹುಟ್ಟುವುದಿಲ್ಲ,ಇಲ್ಲದೆ ಇರುವ ವಸ್ತುವು ಹುಟ್ಟುವುದೆ ಇಲ್ಲ.ಹೀಗೆ ಒಬ್ಬರೊಡನೊಬ್ಬರು ವಿವಾದ ಮಾಡುತ್ತಿರುವ ಆದ್ವೈತಿಗಳು ಅಜಾತಿಯನ್ನು ವ್ಯಾಖ್ಯಾನ ಮಾಡುತ್ತಿರುವರು.(ಪುತ 340) 5)ಅವರು ಹೊರಪಡಿಸುವ ಅಜಾತಿಯನ್ನು ನಾವೂ ಅನುಮೋದಿಸುತ್ತೇವೆಯೇ ಹೊರತು ಅವರೊಡನೆ ವಿವಾದವನ್ನೇನೂ ಮಾಡುತ್ತಿಲ್ಲ.ಹೀಗೆ ನಮ್ಮ ಪಕ್ಷದಲ್ಲಿ ಅವಿವಾದವಿದೆ ಎಂಬುದನ್ನು ತಿಳಿದುಕೊಳ್ಳಿರಿ.(ಪುಟ342) 6-7-8)ವಾದಿಗಳು ಅಜಾತವದ ವಸ್ತುವಿಗೇ ಜನ್ಮವನ್ನು ಒಪ್ಪುತ್ತಿರುತ್ತಾರೆ.ಅಜಾತವೂ ಅಮೃತವೂ ಆಗಿರುವ ಧಮ೯ವು ಹೇಗೆ ಮತ್ಯ೯ತ್ವವನ್ನು ಹೊಂದೀತು?ಅಮೃತವಾದದ್ದು ಮತ್ಯ೯ವಾಗಲಾರದು.ಹಾಗೆಯೇ ಮತ್ಯ೯ವಾದದ್ದು ಅಮೃತವಾಗಲರದು;ಸ್ವಭಾವವು ಬೇರೆಯಾಗುವುದೆಂಬುದು ಎಂದಿಗೂ ಆಗಲಾರದು.ಅಮೃತವಾದ ವಸ್ತುವು ಯಾವನ ಮತದಲ್ಲಿ ಮತ್ಯ೯ವಾಗುತ್ತದೆಯೋ ಅವನ ಮತದಲ್ಲಿ ಕೃತಕವಾಗಿ ಅಮೃತವಾಗಿರುವ ಅದು ಹೇಗೆ ತಾನೇ ನಿಶ್ಚಲವಾಗಿ ಉಳಿದುಕೊಂಡೀತು ?(ಪುಟ343) ೯)ಸಾಂಸಿದ್ಧಿಕ,ಸ್ವಾಭಾವಿಕ,ಸಹಜ,ಅಕೃತ-ಎಂಬುವು ಪ್ರಕೃತಿಯೆನಿಸುವುವು.ಆ ಪ್ರಕೃತಿಯು ಸ್ವಭಾವವನ್ನು ಎಂದಿಗೂ ಬಿಡುವುದಿಲ್ಲ.(ಪುಟ344) 10)ಎಲ್ಲ ಧಮ೯ರೂ ಸ್ವಭಾವದಿಂದಲೇ ಜರಾಮರಣ ರಹಿತರಾಗಿರುತ್ತಾರೆ.ಜರಮರಣವನ್ನು ಒಪ್ಪಿಕೊಂಡು ಅದೇ ಭಾವನೆಯಿಂದ ಚ್ಯುತರಾಗುತ್ತಿರುವರು.(ಪುಟ347) 11)ಯಾವನಮತದಲ್ಲಿ ಕಾರಣವೇ ಕಾಯ೯ವೋ,ಅವನ ಮತದಲ್ಲಿ ಕಾರಣವೇ ಹುಟ್ಟುತ್ತದೆ.ಹುಟ್ಟುವುದು ಹೇಗೆ ಅಜವಾದೀತು?ಭಿನ್ನವಾದರೆ ಅದು ನಿತ್ಯವಾದದ್ದೆಂದಾದರೂ ಹೇಗೆ? 12)ಕಾರಣಕ್ಕಿಂತ ಅನನ್ಯವಾಗಿರುವುದು ಅಜವು ಎನ್ನುವುದಾದರೆ ಹುಟ್ಟು ಕಾಯ೯ರೂಪದಿಂದ ಕಾರಣವು ಹೇಗೆತಾನೇ ದ್ರುವವಾದೀತು?(ಪುಟ351) 13)ಅಜದಿಂದ ಕಾಯ೯ವು ಯಾವನ ಮತದಲ್ಲಿ ಹುಟ್ಟುತ್ತದೆಯೋ ಅವನಿಗೆ ದೃಷ್ಟಾಂತವು ಇರುವುದಿಲ್ಲ.ಹುಟ್ಟುವದರಿಂದ ಅದು ಹುಟ್ಟುವುದಾದರೆ ವ್ಯವಸ್ಥೆಯಿಲ್ಲವೆಂದೇ ಆಗುತ್ತದೆ.(ಪುಟ353) 14)ಯಾವ ಹೇತುವಿಗೆ ಫಲವು ಆದಿಯೆಂದು ಒಪ್ಪಿರುವರೋ ಫಲಕ್ಕೂ ಹೇತುವು ಆದಿಯೆಂದು ಒಪ್ಪಿರುವರೋ ಅವರು ಹೇತುವಿಗೂ ಫಲಕ್ಕೂ ಅನಾದಿತ್ವವನ್ನು ಹೇಳುವುದು ಹೇಗೆ ಸರಿಯಾದೀತು?(ಪುಟ355) 15)ಹೇತುವಿಗೆ ಆದಿಯು ಫಲವೆಂದೂ ಹೇತುವು ಫಲಕ್ಕೆ ಆದಿಯೆಂದೂ ಯಾರಮತವಿರುವುದೋ ಅವರಿಗೆ ಪುತ್ರನಿಂದ ಪಿತೃವಿಗೆ ಜನ್ಮವೆಂಬುದು ಹೇಗೋ ಹಾಗೆ ಜನ್ಮವೆಂಬುದು ಯುಕ್ತವಾದೀತು.(ಪುಟ357) 16)ಹೇತು ಫಲಗಳಗಿಗೆ ಉತ್ಪತ್ತಿಯಾಗುವಲ್ಲಿ ನೀನು ಕ್ರಮವನ್ನು ಒಪ್ಪಬೇಕು.ಏಕೆಂದರೆ ಒಂದೇ ಕಾಲದಲ್ಲಿ ಹುಟ್ಟುವುದಾದರೆ ಕೋಡುಗಳಂತೆ ಪರಸ್ಪರ ಸಂಬಂಧವೇ ಇಲ್ಲದಂತೆ ಆಗುವುದು.(ಪುಟ357) 17)ನಿನ್ನ ಮನದಲ್ಲಿ ಫಲವೊಂದು ಹುಟ್ಟುವುದಾದರ್ರೆ ಹೇತುವು ಸಿದ್ದವಾಗುವುದಿಲ್ಲ.ತಾನೇ ಹುಟ್ಟದೆ ಇರುವ ಹೇತು ಹೇಗೆ ತಾನೇ ಫಲವನ್ನುಂಟು ಮಾಡೀತು?(ಪುಟ358) 18)ಹೇತುವಿಗೆ ಫಲದಿಂದ ಸಿದ್ಧಿ,ಫಲಕ್ಕೆ ಸಿದ್ಧಿಯೂ ಹೇತುವಿನಿಂದಲೇ-ಎನ್ನುವೆಯಾದರೆ ಇವೆರಡರಲ್ಲಿ ಯಾವುದು ಮೊದಲು ಹುಟ್ಟಿತು,ಮೊದಲು ಹುಟ್ಟಿದ್ದರಿಂದಲ್ಲವೆ ಇನ್ನೊದು ಸಿದ್ಧವಾಗಬೇಕು.(ಪುಟ358) 1೯)ಅಶಕ್ತಿ,ಅಪರಿಜ್ಞಾನ ಅಥವಾ ಕ್ರಮಕೋಪ ಇವುಗಳೊಳಗೆ ಒಂದು ಅಂಟುತ್ತದೆ. ಈ ರೀತಿತಲ್ಲಿ ಸವ೯ಪ್ರಕಾರದಲ್ಲಿಯೂ ಬುದ್ದರು ಅಜಾತಿಯನ್ನೇ ಬೆಳಕಿಗೆ ಹಿಡಿದಂತಾಗುವರು.(35೯) 20)ಬೀಜಾಂಕುರವೆಂಬ ಹೆಸರಿನ ದೃಷ್ಟಾಂತವುಯಾವಗಲೂ ಸಧ್ಯಕ್ಕೆ ಸಮವಾಗಿರುತ್ತದೆ.ಸಾದ್ಯಸಮವಾಗಿರುವ ಹೇತುವು ಸಾಧ್ಯವನ್ನು ಸಿದ್ಧಪಡಿಸುವುದಕ್ಕೆ ಸರಿಯಾಗಲಾರದಷ್ಟೆ?(ಪದುಟ360) 21) ಹಿಂದಿನದು ಯಾವುದು,ಆಮೇಲೆ ಉಂಟಾಗುವುದು ಯಾವುದು-ಎಂಬುದನ್ನು ಅರಿಯದಿರುವುದು ಅಜಾತಿಯನ್ನೇ ಬೆಳಕಿಗೆ ಹಿಡಿಯುತ್ತದೆ.ಒಂದು ಧಮ೯ವು ಹುಟ್ಟುತ್ತಿರುವಲ್ಲಿ ಅದರ ಹಿಂದಿನದು ತಿಳಿಯಬರಲಿಲ್ಲವೆಂಬುದು ಹೇಗೆ ಸರಿ?(ಪುಟ363) 22)ಯಾವುದೊಂದು ವಸ್ತುವು ತಾನೆ ಆಗಲಿ,ಮತ್ತೊಂದರಿಂದಾಗಲಿ ಹುಟ್ಟುವುದಿಲ್ಲ. ಸತ್ತು,ಅಸತ್ತು,ಸದಸತ್ತು-ಹೇಗಿದ್ದರೂ ಯಾವವಸ್ತುವೂ ಹುಟ್ಟುವುದಿಲ್ಲ.(ಪುಟ363) 23)ಅನಾದಿಯಾದಫಲದಿಂದ ಅಥವಾ ಅನಾದಿಯಾಗಿರುವುದರಿಂದ ಹೇತುವು ಹುಟ್ಟುವಂತಿಲ್ಲ.ಫಲವೂ ಸ್ವಭಾವದಿಂದ ಹುಟ್ಟುವಂತಿಲ್ಲ.ಯಾವುದಕ್ಕೆ ಆದಿಯಿಲ್ಲವೋ ಅದಕ್ಕೆ ಹುಟ್ಟುವುದೆಂಬುದು ಇರಲಾರದು.(ಪುಟ 371) 24)ಪ್ರಜ್ಞಪ್ತಿಯು ಸನಿಮಿತ್ತವಾಗಿರಬೇಕು.ಇಲ್ಲದಿದ್ದರೆ ದ್ವಯವು ಇಲ್ಲವಾಗುವುದು.ಸಂಕ್ಲೇಶವು ತೋರಿಬರುತ್ತಿರುವುದರಿಂದಲೂ ಪರತಂತ್ರವು ಇದೆ ಎಂಬುದು ನಮ್ಮ ಅಭಿಪ್ರಾಯ.(ಪುಟ373) 25)ಪ್ರಜ್ಞಪ್ತಿಗೆ ನ್ಮಿತ್ತವಿರಬೇಕೆಂಬುದನ್ನು ಯುಕ್ತಿಯನ್ನು ಕಂಡು ಒಪ್ಪಿರುತ್ತೀರಿ.ನಿಮಿತ್ತವು ನಿಮಿತ್ತವಲ್ಲವೆಂಬ್ಯದನ್ನು ನಾವು ಭೂತದಶ೯ನದಿಂದ ಒಪ್ಪಿರುತ್ತೇವೆ.(ಪುಟ376) 26)ಚಿತ್ತವು ಪದಾಥ೯ವನ್ನು ಮುಟ್ಟುವುದಿಲ್ಲ.ಅಂತೆಯೇ ಅಥಾ೯ಭಾಸವನ್ನೂ ಮುಟ್ಟುವುದಿಲ್ಲ.ಏಕೆಂದರೆ ಪದಾಥ೯ವು ಅಭೂತವೇ ಆಗಿರುತ್ತದೆ.ಆದ್ದರಿಂದ ಅದಕ್ಕಿಂತ ಬೇರೆಯಾಗಿ ಅಥಾ೯ಭಾಸವೂ ಇರುವುದಿಲ್ಲ.(ಪುಟ 26) 27)ಚಿತ್ತವು ಮೂರು ಹಾದಿಗಳಲ್ಲೂ ನಿಮಿತ್ತವನ್ನು ಯಾವಾಗಲೂ ಮುಟ್ಟುವುದೇ ಇಲ್ಲ.ಅದಕ್ಕೆ ನಿಮಿತ್ತವಿಲ್ಲದೆ ವಿಪಯಾ೯ಸವು ಹೇಗೆ ಆದೀತು?(ಪುಟ383) 28)ಆದ್ದರಿಂದ ಚಿತ್ತವು ಹುಟ್ಟುವುದಿಲ.ಚಿತ್ತದೃಶ್ಯವೂ ಹುಟ್ಟುವುದಿಲ್ಲ;ಅದರ ಹುಟ್ಟನ್ನು ಯಾರು ಕಾಣುವರೋ ಅವರು ಆಕಾಶದಲ್ಲಿಯೆ ಹೆಜ್ಜೆಯ ಗುರುತನ್ನು ಕಾಣುವರು.(ಪುಟ385) 2೯)ಹುಟ್ಟದೆ ಇದ್ದುಕೊಂಡಿರುವುದೇ ಹುಟ್ಟುತ್ತಿರುವುದಷ್ಟೆ?ಆದ್ದರಿಂದ ಅಜಾತಿಯು ಪ್ರಕೃತಿಯು.ಪ್ರಕೃತಿಯು ಬೇಪ೯ಡುವುದೆಂಬುದು ಹೇಗೂ ಆಗಲೇಆರದು.(ಪುಟ401) 30)ಅನಾದಿಯಾದ ಸಂಸಾರವು ಅಂತವುಳ್ಳದ್ದೆಂಬುದು ಸಿದ್ಧವಾಗಲಾರದು.ಆದಿಯುಳ್ಳ ಮೋಕ್ಷವು ಅನಂತವೆಂಬುದೂ ಆಗಲಾರದು.(ಪುಟ402) 31-32)ಮೊದಲಲ್ಲಿಯೂ ಕೊನೆಯಲ್ಲಿಯೂ ಯಾವುದು ಇರುವುದಿಲ್ಲವೋ ಅದು ಈಗಿನ ಕಾಲ ದಲ್ಲಿಯೂ ಹಾಗೆಯೇ ಇರುವುದಿಲ್ಲ.ಹುಸಿಯಾಗಿರುವುದಕ್ಕೆ ಸಮಾನವಾಗಿದ್ದುಕೊಂಡೇ ಪದಾಥ೯ಗಳು ಹುಸಿಯಲ್ಲವೆಂಬಂತೆ ಕಾಣುತ್ತಿರುವುವು.ಅದಕ್ಕೆ ಪ್ರಯೋಜನವಿದೆ ಎಂಬುದು ಸ್ವಪ್ನದಲ್ಲಿ ವಿರುದ್ಧಾಭಿಪ್ರಾಯಕ್ಕೆ ಎಡೆಯಾಗುತ್ತದೆ.ಅದ್ದರಿಂದ ಮೊದಲು ಕೊನೆಗಳಿರುವವಾದ್ದರಿಂದ ಅವು ಮಿಥ್ಯೆಯೇ ಎನಿಸುವವು.(ಪುಟ404) 33)ಕನಸಿನಲ್ಲಿ ಕಾಣುವ ಎಲ್ಲ ಧಮ೯ಗಳೂ ಸುಳ್ಳೇ.ಏಕೆಂದರೆ ಅವು ಶರೀರದ ಒಳಗೆ ಕಂಡುಬರುತ್ತವೆ.ಸಂಕುಚಿತವಾದ ಈ ಪ್ರದೇಶದಲ್ಲಿ ಭೂತಗಳನ್ನು ಕಾಣುವುದೆಲ್ಲಿ ಬಂತು?(ಪುಟ405) 34)ಹೋಗಿ ಪದಾಥ೯ಗಳನ್ನು ನೋಡುತ್ತಾರೆಂಬುದು ಯುಕ್ತವಲ್ಲ.ಏಕೆಂದರೆ ಅಲ್ಲಿ ಹೋಗುವುದಕ್ಕೆ ಬೇಕಾದಷ್ಟು ಕಾಲದ ನಿಯಮವಿರುವುದಿಲ್ಲ ಮತ್ತು ಎಚ್ಚೆತ್ತವನು ಯಾವನೂ ಆ ದೇಶದಲ್ಲಿರುವುದಿಲ್ಲ. 35)ಮಿತ್ರರೇ ಮುಂತಾದವರೊಡನೆ ಆಲೋಚನೆ ಮಾಡಿ ಎಚ್ಚೆತ್ತವನು ಅದನ್ನು ನಂಬುವುದಿಲ್ಲ ಮತ್ತು ಯಾವುದನ್ನಾದರೂ ತೆಗೆದುಕೊಂಡಿದ್ದರೆ ಅದನ್ನು ಎಚ್ಚೆತ್ತವನು ಕಾಣುವುದಿಲ್ಲ.(ಪುಟ406) 36)ಕನಸಿನಲ್ಲಿರುವ ಶರೀರವು ಅಸತ್ಯವೇ.ಏಕೆಂದರೆ ಅದಕ್ಕಿಂತ ಬೇರೆಯಾದ ಮತ್ತೊಂದು ದೇಹವು ಕಂಡು ಬರುತ್ತದೆ.ಶರೀರವು ಹೇಗೋ ಹಾಗೆ ಚಿತ್ತದೃಶ್ಯವಾದದ್ದೆಲ್ಲವೂ ಅಸತ್ಯವೇ.(ಪುಟ407) 37)ಜಾಗರಿತದಂತೆಯೇ ಕಾಣಬರುವುದರಿಂದ ಸ್ವಪ್ನವು ಅದನ್ನೇ ಹೇತುವಾಗಿ ಉಳ್ಳದ್ದು ಎನಿಸುವುದು.ಅದನ್ನೇ ಹೇತುವಾಗಿ ಉಳ್ಳದ್ದಾಗಿರುವುದರಿಂದ ಅವನಿಗೇ ಎಚ್ಚರವು ಇರತಕ್ಕದ್ದು ಎನಿಸುತ್ತದೆ.(ಪುಟ40೯) 38)ಹುಟ್ಟುವುದೇ ಅಪ್ರಸಿದ್ಧವಾಗಿರುವುದರಿಂದ ಎಲ್ಲವೂ ಅಜವೆಂದು ಹೇಳಲ್ಪಟ್ಟಿರುತ್ತದೆ.ನಿಜವಾಗಿರುವುದರಿಂದ ಇಲ್ಲದ್ದು ಹುಟ್ಟುವುದೆಂಬುದು ಹೇಗೂ ಆಗಲಾರದು.(ಪುಟ410) 3೯)ಎಚ್ಚರದಲ್ಲಿ ಅಸತ್ತಾಗಿರುವುದನ್ನು ಕಂಡು ತನ್ಮಯನಾಗಿ ಕನಸಿನಲ್ಲಿಯೂ ಅದನ್ನು ಕಾಣುತ್ತಾನೆ.ಕನಸಿನಲ್ಲಿಯೂ ಅಸತ್ತಾದುದನ್ನು ಕಂಡು ಎಚ್ಚೆತ್ತವನು ಅದನ್ನು ಕಾಣುವುದಿಲ್ಲ.(ಪುಟ412) 40)ಅಸತ್ತಾದ ಹೇತುವಿರುವ ಅಸತ್ತು ಇಲ್ಲ,ಅಸತ್ತಾದ ಹೇತುವುಳ್ಳ ಸತ್ತೂ ಇರುವುದಿಲ್ಲ.ಸತ್ತು ಹೇತುವಾಗಿರುವ ಸತ್ತೂ ಇರುವುದಿಲ್ಲ.ಸತ್ತು ಹೇತುವಾಗಿರುವ ಅಸತ್ತು ಎಲ್ಲಿಯದು?(413) 41)ಹೇಗೆ ಎಚ್ಚರದಲ್ಲಿ ವಿಪಯಾ೯ಸದಿಂದ ಅಚಿಂತ್ಯವಾದ ಧಮ೯ಗಳನ್ನು ನಿಜವಾಗಿರುವಂತೆ ಮುಟ್ಟುತ್ತಿರುವುನೋ ಹಾಗೆಯೇ ಸ್ವಪ್ನದಲ್ಲಿಯೂ ವಿಪಯಾ೯ಸದಿಂದ ದಮ೯ಗಳನ್ನು ಅಲ್ಲಿಯೇ ಕಾಣುತ್ತಿರುವನು. (ಪುಟ 415) 42)ತೋರುವುದರಿಂದಲೂ ಆಚರಣೆಯಿಂದಲೂ ವಸ್ತುವಿದೆ ಎನ್ನುತ್ತಿರುವವರಿಗಾಗಿ,ಯಾವಾಗಲೂ ಅಜಾತಿಗೆ ಹೆದರುತ್ತಿರುವವರಿಗಾಗಿ ಬುದ್ಧರಿಂದ ಜಾತಿಯು ಉಪದಿಷ್ಟವಾಗಿರುತ್ತದೆ.(ಪುಟ 416) 43)ವಸ್ತುವು ತೋರುತ್ತಿದೆ ಎನ್ನುವ ಕರಣದಿಂದ ಅಜಾತಿಗೆ ಅಂಜಿ ಯಾರು ಅದನ್ನು ಬಿಟ್ಟಿರುವರೋ,ಅವರಿಗೆ ಜನ್ಮವನ್ನೊಪ್ಪಿರುವ ದೋಷಗಳು ಸಿದ್ಧವಾಗುವುದಿಲ್ಲ.ದೋಷವೂ ಸ್ವಲ್ಪವೆ ಆಗುವುದು.(ಪುಟ41೯) 44)ತೋರುತ್ತಿರುವುದರಿಂದಲೂ ಹಾಗೆಯೇ ಆಚರಣೆಯಾಗುತ್ತಿರುವುದರಿಂದಲೂ ಮಾಯಾ ಹಸ್ತಿಯು ಹೇಗೆ ಆನೆ ಎನಿಸುವುದೋ ಹಾಗೆಯೇ ತೋರುತ್ತಿರುವುದರಿಂದಲೂ ಧಮಾಚರಣೆಯಿಂದಲೂ ಬಾಹ್ಯವಸ್ತುವು ಇದೆ ಎನಿಸುತ್ತದೆ.(ಪುಟ420) 45)ಜಾತ್ಯಾಭಾಸ,ಚಲಾಭಾಸ,ಹಾಗೂ ವಸ್ತ್ವಾಭಾಸವು ,ಆದರೂ ವಿಜ್ಞಾನವು,ಅಜವು,ಅಚಲವು,ಅವಸ್ತು, ಹಾಗೂ ಶಾಂತವು,ಅದ್ವಯವು.(ಪುಟ 421) 46)ಹೀಗೆ ಚಿತ್ತವು ಹುಟ್ಟಿರುವುದಿಲ್ಲ,ಹೀಗೆ ಧಮ೯ರುಗಳು ಅಜರೆನಿಸುವರು.ಹೀಗೆಂದೇ ಅರಿತುಕೊಂಡವರು ವಿಪರೀತ ಜ್ಞಾನಕ್ಕೆ ಬೀಳದೆ ಇರುವರು.(ಪುಟ 423) 47)ನೆಟ್ಟಗಿರುವುದು ,ಸೊಟ್ಟಗಿರುವುದು-ಮುಂತಾದ್ದರಂತೆ ತೋರಿಕೊಳ್ಳುವುದು ಹೇಗೆ ಕೊಳ್ಳಿಯ ತಿರುಗಿವಿಕೆಯೋ,ಅರಿಯುವಿಕೆ,ಅರಿಯುವವನು-ಎಂಬರೂಪದಲ್ಲಿ ತೋರುವುದೊ ಹಾಗೆಯೇ ವಿಜ್ಞಾನದ ಚಲನೆಯೇ (ಪುಟ 425) 48)ಅಲುಗಾಡದೆ ಇರುವ ಕೊಳ್ಳಿಯು ಹೇಗೆ ಬೇರೆಯ ರೂಪದಿಂದ ತೋರಿಕೊಳ್ಳದೆ ಅಜವಾಗಿರುವುದೋ,ಹಾಗೆಯೇ ಅಲುಗಾಡದೆ ಇರುವ ವಿಜ್ಞಾನವು ಬೇರೆಯ ರೂಪದಿಂದ ತೋರಿಕೊಳ್ಳದೆ ಅಜವಾಗಿರುವುದು.(ಪುಟ426) 4೯-50)ಕೊಳ್ಳಿಯು ಸುತ್ತುತ್ತಿರುವಾಗ ತೋರಿಕೆಗಳು ಮತ್ತೊಂದು ಕಡೆಯಿಂದೇನೂ ಬಂದಿರುವುದಿಲ್ಲ.ಸುತ್ತದೆ ಇರುವಾಗ ಅವು ಅದನ್ನು ಬಿಟ್ಟು ಮತ್ತೊಂದುಕಡೆಗೆ ಹೋಗುವುದೂ ಇಲ್ಲ. ಅಥವಾ ಕೊಳ್ಳಿಯನ್ನು ಪ್ರವೇಶಿಸುವುದೂ ಇಲ್ಲ.ಅವು ಕೊಳ್ಳಿಯಿಂದ ಹೊರಟು ಬಂದಿರುವುದೂ ಇಲ್ಲ.ಏಕೆಂದರೆ ಅವು ನಿಜವಾದ ವಸ್ತುಗಳಲ್ಲ.ವಿಜ್ಞಾನದ ವಿಷಯದಲ್ಲಿಯೂ ಆ ತೋರಿಕೆಗಳು ಹೀಗೆಯೇ ಇರಬೇಕು.ಏಕೆಂದರೆ ಅವು ತೋರಿಕೆಯೆಂಬುದು ಸಮಾನವಾಗಿರುತ್ತದೆ.(ಪುಟ427) 51-52)ವಿಜ್ಞಾನವು ಅಲುಗಾಡುತ್ತಿರುವಾಗ ತೋರಿಕೆಗಳು ಮತ್ತೊಂದರಿಂದ ಬಂದಿರುವುದಿಲ್ಲ.ಅಲುಗಾಡದೆ ಇರುವಾಗ ಅ ವಿಜ್ಞಾನದಿಂದ ಬೇರೊಂದು ಕಡೆಗೆ ಹೋಗುವುದೂ ಇಲ್ಲ,ಅವು ವಿಜ್ಞಾನವನ್ನು ಸೇರಿಕೊಳ್ಳುವುದೂ ಇಲ್ಲ.ಅವು ವಿಜ್ಞಾನದಿಂದ ಹೊರಟು ಬಂದಿರುವುದಿಲ್ಲ.ಏಕೆಂದರೆ ಅವಕ್ಕೆ ವಸ್ತು ಸ್ವಬಾವವೇ ಇಲ್ಲ.ಕಾಯ೯ಕಾರಣ ಭಾವವು ಇಲ್ಲದ್ದರಿಂದ ಅವು ಎಂದೆಂದಿಗೂ ಅಚಿಂತ್ಯಗಳಾಗಿಯೇ ಇರುತ್ತವೆ.(ವಿಜ್ಞಾನ ಎಂದರೆ ಆತ್ಮ)(427) 53)ದ್ರವ್ಯವು ದ್ರವ್ಯಕ್ಕೆ ಹೇತುವಾದೀತು.ಒಂದು ಮತ್ತೊಂದಕ್ಕೆ ಹೇತುವಾದೀತು.ಆದರೆ ಧಮ೯ರುಗಳು ದ್ರವ್ಯವೆಂಬುದಾಗಲಿ ಮತ್ತೊಂದಕ್ಕಿಂತ ಬೇರೆ ಎಂಬುದಾಗಲಿ ಹೊಂದುವುದಿಲ್ಲ.(ಪುಟ42೯) 54)ಹೀಗೆ ಧಮ೯ಗಳು ಚಿತ್ತದಿಂದ ಹುಟ್ಟಿರುವುವುದಿಲ್ಲ. ಚಿತ್ತವೂ ಧಮ೯ದಿಂದ ಹುಟ್ಟಿರುವುದಿಲ್ಲ.ಈ ರೀತಿಯಲ್ಲಿ ವಿವೇಕಿಗಳಾದವರು ಹೇತು ಫಲಗಳು ಹುಟ್ಟಿಯೇ ಇಲ್ಲವೆಂಬ ಮತವನ್ನು ಪ್ರವೇಶಿಸುವರು.(ಪುಟ431) 55)ಹೇತು ಫಲಗಳ ಆವೇಶವಿರುವವರೆಗೆ ಹೇತು ಫಲಗಳು ಹುಟ್ಟುತ್ತಿರುವುವು.ಹೇತುಫಲಗಳ ಆವೇಶವು ಕ್ಷಯವಾದರೆ ಹೇತು ಫಲಗಳು ಹುಟ್ಟುವುದಿಲ್ಲ.(ಪುಟ 55) 56)ಹೇತು ಫಲಾವೇಶವು ಇರುವವರೆಗೆ ಸಂಸಾರವು ಹರಡಿಕೊಂಡಿರುವುದು.ಹೇತು ಫಲಾವೇಶವು ಸವೆದ ಮೇಲೆಸಂಸಾರವನ್ನು ಪಡೆಯದೆ ಇರುತ್ತಾನೆ.ಏಕೆಂದರೆ ಆಗ ಸಂಸಾರಕ್ಕೆ ಕಾರಣವಾದ ಧಮಾ೯ಧಮ೯ಗಳೇ ಇರುವುದಿಲ್ಲ.(ಪುಟ433) 57)ಸಂವೃತಿಯ ದೃಷ್ಟಿಯಿಂದ ಎಲ್ಲವೂ ಹುಟ್ಟುತ್ತದೆ.ಆದ್ದರಿಂದ ಶಾಶ್ವತವೆಂಬುದೇ ಇಲ್ಲ.ಪರಮಾಥ೯ ದೃಷ್ಟಿಯಿಂದ ಎಲ್ಲವೂ ಅಜವೇ,ಅದರಿಂದ ಉಚ್ಛೇದವೆಂದುದೇ ಇಲ್ಲ.(ಪುಟ434) 58)ಯಾವ ಧಮ೯ಗಳು ಹೀಗೆ ಹುಟ್ಟುವವೋ ಅವು ನಿಜವಾಗಿ ಹುಟ್ಟುವುದಿಲ್ಲ.ಅವುಗಳ ಜನ್ಮವು ಮಾಯೋಪಮವು.ಆ ಮಾಯೆಯೂ ಇರುವುದಿಲ್ಲ.(438) 5೯)ಹೇಗೆ ಮಾಯಾಮಯವಾದ ಬೀಜದಿಂದ ಮಾಯಾಮಯವಾದ ಮೊಳಕೆಯು ಹುಟ್ಟುವುದೋ,ಅದು ಹೇಗೆ ನಿತ್ಯವೂ ಅಲ್ಲವೋ ನಾಶವಾಗತಕ್ಕದ್ದೂ ಅಲ್ಲವೊ ಹಾಗೆಯೇ ಧಮ೯ಗಳಿಗೂ ಹೊಂದಿಸಿ ತಿಳಿದುಕೊಳ್ಳಬೇಕು.(ಪುಟ438) 60)ಅಜರಾದ ಯಾವ ಧಮ೯ಗಳಲ್ಲಿಯೂ ಶಾಶ್ವತ ,ಅಶಾಶ್ವತ ಎಂಬ ಮಾತಿಲ್ಲ.ಎಲ್ಲಿ ವಣ೯ಗಳಿರುವುದಿಲ್ಲವೋ ಅಲ್ಲಿ ವಿವೇಕವನ್ನು ಹೇಳುವುದಿಲ್ಲ.(ಪುಟ43೯) 61-62)(ಗ್ರಂಥದಲ್ಲಿ ಅಥ೯ವನ್ನು ಕೊಟ್ಟಿರುವುದಿಲ್ಲ) 63-66)ಸ್ವಪ್ನವನ್ನು ಕಾಣುವಾತನು ಸ್ವಪ್ನದಲ್ಲಿ ಓಡಾಡುತ್ತಾ ಹತ್ತು ದಿಕ್ಕುಗಳಲ್ಲಿಯೂ ಇರುವ ಅಂಡಜವನ್ನಾಗಲೀ ಸ್ವೇದಜವನ್ನಾಗಲೀ ಯಾವ ಯಾವ ಜೀವರುಗಳನ್ನು ಯಾವಾಗಲೂ ಕಾಣುತ್ತಿರುವನೋ ಅವು ಕನಸು ಕಾಣುವವನ ಚಿತ್ತಕ್ಕೇ ದೃಶ್ಯವಾಗಿರುತ್ತದೆ.ಅದಕ್ಕಿಂತ ಬೇರೆಯಾಗಿ ಇರುವುದಿಲ್ಲ.ಈ ಸ್ವಪ್ನದಶಿ೯ಯ ಚಿತ್ತವೂ ಅವನಿಗೇ ದೃಶ್ಯವಾಗಿರುತ್ತದೆ. ಎಚ್ಚರದಲ್ಲಿ ಓಡಾಡುತ್ತಿರುವವನು ಎಚ್ಚರದಲ್ಲಿ ಹತ್ತು ದಿಕ್ಕುಗಳಲ್ಲಿಯೂ ಅಂಡಜಗಳನ್ನಾಗಲೀ ಸ್ವೇದಜಗಳನ್ನಾಗಲೀ ಯಾವ ಯಾವ ಜೀವರನ್ನು ಯಾವಾಗ ಕಾಣುತ್ತಿರುವನೋ ಅವು ಎಚ್ಚರವಾಗಿರುವ ಚಿತ್ತಕ್ಕೇ ದೃಶ್ಯವಾಗಿರುವವು.ಅದಕ್ಕಿಂತ ಬೇರೆಯಾಗಿರುವುದಿಲ್ಲ.ಹಾಗೆಯೇ ಈ ಎಚ್ಚೆತ್ತವನ ಚಿತ್ತವೂ ಅವನಿಗೆ ದೃಶ್ಯವಾಗಿರುವುದೆಂದು ಒಪ್ಪಬೇಕು.(ಪುಟ 442) 67)ಅವೆರಡೂ ಒಂದಕ್ಕೊಂದು ದೃಶ್ಯವಾಗಿವೆ. ಇರುವುದು ಯಾವುದು ಎಂಬಿದನ್ನು ನಾವು ಹೇಳುವುದಿಲ್ಲ. ಎರಡೂ ಲಕ್ಷಣಾ ಶೂನ್ಯ.ಆ ಬುದ್ಧಿಯಿಂದಲೇ ಅರಿಯಲ್ಪಡುತ್ತದೆ.(443) 68-70)ಕನಸಿನಿಂದಾಗಿರುವ ಜೀವನು ಹೇಗೆ ಹುಟ್ಟಿ ಸಾಯುವನೋ ಅದರಂತೆ ಈ ಜೀವರುಗಳೆಲ್ಲರೂ ಉಂಟಾಗಿ ಇಲ್ಲವಾಗುವರು.ಮಾಯಾಮಯನಾದ ಜೀವನು ಹೇಗೆ ಹುಟ್ಟಿ ಸಾಯುವನೋ ಹಾಗೆಯೇ ಈ ಜೀವರುಗಳೆಲ್ಲರೂ ಉಂಟಾಗಿ ಇಲ್ಲವಾಗುವರು.ಹೇಗೆ ನಿಮಿ೯ತಕ ಜೀವನು ಹುಟ್ಟಿ ಸಾಯುವನೋ ಹಾಗೆಯೇ ಜೀವರುಗಳೆಲ್ಲರೂ ಉಂಟಾಗಿ ಇಲ್ಲವಾಗುವರು.(ಪುಟ445) 71)ಯಾವಜೀವನೂ ಹುಟ್ಟಿರುವುದಿಲ್ಲ.ಇವನಿಗೆ ಹುಟ್ಟುವ ಕಾರಣವೂ ಇರುವುದಿಲ್ಲ.ಎಲ್ಲಿಯಾದರೂ ಒಂದಿಷ್ಟೂ ಹುಟ್ಟುವುದಿಲ್ಲವೋ ಅದೇ ಉತ್ತಮ ಸತ್ಯವು.(ಪುಟ445) 72)ಗ್ರಾಹ್ಯ ಗ್ರಾಹಕ ರೂಪವಾದ ಈ ದ್ವೈತವು ಚಿತ್ತದ ಸ್ಪಂದನೆಯೇ.ಚಿತ್ತವು ನಿವಿ೯ಷಯವಾಗಿದೆ.ಅದರಿಂದ ಅಸಂಗವೆಂದೇ ಹೇಳುತ್ತಾರೆ.(ಪುಟ447) 73) ಯಾವುದು ಕಲ್ಪಿತ ವೃತ್ತಿಯಿಂದ ಇರುತ್ತದೆಯೋ ಅದು ಪರಮಾಥ೯ವಾಗಿರುವುದಿಲ್ಲ.ಪರತಂತ್ರಾಭಿ ಸಂವೃತ್ತಿಯಿಂದ ಇದ್ದೀತು.ಪರಮಾಥವಾಗಿ ಇರುವುದೇ ಇಲ್ಲ.(448) 74)ಅಜನೆಂಬುದೂ ಕಲ್ಪಿತ ಸಂವೃತ್ತಿಯಿಂದಲೇ;ಪರಮಾಥ೯ ದೃಷ್ಟಿಯಿಂದ ಅಜನೂ ಅಲ್ಲ.ಪರತಂತ್ರದ ಅಭಿನಿಷ್ಪತ್ತಿಯಿಂದ ಅವನು ಸಂವೃತಿಯಿಂದಲೇ ಹುಟ್ಟುತ್ತಿರುತ್ತಾನೆ.(ಪುಟ44೯) 75)ಇಲ್ಲದ್ದರಲ್ಲಿ ಅಭಿನಿವೇಶವಿರುತ್ತದೆಯೇ ಹೊರತು ಅಲ್ಲಿ ದ್ವೈತವಿರುವುದಿಲ್ಲ.ದ್ವಯವಿಲ್ಲವೆಂಬುದನ್ನು ಅರಿತಕೂಂಡರೇ ನಿಮಿತ್ತವಿಲ್ಲದಿರುವುದರಿಂದ ಹುಟ್ಟುವುದಿಲ್ಲ.(ಪುಟ453) 76)ಯಾವಾಗ ಉತ್ತಮ,ಅಧಮ,ಮಧ್ಯಮ-ಎಂಬ ಹೇತುಗಳು ಇರುವುದಿಲ್ಲವೋ ಆಗ ಚಿತ್ತವು ಹುಟ್ಟುವುದಿಲ್ಲ. ಹೇತುವಿಲ್ಲದಿದ್ದಾ ಗ ಫಲವೆಲ್ಲಿಂದ ಬರಬೇಕು.(ಪುಟ454) 77)ಅನಿಮಿತ್ತವಾದ ಚಿತ್ತವು ಹುಟ್ಟುವುದೆಂಬುದಿದೆಯಲ್ಲ,ಅದು ಅಜಾತವಾಗಿಯೇ ಎಲ್ಲವೂ ಆಗಿರುವ ಚಿತ್ತದ ಸಮವಾದ ಅದ್ವಯವಾದ ಅನುತ್ಪತ್ತಿಯು.ಏಕೆಂದರೆ ಅದು ಚಿತ್ತದೃಶ್ಯವೇ(ಪುಟ455) 78) ನಿಮಿತ್ತವಿಲ್ಲದಿರುವುದೇ ಸತ್ಯವೆಂದರಿತುಕೊಂಡರೆ ಬೇರೆಯಾಗಿರುವ ಹೇತುವನ್ನು ಸ್ವೀಕರಿಸದೆ ಶೋಕವಿಲ್ಲದ ,ಕಾಮವಿಲ್ಲದ ಅಭಯವಾದ ಸ್ಥಾನವನ್ನು ಸೇರುತ್ತಾನೆ.(ಪುಟ456) 7೯)ಅಭೂತಾಭಿನಿವೇಶದಿಂದಲೇ ಅದಕ್ಕೆ ಸಮಾನವಾದದ್ದರಲ್ಲಿ ಪ್ರವತಿ೯ಸುತ್ತಾನೆ.ವಸ್ತುವಿಲ್ಲವೆಂದು ಅರಿತಕೂಡಲೆ ನಿಸ್ಸಂಗನಾಗಿ ಹಿಂಜರಿಯುತ್ತಾನೆ.(ಪುಟ 457) 80)ಹಿಂತಿರುಗಿ ಮತ್ತೆ ಮುಂದುವರಿಯದೆ ಇರುವ ಚಿತ್ತದ ಆಗಿನ ಸ್ಥಿತಿಯು ನಿಶ್ಚಲವಾಗಿಯೇ ಇರುವುದು.ಇದು ಜ್ಞಾನಿಗಳಿಗೆ ವಿಷಯವಾಗಿರುವುದು,ಸಾಮ್ಯವು,ಅಜವು,ಅದ್ವಯವು.(ಪುಟ458) 81)ಹುಟ್ಟಿಲ್ಲದ್ದು,ನಿದ್ರೆಯಿಲ್ಲದ್ದು,ಕನಸಿಲ್ಲದ್ದು,ತಾನೇ ಬೆಳಗುವಂಥದ್ದು,ಈ ಧಮ೯ವು ಧಾತು ಸ್ವಭಾವದಿಂದ ಒಂದೇ ಸಮನೆ ಬೆಳಗುತ್ತಿರುವುದು.(ಪುಟ45೯) 82)ಯಾವುದಾದರೊಂದು ಧಮ೯ವನ್ನು ಗ್ರಹಿಸುವುದರಿಂದ ಈ ಭಗವಂತನು ಯಾವಾಗಲೂ ಸುಲಭವಾಗಿ ಆವೃತನಾಗುತ್ತಾನೆ.ಯಾವಾಗಲೂ ಕಷ್ಟದಿಂದ ತೋರಿಕೊಳ್ಳುತ್ತಾನೆ.(ಪುಟ462) 83)ಇದ್ದಾನೆ,ಇಲ್ಲ,ಇದ್ದೂ ಇಲ್ಲ-ಎಂದೋ ;ಇಲ್ಲವೆ ಇಲ್ಲ ಎಂದೋ ಚಲ,ಸ್ಥಿರ,ಉಭಯ,ಅಭಾವ-ಇವುಗಳಿಂದ ಬಾಲಿಶನಾದವನು ಮುಚ್ಚುತ್ತಲೇ ಇರುವನು.(ಪುಟ464) 84)ಯಾವ ನಲ್ಕು ಕೋಟಿಗಳನ್ನು ಗ್ರಹಿಸುತ್ತಿರುವುದರಿಂದ ಭಗವಂತನು ಯಾವಗಲೂ ಆವೃತನಾಗಿರುವನೋ,ಇವುಗಳ ಸೋಂಕಿಲ್ಲದೆಯೇ ಇರುವ ಭಗವಂತನನ್ನು ಕಂಡಿರುವವನೆ ಸವ೯ದಶಿ೯ಯು.(ಪುಟ468) 85)ಪೂಣ೯ ಸವ೯ಜ್ಞತೆಯನ್ನೂ ಆದಿಮಧ್ಯಾಂತಗಳನ್ನೂ ಪಡೆಯದ ಅದ್ವಯ ಬ್ರಾಹ್ಮಣ್ಯವನ್ನೂ ಪಡೆದುಕೊಂಡಿರುವುದರಿಂದ ಇನ್ನು ಮುಂದೆ ಏತಕ್ಕೆ ಕಮ೯ಗಳನ್ನು ಮಾಡಿಯಾನು?(ಪುಟ470) 86)ವಿಪ್ರರಿಗೆ ವಿನಯವು ಇದೇ.ಇದೇ ಸ್ವಾಬಾವಿಕವಾದ ಶಮವೆನಿಸುತ್ತದೆ.ಸ್ವಭಾವದಿಂದ ದಾಂತವಾಗಿರುವುದರಿಂದ ಇದೇ ದಮ.ಹೀಗೆಂದು ತಿಳಿದವನು ಶಮವನ್ನು ಹೊಂದುವನು.(ಪುಟ471) 87-88)ವಸ್ತುವುಳ್ಲದ್ದೂ ಅರಿವಿನೊಡನಿರುವುದೂ ಆಗಿರುವ ದ್ವೈತವು ಲೌಕಿಕವೆನಿಸುವುದು.ವಸ್ತುರಹಿತವಾಗಿ ಉಪಲಂಭವುಳ್ಳದ್ದಾಗಿರುವುದನ್ನು ಶುದ್ಧ ಲೌಕಿಕವೆನ್ನುತ್ತಾರೆ.ವಸ್ತುವಿಲ್ಲದೆ,ಅರಿವೂ ಇಲ್ಲದೆ,ಇರುವುದು ಲೋಕೋತ್ತರವೆನಿಸುತ್ತದೆ.ಹೀಗೆ ಜ್ಞಾನ,ಜ್ಞೇಯ ಮತ್ತು ವಿಜ್ಞೇಯಿವನ್ನು ಬುದ್ದರು ಯಾವಾಗಲೂ ಹೇಳುತ್ತಿರುತ್ತಾರೆ.(ಪುಟ472) 8೯)ಜ್ಞಾನವನ್ನೂ ಮೂರುಬಗೆಯ ಜ್ಞೇಯವನ್ನೂ ಅರಿತುಕೊಂಡರೆ,ಅಂಥ ಮಹಾಬುದ್ದಿವಂತನಿಗೆ ಎಲ್ಲೆಲ್ಲಿಯೂ ಸವ೯ಜ್ಞತ್ವವು ತಾನೇ ಇಲ್ಲಿಯೇ ಉಂಟಾಗುವುದು.(478) ೯0)ಹೇಯ,ಜ್ಞೇಯ,ಆಪ್ಯ,ಪಾಕ್ಯ-ಇವುಗಳನ್ನು ಅಗ್ರಯಾಣವಾಗಿ ಚೆನ್ನಾಗಿ ಅರಿತುಕೊಳ್ಳಬೆಕು.ಅವುಗಳೊಳಗೆ ವಿಜ್ಞೇಯವನ್ನುಳಿದು ಮೂರರಲ್ಲಿ ಅರಿವು ಇರುತ್ತದೆ ಎನ್ನುವರು.(ಪುಟ481) ೯1)ಧಮ೯ರುಗಳೆಲ್ಲರೂ ಸ್ವಭಾವದಿಂದಲೇ ಆಕಾಶದಂತೆ ಅನದಿಯಾ ಗಿರುತ್ತಾರೆ ಎಮದು ತಿಳಿಯಬೇಕು.ಅವರಲ್ಲಿ ಎಲ್ಲಿಯೂ ನಾನಾತ್ವವೆಂಬುದು ಇರುವುದೇ ಇಲ್ಲ.(ಪುಟ484) ೯2)ಎಲ್ಲ ಧಮ೯ರುಗಳೂ ಪ್ರಕೃತಿಯಿಂದಲೇ ಆದಿಬುದ್ಧರೆಂದು ಸುನಿಶ್ಚಿತರಾಗಿರುತ್ತಾರೆ.ಯಾವನಿಗೆ ಹೀಗೆಂಬ ಕ್ಷಾಂತಿಯಿರ್ರುವುದೋ ಅವನು ಅಮೃತತ್ವಕ್ಕೆ ತಕ್ಕವನಾಗುವನು.(ಪುಟ486) ೯3)ಎಲ್ಲಾ ಧಮ೯ರುಗಳೂ ಆದಿಶಾಂತರು,ಹುಟ್ಟದೆ ಇರುವರು,ಸ್ವಭಾವದಿಂದಲೆ ಸುನಿವೃ೯ತರಾಗಿರುತ್ತಾರೆ.ಸಮವಾಗಿ ಅಭಿನ್ನರಾಗಿರುವರು.ಅಜವು,ಸಾಮ್ಯವು,ವಿಶಾರದವು.(ಪುಟ487) ೯4)ಯಾವಾಗಲೂ ಭೇದದಲ್ಲಿ ಸಂಚರಿಸುತ್ತಿರುವವರಿಗೆ ವೈಶಾರದ್ಯವೆಂಬುದು ಇರುವುದಿಲ್ಲ.ಬೇರೆ ಎಂಬ ವಾದಿಗಳು ಭೇದದ ಕಡೆಗೆ ವಾಲಿರುವರು.ಆದ್ದರಿಂದ ಅವರು ಕೃಪಣರೆನಿಸುವರು.(ಪುಟ4೯0) ೯5)ಅಜವೂ ಸಾಮ್ಯವೂ ಆಗಿರುವ ಪರಮಾಥ೯ ತತ್ವದಲ್ಲಿ ಸುನಿಶ್ಚಿತರಾಗಿರುವವರು ಯಾರೇ ಆಗಿರಲಿ,ಅವರೇ ಲೋಕದಲ್ಲಿ ಮಹಾಜ್ಞಾನಿಗಳು.ಅದನ್ನು ಲೋಕವು ಅರಿಯದು.(ಪುಟ4೯0) ೯6)ಅಜರಾದ ಧಮ೯ರುಗಳಲ್ಲಿ ಅಜಜ್ಞಾನವು ಸಂಕ್ರಾಂತವಾಗದೆ ಇರುತ್ತದೆ-ಎನ್ನುವರು.ಜ್ಞಾನವು ಮತ್ತೊಂದು ಕಡೆಗೆ ಹೋಗದೆ ಇರುವುದಷ್ಟೆ?ಅದರಿಂದ ಅದನ್ನು ಅಸಂಗವೆಂದು ಹೇಳುತ್ತಾರೆ.(ಪುಟ4೯1) ೯7)ಅರಿಯದವನಿಗೆ ವೈಧಮ್ಯ೯ವು ಒಂದಿಷ್ಟು ಆದರೂ ಅಸಂಗತ್ವವು ಎಂದಿಗೂ ಇರುವುದಿಲ್ಲ.ಇನ್ನು ಆವರಣಚ್ಯುತಿಯು ಇರುವುದಿಲ್ಲವೆಂದು ಹೇಳುವುದೇನು?(ಪುಟ4೯2) ೯8)ಎಲ್ಲ ಧಮ೯ರುಗಳೂ ಆವರಣವಿಲ್ಲದವರೇ,ಸ್ವಭಾವದಿಂದಲೇ ನಿಮ೯ಲರು.ಮೊದಲಿನಿಂದಲೂ ಬುದ್ಧರು,ಮುಕ್ತರು.ಸಮಥ೯ರಾಗಿರುವುದರಿಂದ ಅರಿಯುವವರು.(ಪುಟ4೯3) ೯೯)ತಾಯಿಯಾದ ಬುದ್ಧನ ಜ್ಞಾನವು ಧಮ೯ಗಳಲ್ಲಿ ಹೋಗಿ ಸೇರುವುದಿಲ್ಲ.ಅಲ್ಲ ಧಮ೯ರುಗಳೂ ಜ್ಞಾನವೂ ಹೀಗೆಯೇ.ಇದನ್ನು ಬುದ್ಧನು ಹೇಳಿರುವುದಿಲ್ಲ.(ಪುಟ4೯4) 100)ದುದ೯ಶ೯ವೂ ಅತಿಗಂಭೀರವೂ ಅಜವೂ ಸಾಮ್ಯವೂ ವಿಶಾರದವೂ ಆಗಿದ್ದು ನಾನಾತ್ವವಿಲ್ಲದ ಪದವನ್ನು ಅರಿತುಕೊಂಡು ಬಲವಿದ್ದಷ್ಟು ಮಟ್ಟಿಗೆ ನಮಸ್ಕರಿಸುವೆವು.(ಪುಟ500) ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,ಸ,,,,,,,,,,,,,,,,,,,,,,,,,,,,,,,,,,,,,,,,,, ಭಾಷ್ಯಕಾರರು ರಚಿಸಿರುವ ಮಂಗಳಶ್ಲೋಕಗಳ ಸಂಗ್ರಹ: 1)ಈ ಶ್ಲೋಕದ ಅಭಿಪ್ರಾಯವೇನೆಂದರೆ :1)ವೇದಾಂತ ಪ್ರಸಿದ್ಧವಾದ ಬ್ರಹ್ಮವು ತಾನು ಅಜವೇ ಆಗಿರುತ್ತಿದ್ದರೂ ತನ್ನ ಐಶ್ವಯ೯ಯೋಗದಿಂದ ಎಂದರೆ ತನ್ನ ಅಧೀನದಲ್ಲಿರುವ ಮಾಯಾಶಕ್ತಿಯ ಸಂಬಂಧದಿಂದ ಜನ್ಮ ಸಂಬಂಧವನ್ನು ಪಡೆದಿರುತ್ತದೆ.ಎಂದರೆ ಸ್ಥಾವರ ಜಂಗಮಪ್ರಾಣಿಗಳ ರೂಪವಾಗಿಯೂ ಚೇತನಾಚೇತನಾ ರೂಪವಾಗಿಯೂ ಕಾಣಿಸಿಕೊಂಡಿರುತ್ತದೆ.ದೇವತೆಗಳು,ಋಷಿಗಳು-ಮೊದಲಾದವರು ಹೇಗೆ ತಮ್ಮ ಪ್ರಭಾವದಿಂದ ಮತ್ತೊಂದು ಸಾಧನ ಸಾಮಗ್ರಿಯನ್ನು ಬಯಸದೆ ಧ್ಯಾನ ಮಾತ್ರದಿಂದ ಬೇಕಾದ ರೂಪವನ್ನು ಪಡೆದುಕೊಳ್ಳುತ್ತಾರೋ ಹಾಗೆ ಬ್ರಹ್ಮವು ಸಾಧಕರುಗಳ ಅನುಗ್ರಹಾಥವಾಗಿ ತನ್ನ ಇಚ್ಚಾ ಮಾತ್ರದಿಂದ ಬೇರೆ ಬೇರೆಯ ರೂಪವನ್ನು ಹೊಂದಿ ಮಾಯಾಜನ್ಮವನ್ನು ಪಡೆದಿರುತ್ತದೆ. 2)ತಾನು ಅಗತಿಯಾಗಿದ್ದುಕೂಟಸ್ಥವೂ ಅಚಲವೂ ಆಗಿರುತ್ತಿದ್ದರೂ ಯಾವ ಕಾಯ೯ಕರಣಗಳೂ ಇಲ್ಲದೆಯೇ ಗತಿಮಂತವಾಗಿರುತ್ತದೆ.ಎಂದರೆಗಂತೃ(ಹೋಗುವವನು),ಗಂತವ್ಯ(ಹೋಗಿಸೇರತಕ್ಕದ್ದು) ಗತಿ(ಗಮನ,ಹೋಗುವುದು)ಎಂಬ ವಿಭಾಗವನ್ನು ದೇವಯಾನ,ಪಿತೃಯಾನ,ಕ್ಷುದ್ರಜನ್ಮ-ಎಂಬ ಗತಿತ್ರಯ ವಿಭಾಗವನ್ನು ಪಡೆದುಕೊಂಡಿರುತ್ತದೆ. 3) ತನಗೆರಡನೆಯದಿಲ್ಲದ ಏಕವೇ ಆಗಿರುತ್ತಿದ್ದರೂ ಅನೇಕತ್ವವನ್ನು ಎಂದರೆ ಜೀವರು,ಜಗತ್ತು,ಈಶ್ವರ-ಎಂಬ ರೂಪಗಳನ್ನು ಪಡೆದಿರುತ್ತದೆ.(ಪುಟ 503) ಪರಮಗುರುಗಳಿಗೆ ನಮಸ್ಕಾರ: ಈ ಶ್ಲೋಕದ ಅಭಿಪ್ರಾಯವೇನೆಂದರೆ ಅವಿರತ ಜನನ ಗ್ರಾಹಘೂೀರವಾದ,ಎಡೆಬಿಡದೆಶರೀರವನ್ನು ಧರಿಸುತ್ತಿರುವುದೆಂಬ,ದುಷ್ಟ ಮೊಸಳೆಗಳಿಂದ ಭಯಂಕರವಾಗಿರುವ ಈ ಸಂಸಾರ ಸಮುದ್ರದಲ್ಲಿ ಮುಳುಗುತ್ತಿರುವ ಪ್ರಾಣಿಗಳನ್ನು ಕಂಡು,ತಮ್ಮ ಪ್ರಜ್ಞೆಯೆಂಬ ಕಡಗೋಲಿನಿಂದ ಪೂವ೯ದಲ್ಲಿ ವೇದವೆಂಬ ಕ್ಷೀರಸಾಗರವನ್ನು ಕಡೆದು ಅದರೊಳಗಿನಿಂದ ನಾರಾಯಣನ ಅನುಗ್ರಹದಿಂದ ಕಷ್ಟಪಟ್ಟು ಸಂಪಾದಿಸಿದ -ಸಮುದ್ರ ಮಥನದಿಂದ ಅಮೃತವನ್ನು ಪಡೆದುಕೊಂಡ ದೇವತೆಗಳಿಗೂ ಸಿಕ್ಕಲಾರದ-ಈ ಬ್ರಹ್ಮಜ್ಞಾನವೆಂಬ ಅಮೃತವನ್ನು ಸಂಸಾರದಲ್ಲಿ ಮುಳುಗಿರುವ ಜೀವರ ಮೇಲಿನ ಕರುಣೆಯಿಂದ ತೆಗೆದುಕೊಟ್ಟರಲ್ಲ,ಆ ಗೌಡಪಾದಾಚಾಯ೯ರೆಂಬ,ಪೂಜ್ಯರಿಗೂ ಪೂಜ್ಯರೆನಿಸಿಕೊಂಡಿರುವ ಪರಮಗುರುಗಳನ್ನು ಅವರ ಪಾದಗಳಿಗೆರಗಿ ನಮಸ್ಕರಿಸುವೆನು.(ಪುಟ504) ಗುರು ನಮಸ್ಕಾರ: ಈ ಶ್ಲೋಕದಲ್ಲಿ ಅಡಗಿರುವ ಅಭಿಪ್ರಾಯವಿದು.ಮತ್ತೆ ಮತ್ತೆ ಹುಟ್ಟಿಬರುವುದೆಂಬ ಭಯಂಕರ ಸಮುದ್ರದಲ್ಲಿ ಮುಳುಗುವುದು,ತೇಲುವುದು-ಹೀಗೆ ಸಂಕಟಪಡುತ್ತಿದ್ದನನ್ನ ಹೃದಯದ ಅಂಧಕಾರವು ಯಾರ ಪಾದಗಳ ಬೆಳಕಿನ ಕಾಂತಿಯಿಂದ ಸಂಪೂಣ೯ವಾಗಿ ತೊಲಗಿತೋ,ಯಾರ ಅಡಿಗಳನ್ನು ಆಶ್ರಯಿಸಿದವರಿಗೆ ಎಲ್ಲಕ್ಕೂ ಹೆಚ್ಚಿನ ಅಮೂಲ್ಯವಾದ ತತ್ವ ಶ್ರವಣವೂ ಶಾಂತಿಯೂ ವಿನಯವೂ ದೊರಕಿದವೋ ಅಂಥ ಪವಿತ್ರವಾದ ಸಂಸಾರದ ಭಯವನ್ನು ಹೋಗಲಾಡಿಸುವ,ಆ ಗೋವಿಂದ ಭಗವತ್ಪಾದರ ಅಡಿಗಳನ್ನು ಸವ೯ಭಾವಗಳಿಂದಲೂ ನಮಸ್ಕರಿಸುತ್ತೇನೆ.(ಪುಟ505) ,,,,,,,,,,,,,,,,,,,,,,,,,,,,,,,,,,,,,ಗೌಡಪಾದ ಹೃದಯ ಗ್ರಂಥವು ಸಂಪೂಣ೯,,,,,,,,,,,,,,,,,,,,,,, ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, ಸಾರಾಂಶ: 1) ಆಗಮ ಪ್ರಕರಣ: 1-5)ಎಚ್ಚರದವಸ್ಥೆಯಲ್ಲಿರುವ ಹೊರ ಅರಿವಿನ ಅತ್ಮನಿಗೆ ವಿಶ್ವನೆಂದು ಹೆಸರು.ಕನಸಿನಲ್ಲಿರುವ ಒಳ ಅರಿವಿನ ಆತ್ಮನಿಗೆ ತೈಜಸನೆಂದು ಹೆಸರು.ತನಿನಿದ್ರೆ(ಸುಷುಪ್ತಿ) ಯಲ್ಲಿರುವ ಬರಿ ಅರಿವಿನ ಗಟ್ಟಿಯಾದ ಆತ್ಮನಿಗೆ ಪ್ರಾಜ್ಞನೆಂದು ಹೆಸರು.ಒಬ್ಬ ಆತ್ಮನೇ ಹೀಗೆ ಅವಸ್ಥೆಗಳ ಉಪಾಧಿಯಿಂದ ಮೂರು ಬಗೆಯಾಗಿ ತೋರುತ್ತಿರುವನು.ಇಂದ್ರಿಯಗಳ ಮೂಲಕ ಅರಿಯುವ ವಿಶ್ವನು ,ಮನಸ್ಸಿನ ಮೂಲಕ ನೆನಪಿಗೆ ತಂದುಕೊಳ್ಳುವತೈಜಸನು,ಈ ಎರಡು ಬಗೆಯ ಅನುಭವವೂ ಇಲ್ಲದ ಪ್ರಾಜ್ಞನು -ಎಂದು ಮೂರು ಬಗೆಯಲ್ಲಿಯೂ ಆತ್ಮನು ಎಚ್ಚರದಲ್ಲಿಯೇ ತೋರಿಬರುತ್ತಿರುವನು.ಸ್ಥೂಲವಾದ ವಿಷಯಗಳು ವಿಶ್ವನಿಗೆ,ಸೂಕ್ಷ್ಮವಾದ ವಿಷಯಗಳ ಭೋಗವು ತೈಜಸನಿಗೆ,ವಿಷಯಭೋಗದ ಆಯಾಸವಿಲ್ಲದ ಆನಂದ ಭೋಗವು ಪ್ರಾಜ್ಷನಿಗೆ-ಹೀಗೆ ಭೋಗಗಳ ಉಪಾಧಿಯಿಂದಲೂ ಅತ್ಮನು ಒಬ್ಬನೇ ಮೂರುವಿಧವಾಗಿ ತೋರುತ್ತಿರುವನು.(ಪುಟ ೯7) 6-೯)ಸುಷುಪ್ತಿಯ ಅತ್ಮನಾದ ಪ್ರಾಣನೇ ಜಗತ್ಸ್ರಷ್ಟøವಾದ ಪ್ರಾಣನು. ಆ ಪ್ರಾಣನಿಂದಲೇ ಚೇತನ ಅಚೇತನಾತ್ಮಕವಾದ ಜಗತ್ತೆಲ್ಲವೂ ಹುಟ್ಟುವುದು. ಪ್ರಾಣನು ಜಗದ್ರೂಪವಾಗುವ ಸೃಷ್ಟಿಯನ್ನು ವಾದಿಗಳು ಬಗೆ ಬಗೆಯಾಗಿ ವಿಕಲ್ಪಿಸಿರುತ್ತಾರೆ.ಆದರೆ ಅವಿದ್ಯೆಯೆಂಬ ಸ್ವಭಾವವೊಂದಲ್ಲದೆ ಈ ಸೃಷ್ಟಿಗೆ ಬೇರೆಯಾವ ಕಾರಣವೂ ಇರುವುದಿಲ್ಲ. 10-15)ನಿಜವಾಗಿ ನೋಡಿದರೆ ಆತ್ಮನಲ್ಲಿ ವಿಶ್ವ,ತೈಜಸ,ಪ್ರಾಜ್ಞ-ಎಂಬ ಮೂರು ರೂಪಗಳು ಇರುವುದಿಲ್ಲ. ಅವನು ಈ ಮೂರು ರೂಪಕ್ಕಿಂತಲೂ ಬೇರೆಯವನಾದ ತುರೀಯನು.ನಾಲ್ಕನೆಯವನು;ಅದ್ವಿತೀಯನು.ಪ್ರಾಜ್ಞ ರೂಪದಲ್ಲಿ ಏನನ್ನೂ ಅರಿಯದ್ದೆಂಬ ಕಾರಣ ಅಜ್ಞಾನವಿರುತ್ತದೆ;ವಿಶ್ವತೈಜಸರಲ್ಲಿ ಈ ಕಾರಣವೂ ಇದರಿಂದಾಗುವ ತಪ್ಪು ತಿಳುವಳಿಕೆಯೆಂಬ ಕಾಯಾ೯ಜ್ಞಾನವೂ ಇರುತ್ತದೆ.ಕಾರಣಾ ಅಜ್ಞಾನರೂಪವಾದ ನಿದ್ರೆಯಾಗಲೀ ಕಾಯ೯ ಅಜ್ಞಾನರೂಪವಾದ ಕನಸಾಗಲೀ ಇಲ್ಲದೆ ತನ್ನ ಚೈತನ್ಯರೂಪವಾದ ಎಚ್ಚರದಲ್ಲಿಯೇ ಇರುವವನು ತುರೀಯನು.ಅಜ್ಞಾನವೂ ಅನ್ಯಥಾ ಜ್ಞಾನವೂ ಆತ್ಮನಿಗೆ ನಿಜವಾಗಿಲ್ಲವೆಂದು ಯಾವನು ಅರಿತುಕೊಳ್ಳುವನೋ ಅವನೇ ನಿಜವಾಗಿ ಆತ್ಮಸ್ವರೂಪವನ್ನು ಪಡೆದುಕೊಂಡವನು.(ಪುಟ ೯7) 16-18)ಜೀವನಿಗೆ ಅನಾದಿ ಮಾಯೆಯಿಂದ ಅಜ್ಞಾನ ಅನ್ಯಥಾ ಜ್ಞಾನಗಳೆಂಬ ಕನಸು ಆಗಿರುತ್ತದೆಯೇ ಹೊರತು ಅವನಲ್ಲಿ ಇವು ಪರಮಾಥ೯ವಾಗಿರುವುದಿಲ್ಲ.ಈ ಕನಸಿನಿಂದ ಎಚ್ಚೆತ್ತಕೂಡಲೇ ಆತ್ಮತತ್ವವು ಹುಟ್ಟಿಲ್ಲದ್ದು,ಯಾವ ನಿದ್ರೆಯಾಗಲೀ ಕನಸಾಗಲೀ ಇಲ್ಲದ್ದು,ತನಗೆರಡನೆಯದಿಲ್ಲದ್ದು ಎಂಬ ಅರಿವು ಆಗುವುದು.ಈಗ ಅವಸ್ಥೆಗಳು ವಿಶ್ವತೈಜಸಾದಿರೂಪಗಳು ಎಂಬ ಪ್ರಪಂಚವಿದೆಯೆಂದೂ ಜ್ಞಾನದಿಂದ ಅದು ಹೋಗುವುದೆಂದೂ ಅಭಿಪ್ರಾಯವಲ್ಲ.ಅದು ಪರಮಾಥ೯ವಾಗಿಲ್ಲವೇ ಇಲ್ಲ.ಆತ್ಮನು ನಿಜವಾಗಿ ಯಾವಾಗಲೂ ಅದ್ವೈತನೇ ಆಗಿರುತ್ತಾನೆ.-ಎಂದು ಅರಿತುಕೊಳ್ಳುವುದೇ ಅದ್ವೈತ ಪ್ರಾಪ್ತಿಯು.ಈ ಜ್ಞಾನವನ್ನು ತಿಳಿಸುವ ಗುರು,ಅದನ್ನರಿಯುವ ಶಿಷ್ಯ -ಎಂಬ ಭೇದವೂ ಪರಮಾಥ೯ವಲ್ಲ.ಅವಿದ್ಯಾಕೃತವಾದ ಈ ಭೇದವು ಪರಮಾಥ೯ಜ್ಞಾನವಾಗುವವರೆಗೆ ನಿಜವೆಂದು ತೋರಿಬರುತ್ತದೆ.ಜ್ಞಾನವುಂಟಾದ ಬಳಿಕ ಈ ಭೇದವೂ ಮಾಯಾಮಾತ್ರವೇ ಎಂಬ ಅರಿವು ಉಂಟಾಗಿಬಿಡುತ್ತದೆ.(ಪುಟ ೯8) 1೯-23)ಆತ್ಮನಲ್ಲಿ ವಾಚ್ಯವಾಚಕರೂಪವಾದ ಭೇದವೂ ಇರುವುದಿಲ್ಲ.ವಾಚ್ಯ ದೃಷ್ಟಿಯಿಂದ ಆತ್ಮನು ಬ್ರಹ್ಮವು.ವಾಚಕ ದೃಷ್ಟಿಯಿಂದ ನೋಡಿದರೆ ಆತ್ಮನು ಓಂಕಾರವು.ವಾಚ್ಯವಾಚಕ ವಿಭಾಗ ರಹಿತನಾದ ತುರೀಯಾತ್ಮನನ್ನು ಓಂಕಾರವೆಂದಾಗಲೀ ಬ್ರಹ್ಮವೆಂದಾಗಲೀ ಕರೆಯುವುದಕ್ಕಿಲ್ಲ.ಬೆಹ್ಮರೂಪವಾದ ಆತ್ಮನಲ್ಲಿ ವಿಶ್ವ,ತೈಜಸ,ಪ್ರಾಜ್ಞ-ಎಂಬ ಪಾದಗಳು ಕಲ್ಪಿತವಾಗಿರುವಂತೆ ಓಂಕಾರರೂಪನಾದ ಆತ್ಮನಲ್ಲಿ ಅಕಾರ,ಉಕಾರ,ಮಕಾರ-ಎಂಬ ಪಾದವಾಚಕಗಳಾದ ಮಾತ್ರೆಗಳು ಕಲ್ಪಿತವಗಿರುವುವು.ಕಲ್ಪಿತ ಪಾದಗಳಿಗಿಂತ ವಿಲಕ್ಷಣನದ ತುರೀಯಾತ್ಮನೇ ಕಲ್ಪಿತಮಾತ್ರೆಗಳಿಗಿಂತ ವಿಲಕ್ಷಣವಾದ ಓಂಕಾರವು.ತುರೀ ಯ ತತ್ವವು ಪಾದವೂ ಅಲ್ಲ,ಮಾತ್ರೆಯೂ ಅಲ್ಲ.(ಪುಟ ೯8) 24-2೯)ಇಂಥ ವಾಚ್ಯವಾಚಕ ಭಾವ ವಿಲಕ್ಷಣವಾದ ಓಂಕಾರವೇ ಪ್ರಣವವು.ಇದನ್ನು ಪಾದಗಳು ಮಾತ್ರೆಗಳು ಎಂಬ ಕಲ್ಪಿತೋಪಾಯದಿಂದ ತಿಳಿದುಕೊಂಡು ಅದರಲ್ಲಿಯೇ ಚಿತ್ತವನ್ನು ಇಟ್ಟುಕೊಂಡವರಿಗೆ ಅಂಜಿಕೆಯಿಲ್ಲ.ಪರಬ್ರಹ್ಮವೆಂದೂ ಅಪರ ಬ್ರಹ್ಮವೆಂದೂ ಶ್ರುತಿಯು ಹೇಳುವುದು ಈ ಪ್ರಣವವನ್ನೇ.ಇದು ಆದಿಮಧ್ಯಾಂತ ರಹಿತವಾದದ್ದು.ಎಲ್ಲಕ್ಕೂ ಅದಿ ಮಧ್ಯಾಂತವು ಇದೇ.ಇದೇ ಜೀವರ ಹೃದಯದಲ್ಲಿರುವ ಈಶ್ವರನೆಂಬುದು.ಈ ಅಮಾತ್ರವಾದ ಅಪರಿಚ್ಛಿನ್ನವಾದ ಪ್ರಪಂಚೋಪಶಮವಾದ ಓಂಕಾರವನ್ನು ಯಾವನು ಅರಿತಿರುವನೋ ಅವನೇ ಮುನಿಯು.(ಪುಟ ೯8) 2) ವೈತಥ್ಯ ಪ್ರಕರಣ: ಆಗಮ ಪ್ರಕರಣಗಳಲ್ಲಿ ತೋರಿಸಿರುವಂತೆ ಅಭಿದಾನ ಅಭಿದೇಯಗಳಿಂದ ವಿಲಕ್ಷಣನಾಗಿರುವ ಆತ್ಮನು ನಿಷ್ಪ್ರಪಂಚನೂಊ ನಿವಿ೯ಕಲ್ಪನೂ ಆಗಿದ್ದರೂ ಎಚ್ಚರ ಕನಸುಗಳಲ್ಲಿ ತಪ್ಪು ತಿಳುವಳಿಕೆಯಿಂದ ಸಪ್ರಪಂಚನೂ ಸವಿಕಲ್ಪನೂ ಆಗಿ ತೋರುವುದರಿಂದ ಶ್ರುತ್ಯಥ೯ವು ಕೇವಲ ಉಪದೇಶ ಮಾತ್ರದಿಂದಲೇ ಮಂದಮಧ್ಯಮ ಬುದ್ಧಿಯುಳ್ಳವರಿಗೆ ನಿಶ್ಚಯವಾಗದೆ ಇರುತ್ತದೆ.ಆದ್ದರಿಂದ ದ್ವೈತವು ಮಿಥ್ಯೆಯೆಂಬುದನ್ನು ಯುಕ್ತಿಯಿಂದಲೂ ತೋರಿಸಿಕೊಡುವುದಕ್ಕಾಗಿ ಈ ಪ್ರಕರಣವನ್ನು ಪ್ರಾರಂಭಿಸಿರುತ್ತದೆ. 1-3)ಸ್ವಪ್ನದಲ್ಲಿ ಕಾಣುವ ದೃಶ್ಯಗಳು ಸಂಕುಚಿತವಾಗಿರುವ ದೇಹದೊಳಗಿನ ಭಾಗದಲ್ಲಿ ಕಂಡು ಬರುತ್ತಿರುವುದರಿಂದಲೂ ಅವಕ್ಕೆ ಬೇಕಾಗಿರುವಷ್ಟು ದೇಶಕಾಲ ನಿಮಿತ್ತಗಳು ಅಲ್ಲಿ ಇರುವುದಿಲ್ಲವದ್ದರಿಂದಲೂ ಎಚ್ಚೆತ್ತ ಕೂಡಲೇ ಅವು ಬಾಧಿತವಾಗುವುದರಿಂದಲೂ ಅವು ಹುಸಿ ಎಂಬ ವಿಷಯವು ಬಲುಮಟ್ಟಿಗೆ ಎಲ್ಲರಿಗೂ ಒಪ್ಪಾಗಿರುತ್ತದೆ.(ಪುಟ 1೯3) 4-10)ಇದರಂತೆಯೇ ಎಚ್ಚರದಲ್ಲಿರುವ ನಮ್ಮೊಳಗಿನ ಮತ್ತು ಹೊರಗಿನ ಪದಾಥ೯ಗಳು ಹುಸಿಯೆಂದೇ ಒಪ್ಪಬೇಕು.ಏಕೆಂದರೆ ಅವೂ ಸ್ವಪ್ನದ ಪದಾಥ೯ಗಳಂತೆ ದೃಶ್ಯವೇ ಆಗಿರುತ್ತವೆ.ಸ್ವಪ್ನ ಪದಾಥ೯ಗಳು ಒಳಗೆ ಸಂಕುಚಿತ ಪ್ರದೇಶದಲ್ಲಿದೆ ಎಂಬ ವಿಶೇಷವಿರುವುದು ನಿಜ.ಆದರೆ ಸರಿಯಾಗಿ ವಿಚಾರ ಮಾಡಿದರೆ ಈ ಎರಡವಸ್ಥೆಗಳಿಗೂ ಒಂದೇ ಬೆಲೆ ಇದೆ ಎಂದು ನಿಶ್ಚಯವಾಗುವುದು.ಹೇಗೆಂದರೆ ಈ ಎರಡವಸ್ಥೆಗಳಲ್ಲಿಯೂ ವಸ್ತುಗಳು ಗ್ರಾಹ್ಯ,ಗ್ರಾಹಕ ಎಂದು ವಿಭಕ್ತವಾಗಿಯೇ ತೋರುತ್ತಿರುವುವು.ಈ ಎರಡು ಅವಸ್ಥೆಗಳೂ ಆತ್ಮನಲ್ಲಿಯೇ ತೋರುತ್ತಿರುತ್ತವೆ.ತೋರುವ ಕಾಲಕ್ಕಿಂತ ಹಿಂದೆ ಇರಲಿಲ್ಲ,ಬಾಧಿತವಾದ ಮೇಲೆ ಇರುವುದಿಲ್ಲ-ಎಂಬುದು ಈ ಎರಡಕ್ಕೂ ಸಮಾನವಾಗಿರುತ್ತದೆ.ಅವು ಮತ್ತೊಂದು ಅವಸ್ಥೆಯಲ್ಲಿಲ್ಲ.ಆಯಾ ಅವಸ್ಥೆಯಲ್ಲಿಯೇ ಅವು ಆತ್ಮನಿಗೆ ಸೇರಿದಂತೆ ಕಾಣುತ್ತಿರುವುದು.ಆದ್ದರಿಂದ ಅವು ಪರಮಾಥ೯ವೆನಿಸಲಾರವು.ಒಳಗೆ ಮನಸ್ಸಿನಲ್ಲೇ ತೋರಿಕೊಂಡು ಮರೆಯಾಗುವ ಭಾವಗಳು,ಹೊರಗೆ ಒಂದರ ಜೊತೆಗೆ ಮತ್ತೊಂದು ಇರುವಂತೆ ತೋರುವ ಭಾವಗಳು.ಒಳಗೆ ಅವ್ಯಕ್ತವಾಗಿ ತೋರುವ ಮತ್ತು ಹೊರಗೆ ವ್ಯಕ್ತವಾಗಿ ಕಾಣಿಸುವ ಭಾವಗಳು-ಇವೆಲ್ಲವೂ ಕಲ್ಪಿತವಾಗಿಯೇ ಇರುತ್ತವೆ.ಅವುಗಳು ತೋರಿಕೊಳ್ಳುವ ಬಗೆಯಲ್ಲಿ ಯಾವ ವೈಲಕ್ಷಣ್ಯವೂ ಇರುವುದೇ ಇಲ್ಲ.ಸ್ವಪ್ನದೃಶ್ಯಗಳಿಗೆ ದೇಶಕಾಲಗಳು ತಕ್ಕಷ್ಟು ಇರುವುದಿಲ್ಲವೆನ್ನುವುದಾದರೂ ಎಚ್ಚರದ ದೃಷ್ಟಿಯಿಂದ ನೋಡಿದಾಗ ಸರಿ;ಆದರೆ ಅಷ್ಟುಮಾತ್ರದಿಂದ ಈ ಎರಡು ಒಂದಕ್ಕಿಂತ ಒಂದು ವಿಲಕ್ಷಣವೆಂದೇನೂ ಆಗುವ ಹಾಗಿಲ್ಲ.ಆದ್ದರಿಂದ ಈ ಎರಡೂ ಅವಸ್ಥೆಗಳೂ ಹುಸಿ ಎಂಬುದೇ ಸರಿ. 11-18)ಈ ಎರಡು ಅವಸ್ಥೆಗಳೂ ಹುಸಿಯೇ ಎಂದಾದ್ದರಿಂದ ಬೌದ್ಧರ ಸಿದ್ಧಾಯವೇ ಕೊನೆಯೆಂದು ಆಗುವುದಿಲ್ಲ.ಏಕೆಂದರೆ ಈ ಅವಸ್ಥೆಗಳಲ್ಲಿ ತೋರುವ ವಿಕಲ್ಪಗಳಿಗೆಲ್ಲ ಆಸ್ಪದವಾಗಿ ಒಬ್ಬ ಆತ್ಮನು ಇರುತ್ತಾನೆಂಬುದೇ ಈ ವಿಚಾರದಿಂದ ಏಪ೯ಡುತ್ತದೆ.ಆದ್ದರಿಂದ ಆತ್ಮನನ್ನೇ ಕತೃ೯,ಕಮ೯,ಕರಣ--ಎಂದು ವಿಕಲ್ಪಿಸಿಕೊಳ್ಳುತ್ತಾರೆ-ಎಂಬುದು ವೇದಾಂತ ಸಿದ್ಧಾಂತ.ಹೇಗೆಂದರೆ ಯಾವ ವಿಕಲ್ಪಗಳೀ ಇಲ್ಲದ ಆತ್ಮನಲ್ಲಿ ಜೀವತ್ವವೂ, ಆ ಜೀವನಿಗಾಗಿ ಕ್ರಿಯೆ,ಕಾರಕ,ಫಲ-ಎಂದು ವಿಂಗಡಿಸಿಕೊಂಡು ತೋರುವ ಬಗೆಬಗೆಯಭಾವಗಳೂ ವಿಕಲ್ಪಿತವಾಗಿರುತ್ತವೆ.ಹೀ ಗೆ ಅವಿದ್ಯೆಯಾದ ಅನಾದಿಯ ನಿಮಿತ್ತದಿಂದ ಆತ್ಮನಲ್ಲಿ ಧಮಾಧಮ೯ಗಳೆಂಬ ಹೇತು ದೇಹಾಂತರ ಪ್ರಾಪ್ತಿಯೆಂಬ ಫಲ-ಇವುಗಳೂ ಆತ್ಮನಲ್ಲಿ ವಿಜ್ಞಾನಗಳೂ ,ಸ್ಮøತಿಗಳೂ ಪರಸ್ಪರ ನೈಮಿತ್ತಿಕ ಭಾವದಿಂದ ಕಲ್ಪಿತವಾಗಿರುತ್ತವೆ. ಇದೇ ಸಂಸಾರವೆಂಬುದು.ಇದು ಹಗ್ಗ ಎಂದು ನಿಶ್ಚಯಿಸಿಕೊಳ್ಳದೆ ಇರುವಾಗ ಹಾವು,ನೀರುಕೋಡಿ-ಎಂದು ಮುಂತಾಗಿ ವಿಕಲ್ಪಿತವಾಗಿರುವಂತೆಯೇ ಇದನ್ನು ತಿಳಿಯಬೇಕು.ಹಗ್ಗವೆಂದು ನಿಶ್ಚಯಿಸಿಕೊಂಡ ಬಳಿಕ ಹೇಗೆ ಹಾವೇ ಮುಂತಾದ ವಿಕಲ್ಪಗಳೆಲ್ಲವೂ ತೊಲಗುವವೋ ಹಾಗೆಯೇ 'ಅದ್ವೈತಾತ್ಮನೊಬ್ಬನೇ ಪರಮಾಥ೯ವು,ಅವನೇ ನಾನು'ಎಂಬ ನಿಶ್ಚಯವಾಗುತ್ತಲೂ ಸಂಸಾರ ವಿಕಲ್ಪಗಳೆಲ್ಲವೂ ತೊಲಗುವವು 20-28)ಅದ್ವೈತಾತ್ಮನಲ್ಲಿ 'ಪ್ರಾಣ','ಭೂತಗಳು','ಗುಣಗಳು' 'ತತ್ವಗಳು''ವಾದಗಳು''ವಿಷಯಗಳು','ಲೋಕಗಳು','ದೇವತೆಗಳು','ವೇದಗಳು',ಯಜ್ಞಗಳು,'ಭೋಕ್ತø', 'ಭೋಗ್ಯ','ಸೂಕ್ಷ್ಮ','ಸ್ಥೂಲ','ಮೂತ೯','ಅಮೂತ8','ಕಾಲ','ದಿಕ್ಕುಗಳು','ಪಾದಗಳು','ಭುವನಗಳು','ಮನಸ್ಸು','ಬುದ್ಧಿ','ಚಿತ್','ಧಮಾಧಮ೯ಗಳು','ಇಪ್ಪತ್ತೈದನೆಯವನು','ಇಪ್ಪತ್ತಾರನೆಯವನು','ಮೂವತ್ತೊಂದನೆಯವನು','ಅಸಂಗನು','ಸ್ರೀ ಪುರುಷ ನಪುಂಸಕ','ಪರ,ಅಪರ',ಸೃಷ್ಟಿ,ಸ್ಥಿತಿ,ಲಯ'-ಎಂದು ಮುಂತಾಗಿರುವ ಎಲ್ಲಾ ವಿಕಲ್ಪಗಳೂ ಅಭಿನಿವೇಶಮಾತ್ರದಿಂದ ತೋರುತ್ತಿರುತ್ತದೆ.ಅದ್ದರಿಂದ ಗುರುವು ಹೆಗೆ ಉಪದೇಶಮಾಡುವನೋ ಹಾಗೇ ಸರಿ-ಎಂದು ಸಾಧಕನಿಗೆ ತೋರುತ್ತದೆ.ಅ ನಿಶ್ಚಯದಿಂದ ಮಿಕ್ಕ ಯಾವ ಭಾವನೆಗಳೂ ಅವನ ಮನಸ್ಸಿಗೆ ಒಗ್ಗದಂತೆ ಆಗುವುದು.ನಿಜವಾಗಿ ನೋಡಿದರೆ ಈ ಭಾವಗಳೆಲ್ಲದರ ತತ್ವವೇ ಅವನು.(ಪುಟ 1೯4) 2೯-32) ಆತ್ಮನಲ್ಲಿ ಕಲ್ಪಿತವಾಗಿರುವ ಪ್ರಾಣದಿ ಭಾವಗಳು ಆಯಾ ಅಭಿಮಾನದಿಂದಲೇ ತೋರುತ್ತಿರುತ್ತವೆ.ಆದ್ದರಿಂದ ಯಾವನ ಉಪದೇಶದಿಂದ ಯಾವನು ಅದೇ ತತ್ವವೆಂದು ತಿಳಿದುಕೊಳ್ಳುವನೋ ಅವನಿಗೆ ಅದೇ ಆತ್ಮನಲ್ಲಿ ಆ ಭಾವವನ್ನು ಕಂಡುಕೊಂಡದ್ದರಿಂದ ಮಿಕ್ಕ ಭಾವಗಳನ್ನೂ ಕಾಣದಂತೆ ಆಗುವುದು.ನಿಜವಾಗಿ ಈ ಭಾವಗಳಿಗೆಲ್ಲ ಅದ್ವೈತವೇ ತತ್ವವು ಎಂದು ಯಾವನು ಅರಿತುಕೊಳ್ಳುವನೋ ಅವನಿಗೇ ವೇದಾಥ೯ದ ವಿಜವು ಗೊತ್ತಾಗಿರುತ್ತದೆ.ಭೇದಗಳೆಲ್ಲ ನಮ್ಮ ನಮ್ಮ ಕನಸಿನಂತೆಯೂ ಮಾಯೆಯಂತೆಯೂ ಗಂಧವ೯ನಗರವೇ ಮುಂತಾದದ್ದರಂತೆಯೂ ಹುಸಿಯಾಗಿಯೇ ಇದ್ದುಕೊಂಡು ಸತ್ಯವಾಗಿರುವಂತೆ ಕಾಣಿಸಿಕೊಳ್ಲುತ್ತಿರುವವು.ಅದರೆ ನಿಜವೇನೆಂದರೆ ಸೃಷ್ಟಿ,ಪ್ರಳಯ-ಮುಂತಾದ ಯಾವ ವಿಕಲ್ಪವೂ ಆತ್ಮನಲ್ಲಿ ನಿಜವಾಗಿಯೂ ಇರುವುದಿಲ್ಲ.ಸಾಧ್ಯ,ಸಾಧನ-ಮುಂತಾದ ವಿಂಗಡವು ನಿಜವಾಗಿಲ್ಲವೇ ಇಲ್ಲ-ಎಂಬುದೇ ವೇದಾಂತೋಕ್ತವಾಗಿರುವ ಪರಮಾಥ೯ವು.(ಪುಟ1೯4) 33-38)ಆತ್ಮನು ಯಾವಾಗಲೂ ಅದ್ವೈತ ಸ್ವರೂಪನೇ ಆಗಿರುವುದರಿಂದ ಅವನಲ್ಲಿ ಯಾವ ದ್ವೈತವೂ ಇರುವುದೇ ಇಲ್ಲ.ಆದ್ದರಿಂದ ಅದ್ವೈತವೇ ಮಂಗಲಕರವಾದದ್ದು.ವಿಕಲ್ಪಗಳು ತಾವು ತೋರುವ ರೂಪದಿಂದ ಒಂದಕ್ಕಿಂತ ಒಂದು ಬೇರೆಯೂ ಇಲ್ಲ.ಒಂದೇ ತತ್ವವೂ ಅಲ್ಲ.ಇವೆಲ್ಲವೂ ಆತ್ಮನೆ ಎಂಬುದನ್ನು ಕಂಡುಕೊಂಡಾಗಲೂ ಇವು ಇರುವುದೇ ಇಲ್ಲ-ಎಂಬುದು ತತ್ವಜ್ಞಾನಿಗಳ ಅಭಿಪ್ರಾಯ.ಈ ಅದ್ವೈತಾತ್ಮತತ್ವವು ಸವ೯ಪ್ರಪಂಚಶೂನ್ಯವಾಗಿರುವ ಮಂಗಲಕರವಾದದ್ದು.ರಾಗ,ಭಯ,ಕ್ರೋಧ-ಮುಂತಾದ ಚಿತ್ತದೋಷಗಳು ಯಾವುವೂ ಇಲ್ಲದವರೂ ವೇದಾಂತದ ಮಮ೯ವನ್ನು ಬಲ್ಲವರೂ ಆದ ಮುನಿಗಳಿಗೆ ಮಾತ್ರ ಇದು ತಿಳಿಯುವುದು.ಅವರಿಗೆ ಅದ್ವೈತಾನುಸಂಧಾನವು ನಿತ್ಯಸಿದ್ಧವಾಗಿರುತ್ತದೆ.ಅಂತವರು ತಮ್ಮ ವಿದ್ಯೆ,ವಿನಯ-ಇವುಗಳನ್ನು ತೋರಿಸಿಕೊಳ್ಳದೆ ಪರಮಹಂಸ ಪರಿವ್ರಾಜಕರಾಗಿ ತಮಗೆ ಒದಗಿದಷ್ಟೂ ಜೀವನಸಾಧನದಿಂದ ಸಂತುಷ್ಟರಾಗಿ ವ್ಯವಹರಿಸುತ್ತಿರುವರು.ಅಂತೂ ಹೀಗೆ ಹೊರಗೆ ಕಾಣುವ ದ್ವೈತವನ್ನೂ ಒಳಗಿನ ದ್ವೈತವನ್ನೂ ಎಲ್ಲವೂ ಆತ್ಮನಲ್ಲಿ ಕಲ್ಪಿತವಾಗಿರುವ ಹುಸಿತೋರಿಕೆಯೆಂಬುದನ್ನು ಗೊತ್ತು ಮಾಡಿಕೊಂಡು ಸವ೯ಕ್ಕೂ ಆಧಾರವಾಗಿರುವ ತತ್ವವೇ ತಾನಾಗಿ ಯಾರು ತತ್ವದಿಂದ ಸ್ವಲ್ಪವೂ ಕದಲದೆ ತತ್ವನಿಷ್ಠರಾಗಿರುವರೋ ಅವರು ಕೃತಕೃತ್ಯರು.(ಪುಟ 1೯5) 3) ಅದ್ವೈತ ಪ್ರಕರಣದ ಸಾರ: ವೈತಥ್ಯ ಪ್ರಕರಣದಲ್ಲಿ ದ್ವೈತವೆಲ್ಲವೂ ತೋರುವ ರೂಪದಿಂದ ಮಿಥ್ಯೆಯೆಂದು ನಿಶ್ಚಯಿಸಿರಿವುದರಿಂದಲೇ ಅದ್ವೈತವೇ ಪರಮಾಥ೯ವೆಂದು ನಿಶ್ಚಿತವಾಗುತ್ತದೆಯಾದರೂ ದ್ವೈತದಂತೆ ಅದ್ವೈತವೂ ಏತಕ್ಕೆ ಮಿಥ್ಯೆಯಾಗಿರಬಾರದು ?-ಎಂದು ಮಂದ ಮತಿಗಳಾದವರು ಯಾರಾದರೂ ಶಂಕಿಸಬಹುದು.ಆ ಶಂಕೆಯನ್ನು ಪರಿಹರಿಸುವುದಕ್ಕಾಗಿ ತಕ೯ದಿಂದಲೂ ಅದ್ವೈತವನ್ನು ಸಾದಿಸುವುದಕ್ಕಾಗಿ ಈ ಪ್ರಕರಣವನ್ನು ಪ್ರಾರಂಭಿಸಿರುತ್ತದೆ. 1-2)ವೇದಾಂತಗಳೆಲ್ಲವೂ ಉಪಾಸನಾ ವಿಧಿಪರವೆಂದೂ ಬ್ರಹ್ಮವು ಜಗದ್ರೂಪವಾಗಿ ಪರಿಣಮಿಸಿರುವುದರಿಂದ ,ಜೀವನು ಬ್ರಹ್ಮೋಪಾಸನೆಯನ್ನು ಮಾಡಿಅಜಾದ್ವಯ ಬ್ರಹ್ಮಸ್ವರೂಪವನ್ನು ಪಡೆಯಬೇಕಾಗಿದೆಯೆಂದೂ ಹೇಳುವ ವಾದಿಗಳ ಮತವು ಮಿಥ್ಯಾಜ್ಞಾನ ನಿಮಿತ್ತವಾಗಿದೆ ಎಂಬುದನ್ನು ತೋರಿಸಿಕೊಡುವುದಕ್ಕಗಿ ಮೊಟ್ಟ ಮೊದಲು ಅಜಾದ್ವಯ ಬ್ರಹ್ಮ ವಾದವನ್ನು ಜಿಜ್ಞಾಸುಗಳಿಗೆ ಮನಗಾಣಿಸುವುದಕ್ಕಾಗಿ ಅಜಾತವಾದವನ್ನು ಪ್ರಾರಂಭಿಸಿದೆ.(ಪುಟ 327) 3-10)ಜೀವರುಗಳಾಗಲೀ ಅವರ ಉಪಾಧಿಗಳಾಗಿರುವ ಕಾಯ೯ಕರಣಸಂಘಾತಗಳಾಗಲಿ ನಿಜವಾಗಿ ಹುಟ್ಟುವಂತಿಲ್ಲ.ಸ್ರುತಿಗಳು ಕೆಲವು ಇವುಗಳ ಉತ್ಪತ್ತಿಯನ್ನು ಹೇಳುವಂತೆ ತೋರುತ್ತಿರುವುದುಂಟು. ಆಕಾಶವು ಘಟಾದಿಗಳ ರೂಪದಿಂದಲೂ ಘಟಾಕಾಶಾದಿಗಳ ರೂಪದಿಂದಲೂ ತೋರಿಕೊಳ್ಳುತ್ತಿರುವಂತೆಯೇ ಅಜಾದ್ವಿತೀಯವಾದ ಬ್ರಹ್ಮವೆ ಜೀವರ ಮತ್ತು ಜೀವರ ಉಪಾಧಿಗಳಾದ ಕಾಯ೯ಕರಣ ಸಂಘಾತಗಳ ರೂಪದಿಂದ ತೋರುತ್ತಿದೆ.ಇದೇ ಉತ್ಪತ್ತಿ ಎಂದು ತಿಳಿಸಿಕೊಡುವುದೇ ಶ್ರುತಿಗಳ ಉದ್ದೇಶ.ಜೀವರ ಉತ್ಪತ್ತಿಯು ಹೇಗೆ ಕೇವಲ ಬರಿಯ ತೋರಿಕೆಯೋ ಹಾಗೆಯೇ ಸ್ಥಿತಿ,ಗತ್ಯಾಗತಿ,ಮರಣ-ಇವೆಲ್ಲವೂ ಘಟಾಕಾಶದ ಸ್ಥಿತ್ಯಾದಿಗಳಂತೆ ಉಪಾಧಿ ನಿಮಿತ್ತವೆಂದು ತಿಳಿಯಬೇಕು; ಉಪಾಧಿಗಳಾದ ಸಂಘಾತಗಳು ವೈತಥ್ಯ ಪ್ರಕರಣದಲ್ಲಿ ಹೇಳಿರುವ ಯುಕ್ತಿಗನುಸಾರವಾಗಿ ಕನಸಿನಲ್ಲಿ ತೋರುವ ಕಾಯ೯ಕರಣ ಸಂಘಾತಗಳಂತೆಯೇ ಮಿಥ್ಯೆಯಾಗಿರುತ್ತದೆ. ಆದ್ದರಿಂದ ಆತ್ಮರು ಅನೇಕರು ಬೇರೆ ಬೇರೆ,ಒಬ್ಬರಿಗಿಂತ ಒಬ್ಬರು ವಿಲಕ್ಷಣ ಸ್ವಭಾವದವರು-ಎಂದು ಹೇಳುವುದು ನಿಯು೯ಕ್ತಿಕವಾಗಿದೆ.(ಪುಟ327) 11-15) ಇ ಅತ್ಮೈಕತ್ಯವನ್ನು ತೈತ್ತಿರೀಯೋಪನಿಷತ್ತಿನ ಬ್ರಹ್ಮಾನಂದವಲ್ಲಿಯಲ್ಲಿಯೂ ಬೃಹದಾರಣ್ಯಕದ ಮಧುಬ್ರಾಹ್ಮಣದಲ್ಲಿಯೂ ಹೆಳಿದೆ.ಜೀವ ಪರಮಾತ್ಮರು ಬೇರೆಯಲ್ಲವೆಂಬುದನ್ನೂ ಶ್ರುತಿಸ್ಮøತಿಗಳಲ್ಲಿ ಹೊಗಳಿರುತ್ತದೆ.ಅವರು ಬೇರೆ ಬೇರೆ ಎಂಬ ಅಭಿಪ್ರಾಯವನ್ನು ನಿಂದಿಸಿರುತ್ತದೆ.ಇವೆರಡೂ ಅಜಾದ್ವಯ ಬ್ರಹ್ಮವಾದಕ್ಕೆ ಹೊಂದುತ್ತವೆಯೇ ಹೊರತು ಜೀವರುಗಳು ನಿಜವಾಗಿಯೂ ಬೇರೆಬೇರೆಯಾಗಿ ಹುಟ್ಟಿರುತ್ತಾರೆ ಎಂಬುದರ ಮತಕ್ಕೆ ಹೊಂದುವುದಿಲ್ಲ.ಎಲ್ಲೆಲ್ಲಿ ಮಣ್ನು,ಲೋಹ,ಕಿಡಿಗಳು-ಮುಂತದ ದೃಷ್ಟಾಂತಗಳಿಂದ ಸೃಷ್ಟಿಯನ್ನು ಹೇಳಿರುವಂತೆ ಕಂಡು ಬರುತ್ತದೆಯೋ ಅಲ್ಲೆಲ್ಲ ಕಾಯ೯ವು ವಾಚಾರಂಭಣ-ಬರಿಯ ಮಾತಿನಿಂದ ತೋರುವ ಬರಿಯ ವಿಕಲ್ಪವೆಂದು ಶ್ರುತಿಯು ಸ್ಪಷ್ಟವಾಗಿ ಹೇಳಿದೆ.ಸೃಷ್ಟಿಶ್ರುತಿಗಳು ಅದ್ವೈತ ಜ್ಞಾನಕ್ಕೆ ಶ್ರೋತೃವಿನ ಚಿತ್ತವನ್ನು ಅಣಿಮಾಡುವುದಕ್ಕೆ ಉಪಾಯ ಮಾತ್ರವೆಂದು ಗೊತ್ತಾಗುತ್ತದೆ.(ಪುಟ328) 16)ಇದೇ ಸಿದ್ಧಾಂತವಾದರೆ ಶ್ರುತಿಗಳಲ್ಲಿ ಉಪಾಸನೆಯನ್ನೂ ಕಮ೯ವನ್ನೂ ಹೇಳಿರುವುದೇಕೆ?-ಎಂಬ ಶಂಕೆಗೆ ಪರಿಹಾರವೇನೆಂದರೆ ,ಅಧಿಕಾರಿಗಳು ಉತ್ತಮ,ಮಧ್ಯಮ ,ಅಧಮ-ಎಂದು ಮೂರು ತರಗತಿಯವರಾಗಿರುವುದರಿಂದ ಮಂದ ಮಧ್ಯಮಾಧಿಕಾರಿಗಳಿಗಾಗಿ ವೇದವು ಉಪಾಸನೆಯನ್ನೂ ಕಮ೯ವನ್ನೂ ವಿಧಿಸಿರುತ್ತದೆ.ಆ ಅಧಿಕಾರಿಗಳೂ ಕ್ರಮವಾಗಿ ಈ ಉತ್ತಮವಾದ ಆತ್ಮೈಕತ್ವದೃಷ್ಟಿಯನ್ನು ಸಂಪಾದಿಸಿಕೊಳ್ಳಲಿ ಎಂಬುದೇ ಹಾಗೆ ವಿಧಿಸಿರುವುದರ ಉದ್ದೇಶ.ಆದ್ದರಿಂದ ಶ್ರುತಿಯಲ್ಲಿ ಉಪಾಸನೆಯನ್ನೂ ಕಮ೯ವನ್ನು ಉಪದೇಶ ಮಾಡಿದೆ ಎಂಬುದೇನೂ ಅಜಾದ್ವರ ಬ್ರಹ್ಮವಾದಕ್ಕೆ ಅಡ್ಡಿಯಾಗಲಾರದು.(ಪುಟ 328) 17-18)ಅಜಾದ್ವಯ ದಶ೯ನವು ದ್ವೈತಿಗಳ ದಶ೯ನಕ್ಕೆ ವಿರುದ್ಧವೆಂಬ ಕಾರಣದಿಂದಲೂ ಪರಿತ್ಯಾಜ್ಯವಲ್ಲ.ಏಕೆಂದರೆ ದ್ವೈತಿಗಳ ದಶ೯ನಗಳು ಒಂದಕ್ಕೊಂದು ವಿರುದ್ಧವಾಗಿರುತ್ತವೆ.ಶಾಸ್ತ್ರವಿರುದ್ಧವೂ ಆಗಿದೆ.ಆದ್ದರಿಂದ ಅವು ಯಥಾಥ೯ದಶ೯ನಗಳಲ್ಲ.ಅದ್ವೈತವಾದರೋ ಶಾಸ್ತ್ರ ಯುಕ್ತಿಗಳೆರಡಕ್ಕೂ ಸಮ್ಮತವಾಗಿರುವುದರಿಂದ ಪರಮಾಥ೯ವಾಗಿವೆ.ದ್ವೈತವು ಅದ್ವೈತದಲ್ಲಿ ಹುಟ್ಟುಗಟ್ಟಿರುವ ವಿಕಲ್ಪವಾದ್ದರಿಂದ ಈ ಅದ್ವೈತವಾದವು ದ್ವೈತ ದಶ೯ನಗಳಿಗೆ ವಿರುದ್ಧವೆಂದು ಆಕ್ಷೇಪಿಸುವಂತಿಲ್ಲ.(ಪುಟ328) 1೯-27)ಅದ್ವೈತವೇ ಪರಮಾಥ೯ವಾಗಿದ್ದು ದ್ವೈತದಂತೆ ಕಾಣುತ್ತದೆ-ಎಂದು ಒಪ್ಪದಿದ್ದರೆ ಅಮೃತವಾದ ಬ್ರಹ್ಮವು ಮತ್ಯ೯ವಾದ ಜೀವರಾಗಿ ಮಾಪ೯ಡುವದೆಂದೂ ಈಗ ಮತ್ಯ೯ವಾಗಿರುವ ಜೀವರು ಮುಕ್ತಿಯಲ್ಲಿ ಅಮೃತರಾಗಿ ಮಾಪ೯ಡುವರೆಂದೂ ಹೇಳಬೇಕಾಗುವುದು.ಆದರೆ ವಸ್ತುಸ್ವಭಾವವು ಎಂದಿಗೂ ಮಾಪ೯ಡಲಾರದು.ಆದ್ದರಿಂದ ಈ ದೋಷವನ್ನು ಪರಿಹರಿಸಿಕೊಳ್ಳುವುದಕ್ಕಾಗಿ ಅಜಾತಿ(ಯಾವುದೂ ಹುಟ್ಟುವುದಿಲ್ಲ) ಎಂಬುದೇ ಪರಮಾಥ೯.ಜಾತಿ(ಹುಟ್ಟುವಿಕೆ)ಎಂಬುದು ಮಾಯಿಕ-ಎಂದು ಎಲ್ಲಾ ವಾದಿಗಳೂ ಒಪ್ಪಬೇಕು.ಆಗ ಸೃಷ್ಟಿ ಶ್ರುತಿಗಳು ಮಾಯಾ ಸೃಷ್ಟಿಯನ್ನು ಹೇಳುತ್ತವೆಯೆಂದು ಹೇಳಬಹುದಾಗುತ್ತದೆ.ಅಷ್ಟರಿಂದಲೇ ಸೃಷ್ಟಿವಾಕ್ಯಗಳೆಲ್ಲವೂ ಆತ್ಮೈಕತ್ವಜ್ಞಾನಕ್ಕೆ ಉಪಾಯ ಮಾತ್ರವೆಂದು ಹೇಳುವುದಕ್ಕೂ ಬರುತ್ತದೆ. ದೈತವನ್ನು ಶ್ರುತಿಯಲ್ಲಿ ಅಲ್ಲಗಳೆದಿರುವದೂ ಆತ್ಮೈಕತ್ವನ್ನು ತಿಳಿಸುವುದಕ್ಕೆ ಬಳಸಿದ್ದ ಉಪಾಯವನ್ನೆಲ್ಲಾ 'ಹೀಗಲ್ಲ,ಹೀಗಲ್ಲ' ಎಂದು ಅಲ್ಲಗಳೆದಿರುವುದೂ ಈ ಮತದಲ್ಲಿಯೇ ಸಮಂಜಸವಾಗುವುದು.ಆದ್ದರಿಂದ ಅದ್ವೈತವು ಮಾಯೆಯಿಂದ ಜನ್ಮವನ್ನು ಪಡೆದಂತೆ ತೋರಿಕೊಳ್ಳುತ್ತಿದೆ ಎಂಬುದೇ ಸರಿ.(ಪುಟ 32೯) 28-30)ಅಸತ್ಕಾಯ೯ವೂ ಸರಿಯೆಂದಾಗಲಿ!ಎಂದು ವಾದಿಸುವುದು ಸರಿಯಾಗಲಾರದು.ಏಕೆಂದರೆ ಅಸತ್ಪದಾಥ೯ಕ್ಕೆ ನಿಜವಾಗಿಯಾಗಲೀ ಮಾಯೆಯಿಂದಾಗಲೀ ಜನ್ಮವು ಉಂಟಾಗಲಾರದು.ಆದ್ದರಿಂದ ಸ್ವಪ್ನದಲ್ಲಿ ನಾನೊಬ್ಬನೇ ಇರುವ ಆತ್ಮನೇ ಮನಃಸ್ಪಂದನ ಮಾತ್ರದಿಂದ ದ್ವೈತ ಪ್ರಪಂಚವಾಗಿ ತೋರುತ್ತಿರುವಂತೆಯೇ ಎಚ್ಚರದಲ್ಲಿಯೂ ಅದ್ವಯಾತ್ಮನಲ್ಲಿ ಮನಃಸ್ಪಂದನದಿಂದಲೇ ದ್ವೈತವು ತೋರುತ್ತಿದೆ -ಎಂದು ಒಪ್ಪಬೇಕು.(ಪುಟ32೯) 31-47)ಈ ವಾದವು ಅನುಭವಸಾರಿಯಾಗೂ ಇರುತ್ತದೆ.ಹೇಗೆಂದರೆ ಮನಸ್ಸಿರುವಗ ದ್ವೈತವು ಕಾಣುತ್ತಿರುತ್ತದೆ.ನಸ್ಸು ಅಮನೀ ಭಾವವನ್ನು ಪಡೆದರೆ ದ್ವೈತವು ಕಾಣಿಸುವುದೇ ಇಲ್ಲ.ಅಮನೀ ಭಾವವು ಅಧಿಕಾರಿ ತಾರತಮ್ಯದಿಂದ ಎರಡು ಮಾಗ೯ಗಳಿಂದ ಪ್ರಾಪ್ತವಾಗಬಹುದಾಗಿರುತ್ತದೆ.ಶ್ರುತ್ಯಾಚಾಯ೯ರುಗಳ ಉಪದೇಶದಿಂದ ಆತ್ಮನೊಬ್ಬನೇ ಸತ್ಯವೆಂಬುದನ್ನು ಯಾರು ಕಂಡಿರುವರೋ ಅವರಿಗೆ ಆತ್ಮಸತ್ಯಾನುಭೋಧದಿಂದಲೇ ಮನಸ್ಸು ಅಮನಸ್ಸಾಗಿ ಬಿಡುತ್ತದೆ.ಎಂದರೆ ಅದು ಆತ್ಮಸ್ವರೂಪದಲ್ಲಿಯೇ ಅಡಕವಾಗಿ ಬಿಡುತ್ತದೆ. ಆಗ ಅದ್ವೈತವೇ ಪರಮಾಥ೯ವೆಂಬುದು ಮನದಟ್ಟಾಗಿ ಬಿಡುತ್ತದೆ.ಆದ್ದರಿಂದ ಅವರು ಮಾಡತಕ್ಕದ್ದೇನೂ ಉಳಿದಿರುವುದಿಲ್ಲ. ಆದರೆ ಇನ್ನೂ ಸಾಧನ ಮಾಗ೯ದಲ್ಲಿರುವ ಮಧ್ಯಮಾಧಿಕಾರಿಗಳಿಗೆ ಮನಸ್ಸು ಆತ್ಮನಿಗೆ ಸೇರಿರುತ್ತದೆ ಎಂಬ ಬುದ್ಧಿಯೇ ಇದ್ದುಕೊಂಡಿರುವುದರಿಂದ ಅವರಿಗೆ ಮನೋನಿಗ್ರಹ ಎಂಬ ಉಪಾಯದಿಂದ ಮನಸ್ಸಿಗೆ ಅಮನೀ ಭಾವವು ಪ್ರಾಪ್ತವಾಗಬೇಕಾಗಿರುತ್ತದೆ.ಮನಸ್ಸಿನ ಲಯ,ವಿಷೇಪ,ಸಕಷಾಯತ್ವ,ರಸಾಸ್ವಾದ-ಎಂಬ ವಿಘ್ನಗಳನ್ನು ಪರಿಹಾರ ಮಾಡಿಕೊಂಡಾಗ ಅಧಿಕಾರಿಗಳ ಮನಸ್ಸು ಅಜಾದ್ವಯ ಬ್ರಹ್ಮವೇ ಆಗಿಬಿಡುತ್ತದೆ.ಆಗ ಅಜವಾದ ಬ್ರಹ್ಮವು ಸ್ವಾನುಭವಗೋಚರವಾಗುತ್ತದೆ.(ಪುಟ 32೯) 48) ಈ ಪ್ರಕರಣದಲ್ಲಿ ಹೇಳಿರುವಂತೆ ಉಪಾಸನೆ,ಜಗತ್ಸøಷ್ಟಿ ಮನೋನಿಗ್ರಹ- ಎಂಬ ಉಪಾಯಗಳೂ ಶ್ರುತಿಯಲ್ಲಿ ಉಪದಿಷ್ಟವಾಗಿರುತ್ತವೆಯಾದರೂ ಅವೆಲ್ಲ ಸತ್ಯವೆಂದೇನೂ ಶ್ರುತಿಗೆ ತಾತ್ಪಯ೯ವಿರುವುದಿಲ್ಲ.ಪರಮಾಥ೯ ಸತ್ಯವೆಂದರೆ ಯಾವುದೊಂದೂ ಹೇಗೂ ಹುಟ್ಟಿಯೇ ಇರುವುದಿಲ್ಲ.ಅಜಾದ್ವಯ ಬ್ರಹ್ಮವೊಂದೇ ನಿಜವಾಗಿರತಕ್ಕದ್ದು.(ಪುಟ 32೯) 4) ಅಲಾತಶಾಂತಿ ಪ್ರಕರಣದಸಾರ: ಓಂಕಾರ ನಿಣ೯ಯದ್ವಾರದಿಂದ ಆತ್ಮನು ಅಜಾದ್ವೈತ ತತ್ವನಾಗಿರುತ್ತಾನೆ ಎಂದು ಹೇಳಿತ್ತು.ವೈತಥ್ಯ ಪ್ರಕರಣದಲ್ಲಿ ಹೊರಗಿನ ವಿಷಯಗಳೂ ಅಧ್ಯಾತ್ಮಿಕ ಪ್ರಪಂಚವು ಹುಸಿಯೇ ಎಂದು ಯುಕ್ತಿಪ್ರಧಾನವಾಗಿ ತೋರಿಸಿಕೊಡಲಾಗಿತ್ತು.ಅಜಾದ್ವೈತ ಆತ್ಮನೇ ಪರಮಾಥ೯ ತತ್ವವೆಂಬುದನ್ನು ಶಾಸ್ತ್ರಯುಕ್ತಿಗಳಿಂದ ಅದ್ವೈತ ಪ್ರಕರಣದಲ್ಲಿ ತೋರಿಸಿಕೊಡಲಾಗಿದೆ.(ಪುಟ 506) 1-2)ಉಪನಿಷತ್ತುಗಳಲ್ಲೆಲ್ಲ ಉಪದಿಷ್ಟವಾಗಿರುವ ಅಜಾದ್ವೈತ ದಶ೯ನವು ಅಸ್ಪಶ೯ಯೋಗವೆಂದು ಪ್ರಸಿದ್ಧವಾಗಿರುತ್ತದೆ.ಇಲ್ಲಿ ಜ್ಞಾತೃ,ಜ್ಞೇಯ,ಜ್ಞಾನ-ಈ ಮೂರೂ ವಿಭಕ್ತವಾಗಿಲ್ಲದೆ ಆಕಾಶದಂತೆ ಅಖಂಡವಾಗಿ ಮತ್ತೊಂದರ ಸಂಸ್ಪಶ೯ವಿಲ್ಲದೆ ಇರುತ್ತವೆ.ಇವನ್ನು ಅನುಭವಗಮ್ಯವೆಂದು ಅರಿತಿರುವ ನಾರಾಯಣಾಖ್ಯನಾದ ಪುರುಷೋತ್ತಮನೇ ಇದಕ್ಕೆ ಸಂಪ್ರದಾಯಕತ೯ನು.ಈ ಯೋಗವು ಅವಿವಾದವೂ ಅವಿರುದ್ಧವೂ ಆಗಿರುತ್ತದೆ.ಸವ೯ಪ್ರಾಣಿಗಳ ಸುಖವೂ ಹಿತವೂ ಆಗಿರುತ್ತದೆ.(ಪುಟ 506) 3-10)ದ್ವೈತಿಗಳ ದಶ೯ನಗಳು ಒಂದಕ್ಕೊಂದು ವಿರುದ್ಧವಾಗಿ ವಿವಾದಾಸ್ಪದವಾಗಿ ಇರುತ್ತದೆ. ಅವರಲ್ಲಿ ಕೆಲವರು ಇರುವುದೇ ಹುಟ್ಟುತ್ತದೆ ಎನ್ನುವರು.ಇನ್ನು ಕೆಲವರು ಮೊದಲು ಇಲ್ಲದ್ಧೇ ಹುಟ್ಟುತ್ತದೆ ಎನ್ನುವರು.ಹೀಗೆ ವಿವಾದವನ್ನು ಮಾಡುತ್ತಿರುವುದರಿಂದ ಅದ್ವೈತ ಸಮ್ಮತವಾದ ಅಜಾತಿಯೇ ಸತ್ಯವೆಂಬುದನ್ನು ಅವರು ಹೊರಪಡಿಸಿದಂತಾಗುತ್ತದೆ.ಅಜಾತವಾದದ್ದೇ ಜೀವಭಾವದಿಂದ ಹುಟ್ಟುವುದೆಂದೂ ಅದು ಮತ್ತೆ ಅಜಾತಬ್ರಹ್ಮವಾಗುವುದೆಂದೂ ಹೇಳುವವರು ಅದ್ವೈತಿಗಳಾಗಿದ್ದರೂ ಸ್ವಭಾವವು ಮಾಪ೯ಡಬಹುದೆಂದವರಾಗುತ್ತಾರೆ.ಆದ್ದರಿಂದ ಎಲ್ಲರೂ ಜರಾಮರಣ ರಹಿತರಾಗಿಯೇ ಇದ್ದು ಅವಿದ್ಯಾವಾಸನೆಯಿಂದಲೇ ಸಂಸಾರದಲ್ಲಿ ತೊಳಲುತ್ತಾರೆಂದು ತಿಳಿಯಬೇಕು.506) 11-41) 1) ಅಜವಾದದ್ದು ಹುಟ್ಟುವುದೆಂದರೆ ಹುಟ್ಟಿದ್ದು ಅಜವೆಂಬ ದೋಷಕ್ಕೆ ಪಾತ್ರವಗುವುದು.ಹುಟ್ಟಿದ್ದು ಹುಟ್ಟುತ್ತದೆ ಎಂಬುದೂ ಯುಕ್ತವಲ್ಲ.ಏಕೆಂದರೆ ಒಂದು ಮೊದಲು ಹುಟ್ಟಿದ ಇನ್ನೊಂದರಿಂದ ಹುಟ್ಟಿದೆ ಎಂದಂತಾಗಿ ಅನವಸ್ಥಾ ದೋಷವು ಗಂಟುಬೀಳುವುದು.ಆದ್ದರಿಂದ ಅಜಾತಿಯೇ ಪರಮಾಥ೯ವು. 2)ಧಮಾ೯ಧಮ೯ಗಳೆಂಬ ಹೇತುವಿನಿಂದ ಶರೀರರೂಪವಾದ ಫಲವು ಹುಟ್ಟುವುದೆಂಬುದಾಗಲೀ,ಶರೀರರೂಪವಾದ ಫಲದಿಂದ ಧಮಾ೯ಧಮ೯ಗಳು ಉಂಟಾಗುತ್ತವೆಂಬುದಾಗಲೀ ಸರಿಯಲ್ಲ.ಹೇತುವಿನಿಂದ ಫಲ,ಫಲದಿಂದ ಹೇತು -ಹೀಗೆ ಒಂದರಿಂದೊಂದು ಹುಟ್ಟುತ್ತವೆ -ಎನ್ನುವವರು ಇವೆರಡರೊಳಗೆ ಯಾವುದು ಮೊದಲು ಹುಟ್ಟುವದೆಂಬುದನ್ನು ಗೊತ್ತುಪಡಿಸಲಾರದಾದ್ದರಿಂದ ಅವರ ಮತವು ದೋಷಯುಕ್ತವಾದದ್ದು..ಬೀಜಾಂಕುರಗಳಂತೆ ಇವು ಅನಾದಿಯಾಗಿ ಹುಟ್ಟುತ್ತಿರುವವು-ಎಂಬುದೂ ಸರಿಯಲ್ಲ.ಏಕೆಂದರೆ ಬೀಜಮತ್ತು ಅಂಕುರ -ಈ ಎರಡನ್ನೂ ಬಿಟ್ಟರೆ ಸಂತತಿ ಎಂಬುದು ಅದಕ್ಕಿಂತ ಬೇರೆಯಾಗಿ ಇಲ್ಲವೇ ಇಲ್ಲ.ಅದ್ದರಿಂದ ಈ ಹೇತುಫಲಗಳು ಹುಟ್ಟಿಲ್ಲವೆಂಬುದೇ ಪರಮಾಥ೯ವೆಂದಾಯಿತು. 3)ಹೀಗೆಯೇ ಬಂಧಮೋಕ್ಷಗಳುಂಟೆಂಬುವರು ಬಂಧವು ಅನಾದಿ ಸಾಂತ ಎಂದು ಹೇಳಬೇಕಾಗುವುದು. ಮೋಕ್ಷವು ಆದಿಯುಳ್ಳದ್ದು ಅನಂತವೂ ಎಂದು ಒಪ್ಪಬೇಕಾಗುವುದು.ಇದು ದೃಷ್ಟವಿರುದ್ಧ.ಆದ್ದರಿಂದ ಬಂಧಮೋಕ್ಷಗಳ ಜನ್ಮವೂ ಇಲ್ಲವೆಂಬುದೇ ಯುಕ್ತ. 4)ಇದರಂತೆ ವೈತಥ್ಯ ಪ್ರಕರಣದಲ್ಲಿ ಸ್ವಪ್ನ ಜಾಗರಿತಗಳು ಆದ್ಯಂತವುಳ್ಳವುಗಳಾದ್ದರಿಂದಲೂ ಸವ೯ಸಮನಾಗಿ ಎರಡೂ ಕನಸಿನಂತೆಯೇ ಇರುವುದರಿಂದಲೂ ಸ್ವಪ್ನಜಾಗರಿತಗಳಂತೆ ನಿಜವಾದ ಕಾಯ೯ಕಾರಣಭಾವವು ಇಲ್ಲವೆಂದೂ ಅವೆರಡರಲ್ಲಿಯೂ ನಮಗೆ ಪರಮಾಥ೯ವಸ್ತುದಶ೯ನವಿಲ್ಲವೇ ಇಲ್ಲವೆಂದೂ ಅಜಾತಿಯೇ ಪರಮಾಥ೯ವೆಂದೂ ಒಪ್ಪಬೇಕಾಗುತ್ತದೆ.(ಪುಟ 507) 42-53)ವೇದಾಂತದಲ್ಲಿಯೀ ವಸ್ತುಗಳ ಜನ್ಮವುಂಟೆಂದು ಹೇಳುವುದೇಕೆಂದರೆ ,ಬಾಹ್ಯವಸ್ತುಗಳು ಕಾಣಬರುತ್ತಿರುವುದರಿಂದಲೂ ಕಮ೯ಕ್ಕೆ ಸಧನವಾಗಿರುವುದರಿಂದಲೂ ನಿಜವಗಿದೆ ಎಂದು ತಿಳಿದುಕೊಂಡಿರುವ ನಿಜವಾಗಿದೆ ಎಂದು ತಿಳಿದುಕೊಂಡಿರುವ ಸ್ಥೂಲಬುದ್ಧಿಗಳಾದ ಆಸ್ತಿಕರಿಗೆ ಕ್ರಮಕ್ರಮವಾಗಿ ಅಜಾತಿ ಸ್ವರೂಪವನ್ನು ತಿಳಿಯಿಸಿಕೊಡುವುದಕ್ಕೆ ಉಪಾಯವಾಗಿ ಸಾಮಾನ್ಯರಿಗೆ ಕಾಣುವ ಮಾಯಾಜನ್ಮವನ್ನು ಅಲ್ಲಿ ಉಪದೇಶಿಸಿರುತ್ತದೆ.ತೋರುವುದು,ಕ್ರಿಯಾಚರಣೆಗೆ ಅಂಗವಾಗಿರುವುದು -ಇವೆರಡು ಇದ್ದ ಮಾತ್ರದಿಂದ ವಸ್ತುವು ನಿಜವಾಗಿಯೂ ಇದೆಯೆಂದು ಹೇಳುವುದಕ್ಕೆ ಆದೀತೇ?ಸ್ವಪ್ನದಲ್ಲಿ ಕಾಣುವ ಪದಾಥ೯ಗಳಲ್ಲಿಯೂ ಮಾಯಾವಿಯು ನಿಮಿ೯ಸಿರುವ ಆನೆಯೇ ಮುಂತಾದವು ಗಳಲ್ಲಿಯೂ ಈ ಎರಡು ಧಮ೯ಗಳು ಇರುತ್ತವೆಯಾದರೂ ಅವು ಸತ್ಯವಾಗಿ ಇರುವುದಿಲ್ಲವೆಂಬುದು ನಮಗೆಲ್ಲ ತಿಳಿದೇ ಇರುತ್ತದೆ.ಅದ್ದರಿಂದ ನಿಜವಾಗಿರುವ ವಸ್ತುಗಳಿಗಿರಬೇಕಾದ ಜನ್ಮವೇ ಮುಂತಾದ ಧಮ೯ಗಳನ್ನುಳ್ಳಂತೆ ವಸ್ತುಗಳು ತೋರುತ್ತಿದ್ದರೂ ನಿಜವಾಗಿ ಅವೆಲ್ಲವೂ ನಿಜ,ಅಚಲ,ಅನಾಭಾಸ(ತೋರದಿರುವ ವಸ್ತು),ಅದ್ವಿತೀಯವಾಗಿರುವ ಚೈತನ್ಯ ಮಾತ್ರವೇ ಎಂದು ನಿಶ್ಚಯಿಸಬೇಕು.ಇದಕ್ಕೆ ಅಲಾತ ಸ್ಪಂದಿತ (ತಿರುಗಿಸಿದ ಕೊಳ್ಳಿಯಂತೆ) ಎಂಬ ದೃಷ್ಟಾಂತವನ್ನು ಕೊಡಬಹುದು. ಆ ದೃಷ್ಟಾಂತದಲ್ಲಿ ನೆಟ್ಟಗೆ ,ಡೊಂಕಾಗಿ ಅಥವಾ ಮತ್ತೊಂದಾಕಾರದಿಂದ ಕಾಣಿಸಿಕೊಳ್ಳುವ ದೃಶ್ಯಗಳು ನಿಜವಾಗಿ ಹುಟ್ಟಿರುವುದಿಲ್ಲ.ಎಲ್ಲಿಂದಲೂ ಬಂದಿರುವುದಿಲ್ಲ,ಮತ್ತೆಲ್ಲಿಗೂ ಹೋಗುವುದೂ ಇಲ್ಲ.ಅಲ್ಲವೆ?ಅದರಂತೆಯೇ ಕೂಟಸ್ಥ ವಿಜ್ಞಪ್ತಿಯ ರೂಪದಲ್ಲಿ ತೋರುವ ಚಿತ್ತ ಚೇತ್ಯಾದಿಗಳೂ ಅವಿದ್ಯೆಯಿಂದಲೇ ತೋರುತ್ತಿರುವವೇ ಹೊರತು,ನಿಜವಾಗಿ ಹುಟ್ಟುವುದಿಲ್ಲ.ಎಲ್ಲಿಂದಾದರೂ ಆ ವಿಜ್ಞಪ್ತಿಗೆ ಬಂದು ಸೇರಿಕೊಂಡಿರುವುದಿಲ್ಲ.ನಾಶವದಾಗ ಅದನ್ನು ಬಿಟ್ಟು ಮತ್ತೆಲ್ಲಿಗೂ ಹೋಗುವುದಿಲ್ಲ-ಎಂದು ತಿಳಿಯಬೇಕು.ಕಾಯ೯ಕಾರಣವಾದಿಗಳು ದ್ರವ್ಯಕ್ಕೆ ದ್ರವ್ಯವು ಕರಣ.,ಅದ್ರವ್ಯಕ್ಕೆ ಅದ್ರವ್ಯವೇ ಕಾರಣ ಎನ್ನುತ್ತಾರೆ.ಆತ್ಮನು ದ್ರವ್ಯವೂ ಅಲ್ಲ ಅದ್ರವ್ಯವೂ ಅಲ್ಲ;ಆದ್ದರಿಂದ ಅವನು ಕಾಯ೯ವೂ ಅಲ್ಲ ಕಾರಣವೂ ಅಲ.(ಪುಟ 508) 54-81)ಹೀಗೆ ಎಲ್ಲವೂ ಆತ್ಮತತ್ವವೆ ಅಗಿರುವುದರಿಂದ ಚಿತ್ತದಿಂದ ಬಾಹ್ಯವಸ್ತುಗಳಾಗಲೀ ,ಬಾಹ್ಯವಸ್ತುಗಳಿಂದ ಚಿತ್ತವಾಗಲೀ ಹುಟ್ಟುವುದಿಲ್ಲ.ಹೀಗೆ ಕಾಯ೯ಕಾರಣ ಭಾವವೇ ಇಲ್ಲವಾದರೂ ಕಮ೯,ಶರೀರಪ್ರಾಪ್ತಿ ಎಂಬ ಹೇತುಫಲಗಳೆಂಬ ಅಭಿನಿವೇಷದಿಂದ ಅಜ್ಞರು ಸಂಸಾರಕ್ಕೆ ಪಕ್ಕಾಗುವರು. ಅವಿದ್ಯೆಯಿಂದ ಎಲ್ಲವೂ ಹುಟ್ಟುತ್ತವೆ,ಪರಮಾಥ೯ ದೃಷ್ಟಿಯಿಂದ ಎಲ್ಲವೂ ಅಜಾತ್ಮತತ್ವವೇ ಆಗಿರುತ್ತದೆ. ಜೀವರುಗಳೆಲ್ಲರೂ ಅಜಸ್ವರೂಪರೇ.ಸ್ವಪ್ನಜಾಗ್ರತ್ತುಗಳಲ್ಲಿರುವ ದ್ವೈತವೆಲ್ಲವೂ ಅಜಾದ್ವೈತವೇ.ಚಿತ್ತಚೇತ್ಯಗಳೆರಡೂ-ಕನಸಿನಲ್ಲಿರುವಂತೆ ಜಗ್ರತ್ತಿನಲ್ಲಿಯೂ -ಆತ್ಮತತ್ವಮಾತ್ರವೇ.ಜೀವರು ಹುಟ್ಟುವುದೇ ಇಲ್ಲ.ಚಿತ್ತವೂ ನಿವಿ೯ಷಯವಾದ ಪರಮತ್ಮನೇ.ಇದೆ ಎಂಬುದು ಅವಿದ್ಯೆಯೇ.ಇಲ್ಲವೆಂಬುದು ವಾದಿಗಳು ಇದೆಯೆನ್ನುವುದನ್ನು ಅಲ್ಲಗಳೆದಿದ್ದೇ.ಅಜನು ಎಂಬುದು ಕಲ್ಪಿತ ಸಂವೃತಿಯೇ.ಎಂದರೆ ಹುಟ್ಟುವನೆಂಬ ವಾದವನ್ನು ಅಲ್ಲಗಳೆಯುವುದಕ್ಕೆ ಹೇಳಿದ್ದೇ.ಇಲ್ಲದ್ದರಲ್ಲಿ ಇದೆ ಎಂಬ ಅಭಿನಿವೇಷವಿದೆ. .ಹೀಗೆ ಚಿತ್ತವು ಹುಟ್ಟುವುದೇ ಇಲ್ಲ ಎಂಬುದನ್ನು ನಿಶ್ಚಯಿಸಿಕೊಂಡವರಿಗೆ ಪುನಜ೯ನ್ಮವಿಲ್ಲ.ಇದು ಜ್ಞಾನಿಗಳಿಗೆ ಮಾತ್ರವೇ ತಿಳಿದಿರುತ್ತದೆ.ಅಜಾನಿದ್ರಾ ಸ್ವಪ್ನನಾದ ಆತ್ಮನೊಬ್ಬನೇ ಪರಮಾಥ೯ವು.(50೯) 82-87)ಇದೆ,ಇಲ್ಲ,ಇದ್ದೂ ಇಲ್ಲ,ಇಲ್ಲವೇ ಇಲ್ಲ-ಎಂಬ ನಾಲ್ಕು ಕೋಟಿಗಳಿಂದ ಪಂಡಿತಮಾನಿಗಳಾದ ಅಜ್ಞವಾದಿಗಳು ತತ್ವಕ್ಕೆ ಆವರಣವನ್ನು ಹಾಕಿರುವರು.ಇವುಗಳ ಸೋಂಕೇ ಇಲ್ಲದ ಪರಮಾಥ೯ವನ್ನು ತಿಳಿದವನೇ ಸವ೯ಜ್ಞನು,ಬ್ರಾಹ್ಮಣನು,ಕೃತಕೃತ್ಯನು,ವಿನಯ,ಶಮ,ದಮ,ಇವುಗಳಿಗೆಲ್ಲ ಜ್ಞಾನಸ್ಥಿತಿಯೆಂಬುದೇ ನಿಜವಾದ ಅಥ೯.(ಪುಟ 50೯) 88-೯5)ಇದನ್ನು ಅರಿತುಕೊಳ್ಳುವುದಕ್ಕೆಂದೇ (ಲೌಕಿಕ,ಜಾಗರಿತ),ಶುದ್ಧ ಲೌಕಿಕ,(ಸ್ವಪ್ನ),ಲೋಕೋತ್ತರ(ಸುಷುಪ್ತ)-ಎಂಬ ಮೂ ರು ಅವಸ್ಥೆಗಳ ಆತ್ಮರನ್ನು ಒಂದರಲ್ಲೊಂದು ಪ್ರವಿಲಯವಾಗಿಸಿ ರಾಗದ್ವೇಷಾದಿ ಕಷಾಯಗಳನ್ನು ಪಕ್ವಗೊಳಿಸಿಕೊಂಡು,ಬಾಲ್ಯ,ಪಾಂಡಿತ್ಯ,ಮೌನಗಳೆಂಬ ಸಾಧನಗಳನ್ನು ಅಳವಡಿಸಿಕೊಂಡು ಸಜ್ಜಾಗಬೇಕು,ಅರಿತುಕೊಂಡ ಬಳಿಕ ಮಾಡಬೇಕಾದ್ದೇನೂ ಉಳಿದಿರುವುದಿಲ್ಲ.(ಪುಟ 50೯) ಜ್ಞಾನದಿಂದ ಅಜ್ಞಾನವು ನಾಶವಾಗುವುದೆಂದೂ ಕಲ್ಪಿತ ಸಂವೃತಿಯಿಂದ ಹೇಳಿದ್ದೇ.ಏಕೆಂದರೆ ಆತ್ಮರುಗಳೆಲ್ಲರೂ ಸ್ವಭಾವದಿಂದಲೇ ಆಕಾಶದಂತೆ ಕೂಟಸ್ಥಚೈತನ್ಯ ಸ್ವರೂಪರಾಗಿರುತ್ತಾರೆ.ಎಲ್ಲರೂ ನಿತ್ಯಶುದ್ಧಬುದ್ಧಮುಕ್ತ ಸ್ವಭಾವದವರಾಗಿರುತ್ತಾರೆ.ಇಂಥ ಅಜಸಾಮ್ಯತತ್ವದಲ್ಲಿ ನಿಂತಿರುವವರೇ ಮಹಾಜ್ಞಾನಿಗಳು.(50೯) ೯6-100)ಜ್ಞಾನತತ್ವವು ಮತ್ತೇನನ್ನೂ ಸೋಂಕದೆ ಇರುತ್ತದೆ.ಅದು ಅಸಂಗವು.ಆತ್ಮರು ನಿತ್ಯಶುದ್ಧಬುದ್ಧ ಮುಕ್ತಸ್ವಭಾವರೇ ಆಗಿರುವುದರಿಂದ ಅವರು ತತ್ವವನ್ನು ಅರಿಯುತ್ತಾರೆಂಬುದೂ ಗೌಣವೃತ್ತಿಯಿಂದ ಹೇಳಿದ್ದು.ಜ್ಞಾತೃ,ಜ್ಞಾನ,ಜ್ಞೇಯ-ಎಂಬ ವಿಭಾಗವಿಲ್ಲದ ಆಕಾಶಕಲ್ಪವಾದ ಅಖಂಡಚೈತನ್ಯವೇ ಪರಮಾಥ೯ವು.ಇದನ್ನು ಗೌತಮಬುದ್ಧನು ಹೇಳಿರುವುದಿಲ್ಲ.ಅಜವೂ ಪರಿಶುದ್ಧವೂ ಸಾಮ್ಯವೂ ಆಗಿರುವ ಈ ತತ್ವಕ್ಕೆ ನಮಸ್ಕಾರ.(ಪುಟ50೯) ,,,,,,,,,,,,,,,,,,,,,,,,,,,,,ಗೌಡಪಾದ ಹೃದಯ ಸಾರಸಂಗ್ರಹ ಗ್ರಂಥವು ಸಂಪೂಣ೯ವಾಯಿತು,,,,,,,,,,,,,, ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, d ,,,,,,,,,,,,,,,,,,,,,,,,,,,,,ಗೌಡಪಾದ ಹೃದಯ ಸಾರಸಂಗ್ರಹ ಗ್ರಂಥವು ಸಂಪೂಣ೯ವಾಯಿತು,,,,,,,,,,,,,, ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,, d

 

 

ಶ್ರೀ ಶಂಕರಾಚಾಯ೯ವಿರಚಿತ:

ಉಪದೇಶಸಾಹಸ್ರಿ

ಮೂಲ ಲೇಖಕರು:ಶ್ರೀಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು

ಪ್ರಕಾಶಕರು:ಅಧ್ಯಾತ್ಮ ಪ್ರಕಾಶ ಕಾಯಾ೯ಲಯ

ಹೊಳೆನರಸೀಪುರ-573211

ಹಾಸನ ಜಿಲ್ಲೆ.ಕನಾ೯ಟಕ

ಸಂಪಾದಕರು:ಹೆಚ್.ಎಸ್.ಲಕ್ಮೀನರಸಿಂಹಮೂತಿ೯

ಉಪದೇಶ ಸಾಹಸ್ರಿ ಸಾರಸಂಗ್ರಹ:

ಸಂಗ್ರಹ:ಡಾ.ರವೀಂದ್ರ ಹೊಸದುಗ೯

ಮೂರನೆಯ ಮುದ್ರಣ:2001

.................................................

ಮೂಲ ಲೇಖಕರಿಗೂ, ಸಂಪಾದಕರಾದ ಹಚ್.ಎಸ್.ಲಕ್ಷ್ಮೀನರಸಿಂಹಮೂತಿ೯ಯವರಿಗೂ, ಪ್ರಕಾಶಕರಿಗೂ ,ಅಧ್ಯಾತ್ಮ ಪ್ರಕಾಶ ಕಾಯಾ೯ಲಯದ ಆಡಳಿತವಗ೯ ಮತ್ತು ಸಿಬ್ಬಂದಿವಗ೯ಕ್ಕೂ ನನ್ನ ನಮನಗಳು ಹಾಗೂ ಕೃತಜ್ಞತೆಗಳು.

.....................................................................................................................................................

 

1)ಉಪದೇಶಸಾಹಸ್ರಿಯು ಜಗತ್ಪ್ರಸಿದ್ಧರಾದ ಶ್ರೀ ಶಂಕರಾಚಾಯ೯ರು ಅನುಗ್ರಹಿಸಿರುವ ಗ್ರಂಥವು.

 

2) ಗ್ರಂಥದ ಕೆಲವು ಶ್ಲೋಕಗಳು  ನೈಷ್ಕಮ್ಯ೯ಸಿದ್ಧಿಯಲ್ಲಿಯೂ,ಬೃಹದಾರಣ್ಯಕ ವಾತಿ೯ಕದಲ್ಲಿಯೂ ಕಂಡುಬರುತ್ತವೆ.(ಪೀಠಿಕೆ)

 

3)ಗದ್ಯಭಾಗದಲ್ಲಿ ಮೂರು ಪ್ರಕರಣಗಳಿವೆ:

1)ಮೊದಲನೆಯದು- ಆಗಮ ಪ್ರಧಾನವಾಗಿದ್ದು ಶ್ರವಣವನ್ನು ಸೂಚಿಸುತ್ತದೆ.

 

 2)ಎರಡನೆಯದು -ಯುಕ್ತಿಪ್ರಧಾನ-ಮನನವನ್ನು ಸೂಚಿಸುತ್ತದೆ.

 

3)ಮೂರನೆಯದು- ನಿದಿಧ್ಯಾಸನವನ್ನು ಸೂಚಿಸುತ್ತದೆ.(ಪೀಠಿಕೆ)

 

4)

1) ಪರಮಹಂಸ ಪಾರಿವ್ರಾಜ್ಯ:ಇಲ್ಲಿ ಪರಮಹಂಸ ಪಾರಿವ್ರಾಜ್ಯವನ್ನು ಜ್ಞಾನಾಂಗವಾಗಿ ಬೋಧಿಸಿದೆ.

 

2)ಶಿಷ್ಯನಲಕ್ಷಣದಲ್ಲಿ -ಏಷಣಾತ್ರಯವನ್ನು ತ್ಯಾಗಮಾಡಿದ  ಪರಮಹಂಸ ಪರಿವ್ರಾಜಕನಾ

ಗಿರಬೇಕು ಎಂದು ಹೇಳಿದೆ.

 

3)ಗುರುವು 'ಕಮ೯ತ್ಯಾಗವೇ ಶಾಸ್ತ್ರದ ಉಪದೇಶ' ಎಂದು ಹೇಳಿರುತ್ತಾನೆ.

 

4)ತತ್ವಜ್ಞಾನಿಯಾದ  ಆಚಾಯ೯ನ ಪರಮಹಂಸ ಪರಿವ್ರಾಜ್ಯವು  ಆತ್ಮ ಸ್ವರೂಪದಲ್ಲಿ ನೆಲೆ ನಿಲ್ಲುವುದೆಂಬ ರೂಪದ್ದು.

 

5)ಆತ್ಮಜ್ಞಾನ ನಿಷ್ಠೆಗೆ  ಪರಮಹಂಸರೇ ವಿಶೇಷಾಧಿಕಾರಿಗಳಾದರೂ  ಜ್ಞಾನಮಾತ್ರಕ್ಕೆ ಸವ೯ರೂ

ಅಧಿಕಾರಿಗಳು.(ಪೀಠಿಕೆ)

 

2) ಪ್ರಮಾತೃತ್ವ ವಿಚಾರ:

ಪ್ರಮಾತೃತ್ವವು ಅವಿದ್ಯಾ ಸ್ವರೂಪದ್ದು.ಔಪಾಧಿಕವಾಗಿ ಉಂಟಾಗುವ ಪ್ರಮೆಯು  ಅವಿದ್ಯಕವಾದರೂ  ಸ್ವರೂಪದಿಂದ ಅದು ಕೂಟಸ್ಥ ಚೈತನ್ಯವೇ ಆಗಿರುತ್ತದೆ.

 

3)ಪರಿಸಂಖ್ಯಾನ:ಭಾವನಾರೂಪವಾದ ಉಪಾಸನೆ ಎನ್ನುವುದಕ್ಕಿಂತಲೂ -ವಸ್ತು ಪರೀಕ್ಷಣೆಯಿಂದ  ಅನುಭವ ರೂಢವಾಗಿ ಮಾಡಿಕೊಳ್ಳುವ  ಚಿಂತನ ವಿಶೇಷವೇ ಎಂದು ಬಗೆಯಬೇಕು.ಆತ್ಮನು ಅದ್ವಿತೀಯನೆಂಬುದನ್ನೇ ತಿಳಿಸುವ  ಉಪನಿಷದ್ವಾಕ್ಯಗಳನ್ನೇ ಚಿಂತಿಸುತ್ತಿರಬೇಕು(ಪೀಠಿಕೆ)

....................................................................................................................................

 

ಉಪದೇಶಸಾಹಸ್ರಿ(ಗದ್ಯ ಪ್ರಬಂಧ):

1)ಈಗ ಶ್ರದ್ಧೆಯುಳ್ಳವರೂ ,ಶಾಸ್ತ್ರಜ್ಞಾನವನ್ನು ಬಯಸುವವರೂ  ಆದ  ಪ್ರಯೋಜನಕ್ಕಾಗಿ ಮೋಕ್ಷಸಾಧನವನ್ನು ಉಪದೇಶಿಸುವ  ಬಗೆಯನ್ನು ವಿವರಿಸಿದೆ.(ಪುಟ 1)

 

ಶಿಷ್ಯನ ಲಕ್ಷಣ:

 

 1)ಅನಿತ್ಯವಾಗಿರುವ ಎಲ್ಲದರಿಂದಲೂ  ವಿರಕ್ತನಾಗಿ ಪುತ್ರ,ವಿತ್ತ.ಲೋಕ ಇವುಗಳ ಏಷಣೆಯನ್ನು ಬಿಟ್ಟು ಪರಮಹಂಸ ಪಾರಿವ್ರಾಜ್ಯವನ್ನು ಹೊಂದಿ ಶಮೆ,ದಮೆ.ದಯೆ ಮುಂತಾವುಗಳಿಂದ ಕೂಡಿರಬೇಕು.(ಪುಟ 2)

 

2)ಶಿಷ್ಯನಿಗೆ ಜಾತಿ,ಕಮ೯,ನಡತೆ,ವಿದ್ಯೆ,ಕುಲ  ಇವುಗಳನ್ನು ಪರೀಕ್ಷೆ ಮಡಿ  ಅವನಿಗೆ ಹೇಳಿದ್ದು ತಿಳಿದು ಘಟ್ಟಿಯಾಗುವವರೆಗೆ  ಮತ್ತೆ ಮತ್ತೆ ಹೇಳಬೇಕು.(ಪುಟ 2)

 

3) ಕಮ೯ದಿಂದಾಗುವ  ಲೋಕಗಳನ್ನು ಪರೀಕ್ಷಿಸಿ  ಬ್ರಾಹ್ಮಣನು ವೈರಾಗ್ಯ ಹೊಂದಬೇಕು.(ಪುಟ 2)

 

4)ಸಾಧನದಿಂದ ನಿತ್ಯವಾದ ಮೋಕ್ಷವು ಸಿದ್ಧವಾಗದು.ಅದನ್ನು ತಿಳಿದು ಕೊಳ್ಳುವುದಕ್ಕಾಗಿ ಗುರುವಿನ ಬಳಿಗೆ ಹೋಗಬೇಕು.(ಪುಟ 2)

 

5) ಗುರುವು ಯಥಾಥ೯ವಾಗಿ (ಅದು ಹೇಗಿದೆಯೋ ಹಾಗೆ) ಬ್ರಹ್ಮವಿದ್ಯೆಯನ್ನು ತಿಳಿಸಬೇಕು.(ಮುಂ..1-2012)ಎಂದು ಶ್ರುತಿಯೂ ಇದೆ.(ಪುಟ 2)

 

6) ಬ್ರಾಹ್ಮಣನಿಗೆ ಜ್ಞಾನದಲ್ಲಿ ವಿಶೇಷಾಧಿಕಾರವಿದೆ.ಮಿಕ್ಕವರೆಲ್ಲರಿಗೂ ಸಾಮಾನ್ಯಾಧಿಕಾರವಿದೆ(ಪುಟ 2)

 

2)ಗುರುವಿನಿಂದ ಬಂದ ಜ್ಞಾನವೇ ಪ್ರಯೋಜನಕಾರಿ:

 

1)ಸಮುದ್ರದಿಂದ ಸುತ್ತುವರಿಯಲ್ಪಟ್ಟಿರುವ ,ಧನಪೂಣ೯ವಾಗಿರುವ ಭೂಮಿಯನ್ನೇ ದಾನಮಾಡಲಿಅದಕ್ಕಿಂತಲೂ ವಿದ್ಯಾದಾನವೇ ಹೆಚ್ಚಿನದು.(ಛಾಂ..3-11-6)

 

2)'ಆಚಾಯ೯ವಂತನಾದ ಪುರುಷನೇ ಅರಿತುಕೊಳ್ಳುತ್ತಾನೆ.(ಆಚಾಯ೯ವಾನ್ ಪುರುಷೋ ವೇದ)(ಛಾಂ..6-14-2)

 

3)ಆಚಾಯ೯ನಿಂದಲೇ ತಿಳಿದುಕೊಂಡ ವಿದ್ಯೆಯು ಉತ್ತಮಗತಿಯನ್ನು ಹೊಂದಿಸುವುದು.

 

3) ಆಚಾಯ೯ನೇ ದಾಟಿಸತಕ್ಕವನು .ಜ್ಞಾನವೆ ಇಲ್ಲಿ ದೋಣಿಎನಿಸುತ್ತದೆ.

 

4)ತತ್ವದಶಿ೯ಗಳಾದ ಜ್ಞಾನಿಗಳಿರುವರಲ್ಲ ,ಅವರು ನಿನಗೆ ಜ್ಞಾನವನ್ನು ಉಪದೇಶಿಸುವರು (ಗೀತಾ 4-34)

(ಪುಟ 3)

 

3) ಜ್ಞಾನವು ಹಿಡಿಯದಿರುವುದಕ್ಕೆ  ಕಾರಣವೂ ಅದಕ್ಕೆ ಪರಿಹಾರವೂ:

ಕಾರಣಗಳು:

1)ಅಧಮ೯,ಲೌಕಿಕ ವಿಷಯದಲ್ಲಿ ಆಸಕ್ತಿ.

2) ಸಾವಧಾನವಾಗಿಲ್ಲದಿರುವುದು.

3)ನಿತ್ಯ ಅನಿತ್ಯ ವಿವೇಕವಿಲ್ಲದಿರುವುದು.

4)ಜನರ ಚಿಂತೆಗಳನ್ನು ಹೆಚ್ಚಾಗಿ ಹಚ್ಚಿಕೊಂಡಿರುವುದು.

5) ಜಾತಿ ಮುಂತಾದವುಗಳಲ್ಲಿನ ಅಭಿಮಾನ.

 

ಆಚಾಯ೯ನ ಲಕ್ಷಣ:

1) ವಿಷಯವನ್ನು ತಿಳಿದುಕೊಳ್ಳುವುದು,ನೆನಪಿನಲ್ಲಿಟ್ಟುಕೊಳ್ಳುವುದು.

2)ಶಮ,ದಮ,ದಯ,ಅನುಗ್ರಹ-ಮುಂತಾದವುಗಳಿಂದ ಕೂಡಿದವನೂ,ಆಗಮವನ್ನು ಪಡೆದುಕೊಂಡವನೂ

ಲೋಕದ ಮತ್ತು ಪರಲೋಕದ ಭೋಗಗಳಲ್ಲಿ ಆಸಕ್ತಿ ಇಲ್ಲದವನೂ

3)ಕಮ೯ದ ಸವ೯ಸಾಧನಗಳನ್ನೂ ಬಿಟ್ಟವನೂ,

4) ಬ್ರಹ್ಮವನ್ನು ಅರಿತುಕೊಂಡು ಬ್ರಹ್ಮದಲ್ಲಿ ನೆಲೆ ನಿಂತವನೂ

5) ಲೋಕದ ಆಚಾರದ ಎಲ್ಲೆಯನ್ನು ಮೀರದವನೂ,ದಂಭ,ದಪ೯,ಮೋಸ,ಠಕ್ಕು,ಮಾಯೆ,ಹೊಟ್ಟೆಕಿಚ್ಚು,ಸುಳ್ಳು,ನಾನು ನನ್ನದೆಂಬ ಅಭಿಮಾನ ಮುಂತಾದ ದೋಷಗಳಿಲ್ಲದವನೂ

6) ಮತ್ತೊಬ್ಬರಿಗೆ ಅನುಗ್ರಹ ಮಾಡಬೇಕೆಂಬ ಒಂದೇ ಪ್ರಯೋಜನದಿಂದ ವಿದ್ಯೆಯನ್ನು  ವಿನಿಯೋಗ ಮಾಡಲೆಳಸುವವನೂ ಆಗಿರುವವನು.(ಪುಟ5)

 

5) ಪರಮಾತ್ಮೈಕ್ಯದ ಮತ್ತು ಪರಮಾತ್ಮ ಲಕ್ಷಣದ ಉಪದೇಶ:

 

ಇಂಥ ಆಚಾಯ೯ನು ಶಿಷ್ಯನಿಗೆ ಹೀಗೆ ಆತ್ಮೈಕತ್ವವನ್ನು ತಾತ್ಪಯ೯ದಿಂದ ತಿಳಿಸುವ ಶ್ರುತಿಗಳನ್ನು ಉಪದೇಶಿಸಬೇಕು:

1)'ಸೋಮ್ಯನೆ,ಮೊದಲು ಪ್ರಪಂಚವು ತನಗೆರಡನೆಯದಿಲ್ಲದ ಸತ್ತೊಂದೇ ಆಗಿದ್ದಿತು.(ಛಾಂ..6-2-1)  

 

2)ಎಲ್ಲಿ ಮತ್ತೊಂದನ್ನು ಕಣುವುದಿಲ್ಲವೋ ...........ಅದು ಭೂಮವು.(ಛಾಂ..7-24-1)

 

3)'ಇದೆಲ್ಲವೂ ಅತ್ಮನೇ'(ಛಾಂ..7-25-2)

 

4)'ಇದು ಮೊದಲು ಆತ್ಮನೊಬ್ಬನೇ ಆಗಿದ್ದಿತು.(..1-1)

 

5)'ಇದೆಲ್ಲವೂ ಬ್ರಹ್ಮನೇ ಅಲ್ಲವೇ?'(ಛಾಂ..3-14-1)

 

ಹೀಗೆ ಉಪದೇಶ ಮಡಿದ ಮೇಲೆ:

1) ಯಾವ ಆತ್ಮನು ಪಾಪವಿಲ್ಲದವನೋ(ಛಾಂ..8-7-1)

2)ಯಾವುದು ಸಕ್ಷಾತ್ತಾಗಿ ಅಪರೋಕ್ಷವಾಗಿರುವ ಬ್ರಹ್ಮವೋ(ಬೃ..3-4-1) (3-5-1)

3)ಯಾವನು ಹಸಿವು ನೀರಡಿಕೆಗಳನ್ನು ಮೀರಿರುವನೋ(ಬೃ..3-5-1)

4)'ಇದಲ್ಲ ಇದಲ್ಲ'(ಬೃ..2-3-6)

5)'ಸ್ಥೂಲವಲ್ಲ ಸೂಕ್ಮವೂ ಅಲ್ಲ'(ಬೃ..3-8-8)

6)' ಇವನೇ ಇದಲ್ಲ ಇದಲ್ಲ(ಎಂಬ ಆತ್ಮನು)'(ಬೃ..3--26)(4-2-4)

7)'ಕಾಣಲ್ಪಡದ್ದು ,ನೋಡುವದು'(ಬೃ..3-8-11)

8)'ವಿಜ್ಞಾನವೂ ಆನಂದವೂ ಆದದ್ದು ಬ್ರಹ್ಮವು.(ಬೃ..3--28)

)'ಸತ್ಯವೂ  ಜ್ಞಾನವೂ ಅನಂತವೂ ಆದ ಬ್ರಹ್ಮವು.(ತೈ..2-1)

10)'ಇಂದ್ರಿಯಗಳಿಗೆ ಕಾಣದ,ತನಗೆ ಬೆರೊಬ್ಬ ಆತ್ಮನಿಲ್ಲದ(ತೈ..2-7)

11) ಈತನೇ ದೊಡ್ಡವನಾದ ಜನ್ಮರಹಿತನಾದ ಆತ್ಮನು.(ಬೃ..4-4-22)

12)'ಪ್ರಾಣವಿಲ್ಲದವನು,ಮನಸ್ಸಿಲ್ಲದವನು'((ಮುಂ..(2-1-2)

13)'ಹೊರಗೂ ಒಳಗೂ ಇರುವ ಅಜನು((ಮುಂ.2-1-2)

14)'ವಿಜ್ಞಾನ ಗಟ್ಟಿಯೇ'((ಬೃ.2-4-12)

15)'ತನಗೆ ಹೊರಗಿಲ್ಲದ್ದು,ಒಳಗಿಲ್ಲದ್ದು'(ಬೃ.2-5-1)

16) ಅದು ಅರಿತದ್ದಕ್ಕಿಂತಬೇರೆಯೇ,ಅರಿಯಲ್ಪಡದಕ್ಕಿಂತ ಬೇರೆಯೇ(ಕೇ.1-1-3)

17) ಆಕಾಶವೆಂಬ  ಬ್ರಹ್ಮವೇ ನಾಮರೂಪಗಳನ್ನು ನಿವ೯ಹಿಸುವುದು(ಛಾಂ.8-14-1)

ಇವೇ ಮೊದಲಾದ ಶ್ರುತಿಗಳಿಂದ ಬ್ರಹ್ಮದ ಲಕ್ಷಣಗಳನ್ನು ತಿಳಿಸಿಕೊಡಬೇಕು.(ಪುಟ 7)

 

18)ಮತ್ತು'ಹುಟ್ಟುವುದೂ ಇಲ್ಲ,ಸಾಯುವುದೋ ಇಲ್ಲ'(ಗೀ.2-20)

1)'ಯಾರ ಪಾಪವನ್ನೂ ತೆಗೆದುಕೊಳ್ಳುವುದಿಲ್ಲ(ಗೀ5-15)

20)'ಹೇಗೆ ವಾಯುವು ಆಕಾಶದಲ್ಲಿ ಇರುವುದೋ'(ಗೀ.-6)

21)'ಕ್ಷೇತ್ರಜ್ಞನೂ ನಾನೆಂದೇ ತಿಳಿ'(ಗೀ.13-2)

22)'ಅದು ಸತ್ತಲ್ಲ,ಅಸತ್ತೂ ಎನಿಸುವುದಿಲ್ಲ.(ಗೀ.13-12)

23)'ಅನಾದಿಯಾಗಿರುವುದರಿಂದಲೂ ನಿಗು೯ಣವಾಗಿರುವುದರಿಂದಲೂ'(ಗೀ.13-30)

24)ಸವ೯ಭೂತಗಳಲ್ಲಿಯೂ ಸಮವಾಗಿರುವ ಪರಮೇಶ್ವರನನ್ನು(ಗೀ.13-27)

25) ಉತ್ತಮವಾದ ಪುರುಷನು ಅಕ್ಷರಗಳಿಗಿಂತ ಬೇರೆ.(ಗೀ 15-17)

ಎಂದು ಮುಂತಾದ ಶ್ರುತ್ಯುಕ್ತ ಲಕ್ಷಣಕ್ಕೆ  ವಿರುದ್ಧವಲ್ಲದ,ಪರಮಾತ್ಮನು ಅಸಂಸಾರಿಯೆಂದು ತಾತ್ಪಯ೯ದಿಂದ ತಿಳಿಸುವ,ಸ್ಮøತಿಗಳಿಂದಲೂ  ಬ್ರಹ್ಮ ಲಕ್ಷಣವನ್ನು ತಿಳಿಸಿಕೊಡಬೇಕು.(ಪುಟ8)

 

6)ದೇಹಾತ್ಮವಾದ ನಿರಾಸ:

ಹೀಗೆ ಶ್ರುತಿಗಳಿಂದಲೂ,ಸ್ಮøತಿಗಳಿಂದಲೂ ಪರಮಾತ್ಮನ ಲಕ್ಷಣವನ್ನು ತಿಳಿಸಿಕೊಟ್ಟ ಮೇಲೆ,ಶಿಷ್ಯನನ್ನು ಅಯ್ಯಾ 'ನೀನು ಯಾರು?' ಎಂದು ಕೇಳಬಾಕು.(ಪುಟ8)

 

ಅವನು 'ನಾನು ಬ್ರಾಹ್ಮಣ ಪುತ್ರನು,ಹಿಂದೆ ಬ್ರಹ್ಮಚಾರಿಯಾಗಿದ್ದೆನು ಅಥವಾ ಗೃಹಸ್ಥನಾಗಿದ್ದೆನು; ಹುಟ್ಟು ಹೊಂದು ಎಂಬ ದೊಡ್ಡ ಮೊಸಳೆಗಳಿರುವ ಸಂಸಾರಸಾಗರವನ್ನು ದಾಟಬೇಕೆಂಬ ಇಚ್ಛೆಯಿಂದ ಪರಮಹಂಸ ಪರಿವ್ರಾಜಕನಾಗಿರುವೆನು'ಎಂದು ಹೇಳಿದರೆಆಚಾಯ೯ನು 'ಅಯ್ಯಾ,ನೀನು ಸತ್ತರೆ ನಿನ್ನ ಶರೀರವನ್ನು ಪಶುಪಕ್ಷಿಗಳು ಇಲ್ಲಿಯೇ ತಿಂದು ಹಾಕುತ್ತವೆ ಅಥವಾ ಅದು ಮಣ್ಣು ಪಾಲಾಗಿ ಬಿಡುವುದು.

ಹೀಗಿರುವಲ್ಲಿ ಸಂಸಾರವನ್ನು ದಾಟಲೆಳೆಸಿರುವೆ ಎಂದರೆ ಹೇಗೆ?ನದಿಯ ಈಚೆಯ ದಡಲ್ಲಿಯೇ ಸುಟ್ಟು ಬೂದಿಯಾಗುವುದಾದರೆ ನದಿಯ ಆಚೆಯ ದಡವನ್ನು ಮುಟ್ಟುವುದು ಆಗಲಾರದಷ್ಟೆ?'ಎಂದು ಕೇಳಬೇಕು.(ಪುಟ )

 

7) ಆತ್ಮನು ಶರೀರಕ್ಕಿಂತ ಬೇರೆಯಾಗಿರುವನು:

 

ಆಗ ಅವನು'ನಾನು ಶರೀರಕ್ಕಿಂತ ಬೇರೆಯಾಗಿಯೇ ಇರುವೆನು.ಶರೀರವು ಹುಟ್ಟುತ್ತದೆ ಸಾಯುತ್ತದೆ;ಪಕ್ಷಿಗಳಿಗೆ ಆಹಾರವಾಗುತ್ತದೆ.ಮಣ್ಣು ಪಾಲಾಗುತ್ತದೆ.ಶಸ್ತ್ರಗಳು, ಬೆಂಕಿ- ಮುಂತಾದವುಗಳಿಂದ ನಾಶವನ್ನೈದುತ್ತದೆ.ರೋಗರುಜುನೆಗಳನ್ನೂ ಹೊಂದುತ್ತದೆ. ನಾನು ಮಾಡಿದ ಧಮ೯ ಅಧಮ೯ಗಳದೆಸೆಯಿಂದ,ಹಕ್ಕಿಯು ಗೂಡುಸೇರುವಂತೆ ,ಇದರಲ್ಲಿ ನಾನು ಸೇರಿಕೊಂಡು  ಶರೀರವು ನಾಶವಾದಹಾಗೆಲ್ಲ ಮತ್ತೆ ಮತ್ತೆ ಧಮಾ೯ಧಮ೯ಗಳ ದೆಸೆಯಿಂದ ,ಹಿಂದಿನಗೂಡು ಹೋದರೆ  ಹಕ್ಕಿಯು ಮತ್ತೊಂದು ಗೂಡನ್ನು ಸೇರುವಂತೆ ಬೇರೆ ಬೇರೆ ಶರೀರವನ್ನು ಸೇರುತ್ತಲಿರುವೆನು.ಹೀಗೆಯೆ ನಾನು ಅನಾದಿಯಾದ  ಸಂಸಾರದಲ್ಲಿ ದೇವತೆಗಳ,ಮನುಷ್ಯರ,ಕೀಳು ಪ್ರಾಣಿಗಳ ,ನರಕದ ಸ್ಥಾನಗಳಲ್ಲಿ ನನ್ನ ಕಮ೯ದ ದೆಸೆಯಿಂದ ಪಡೆದ ,ಶರೀರವನ್ನು ಬಿಡುತ್ತಲೂ ಹೊಸದಾಗಿ ಬೇರೊಂದನ್ನು ತೆಗೆದುಕೊಳ್ಳುತ್ತಲೂ ಹುಟ್ಟು ಹೊಂದುಗಳ ಒಂದರಹಿಂದೊಂದು ಬರುತ್ತಿರುವ  ಚಕ್ರದಲ್ಲಿ ರಾಟೆಂiÀi ಹಾಗೆನನ್ನ ಕಮ೯ದಿಂದ ಸುತ್ತುತ್ತಾ ಕಾಲಕ್ರಮದಲ್ಲಿ ಶರೀರವನ್ನು ಹೊಂದಿ ಸಂಸಾರಚಕ್ರದಲ್ಲಿ ತೊಡಗಿ ಬೇಸತ್ತು  ಸಂಸಾರಚಕ್ರದ ತೊಳಲನ್ನು  ನಿಲ್ಲಿಸಿಕೊಡಬೇಕೆಂದು  ಪೂಜ್ಯರಾದ ತಮ್ಮನ್ನು ಶರಣುಹೊಂದಿರುವೆನು.ಆದ್ದರಿಂದ ನಾನು ಶರೀರಕ್ಕೆ ಬೇರೆಯಾಗಿ ನಿತ್ಯನೇ ಆಗಿರುವೆನು.ನನಗೆ ಶರೀರಗಳು ಮನುಷ್ಯನ ಉಡುಪುಗಳಂತೆ  ಬರುತ್ತಲೂ ಹೋಗುತ್ತಲೂ ಇರುತ್ತವೆ."ಎಂದು ಹೇಳಿದರೆ,ಆಚಾಯ೯ನು ನೀನು ಹೇಳಿದ್ದು ಸರಿ ,ಸರಿಯಾಗಿ ತಿಳಿದುಕೊಂಡಿದ್ದೀಯೆ.ಹೀಗಿರುವಲ್ಲಿ 'ನಾನು ಬ್ರಾಹ್ಮಣ ಪುತ್ರನು ,ಇಂಥ ವಂಶದವನು,ಹಿಂದೆ ಬ್ರಹ್ಮಚಾರಿಯೋ ಗೃಹಸ್ಥನೋ ಆಗಿದ್ದೆನು;ಈಗ ಪರಮಹಂಸ ಪರಿವ್ರಾಜಕನಾಗಿದ್ದೇನೆ'ಎಂದು ಸುಳ್ಳನ್ನು ಏಕೆ ಹೇಳಿದೆ ?"ಎಂದು ಕೇಳಬೇಕು.

 

8) ಆತ್ಮನಿಗೆ ಜಾತಿ,ವಂಶ,ಸಂಸ್ಕಾರ ಮುಂತಾದವುಗಳಿಲ್ಲ:

 

ಆತನು 'ಪೂಜ್ಯರೆ,ನಾನು ಸುಳ್ಳು ಹೇಳಿದೆನೆಂದರೆ ಹೇಗೆ?ಎಂದು ಕೇಳಿದರೆ ಅವನಿಗೆ "ಆಚಾಯ೯ನು ಹೀಗೆ ಹೇಳಬೇಕು.'ಹೇಗೆಂದರೆ,ಬೇರೆ ಬೆರೆ ಜಾತಿ, ವಂಶ,ಸಂಸ್ಕಾರ-ಇವುಗಳಿರುವ ಶರೀರವು  ಜಾತಿ ವಂಶಗಳಿಲ್ಲದ  ನಿನ್ನ ಸ್ವರೂಪವೆಂದರಿತು'ಬ್ರಾಹ್ಮಣ ಪುತ್ರನು''ಇಂಥ ವಂಶದವನು'ಎಂದು ಮುಂತಾದ ವಾಕ್ಯದಿಂದ ಹೇಳಿರುತ್ತೀಯೆ."

 

) ಪರಮಾತ್ಮನೇ ನಮ್ಮೆಲ್ಲರ ಆತ್ಮನು:

 

ಆತನು'ಶರೀರವು ಬೇರೆ ಬೇರೆ ಜಾತಿ, ವಂಶ,ಸಂಸ್ಕಾರಗಳುಳ್ಳದ್ದೆಂದೂ ನಾನು ಜಾತಿವಂಶಸಂಸ್ಕಾರಗಳಿಲ್ಲದವನೆಂಬುದು ಹೇಗೆ?ಎಂದು ಕೆಳಿದರೆಆಚಾಯ೯ನು'ಅತನು, ಶರೀರವು ನಿನಗಿಂತಾ ಬೇರೆಯಾಗಿದ್ದುಕೊಂಡು ಬೇರೆಯ ಜಾತಿವಂಶಸಂಸ್ಕಾರಗಳುಳ್ಳದ್ದೆಂದೂ ನೀನು ಜಾತಿವಂಶಸಂಸ್ಕಾರಗಳಿಲ್ಲದವೆಂಬುದೂ  ಹೇಗೆಂಬುದನ್ನು ಕೇಳು'ಎಂದು ಹೇಳಿದ ಮೇಲೆ,'ಅಯ್ಯಾ,ಸವಾ೯ತ್ಮನಾಗಿರುವ ಪರಮಾತ್ಮನನ್ನು'ಅಯ್ಯ,ಮೊದಲು ಇದು ಸತ್ತೇ ಆಗಿತ್ತು.'(ಛಾಂ.6-2-1)ಎಂಬುದೇ ಮುಂತಾದ ಶ್ರುತಿಗಳಿಂದಹಿಂದೆಯೇ ತಿಳಿಸಿದ್ದೆನಲ್ಲ ,ಅವನ್ನು ನೆನಪಿಸಿಕೊ,ಅವನ ಲಕ್ಷಣಗಳನ್ನು ಶ್ರುತಿಗಳಿಂದಲೂ ಸ್ಮøತಿಗಳಿಂದಲೂ ತಿಳಿಸಿದ್ದೇನಲ್ಲ ಅದನ್ನೂ ನೆನಪಿಸಿಕೊ'ಎಂದು ಅವನಿಗೆ ನೆನಪು ಕೊಡಬೇಕು.(ಪುಟ 12)

 

1) ಶರೀರದಸ್ವರೂಪವಣ೯ನೆಗಾಗಿ ಸೃಷ್ಟಿಕ್ರಮದ ವಣ೯ನೆ:

 

ಹೀಗೆ ಪರಮಾತ್ಮನ ಮತ್ತು ಅವನ ಲಕ್ಷಣದ ನೆನಪು ಅವನಿಗೆ ಬಂದಮೇಲೆ ಆಚಾಯ೯ನು ಹೇಳ ಬೇಕಾದ್ದೇನೆಂದರೆ ; ನಾಮರೂಪಗಳಿಗಿಂತ ಬೇರೆಯಾದವನೂ  ಶರೀರವಿಲ್ಲದವನೂ  ಅಸ್ಥೂಲಾದಿ ಲಕ್ಷಣವುಳ್ಳವನೂ  ಆವ ಪಾಪವೂ ಇಲ್ಲದವನಾಗಿರುವುದೇ ಮುಂತಾದ ಲಕ್ಷಣದವನೂ ಯಾವ ಸಂಸಾರ ಧಮ೯ಗಳ ವಾಸನೆಯೂ ಇಲ್ಲದವನೂ  ಸಾಕ್ಷಾತ್ತಾಗಿ ಅಪರೋಕ್ಷವಾಗಿರುವ  ಬ್ರಹ್ಮವಾಗಿ ಎಲ್ಲಕ್ಕೂ ಒಳಗಿರುವ ಅತ್ಮನೂ ,ಮತ್ತೊಂದಕ್ಕೆ ಕಾಣಿಸದೆ ಎಲ್ಲವನ್ನೂ ನೋಡುವವನೂ ಮತ್ತೊಂದಕ್ಕೆ ಕೇಳಿಸದೆ ಎಲ್ಲವನ್ನೂ ಕೇಳುವವನೂ ಮತ್ತೊಬ್ಬರ ಆಲೋಚನೆಗೆ ಸಿಕ್ಕದೆ  ಎಲ್ಲವನ್ನೂ ಆಲೋಚಿಸುವವನೂ ,ರಾರ ಅರಿವಿಗೂ ಸಿಕ್ಕದೆ ಎಲ್ಲವನ್ನೂ ಅರಿಯುವವನೂ ,ನಿತ್ಯವಾದ ವಿಜ್ಞಾನದ ಸ್ವರೂಪವುಳ್ಳವನೂ ಒಳಗಿಲ್ಲದವನೂ ಹೊರಗಿಲ್ಲದವನೂ,ಇಷ್ಟೆಂಬ ಲೆಕ್ಕವಿಲ್ಲದ ಶಕ್ತಿಗಳುಳ್ಳವನೂ,ಎಲ್ಲರಿಗೂ ಆತ್ಮನೂ ,ಹಸಿವು ಮುಂತಾದವುಗಳಿಲ್ಲದವನೂ,ತೋರುವುದು ಮರೆಯಾಗುವುದು-ಎಂಬಿವುಗಳಿಲ್ಲದವನೂ  ಆಗಿರುವ ಆಕಾಶವೆಂಬ ಹೆಸರುಳ್ಳ ಪರಮಾತ್ಮನು ತನ್ನ ಸ್ವರೂಪಕ್ಕಿಂತ ವಿಲಕ್ಷಣವಾಗಿಯೂ ,ಜಗತ್ತಿಗೆ ಬೀಜವಾಗಿರುವವನಾಗಿಯೂ  ತನ್ನಲ್ಲಿಯೇ ಇದ್ದುಕೊಂಡು  ಅದೇ ತನ್ನ ಸ್ವರೂಪವೆಂದಾಗಲೀ ,ಅದಕ್ಕಿಂತ ಬೇರೆಯದೆಂದಾಗಲೀ,ನಿವ೯ಚನಮಾಡಿ ಹೇಳುವುದಕ್ಕಾಗದವುಗಳಾಗಿಯೂ ತನಗೆ ತಿಳಿಯುವವಾಗಿಯೂ  ಅವ್ಯಾಕೃತವಾಗಿಯೂ ಇರುವ  ನಾಮರೂಪಗಳನ್ನು ಕೇವಲ ತನ್ನ ಇರುವಿಕೆಯಿಂದಲೇ  ಇಂಥದ್ದೆಂದು  ಚಿಂತಿಸುವುದಕ್ಕೆ ಆಗದ ಶಕ್ತಿಯುಳ್ಳಾತನಾದ್ದರಿಂದ ವ್ಯಾಕರಣ(ವಿಂಗಡಣೆ) ಮಾಡಿದನು.

 

11)ಆಕಾಶಾದಿಗಳಿಗೂ ಪರಮಾತ್ಮನಿಗೂ ಸಂಬಂಧ:

 

ನಾಮರೂಪಗಳು ಮೊದಲು ಅವ್ಯಾಕೃತವಾಗಿದ್ದು ಮುಂದೆ ವ್ಯಾಕೃತವಾಗುವಾಗ ಆಕಾಶವೆಂಬ ಹೆಸರನ್ನೂ ಆಕಾರವನ್ನೂ ಉಳ್ಳವನಾಗಿ ಆತ್ಮದಿಂದ ಉಂಟಾದವು. ಆಕಾಶವೆಂಬ ಹೆಸರಿನ ಭೂತವು  ಪ್ರಕಾರದಿಂದ  ತಿಳಿಯಾದ ನೀರಿನಿಂದ  ಕೊಳೆಯಾದ ನೊರೆಯು ಹುಟ್ಟುವಂತೆ ಪರಮಾತ್ಮನಿಂದ ಉಂಟಾಯಿತು.ನೊರೆಯು ನೀರೂ ಅಲ್ಲ,ನೀರಿಗಿಂತ ಬೇರೆಯೂ ಅಲ್ಲ.ಏಕೆಂದರೆ ಅದು ನೀರನ್ನು ಬಿಟ್ಟು ಬೇರೆಯಾಗಿ ಕಾಣುವುದಿಲ್ಲ.ಆದರೆ ಸ್ವಚ್ಛವಾಗಿರುವ ನೀರು  ಮಾತ್ರ ಕೊಳೆಯ ರೂಪವಾದ  ನೊರೆಗಿಂತ ಬೇರೆ.ಹೀಗೆ ಪರಮಾತ್ಮನ ನೊರೆಯಂತಿರುವ  ನಾಮರೂಪಗಳಿಗಿಂತಲೂ  ಬೇರೆಯಾಗಿ ಶುದ್ಧನೂ ಪ್ರಸನ್ನನೂ  ಅವುಗಳಿಗಿಂತ ವಿಲಕ್ಷಣನೂ ಆಗಿರುತ್ತಾನೆ.ಅಂತು ಹೀಗೆ ನೊರೆಯಂತೆ ನಾಮರೂಪಗಳು ಅವ್ಯಾಕೃತವಾಗಿದ್ದು  ಮುಂದೆ ವ್ಯಾಕೃತವಾಗುವಾಗ ಆಕಾಶವೆಂಬ ಹೆಸರನ್ನೂ  ಆಕಾಶದ ಆಕಾರವನ್ನೂ ತಳೆದವು.(ಪುಟ 14)

 

12)ವಾಯ್ವಾದಿ ಭೂತಗಳ ಉತ್ಪತ್ತಿ:

 

ನಾಮರೂಪಗಳು ಅದಕ್ಕಿಂತಲೂ ಸ್ಥೂಲಭಾವವನ್ನು ಪಡೆದು ವ್ಯಾಕೃತವಾಗಿ  ವಾಯುಸ್ವರೂಪವನ್ನು ಹೊಂದುವವು.ಅದರಿಂದ ಅಗ್ನಿರೂಪವನ್ನು,ಅಗ್ನಿಯಿಂದ ನೀರಿನರೂಪವನ್ನು,ಅದರಿಂದ ಪೃಥ್ವಿಯ ರೂಪವನ್ನು -ಎಂದೀ ಕ್ರಮದಿಂದ ಹಿಂದು ಹಿಂದಿನ ಭೂತದ ಗುಣವು ಸೇರಿಕೊಳ್ಳುತ್ತಾ ಪೃಥ್ವಿಯವರೆಗಿನ  ಐದು ಮಹಾಭೂತಗಳು ಉಂಟಾದವು.(ಪುಟ15)

 

13)ಶರೀರದ ಉತ್ಪತ್ತಿ:

ನಂತರ ಐದು ಭೂತಗಳ  ಗುಣಗಳಿಂದೊಡಗೂಡಿದ ಭೂಮಿಯು ಉಂಟಾಗುತ್ತದೆ.ಭೂಮಿಯಿಂದ  ಐದು ಭೂತಗಳ ಕಾಯ೯ವಾದ  ಬತ್ತ,ಜವೆಗೋಧಿ,ಮುಂತಾದ ಸಸ್ಯಗಳು ಹುಟ್ಟುತ್ತವೆ.ಅವುಗಳನ್ನು ತಿಂದ ಹೆಂಗಸಿನ  ಮತ್ತು ಗಂಡಸಿನ  ಶರೀರಕ್ಕೆ ಸೇರಿದಂತೆ ಲೋಹಿತವೂ ಶುಕ್ರವೂ ಉಂಟಾಗುತ್ತವೆ.ಅವೆರಡೂ ಋತುಕಾಲದಲ್ಲಿ ಅವಿದ್ಯೆಯಿಂದ ಉಂಟಾದ  ಕಾಮವೆಂಬ ಕಡಗೋಲಿನ ಕಡೆತದಿಂದ  ಹೊರತೋರಿಕೊಂಡು  ಮಂತ್ರ ಸಂಸ್ಕøತವಾಗಿ  ಗಭಾ೯ಶಯದಲ್ಲಿ  ಚಿಮುಕಿಸಲ್ಪಡುತ್ತವೆ.ಇದು ತನ್ನ ಯೋನಿಯಲ್ಲಿರುವ ರಸಗಳ ಸೇರುವಿಕೆಯಿಂದ ಬೆಳೆಯುತ್ತಾ  ಗಭ೯ವಾಗಿ ಒಂಬತ್ತನೆಯ ತಿಂಗಳಲ್ಲಿಯೋ  ಹತ್ತನೆಯ ತಿಂಗಳಲ್ಲಿಯೋ  ಜನ್ಮವನ್ನು ಪಡೆಯುತ್ತದೆ.(ಪುಟ 16)  

 

14) ಶರೀರಕ್ಕೆ ಜಾತ್ಯನ್ವಯ ಸಂಸ್ಕಾರಗಳು:

ಉಪನಯನವೆಂಬ ಸಂಸ್ಕಾರದ ಸಂಬಂಧದಿಂದ  ಬ್ರಹ್ಮಚಾರಿ ಎಂಬ ಹೆಸರುಳ್ಳದ್ದಾಗಿರುತ್ತದೆ.ಅದೇ  ಶರೀರವು ಹೆಂಡತಿಯನ್ನು ಪಡೆಯೋಣವೆಂಬ ಸಂಸ್ಕಾರದ ಸಂಬಂಧದಿಂದ ಗೃಹಸ್ಥನೆಂಬ ಹೆಸರುಳ್ಳದ್ದಾಗಿರುತ್ತದೆ.ಅದೇ ವನಸ್ಥನಸಂಸ್ಕಾರದಿಂದ ತಾಪಸನೆಂಬ ಹೆಸರುಳ್ಳದ್ದಾಗಿರುತ್ತದೆ.ಅದೇ ಕಮ೯ಗಳನ್ನು ಬಿಡುವುದಕ್ಕೆ ನಿಮಿತ್ತವಾದ ಸಂಸ್ಕಾರದಿಂದ ಪರಿವ್ರಾಜಕನೆಂಬ ಹೆಸರುಳ್ಳದ್ದಾಗಿರುತ್ತದೆ.ಹೀಗೆ ಶರೀರವು ನಿನಗಿಂತ ಬೇರೆಯಾಗಿದೆ.ಆತ್ಮನಿಗೆ ಯಾವ ಸಂಸ್ಕಾರವೂ ಇಲ್ಲ.ಬೇರೆ ಬೇರೆ ಜಾತಿ,ಅನ್ವಯ,ಸಂಸ್ಕಾರ ಇವುಗಳನ್ನುಳ್ಳದ್ದಾಗಿರುತ್ತದೆ.(ಪುಟ 17)

 

15)ಮನಸ್ಸೂ ಇಂದ್ರಿಯಗಳೂ ನಾಮರೂಪಾತ್ಮಕವೇ:

ಮನಸ್ಸು,ಇಂದ್ರಿಯಗಳು ಕೂಡ ನಾಮ ರೂಪ ಕಾಯ೯ಗಳೇ.'ಅಯ್ಯ,ಮನಸ್ಸು ಅನ್ನಮಯವಾಗಿರುವುದು(ಛಾಂ.6-5-4)ಎಂಬುದೇ ಶ್ರುತಿಗಳಿಂದ ಇದು ಸಿದ್ಧವಾಗಿರುತ್ತದೆ.(ಪುಟ 17)

 

16)ಜೀವನು ಪರಮಾತ್ಮನೇ,ಆದ್ದರಿಂದ ಜಾತ್ಯಾದಿರಹಿತನು:

 

ಇನ್ನು ನಾನು ಬೇರೆ ಬೇರೆ ಜಾತಿ,ವಂಶ,ಸಂಸ್ಕಾರಿವುಗಳಿಲ್ಲದವನು ಹೇಗೆ?ಎಂದು ಕೇಳಿದೆಯಲ್ಲಾ ಹೇಗೆ?ಅದನ್ನು ವಿವರಿಸುವೆನು ಕೇಳು.ನಾಮರೂಪಗಳನ್ನು ವಿಂಗಡಿಸುವವನಾಗಿಯೂ ನಾಮರೂಪಗಳಿಗಿಂತ ವಿಲಕ್ಷಣನಗಿಯೂ  ಇರುವ ಪರನಾತ್ಮನುಂಟಷ್ಟೆ.

,ಅವನೇ ನಾಮರೂಪಗಳನ್ನು ವಿಂಗಡಿಸಿ  ಶರೀರವನ್ನು ಸೃಷ್ಟಿಸಿ  ತಾನು ಯಾವ ಸಂಸ್ಕಾರ ಧಮ೯ಗಳೂ ಇಲ್ಲದವನಾಗಿ ನಾಮರೂಪಗಳಲ್ಲಿ ಇಲ್ಲಿಯೇ ಪ್ರವೇಶಿರುವನು.

ಮತ್ತೊಬ್ಬರಿಗೆ ಕಾಣಿಸದೆ ನೋಡುತ್ತಲೂ,ತಾನು ಕೇಳಿಸದೆ  ಕೇಳುತ್ತಲೂ ,ಯೋಚನೆಗೆ ಸಿಕ್ಕದೆ ಯೋಚಿಸುತ್ತಲೂ ಅರಿವಿಗೆ ಸಿಕ್ಕದೆ ಅರಿಯುತ್ತಲೂ  ಎಲ್ಲಾರೂಪಗಳನ್ನೂ ಕಂಡು

ಧೀರನು  ಅವುಗಳಿಗೆ ಹೆಸರನ್ನು ಮಾಡಿಕೊಂಡು  ಕರೆಯುತ್ತಲೂ ಇರುವನು.(ಪುಟ18)

 

ವಿಷಯದಲ್ಲಿ ಅದನ್ನು ಸೃಷ್ಟಿಸಿ ಅದನ್ನೇ ಅನುಪ್ರವೇಶಿಸಿದನು.'ಒಳಗೆ ಹೊಕ್ಕು ಜನರನ್ನು ಶಾಸನ ಮಾಡುತ್ತಿರುವನು.'' ಈತನು ಇಲ್ಲಿ ಪ್ರª Éೀಶಿಸಿರುವನು.'ಇವನು ನಿನ್ನ ಆತ್ಮನು'.'ಆತನು ಇದೇ ಎಲ್ಲೆಯನ್ನು ಸೀಳಿಕೊಂಡು ದ್ವಾರದಿಂದ ಒಳಗೆ ಬಂದು ಪ್ರವೇಶಿಸುವನು' ಎಲ್ಲಾ ಪ್ರಾಣಿಗಳಲ್ಲೂ ಹೊಕ್ಕಿರುವ ಆತ್ಮನು ದೇವತೆಯು ಹೀಗೆಂದು ಯೋಚಿಸಿತು.'

'ಒಳ್ಳೆಯದು .ನಾನು  ಮೂರು ದೇವತೆಗಳನ್ನು( ಜೀವಾತ್ಮನ ರೂಪದಿಂದ ಹೊಕ್ಕು

ನಾಮರೂಪಗಳನ್ನು ವಿಂಗಡಿಸುವೆನು)ಇವೇ ಮುಂತಾದ  ಸಾವಿರಾರು ಶ್ರುತಿಗಳಿರುವುವು.(ಪುಟ 18)

 

'ಆತ್ಮನೇ ಎಲ್ಲ ದೇವತೆಗಳೂ' 'ಒಂಬತ್ತು ದ್ವಾರಗಳ ದೇಹವೆಂಬ ಪುರದಲ್ಲಿ ದೇಹಿಯು ಏನೂ ಮಾಡದೆ ಕುಳಿತಿರುವನು.''ಕ್ಷೇತ್ರಜ್ಞನೂ ನಾನೆಂದು ತಿಳಿ.''ಎಲ್ಲಾ ಭೂತಗಳಲ್ಲಿಯೂ  ಸಮನಾಗಿ''ನೋಡುತ್ತಲೂ ಅನುಮತಿಯನ್ನು ಕೊಡುತ್ತಲೂ ''ಆದರೆ ಉತ್ತಮ ಪುರುಷನು ಬೇರೆ''ಶರೀರಗಳಲ್ಲಿದ್ದು ಅಶರೀರವಾಗಿರುವ'(?) ಇವೇ ಮುಂತಾದ ಶೃತಿಗಳೂ ಇರುವುವು.ಆದ್ದರಿಂದ ನೀನುಜಾತಿ,ಅನ್ವಯ,ಸಂಸ್ಕಾರ-ಇವು ಯಾವುವೂ ಇಲ್ಲದವನೆಂದು ಸಿದ್ಧವಾಯಿತು.(ಪುಟ1)

 

17)ಭೇದಜ್ಞಾನವನ್ನು ಶ್ರುತಿಯಲ್ಲಿ ನಿಂದಿಸಿದೆ:

 

ಅವನು'ಅಜ್ಞನೂ  ಸುಖದುಃಖಗಳುಳ್ಳವನೂ  ಬದ್ಧನೂ ಸಂಸಾರಿಯೂ  ಆಗಿರುವ ನಾನೇ ಬೇರೆ.ನನಗಿಂತ  ವಿಲಕ್ಷಣನಾಗಿಯೂ  ಅಸಂಸಾರಿಯೂ  ಆಗಿರುವ ದೇವನೇ ಬೇರೆ. ಆತನನ್ನು ನಾನು ಬಲಿಯನ್ನು ಒಪ್ಪಿಸುವುದು,ನಮಸ್ಕಾರ ಮಾಡುವುದು-ಮುಂತಾದವುಗಳಿಂದಲೂ  ವಣಾಶ್ರಮಕಮ೯ಗಳಿಂದಲೂ  ಆರಾಧನೆ ಮಾಡಿ ಸಂಸಾರಸಾಗರದಿಂದ ಪಾರಾಗಬೇಕೆಂದು  ಬಯಸುತ್ತಿರುವೆನು.ಹೀಗಿರುವಲ್ಲಿ ನಾನು ಆತನೇ ಹೇಗಾದೇನು?'ಎಂದು ಕೇಳಿದರೆ ಆಚಾಯ೯ನು ಹೇಳಬೇಕಾದ್ದೇನೆಂದರೆ,'ಅಯ್ಯ,ಹೀಗೆಂದು ತಿಳಿಯಬೇಡ,ಏಕೆಂದರೆ  ಭೇದ ಜ್ಞಾನವನ್ನು ಶ್ರುತಿಯಲ್ಲಿ ಪ್ರತಿಷೇಧಮಾಡಿರುತ್ತದೆ.ಭೇದಜ್ಞಾನವು ಹೇಗೆ ಪ್ರತಿಷಿದ್ದವಾಗಿದೆ ಎಂದರೆ ಅದಕ್ಕೆ ಹೇಳುತ್ತಾನೆ. ದೇವತೆಯು ಬೇರೆ ನಾನು ಬೇರೆ -ಎಂದು ಉಪಸನೆ ಮಾಡುವವನಿರುವನಲ್ಲ ಅವನು ಅರಿಯನು''ಆತ್ಮನಿಗಿಂತ ಬ್ರಾಹ್ಮಣ್ಯವನ್ನು ಬೇರೆ ಎಂದು ಯಾರು ತಿಳಿಯುವನು ಅವನನ್ನು ಬ್ರಾಹ್ಮಣ್ಯವು ತಿರಸ್ಕರಿಸುತ್ತದೆ''ಯಾವನು  ಬ್ರಹ್ಮದಲ್ಲಿ ಭೇದವನ್ನು ಅರಿಯುವನೋ ಅವನು ಸಾವಿನ ಮೇಲೆ ಸಾವನ್ನು ಪಡಯುತ್ತಿರುವನು'.ಇವೇ ಮುಂತಾದ ಶ್ರುತಿಗಳು 

ಪ್ರತಿಷೇಧಿಸುತ್ತವೆ.(ಪುಟ20)

 

18) ಭೇದಜ್ಞಾನವು ಸಂಸಾರಕ್ಕೂ ಅಭೇದಜ್ಞಾನವು  ಮೋಕ್ಷಕ್ಕೂ ಕಾರಣ:

 

ಇದೇಶ್ರುತಿಗಳು ಭೇದಜ್ಞಾನದಿಂದ ಸಂಸಾರಗತಿಯಾಗುವುದೆಂದು ತಿಳಿಸುತ್ತವೆ.ಇದಲ್ಲದೆ ಅಭೇದ ಜ್ಞಾನದಿಂದ  ಮೋಕ್ಷವಾಗುವುದೆಂದು  ಸಾವಿರಾರು ಶ್ರುತಿಗಳು ಹೇಳುತ್ತವೆ.ಹೇಗೆಂದರೆ

1)'ಅದೇ ಆತ್ಮನು ಅದೇ ನೀನು'

2)'ಯಾವನಿಗೆ ಆಚಾಯ೯ವು ಇರುವನೋ ಅವನಿಗೆ ತಿಳಿಯುವುದು'

3)ಎಲ್ಲಿಯವರೆಗೆ ಶರೀರವು ಬೀಳದಿರುವುದೋ  ಅಲ್ಲಿಯವರೆಗೇ ಅವನಿಗೆ ತಡವು.ಆಮೇಲೆ ಕೂಡಲೇ ಸತ್ತನ್ನು ಸೇರಿಕೊಳ್ಳುವನು'

 ಎಂದು ಅಭೇದ ಜ್ಞಾನದಿಂದಲೇ  ಮೋಕ್ಷವುಂಟಾಗುವುದೆಂದು ತಿಳಿಸುತ್ತವೆ.ಕಳ್ಳನಲ್ಲದವನಿಗೆ

ಕೈ ಸುಡದಿರುವುದೇ ಮುಂತಾದವಿದ್ದಂತೆ'ಸತ್ಯನಾದ ಪರಮಾತ್ಮನಲ್ಲಿ ತಾತ್ಪಯ೯ವುಳ್ಳವನಿಗೆ

ಸಂಸಾರವುವಿದಿಲ್ಲ ಎಂದು ದೃಷ್ಟಾಂತದಿಂದ ತಿಳಿಸುತ್ತವೆ.ಅವು ಇಲ್ಲಿ ಹುಲಿಯಾಗಿರಲಿ(ಸಿಂಹವಾಗಿರಲಿ)ಮೊದಲು ಏನೇನಾಗಿದ್ದವೋ  ಅದದೇ ಎಚ್ಚೆತ್ತಬಳಿಕ ಆಗಿಬಿಡುವವು.'ಮುಂತಾದ ವಾಕ್ಯದಿಂದಲೂ  ಭೇದಜ್ಞಾನಿಗಳಿಗೆ ಸಂಸಾರಗತಿಯನ್ನು ತಿಳಿಸುವವು.ಅಭೇದದಶ೯ನದಿಂದ 'ಅವನು ಸ್ವರಾಜನಾಗುವನು'ಎಂದು ಹೇಳಿ ಅದಕ್ಕೆ ವಿಪರೀತವಾದ ಭೇದದಶ೯ನದಿಂದ  ಸಂಸಾರಗತಿಯಾಗುವುದೆಂದು 'ಯಾರು ಇದಕ್ಕಿಂತ ಬೇರೆಯಾಗಿ ತಿಳಿಯುವರೋ  ಅವರಿಗೆ ಮತ್ತೊಬ್ಬ ರಾಜನಿರುವನು.ಅವರ ಲೋಕವು ಕ್ಷಯವಾಗುವುದು'ಎಂದು ತಿಳಿಸುವವು.ಹೀಗೆ ಪ್ರತಿಶಾಖೆಯಲ್ಲಿಯೂ ಶ್ರುತಿಗಳು ತಿಳಿಸುತ್ತವೆ.

 

ಆದ್ದರಿಂದ 'ನಾನು ಬ್ರಾಹ್ಮಣ ಪುತ್ರನು,ಇಂಥ ವಂಶದವನು,ಸಂಸಾರಿಯು,ಪರಮತ್ಮನಿಗಿಂತ ವಿಲಕ್ಷಣನು'ಎಂದು ನೀನು ಸುಳ್ಳನ್ನೇ ಹೇಳಿರುವೆ.(ಪುಟ21)

 

1)ಕಮ೯ತ್ಯಾಗವೇ ಶಾಸ್ತ್ರದ ಉಪದೇಶ:

 

ಆದ್ದರಿಂದ  ಹೀಗೆ ಭೇದದಶ೯ನವನ್ನು  ಶ್ರುತಿಯಲ್ಲಿ  ಪ್ರತಿಷೇಧ ಮಾಡಿರುವುದರಿಂದಲೂ,ಕಮ೯ವನ್ನು ಸ್ವೀಕರಿಸುವುದು ಭೇದವಿಷಯವಾಗಿರುವುದರಿಂದಲೂ ,ಯಜ್ಞೋಪವೀತವೇ  ಮುಂತಾದದ್ದು ಕಮ೯ಕ್ಕೇ ಸಾಧನವಾಗಿರುವುದರಿಂದಲೂ ಪರಮತ್ಮನಿಗೂ ,ಜೀವನಿಗೂ ಅಭೇದಜ್ಞಾನವನ್ನು ಹೇಳಿದ್ದರಿಂದ ಕಮ೯ಸಾಧನವನ್ನು ಸ್ವೀಕರಿಸಬಾರದೆಂದೂ  ಹೇಳಿದಂತಾಯಿತೆಂದು ತಿಳಿಯಬೇಕು.ಏಕೆಂದರೆ  ಕಮ೯ಗಳೂ ಅವುಗಳ ಸಾಧನವಾಗಿರುವ ಯಜ್ಞೋಪವೀತವೇ  ಮುಂತಾದವುಗಳು ಪರಮಾತ್ಮನಿಗೂ ತನಗೂ ಅಭೇದವೆಂದು ತಿಳಿಯುವ ಜ್ಞಾನಕ್ಕೆ ವಿರುದ್ಧವಾಗಿರುತ್ತವೆ.ಸಂಸಾರಿಗೆ ಕಮ೯ಗಳನ್ನೂ  ಅದರ ಸಾಧನವಾದ ಯಜ್ಞೋಪವೀತಾದಿಗಳನ್ನೂ  ವಿಧಿಸಿದೆಯೆ ಹೊರತು ಪರಮತ್ಮನಿಗೂ ತನಗೂ ಭೇದವಿಲ್ಲವೆಂದು ಅರಿತುಕೊಂಡವನಿಗೆ ವಿಧಿಸಿಲ್ಲ.ಭೇದದಶ೯ನ ಮಾತ್ರದಿಂದಲೇ  ಪರಮಾತ್ಮನಿಗಿಂತ ನಾನು ಬೇರೆಯಾಗಿರುವುದು.(ಪುಟ22)

 

20) ಶಾಸ್ತ್ರದಲ್ಲಿ ಕಮ೯ನಿವೃತ್ತಿಯನ್ನು ಹೇಳಿದೆ ಎಂಬುದು ಹೇಗೆ?:

 

ಕಮ೯ಗಳನ್ನು ಮಾಡಬೇಕಾಗಿದ್ದು ಅವುಗಳನ್ನು ಬಿಡಿಸಬೇಕೆಂಬ ತಾತ್ಪಯ೯ವು  ಶ್ರುತಿಗೆ ಇಲ್ಲದಿದ್ದರೆ ಕಮ೯ಸಾಧನಗಳ ಸಂಬಂಧವಿಲ್ಲದವನೂ ಕಮ೯ನಿಮಿತ್ತವಾಗಿರುವ ಜಾತಿ ,ಆಶ್ರಮ-ಮುತಾದ ಸಂಬಂಧಗಳು ಇಲ್ಲದವನೂ  ಆದ ಪರಮಾತ್ಮನಿಗೂ  ಆತ್ಮನಿಗೂ ಅಭೇದವನ್ನು ತಿಳಿಯಬೇಕೆಂದು 'ಅದು ಆತ್ಮನು ಅದೇ ನೀನಾಗಿರುವೆ'ಎಂಬುದೇ ಮುಂತಾದ ನಿಶ್ಚಿತರೂಪವಾದ  ವಾಕ್ಯಗಳಿಂದ ಹೇಳುತ್ತಿರಲಿಲ್ಲ.ಭೇದ ವಿಜ್ಞಾನದ ನಿಂದೆಯನ್ನೂ ಮಾಡುತ್ತಿರಲಿಲ್ಲ.

'ಇದು ಬ್ರಾಹ್ಮಣನ ನಿತ್ಯವಾದ ಮಹಿಮೆಯು'ಕಮ೯ದಿಂದ ಬೆಳೆಯುವುದಿಲ್ಲ,ಕಡಿಮೆಯಾಗುವುದೂ ಇಲ್ಲ''ಪುಣ್ಯದಿಂದಲೂ ಒಡಗೂಡದ ಪಾಪದಿಂದಲೂ ಒಡಗೂಡದ ''ಇಲ್ಲಿ ಕಳ್ಳನು ಕಳ್ಳನಾಗಿರುವುದಿಲ್ಲ'-ಮುಂತಾದ ವಾಕ್ಯದಿಂದ ಕಮ೯ಕ್ಕೆ ಸಂಬಂಧಪಡದ ಸ್ವರೂಪವುಳ್ಳವನೆಂದೂ  ಕಮ೯ಗಳನ್ನೂ ಕಮ೯ಸಾಧನವಾದ ಯಜ್ಞೋಪವೀತಾದಿಗಳನ್ನೂ ಪರಿತ್ಯಾಗ ಮಾಡಿಸದ  ಅಭಿಪ್ರಾಯವಿಲ್ಲದ ಪಕ್ಷದಲ್ಲಿ ಶ್ರುತಿಯು ಹೇಳುತ್ತಿರಲಿಲ್ಲ.

 

ಆದ್ದರಿಂದ ಮುಮುಕ್ಷುವಾದವನು  ಸಾಧನಸಹಿತವಾಗಿ ಕಮ೯ವನ್ನು ಬಿಟ್ಟು ಬಿಡಬೇಕು.ಏಕೆಂರೆ ಅದು ತನಗೂ ಪರಮಾತ್ಮನಿಗೂ ಅಭೇದವೆಂಬ ಜ್ಞಾನಕ್ಕೆ ವಿರೋಧವಾಗಿರುತ್ತದೆ ಮತ್ತು ಆತ್ಮನು ಶ್ರುತಿಗಳಲ್ಲಿ ಹೇಳಿರುವ ಲಕ್ಷಣದ ಪರಮಾತ್ಮನೇ ಎಂದು ತಿಳಿದುಕೊಳ್ಳಬೇಕು.(ಪುಟ 24) 

 

21)ಶಂಕೆ:ಆತ್ಮೈಕ್ಯಜ್ಞಾನವು ಪ್ರತ್ಯಕ್ಷವಿರುದ್ಧವಲ್ಲವೆ?

 

ಆತನು ಪೂಜ್ಯರೆ,ದೇಹವನ್ನು ಸುಟ್ಟರಾಗಲೀ  ಕತ್ತರಿಸಿದರಾಗಲೀ  ನನಗೆ ನೋವಾಗುವುದು ಪ್ರತ್ಯಕ್ಷವು.ಹಸಿವು ಮುಂತಾದ ನಿಮಿತ್ತದಿಂದ ನನಗೆ ದುಃಖವಾಗುವುದೂ ಪ್ರತ್ಯಕ್ಷವಾಗಿದೆ.ಅದರೆ ಪರಮಾತ್ಮನು ಯಾವ ಪಾಪವೂ ಇಲ್ಲದವನೆಂದೂ,ಮುಪ್ಪಿಲ್ಲದವನೆಂದೂ ಶೋಕವಿಲ್ಲದವನೆಂದೂ  ಮರಣವಿಲ್ಲದವನೆಂದೂ  ಹಸಿವಿಲ್ಲದವನೆಂದೂ ನೀರಡಿಕೆಯಿಲ್ಲದವನೆಂದೂ ಯಾವ ವಾಸನೆಯಾಗಳೀ

ಸವಿಯಾಗಲೀ ಇಲ್ಲದವನೆಂದೂ  ಎಲ್ಲ ಶ್ರುತಿಗಳಲ್ಲಿಯೂ ಸ್ಮøತಿಗಳಲ್ಲಿಯೂ ಹೇಳಿರುತ್ತದೆ.ಹೀಗಿರುವಲ್ಲಿ ಪರಮಾತ್ಮನಿಗಿಂತ ಬೇರೆಯ ಸ್ವರೂಪದವನೂ  ಅನೇಕ ಸಂಸಾರಧಮ೯ಗಳಿಂದ ಕೂಡಿರುವವನೂ  ಅಗಿರುವ ನಾನು  ಪರಮಾತ್ಮನೇ ನಾನೆಂದೂ ಸಂಸಾರಿಯಾದ ನಾನು ಪರಮತ್ಮನೆಂದೂ ಬೆಂಕಿಯು ತಣ್ಣಗಿದೆ ಎಂದು ತಿಳಿಯುವಂಂತೆ(ವಿರುದ್ಧವಾಗಿ)ಹೇಗೆ ತಿಳಿದುಕೊಳ್ಳಲಿ?ಮತ್ತು ಸಂಸಾರಿಯಾಗಿದ್ದುಕೊಂಡು  ಎಲ್ಲಾ ಬಗೆಯ   ಭ್ಯುದಯದ ಮತ್ತು ನಿಃಶ್ರೇಯಸದ ಸಾಧನಗಳನ್ನು ಮಾಡುವುದಕ್ಕೆ  ಅಧಿಕಾರಿಯಾಗಿರಿವಲ್ಲಿ  ಅಭ್ಯುದಯಕ್ಕೂ ನಿಃಶ್ರೇಯಸಕ್ಕೂ  ಸಾಧನವಾಗಿರುವ ಕಮ೯ಗಳನ್ನೂ , ಕಮ೯ಗಳಿಗೆ ಸಾಧನವಾಗಿರುವ ಯಜ್ಞೋಪವೀತಾದಿಗಳನ್ನೂ  ಹೇಗೆ ಬಿಡಲಿ?ಎಂದು ಕೇಳಿದರೆ-(ಪುಟ 25)

 

22)ಪರಿಹಾರ:ಆತ್ಮನಲ್ಲಿ ವೇದನೆಯು ಪ್ರತ್ಯಕ್ಷವಾಗಿಲ್ಲ:

 

ಅವನಿಗೆ ಹೇಳಬೇಕಾದ್ದೇನೆಂದರೆ:ದೇಹವನ್ನು ಸುಟ್ಟರಾಗಲೀ ಕತ್ತರಿಸಿದರಾಗಲೀ  ನನಗೆ ನೋವಾಗುವುದು ಪ್ರತ್ಯಕ್ಷವಾಗಿದೆ.'ಎಂದೆಯಷ್ಟೆ.ಅದು ಸರಿಯಲ್ಲ.ಏಕೆಂದರೆ ಮರವನ್ನು ಸುಟ್ಟರಾಗಲೀ ಕತ್ತರಿಸಿದರಾಗಲೀ ಮರವು ಅರಿಯುವವನಿಗಿಂತ ಬೇರೆಯಾಗಿ ಕಾಣಿಸುವಂತೆ,ಅರಿಯುತ್ತಿರುವ ಆತ್ಮನಿಗೆ ಅರಿಯಲ್ಪಡುತ್ತಿರುವ  ಅರಿವಿನ ಕಮ೯ವಾದ ಶರೀರದಲ್ಲಿ ಸುಟ್ಟ ಅಥವಾ ಕತ್ತರಿಸಿದ  ನೋವು ಕಾಣಬರುವುದರಿಂದ  ಸುಡುವುದೇ ಮುಂತಾದದ್ದು ಎಲ್ಲಿರುವುದೋ ನೋವೂ ಅದ್ನು ಆಶ್ರಯಿಸಿಯೇ  ಇರುವುದೆನ್ನಬೇಕು.ಎಲ್ಲಿ ಸುಡುವುದು ಕತ್ತರಿಸುವುದು ಮುಂತಾದದ್ದು ಆಗುತ್ತದೆಯೋ  ಅಲ್ಲಿಯೇ ಸುಡುವುದು ಮುಂತಾದದ್ದರಿಂದ  ಅರಿಯುವವನಲ್ಲಿ ಇದೆ ಎಂದು  ಹೇಳುವುದಿಲ್ಲ.ಅದುಹೇಗೆ? ಎಂದರೆ'ನಿನಗೆ ನೋವು ಎಲ್ಲಿ?'ನನಗೆ ತಲೆಯಲ್ಲಿ ಎಂದೋ ಅಥವ ನನಗೆ ಎದೆಯಲ್ಲಿ ಹೊಟ್ಟೆಯ್ಲಿ ನೋವು'ಎಂದೋ ಎಲ್ಲಿ ಸುಡುವುದೇ ಮುಂತಾದದ್ದು ಆಗಿರುವುದೋ ಅಲ್ಲಿಯೇ ಹೇಳುತ್ತಾರೆಯೇ ಹೊರತು 'ಅರಿಯುವ ನನ್ನಲ್ಲಿ'ಎಂದು ಹೇಳುವುದಿಲ್ಲ.ಅರಿಯುವ ಆತ್ಮನೇ ನೋವಾಗಲೀ  ನೋವಿಗೆ ಕಾರಣವಾದ ಸುಡುವುದು  ಕತ್ತರಿಸುವುದು(ದೇಹದ ಭಾಗಗಳನ್ನು ಹೇಳು)ವಂತೆ , ನೋವುಗೆ (ತಾವೇ) ಆಶ್ರಯವೆಂದು ಹೇಳುತ್ತಿದ್ದರು.ಮತ್ತು(ಅದು ಅರಿಯುವ ಆತ್ಮನಲ್ಲಿದ್ದರೆ)ಕಣ್ಣಿನಲ್ಲಿರುವ ರೂಪವು (ಕಣ್ನಿಗೆ ಕಾಣುವುದಕ್ಕೇ ಆಗದೆ ಇರು)ವಂತೆ,ಅದು ತಾನೂಆತ್ಮನಿಗೆ ಕಾಣಿಸದೆಯೂ  ಹೋಗಬೇಕಾಗುತ್ತಿತ್ತು.ಆದಕಾರಣ ಹೀಗೆ ಸುಟ್ಟ ಗಾಯ ,ಕತ್ತರಿಸಿದ ಗಾಯ ,ಮುಂತಾದವುಗಳು

 ಎಲ್ಲಿರುವುವೋ ಅದೇ ಅಶ್ರಯದಲ್ಲಿರುವುದಾಗಿ ಕಂಡುಬರುವುದರಿಂದ  ಸುಟ್ಟದ್ದು ಮುಂತಾದವುಗಳಂತೆ ನೋವೂ ಕಮ೯ರೂಪವಾದದ್ದೇ.(ಪುಟ26)

 

ಮತ್ತು ನೋವು ಅಕ್ಕಿಯನ್ನು ಬೇಯಿಸುವ ಕ್ರಿಯೆಯಂತೆ ಭಾವರೂಪವಾಗಿರುವುದರಿಂದ ಆಶ್ರಯವುಳ್ಳದ್ದಾಗಿರಬೇಕು.ವೇದನೆಗೆ  ಸಮಾನವಾದ ಆಶ್ರಯವೇ  ಅದರ ಸಂಸ್ಕಾರಕ್ಕೂ ಇರಬೇಕು.ಏಕೆಂದರೆ ಸ್ಮøತಿಸಮಾನಕಾಲದಲ್ಲಿಯೇ  ಅದು ಅನುಭವಕ್ಕೆ ಬರುತ್ತದೆ.ನೋವಿನವಿಷಯದಲ್ಲಿಯೂ ಅದರ ನಿಮಿತ್ತದ ವಿಷಯದಲ್ಲಿಯೂ  ಉಂಟಾಗುವ ದ್ವೇಶವೂ  ಸಂಸ್ಕಾರದ ಆಶ್ರಯದಲ್ಲಿಯೇ ಆಗುವವು.(ಪುಟ27)

 

ಆದ್ದರಿಂದಲೇ ರೂಪದ ಸಂಸ್ಕಾರವು  ಯಾವ ಉಪಾಧಿಯಲ್ಲಾಗುವುದೋ ಅದೇ ಉಪಾಧಿಯಾದ

 ಬುದ್ಧಿಯಲ್ಲಿಯೇ ರಾಗದ್ವೇಷಗಳೂ ಭಯವೆಂಬುದೂ  ಕಾಣಬರುವವಾದ್ದರಿಂದ  ಜ್ಞಾತೃವಾದ ಆತ್ಮನು ಯಾವಾಗಲೂ ಶುದ್ಧನೂ  ಭಯರಹಿತನೂ ಆಗಿರುತ್ತಾನೆ.'ಎಂದು ದೊಡ್ಡವರು ಹೇಳಿರುತ್ತಾರೆ.

 

ಹಾಗಾದರೆ  ರೂಪಾದಿಗಳ ಸಂಸ್ಕಾರವೇ ಮುಂತಾದವುಗಳು ಯಾವ ಆಶ್ರಯದಲ್ಲಿ ಉಂಟಾಗುತ್ತದೆ.?

ಉತ್ತರ:ಹೇಳುತ್ತೇವೆ.ಕಾಮಾದಿಗಳು ಎಲ್ಲಿ ಆಗುತ್ತವೆಯೋ   ಅಲ್ಲಿಯೇ ಆಗುತ್ತವೆ.

 ಪ್ರಶ್ನೆ: ಹಾಗಾದರೆ  ಕಾಮಾದಿಗಳು ಎಲ್ಲಿ ಆಗುವವು?

ಉತ್ತರ:'ಕಾಮವು ,ಸಂಕಲ್ಪವು,ಸಂಶಯವು-ಎಲ್ಲವೂ ಮನಸ್ಸೇ ಮುಂತಾದ ಶ್ರುತಿ ಪ್ರಮಾಣದಿಂದ  ಅವು ಬುದ್ಧಿಯಲ್ಲಿಯೇ ಆಗುವವು.ಏಕೆಂದರೆ ರೂಪಗಳು ಏತರಲ್ಲಿ ನಿಂತಿವೆ?ಎಂದರೆ ಹೃದಯದಲ್ಲಿಯೇ(ಬೃ.3--20).'ಇವನ ಹೃದಯವನ್ನು ಆಶ್ರಯಿಸಿಕೊಂಡಿರುವ ಕಾಮಗಳು  ಯಾವಾಗ ಬಿಡುಗಡೆಯಾಗುವವೋ' 'ಆಗ ಹೃದಯದ  ಶೋಕಗಳೆಲ್ಲವನ್ನೂ ಇವನು ದಾಟಿರುತ್ತಾನಷ್ಟೆ?' ' ಪುರುಷನು ಅಸಂಗನಲ್ಲವೇ?' ' ಆತ್ಮನ ರೂಪವು  ಕಾಮವನ್ನು ಮೀರಿರುತ್ತದೆ'ಎಂಬಿವೇ  ಮುಂತಾಗಿರುವ ಇಚ್ಛೆ,ದ್ವೇಷ-ಮುಂತಾದವುಗಳು  ವಿಷಯವಾದ ಕ್ಷೇತ್ರದ ಧಮ೯ವೇ ಹೊರತು  ಆತ್ಮನ ಧಮ೯ವಲ್ಲ ಎಂದು ಹೇಳುವ -ಸ್ಮøತಿಗಳಿಂದಲೂ  ಅಶುದ್ಧಿಯು ವಿಷಯ (ಅನಾತ್ಮಕ್ಕೇ) ಸೇರಿದ್ದೇ ಹೊರತು  ವಿಷಯಿಯಾದ  ಆತ್ಮನಲ್ಲಿರುವುದಿಲ್ಲವೆಂದು ನಿಣ೯ಯವಾಗುತ್ತದೆ.(ಪುಟ28)

 

24) ಜೀವನು ಪರಮಾತ್ಮನೇ:ಅದ್ದರಿಂದ ರೂಪವೇ ಮೊದಲಾದವುಗಳ  ಸಂಸ್ಕಾರವೇ ಮುಂತಾದ ಅಶುದ್ಧಿಯ ಸಂಬಂಧವೇ ಇಲ್ಲದಿರುವುದರಿಂದ ಪರಮಾತ್ಮನಿಗಿಂತ ನೀನು ವಿಲಕ್ಷಣನಲ್ಲ.ಹೀಗೆ ಪ್ರತ್ಯಕ್ಷವೇ ಮುಂತಾದ ಪ್ರಮಾಣಗಳಿಗೆ ವಿರೋಧವಿಲ್ಲದೆ ಇರುವುದರಿಂದ 'ನಾನು ಪರಮಾತ್ಮನೇ' ಎಂದು ತಿಳಿಯುವುದು ಯುಕ್ತವೇ."ಅದು ತನ್ನನ್ನೇ 'ನಾನು ಬ್ರಹ್ಮವು'ಎಂದು ತಿಳಿದುಕೊಂಡಿತು.ಅದರಿಂದ ಅದು ಸವ೯ವೂ vಯಿತು.ಅದರಂತೆ ಈಗಲೂ ನಾನೇ ಬ್ರಹ್ಮವೆಂದು ತಿಳಿದುಕೊಂಡವನು ಸವ೯ವೂ ಆಗುತ್ತಾನೆ.

 

1) ಏಕಧೈವಾನುದ್ರಷ್ಟವ್ಯಮ್'(ಬೃ.4-4-20)

ಆತ್ಮಸ್ವರೂಪವು ಒಂದೇ ಎಂದು ಕಂಡುಕೊಳ್ಳಬೇಕು.

2)ಆತ್ಮೈವಧಸ್ತಾತ್'(ಛಾಂ.7-25-2)

ಆತ್ಮನು ಕೆಳಗಡೆ ಇದ್ದಾನೆ.

3)'ಸವ೯ಮಾತ್ಮಾನಮ್  ಪಶ್ಯೇತ್'(ಬೃ.ಮಾ4-4-23)

ಎಲ್ಲವನ್ನೂ ಆತ್ಮನೆಂದೇ ಕಾಣಬೇಕು.

4) ತತ್ಸತ್ಯಂ ಆತ್ಮಾ ತತ್ವಮಸಿ'(ಛಾಂ.6-8-7)

ಅದು ಸತ್ಯವು ಅದು ಆತ್ಮನು,ನೀನು ಅದಾಗಿರುವೆ.

 

5)ಇದಂ ಸವ೯ಂ ಯದಯಮಾತ್ಮಾ(ಬೃ.2-406)

ಇದೆಲ್ಲವೂ ಆತ್ಮನೆಂಬುದೇ.

 

6)ಸದೇವಸೋಮ್ಯ(ಛಾಂ.6-2-1)

ಸೋಮ್ಯನೆ,ಮೊದಲು ಇದು ಸತ್ತೇ ಆಗಿತ್ತು.

 

7)'ಅನಂತರಂಅಬಾಹ್ಯಮ್(ಬೃ.2-4-1)

ಒಳಗಿಲ್ಲದ್ದು ಹೊರಗಿಲ್ಲದ್ದು.

 

8)' ಬಾಹ್ಯಾಭ್ಯಂತರೋ ಹ್ಯಜಃ'(ಮುಂ.2-1-2)

ಹೊರಗೂ ಒಳಗೂ ಜನ್ಮಹಹಿತನಾದವನೇ.

 

)'ಬ್ರಹ್ಮೈವೇದಮ್'(ಮುಂ.2-2-15)

ಇದು ಬ್ರಹ್ಮವೇ

 

10)'ಏತಯಾದ್ವಾರಾ ಪ್ರಾಪದ್ಯತೆ' (.1-12)

ದ್ವಾರದಿಂದ ದೇಹವನ್ನು ಸೇರಿದನು.

 

11)'ಪ್ರಜ್ಞಾನಸ್ಯ ನಾಮಧೇಯಾನಿ'(3-1)

ಪ್ರಜ್ಞಾನದ ಹೆಸರುಗಳು.

 

12)'ಸತ್ಯಜ್ಞಾನಮನಂತಮ್ ಬ್ರಹ್ಮ'(ತೈ.2-1)

ಸತ್ಯವೂ ಜ್ಞಾನವೂ ಅನಂತನೂ ಆಗಿರುವ ಬ್ರಹ್ಮವು

 

13)ತತ್ ಸೃಷ್ಟ್ವಾ ತದೇವಾನುಪ್ರಾವಿಶತ್'(ತೈ.2-6)

ಅದನ್ನು ಸೃಷ್ಟಿಸಿ ತಾನೇ ಪ್ರವೇಶಿಸಿತು.

 

14)'ಏಕೋ ದೇವಃಸವ೯ಭೂತೇಷು ಗೂಢಃ ಸವ೯ವ್ಯಾಪೀ'(ಶ್ವೇ.6-11)

ಒಬ್ಬನೇ ದೇವನು ಸವ೯ಭೂತಗಳಲ್ಲಿಯೂ  ಅಡಗಿರುವನು ಸವ೯ವ್ಯಾಪಿಯು

 

15) 'ಅಶರೀರಂ ಶರೀರೇಷು(.1-2-21)'

ಅಶರೀರನಾಗಿ ಶರೀರಗಳಲ್ಲಿರುವ ಆತ್ಮನನ್ನು

 

16)' ಜಾಯತೇ ಮ್ರಿಯತೇವಾ'(.1-2-18)

ಹುಟ್ಟುವುದೂ ಇಲ್ಲ ಸಾಯುವುದೂ ಇಲ್ಲ

 

17) 'ಸ್ವಪ್ನಾಂತಂ ಜಾಗರಿತಾನ್ತಂ'(.2-1-4)

ಸ್ವಪ್ನದ ಅವಸ್ಥೆಯನ್ನೂ  ಜಾಗರಿತದ ಅವಸ್ಥೆಯನ್ನೂ  (ನೋಡುವ ದೊಡ್ಡ ವಿಭುವನ್ನು  ಆತ್ಮನೆಂದು ತಿಳಿದುಕೊಂಡರೆ ಶೋಕಿಸುವುದಿಲ್ಲ.)

 

18)ತದೇಜತಿ ತನೈಜತಿ(.5)

ಅದು ಅಲುಗಡುತ್ತದೆ ಅದೇ ಅಲುಗಾಡುವುದೂ ಇಲ್ಲ'

 

1)ಅಹಂಮನ್ಯುರಭವಂ ಸೂಯ೯ಶ್ಚ(ಬೃ1-4-10)

ನಾನು ಮನುವೂ ಸೂಯ೯ನೂ ಆಗಿರುವೆನು

 

20)'ತತ್ಸತ್ಯಂ ಆತ್ಮಾ ತತ್ವಮಸಿ'(ಛಾಂ.6-8-7)

ಅದು ಸತ್ಯವು ಅದು ಆತ್ಮನು,ನೀನು ಅದಾಗಿರುವೆ.

 

'ಗುಹೆಯಲ್ಲಿರುವ ಪರಮಾತ್ಮನಿಗೆ ಎಲ್ಲಾ ಪ್ರಾಣಿಗಳೂ ಪುರಗಳು','ಆತ್ಮನೇ ಎಲ್ಲಾ ದೇವತೆಳು',ಒಂಬತ್ತು ಬಾಗಿಲಿನ ಪುರವಾದ ಈದೇಹದಲ್ಲಿ ವಶಿಯಾದವನು ಏನನ್ನೂ ಮಾಡದೆ ಸುಖವಾಗಿ ಕುಳಿತಿರುವನು.'ಸವ೯ಭೂತಗಳಲ್ಲಿ ಸಮನಾಗಿರುವ ಪರಮೇಶ್ವರನನ್ನು ಕಂಡವನೇ ನಿಜವಾಗಿ ಕಂಡವನು',ವಿದ್ಯಾವಿನಯ ಸಂಪನ್ನನಾದ ಬ್ರಾಹ್ಮಣನಲ್ಲಿಯೂ ಗೋವಿನಲ್ಲಿಯೂ,ಆನೆಯಲ್ಲಿಯೂ ನಾಯಿಯಲ್ಲಿಯೂ  ಚಂಡಾಲನಲ್ಲಿಯೂ ಪಂಡಿತರು ಸಮದಶಿ೯ಗಳಾಗಿರುವರು'.'ಬೇರೆಬೇರೆಯಾಗಿರುವ ಪ್ರಾಣಿಗಳಲ್ಲಿ ತಾನು ಬೇರೆಯಾಗದೆ ಇರುವನು''ವಾಸುದೇವನೇ ಎಲ್ಲವೂ' ಇವೇ ಮುಂತಾದ ಸ್ಮøತಿಪ್ರಮಾಣಗಳಿಂದಲೂ ನೀನು ಒಬ್ಬನೇ ಆತ್ಮನೂ ಪರಬ್ರಹ್ಮವೂ ಯಾವ ಸಂಸಾರದ ಧಮ೯ವೂ ಇಲ್ಲದವನು ಆಗಿರುವೆ-ಎಂದು ಸಿದ್ಧವಾಯಿತು(ಪುಟ31)

 

25)ದ್ವೈತವು ಅವಿದ್ಯಾಕೃತವಾದದ್ದು:

 

ಆಗ ಆತನು'ಪೂಜ್ಯರೆ,ಒಳಗಿಲ್ಲದೆ ಹೊರಗಿಲ್ಲದೆ ಹೊರಗೂ ಒಳಗೂ ಜನ್ಮರಹಿತವಾದ ಉಪ್ಪಿನ ಹರಳು ಎಲ್ಲೆಲ್ಲಿಯೂ ಉಪ್ಪೇ ಆಗಿರುವಂತೆ ಎಲ್ಲ ಚೈತನ್ಯದ ಗಟ್ಟಿಯೇ ಆಗಿರುವ ಆತ್ಮನು ಯಾವ ಬಗೆಯಾಕಾರಭೇದವೂ ಇಲ್ಲದವನಾಗಿ ಆಕಾಶದಂತೆ ಒಂದೇ ರೂಪವಾಗಿರುತ್ತಾನಾದರೆ'ಸಾದ್ಯವು ಅಥವಾ ಸಾಧನವು ,ಸಾಧಕನು'ಎಂದು ಶೃತಿಸ್ಮøತಿ ಲೋಕಪ್ರಸಿದ್ಧನಾಗಿಯೂ ನೂರಾರು ವಾದಿಗಳ ವಿರುದ್ಧಾಭಿಪ್ರಾಯಗಳಿಗೆ ವಿಷಯವಾಗಿಯೂ ಕಾಣಬರುತ್ತಿರುವ ಮತ್ತು ಕೇಳಿ ಬರುತ್ತಿರುವ ಇದು ಏನು?ಎಂದು ಕೇಳಿದರೆ ಆಚಾಯ೯ನು' ಕಾಣಬರುತ್ತಿರುವ ಮತ್ತು ಕೇಳಿಬರುತ್ತಿರುವ ಭೇದವಿದೆಯಲ ಇದು

ಅವಿದ್ಯಾಕೃತವಾದದ್ದು.ನಿಜವಾಗಿ ನೋಡಿದರೆ ಒಬ್ಬನೇ ಆಗಿರುವ ಆತ್ಮನು ಕಣ್ಣುಪರೆಯ ದೃಷ್ಟಿಯಿಂದ ಒಬ್ಬನೆ ಚಂದ್ರನು ಅನೇಕ ಚಂದ್ರರಂತೆ ಕಾಣುವ ಹಾಗೆ, ಅವಿದ್ಯಾ ದೃಷ್ಟಿಗೆ ಅನೇಕವಾಗಿರುವಂತೆ ಕಾಣುತ್ತಾನೆ.'ಎಲ್ಲಿ ಮತ್ತೊಂದಿರುವಂತೆ ಇರುವುದೋ ''ಎಲ್ಲಿ ದ್ವೈತದಂತೆ ಇರುವುದೋ ಅಲ್ಲಲ್ಲವೆ ಒಬ್ಬನು ಮತ್ತೊಬ್ಬನನ್ನು ಕಾಣುತ್ತಾನೆ.'ಇಲ್ಲಿ ಭೇದವಿರುವಂತೆ ಕಾಣುವನಲ್ಲ ಅವನು ಸಾವಿನ ಮೇಲೆ ಸಾವನ್ನು ಪಡೆಯುತ್ತಿರುವನು''ಇನ್ನು ಎಲ್ಲಿ ಬೇರೊಂದನ್ನು ಕಾಣುತ್ತಿರುವನೋ,ಬೇರೊಂದನ್ನು ಕೇಳುತತಿರುವನೋ ,ಬೇರೊಂದನ್ನು ಅರಿಯುತ್ತಿರುವನೋ ಅದು ಅಲ್ಪವಾದದ್ದು...........ಇನ್ನು ಅಲ್ಪವಾಗಿರುವುದಲ್ಲ, ಅದು ಮತ್ಯ೯ವು''ಕಾಯ೯ವು ಮಾತಿನಿಂದಾಗಿರುವ ಹೆಸರು ಮಾತ್ರ'ಆದ್ದರಿಂದ ಅದು ಅನೃತವು.' ದೇವತೆಗಳು ಬೇರೆ ನಾನು ಬೇರೆ ಎಂದು ತಿಳಿಯುವವನು ಅರಿಯನು ಎಂದು ಭೇದಜ್ಞಾನವನ್ನು ನಿಂದಿಸಿರುವುದು  ಹೊಂದುವುದಕ್ಕಾಗಿ  ದ್ವೈತವು ಅವಿದ್ಯಾಕೃತವು;'ಒಂದೇ ಎರಡನೆಯದಿಲ್ಲದ್ದು.'ಆದರೆ ಎಲ್ಲಿ ಈತನಿಗೆ ಸವ೯ವೂ ಆತ್ಮನೇ ಆಯಿತೊ  ಅಲ್ಲಿ ಏತರಿಂದ ಏನನ್ನು ನೋಡಿಯಾನು?' 'ಏಕತ್ವವನ್ನು ಕಂಡವನಿಗೆ ಯಾವ ಮೋಹವು ಯಾವಶೋಕವು?'-ಇವೇ ಮುಂತಾದ ಏಕತ್ವವನ್ನು ತಿಳಿಸುವ ಶ್ರುತಿಗಳಿಂದಲೂ  ದ್ವೈತವು ಅವಿದ್ಯಾಕೃತವೆಂದು ತಿಳಿಯಬೇಕು.(ಪುಟ 32)

 

26)ಶ್ರುತಿಯಲ್ಲಿ ಸಾಧ್ಯ ಸಾಧನಗಳನ್ನೂ  ಉತ್ಪತ್ಯಾದಿಗಳನ್ನೂ ಹೇಳಿರುವುದೇಕೆ?:

 

ಪ್ರಶ್ನೆ:ಹಾಗದರೆ ಪೂಜ್ಯರೆ,ಶ್ರುತಿಯಲ್ಲಿ ಸಾಧ್ಯಸಾಧನಾದಿ ಭೇದವನ್ನೂ ,ಉತ್ಪತ್ತಿ,ಪ್ರಲಯ-ಎಂಬ ಭೇದವನ್ನೂ ಏತಕ್ಕೆ ಹೇಳಿರುತ್ತದೆ?

 

ಉತ್ತರ:ಇದಕ್ಕೆ ಉತ್ತರವನ್ನು ಹೇಳುತ್ತೇವೆ.ಶರೀರವೇ  ಮುಂತಾದ ಭೇದವನ್ನು ಸ್ವೀಕರಿಸಿ  ತಾನು ಇಷ್ಟಾನಿಷ್ಟಗಳ ಸಂಬಂಧವುಳ್ಳವನು  ಎಂದು ತಿಳಿದುಕೊಂಡಿರುವ,ಸಾಧನಗಳಿಂದಲೇ ಇಷ್ಟಪ್ರಾಪ್ತಿಯನ್ನೂ ಅನಿಷ್ಟ ಪರಿರಾರವನ್ನೂ  ಬಯಸುತ್ತಾ,ಇಷ್ಟಾನಿಷ್ಟಗಳ ಪ್ರಾಪ್ತಿಪರಿಹಾರಗಳಿಗೆ ಉಪಾಯವು ಯಾವುದೆಂದು ವಿಂಗಡಿಸಿ ಅರಿಯದೆ ಇರುವ ಅವಿದ್ಯಾವಂತನಿಗೆ

ವಿಷಯದ ಅಜ್ಞಾನವನ್ನು ಮೆಲ್ಲಮೆಲ್ಲಗೆ ಕಳೆಯುವುದಕ್ಕೆ ಹೊರಟಿರುತ್ತದೆ.ಶಾಸ್ತ್ರ ಅದು ಸಾಧ್ಯಸಾಧನವೇ ಮುಂತಾದ ಭೇದವನ್ನು ವಿಧಾನ ಮಡುವುದಿಲ್ಲ.ಏಕೆಂದರೆ ಭೇದವು ಅನಿತ್ಯರೂಪವಾದ ಸಂಸಾರವು.ಶಾಸ್ತ್ರವು ಮತ್ತೇನುಮಾಡುವುದೆಂದರೆ ಉತ್ಪತ್ತಿ ಪ್ರಲಯ-ಮುಂತಾದ ಏಕತ್ವ ಯುಕ್ತಿಯನ್ನು ತೋರಿಸಿಕೊಟ್ಟು ಸಂಸಾರಕ್ಕೆ ಮೂಲವಾಗಿರುವ ಭೇದದೃಷ್ಟಿ ಎಂಬ ಅವಿದ್ಯೆಯನ್ನೇ ಕಿತ್ತುಹಾಕುತ್ತದೆ.

 

ಹೀಗೆ ಅವಿದ್ಯೆಯನ್ನು ಕಿತ್ತುಹಾಕಿದಮೇಲೆಶ್ರುತಿಸ್ಮøತಿ ನ್ಯಾಯಗಳಿಂದ  ಸಿದ್ಧವಾಗಿರುವ ಒಳಗಿಲ್ಲದ ಹೊರಗಿಲ್ಲದ ,ಒಳಗೂ ಹೊರಗೂ ಜನ್ಮರಹಿತವಾಗಿರುವ  ಒಂದೇ ಗಟ್ಟಿಯಾದ ಉಪ್ಪಿನ ಹರಳಿನಂತೆ

ಚೈತನ್ಯದ ಗಟ್ಟಿಯಾಗಿ ಆಕಾಶದಂತೆ ಎಲ್ಲೆಲ್ಲಿಯೂ ತುಂಬಿಕೊಂಡಿರುವ ಆತ್ಮನು ಒಬ್ಬನೇ ಎಂಬೀವಿಷಯದಲ್ಲಿಯೇಒಂದೇ ನಿಶ್ಚಿತವಾದ ಬುದ್ಧಿಯು ಪರಮಾಥ೯ದಶಿ೯ಗೆ ನೆಲೆನಿಲ್ಲುವುದು.ಆಗ ಸಾಧ್ಯ ಸಾಧನಗಳು,ಉತ್ಪತ್ತಿಪ್ರಲಯಗಳು -ಮುಂತಾದ ಭೇದದಿಂದಾಗಿರುವ ಅಶುದ್ಧಿಯ ವಾಸನೆಯು ಕೂಡ ಆತ್ಮನಲ್ಲಿದೆ  ಎಂಬುದು ಹೊಂದುವುದಿಲ್ಲ.(ಪುಟ34) 

 

27)ಪರಮಾಥ೯ ದಶ೯ನಕ್ಕೆ ಏಷಣಾತ್ರಯತ್ಯಾಗವು ಬೇಕು:

 

ಪರಮಾಥ೯ ಜ್ಞಾನವನ್ನು  ಪಡೆದುಕೊಳ್ಳಬೇಕೆಂದು ಬಯಸುವವನು ವಣ೯,ಆಶ್ರಮ-ಮುಂತಾದವುಗಳ ಅಭಿಮಾನದಿಂದಾಗಿರುವ  ಪಾಂಕ್ತ ರೂಪವಾದ,ಮಕ್ಕಳು,ವಿತ್ತ,ಲೋಕ-ಎಂಬ ಮೂರು ಏಷಣೆಗಳೇ ಮುಂತಾದವುಗಳನ್ನು ಬಿಟ್ಟು ಮೇಲಕ್ಕೇಳಬಾಕು.ಏಕೆಂದರೆ ಅಭಿಮಾನವು ಸರಿಯಾದ ಜ್ಞಾನಕ್ಕೆ ವಿರುದ್ಧವಾಗಿರುತದೆ.ಭೇದದಶ೯ನವನ್ನು ಶ್ರುತಿಯಲ್ಲಿ ನಿಂದಿಸಿರುವುದು ಹೊಂದುವುದರಿಂದಲೂ  ಹೀಗೆ ಮಾಡಬೇಕು.ಏಕೆಂದರೆ ಒಬ್ಬನೇ ಅತ್ಮನಲ್ಲಿ  ಅವನು ಅಸಂಸಾರಿಯೆಂಬ ಬುದ್ದಿಯು  ಶಾಸ್ತ್ರದಿಂದಲೂ ಯುಕ್ತಿಯಿಂದಲೂ  ಉಂಟಾದ ಮೇಲೆ(ಅವನು ಸಂಸಾರಿ ಎಂದು)ಇದಕ್ಕೆ ವಿರುದ್ಧವಾದ ಬುದ್ಧಿಯು ಉಂಟಾಗಲಾರದು.ಬೆಂಕಿಯಲ್ಲಿ ಅದು ತಣ್ಣಗಿದೆ ಎಂಬ ಬುದ್ಧಿಯಾಗಲೀ,ಶರೀರದಲ್ಲಿ ಮುಪ್ಪುಸಾವುಗಳೆಂಬ ಬುದ್ಧಿಯಾಗಲೀ ಆಗಲಾರದಷ್ಟೆ.ಆದ್ದರಿಂದ ಎಲ್ಲಾ ಬಗೆಯಕಮ೯ಗಳೂ  ಅವುಗಳ ಸಾಧನವಾಗಿರುವ ಯಜ್ಞೋಪವೀತಾದಿಗಳು ಅವಿದ್ಯೆಯ ಕಾಯ೯ವಾಗಿರುವುದರಿಂದ ಪರಮಾಥ೯ ದಶ೯ನದಲ್ಲಿ  ನಿಷ್ಠನಾದವನು ಅವುಗಳ್ನು ಬಿಟ್ಟು ಬಿಡಬೇಕು.(ಪುಟ36)

 

,,,,,,,,,,,,,,,,,,,,,,,ಮೊದಲನೆಯ ಅಧ್ಯಾಯ ಸಂಪೂಣ೯,,,,,,,,,,,,,,,,,,,,,,,,,,,,,,,,,,,,,,

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

ತಾನು,ಹೆಂಡತಿ,ಪುತ್ರ, ಮಾನುಷ ದೈವವಿತ್ತಗಳು-ಎಂಬ ಐದಕ್ಕೆ ಪಾಂಕ್ತ ಎಂದು ಹೆಸರು.  

  ....................................................................................................................

2)ಕೂಟಸ್ಥ ಅದ್ವಯಾತ್ಮಬೋಧ:

(ಅವಿದ್ಯೆಯೇ ಸಂಸಾರಕ್ಕೆ ನಿಮಿತ್ತ)

 

ಸುಖವಾಗಿ ಕುಳಿತಿದ್ದ ಬ್ರಹ್ಮನಿಷ್ಠನಾದ ಒಬ್ಬ ಬ್ರಾಹ್ಮಣನ ಬಳಿಗೆ ಒಬ್ಬ ಬ್ರಹ್ಮಚಾರಿಯು ಜನನ ಮರಣ ಲಕ್ಷಣವಾದ  ಸಂಸಾರದಿಂದ ವಿರಕ್ತನಾಗಿ ಅದರಿಂದ ಮುಕ್ತನಾಗಬೇಕೆಂಬ ಇಚ್ಛೆಯಿಂದ  ಬಳಿಸಾರಿ ಕೇಳಿದನೇನೆಂದರೆ :

 

ಪೂಜ್ಯರೆ,ನಾನು ಸಂಸಾರದಿಂದ ಹೇಗೆ ಮುಕ್ತನಾದೇನು?ಶರೀರ,ವಿಷಯ,ಇಂದ್ರಿಯ -ಇವುಗಳಿಂದಾದ ಅನುಭವವುಲ್ಳವನಾಗಿ ಎಚ್ಚರದಲ್ಲಿ ದುಃಖವನ್ನು ಅನುಭವಿಸುತ್ತಿರುವೆನು.ಹೀಗೆಯೇ ಕನಸಿನಲ್ಲಿಯೂ ಅನುಭವಿಸುತ್ತಿರುವೆನು.ತನಿನಿದ್ರೆಯನ್ನು ಪಡೆದು (ಆಗಾಗ್ಗೆ ಸ್ವಲ್ಪ)ವಿಶ್ರಮಿಸಿಕೊಂಡು ಮತ್ತೆ ಮತ್ತೆ ದುಃಖವನ್ನು ಅನುಭವಿಸುತ್ತಿರುವೆನು.ಇದೇ ನನ್ನ ಸ್ವಭಾವವೊ ಅಥವ ಬೇರೆಯ ಸ್ವಭಾವದವನಾಗಿರುವ  ನನಗೆ( ಸ್ಥಿತಿಯು ಯಾವುದಾದರೊಂದು )ನಿಮಿತ್ತದಿಂದ ಬಂದಿರುವುದೊ?ಸ್ವಭಾವವೇ ಆಗಿದ್ದರೆ ನನಗೆ ಬಿಡುಗಡೆಯ ಆಸೆಯೇ ಇಲ್ಲ.ಏಕೆಂದರೆ ಸ್ವಭಾವವನ್ನು ಬಿಡುವುದಕ್ಕೆ ಆಗುವುದಿಲ್ಲ.ಹಾಗಿಲ್ಲದೆ ಯಾವುದಾದರೊಂದು ನಿಮಿತ್ತದಿಂದ ಆಗಿದ್ದರೆಆ ನಿಮಿತ್ತವನ್ನು ಪರಿಹರಿಸಿಕೊಂಡರೆ ಬಿಡುಗಡೆಯದರೂ ಆದೀತು.(ಪುಟ 41)

 

ಅವನಿಗೆ ಗುರುವು ಹೇಳಿದನು'ಮಗನೆ ಕೇಳು.ಇದು ನಿನ್ನ ಸ್ವಭಾವವಲ್ಲ.ನಿಮಿತ್ತದಿಂದ ಆದದ್ದು.

 

ಹೀಗೆನ್ನಲು ಶಿಷ್ಯನು ಹೇಳಿದನು: ನಿಮಿತ್ತವು ಯಾವುದು?ಅದನ್ನು ಹೋಗಲಾಡಿಸುವ ಉಪಾಯವು ಯಾವುದು?ರೋಗದ ನಿಮಿತ್ತವು ಹೋದಮೇಲೆ ರೋಗಿಯು ತನ್ನ ಆರೋಗ್ಯ ಸ್ವಭಾವವನ್ನು ಪಡೆಯುವಹಾಗೆ ನಿಮಿತ್ತವು ತೊಲಗಿದ ಮೇಲೆ ನೈಮಿತ್ತಿಕವೂ ಇಲ್ಲವಾಗಿ ನನ್ನ ಸ್ವಬಾವವನ್ನು ಪಡೆಯಬೇಕಲ್ಲ. ನನ್ನ ಸ್ವಭಾವವಾದರೂ ಯಾವುದು?

 

ಗುರುವು ಇಂತೆಂದನು:'ಅವಿದ್ಯೆಯೇ ನಿಮಿತ್ತವು.'ವಿದ್ಯೆಯೇ ಇದನ್ನು ಹೋಗಲಾಡಿಸುವ ಉಪಾಯವು.ಅವಿದ್ಯೆಯು ಹೋದರೆ ಅದರ ನಿಮಿತ್ತವು ಇಲ್ಲವಾಗುವುದರಿಂದ ಜನನಮರಣಲಕ್ಷಣವಾದ  ಸಂಸಾರದಿಂದ ಬಿಡುಗಡೆಯನ್ನು ಹೊಂದುವೆ.!ಕನಸು ಎಚ್ಚರ-ಎಂಬ ದುಃಖವನ್ನೂ ಅನುಭವಿಸದೆ ಇರುವೆ.(ಪುಟ 42)

 

2) ಅವಿದ್ಯೆಗೆ ಆತ್ಮನೇ ವಿಷಯ: 

 

ಶಿಷ್ಯನು ಹೇಳಿದನು: ಅವಿದ್ಯೆ ಯವುದು?ಅದು ಯಾವ ವಿಷಯದಲ್ಲಿ ಉಂಟಾಗಿದೆ?ಮತ್ತು ಅವಿದ್ಯೆಯನ್ನು ತೊಲಗಿಸುವುದಾಗಿ ನನ್ನ ಸ್ವಭಾವವನ್ನು  ಪಡೆಯಿಸುವುದಲ್ಲ, ವಿದ್ಯೆ ಯಾವುದು?   

 

ಗುರುವು ರೀತಿ ಹೇಳಿದನು:ನೀನು ಅಸಂಸಾರಿಯಾದ ಪರಮಾತ್ಮನಾಗಿದ್ದುಕೊಂಡು 'ನಾನು ಸಂಸಾರಿಯಾಗಿರುವೆನು'ಎಂದೂ ಕತೃ೯ವಲ್ಲದಿದ್ದುಕೊಂಡು 'ಕತೃ೯'ಎಂದೂ ಭೋಕ್ತøವಲ್ಲದಿದ್ದುಕೊಂಡು 'ಭೋಕ್ತø'ವೆಂದೂ ನಿಜವಾಗಿ ಇರುತ್ತಿದ್ದರೂ ನಾನು'ಇಲ್ಲ'ವೆಂದೂ ತಪ್ಪಾಗಿ ತಿಳಿದುಕೊಂಡಿರುತ್ತೀಯೆ.ಇದೇ ಅವಿದ್ಯೆ.

 

ಶಿಷ್ಯನಿತೆಂದನು:'ನಾನು ಇದೇನೆಂಬುದು ಸರಿಯೇ;ಆದರೂ ನಾನು ಪರಮಾತ್ಮನಲ್ಲ.ಕತೃ೯೯ಭೋಕ್ತøತ್ವ ರೂಪವಾದ  ನನ್ನ ಸ್ವಭಾವವು.ಏಕೆಂದರೆ ಇದು ಪ್ರತ್ಯಕ್ಷವೇ  ಮುಂತಾದ ಪ್ರಮಾಣಗಳಿಂದ  ಅನುಭವದಲ್ಲಿ ತೋರುತ್ತಿದೆ.ಇದು ಅವಿದ್ಯೆಯ ನಿಮಿತ್ತದಿಂದ ಆದದ್ದಲ್ಲ.ಏಕೆಂದರೆ ಅವಿದ್ಯೆಯು ತನ್ನ ಆತ್ಮನ ವಿಷಯದಲ್ಲಿ ಉಂಟಾಗಲಾರದು.ಅವಿದ್ಯೆ ಎಂದರೆ ಒಂದು ವಸ್ತುವಿನಲ್ಲಿ  ಇನ್ನೊಂದರ ಧಮ೯ವನ್ನು ಹುಟ್ಟುಗಟ್ಟುವುದು.ಉದಾಹರಣೆಗೆ ತನಗೆ ಮೊದಲೇ ಗೊತ್ತಾಗಿರುವ  ಬೆಳ್ಳಿಯನ್ನು ಜ್ಞಾತೃವು ಗೊತ್ತಾಗಿರುವ ಕಪ್ಪೆಚಿಪ್ಪಿನಲ್ಲಿ,ಗೊತ್ತಾಗಿರುವ ಮನುಷ್ಯನನ್ನು ಮೋಟುಮರದಲ್ಲಿ ಆರೋಪಿಸುತ್ತಾನೆ.ಅಥವಾ ಗೊತ್ತಾಗಿರುವ ಮೋಟುಮರವನ್ನು  ಮನುಷ್ಯನಲ್ಲಿ ಆರೋಪಿಸುತ್ತಾನೆ.  ಆದರೆ

ಅಪ್ರಸಿದ್ಧವಾದುದನ್ನು  ಪ್ರಸಿದ್ಧವಾದದ್ದರಲ್ಲಾಗಲೀ ,ಪ್ರಸಿದ್ಧವಾದದ್ದನ್ನು  ಅಪ್ರಸಿದ್ಧವಾದದ್ದರಲ್ಲಾಗಲೀ ಆರೋಪಿಸುವುದಿಲ್ಲ.ಆದ್ದರಿಂದ ಆತ್ಮನಲ್ಲಿ ಅನಾತ್ಮವನ್ನು ಆರೋಪಿಸುವುದಿಲ್ಲ. ಏಕೆಂದರೆ ಆತ್ಮನು ಅಪ್ರಸಿದ್ಧನು.

ಇದರಂತೆ ಆತ್ಮನನ್ನು ಅನಾತ್ಮದಲ್ಲಿ ಆರೋಪಿಸುವುದೂ ಇಲ್ಲ.ಆತ್ಮನು ಅಪ್ರಸಿದ್ಧನಾಗಿರುವನೆಂಬುದೇ  ಇಲ್ಲಿಯೂ ಕಾರಣವಾಗಿರುತ್ತದೆ.(ಪುಟ44)

 

3) ಅಧ್ಯಾರೋಪಕ್ಕೆ ಪ್ರಸಿದ್ಧ ವಸ್ತುವೇ ಬೇಕೆಂದಿಲ್ಲ:

 

ಅವನಿಗೆ ಗುರು ಹೀಗೆಂದು ಹೇಳಿದನು:'ಹಾಗಲ್ಲ.ಏಕೆಂದರೆ ನಿಯಮವು ಬೇಪ೯ಡುತ್ತದೆ.ಅಯ್ಯ, ಮಗು,ಪ್ರಸಿದ್ಧವಾದುದನ್ನು ಪ್ರಸಿದ್ಧವಾದುದರಲ್ಲಿಯೇ ಅಧ್ಯಾರೋಪ ಮಾಡುತ್ತಾರೆಂದು  ನಿಯಮವನ್ನು ಕಲ್ಪಿಸುವುದಕ್ಕೆ ಆಗಲಾರದು.ಏಕೆಂದರೆ ಆತ್ಮನಲ್ಲಿಯೂ ಅಧ್ಯಾರೋಪ ಮಾಡುವುದು ಕಂಡು ಬರುತ್ತದೆ.'ನಾನು ಬೆಳ್ಳಗಿರುವೆನು''ನಾನು ಕಪ್ಪಗಿರುವೆನು'ದೇಹಧಮ೯ವನ್ನು  ಅಹಂ ಪ್ರತ್ಯಯವಿಷಯವಾದ ಆತ್ಮನಲ್ಲಿ ಅಹಂ ಪ್ರತ್ಯಯವಿಷಯನಾದ ಆತ್ಮನನ್ನು 'ನಾನು ಇಂಥವನಾಗಿರುವೆನು'ಎಂದು ದೇಹದಲ್ಲಿಯೂ  ಅಧ್ಯಾರೋಪ ಮಾಡುವುದು ಕಂಡುಬರುತ್ತದೆ.(ಪುಟ44)

 

4)ಅಹಂ ಪ್ರತ್ಯಯ ವಿಷಯನು ಅಪ್ರಸಿದ್ಧನೆಂಬುದು ಹೇಗೆ?:

 

ಶಿಷ್ಯನು ಹೇಳುತ್ತಾನೆ:ಹಾಗಾದರೆ ಆತ್ಮನು ಅಹಂಪ್ರತ್ಯಯ ವಿಷಯನೆಂದು ಪ್ರಸಿದ್ಧನೇ,ದೇಹವೂ 'ಇದು'ಎಂದು ಪ್ರಸಿದ್ಧವೇ ಎಂದಾಯಿತು.ಇದು ಹೀಗಿರುವಲ್ಲಿ ಮೋಟುಮರ,ಮನುಷ್ಯ ಇವರಂತೆಯೂ ಕಪ್ಪೆಯ ಚಿಪ್ಪು ಬೆಳ್ಳಿ-ಇವುಗಳಂತೆಯೂ  ಪ್ರಸಿದ್ಧವೇ ಆಗಿರುವ ದೇಹಾತ್ಮರುಗಳಿಗೆಒಂದರಲ್ಲೊಂದರ ಅಧ್ಯಾರೋಪಣೆಯಾಗಿದೆ ಎಂದಾಗುವುದು.ಇಲ್ಲಿ ಯಾವ ವಿಶೇಷವನ್ನು ಇಟ್ಟುಕೊಂಡು  ಪ್ರಸಿದ್ಧವಾದ ವಸ್ತುಗಳಿಗೇ  ಒಂದರಲ್ಲೊಂದರ ಅಧ್ಯಾರೋಪಣೆ ಯಾಗುವುದೆಂದು  ನಿಯಮಿಸುವುದಕ್ಕೆ ಆಗಲಾರದು'ಎಂದು ಪೂಜ್ಯರಾದ ತಾವು ಹೇಳಿದಿರಿ.(ಪುಟ 45)

 

ಗುರುವು ಹೇಳುತ್ತಾನೆ:ಅದನ್ನು ಕೇಳು.ದೇಹಾತ್ಮರು ಪ್ರಸಿದ್ಧರಾಗಿದ್ದಾರೆಂಬುದು ನಿಜವೇ.ಆದರೆ ಮೋಟುಮರ ,ಮನುಷ್ಯ -ಇವರಹಾಗೆ ಬೇರೆ ಬೇರೆ ವಿಂಗಡವಾದ ಪ್ರತ್ಯಯಗಳಿಗೆ ವಿಷಯವಾಗಿಪ್ರಸಿದ್ಧರಾಗಿರುವುದಿಲ್ಲ.ಮತ್ತೇನೆಂದರೆ ಯಾವಾಗಲೂ ಎಡೆಬಿಡದೆ ಒಂದರಿಂದೊಂದು ವಿಂಗಡವಾದ ಪ್ರತ್ಯಯಗಳಿಗೆ  ವಿಷಯವಾಗಿ(ಪ್ರಸಿದ್ಧರಾಗಿರುತ್ತಾರೆ).'ಇದು ದೇಹ''ಇದು ಪರಮಾತ್ಮನು' -ಎಂದು ವಿಂಗಡವಾಗಿರುವ ಪ್ರತ್ಯಯಗಳಿಂದ ಯಾವನೂ ದೇಹಾತ್ಮರುಗಳನ್ನು ಗ್ರಹಿಸುವುದಿಲ್ಲವಷ್ಟೆ..ಆದ್ದರಿಂದಲೇ ಅಲ್ಲವೇ 'ಆತ್ಮನು ಹೀಗಿರುವನು' 'ಆತ್ಮನು ಹೀಗಿರುವುದಿಲ್ಲ'ಎಂದು ಆತ್ಮಾನಾತ್ಮಗಳ ವಿಷಯದಲ್ಲಿಜನರು ಭ್ರಾಂತಿ ಪಡುತ್ತಿರುವುದು? ವಿಶೇಷಣವನ್ನು ಇಟ್ಟುಕೊಂಡು(ನೀನು ಹೇಳಿದ)ಹಾಗೆ ನಿಯಮವನ್ನು ಏಪ೯ಡಿಸಲಿಕ್ಕಾಗುವುದಿಲ್ಲ. (ಪುಟ46)

 

ಅನ್ಯೋನ್ಯಾಧ್ಯಾಸದಲ್ಲಿ ಅಸದ್ವಾದ ಪ್ರಸಂಗವಿಲ್ಲ:

 

ಶಷ್ಯ:ಯಾವುದರಲ್ಲಿ ಯಾವುದನ್ನು ಅವಿದ್ಯೆಯಿಂದ ಆಧ್ಯಾರೋಪ ಮಾಡುತ್ತಾರೋ ಅದು ಅಲ್ಲಿ ನಿಜವಾಗಿ ಇರುವುದಿಲ್ಲವೆಂದು ಕಂಡು ಬರುತ್ತದೆ.ಉದಾಹರಣೆಗೆ ಕಪ್ಪೆಯಚಿಪ್ಪಿನಲ್ಲಿ ಬೆಳ್ಳಿ,ಮೋಟುಮರದಲ್ಲಿ ಮನುಷ್ಯನು,ಹಗ್ಗದಲ್ಲಿ ಹಾವು,ಆಕಾಶದಲ್ಲಿ ತಳವು ಮಲಿನವಾಗಿರುವುದು-ಇವೇ ಮುಂತಾದ ಆರೋಪಿತ ವಸ್ತುಗಳು ಆಯಾ ಅಸ್ಪದದಲ್ಲಿ ನಿಜವಾಗಿ ಇರುವುದಿಲ್ಲ.ಇದರಂತೆ ದೇಹಾತ್ಮರುಗಳಿಗೂ ,ಯಾವಾಗಲೂ ಎಡ್ಡಬಿಡದೆ ಒಂದರಿಂದೊಂದು ವಿಂಗಡವಾಗದ ಪ್ರತ್ಯಯಗಳಿಂದ  ಒಂದರಲ್ಲೊಂದರ ಅಧ್ಯಾರೋಪಣೆಯಾಗಿದೆ.ಎಂದರೆ ಆಗ ಒಂದರಲ್ಲಿ ಇನ್ನೊಂದು ಯಾವಾಗಲೂ ಇಲ್ಲವೆಂದೇ ಆಗುವುದು.ಹೇಗೆ ಕಪ್ಪೆಯಚಿಪ್ಪು ಮುಂತಾದವುಗಳಲ್ಲಿ ಅವಿದ್ಯೆಯಿಂದ ಅಧ್ಯಾರೋಪಿತವಾದ ಬೆಳ್ಳಿ ಮುಂತಾದವುಗಳು ಹೇಗೆ

ಎಂದಿಗೂ ಸ್ವಲ್ಪವೂ ಇರುವುದಿಲ್ಲವೋ ,ಅದರಂತೆ ದೇಹಾತ್ಮರುಗಳಿಗೆ ಅವಿದ್ಯೆಯಿಂದಲೇ  ಇತರೇತರಾಧ್ಯಾರೋಪವನ್ನು ಮಾಡಿರಬೇಕು.ಹಾಗಾದಲ್ಲಿ ದೇಹಾತ್ಮರುಗಳು ನಿಜವಾಗಿ ಇಲ್ಲವೆಂದೇ  ಆಗುವುದು.ಅದು ಅನಿಷ.್ಟವು. ಏಕೆಂದರೆ ಇದು ಪ್ರತ್ಯಕ್ಷಾದಿಗಳಿಗೆ ವಿರುದ್ಧವಾಗುವುದು.ಏಕೆಂದರೆ ಇದು ವೈನಾಶಿಕ ಪಕ್ಷವಾಗಿರುತ್ತದೆ.ಹೀಗಿಲ್ಲದೆ ,ಇದಕ್ಕೆ ವಿಪರೀತವಾಗಿ  ದೇಹವೊಂದೇ ಆತ್ಮನಲ್ಲಿ ಅವಿದ್ಯೆಯಿಂದ ಆರೋಪಿತವಾಗಿದೆಯೆಂದರೆ  ಸದ್ರೂಪವಾದ ಆತ್ಮನಲ್ಲಿ  ದೇಹವು ಇಲ್ಲವೆಂದಾಗುವುದು.ಅದೂ ಅನಿಷ್ಟವೇ.ಏಕೆಂದರೆ  ಇದು ಪ್ರತ್ಯಕ್ಷಾದಿಗಳಿಗೆ ವಿರುದ್ಧವಾಗುವುದು.

 

ಆದಕಾರಣ ದೇಹಾತ್ಮರುಗಳನ್ನು  ಅವಿದ್ಯೆಯಿಂದ ಒಂದನ್ನೊಂದರಲ್ಲಿ  ಆರೋಪಣೆ ಮಾಡಿದ್ದಾರೆಂಬುದು  ಸರಿಯಲ್ಲ.ಬಿದಿರುಗಳೂ ಕಂಬಗಳೂ ಒಂದಕ್ಕೊಂದು ಕೂಡಿರುವಂತೆ  ಅವು ನಿತ್ಯವಾಗಿ ಕೂಡಿಕೊಂಡಿರುವುದೆಂದು ಹೇಳುವುದು ಯುಕ್ತವಾಗಿದೆ.(ಪುಟ 47)

 

ಗುರು:ಅಲ್ಲ ಏಕೆಂದರೆ ಪಕ್ಷದಲ್ಲಿ ಅವೆರಡೂ ಅನಿತ್ಯವೆಂದೂ ಪರಾಥ೯ವೆಂದೂ ಆದೀತು.ಗಳುಗಳು ,ಕಂಬಗಳು ಒಂದಕ್ಕೊಂದು ಸೇರಿಕೊಂಡಿದ್ದರೆ  ಗಳುಗಳು ಕಂಬಗಳು ಇವುಗಳಂತೆಯೇ ಅವೆರಡೂ ಪರಾಥ೯ವೂ ಅನಿತ್ಯವೂ ಆಗುವವು.ಇದಲ್ಲದೆ ದೇಹದೊಡನೆ ಸೇರಿಕೊಂಡಿರುವ ನೆಂದು ಪರವಾದಿಗಳು

ಕಲ್ಪಿಸಿರು ಆತ್ಮನಿರುವನಲ್ಲ,ಅವನು ಸಂಹತವಾಗಿರುವುದರಿಂದ ಪರಾಥ೯ನು.ಅವನೊಡನೆ ಸೇರಿಕೊಳ್ಳದೆ ಇರುವ ನಿತ್ಯನಾದ ಮತ್ತೊಬ್ಬನಾದ  ಬೇರೆಯ ಆತ್ಮನು ಮೊದಲು ಸಿದ್ಧವಾಗುವನು.(ಪುಟ 48)

 

ಶಿಷ್ಯ: ಅಸಂಹತನಾದ ಆತ್ಮನು ದೇಹದಲ್ಲಿ ಆರೋಪಿತನಾಗಿರುವುದರಿಂದ  ಬರಿಯದೇಹವೇ ಆಗಿರುವುದರಿಂದವನು ನಿಜವಾಗಿಲ್ಲವೆಂಬುದು ಅನಿತ್ಯವಾಗುವುದು-ಇವೇ ಮುಂತಾದ ದೋಷಗಳು ಉಂಟಾಗುವವು.ಆಗ ದೇಹವು ನಿರಾತ್ಮಕವಾದದ್ದು ಎಂಬ ವೈನಾಶಿಕರ ಪಕ್ಷವೇ ಬಂದೊದಗುವುದೆಂಬ

ದೋಷವಾಗಬಹುದಲ್ಲವೆ?

 

ಗುರು:ಆಗುವುದಿಲ್ಲ.ಏಕೆಂದರೆ ಆತ್ಮನು ತನ್ನ ಸ್ವರೂಪದಿಂದಲೇ ಆಕಾಶದಂತೆ ಅಸಂಹತನಾಗಿರುವನೆಂದು ಒಪ್ಪಿರುತ್ತೇವೆ.ಯಾವುದರೊಡನೆಯೂ ಸಂಹತನಾಗದವನು ,ಅವನೆ ಆತ್ಮನು.ಆದ್ದರಿಂದ ದೇಹವೇ ಮುಂತಾದವೆಲ್ಲವೂ ನಿರಾತ್ಮಕವಾಗಲಾರದು.ಆಕಾಶವು ಯಾವುದರೊಡನೆಯೂ ಸಂಹತವಾಗಿರುವುದಿಲ್ಲವಾದ್ದರಿಂದ ,ಎಲ್ಲವೂ ನಿರಾಕಾಶವೆಂಬುದು ಹೇಗೆ ಆಗುವುದಿಲ್ಲವೋ ಹಾಗೆಯೇ ಇಲ್ಲಿಯೂ ತಿಳಿಯಬೇಕು.ಆದ್ದರಿಂದ ವೈನಾಶಿಕ ಪಕ್ಷದ ಪ್ರಾಪ್ತಿಯಾಗುವುದೆಂಬ  ದೋಷವು ಸಿದ್ಧಾಂತದಲ್ಲಿ ಪ್ರಾಪ್ತಿಯಾಗುವುದಿಲ್ಲ.(ಪುಟ 4)

 

ಇನ್ನು ಆತ್ಮನಲ್ಲಿ ದೇಹವು ಇಲ್ಲವೆಂದರೆಪ್ರತ್ಯಕ್ಷವೇ ಮುಂತಾದ ಪ್ರಮಾಣಗಳಿಗೆ ವಿರೋಧವಾದೀತು

ಎಂದು ಹೇಳಿದೆಯಷ್ಟೆ.ಅದು ಸರಿಯಲ್ಲ.ಏಕೆಂದರೆ ಆತ್ಮನಲ್ಲಿ ದೇಹವಿರುವುದು ಪ್ರತ್ಯಕ್ಷಾದಿಗಳಿಂದ ಕಂಡು ಬಂದಿಲ್ಲ.ಕುಂಡದಲ್ಲಿ ಬೋರೆ ಹಣ್ಣಿನಂತೆಯೂ ,ಹಾಲಿನಲ್ಲಿ ಬೆಣ್ಣೆಯಂತೆಯೂ ,ಎಳ್ಳಿನಲ್ಲಿ ಎಣ್ಣೆಯಂತೆಯೂ ,ಗೋಡೆಯಲ್ಲಿ ಚಿತ್ರದಂತೆಯೂ ,ಪ್ರತ್ಯಕ್ಷಾದಿ ಪ್ರಮಾಣಗಳಿಂದ ಆತ್ಮನಲ್ಲಿ ದೇಹವು ಕಂಡು ಬರುವುದೇ ಇಲ್ಲ.ಆದ್ದರಿಂದ ಪ್ರತ್ಯಕ್ಷಾದಿ ವಿರೋಧವಿಲ್ಲ.(ಪುಟ 4)

 

7) ಅವಿದ್ಯೆಗೆ ಆತ್ಮನೇ ಆಶ್ರಯ:

 

ಶಿಷ್ಯ:ಪೂಜ್ಯರೆ, ದೇಹಾತ್ಮಗಳನ್ನು  ಒಂದರಲ್ಲೊಂದನ್ನು  ಅಧ್ಯಾರೋಪಣೆ ಮಾಡಿರುವುದು ದೇಹಾದಿ ಸಂಘಾತದಿಂದ ಆದದ್ದೊ ಅಥವಾ ಆತ್ಮನಿಂದ ಆದದ್ದೋ?

 

ಗುರುವಿಂತೆಂದನು:ದೇಹವೆ ಮುಂತಾದವುಗಳ ಸಂಘಾತದಿಂದ  ಅದದ್ದಾಗಲೀ ಅಥವಾ ಆತ್ಮನಿಂದಲೇ ಆಗಿರಲಿ ಅದರ ವಿಚಾರದಿಂದ  ಇಲ್ಲಿ ಏನು ಪ್ರಯೋಜನ?

 

ಹೀಗೆನ್ನಲು ಶಿಷ್ಯನು ರೀತಿ ಹೇಳಿದನು.ನಾನು ಬರಿಯ ದೇಹಾದಿ ಸಂಘಾತವೇ ಆಗಿದ್ದರೆ ,ಆಗ ನಾನು ಅಚೇತನನಾದ್ದರಿಂದ ಮತ್ತೊಬ್ಬರಿಗಾಗಿರುವೆನೆಂದಾಗಿ ದೇಹಾತ್ಮರುಗಳ ಅನ್ಯೋನ್ಯಾಧ್ಯಾರೋಪವು  ನನ್ನಿಂದಾದದ್ದಲ್ಲ(ವೆಂದಾಗುವುದು),ಹಾಗಿಲ್ಲದೆ ನಾನು ಸಂಘಾತಕ್ಕಿಂತ  ಬೇರೆಯಾದ ಹೆಚ್ಚಿನ ಆತ್ಮನಾದರೆ (ಆಗ)ಚೈತನ್ಯವುಳ್ಳವನಾದ್ದರಿಂದ ನಾನು ನನಗಾಗಿ ಇರತಕ್ಕವನು ಎಂದಾಗಿ ಚೈತನ್ಯವುಳ್ಳ ನನ್ನಿಂದಲೇ  ಸವಾ೯ನಥ೯ಗಳಿಗೂ ಬೀಜವಾಗಿರುವ ಅಧ್ಯಾರೋಪಣೆಯು ಆಗುತ್ತಿದೆ (ಎಂದಾಗುವುದು).

(ಪುಟ52) 

 

8) ಆತ್ಮನು ಚೈತನ್ಯ ಸ್ವರೂಪನಾದ್ದರಿಂದ ಪರಾಥ೯ನಲ್ಲ:

 

ಹೀಗೆನ್ನಲು ಗುರುವು ಹೀಗೆ ಹೇಳಿದನು:ಸುಳ್ಳು ಸುಳ್ಳಾಗಿ  ಅಧ್ಯಾರೋಪಿಸಿಕೊಳ್ಳುವುದು ಅನಥ೯ಕ್ಕೆ ಬೀಜವಾಗಿರುವುದೆಂದು ನಿನಗೆ ತಿಳಿದಿದ್ದರೆ ಆಗ ಅದನ್ನು ಮಾಡದಿರು.

 

ಶಿಷ್ಯ:ಪೂಜ್ಯರೆ,ಹಾಗೆ ಅಧ್ಯಾರೋಪವನ್ನು ಮಾಡದೆ ಇರಲು ನನ್ನಿಂದ ಆಗುವಂತೆಯೇ ಇಲ್ಲ.ನಾನು ಯಾರೋ ಮತ್ತೊಬ್ಬನಿಂದ ಪ್ರೇರಿತನಾಗಿರುತ್ತೇನೆ,ಸ್ವತಂತ್ರನಲ್ಲ.

 

ಗುರು:ಹಾಗಾದರೆ ಚೈತನ್ಯವಿಲ್ಲದವನಾದ್ದರಿಂದ  ನೀನು ಸ್ವಾಥ೯ನಲ್ಲ,ಯಾವನಿಂದ ಪ್ರೇರಿತನಾಗಿ ಸ್ವತಂತ್ರವಿಲ್ಲದೆ ಪ್ರವತಿ೯ಸುತ್ತಿರುವೆಯೋ  ಅವನೇ ಚೈತನು ವುಳ್ಳವನು,ಸ್ವಾಥ೯ನು,ನೀನು ದೇಹಾದಿಗಳ ಸಂಘಾತವೇ.(ಪುಟ 53)

 

ಶಿಷ್ಯ:ನಾನು ಅಚೇತನನಾದರೆ ಸುಖಸುಃಖಗಳ ಅನುಭವವನ್ನೂ ಪಡೆಯುತ್ತಿರುವೆನಲ್ಲ,ಇದು ಹೇಗೆ?

 

ಗುರುವಿಂತೆಂದನು:ಸುಖದುಃಖಗಳ ಅನುಭವ,ನಾನು ಹೇಳಿದ ಮಾತು ಇವುಗಳಿಗಿಂತ ನೀನು ಬೇರೆಯೊ ಅಥವಾ ಅವೇ ನೀನೋ?

 

ಶಿಷ್ಯನಿತೆಂದನು:ನಾನು ಅವೇ ಅಂತೂ ಅಲ್ಲ.ಏಕೆ?ಎಂದರೆ ವಿಷಯವಾಗಿರುವ ಅವೆರಡನ್ನೂ  ಗಡಿಗೆ ಮುಂತಾದವನ್ನು ಅರಿಯುವಹಾಗೆ ಅರಿಯುತ್ತಿರುವೆನು.ನಾನು ಅವೇ ಆಗಿದ್ದರೆ,ಆಗ ಅವೆರಡನ್ನೂ ಅರಿಯುವುದಾಗುತ್ತಿರಲಿಲ್ಲ.ಆದರೆ ಅರಿಯುತ್ತಿದ್ದೇನೆ.ಆದ್ದರಿಂದ ನಾನು ಅವುಗಳಿಗಿಂತ ಬೇರೆ ಅವೇ ನಾನಾಗಿದ್ದರೆ ಸುಖದುಃಖಗಳನ್ನು ಅನುಭವಿಸುವುದೆಂಬ ಕ್ರಿಯೆಯೂ  ತಾವು ಹೇಳಿದ ಮಾತು ತನಗೋಸ್ಕರವೇ ಎಂದು ಆಗುವುದು.ಆದರೆ ಅವೆರಡೂ ತಮಗೋಸ್ಕರವೇ ಎಂಬುದು ಸರಿಯಲ್ಲ.ಏಕೆಂದರೆ ಗಂಧದಿಂದಲೂ ಮುಳ್ಳಿನಿಂದಲೂ ಆಗುವ ಸುಖದುಃಖಗಳು ಗಂಧಕ್ಕೋಸ್ಕರವಲ್ಲ;ಮುಳ್ಳಿಗೋಸ್ಕರವಲ್ಲ.ಗಡಿಗೆಯ ಉಪಯೋಗವು ಗಡಿಗೆಗೋಸ್ಕರವೂ ಅಲ್ಲ.ಆದ್ದರಿಂದ ಅವನ್ನು ಅರಿಯುವ ನನಗೇ ಗಂಧವೇ ಮುಂತಾದವುಗಳಿಂದ ಪ್ರಯೋಜನವು ಎನ್ನಬೇಕು.ಏಕೆಂದರೆ ನಾನೇ ಅದಕ್ಕಿಂತ ಬೇರೆಯಾಗಿದ್ದು ನನ್ನ ಬುದ್ಧಿಗೆ ಹತ್ತುವ ಎಲ್ಲಾ ಎಲ್ಲಾ ಅಥ೯ವನ್ನೂ ಅರಿಯುತ್ತಿರುವೆನು.

(ಪುಟ54)

 

ಅವನಿಗೆ ಗುರುವಿಂತೆಂದನು:ಹಾಗಾದರೆ ನೀನು ನನಗಾಗಿಯೇ ಇರುವವನು,ಚೈತನ್ಯವುಳ್ಳವನಾದ್ದರಿಂದಮತ್ತೊಬ್ಬನಿಂದ ಪ್ರೇರಿತನಾಗುತ್ತಿಲ್ಲ.ಚ್ಯತನ್ಯ ವುಳ್ಳವನು ಪರತಂತ್ರನಾಗಿ ಮತ್ತೊಬ್ಬನಿಂದ  ಪ್ರೇರಿಸಲ್ಪಡಲಾರನು.ಏಕೆಂದರೆ ಎರಡು ದೊಡ್ಡ ಬೆಳಕುಗಳಿಗೆ(ಬೆಳಕಾಗಿರುವದೆಂಬುದು ಸಮನಾಗಿರು)

ವಂತೆಚೈತನ್ಯವುಳ್ಳದ್ದಾಗಿರುವುದೆಂಬುದು  ಎರಡಕ್ಕೂ  ಸಮನಾಗಿರುವುದರಿಂದ  ಒಂದು ಚೈತನ್ಯವುಳ್ಳ ವಸ್ತು ಮತ್ತೊಂದು ಚೈತನ್ಯವುಳ್ಳ ವಸ್ತುವಿಗಾಗಿ ಇರುವುದೆಂಬುದು ಹೊಂದುವುದಿಲ್ಲ.ಚೈತನ್ಯವುಳ್ಳದ್ದು  ಅಚೇತನ ವಸ್ತುವಿಗಾಗಿ ಇರುವುದೆಂಬುದೂ ಆಗುವುದಿಲ್ಲ.ಏಕೆಂದರೆ ಅಚೇತನವು ಅಚೇತನವಾಗಿರುವುದರಿಂದಲೇ  ಅದಕ್ಕೆ ಸ್ವಾಥ೯ ಸಂಬಂಧವು ಹೊಂದುವುದಿಲ್ಲ.ಅಚೇತನವಾದ ಎರಡು ವಸ್ತುಗಳು ಒಂದಕ್ಕೋಸ್ಕರ ಮತ್ತೊಂದಿರುವುದೂ ಕಂಡಿರುವುದಿಲ್ಲ.ಕಟ್ಟಿಗೆಯೂ ಗೋಡೆಯೂ ಒಂದಕ್ಕೊಂದು ಪ್ರಯೋಜನವನ್ನು ಮಾಡಿಕೊಡುತ್ತವೆ  ಎಂಬುದಿಲ್ಲವಷ್ಟೆ.(ಪುಟ 55)

 

) ಆತ್ಮನು ಚೈತನ್ಯಸ್ವರೂಪನು ಚೈತನ್ಯ ಗುಣವುಳ್ಳನಲ್ಲ:

 

ಶಿಷ್ಯ:ಚೇತನವಾಗಿರುವುದೆಂಬುದು ಸಮವಾಗಿದ್ದರೂ ಆಳೂ ದಣಿಯೂ ಒಬ್ಬರಿಗೊಬ್ಬರು ಪ್ರಯೋಜನವನ್ನುಂಟು ಮಾಡಿಕೊಡುವುದು ಕಂಡಿದೆಯಲ್ಲಾ!

 

ಗುರು:ಹಾಗಲ್ಲ.ಏಕೆಂದರೆ ಬೆಂಕಿಗೆ  ಬಿಸಿ ಬೆಳಕುಗಳ ಹಾಗೆ ನಿನಗೆ ಚೈತನ್ಯವಿರುವುದು ಎಂದು ನನ್ನ

ಅಭಿಪ್ರಾಯವು.ಎರಡು ದೊಡ್ಡಬೆಳಕುಗಳಂತೆ  ಎಂದು ದೃಷ್ಟಾಂತವನ್ನು ಆಗಲೇ ಕೊಟ್ಟಿರುತ್ತೇವೆ.ಇದು

ಹೀಗಿರುವುದರಿಂದ ಬೆಂಕಿಗೆ ಬಿಸಿಲುಗಳಂತಿರುವ ಕೂಟಸ್ಥನಿತ್ಯವಾದ ಚೈತನ್ಯ ಸ್ವರೂಪದಿಂದ ನಿನ್ನ

ಬುದ್ಧಿಗೆ ಹತ್ತಿಕೊಂಡಿರುವುದೆಲ್ಲವನ್ನೂ ನೀನು ಅರಿಯುತ್ತಿರುವೆ.ಹೀಗೆ ನೀನು ಯಾವಾಗಲೂ ನಿವಿ೯ಶೇಷನೆಂದು ಒಪ್ಪಿಕೊಂಡಿರುವೆಯಾದರೆ ಸುಷುಪ್ತಿಲ್ಲಿ  ವಿಶ್ರಮಿಸಿಕೊಂಡು ಎಚ್ಚರ ಕನಸುಗಳಲ್ಲಿ ದುಃಖವನ್ನು ಅನುಸರಿಸುತ್ತಿರುವೆನು.ಇದೇ ನನ್ನ ಸ್ವಭಾವವೊ?ಅಥವಾ ನೈಮಿತ್ತಿಕವೊ?ಎಂದೇಕೆ ಹೇಳಿದೆ? ಭ್ರಾಂತಿಯು  ಈಗಲಾದರೂ ಹೋಯಿತೊ ಅಥವಾ ಇಲ್ಲವೊ?(ಪುಟ56)

 

ಹೀಗೆನ್ನಲು ಶಿಷ್ಯನು ಹೇಳುತ್ತಾನೆ:ಪೂಜ್ಯರೆ,ತಮ್ಮ ಅನುಗ್ರಹದಿಂದ ಭ್ರಾಂತಿಯೇನೋ ಹೋಯಿತು.

ಆದರೆ ನಾನು ಕೂಟಸ್ಥನೆಂಬ ವಿಷಯದಲ್ಲಿ ಸಂಶಯವಿದೆ.ಹೇಗೆ-ಎಂದರೆಶಬ್ದಾದಿಗಳು ಅಚೇತನವಾಗಿರುವುದರಿಂದ ಅವುಗಳಿಗೆ ಸ್ವತಃಸಿದ್ಧಿಯಿಲ್ಲ.ಶಬ್ದವೇ ಮುಂತಾದವುಗಳ ಆಕಾರದ ಪ್ರತ್ಯಯಗಳು

ಉಂಟಾಗುವುದಾದರೆ ಅವುಗಳ ಸಿದ್ಧಿಯಾಗುವುದು. ಪ್ರತ್ಯಯಗಳು ಒಂದಕ್ಕೊಂದು ವಿಲಕ್ಷಣ ಧಮ೯ಗಳುಳ್ಳದ್ದಾಗಿ ಕಪ್ಪು,ಹಳದಿ-ಮುಂತಾದ ಆಕಾರವುಳ್ಳವಾಗಿರುವುದರಿಂದ 

ಸ್ವತಃಸಿದ್ಧಿಯಾಗುವಂತಿಲ್ಲವಾಗಿ ಹೊರಗಿನ ವಸ್ತುಗಳ ಆಕಾರವೆಂಬ ನಿಮಿತ್ತದಿಂದ ಆಗುವುದೆಂದು ನಿಶ್ಚಯವಾಗುವುದರಿಂದ ಹೊರಗಿನ ಶಬ್ದಾದಿಗಳ ಆಕಾರಗಳು  ಸಿದ್ಧಿಯಾಗುತ್ತವೆ.ಹೀಗೆಯೇ ಅಹಂಪ್ರತ್ಯಯಕ್ಕೆ ವಿಷಯವಾಗಿರುವ  ಪ್ರತ್ಯಯಗಳೂ ಕೂಡೆ ಒಂದಕ್ಕೊಂದು ಸೇರಿಕೊಂಡಿರುವುದರಿಂದ,ಅವು ಅಚೇತನವಾಗಿರಬೇಕಾದ ಕಾರಣ ತಮಗಾಗಿ ತಾವು ಇರಲಾರವಾದ್ದರಿಂದ  ಮೇಲೆ ಹೇಳಿದ ಶಬ್ದಾದಿಗಳಂತೆಯೇ ಅವೂ ತಮ್ಮ ಸ್ವರೂಪಕ್ಕಿಂತ  ಬೇರೆಯಾಗಿರುವ ಜ್ಞಾತೃವಿಗೆ  ಅರಿಯ ಬರುವುದರಿಂದಲೇ ಸಿದ್ಧವಾಗಬೇಕು.ಆದರೆ ಜ್ಞಾತೃವಾದ ನಾನು ಅಸಂಹತನಾಗಿ ಚೈತನ್ಯಸ್ವರೂಪವಾಗಿರುವುದರಿಂದ  ನನಗಾಗಿಯೇ ಇದ್ದುಕೊಂಡಿರುವೆನಾದರೂ ಕಪ್ಪು,ಹಳದಿ-ಮುಂತಾದ ಪ್ರತ್ಯಯಗಳನ್ನು ಅರಿಯುತ್ತಿರುವುದರಿಂದ ವಿಕಾರವುಳ್ಳವನೇ ಕೂಟಸ್ಥನೆಂಬುದು ಹೇಗೆ?ಎಂಬುದೇ ಸಂಶಯವು.(ಪುಟ58)

 

ಅವನನ್ನು ಕುರಿತು ಗುರುವಿಂತೆಂದನು: ನಿನ್ನ ಸಂಶಯವು ಯುಕ್ತವಲ್ಲ.ಏಕೆಂದರೆ ಪ್ರತ್ಯಯಗಳೆಲ್ಲವನ್ನೂ ತಪ್ಪದೆ ಅರಿಯುತ್ತಿರುವದರಿಂದಲೇ ನೀನು ಪರಿಣಾಮಿಯಲ್ಲವೆಂದಾಗುವುದರಿಂದ ಕೂಟಸ್ಥನೆಂಬುದು ಸಿದ್ಧವಾಗುತ್ತಿರುವಲ್ಲಿ  ಎಲ್ಲಾ ಚಿತ್ತಪ್ರಚಾರಗಳನ್ನೂ  ಅರಿಯುವದೆಂಬ ನಿಶ್ಚಯಹೇತುವನ್ನೇ ಸಂಶಯಕ್ಕೆ ಹೇತುವೆಂದು ಹೇಳುತ್ತಿರುವೆಯಲ್ಲ!ನಿನ್ನಲ್ಲಿ ನಿಜವಾಗಿ ಪರಿಣಾಮಿತ್ವವು ಇರುತ್ತಿದ್ದರೆಚಿತ್ತವು  ಹೇಗೆ ತನ್ನ ವಿಷಯಗಳೆಲ್ಲವನ್ನೂ ಅರಿಯಲಾರದೋಹಾಗೆ ನಿನಗೆ ಹಾಗೆ ವಿಷಯವಾದ  ಚಿತ್ತ ಪ್ರಚಾರಗಳೆಲ್ಲವನ್ನೂ

 ಅರಿಯುವದು ಆಗುತ್ತಿರಲಿಲ್ಲ.ಆದರೆ ಹಾಗೆ ಆತ್ಮನಾಗಿರುವ ನಿನಗೆ ಸ್ವವಿಷಯಗಳ ಒಂದು ಭಾಗವನ್ನು ಮಾತ್ರ ಅರಿಯುವದೆಂಬುದಿಲ್ಲ.ಆದ್ದರಿಂದ ನೀನು ಕೂಟಸ್ಥನಿತ್ಯನೇ ಎಂದು ನಿಶ್ಚಯವಾಯಿತು.(ಪುಟ5)

 

ಇಲ್ಲಿ ಶಿಷ್ಯನು ಹೀಗೆ ಹೇಳುತ್ತಾನೆ:ಅರಿಯುವುದೆಂಬುದು ಧಾತುವಿನ  ವಿಕಾರವೇ ,ಅರಿಯುವಾತನು ಕೂಟಸ್ಥ ಸ್ವರೂಪನೂ  ಆಗಿರುತ್ತಾನೆ ಎಂಬುದು ಒಂದಕ್ಕೊಂದು ವಿರುದ್ಧ.

 

ಗುರು:ಹಾಗಲ್ಲ ಏಕೆಂದರೆ ಧಾತುವಿನ  ಅಥ೯ವಾದ ವಿಕಾರವನ್ನು  ತಿಳಿಸುವುದಕ್ಕೆ ಅರಿವು ಎಂಬ ಮಾತನ್ನು ಉಪಚಾರದಿಂದ ಪ್ರಯೋಗಿಸಿರುತ್ತದೆ.ಹೇಗೆಂದರೆ ಬುದ್ಧಿಯ ಪ್ರತ್ಯಯವಿದೆಯಲ್ಲ ,ಅದು ಧಾತುವಿನ ಅಥ೯ವಾಗಿ ವಿಕಾರದ ರೂಪವಾಗಿರತಕ್ಕದ್ದು.ಇದು ಆತ್ಮನ ಅರಿವಿನಂತೆ ತೋರುವ ಫಲದಲ್ಲಿ  ಕೊನೆಗಾಣುವುದರಿಂದ  ಅರಿವು ಎಂಬ ಶಬ್ದದಿಂದ ಉಪಚಾರದಿಂದ ಕರೆಯಲ್ಪಡುತ್ತದೆ. ಹೇಗೆ ಕಡಿಯುವುದು ಎಂಬ ಕ್ರಿಯೆಯು  ಎರಡು ಪಾಲಾಗುವುದು ಎಂಬ ಫಲದಲ್ಲಿ ಕೊನೆಗಾಣುವುದರಿಂದ

(ಕಡಿ ಎಂಬ ಧಾತುವಿನ) ಅಥ೯ವೆಂದು ಉಪಚಾರಕ್ಕಾಗಿ  ಹೇಳಲ್ಪಡುವುದೋ ಅದರಂತೆಯೇ ಇದು.

(ಪುಟ5)

 

10) ಆತ್ಮನಿಗಿಂತ ಬೇರೆಯಾದ ಅರಿವು ಇಲ್ಲ:

 

ಹೀಗೆನ್ನಲು ಶಿಷ್ಯನು ಹೇಳುತ್ತಾನೆ:ಪೂಜ್ಯರೆ,ನಾನು ಕೂಟಸ್ಥನೆಂದು  ತಿಳಿಸುವುದಕ್ಕೆ ದೃಷ್ಟಾಂತವು ಸಾಲದು.ಹೇಗೆ? ಕಡಿಯುವುದೆಂಬ ಕ್ರಿಯೆಯು  ಕಡಿಯಲ್ಪಡುವ ವಸ್ತುವಿನಲ್ಲಿ ಉಂಟಾಗುವ  ವಿಕಾರದಲ್ಲಿ ಕೊನೆಗಾಣುವುದರಿಂದ  ಕಡಿ ಎಂಬ ಧಾತುವಿನ ಅಥ೯ವೆಂದು ಅದನ್ನು ಹೇಗೆ ಉಪಚಾರಕ್ಕೆ ಹೇಳುವರೋ  ಹಾಗೆ ಅರಿ ಎಂಬ ಧಾತುವಿನ ಅಥ೯ವಾದ ಬುದ್ಧಿಯ  ಪ್ರತ್ಯಯ್ದ ಅರಿವು ಎಂಬ ಶಬ್ದಕ್ಕೆ ಉಪಚಾರದಿಂದ ಅಥ೯ವಾದರೂ ಆತ್ಮನ ಅರಿವೆಂಬ ವಿಕ್ರಿಯೆಯಲ್ಲಿ ಕೊನೆಗಾಣುವುದಾದರೆ ಆತನು ಕೂಟಸ್ಥನೆಂಬುದನ್ನು ತಿಳಿಸುವುದಕ್ಕೆ ಇದು ಸಾಕಾಗಲಾರದು.ಇದಕ್ಕೆ  ಗುರುವಿಂತೆಂದನು:ನಿಜ:ಅರಿವು,ಅರಿವಾತನು-ಇವೆರಡಕ್ಕೂ ಹೆಚ್ಚು ಕಡಿಮೆಯಿದ್ದರೆ  ಹೀಗೆಯೇ ಆಗುವುದು. ಆದರೆ ನಮ್ಮ ಸಿದ್ಧಾಂತದಲ್ಲಿ ನಿತ್ಯವಾದ ಅರಿವೇ ಅರಿಯುವಾತನು. ಇಷ್ಟೇ ಹೊರತು ತಾಕಿ೯ಕರ  ಶಾಸ್ತ್ರದಲ್ಲಿ ಹೇಳುವಂತೆ  ಅರಿವು ಬೇರೆ,ಅರಿಯುವಾತನು ಬೇರೆ-ಹೀಗಿಲ್ಲ.(ಪುಟ60)   

 

ಶಿಷ್ಯ:ಧಾತುವಿನ ಅಥ೯ವು  ಅರಿವೆಂಬ ಫಲದಲ್ಲಿ ಕೊನೆಗಾಣುವುದೆಂಬುದು ಹೇಗೆ?

ಗುರು:ಹೇಳುತ್ತೇನೆ.ಕೇಳು.'ಅರಿವಿನಂತೆ ತೋರುವ 'ಫಲದಲ್ಲಿ ಕೊನೆಗಾಣುವುದು ಎಂದುನಾನು ಕೇಳಿದೆನು.ಅದು ನಿನಗೆ ಕೇಳಿಸಲಿಲ್ಲವೇನು.?ಆತ್ಮನಲ್ಲಿ ಯಾವುದೊಂದು ವಿಕಾರವನ್ನು ಉಂಟುಮಡುವುದರಲ್ಲಿ  ಕೊನೆಗಾಣುವುವುದೆಂಬುದೇನೂ ನಾನು ಹೇಳಲಿಲ್ಲ.

 

ಶಿಷ್ಯನಿಂತೆಂದನು:ಹಾಗಾದರೆ ಕೂಟಸ್ಥನಾಗಿರುವ ನಾನು ನನಗೆ ವಿಷಯವಾದ ಚಿತ್ತದ  ಪ್ರಚಾರಗಳನ್ನೆಲ್ಲ  ಅರಿಯುವೆನೆಂದು ಹೇಗೆ ಹೇಳಿದಿರಿ.?

ಅವನಿಗೆ ಗುರು ಹೇಳಿದನೇನೆಂದರೆ:ನಿಜ,ಹೇಳಿದೆನು.ಅದರಿಂದಲೇ ನೀನು ಕೂಟಸ್ಥನೆಂದಾಯಿತೆಂದು  ಹೇಳಿದೆನು'.(ಪುಟ61)

 

11) ಅವಿದ್ಯೆಯಿಂದಲೇ  ಆತ್ಮನಲ್ಲಿ ಅರಿವೆಂಬ ವಿಕಾರವಾಗುವುದು:

 

ಶಿಷ್ಯ:ಪೂಜ್ಯರೆ ಹೀಗೆ ನಾನು ಕೂಟಸ್ಥವಾಗಿ ಯಾವಾಗಲೂ ಚೈತನ್ಯ ಸ್ವರೂಪನೇ ಆಗಿದ್ದರೆ ಮತ್ತು ಶಬ್ದವೇ ಮುಂತಾದ ಆಕಾರದ ಬುದ್ಧಿಯ ಪ್ರತ್ಯಯಗಳು ನನ್ನ ಸ್ವರೂಪವಾಗಿರುವ ಅರಿವಿನಂತೆತೋರುವ ಫಲದಲ್ಲಿ ಕೊನೆಗಾಣುತ್ತಾ ಹುಟ್ಟುತ್ತಿರುವನಾದರೆ ನನ್ನ ತಪ್ಪಾದರೂ ಯಾವುದು?

 

ಗುರು: ನಿನ್ನದೇನೂ ತಪ್ಪಿಲ್ಲ,ನಿಜ;ಆದರೆ ತಪ್ಪು ತಿಳುವಳಿಕೆಯೊಂದೇ ತಪ್ಪು ಎಂದು ಮೊದಲೇ ಹೇಳಿರುತ್ತೇನೆ.(ಪುಟ62)

 

12) ಎಚ್ಚರಕನಸುಗಳಿಂದ ಆತ್ಮನಲ್ಲಿ ವಿಕಾರವಿಲ್ಲ:

 

ಶಿಷ್ಯ:ಪೂಜ್ಯರೇಸುಷುಪ್ತಿಯಲ್ಲಿ ಹೇಗೋ ಹಾಗೆ ನನ್ನಲ್ಲಿ ಯಾವಾಗಲೂ ಯಾವವಿಕಾರವೂ ಇಲ್ಲವಾದರೆ,ಕನಸೂ ಎಚ್ಚರವೂ  ಆಗುತ್ತಿರುವುದು ಹೇಗೆ?

ಅವನಿಗೆ ಗುರುವು ಹೀಗೆ ಹೇಳಿದನು:ಹಾಗಾದರೆ ಅವು ನಡುವೆ ಬಂದವುಗಳೇ ಹೊರತು ,ನಿನ್ನ ಸ್ವರೂಪವಲ್ಲ.ಚೈತನ್ಯ ಸ್ವರೂಪದ ಹಾಗೆ ಇವೂ ನಿನ್ನ ಸ್ವರೂಪವೇ ಆಗಿ ಸ್ವತಃಸ್ಸಿದ್ಧವಾಗಿದ್ದರೆ,ಯಾವಾಗಲೂ ಬಿಡದೆ ಇದ್ದುಕೊಂಡೇ ಇರುತ್ತಿದ್ದವು.ಇದಲ್ಲದೆ ಎಚ್ಚರ ಕನಸುಗಳು ಬಟ್ಟೆಗಳೇ ಮುಂತಾದವುಗಳ ಹಾಗೆ  ನಿನ್ನನ್ನು ಬಿಟ್ಟು ಹೋಗುತ್ತಿರುವುದರಿಂದ  ನಿನ್ನ ಸ್ವರೂಪವಾಗಲಾರವು.ಯಾವುದು ಏತರ ಸ್ವರೂಪದ್ದಾಗಿರುವುದೋ ಅದು ಅದನ್ನು ಬಿಟ್ಟು ಹೋಗುವುದು ಕಂಡುಬಂದಿಲ್ಲ. ಆದರೆ ಕನಸು ಎಚ್ಚರಗಳು ಚೈತನ್ಯವನ್ನು ಮಾತ್ರ ಬಿಟ್ಟು ಹೋಗುತ್ತಿರುವವು.ಸುಷುಪ್ತಿಯಲ್ಲಿ ಸ್ವರೂಪವನ್ನು ಬಿಟ್ಟು ಹೋಗುವುದಾದರೆ ಅದು ನಷ್ಟವಾಯಿತೆಂದಾಗಲೀ ಇಲ್ಲವೆಂದಾಗಲೀ ಬಾಧ್ಯವೇ ಆಗಬೇಕು.ಏಕೆಂದರೆ ನಡುವೆ ಬಂದ ಅತದ್ಧಮ೯ಗಳು  ಎರಡು ರೂಪವಾಗಿಯೂ ಬಾಧಿತವಾಗುವುದು ಕಂಡಿದೆ.ಉದಾಹರಣೆಗೆ ಹಣ,ಬಟ್ಟೆ  ಮುಂತಾದವುಗಳು ನಾಶವಾಗಿದ್ದು ಕಂಡಿದೆ.ಕನಸಿನಲ್ಲಿಯೂ ಭ್ರಾಂತಿಯಲ್ಲಿಯೂ  ಕಂಡ ವಸ್ತುಗಳಾದರೋ  ಇಲ್ಲವೆಂದಾಗುವುದು ಕಂಡಿದೆ.(ಪುಟ 63)

 

13)ಆತ್ಮನ ಚೈತನ್ಯವು ಆಗಂತುಕವಲ್ಲ:

 

ಶಿಷ್ಯ:ಪೂಜ್ಯರೆ ಹಾಗಾದರೆ ಚೈತನ್ಯ ಸ್ವರೂಪವೂ ನಡುವೆ ಬಂದದ್ದೆಂದಾಗುವುದಲ್ಲ!ಏಕೆಂದರೆ ಸ್ವಪ್ನಜಾಗರಿತಗಳಂತೆ ಅದು ಸುಷುಮ್ನದಲ್ಲಿ ಕಾಣಿಸುವುದಿಲ್ಲ.ಅಥವಾ ನಾನು ಅಚೈತನ್ಯ ಸ್ವರೂಪನೇ ಎಂದಾಗುವುದಲ್ಲ!

 

ಗುರು:ಹಾಗಲ್ಲೇಕೆಂದರೆ ನೋಡು!ಅದು ಯುಕ್ತವಾಗುವುದಿಲ್ಲ.ಚೈತನ್ಯ ಸ್ವರೂಪವು ನಡುವೆ ಬಂದದ್ದೆಂದು

 ತಿಳಿಯುವೆಯಾದರೆ,ತಿಳಿ.ಆದರೆ ಚೈತನ್ಯಸ್ವರೂಪವಾದ ನಾವು ಇದನ್ನು ನೂರು ವಷ೯ಕಳೆದರೂ ಯುಕ್ತಿಯಿಂದ ಹೊಂದಿಸಲು ಅಶಕ್ತರಾಗಿರುತ್ತೇವೆ.ಅಚೈತನ್ಯನಾದ  ಮತ್ತೆ ಯಾವನೇ ಆಗಲಿ ;ಇದನ್ನು ಹೊಂದಿಸಲು ಅಶಕ್ತನಾಗಿರುತ್ತಾನೆ. ಏಕೆಂದರೆ ಸಂಹಿತನಾಗಿರುವುದರಿಂದ  ಮತ್ತೊಂದರ ಪ್ರಯೋಜನಕ್ಕಾಗಿರುವುದೆಂಬುದನ್ನೂ  ಅನೇಕ(ಅವಯವಗಳಿಂದ)ಕೂಡಿರಬೇಕೆಂಬುದನ್ನೂ  ನಾಶಿಯಾಗಿರಬೇಕೆಂಬುದನ್ನೂ  ತಪ್ಪಿಸಿಕೊಳ್ಳುವುದಕ್ಕೆ ಯಾವನಿಂದಲೂ ಆಗಲಾರದು.ಏಕೆಂದರೆ ಯಾವುದು ತನ್ನ ಪ್ರಯೋಜನಕ್ಕಾಗಿಲ್ಲವೊ  ಅದು ಸ್ವತಃಸ್ಸಿದ್ದವಲ್ಲ ಎಂದು ಹಿಂದೆಯೇ ಹೇಳಿರುತ್ತೇವೆ.ಆತ್ಮನ ಚೈತನ್ಯಸ್ವರೂಪವೋ ಎಂದರೆ ಸ್ವತಃಸಿದ್ಧವಾಗಿರುವುದರಿಂದ ಮತ್ತೊಂದನ್ನು ಬಯಸಿ ಸಿದ್ಧವಾಗತಕ್ಕದ್ದಲ್ಲ.ಏಕೆಂದರೆ ಅದು ವ್ಯಭಿಚರಿತವಾಗುವುದಿಲ್ಲ.(ಪುಟ65)

 

ಶಿಷ್ಯ:ಸುಷುಪ್ತಿಯಲ್ಲಿ ನಾನು  ಏನೂ ನೋಡುವುದಿಲ್ಲ ಎಂದು ಚೈತನ್ಯಕ್ಕೂ ವ್ಯಭಿಚಾರವನ್ನು ನಾನು ತೋರಿಸಿಕೊಟ್ಟೆನಲ್ಲ.

(ಯಾವುದರ ಸ್ವರೂಪವು ವ್ಯಭಿಚರಿತವಾಗುವುದೋ ಅದು ಮಿಥ್ಯೆ.ಸತ್ಯವಾಗಿರುವ ವಸ್ತುವಿನ ಸ್ವರೂಪವು ಎಂದಿಗೂ ವ್ಯಭಿಚಾರವಾಗುವುದಿಲ್ಲ.)

 

ಗುರು:ಹಾಗಲ್ಲ.ಏಕೆಂದರೆ ವ್ಯಾಹತವಾಗಿದೆ.(ತನಗೆತಾನೇ ವಿರುದ್ಧವಾದ ಮಾತು ವ್ಯಾಹತವೆನಿಸದುವುದು)ಇದು ವ್ಯಾಹತವಾಗಿದೆ ಎಂಬುದು ಹೇಗೆ?ಎಂದರೆ ನೋಡುತ್ತಲೇ ಇದ್ದರೂ ನೋಡುತ್ತಿಲ್ಲವೆಂಬ ಮಾತು ವ್ಯಾಹತವು.  

 

ಶಿಷ್ಯ:ಸುಷುಪ್ತಿಯಲ್ಲಿ ನನಗೆ ಚೈತನ್ಯವಾಗಲಿ ಮತ್ತೊಂದಾಗಲೀ ಯಾವುದೂ ಕಾಣಿಸಿದ್ದಿಲ್ಲವಲ್ಲ!

 

ಗುರು:ಹಾಗಾದರೆ ಸುಷುಪ್ತದಲ್ಲಿ ನೀನು ನೋಡುವವನಾಗಿರುವೆಯೆಂದೇ ಆಯಿತು.ಏಕೆಂದರೆ ನೋಡದ ವಸ್ತುವನ್ನು ಇಲ್ಲವೆನ್ನುತ್ತೀಯೇ ಹೊರತು ನೋಟವನ್ನು ಇಲ್ಲವೆನ್ನುವುದಿಲ್ಲ.ಯಾವುದು ನಿನ್ನ ನೋಟವೋ ಅದೇ ಚೈತನ್ಯವೆಂದು ನಾನು ಹೇಳಿರುತ್ತೇನೆ.ಯಾವನೋಟವು ಇರುವುದರಿಂದ ಅದಕ್ಕೆ ಮತ್ತೇನೂ ಕಾಣಿಸುವುದಿಲ್ಲವೆನ್ನುವೆಯೋ ನೋಟವೇ ನಿನ್ನ ಚೈತನ್ಯವು.(ಪುಟ66)

 

14) ಆತ್ಮನು ಸ್ವತಃಸಿದ್ಧನು:

 

ಚ್ಯತನ್ಯವು ಎಲ್ಲಿಯೂ ಬೇಪ೯ಡದೆ ಇರುವುದರಿಂದ ಕೂಟಸ್ಥನಿತ್ಯವೆಂದು ತನ್ನಿಂದಲೇ ಸಿದ್ಧವಾಗುತ್ತದೆ.ಪ್ರಮಾಣವನ್ನು ಬಯಸಿ ಅದು ಸಿದ್ಧವಾಗಬೇಕಾದ್ದಿಲ್ಲ.ಹೇಗೆಂದರೆ ಸ್ವತಃಸ್ಸಿದ್ಧವಾಗಿರುವ ಪ್ರಮಾತೃವಿಗೆ ತನಗಿಂತ ಬೇರೆಯಾಗಿರುವ ಪ್ರಮೇಯದ ಪರಿಚ್ಛಿತ್ತಿಗಾಗಿ ಪ್ರಮಾಣದ ಅಪೇಕ್ಷೆಯಿರುತ್ತದೆ.

ಆದರೆ ಅಪರಿಚ್ಛಿತ್ತಿರೂಪವಾಗಿರುವ  ಒಂದು ವಸ್ತುವಿನ ಪರಿಚ್ಛೇದಕ್ಕಾಗಿ ಯಾವ ಇನ್ನೊಂದು ಪರಿಚ್ಛಿತ್ತಿಯು ಬೇಕಾಗುವುದೋ , ಪರಿಚ್ಛಿತ್ತಿಯು ನಿತ್ಯವಾಗಿಯೂ ಕೂಟಸ್ಥವಾಗಿಯೂ ,ಸ್ವಯಂಜ್ಯೋತಿ ಸ್ವಭಾವವಾಗಿಯೂ  ಇರಬೇಕಷ್ಟೆ.?ಆತ್ಮನಲ್ಲಿ ಪ್ರಮಾತ್ವವಿರುವಲ್ಲಿಅದಕ್ಕಾಗಿ ಪ್ರಮಾಣದ ಬಯಕೆ ಇರುವುದಿಲ್ಲ.ಏಕೆಂದರೆ ಅದು ಅವನ ಸ್ವಭಾವವೇ ಆಗಿರುತ್ತದೆ.ಇದಕ್ಕೊಂದು ದೃಷ್ಟಾಂತ:ಬೆಳಕಾಗಲೀ ಬಿಸಿಯಾಗಲೀ (ಬೇಕಾದರೆ) ಕಬ್ಬಿಣ,ನೀರು-ಮುಂತಾದವುಗಳಿಗೆ  ಅವಕ್ಕಿಂತ ಬೇರೆಯಾದ ಬೆಂಕಿ ,ಸೂಯ೯-ಮುಂತಾದದ್ದರಿಂದ ಬರಬೇಕಾಗುತ್ತದೆ.ಏಕೆಂದರೆ ಬೆಳಕು ಬಿಸಿಗಳು ಅವುಗಳ ಸ್ವಭಾವವಾಗಿರಲಿಲ್ಲ.ಆದರೆ ಬೆಂಕಿ,ಸೂಯ೯-ಮುಂತಾದ ವಸ್ತುಗಳಿಗೆ ಅಂಥ(ಮತ್ತೊಂದು ವಸ್ತುವುವಿನಿಂದ ಬೆಳಕು ಬಿಸಿಗಳು  ಬರಬೇಕೆಂಬ)ಅಪೇಕ್ಷೆಯಿರುವುದಿಲ್ಲ.ಏಕೆಂದರೆ (ಬೆಳಕು ಬಿಸಿಗಳೂ  ಯಯಾವಾಗಲೂ ಅವುಗಳ ಸ್ವಭಾವವೇ ಆಗಿರುತ್ತವೆ.(ಪುಟ 67)

 

15)ಆತ್ಮನ ಅರಿವು ನಿತ್ಯವಾಗಿರುತ್ತದೆ:

 

ಶಿಷ್ಯ:ಅನಿತ್ಯವಾದದ್ದೇ ಪ್ರಮೆಯಾದೀತೇ ಹೊರತು ನಿತ್ಯವಾದರೆ ಆಗದು.

 

ಗುರು:ಆಗಲ್ಲ.ಏಕೆಂದರೆ ನಿತ್ಯವಾಗಲೀ ಅನಿತ್ಯವಾಗಲೀ ಅರಿವಿನಲ್ಲಿ ವಿಶೇಷವೇನೂ ಆಗಲಾರದು.ಅರಿವೇ ಪ್ರಮೆಯೆಂದಾದ ಮೇಲೆ ,ಅನಿತ್ಯವಾದ ಅರಿವು ಪ್ರಮೆ,ನಿತ್ಯವಾದದ್ದು ಪ್ರಮೆಯಲ್ಲ-ಎಂಬ ವಿಶೇಷವನ್ನು ನಿಣ೯ಯಿಸುವುದಕ್ಕಾಗುವುದಿಲ್ಲ ಅಷ್ಟೆ.

 

ಶಿಷ್ಯ:ಪ್ರಮೆಯು ನಿತ್ಯವಾದರೆ ವಿಷಯಜ್ಞಾನಕ್ಕೆ ಪ್ರಮಾತೃವಿಗೆ  ಮತ್ತೇನೂ ಬೇಕಿಲ್ಲ.ಅದು ಅನಿತ್ಯವಾದರೋ ಬೇರೊಂದು ಪ್ರಯತ್ನದಿಂದ ಪ್ರಮೇಯವು ಸಿದ್ಧವಾಗಬೇಕಾಗುವುದರಿಂದ ಅರಿವು ಬೇಕಾಗುವುದು-ಎಂಬ ವಿಶೇಷವಿರಬಹುದಲ್ಲ.!

 

ಗುರು:ಹಾಗಾದರೆ ಪ್ರಮಾತೃವಾದ ಆತ್ಮನು  ಪ್ರಮಾಣವನ್ನು ಬಯಸದೆಯೇ  ಸ್ವತಃಸಿದ್ಧನೆಂದು ಏಪ೯ಡುತ್ತದೆ.

 

ಶಿಷ್ಯ:ಆತ್ಮನಲ್ಲಿ ಅರಿವು ನಿತ್ಯವಾಗಿ  ಇಲ್ಲದಿದ್ದರೂ ಯಾವ ಪ್ರಮಾಣವೂ ಬೇಕಿರುವುದಿಲ್ಲವಲ್ಲ!ಏಕೆಂದರೆ ಆಗಲೂ ನಿತ್ಯನೇ ಆಗಿರುತ್ತಾನೆ.

 

ಗುರು:ಹಾಗಲ್ಲ.ಏಕೆಂದರೆ ಆತ್ಮನಲ್ಲಿ ಅರಿವೇ ಇರುತ್ತದೆ ಎಂದು ಶಂಕೆಯನ್ನು ಪರಿಹರಿಸಿದ್ದಾಗಿದೆ.

 

16)ಪ್ರಮಾತೃವು ಪ್ರಮಾಣಸಿದ್ಧನೆಂಬ ಪಕ್ಷದಲ್ಲಿ ದೋಷ:

 

ಪ್ರಮಾತೃವು ಪ್ರಮಾಣದ  ಅಪೇಕ್ಷೆಯಿಂದಲೇ ಸಿದ್ಧವಾಗುವದೆಂದರೆ,ಅವನನ್ನು ಪ್ರಮಾಣದಿಂದ ಅರಿತುಕೊಳ್ಳಬೇಕೆಂಬ ಇಚ್ಛೆಯು ಯಾರಿಗೆ ಆಗಬೇಕು?ಯಾವನಿಗೆ ಅರಿತುಕೊಳ್ಳಬೇಕೆಂಬ ಇಚ್ಛೆಯಿರುವುದೋ ಅವನೇ ಪ್ರಮಾತೃವೆಂದು ನಾವು ಅಂಗೀಕರಿಸುತ್ತೇವೆ. ಪ್ರಮಾತೃವಿಗೆ ಆಗುವ ಅರಿಯ ಬೇಕೆಂಬ ಇಚ್ಛೆಯು  ಪ್ರಮೇಯದ ವಿಷಯದಲ್ಲಿಯೇ ಹೊರತು  ಪ್ರಮಾತೃವಿನ ವಿಷಯದಲ್ಲಲ್ಲ.  ಏಕೆಂದರೆ ಅವುಗಳು ಪ್ರಮಾತೃ ವಿಷಯದಲ್ಲಿಯೂ  ಉಂಟಾಗುವುದಾದರೆ ಪ್ರಮಾತೃ  ಮತ್ತು ಪ್ರಮಾತೃವಿನ ಇಚ್ಛೆಇವುಗಳಿಗೆ ನಿಲುಗಡೆಯಿಲ್ಲದೆ ಹೋಗಬೇಕಾಗುವುದು .ಹೇಗೆಂದರೆ ಪ್ರಮಾತೃವಿಗೂ  ಮತ್ತೊಬ್ಬ ಪ್ರಮಾತೃ ಬೇಕು,ಅವನಿಗೆ ಇನ್ನೊಬ್ಬ ಪ್ರಮಾತೃಬೇಕು.-ಎಂದು ಪ್ರಮಾತೃಗಳ ಸಾಲು ನಿಲುಗಡೆಯಿಲ್ಲದ್ದಾಗುವುದು.ಹೀಗೆಯೇ ಇಚ್ಛೆಯು ಪ್ರಮಾತೃವಿನ ವಿಷಯ

ವೆಂದರೂ ಅದಕ್ಕೂ ನಿಲುಗಡೆ ಇಲ್ಲದೆ ಹೋಗುವುದು.(ಪುಟ70)

 

ಇದಲ್ಲದೆ ಪ್ರಮಾತೃವು ತನಗೆ ತಾನು ಅವ್ಯವಹಿತನಾಗಿರುವುದರಿಂದಲೂ ಇವನು ಪ್ರಮೇಯನೆಂಬುದು  ಯುಕ್ತವಾಗುವುದಿಲ್ಲ.ಹೇಗೆಂದರೆ ಲೋಕದಲ್ಲಿ  ಪ್ರಮೇಯವೆಂಬುದು ಪ್ರಮಾತೃವಿನ ಇಚ್ಛೆ,ಸ್ಮøತಿ,ಪ್ರಯತ್ನ,ಪ್ರಮಾಣವು ಹುಟ್ಟುವುದು-ಇವುಗಳಿಂದ ವ್ಯವಹಿತವಾಗಿಯೇ ಸಿದ್ಧವಾಗುತ್ತದೆ.(ಹೀಗಲ್ಲದೆ) ಬೇರೆಯ ರೀತಿಯಿಂದ ಪ್ರಮೇಯದ  ವಿಷಯದಲ್ಲಿ  ಅರಿವಾದದ್ದು ಕಂಡುಬಂದಿಲ್ಲ.ಆದರೆ  ಪ್ರಮಾತೃವು  ಪ್ರಮಾತೃವಾದ ತನಗೆತಾನೇ ಇಚ್ಛೆಯೇ ಮುಂತಾದವುಗಳಲ್ಲಿ ಯಾವದೊಂದರಿಂದಲೂ ವ್ಯವಹಿತನಾಗಿರುವನೆಂದು ಕಲ್ಪಿಸುವುದಕ್ಕೆ ಆಗುವುದಿಲ್ಲ.ಸ್ಮøತಿಯು  ಸ್ಮರಿಸಿಕೊಳ್ಳಬೇಕಾದದ್ದರ ವಿಷಯವು:ಸ್ಮರಿಸುವವನ ವಿಷಯವಲ್ಲ.ಹೀಗೆಯೇ ಇಚ್ಛೆಯೂ ಇಷ್ಟವಸ್ತುವಿನ ವಿಷಯವೇ ಹೊರತು ಇಚ್ಛೆಯುಳ್ಳಾತನ ವಿಷಯವಲ್ಲ.ಇವು ಸ್ಮರಿಸುವವನ ಮತ್ತು ಇಚ್ಛಾವಂತನವಿಷಯದಲ್ಲಿಯೂ ಆಗುವವೆಂದರೆ  ಮೊದಲೇ ಹೇಳಿರುವಂತೆ ಎರಡಕ್ಕೂ ಅನವಸ್ಥೆಯನ್ನು ತಪ್ಪಿಸಿಕೊಳ್ಳುವುದಕ್ಕೆ ಆಗದೇ ಹೋಗುವುದು.(ಪುಟ 70)

 

17)ಆತ್ಮನ ವಿಷಯದಲ್ಲಿ ಪ್ರಮೆಯುಂಟಾಗಬೇಕೆಂದರೆ ದೋಷ:

 

ಶಿಷ್ಯ:ಪ್ರಮಾತೃವಿನ ವಿಷಯದಲ್ಲಿ  ಅರಿವು ಉಂಟಾಗದೆ ಇರುವುದಾದರೆ ಪ್ರಮಾತೃವನ್ನು ಅರಿತಂತೆಯೇ ಆಗುವುದಿಲ್ಲವಲ್ಲ!

 

ಗುರು:ಹಾಗಲ್ಲ.ಏಕೆಂದರೆ ಅರಿಯುವಾತನ ಅರಿವಿಗೆ ಅರಿಯಲ್ಪಡುವ ವಸ್ತುವೇ  ವಿಷಯವಾಗಿರುತ್ತದೆ.ಅರಿಯುವಾತನ ವಿಷಯದಲ್ಲಿಯೂ  ಅರಿವು ಇರುವುದೆಂದರೆ ಹಿಂದೆ ಹೇಳಿದಂತೆ

ಅನವಸ್ಥೆಯಾದೀತು.ಇದಲ್ಲದೆ ಆತ್ಮನಲ್ಲಿ ಅರಿವು ಕೂಟಸ್ಥವಾಗಿ ,ನಿತ್ಯವಾಗಿ,ಸ್ವಯಂಜ್ಯೋತಿಯಾಗಿ  ಮತ್ತೊಂದು ಅಪೇಕ್ಷೆಯಿಲ್ಲದೆಯೇ ಬೆಂಕಿ,ಸೂಯ೯-ಮುಂತಾದವುಗಳ ಬಿಸಿ,ಬೆಳಕು ಮುಂತಾದವುಗಳಂತೆ

ತಾನೇ ಸಿದ್ಧವಾಗಿರುವುದೆಂದು ಮೊದಲೇ ತೋರಿಸಿಕೊಟ್ಟಿರುತ್ತದೆ.ಚೈತನ್ಯ ರೂಪವಾಗಿ ಸ್ವಯಂಪ್ರಕಾಶವಗಿರುವ  ಅರಿವು ತನ್ನ ಆತ್ಮನಲ್ಲಿ  ನಿತ್ಯವಾಗಿಲ್ಲವೆಂದರೆ, ತನಗಗಿ ತಾನು  ಇರುವನೆಂಬುದು ಹೊಂದುವುದಿಲ್ಲ;ಕಾಯ೯ಕರಣ ಸಂಘಾತದತೆ  ಇವನೂ ಸಂಹಿತನಾಗಿರುವುದರಿಂದ ಮತ್ತೊಂದರ ಪ್ರಯೋಜನಕ್ಕಾಗಿರುವನೆಂಬ  ದೋಷವನ್ನೂ ಹೇಳಿರುತ್ತೇವೆ.ಹೇಗೆಂದರೆ ಚೈತನ್ಯರೂಪವಾಗಿರುವ   ಸ್ವಯಂಪ್ರಕಾಶವು  ತನ್ನ ಆತ್ಮನಲ್ಲಿ ನಿತ್ಯವಾಗಿಲ್ಲದಿದ್ದರೆ ಸ್ಮøತಿಯೇ ಮುಂತಾದವುಗಳ ವ್ಯವಧಾನವಿರುವುದರಿಂದ  ಅದು ಆತ್ಮನಿಗೆ ದೂರವಾಗಿದೆ ಎಂದಾಗುವುದು.ಆದ್ದರಿಂದ  ಚೈತನ್ಯರೂಪವಾದ ಬೆಳಕು ಹುಟ್ಟುವುದಕ್ಕೆ ಮೊದಲೂ  ನಾಶವಾದ ಬಳಿಕವೂ ಆತ್ಮನಲ್ಲಿಯೇ ಇಲ್ಲದ್ದರಿಂದ ಆತ್ಮನು ಕಣ್ಣು  ಮುಂತಾದವುಗಳಂತೆ ಸಂಹತನಾಗಿರುವನೆಂದಾಗುವುದರಿಂದ ಮತ್ತೊಂದರ ಪ್ರಯೋಜನಕ್ಕಾಗಿ ಇರುವನೆಂದಾಗ್ವುದು.ಮತ್ತು ಅದು ಹುಟ್ಟಿದ ಮೇಲೆ  ಆತ್ಮನಲ್ಲಿ ಇರುವುದೆಂದು  ಯಾವಾಗ ಹೇಳುವೆವೋ ಆಗ ಆತ್ಮನು ತನಗೆ ತಾನು ಇರತಕ್ಕವನಲ್ಲ.ಏಕೆಂದರೆ ಚೈತನ್ಯವು ಇರುವುದು,ಇಲ್ಲದಿರುವುದು-ಇದರ ಅಪೇಕ್ಷೆಯಿಂದಲೇ ಅಲ್ಲವೇ,ಆತ್ಮಾನಾತ್ಮಗಳು ಸ್ವಾಥ೯ ಪರಾಥ೯ವಾಗಿರುವುದೆಂದು ಸಿದ್ಧಿಸುವುದು.?ಆದ್ದರಿಂದ ಆತ್ಮನು ಮತ್ತೊಂದನ್ನು ಬಯಸದೆಯೇ  ನಿತ್ಯಚೈತನ್ಯ ಜ್ಯೋತಿಯಾಗಿರುವನೆಂದು  ಸಿದ್ಧವಾಯಿತು.(ಪುಟ72)

 

18) ಆತ್ಮನಲ್ಲಿರುವ ಪ್ರಮಾತೃತ್ವವು ಔಪಚಾರಿಕ:

 

ಶಿಷ್ಯ:ಹಾಗಾದರೆ ಪ್ರಮೆಗೆ ಆಶ್ರಯನಲ್ಲದೆ  ಇದ್ದರೆ ಪ್ರಮಾತೃವು  ಪ್ರಮಾತೃವೆಂಬುದು ಹೇಗೆ?

ಗುರು:ಅದನ್ನು ಹೇಳುತೇನೆ.ಕೇಳು.ಪ್ರಮೆಯು ನಿತ್ಯವಾಗಲಿ ಅನಿತ್ಯವಾಗಲಿ ಅದರ ರೂಪದಲ್ಲಿ ಯಾವ ವಿಶೇಷವೂ ಇರುವುದಿಲ್ಲ.ಹೇಗೆಂದರೆ ಅರಿವೇ ಪ್ರಮೆಯೆಂಬುದು. ಅರಿವು ಸ್ಮøತಿ,ಇಚ್ಛೆ ಮುಂಂತಾದವು ಊಂಟಾದ ಮೇಲೆ ಹುಟ್ಟುವ  ಅನಿತ್ಯ ಪದಾಥ೯ವೇ ಆಗಲಿ,ಕೂಟಸ್ಥ ನಿತ್ಯ ಪದಾಥ೯ವೇ ಆಗಲಿ,ಅರಿವೆಂಬ ಅದರ ಸ್ವರೂಪದಲ್ಲಿ  ಯಾವ ಹೆಚ್ಚು ಕಡಿಮೆಯೂ ಇರುವುದಿಲ್ಲ.ಹೇಗೆ ನಿಲ್ಲು ಎಂಬ ಧಾತುವಿನ ಅಥ೯ವು  ಓಡಾಡಿದ ಮೇಲೆ ನಿಲ್ಲುವುದೆಂಬ  ಹೊಸದಾಗಿ ಹುಟ್ಟುವ ಅನಿತ್ಯ ಫಲವೇ ಆಗಲಿ,ಯಾವಾಗಲೂ ನಿಂತಿರುವುದೆಂಬುದಾಗಲೀ  ಅದರ ರೂಪದಲ್ಲಿ ವಿಶೇಷವಿರುವುದಿಲ್ಲವಾದ್ದರಿಂದ

'ಮನುಷ್ಯರು ನಿಂತಿದ್ದಾರೆ','ಪವ೯ತಗಳು ನಿಂತಿವೆ' ಎಂದು ಮುಂತಾಗಿ ಸಮವಾಗಿಯೇ  ವಾಕ್ಯ ವ್ಯವಹದಾರವು ಕಮಡು ಬರುತ್ತದೆಯೋ  ಹಾಗೆ ನಿತ್ಯಾವಗಥಿಯ ಸ್ವರೂಪವಗಿರುವ  ಪ್ರಮಾತೃವಿನಲ್ಲಿಯೂ ಪ್ರಮಾತೃ ವ್ಯವಹಾರವನ್ನು ಮಾಡುವುದು  ವಿರುದ್ಧವಲ್ಲ.ಏಕೆಂದರೆ ನಿತ್ಯವಾಗಲೀ ಅನಿತ್ಯವಾಗಲೀ  ಅರಿವಿನ ರೂಪದ ಫಲವು  ಎರಡಕ್ಕೂ ಸಮಾನವಾಗಿರುತ್ತದೆ(ಪುಟ73)

 

1) ಪ್ರಮಾತೃ ವಿಷಯದಲ್ಲಿ ಆಕ್ಷೇಪಸಮಾಧಾಗಳು:

 

ಶಿಷ್ಯ:ನಿತ್ಯಾವಗತಿ ಸ್ವರೂಪವಾಗಿರುವ ಆತ್ಮನು ನಿವಿ೯ಕಾರನಾದ್ದರಿಂದ  ಬಡಗಿ ಮುಂತಾದವರು ಬಾಚಿ ಮುಂತಾದವುಗಳೊಡನೆ  ಸೇರಿಕೊಳ್ಳದೆ ಇದ್ದರೆ ಹೇಗೆ (ಕೆತ್ತುವುದೇ ಮುಂತಾದ ಕ್ರಿಯೆಗೆ  ಕತೃ೯ವಾಗಲಾರದೋ ಹಾಗೆ )ಕಾಯ೯ಕರಣಗಳೊಡನೆ ಸಂಹತವಾಗದೆ ಇದ್ದರೆ  ಆತ್ಮನು  ಕತೃ೯ವೆಂಬುದೇ ಹೊಂದುವುದಿಲ್ಲ ಮತ್ತು ಸಂಹತನಲ್ಲದಿರುವುದೇ ಸ್ವಭಾವವಾಗಿರುವ  ಆತ್ಮನು ಕಾಯ೯

ಕರಣಗಳನ್ನು ಸ್ವೀಕರಿಸಿದರೆ ಅನವಸ್ಥಾ ದೋಷವು ಬಂದೊದಗುವುದು.ಬಡಗಿ ಮುಂತಾದವರು ಯಾವಾಗಲೂ ಕಾಯ೯ಕರಣಗಳೊಡನೆ ಸಂಹತರಾಗಿರುವುದರಿಂದ  ಅವರು ಬಾಚಿಯೇ ಮುಂತಾದವನ್ನು ತೆಗೆದುಕೊಳ್ಳುವಾಗ ಯಾವ ಅನವಸ್ಥೆಯೂ ಆಗುವುದಿಲ್ಲ.ಆದರೆ ಇಲ್ಲಿಯೋ ಎಂದರೆ ಅಸಂಹತಸ್ವಭಾವದ ಆತ್ಮನು  ಕರಣವನ್ನು ತೆಗೆದುಕೊಳ್ಳದೆ ಇದ್ದರೆ ಅವನಿಗೆ ಕತೃ೯ತ್ವವು ಹೊಂದಲಾರದಾದ್ದರಿಂದ (ಕತೃ೯ವಾಗುವುದಕ್ಕೆ)ಕರಣವನ್ನು ಸ್ವೀಕರಿಸಬೇಕಾಗುವುದು. ಕರಣವನ್ನು ತೆಗೆದುಕೊಳ್ಳಬೇಕೆಂಬುದೂ  ಒಂದು ಕ್ರಿಯೆಯೇ ಆದ್ದರಿಂದ  ಕ್ರಿಯೆಗೆ ಕತೃ೯ವಾಗುವುದಕ್ಕೆ ಮತ್ತೊಂದು  ಕರಣವನ್ನು ತೆಗೆದುಕೊಳ್ಳ ಬೇಕಾಗುವುದು.ಅದನ್ನು ತೆಗೆದುಕೊಳ್ಳುವುದಕ್ಕೂ ಮತ್ತೊಂದು ಬೇಕಾಗುವುದು.ಹೀಗೆ ಪ್ರಮಾತೃವು ಕತೃ೯ವಾಗಿರುವ ವಿಷಯದಲ್ಲಿ  ಅನವಸ್ಥೆಯ್ನು ತಪ್ಪಿಸಿಕೊಳ್ಳುವುದಕ್ಕೆ ಆಗಲಾರದಲ್ಲ!(ಪುಟ75)

 

(ಹಾಗಲ್ಲ.ನಿತ್ಯಾವಗತಿ ಸ್ವರೂಪನಾಗಿರುವ ಆತ್ಮನೇ ಪ್ರಮಾತೃವೆಂದು ಒಪ್ಪಿರುವುದರಿಂದ  ಅವನು ಕತೃ೯ವೆಂಬುದು ಉಪಚಾರದ ಮಾತೇ,ಎಂದಾಗಬಹುದು.ಆತ್ಮನು ಮುಖ್ಯವಾದ ಅಥ೯ದಲ್ಲಿಯೇ  ಕತೃ೯ಎಂದು ಇಟ್ಟುಕೊಳ್ಳುವುದಾದರೆ ,ಆಗ ಅವನ ಕತೃ೯ತ್ವವು ಸ್ವಭಾವದಿಂದಲೇ ಇರಬೇಕು;ಅಥವಾ ಕ್ರಿಯೆಯೇ  ಆತ್ಮನನ್ನು ಪ್ರೇರಿಸುತ್ತದೆ ಎನ್ನಬೇಕು:ಅಥವಾ ಯಾವುದೋ ಒಂದು ಅವನನ್ನು ಸೇರಿ  ಕ್ರಿಯೆಯನ್ನು ಮಾಡಿಸುತ್ತದೆ ಎನ್ನಬೇಕು.ಮೊದಲನೆಯದಾಗಿ ಇವನಿಗೆ ನಿತ್ಯ ಕತೃ೯ತ್ವವು ಸಂಭವಿಸುವುದಿಲ್ಲ.ಏಕೆಂದರೆ ಇವನು ಕೂಟಸ್ಥವಾದ ಅವಗತಿಯ ಸ್ವರೂಪದವನಾಗಿರುತ್ತಾನೆ.ಕ್ರಿಯೆಯೇ ಆತ್ಮನನ್ನು ಮಾಡಿಸುತ್ತದೆ ಎಂಬುದು ಸರಿಯಲ್ಲ.ಏಕೆಂದರೆ ತಾನೇ ಹುಟ್ಟದಿರುವ ಕ್ರಿಯೆಗೆ ಸ್ವರೂಪವೇ ಇರುವುದಿಲ್ಲ.ಇನ್ನು ಮತ್ತೊಂದು ವಸ್ತು ಆತ್ಮನ ಬಳಿಗೆ ಬಂದು ಸೇರಿ ಅವನಿಂದ ಕೆಲಸವನ್ನು ಮಾಡಿಸುತ್ತದೆ ಎಂದರೆ ಅದೂ ಸರಿಯಲ್ಲ.ಏಕೆಂದರೆ  ಮತ್ತೊಂದು ಸ್ವತಃಸ್ಸಿದ್ಧವಾಗಿ ವಿಷಯವಲ್ಲದ್ದಾಗಿ ಇದೆ ಮುಂತಾದ ಸ್ವಭಾವದ್ದಾಗಿರುವುದೆಂಬುದು  ಹೊಂದುವುದಿಲ್ಲ.ಆತ್ಮನಿಗಿಂತ ಬೇರೆಯಾದ ವಸ್ತು ಅಚೇತನವು,ಅದು ತನಗೆ ತಾನೇ ಪ್ರಮಾಣವಾಗಿರುವುದನ್ನು  ಯಾರೂ ಕಂಡಿರುವುದಿಲ್ಲವಷ್ಟೆ.ಶಬ್ದವೇ ಮುಂತಾದ್ದಲ್ಲೆವೂ ಅರಿವೆಂಬ ಫಲದಲ್ಲಿ  ಕೊನೆಗಾಣುವ ಪ್ರತ್ಯಯಗಳಿಂದಲೇ ಗೊತ್ತಾಗಿ ಸಿದ್ಧವಾಗುತ್ತದೆ.ಆತ್ಮನಿಗಿಂತ ಬೇರೆ ಮತ್ತೊಂದಕ್ಕೆ ಅರಿವು ಇರುವುದಾದರೆ, ಬೇರೆ ವಸ್ತುವೂ  ಮತ್ತೆ ಯಾವುದರೊಡನೆಯೂ ಸೇರಿಕೊಳ್ಳದೆ ತನಗೋಸ್ಕರವಾಗಿಯೇ ಇರುವ ಆತ್ಮನೆಂದಾಗುವುದೇ ಹೊರತು,ಮತ್ತೊಂದಕ್ಕಾಗಿರುವುದೆಂದಾಗುವುದಿಲ್ಲ.ದೇಹ,ಇಂದ್ರಿಯ,ವಿಷಯಗಳು-ಇವು ಯಾವುವೂ ತಮಗಾಗಿ  ತಮಗಾಗಿ ಇವೆ ಎಂದು ನಾವು ನಿಣ೯ಯಿಸುವುದಕ್ಕಾಗುವುದಿಲ್ಲ.;ಏಕೆಂದರೆ  ಅರಿವಿನಲ್ಲಿ ಕೊನೆಗಾಣುವ  ಪ್ರತ್ಯಯಗಳ ಅಪೇಕ್ಷೆಯಿಂದಲೇ  ಅವು ಸಿದ್ಧಿಯಾಗುವುದೆಂದು ಕಂಡು ಬರುತ್ತದೆ.(ಪುಟ76)

 

20) ದೇಹಾದಿಗಳು ಪ್ರಮಾಣ ಸಿದ್ಧವೇ:

 

ಶಿಷ್ಯ:ದೇಹವನ್ನು ಅರಿಯುವುದಕ್ಕೆ  ಯಾರಿಗೂ ಪ್ರತ್ಯಕ್ಷವೇ ಮುಂತಾದ  ಬೇರೊಂದು ಪ್ರತ್ಯಯವು ಬೇಕಾಗಿರುವುದಿಲ್ಲವಲ್ಲ!

 

ಗುರು:ನಿಜ,ಎಚ್ಚರದಲ್ಲಿ ಹೀಗೆ ಆಗಬಹುದು.ಆದರೆ ಮರಣ,ಸುಷುಪ್ತಿ-ಇವುಗಳಲ್ಲಾದರೆ  ದೇಹವೂ ಪ್ರತ್ಯಕ್ಷಾದಿ ಪ್ರಮಾಣಗಳ ಅಪೇಕ್ಷೆಯಿಂದಲೇ  ಸಿದ್ಧಿಯಾಗತಕ್ಕದ್ದೆಂದು  ನಿಶ್ಚಯವಾಗುತ್ತದೆ.ಇಂದ್ರಿಯಗಳೂ ಹಾಗೆಯೇ  ಸಿದ್ಧಿಯಾಗತಕ್ಕವಾಗಿವೆ.ಏಕೆಂದರೆ ಹೊರಗಿನ ಶಬ್ದಗಳೇ ದೇಹೇಂದ್ರಿಯಾದಿಗಳ ಆಕಾರದಲ್ಲಿ  ಪರಿಣಮಿಸಿರುತ್ತವೆಯಾದ್ದರಿಂದ  ಪ್ರತ್ಯಕ್ಷಾದಿ ಪ್ರಮಾಣಗಳ  ಅಪೇಕ್ಷೆಯಿಂದಲೇ ಅವುಗಳ  ಸಿದ್ಧಿಯು ಆಗಬೇಕಾಗಿರುತ್ತದೆ.'ಸಿದ್ಧಿ'ಎಂದರೆ ಪ್ರಮಾಣದ ಫಲವಾದ ಅರಿವೆಂದೂ , ಅರಿವು ಕೂಟಸ್ಥವಾಗಿ  ಸ್ವಯಂಸಿದ್ಧವಾಗಿ  ಆತ್ಮಚೈತನ್ಯರೂಪವಾಗಿರುವುದೆಂದೂ  ಹಿಂದೆಯೇ ಹೇಳಿರುತ್ತದೆ.(ಪುಟ77)

 

21) ಅರಿವು ಪ್ರಮಾಣದ ಫಲವೆನ್ನುವುದು ಹೇಗೆ?:

 

ಇಲ್ಲಿ ಆಕ್ಷೇಪಕನು ಹೇಳುತ್ತಾನೆ:ಅರಿವು ಪ್ರಮಾಣಗಳ ಫಲವೂ ಆಗಿದೆ.ಕೂಟಸ್ಥನಿತ್ಯವಾಗಿರುವ ಆತ್ಮಜ್ಯೋತಿಯ ಸ್ವರೂಪವೂ ಆಗಿದೆ ಎಂಬುದು ವಿರುದ್ಧವಲ್ಲವೆ?ಹೀಗೆನ್ನಲು ಶಿಷ್ಯನನ್ನು ಕುರಿತು ಗುರು  ಇಂತೆಂದನು:ವಿರುದ್ಧವಲ್ಲ,ಮತ್ತೆ ಹೇಗೆಂದರೆ ಕೂಟಸ್ಥನಿತ್ಯನೇ ಆಗಿದ್ದರೂ  ಅರಿವು ಪ್ರತ್ಯಕ್ಷವೇ  ಮುಂತಾದ ಅರಿವಿನ ಕೊನೆಯಲ್ಲಿ  ಕಾಣಿಸಿಕೊಳ್ಳುತ್ತದೆ.ಏಕೆಂದರೆ ಪ್ರತ್ಯಕ್ಷವೇ ಮುಂತಾದ  ಪ್ರತ್ಯಯಗಳು  ಅದಕ್ಕಾಗಿಯೇ ಉಂಟಾಗುತ್ತವೆ.ಪ್ರತ್ಯಕ್ಷವೇ ಮುಂತಾದ  ಪ್ರತ್ಯಯವು ಅನಿತ್ಯವಾಗಿರುವುದರಿಂದ  ತಾನೂ ಅನಿತ್ಯವಾಗಿರುವಂತೆ  ತೋರುವುದು.ಆದ್ದರಿಂದ ಫಲವೆಂದು ಉಪಚಾರಕ್ಕಾಗಿ ಕರೆಯುತ್ತಾರೆ.(ಪುಟ78)

 

 22) ಉಪಸಂಹಾರ: 

 

ಪೂಜ್ಯರೆ,ಹಾಗಾದರೆ ಕೂಟಸ್ಥನಿತ್ಯವಾದ ಅರಿವು ಆತ್ಮಿಜ್ಯೋತಿಯ  ಸ್ವರೂಪವಾಗಿಯೇ ಇದ್ದುಕೊಂಡು ಆತ್ಮನಲ್ಲಿ ತಾನೆ ಸಿದ್ಧವಾಗಿರುವುದು.ಏಕೆಂದರೆ ಅದಕ್ಕೆ ಪ್ರಮಾಣದ  ಅಪೇಕ್ಷೆಯಿರುವುದಿಲ್ಲ.ಅದಕ್ಕಿಂತ ಬೇರೆಯಾಗಿರುವ ಸಚೇತನ ವಸ್ತುವೆಲ್ಲೊಂದಕ್ಕೊಂದು ಸೆರಿಕೊಂಡೇ ಕೆಲಸಮಾಡುತ್ತಿರುವುದರಿಂದ  ಮತ್ತೊಂದಕ್ಕಾಗಿರತಕ್ಕದ್ದು.ಅನಾತ್ಮವು-ಸುಖ,ದುಃಖ,ಮೋಹ -ಎಂಬ ಪ್ರತ್ಯಯಗಳ ಯಾವ ಅರಿವಿನ

ರೂಪದಿಂದ  ಮತ್ತೊಂದಕ್ಕಾಗಿರುವುದೋ  ಅದೇ ರೂಪದಿಂದಲೇ ಅದು ಇರುವುದು.ಮತ್ತೊಂದು ಬೇರೆಯ ರೂಪದಿಂದ ಇದಕ್ಕೆ ಇರುವುದಿಲ್ಲ.ಆದ್ದರಿಂದ ಪರಮಾಥ೯ವಾಗಿ ಅದಕ್ಕೆ ಇರವೇ ಇಲ್ಲ.ಹೇಗೆ ಲೋಕದಲ್ಲಿ  ಹಗ್ಗದ ಹಾವು,ಬಿಸಿಲುಕುದುರೆಯ ನೀರು -ಮುಂತಾದವುಗಳು  ತಮ್ಮ ಅರಿವಿಗಿಂತ ಬೇರೆಯಾಗಿ ಇರುವುದಿಲ್ಲವೆಂಬುದು ಕಂಡುಬಂದಿದೆಯೋ ಇದರಂತೆಯೇ ಜಾಗ್ರತ ಸ್ವಪ್ನಗಳೆಂಬ ದ್ವೈತವೂ ತನ್ನ ಅರಿವನ್ನು ಬಿಟ್ಟು ಇರುವುದಿಲ್ಲ ಎಂಬುದೇ ಯುಕ್ತವು..ಪೂಜ್ಯರೆ ಹಾಗೆಯೇ ಪರಮಾಥ೯ವಾಗಿ ,ಆತ್ಮನ ಬೆಳಕಾಗಿರುವ ಅರಿವು ಕಡಿವಡೆಯದೆ ಇರುವುದರಿಂದ  ಅದು ಕೂಟಸ್ಥನಿತ್ಯವಾದದ್ದು ಮತ್ತು ಅದ್ವೈತ ಸ್ವರೂಪವಾದದ್ದು.ಏಕೆಂದರೆ ಬೇರೆ ಬೇರೆಯಾಗಿ ಉಂಟಾಗುವ  ಪ್ರತ್ಯಯಗಳಲ್ಲೆಲ್ಲವುಗಳನ್ನು ಬಿಟ್ಟು ಹೋಗದೆ ಇರುತ್ತದೆ. ಆದರೆ ಬೇರೆ ಬೇರೆ  ಪ್ರತ್ಯಯಗಳು ಅರಿವನ್ನು ಬಿಟ್ಟು ಹೋಗುತ್ತಿರುವುವು.ಹೇಗೆ ಸ್ವಪ್ನದಲ್ಲಿ ಕಾಣುವ ಕಪ್ಪು ಹಳದಿ -ಮುಂತಾದ ಆಕಾರದ ರೂಪದ ಪ್ರತ್ಯಯಗಳು ತಮ್ಮ ಅರಿವನ್ನು ಬಿಟ್ಟು ಹೋಗುತ್ತಿರುವುದರಿಂದ ಪರಮಾಥ೯ವಾಗಿ ಇಲ್ಲವೆನ್ನುತ್ತಾರೋ ಹಾಗೆಯೇ ಎಚ್ಚರದಲ್ಲಿಯೂ ಕಪ್ಪು ಹಳದಿ ಬೇರೆ ಬೇರೆಯ ಪ್ರತ್ಯಯಗಳುಅದೇ ಅರಿವನ್ನು ಬಿಟ್ಟುಹೋಗುತ್ತಿರುವುದರಿಂದ ಅವೂ ಅಸತ್ಯರೂಪವಾಗಿ ಇರಬೇಕು.ಮತ್ತು ಅರಿವಿಗೆ ಮತ್ತೊಬ್ಬ ಅರಿಯಿವಾತನು ಇಲ್ಲವಾದ್ದರಿಂದ ತನ್ನ ರೂಪದಿಂದ ತಾನು ತೆಗೆದುಕೊಳ್ಳುವುದಕ್ಕಾಗಲೀ  ಬಿಡುವುದಕ್ಕಾಗಲೀ ಆಗುವುದಿಲ್ಲ.ಮತ್ತು ತನಗಿಂತ ಬೇರೆಒಂದು  ವಸ್ತುವೂ ಇಲ್ಲದ್ದರಿಂದಲೂ  ಹೀಗೆಂದು ತಿಳಿಯಬೇಕು.(ಪುಟ80)

 

ಗುರು: ಹಾಗೆಯೇ ಸರಿ. ಜಾಗ್ರತ ಸ್ವಪ್ನರೂಪವಾಗಿರುವ  ಸಂಸಾರಕ್ಕೆ ನಿಮಿತ್ತವೆಂದು ಹೇಳಿದೆನಲ್ಲ, ವಿದ್ಯೆಯು ಇದೇ. ಅವಿದ್ಯೆಗೆ ವಿದ್ಯೆಯು ನಿವತ೯ಕವೇ.ಇನು ಮೇಲೆ ಜಾಗ್ರತದುಃಖ ಸ್ವಪ್ನವನ್ನು  ಅನುಭವಿಸಿವುದಿಲ್ಲ.ಸಂಸಾರ ದುಃಖದಿಂದ ಬಿಡುಗಡೆಂiÀiನ್ನು  ಹೊಂದಿದ್ದೀಯೆ.

 

ಶಿಷ್ಯ:ಹೌದು ಸ್ವಾಮಿ.  

,,,,,,,,,,,,,,,,,,,,ಎರಡನೆಯ ಅಧ್ಯಾಯ ಸಂಪೂಣ೯ವಾvಯಿತು.,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,.  

 

ಪರಿಸಂಖ್ಯಾನ:

 

ಇದುವರೆಗೆ ತಾವು ಕೂಡಿಹಾಕಿಕೊಂಡಿರುವ  ಪುಣ್ಯಪಾಪಗಳನ್ನು ನಾಶಗೊಳಿಸುವುದರಲ್ಲಿ  ತತ್ಪರರಾಗಿಯೂ ಹೊಸದಾಗಿ ಇವುಗಳನ್ನು ಕೂಡಿಹಾಕಬಾರದೆಂದು  ಬಯಸುವವರಾಗಿಯೂ ಇರುವ ಮುಮುಕ್ಷುಗಳಿಗಾಗಿ ಪರಿಸಂಖ್ಯಾನವನ್ನು ಹೇಳಲಾಗುತ್ತದೆ. ಅವಿದ್ಯೆಯೆಂಬ ಹೇತುವುನಿಂದುಂಟಾದ  ದೋಷಗಳು ವಾಕ್ಕು,ಮನಸ್ಸು,ಶರೀರ-ಇವುಗಳ ಪ್ರವೃತ್ತಿಗೆ ಕಾರಣವಾಗಿರುತ್ತದೆ.ಮತ್ತು ಪ್ರವೃತ್ತಿಯಿಂದ ಬೇಕಾದ ,ಬೇಡವಾದ ಮತ್ತು ಇವೆರಡೂ ಮಿಶ್ರವಾದ ಕೊಡುವ ಕಮ೯ಗಳು ರಾಶಿಯಾಗುತ್ತವೆಯಾದ್ದರಿಂದ  ಕಮ೯ಗಳಿಂದ ಬಿಡುಗಡೆಯಾಗುವುದಕ್ಕೆ  ಪರಿಸಂಖ್ಯಾನವನ್ನು ಹೇಳಿರುತ್ತದೆ.(ಪುಟ85)

 

ವಿಷಯ ವಿಷಯಿಗಳ ವಿಂಗಡ:ಇಲ್ಲಿ ಶ್ರೋತ್ರವೇ ಮುಂತಾದ ಇಂದ್ರಿಯಗಳಿಂದ ಗ್ರಾಹ್ಯವಾಗಿರುವುದರಿಂದ ವಿಷಯಗಳೆನಿಸಿರುವ ಶಬ್ದ,ರಸ,ರೂಪ,ರಸ,ಗಂಧ-ಇವುಗಳಿಗೆ ತಮ್ಮ ತಮ್ಮ ವಿಷಯದಲ್ಲಾಗಲೀ ,ತಮಗಿಂತ ಬೇರೆಯಾದ  ಪದಾಥ೯ಗಳ ವಿಷಯದಲ್ಲಾಗಲೀ  ಜ್ಞಾನವುಂಟಾಗುವುದಿಲ್ಲ.ಇವುಗಳೇ ಶರೀರಾದಿ ರೂಪದಿಂದ ಪರಿಣಾಮವನ್ನು ಹೊಂದುವುದರಿಂದ  ಮಣ್ಣಿನ ಹೆಂಟೆಯೇ  ಮುಂತಾದವುಗಳಿಗೆ ಹೇಗೆತಮ್ಮ ವಿಷಯದಲ್ಲಾಗಲೀ  ಬೇರೆಯ ವಸ್ತುಗಳ ವಿಷಯದಲ್ಲಾಗಲೀ ಜ್ಞಾನವುಂಟಾಗುವುದಿಲ್ಲವೋ ,ಹಾಗೆ ಶರೀರಾದಿಗಳಾಗಿ  ಪರಿಣತವಾದ ಶಬ್ದಾದಿಗಳಿಗೇ  ಆಗುವುದಿಲ್ಲ.(ಪುಟ 86)

 

ವಿಷಯಗಳು ಶ್ರೋತ್ರವೇ ಮುಂತಾದ ದ್ವಾರಗಳಿಂದ  ಅರಿಯಬರುತ್ತದೆ.ಹಾಗೆ ಯಾವಾತನಿಂದ ಅರಿಯಲ್ಪಡುತ್ತದೆಯೋ  ಆತನು ಅರಿಯುವವನಾದ್ದರಿಂದ  ಅರಿಯಲ್ಪಡುವ ಇವುಗಳ ಜಾತಿಗೆ ಸೇರಿದವನಲ್ಲ.ಹೇಗೆಂದರೆ ಶಬ್ದವೇ ಮುಂತಾದವುಗಳು  ಒಂದಕ್ಕೊಂದು ಸೇರಿಕೊಂಡಿರುವುದರಿಂದ ಹುಟ್ಟುವುದು,ಬೆಳೆಯುವುದು,ಮಾಪ೯ಡುವುದು,ಸೊರಗುವುದು,ಹಾಳಾಗುವುದು,ಮತ್ತೊಂದರೊಡನೆ ಸೇರಿಕೊಳ್ಳುವುದು,ಅದನ್ನು ಬಿಟ್ಟಗಲುವುದು,ತೋರಿಲೊಳ್ಳವುದು,ಮರೆಯಾಗುವುದು, ವಿಕಾರಿ ಭಾವವನ್ನು ಪಡೆಯುವುದು ,ಕ್ಷೇತ್ರ ಬೀಜಭಾವವನ್ನು ಪಡೆಯುವುದು,-ಮುಂತಾದ ಅನೇಕ ಧಮ೯ಗಳುಳ್ಳವಾಗಿಯೂ,ಸಾಮನ್ಯವಾಗಿಸುಖ,ದುಃಖ-ಮುಂತಾದ ಅನೇಕ ಫಲಗಳನ್ನು ಕೊಡುವ ಅನೇಕ ಕಮ೯ಗಳುಳ್ಳವಾಗಿಯೂ ಇರುತವೆ.ಇವುಗಳನ್ನು ಅರಿಯುವವನೆಂಬ ಕಾರಣದಿಂದಲೇ ಇವುಗಲ ವಿಜ್ಞಾತೃವು ಶಬ್ದವೇ ಮುಂತಾದ ಯಾವ ಧಮ೯ವೂ  ಇಲ್ಲದವನಾಗಿ ಬೇರೆಯ ಸ್ವಭಾವದವನಾಗಿರುತ್ತಾನೆ.(ಪುಟ 86)

 

ಬಾಹ್ಯಪರಿಸಂಖ್ಯಾನ ಕ್ರಮ:   

 

ಇದರಲ್ಲಿ ಶಬ್ದವೇ ಮುಂತಾದವುಗಳ ಅನುಭವದಿಂದ  ತೊಂದರೆ ಉಂಟಾದರೆ ವಿವೇಕಿಯಾದವನು  ರೀತಿಯಾಗಿ ಚಿಂತಿಸಿಕೊಳ್ಳಬೇಕು:ಶಬ್ದವು ಬರಿಯ ಧ್ವನಿಯಿಂದಾಗಲೀ,ಷಡ್ಜವೇ  ಮುಂತಾದ ಇಂಪಿನ (ಶಬ್ದಗಳು) ಹೊಗಳಿಕೆಯೇ ಮುಂತಾದ ಇಷ್ಟವಾದ ಶಬ್ದಗಳು,ಸುಳ್ಳುಮಾತು,ಅಸಹ್ಯವಾದ ಮತು,ತಿರಸ್ಕಾರದ ಮಾತು,ಸಿಟ್ಟಿನ ಮಾತು-ಮುಂತಾದ ಮಾತುಗಳು -ಎಂಬ ತನ್ನ ವಿಶೇಷ ಧಮ೯ಗಳಿಂದಾಗಲೀ  ಅರಿಯುವ ಸ್ವಭಾವವುಳ್ಳವನೂ ಅಸಂಸಾರಿಯೂ ಅವಿಕಾರಿಯೂ  ಅಚಲನೂ ಅನಾದಿಯೂ  ಅಭಯನೂ ಅತ್ಯಂತ ಸೂಕ್ಮನೂ  ಅವಿಷಯನೂ ಆಗಿರುವ ನನ್ನನ್ನು ವಿಷಯೀಕರಿಸಿ ಮುಟ್ಟಲೇ ಆರದು.ನಾನು ಯಾವುದರ ಸಂಬಂಧ ಇಲ್ಲದವನೆಂಬುದರಿಂದಲೇ(ಅದು ಮುಟ್ಟಲಾರದು).ಆದ್ದರಿಂದಲೇ ನನಗೆ ಶಬ್ದದ ನಿಮಿತ್ತದಿಂದ  ಹಾನಿಯಾಗಲಿ  ವೃದ್ಧಿಯಾಗಲೀ ಆಗುವಂತಿಲ್ಲ.ಆದ್ದರಿಂದ ನನ್ನನ್ನು ಹೊಗಳುವುದು ಮುಂತಾದ ಪ್ರಿಯವಾದ ಅಥವಾ ಹೀಯಾಳಿಸುವುದು

 ಅಪ್ರಿಯವಾದ ಇದೇ ಮುಂತಾದ ರೂಪದ ಶಬ್ದವು  ನನ್ನನ್ನು ಏನುಮಾಡೀತು?ಶಬ್ದವೇ ತಾನೆಂದು ತಿಳಿದು ಕೊಂಡಿರುವ ಅವಿವೇಕಿಯನ್ನು  ಮಾತ್ರ ಪ್ರಿಯವಾದ ಶಬ್ದವು  ಹಿಗ್ಗಿಸೀತು.ಅಪ್ರಿಯವಾದದ್ದು ಕುಗ್ಗಿಸೀತು.ಏಕೆಂದರೆ ಅವನು ವಿವೇಕವಿಲ್ಲದೆ ಇರುತ್ತಾನೆ.ಆದರೆ ವಿವೇಕಿಯಾದ ನನಗೆ ಅದು ಕೂದಲೆಳೆಯಷ್ಟೂ  ಏನನ್ನೂ ಮಾಡಲಾರದು.

 

ಇದರಂತೆಯೇ ಸ್ಪಶ೯ಸಾಮಾನ್ಯದಿಂದಲೂ  ಶೀತ,ಉಷ್ಣ,ಮೆದು,ಗಟ್ಟಿ-ಮುಂತಾದ ಜ್ವರ ಹೊಟ್ಟೆನೋವು ಮೊದಲಾದ ಅದರ ವಿಶೇಷರೂಪಗಳಿಂದಲೂ ಅವು ಪ್ರಿಯವಾಗಲಿ ಅಪ್ರಿಯವಾಗಲಿ,ಸರೀರಕ್ಕೆ ಸಂಬಂಧ ಪಟ್ಟಿರಲಿ, ಹೊರಗಿನ(ನಡುವೆ ಬಂದ) ನಿಮಿತ್ತಗಳಿಂದಾಗಲೀ-ಯಾವುವುಗಳಿಂದಾಗಲಿ,ಮುಷ್ಟಿಯಿಂದ ಗುದ್ದುವುದೇ ಮುಂತಾದವುಗಳಿಂದ ಆಕಾಶಕ್ಕೆ ಏನೇನೂ ಆಗದಿರುವಂತೆ ನನಗೆ ಹೆಚ್ಚು ಅಥವಾ ಕುಂದಿನ ರೂಪದ  ಯಾವ ವಿಕಾರವೂ  ಆಗಲಾರದು.ಏಕೆಂದರೆ ನಾನು ಸ್ಪಶ೯ವಿಲ್ಲದವನಾಗಿರುತ್ತೇನೆ.

 

ಹೀಗೆಯೇ ಊಪಸಾಮಾನ್ಯದಿಂದಲೂ  ಸ್ತ್ರೀಯರ ರೂಪವೇ ಮುಂತಾದ  ಪ್ರಿಯಾಪ್ರಿಯವಾದ ಅದರ ವಿಶೇಷಗಳಿಂದಲೂ  ಗಂಧ ಸ್ವರೂಪನಲ್ಲದ ನನಗೆ ಯಾವ ಹಾನಿಯಾಗಲಿ ವೃದ್ಧಿಯಾಗಲೀ ಅಗಲಾರದು.ಏಕೆಂದರೆ ನಾನು ರೂಪವಿಲ್ಲದವ ನಾಗಿರುತ್ತೇನೆ.

 

ಹೀಗೆಯೆ ರಸಸಾಮಾನ್ಯದಿಂದಲೂ  ಮೂಢ ಬುದ್ಧಿಯುಳ್ಳವರು ಗ್ರಹಿಸುವ ಸಿಹಿ,ಹುಳಿ,ಉಪ್ಪು,ಖಾರ,ಕಹಿ,ಒಗರು-ಎಂಬ ಅದರ ವಿಶೇಷಗಳಿಂದಲೂ  ಗಂಧಸ್ವರೂಪನಲ್ಲದ ನನಗೆ ಯಾವ

ಹಾನಿಯಾಗಲಿ,ವೃದ್ಧಿಯಾಗಲಿ ಆಗುವಂತಿಲ್ಲ.

 

'ಯಾವ ಆತ್ಮಶಬ್ದದಲ್ಲಿ ಶಬ್ದವಿಲ್ಲವೊ,ಸ್ಪಶ೯ವಿಲ್ಲವೋ,ರೂಪವಿಲ್ಲವೋ ಯಾವುದು ನಾಶವಿಲ್ಲದ್ದೋ ಮತ್ತು ಯಾವುದರಲ್ಲಿ ರಸವಿಲ್ಲವೋ,ಯಾವುದು ನಿತ್ಯವಗಿ ಗಂಧವಿಲ್ಲದ್ದೋ, ಅದ್ನು ಅರಿತುಕೊಂಡರೆ ಮೃತ್ಯುವಿನ ಮುಖದಿಂದ ಬಿಡುಗಡೆಯನ್ನು ಹೊಂದುತ್ತಾನೆ'ಎಂಬ (..1-3-15)ಶ್ರುತಿಯಿಂದ ಇದು ಸಿದ್ಧವಾಗುತ್ತದೆ'.

(ಶ್ರುತಿಯಲ್ಲಿ  ಹೇಳಿರುವ ಪರಮಾತ್ಮ ಸ್ವರೂಪವೇ ನನ್ನ ಆತ್ಮನು ಎಂದು ಅಭಿಪ್ರಾಯ.(ಪುಟ 88)

 

ಅಧ್ಯಾತ್ಮಿಕ ಪರಿಸಂಖ್ಯಾನ:

 

ಇದಲ್ಲದೆ ಹೊರಗೆ ಶಬ್ದವೇ ಮುಂತದವುಗಳಿವೆಯಲ್ಲ,ಅವೇ ಶರೀರದ ಆಕಾರವಾಗಿಯೂ  ಅವುಗಳನ್ನು ಗ್ರಹಿಸುವ ಶ್ರೋತ್ರವೇ ಮುಂತಾದ ಇಂದ್ರಿಯಗಳ ಆಕಾರವಾಗಿಯೂ (ಮನಸ್ಸು,ಬುದ್ಧಿ ಎಂಬ) ಎರಡು ಅಂತಃಕರಣಗಳ ಆಕಾರವಾಗಿಯೂ ಅವುಗಳ ವಿಷಯಗಳ ಆಕಾರವಾಗಿಯೂ ಇರುತ್ತವೆ. ಏಕೆಂದರೆ ಇವು ಒಂಕ್ಕೊಂದು ಸೇರಿಕೊಂಡೇ ಇರುತ್ತವೆ.ಎಲ್ಲಾ ಕ್ರಿಯೆಗಳಲ್ಲಿಯೂ ಸಂಹತವಾಗಿಯೂ ಇರುತ್ತವೆ.(ಪುಟ8)

 

ಅವಿಕಾಯ೯ತ್ವ ಪರಿಸಂಖ್ಯಾನ:

 

ಇದು ಹೀಗಿರುವಲ್ಲಿ ಪರಮಾಥ೯ವನ್ನು ಬಲ್ಲ ನನಗೆ ಶತ್ರುವಾಗಲೀ,ಮಿತ್ರನಾಗಲೀ,ಉದಾಸೀನನಾಗಲಿ ಯಾವುದೂ ಇರುವುದಿಲ್ಲ.ಹೀಗಿರುವಲ್ಲಿ ಯಾವನಾದರೂ ಮಿಥ್ಯಾಜ್ಞಾನದಿಂದಾದ ಅಭಿಮಾನದಿಂದ ಕ್ರಿಯಾಫಲರೂಪವಾದ ಪ್ರಿಯವನ್ನೋ ಅಪ್ರಿಯವನ್ನೋ  ನನ್ನ ಮೇಲೆ ಪ್ರಯೋಗ ಮಾಡಲೆಳೆಸಿದರೆ ಅವರು ಅದನ್ನು ವ್ಯಥ೯ವಾಗಿಯೇ ಪ್ರಯೋಗಿಸಲೆಳಸಿದಂತೆ.ಏಕೆಂದರೆ' ಆತ್ಮನು ಅವ್ಯಕ್ತನು,ಅಚಿಂತ್ಯನು'.(ಗೀತಾ

2-25)ಎಂದು ಸ್ಮøತಿಯಿದೆ.ಇದರಂತೆ ನಾನು ಪಂಚಭೂತಗಳು ಯಾವುವುಗಳಿಂದಲೂ  ವಿಕಾರವನ್ನು ಪಡೆಯತಕ್ಕವನಲ್ಲ.ಏಕೆಂದರೆ ಅವುಗಳಿಗೆ ವಿಷಯನಲ್ಲ.ಏಕೆಂದರೆ' ಆತ್ಮನುಕತ್ತರಿಸುವುದಕ್ಕೆ ಆಗದವನು,'ಎಂದು ಸ್ಮøತಿಯಿದೆ.

 

ಇನ್ನು ಶರೀರೇಂದ್ರಿಯಗಳ  ಆಕಾರ ಮಾತ್ರವನ್ನು ಕಂಡುನನ್ನಲ್ಲಿ ಪ್ರೇಮವಿರುವವರೂ  ಅದಕ್ಕೆ ವಿಪರೀತವಾಗಿರುವರೂ ನನಗೆ ಪ್ರಿಯ,ಅಪ್ರಿಯ-ಮುಂತಾದದ್ದನ್ನು ಮಾಡಬೇಕೆಂದು  ಬಯಸುವುದೂ ಅದರಿಂದಾದ  ಪುಣ್ಯಾಪುಣ್ಯಗಳೇ  ಮುಂತಾದ್ದವನ್ನು ಪಡೆಯುವುದಿದೆಯಲ್ಲ,ಅದು ಅವರಿಗೇ ಹೊರತು

ಮುಪ್ಪಿಲ್ಲದವನೂ ಮರಣವಿಲ್ಲದವನೂ  ಭಯವಿಲ್ಲದವನೂ ಆಗಿರುವ ನನಗಲ್ಲ.ಪಾಪವನ್ನು ಮಾಡಿರುವುದು,ಪಾಪವನ್ನು ಮಾಡದೆ ಇರುವುದು -ಇವು ಇವನನ್ನು ಸಂಕಟಗೊಳಿಸುವುದಿಲ್ಲ.''ಇವನು

ಕಮ೯ದಿಂದ ಬೆಳೆಯುವುದೂ ಇಲ್ಲ ಬಡವಾಗುವುದೂ ಇಲ್ಲ' ಒಳಗೂ ಹೊರಗೂ ಇರುವವನು,ಜನ್ಮರಹಿತನಾಗಿರುವವನು''ಲೋಕದುಃಖಕ್ಕೆ ಹೊರಚ್ಚಾಗಿರುವ (ಆತನಿಗೆ ಅದು) ಅಂಟುವುದಿಲ್ಲ.-ಇವೇ ಮುಂತಾದ ಶ್ರುತಿಗಳಿಂದ ಇದು ಸಿದ್ಧವಾಗುತ್ತದೆ.ಅನಾತ್ಮ ವಸ್ತುವು ಇಲ್ಲದಿರುವುದರಿಂದಲೂ ನನಗೆ ಯಾವ ವಿಕಾರವೂ ಆಗುವುದಿಲ್ಲ ಎಂಬುದು ಮುಖ್ಯಹೇತುವು.ಹೀಗೆ ದ್ವೈತವು ಇಲ್ಲದಿರುವುದರಿಂದ ಆತ್ಮನು

ಅದ್ವಿತೀಯನು ಎಂಬುದನ್ನು ತಿಳಿಸುವ ಉಪನಿಷದ್ವಾಕ್ಯಗಳು ಇರುವವಷ್ಟೆ,ಅವನ್ನು ವಿಸ್ತಾರವಾಗಿ ಚೆನ್ನಾಗಿ ನೋಡುತ್ತಿರಬೇಕು.

 

,,,,,,,,,,,,,,,,,,,,,,ಇತಿ ಶ್ರೀಮತ್ ಶಂಕರಭಗವತ್ಪಾದ ಕೃತೌ ಉಪದೇಶ ಸಾಹಸ್ರ್ಯಾಂ ಗದ್ಯ ಪ್ರಬಂಧಃ ಸಮಾಪÀ್ತಃ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

 ಸಾರಾಂಶ:

 

ಮೊದಲನೇ ಪ್ರಕರಣದ ಸಾರ:

 

1ರಿದ 5:ಸಾಧನಸಂಪತ್ತಿಯುಳ್ಳವರಿಗೇ ದೊಡ್ಡವರು ವಿದ್ಯೆಯನ್ನು ಉಪದೇಶಿಸುವರು.ಏಕೆಂದರೆ ವಿದ್ಯೆಯು ಅಂಥವರಲ್ಲಿಯೇ ಫಲಕಾರಿಯಾಗುವುದು.ಅಂಥವರಿಗೆ ಹೇಳಿಕೊಟ್ಟವರ ಜ್ಞಾನವು ದೃಢವಾಗುವುದು.ಅದರ ಮೂಲಕ ವಿದ್ಯೆಯೂ ಮುಂದುವರಿಯುವುದು.ಆದ್ದರಿಂದ ವೇದಾಂತ ತತ್ವವನ್ನು ಮನಗಾಣಬೇಕೆನ್ನುವವರು  ಸಾಧನ ಚತುಷ್ಟಯಗಳನ್ನು ಸಂಪಾದಿಸಿಕೊಳ್ಳಬೇಕು.ಅವುಗಳ ಪ್ರಾಪ್ತಿಗಾಗಿ ಯಮನಿಯಮಗಳನ್ನು ಅಭ್ಯಾಸ ಮಾಡಬೇಕು.ಇಂಥ ಅಧಿಕಾರಿಗಳಾದ ಶಿಷ್ಯರು ಮಾತ್ರವೇ  ಸದ್ಗುರುವಿನ ಉಪದೇಶದಿಂದ  ಕೃತಕೃತ್ಯರಾಗುವರು.(ಪುಟ 37)

 

6ರಿಂದ 7:ನಮ್ಮೆಲ್ಲರಿಗೂ ಒಬ್ಬನೇ ಆತ್ಮನಿರುವನು.ಅವನು ನಿತ್ಯ ಶುದ್ಧ ಬುದ್ಧ ಮುಕ್ತ ಸ್ವಭಾವದವನಾಗಿರುವನು-ಎಂದು ಉಪನಿಷತ್ತುಗಳಲ್ಲಿ ಸಾರಿರುತ್ತದೆ. ಆತ್ಮನಿಗೇ ಬ್ರಹ್ಮವೆಂದೂ ಪರಮಾತ್ಮನೆಂದೂ ಹೆಸರು.ಬ್ರಹ್ಮದ ಲಕ್ಷಣಗಳನ್ನು ಹೇಳುವ ವೇದಾಂತ ವಾಕ್ಯಗಳನ್ನು ನೋಡಿ ನಮ್ಮ ಆತ್ಮನು ಅಂಥಬ್ರಹ್ಮವೆಂಬುದು ಸರಿಯೊ ಅಲ್ಲವೊ?-ಎಂಬುದನ್ನು ತಿಳಿದುಕೊಳ್ಳಬೇಕು.(ಪುಟ 37)

 

8ರಿಂದ 12:ಅತ್ಯಂತ ಸ್ಥೂಲಬುದ್ಧಿಯುಳ್ಳವರು ಶರೀರವೇ ತಾವೆಂದು ತಿಳಿದುಕೊಂಡಿರುವರು.ಆದರೆ ಸ್ವಲ್ಪ ಮಟ್ಟಿಗೆ ವಿಚಾರಮಾಡಿರುವ  ಆಸ್ತಿಕರಿಗೆ ಶರೀರವು  ಇಲ್ಲಿಯೇ ನಾಶವಾಗುವುದರಿಂದ  ಲೋಕಾಂತರ

ದಲ್ಲಿ ಫಲವನ್ನು ಪಡೆಯುವ ಆತ್ಮನು  ಶರೀರವಾಗಲಾರನು ಎಂಬ ತಿಳುವಳಿಕೆಯು ಬೇಗನೆ ಉಂಟಾಗುತ್ತದೆ.ಆದರೆ ಧಮಾಧಮ೯ಗಳನ್ನು ಮಾಡುವ ಜೀವರು ತಾವೆಂದು ತಿಳಿದುಕೊಂಡಿರುವುದು ತಪ್ಪೇ.ಏಕೆಂದರೆ ಶರೀರಕ್ಕೆ ಸೇರಿದ ಜಾತಿ,ಅನ್ವಯ,ಸಂಸ್ಕಾರ ಮುಂತಾದವುಗಳೆಲ್ಲ ತಮ್ಮ ಆತ್ಮನಿಗೇ ಇರುವವೆಂದು ಅವರು ಆರೋಪಿಸಿಕೊಂಡಿರುತ್ತಾರೆ.ನಿಜವಾಗಿ ಅವರ ಆತ್ಮನು ಅತ್ಯಂತ ಶುದ್ಧವಾದ ಪರಮಾತ್ಮನೇ ಆಗಿರುತ್ತಾನೆ.

 

13ರಿಂದ 18:ಶ್ರುತಿವಾಕ್ಯಗಳ ಅಥ೯ವನ್ನು  ಪರಿಶೀಲಿಸುವುದರಿಂದ  ಇದು ಸ್ಪಷ್ಟವಾಗುತ್ತದೆ.ಶರೀರಕ್ಕೇ ಜಾತಿ,ಅನ್ವಯ,ಸಂಸ್ಕಾರ-ಮುಮತಾದವುಗಳೆಲ್ಲವೂ  ಸೇರಿರುವುದೆಂದೂ ಶ್ರುತಿಯಲ್ಲಿ ವಣಿ೯ಸಿರುತ್ತದೆ.ಆದ್ದರಿಂದ ಆತ್ಮನು  ಶರೀರಕ್ಕಿಂತಲೂ ಮನಸ್ಸಿಗಿಂತಲೂ ಬೇರೆ ಎಂದಾಯಿತು.(ಪುಟ37)

 

1-20 ನಾಮರೂಪಗಳನ್ನು ವ್ಯಾಕೃತವಾಗಿ ಮಾಡುವ  ಪರಮಾತ್ಮನೇ ಜೀವನಾಗಿ  ಶರೀರದೊಳಕ್ಕೆ ಹೊಕ್ಕಿರುತ್ತಾನೆಂದು ಶ್ರುತಿಯಲ್ಲಿ ಸ್ಪಷ್ಟವಾಗಿ ಹೇಳಿದೆ.ಶ್ರುತಿಯಲ್ಲಿ 'ನಾನು ಬೇರೆ ಪರಮಾತ್ಮನು ಬೇರೆ'

ಎಂಬ ತಿಳುವಳಿಕೆಯನ್ನು ನಿಂದಿಸಿದೆ. ಭೇದ ಜ್ಞಾನದಿಂದ ಸಂಸಾರ ಬಂಧನವೂ ,ಅಭೇದ ಜ್ಞಾನದಿಂದ  ಮೋಕ್ಷವೂ ಆಗುವುದೆಂದು  ಶ್ರುತಿವಚನಗಳು ಸ್ಪಷ್ಟವಾಗಿ ಸಾರುತ್ತವೆ.(ಪುಟ38)

 

21-22.ಶಾಸ್ತ್ರದಲ್ಲಿ ಹೇಳಿರುವ ಕಮ೯ಗಳೂ ಕೂಡ ಭೇದವಿಷಯವಾಗಿರುವುದರಿಂದ ಅವುಗಳನ್ನೂ ಅವುಗಳ ಸಾಧನವಾದ ಯಜ್ಞೋಪವೀತಾದಿಗಳನ್ನೂ ಮುಮುಕ್ಷುವಾದವನು ತ್ಯಾಗಮಾಡಬೇಕು.ಏಕೆಂದರೆ ಆತ್ಮನಿಗೆ ಕಮಾ೯ದಿ ಸಂಬಂಧವಿಲ್ಲವೆಂದೂ ಅವನು ಪರಮಾತ್ಮನೇ ಎಂದು ಹೇಳುವ ಶ್ರುತಿಯ ಉಪದೇಶೆಕ್ಕೆ ಕಮಾ೯ದಿಗಳು  ವಿರುದ್ಧವಾಗಿರುತ್ತವೆ.(ಪುಟ38)

 

23-26. ಆತ್ಮೈಕ್ಯ ಜ್ಞಾನವು  ಪ್ರತ್ಯಕ್ಷವಿರುದ್ಧವೆಂದು  ಕೆಲವರಿಗೆತೋರಬಹುದು.ಏಕೆಂದರೆ ಹಸಿವು ಬಾಯಾರಿಕೆಯಿಂದಲೂ  ಸುಡುವುದು ಕತ್ತರಿಸುವುದು  ಮುಂತಾದವುಗಳಿಂದಲೂ  ನಾವು ದುಃಖಪಡುತ್ತಿರುವೆವು.ಆದರೆ ಪರಮಾತ್ಮನು ಎಲ್ಲಾ ಬಗೆಯ  ದುಃಖಗಳನ್ನೂ ದೋಷಗಳನ್ನೂ  ಮೀರಿರುವನು ಎಂದು ಶಾಸ್ತ್ರದಲ್ಲಿ ಹೇಳಿದೆ.ಆದ್ದರಿಂದ ಸಂಸಾರಿಯನ್ನು  ಈಶ್ವರನೆಂದು ತಿಳಿಯುವುದು ಪ್ರತ್ಯಕ್ಷ ವಿರುದ್ಧವು ಎಂದು ಅವರ ಅಭಿಪ್ರಾಯ.(ಪುಟ38)

 

ಆದರೆ ಆತ್ಮನಲ್ಲಿ  ದುಃಖವಿರುವುದು  ಪ್ರತ್ಯಕ್ಷವಾಗಿಲ್ಲ.ಏಕೆಂದರೆ ದುಃಖವು ಪ್ರತ್ಯಕ್ಷ ವಿಷಯವಾಗಿದೆ.ಆತ್ಮನು ಪ್ರತ್ಯಕ್ಷಕ್ಕೆ ವಿಷಯನಲ್ಲ.ಆತ್ಮನು ವಿಷಯವನ್ನು ಅರಿಯುವವನು;ವಿಷಯವಾದ ನೂವು  ಶರೀರದ ಇಂಥ ಪ್ರದೇಶದಲ್ಲಿದೆ  ಎಂದು ಅನುಭವಕ್ಕೆ ಬರುತ್ತದೆಯೇ ಹೊರತು ಅರಿಯುವ ನನ್ನಲ್ಲಿದೆ ಎಂದೇನೂ ಅನುಭವಕ್ಕೆ ಬರುವುದಿಲ್ಲ.

 

ಆದ್ದರಿಂದ ಆತ್ಮನಲ್ಲಿ ಯಾವ ದುಃಖಾದಿಗಳೂ ಇರುವುದಿಲ್ಲ.ಆದ್ದರಿಂದ ಆತ್ಮನು ಒಬ್ಬನೇ ಎಂಬುದು ಪ್ರತ್ಯಕ್ಷವಿರುದ್ಧವಲ್ಲ.ಆದ್ದರಿಂದ ನಾನು ಪರಮಾತ್ಮನೇ ಎಂದು ಶ್ರುತ್ಯನುಸಾರವಾಗಿ  ನಿಶ್ಚಯಿಸುವುದು ಸರಿಯೇ.(ಪುಟ 3)

 

27-28. ಶ್ರುತಿಗನುಸಾರವಾಗಿ ಕೂಟಸ್ಥ ನಿತ್ಯನೂ ನಿತ್ಯ ಶುದ್ಧ ಬುದ್ಧ ಮುಕ್ತ ಸ್ವಭಾವದವನೂ ಆದ ಪರಮಾತ್ಮನೊಬ್ಬನೇ ಪರಮಾಥ೯ವೆಂಬುದೇ ನಿಶ್ಚಯವಾದರೆ ಪ್ರತ್ಯಕ್ಷಾದಿ ಪ್ರಮಾಣಗೋಚರನಾಗಿಯೂ  ಶ್ರುತಿಪ್ರಕಾಶಿತವಾಗಿಯೂ ಅನೇಕವಾದಿಗಳ ವಿವಾದಕ್ಕೆ ವಿಷಯವಾಗಿಯೂ  ಇರುವ ಸಾಧ್ಯ ಸಾಧನ ರೂಪವಾದ  ದ್ವೈತಕ್ಕೆ ಏನುಗತಿ?-ಎಂದು ಒಂದು ಶಂಕೆಯು ತಲೆ ಎತ್ತಬಹುದು.ಇದೆಲ್ಲ ಅವಿದ್ಯಾಕೃತವಾದದ್ದು.,ಪರಮಾಥ೯ವಲ್ಲ.ಆದ್ದರಿಂದಲೇ ಶ್ರುತಿಯಲ್ಲಿ ದ್ವೈತ ದಶ೯ನವನ್ನು ನಿಂದಿಸಿರುತ್ತದೆ.

ಇದು ಅವಿದ್ಯಾಕೃತವೆಂದೂ ಹೇಳಿರುತ್ತದೆ.

 

ಹಾಗಾದರೆ ಶ್ರುತಿಯಲ್ಲಿ  ಇಂಥಸಾಧ್ಯಕ್ಕೆ ಇಂಥ ಸಾಧನವನ್ನು ಮಾಡಬೇಕೆಂದು ವಿಧಿಸಿರುವುದೇಕೆ?-ಎಂದು ಯಾರಾದರೂ ಕೇಳಬಹುದು.ಯಾರು ಇದನ್ನು ಸತ್ಯವೆಂದು ತಿಳಿದಿರುವರೋ ಅವರಿಗೆ ಇಷ್ಟಪ್ರಾಪ್ತಿಗೂ ಅನಿಷ್ಟ ವಿವೃತ್ತಿಗೂ ಇಂಥಿಂಥ ಸಾಧನಗಳಿರುವವು ಎಂದು ಮಾತ್ರ ಸಾಧ್ಯ ಪ್ರಾಪ್ತಿಯ  ಉಪಾಯವನ್ನು ತಿಳಿಸಿಕೊಡುತ್ತದೆ.ಯಾರು ಸಾಧ್ಯ ಸಾಧನ ಪ್ರಪಂಚದಿಂದ ವಿರಕ್ತರಾಗಿರುವರೋ ಅವರಿಗೆ ಕಾಲಕ್ರಮದಿಂದ  ಚಿತ್ತಶುದ್ಧಿಯಾದ ಬಳಿಕ  ಆತ್ಮೈಕತ್ವವೆಂಬ ಪರಮಾಥ೯ವನ್ನು ತಿಳಿಸಿಕೊಡಬೇಕೆಂಬುದೇ ಶಾಸ್ತ್ರದ ಉದ್ಧೇಶವು.

 

ಜಗತ್ತಿನ ಉತ್ಪತ್ತಿ ಪ್ರಳಯ-ಮುಂತಾದವುಗಳನ್ನು  ಶಾಸ್ತ್ರದಲ್ಲಿ ಬೋದಿಸಿರುವುದೂ ಜಗತ್ತು ಸತ್ಯವೆಂದು ತಿಳಿಸುವುದಕ್ಕಲ್ಲ.ಜಗತ್ತು ಯಾವ ಆತ್ಮನಿಂದ ಹುಟ್ಟಿ ಯಾವನಲ್ಲಿಯೇ ಇದ್ದು  ಯಾವನಲ್ಲಿಯೇ ಲಯವಾಗುವುದೊ  ಪರಮಾತ್ಮನಿಗಿಂತ ಬೇರೆಯಾಗಿ   ಜಗತ್ತೆಂಬುದೇ ಇಲ್ಲ-ಎಂದು ಆತ್ಮೈಕತ್ವವನ್ನು ತಿಳಿಸುವುದಕ್ಕೆ  ಉಪಾಯವಾಗಿಯೇ ಉತ್ಪತ್ತಿ ಸ್ಥಿತಿ ಪ್ರಲಯಗಳನ್ನು ಶಾಸ್ತ್ರದಲ್ಲಿ ಬೋಧಿಸಿರುತದೆ.(ಪುಟ3)

 

      ಪರಮಾತ್ಮನೊಬ್ಬನೇ ಪರಮಾಥ೯ವು.ಸಂಸಾರಿಯಾದ ಜೀವನಾಗಲೀ ,ಅಚೇತನವಾದ  ಜಗತ್ತಾಗಲೀ ಅವನಿಗಿಂತ ಬೇರೆಯಾಗಿ ಇರುವುದೇ ಇಲ್ಲ-ಎಂಬ ಪರಮಾಥ೯ವನ್ನು  ಅನುಭವಕ್ಕೆ ತಂದುಕೊಳ್ಳಬೇಕೆಂದು  ಇಚ್ಛಿಸುವ ಮುಮುಕ್ಷುಗಳು ಪುತ್ರ ವಿತ್ತ ಲೋಕೈಷಣೆಗಳನ್ನು ಬಿಟ್ಟು ಸವ೯ಕಮ೯ಸನ್ಯಾಸವನ್ನು ಮಾಡಬೇಕು.ಏಕೆಂದರೆ ವಣಾ೯ಶ್ರಮಾದಿ  ಅಭಿಮಾನವು ಪರಮಾಥ೯ ವಿಜ್ಞಾನಕ್ಕೆ ವಿರುದ್ಧವಾಗಿರುತ್ತದೆ.(ಪುಟ 3)

 

ಎರಡನೇ ಪ್ರಕರಣದ ಸಾರ:

 

 30-35. ನಮ್ಮೆಲ್ಲರ ಆತ್ಮನು ಸಂಸಾರದ ಸೋಂಕೇ ಇಲ್ಲದ  ಪರಮತ್ಮನಾದರೂ ನಮಗೆ ಆತ್ಮನು ಗೊತ್ತಿಲ್ಲವೆಂದೂ  ನಾವು ಸಂಸಾರಿಗಳು,ಕತೃ೯ ಭೋಕ್ತø ಸ್ವಭಾವದವರು ಎಂದು ಜನರು ಭಾವಿಸಿಕೊಂಡಿರುವರು. ತಪ್ಪು ತಿಳುವಳಿಕೆಗೆ ಅವಿದ್ಯೆ ಎಂದು ಹೆಸರು.ಆತ್ಮಸ್ವರೂಪವನ್ನು ಸರಿಯಾಗಿ ತಿಳಿದುಕೊಳ್ಳುವ ವಿದ್ಯೆಯಿಂದ  ಅವಿದ್ಯೆಯನ್ನು ತೊಲಗಿಸಿಕೊಳ್ಳಬಹುದು.(ಪುಟ81)

 

36-3.ಪ್ರತ್ಯಕ್ಷಾದಿ ಪ್ರಮಾಣಗಳಿಂದ  ನಾವು ಸಂಸಾರಿಗಳೆಂದು ನಿಶ್ಚಯವಾಗಿರುತ್ತದೆ.ನಿತ್ಯಮುಕ್ತ ಸ್ವರೂಪನಾದ ಪರಮಾತ್ಮನೇ ನಮ್ಮ ಸ್ವರೂಪವೆಂದು ನಮಗೆ ಯಾರಿಗೂ ತಿಳಿದಿರುವುದಿಲ್ಲ.ಹೀಗಿರುವಲ್ಲಿ ಅಪ್ರಸಿದ್ಧವಾದ ಪರಮಾತ್ಮ ರೂಪದಲ್ಲಿ ಅನಾತ್ಮ ರೂಪವನ್ನಾಗಲೀ  ಅಪ್ರಸಿದ್ಧವಾದ  ಆತ್ಮರೂಪವನ್ನು  ಅನಾತ್ಮರೂಪದಲ್ಲಾಗಲೀ ಅಧ್ಯಾರೋಪ ಮಾಡಿಕೊಂಡಿರುವೆವೆನ್ನುವುದು ಸರಿಯಲ್ಲ.-ಎಂದು ಕೆಲವು ವಾದಿಗಳು ಭಾವಿಸುವರು.ಅದರೆ ದೇಹಾತಿರಿಕ್ತನಾದ ಆತ್ಮನಲ್ಲಿ ದೇಹವನ್ನು ಜನರು ಅಧ್ಯಾಸ ಮಾಡಿಕೊಂಡಿರುತ್ತಾರೆಂದು ಅದೇ ವಾದಿಗಳು ಹೇಳುತ್ತಿರುತ್ತಾರೆ.ಆತ್ಮನೂ ದೇಹವೂ ಬೇರೆ ಬೇರೆಯಾಗಿ ಪ್ರಸಿದ್ಧವಾಗಿಲ್ಲದಿದ್ದರೂ ಒಂದರಲ್ಲೊಂದನ್ನು ಕಲ್ಪಿಸುವುದುಂಟೆಂದು  ಅವರೇ ಒಪ್ಪಿ ನಮ್ಮ ಮತದಲ್ಲಿ

ಮಾತ್ರ ದೋಷವನ್ನು ಹೇಳುವುದು ಸರಿಯಲ್ಲ.(ಪುಟ 81)

 

40-43. ಕಪ್ಪೆಯ ಚಿಪ್ಪಿನಲ್ಲಿ ಹುಟ್ಟುಗಟ್ಟಿರುವ  ಬೆಳ್ಳಿಯು ನಿಜವಾಗಿ ಅದರಲ್ಲಿರುವುದಿಲ್ಲ.ಅದರಂತೆ ಯಾವ ಯಾವದನ್ನು ಹುಟ್ಟುಗಟ್ಟುತ್ತಾರೋ  ಅದು ಅದರಲ್ಲಿರುವುದಿಲ್ಲ.ಬಿದಿರು,ಕಂಬ ಮುಂತಾದವುಗಳಂತೆ ಪರಸ್ಪರ ಸೇರಿಕೊಂಡಿದ್ದಾರೆಂಬುದು ಅವರ ಅಭಿಪ್ರಾಯವಾಗಿರುತ್ತದೆ. ಅಭಿಪ್ರಾಯವೂ ಸರಿಯಲ್ಲ.ಏಕೆಂದರೆ ಹಾಗೆ ಸೇರಿಕೊಂಡಿದ್ದರೆ ದೇಹವೂ ಆತ್ಮನೂ ಅಚೇತನರೆಂದೂ ಇವೆರಡೂ ಸೇರಿಕೊಂಡು   ಚೇತನನಾದ ಮತ್ತೊಬ್ಬನಿಗೋಸ್ಕರಿರುವವೆಂದೂ ಒಪ್ಪಬೆಕಾಗುವುದು. ಆಗ ಅಚೇತನವಸ್ತುವೆ ನಿಜವಾದ ಆತ್ಮನೆಂದಾಗುವುದರಿಂದ ಕಲ್ಪಿತವಾದ ದೇಹಾತ್ಮರುಗಳು ಅಸತ್ಯವಾದರೂ ಅಸಂಹತನಾದ  ಆತ್ಮನೊಬ್ಬನು ಇದ್ದಾನೆಂದೇ ಸಿದ್ಧವಾಗುತ್ತದೆ.ಅಸಂಹತನಾದ ಅವನುಅಸಂಹತನಾದ ಆತ್ಮನುಸ್ವತಃಸಿದ್ಧನಾಗಿರುವುದರಿಂದ  ಅವನು ಇಲ್ಲವೆಂದು ಹೇಳುವುದಕ್ಕೆ ಯಾರಿಂದಲೂ ಆಗದು.ದೇಹವು ಆತ್ಮನಲ್ಲಿರುವುದು  ಪ್ರತ್ಯಕ್ಷಾದಿಗಳಿಂದ ಸಿದ್ಧವಾಗಿದೆ ಎಂಬುದು ಸುಳ್ಳು.ಏಕೆಂದರೆ ಆತ್ಮನು ಪ್ರತ್ಯಕ್ಷಾದಿ ಸಿದ್ಧನಲ್ಲ. ಆತ್ಮನು ಪ್ರಮಾಣಸಿದ್ಧನಲ್ಲದಿದ್ದರೂ  ಸ್ವಭಾವ ಸಿದ್ಧನಾಗಿರುವುದರಿಂದ  ಅವನಲ್ಲಿ ಅನಾತ್ಮವನ್ನು ಅಧ್ಯಾರೋಪ  ಮಡಿರುತ್ತಾರೆಂದು  ಹೇಳುವುದು ಯುಕ್ತಿ ವಿರುದ್ಧವೂ ಅಲ್ಲ.(ಪುಟ 81)

 

44-46. ದೇಹಾತ್ಮರುಗಳನ್ನು  ಅಧ್ಯಾರೋಪ ಮಾಡಿರುವವರು ಯಾರು?ಎಂದ್ರೆ ಯಾರು ಪ್ರಶ್ನೆಯನ್ನು ಕೇಳುತ್ತಾರೋ ಅವರೇ.'ನಾನು ಮಾಡಿದ್ದರೆ ಅದನ್ನು ತಪ್ಪಿಸಿಕೊಳ್ಳುವುದು  ನನ್ನಿಂದಾಗುವುದಿಲ್ಲ!ಎಂದು ಕೆಲವರು ಕೇಳುವುದುಂಟು.ಹಾಗಿದ್ದರೆ ಅವರು ಅಚೇತನಸ್ವರೂಪರು. ಅಧ್ಯಾರೋಪವನ್ನು ಮಾಡುವುದಕ್ಕೆ ಅವರನ್ನು ಯಾವನು ಪ್ರೇರೇಪಿಸುವನೋ ಅವನೇ ಆತ್ಮನು ಎಂದಾಗುವುದು.ಆದರೆ ನಾನು ಅಚೇತನನು ಎಂಬುದನ್ನು ಯಾರೂ ಒಪ್ಪುವುದಿಲ್ಲ.ಏಕೆಂದರೆ ಅವರು ಸುಖದುಃಖಾದಿಗಳನ್ನು ಅರಿಯುತ್ತಿದ್ದಾರೆ.ಅವರು ಅಚೇತನರಾದರೆ ಪರಾಥ೯ವಾಗಿರುತ್ತಾರೆನ್ನಬೇಕು;ಆದರೆ ಹಾಗಿಲ್ಲ.ಎಲ್ಲವೂ ನನಗಾಗಿ ಇದೆ ಎನ್ನುತ್ತಿದ್ದಾರೆ.ಆದ್ದರಿಂದ ಅವರು ಚೇತನ ಸ್ವರೂಪರೇ.ಚೇತನವಾದದ್ದು ಅಚೇತನಕ್ಕಾಗಿ ಅಥವಾ ಮತ್ತೊಂದು ಚೇತನಕ್ಕಾಗಿ ಕೆಲಸಮಾಡುವುದೆಂಬುದು ಎಂದಿಗೂ ಒಪ್ಪತಕ್ಕದ್ದಲ್ಲ.(ಪುಟ 82)

 

47-4. ಬೆಂಕಿಯ ಬಿಸಿಯಂತೆ  ಚೇತನವು ನಮ್ಮಗಳ ಅವರೂಪವೇ ಆಗಿದೆ. ಚೇತನವು ಮಿಕ್ಕೆಲ್ಲವನ್ನೂ ಒಂದೇ ಸಮನೆ ನೋಡುತ್ತಿರುವುದರಿಂದ  ನಮ್ಮಗಳ ಆತ್ಮನು  ಕೂಟಸನ್ಥಿತ್ಯ ಚೈತನ್ಯ ಸ್ವರೂಪನಾಗಿದ್ದಾನೆ.

ಅವನ್ನು ಬೆಳಗುವಾಗ ಪ್ರತ್ಯಯಗಳಲ್ಲಾಗುವಂತೆ ಚೈತನ್ಯದಲ್ಲಿ ಯಾವ ವಿಶೇಷವೂ  ಆಗುತ್ತಿರುವುದಿಲ್ಲ.

ಯಾವ ಕಾಲದ ಕಟ್ಟೂ ಇಲ್ಲದೆ ಎಲ್ಲವನ್ನೂ ಒಂದೇ ಸಮನೆ ಬೆಳಗುತ್ತಿರುತ್ತದೆ.ಆದ್ದರಿಂದ ಎಲ್ಲವನ್ನೂ ಅರಿಯುವ ಕೂಟಸ್ಥ ನಿವಿ೯ಶೇಷ ಚೈತನ್ಯವೇ  ನಮ್ಮಗಳ ಆತ್ಮನು.(ಪುಟ82)

 

50-52. ಆತ್ಮನು ಅರಿಯುವವನೆಂದಿದ್ದರಿಂದ  ಅರಿಯುವುದೆಂಬ ಧಾತ್ವಥ೯ವು  ಆತ್ಮನಲ್ಲಿ ಉಂಟಾಗುವುದೆಂದು ತಿಳಿಯಬಾರದು.'ಕಟ್ಟಿಗೆಯನ್ನು ಕಡಿದನು'ಎಂಬಲ್ಲಿ ಎರಡು ತುಂಡಾಗುವ ಫಲದಂತೆ,'ಆತ್ಮನು ಅರಿತನು'ಎಂಬಲ್ಲಿಯೂ  ವಿಷಯದ ಆಕಾರದ ಪ್ರತ್ಯಯವು  ಚಿದಾಭಾಸದಿಂದಕೂಡಿ ಉತ್ಪನ್ನವಾಗುತ್ತದೆ. ಇಂಥ ಪ್ರತ್ಯಯಗಳನ್ನೆಲ್ಲ ಬೆಳಗುತ್ತಿರುವುದರಿಂದ  ಆತ್ಮನು ಚೈತನ್ಯರೂಪನೇ ಆಗಿದ್ದಾನೆ.(ಪುಟ82)

 

53-54. ಅಂತಃಕರಣ ಪ್ರತ್ಯಯಗಳು  ಹೀಗೆ ವಿಷಯಾಕಾರವಾಗಿ  ಉಂಟಾಗುವಾಗಲೆಲ್ಲ ಆತ್ಮನು ಕೂಟಸ್ಥನಾಗಿಯೇ ಇರುತ್ತಾನೆ.ಎಚ್ಚರಕನಸುಗಳೆಂಬ ಅವಸ್ಥೆಗಳೂ  ಬಂದು ಹೋಗಿ ಮಾಡುತ್ತಿದ್ದರೂ  ಅವನ್ನೂ ಬೆಳಗುತ್ತಾ ಕೂಟಸ್ಥನಾಗಿರುತ್ತಾನೆ. ಅವಸ್ಥೆಗಳು ಆತ್ಮನ ಧಮ೯ವಲ್ಲ.(ಪುಟ82)

 

55-56. ಆತ್ಮನ ಚೈತನ್ಯವೂ ಸುಷುಪ್ತಿಯಲ್ಲಿರುವುದಿಲ್ಲವಾದ್ದರಿಂದ  ಅದೂ ಆತ್ಮನ ಆಗಂತುಕ ರೂಪವೆಂದು  ಕೆಲವರು ವಾದಿಸಬಹುದು.ಇದು ಸರಿಯಲ್ಲ.ಏಕೆಂದರೆ ಸುಷುಪ್ತಿಯಲ್ಲಿ  ಇಂಥದನ್ನು ಅರಿಯುವುದೆಂಬ ವಿಶೇಷ ಜ್ಞಾನವಿಲ್ಲದಿದ್ದರೂ  ಅರಿವು ತನ್ನ ಸ್ವರೂಪವು ಇದ್ದೇ ಇರುತ್ತದೆ. ಸ್ವರೂಪದ ಬಲದಿಂದಲೇ  ನಾನು µಸುಷುಪ್ತಿಯಲ್ಲಿ ಏನನ್ನೂ ಅರಿಯಲಿಲ್ಲೆಂದು ಜನರೆನ್ನುತ್ತಿರುವುದು.(ಪುಟ

82)

 

57-61. ಆತ್ಮಚೈತನ್ಯವು ಮತ್ತೊಂದು ಪ್ರಮಾಣವನ್ನು ಬಯಸದ ಸ್ವತಃಸಿದ್ಧವಾಗಿರುತ್ತದೆ,ನಿತ್ಯವಾಗಿರುತ್ತದೆ.ಅನಿತ್ಯವಾದ ಅರಿವೇ  ವ್ಯವಹಾರದಲ್ಲಿ ಪ್ರಮೆಯೆನಿಸುತ್ತದೆ..ಅದೇ ಪ್ರಮಾತೃವೂ ಆಗಿರುತ್ತದೆ.ಪ್ರಮಾತೃವು ಪ್ರಮಾಣಸಿದ್ಧನೆನ್ನಬಾರದು.ಏಕೆಂದರೆ ಆಗ ಅವನನ್ನು ಅರಿಯುವುದಕ್ಕೆ ಮತ್ತೊಬ್ಬ ಪ್ರಮಾತೃ ,ಅವನಿಗೆ ಅರಿಯಬೇಕೆಂಬ ಇಚ್ಛೆ,ಪ್ರಯತ್ನ-ಮುಂತಾದವು ಬೇಕಾಗಿ ಅನವಸ್ಥೆಯಾಗುವುದು.ಪ್ರಮಾತೃ ವಾದ  ಆತ್ಮನು ತನಗೆ ತಾನು ವ್ಯವಹಿತನಲ್ಲವಾದ್ದರಿಂದಲೂ ಅವನು ಸ್ವತಃಸಿದ್ಧನೆನ್ನುವುದೇ ಸರಿ.ಪ್ರಮಾತೃವಿನ ವಿಷಯವಾದ ಅರಿವು ಉಂಟಾಗದೆ ಇದ್ದರೆ  ಅವನನ್ನು ಅರಿತಂತೆಯೇ ಆಗುವುದಿಲ್ಲ!-ಎಂದು ಶಂಕಿಸಬಾರದು.

ಏಕೆಂದರೆ ಇದನ್ನು ಅರಿಯಬೇಕು ಎಂದು ಪ್ರಮೇಯದ ವಿಷಯದಲ್ಲಿ ಆಕಾಂಕ್ಷೆ ಉಂಟಾದೀತೇ ಹೊರತು ಪ್ರಮಾತೃವಿನ ವಿಷಯದಲ್ಲಿ ಉಂಟಾಗಲಾರದು. ಅರಿವು ಪೃಮಾತೃವಾದ ಆತ್ಮನಸ್ವರೂಪವೇ ಆಗಿ  ನಿತ್ಯಸಿದ್ಧವಾಗಿರುವುದರಿಂದ  ಆತ್ಮನು ಪರಾಥ೯ನಲ್ಲದೆ ಇರುತ್ತಾನೆ.ಹಾಗಿಲ್ಲದೆ ಇರುವುದರಿಂದಲೇ ಅನಾತ್ಮವು ಪರಾಥ೯ವಾಗಿರುತ್ತದೆ.ಪ್ರಮಾತೃವಿನಲ್ಲಿ  ರಮೆಯು ಬೇರೆಯಾಗಿರಬೇಕೆಂಬ  ನಿಬ೯ಂಧವೂ ಇಲ್ಲ.ಸೂಯ೯ನಲ್ಲಿ ಬೆಳಕಿರುವಂತೆ  ನಿತ್ಯವಾಗಿ ಸ್ವರೂಪವಾಗಿರುವ  ಪ್ರಮೆಯಿದ್ದರೂ ಅವನು ಪ್ರಮಾತೃವೆನಿಸಬಹುದಾಗಿದೆ.(ಪುಟ 83)

 

62-64. ಪ್ರಮಾತೃವು ನಿತ್ಯಾವಗತಿ ಸ್ವರೂಪನೇ ಅಗಿದ್ದರೆ  ಪ್ರಮಾಣಗಳನ್ನು ತೆಗೆದುಕೊಳ್ಳುವುದೆಂಬ ಕ್ರಿಯೆಗೆಅವನು ಕತೃ೯ಹೇಗಾದನು? ಬಡಗಿಗೆ ಕೈ ಇರುವುದರಿಂದ ಅವನು ಕೈಯಿಂದ ಬಾಚಿಯನ್ನು ತೆಗೆದುಕೊಂಡು ಮರವನ್ನು ಕೆತ್ತುತ್ತಾನೆ.ನಿತ್ಯಚೈತನ್ಯಸ್ವರೂಪನಾದ ಆತ್ಮನಿಗೆ ಸ್ವತಃ ಕರಣವಿಲ್ಲದ್ದರಿಂದ ಚಕ್ಷುರಾದಿಗಳನ್ನು ಸ್ವೀಕರಿಸುವುದಕ್ಕೆ ಬರುವುದಿಲ್ಲ.ಹಾಗೆ ಸ್ವೀಕರಿಸದಿದ್ದರೆ ಅವನು ಪ್ರಮಾತೃವೇ ಆಗುವುದಿಲ್ಲ. ದೋಷವನ್ನು  ತಪ್ಪಿಸಿಕೊಳ್ಳುವುದಕ್ಕೆ  ಬೇರೆಯ ಕರಣಗಳನ್ನು ಕಲ್ಪಿಸಿದರೂ ಅವುಗಳನ್ನು ಸ್ವೀಕರಿಸುವುದಕ್ಕೆ ಮತ್ತೆ ಬೇರೆಯ ಕರಣಗಳು ಬೇಕಾಗಿ ಅನವಸ್ಥೆಯುಂಟಾಗುತ್ತದೆ-ಎಂಬ ಆಕ್ಷೇಪಕ್ಕೆ ಇಲ್ಲಿ ಅವಕಾಶವಿಲ್ಲ.ಆತ್ಮನಿಗೆ  ಔಪಚಾರಿಕ ಕತ೯ವ್ಯವಲ್ಲದೆ  ನಿಜವಾಗಿಯೂ ಕತ೯ವ್ಯವುಂಟೆಂದು ಒಪ್ಪಿದರೆ  ಸ್ವತಃ ಅವನಿಗೆ ಕತ೯ವ್ಯವಿಲ್ಲದ್ದರಿಂದ ಕ್ರಿಯೆಯಾಗಲೀ ಮತ್ತೊಂದಾಗಲೀ ಆತ್ಮನನ್ನು ತೊಡಗಿಸುತ್ತದೆ ಎಂದೆನ್ನಬೇಕಾಗಬಹುದು.ಕ್ರಿಯೆಯು ಹುಟ್ಟು ಮೊದಲು ಅದು ಇರುವಹಾಗಿಲ್ಲವಾದ್ದರಿಂದ

 ಕ್ರಿಯೆಯು ಕರಣವಲ್ಲ.ಮತ್ತೊಂದು ಸ್ವತಃಸಿದ್ಧವಾದ ವಸ್ತುವೂ ಇಲ್ಲ.ಆತ್ಮನಲ್ಲದೆ ಮತ್ತೆಯಾವುದರಲ್ಲಿಯೂ ಚೈತನ್ಯವಿಲ್ಲದ್ದರಿಂದ ಅದು ಆತ್ಮನಿಗೆ ಅರಿವನ್ನು ತಂದುಕೊಡುತ್ತದೆ ಎಂದು ಕಲ್ಪಿಸುವುದಕ್ಕೂ ಬರುವುದಿಲ್ಲ.ದೇಹೇಂದ್ರಿಯಗಳಂತೂ ಸ್ವತಃಸಿದ್ಧವಲ್ಲವೇ ಅಲ್ಲ .ಏಕೆಂದರೆ ಸುಷುಪ್ತಿ ಮರಣಾದಿಗಳಲ್ಲಿ ಅವು ಕಾಣುವುದೇ ಇಲ್ಲ.ಆದ್ದರಿಂದ ಪ್ರಮಾತೃತ್ವವು ಔಪಚಾರಿಕವೇ.(ಪುಟ83)

 

65.ಆತ್ಮನಲ್ಲಿ ಅರಿವು ನಿತ್ಯವಾಗಿ ಅವನ ಸ್ವರೂಪವಾಗಿಯೇ ಇದ್ದರೆ ಅದು ಪ್ರಮಾಣದ  ಫಲವೆಂಬ ವ್ಯವಹಾರವು ಹೇಗೆ?-ಎಂದು ಯಾರಾದರೂ ಕೇಳಬಹುದು.ಪ್ರಮಾತೃತ್ವದಂತೆ ಔಪಚಾರಿಕವೆಂದೇ ತಿಳಿಯಬೇಕು.ಪ್ರತ್ಯಕ್ಷಾದಿ ಪ್ರತ್ಯಯಗಳುಂಟಾದಾಗ ಕೊನೆಯಲ್ಲಿ ತೋರುವದನ್ನು ಔಪಚಾರಿಕವಾಗಿ ಪ್ರಮಾಣದ ಫಲವೆಂದು ಕರೆಯುತ್ತಾರೆ.(ಪುಟ84)

 

66-67. ರೀತಿಯಲ್ಲಿ ಕೂಟಸ್ಥನಿತ್ಯ ನಿವಿ೯ಶೇಷವಾದ ಚೈತನ್ಯಸ್ವರೂಪನಾದ ಆತ್ಮನಲ್ಲಿ ಪರಾಥ೯ವಾದ ಶಬ್ದಾದಿ ಪ್ರತ್ಯಯಗಳಿಂದ  ಪ್ರಮಾತೃತ್ವವೂ ಪ್ರಮಾತ್ವವೂ  ತೋರುತ್ತಿರುವುವು.ಪ್ರತ್ಯಯಗಳು ಚೈತನ್ಯ

ಕ್ಕಿಂತ ಬೇರೆಯಾಗಿ  ಇರುವುದೇ ಇಲ್ಲ.ಹಗ್ಗದ ಹಾವು ಹಗ್ಗವೇ ಆಗಿರುವಂತೆ ಇವು ಪರಮಾಥ೯ವಾಗಿ ಆತ್ಮಚೈತನ್ಯವೇ ಆಗಿರುತ್ತವೆ.ಎಚ್ಚರದಲ್ಲಾಗಲೀ ಕನಸಿನಲ್ಲಾಗಲೀ ಯಾವುದೊಂದು ಪ್ರತ್ಯಯವೂ  ಚೈತನ್ಯಸ್ವರೂಪನಾದ ಆತ್ಮನಿಗಿಂತ  ಬೇರೆಯಾಗಿರುವುದೇ ಇಲ್ಲ.ಆತ್ಮನು ಹೀಗೆ ನಿತ್ಯವಾಗಿ ನಿವಿ೯ಶೇಷನಾಗಿ ಚಿನ್ಮಾತ್ರನಾಗಿರುತ್ತಾನೆ.ಆತ್ಮನ ಅರಿವು ಎಂಬಲ್ಲಿ ಮತ್ತೊಬ್ಬ ಅರಿಯುವಾತನಾಗಲೀ ಮತ್ತೊಂದು ಅರಿಯಲ್ಪಡುವು ವಸ್ತುವಾಗಲೀ  ಇರುವುದೇ ಇಲ್ಲ.ಹೀಗೆಂದು ತಿಳಿಯುವುದೇ ವಿದ್ಯೆ. ವಿದ್ಯೆಯಿಂದ ಜಾಗ್ರತ ಸ್ವಪ್ನದ್ರಷ್ಟøತ್ವ ಹೇತುವಾದ  ಅವಿದ್ಯೆಯು ತೊಲಗುವುದು.ಹೀಗೆಂದು ತಿಳಿದವನು ನಿತ್ಯಮುಕ್ತನು.

(ಪುಟ84)

 

ಮೂರನೆಯ  ಪ್ರಕರಣದ ಸಾರ:

68)ಅಚಿದ್ಯೆಯಿಂದ ರಾಗಾದಿ ದೋಷಗಳೂ  ಅವುಗಳಿಂದ ತ್ರಿಕರಣದ ಪ್ರವೃತ್ತಿಯೂ ಅದರಿಂದ ಸಂಸಾರವೂ ಆಗಿರುತ್ತದೆ.ಆದ್ದರಿಂದ ಅವಿದ್ಯೆಯ ಪರಿಹಾರದ ಊಲಕಸಂಸಾರಾನಥ೯ವನ್ನು  ಪರಿಹರಿಸಿಕೊಳ್ಳುವುದಕ್ಕಾಗಿ ಪರಿಸಂಖ್ಯಾನ ಕ್ರಮವನ್ನು ಅನುಸರಿಸಬೇಕು.

 

6-70. ಪ್ರಪಂಚವೆಲ್ಲ ಶಬ್ದ ಸ್ಪಶ೯ ರೂಪ ರಸ ಗಂಧ ಗಳ ಪರಿಣಾಮವಾಗಿರುತ್ತದೆ.ಇವು ಅಚೇತನವಾಗಿಯೂ ಚೇತನನಾದ ಆತ್ಮನಿಗೋಸ್ಕರ ಸಂಹತವಾಗಿ ಕೆಲಸ ಮಾಡುವವಾಗಿಯೂ ಇರುತ್ತವೆ.ಅವುಗಳನ್ನು ಅರಿಯುತ್ತಿರುವುದರಿಂದಾತ್ಮನು ಅವುಗಳಿಗಿಂತ ವಿಲಕ್ಷಣ ಸ್ವರೂಪನಾಗಿರುತ್ತಾನೆ.ಆದ್ದರಿಂದ ಶಬ್ದಾದಿಗಳಿಂದ ತನಗೆ ತೊಂದದರೆಯಾಗುತ್ತಿದೆಯೆಂದು ತೋರಿದಾಗಲೆಲ್ಲಶಬ್ದಾದಿಗಳು ಸಾಮಾನ್ಯರೂಪದಿಂದಾಗಲೀ ಷದ್ಜಾದಿ ವಿಶೇಷರೂಪದಿಂದಾಗಲೀನನ್ನನ್ನು ಏನೂ ಮಾಡುವುದಿಲ್ಲ.ಏಕೆಂದರೆ ಇವು ವಿಷಯವು.ನಾನು ಅವುಗಳಿಗೆ ಗೋಚರನಲ್ಲದವನು.ನನ್ನಲ್ಲಿ ಯಾವ ಶಬ್ದ ಸ್ಪಶ೯ರೂಪ ರಸ ಗಂಧವೈ ಇಲ್ಲ'ಎಂಬುದನ್ನು ಮನಸ್ಸಿನಲ್ಲಿ ಹೊರಳಾಡಿಸಬೇಕು.(ಪುಟ೯2)

 

71-72. ಒಳಗೆ ಶರೀರ ,ಇಂದ್ರಿಯ,ಅಂತಃಕರಣ-ಎಂಬ ರೂಪದಿಂದಲೂ  ಅದೇ ಶಬ್ದಾದಿಗಳೇ ಪರಿಣತ

ವಾಗಿರುವುದರಿಂದ  ಅವುಗಳ ಸಂಬಂಧವೂ ಆತ್ಮನಿಗಿಲ್ಲ.ಆದ್ದರಿಂದ 'ಶತ್ರುಮಿತ್ರಾದಿಗಳು ಮಾಡುವ ತಿರಸ್ಕಾ ಪೂಜೆ-ಮುಂತಾದವುಗಳು ಯಾವುವೂ  ನನಗೆ ಅಂಟುವುದಿಲ್ಲ.ನಾನು ಅವಿಕಾಯ೯ನು.ಯಾವ ಸುಖದುಃಖಗಳೂ ಅಂಟದವನು,ಏಕೆಂದರೆ ಏತಕ್ಕೂ ನಾನು ವಿಷಯನಲ್ಲ'ಎಂದು ಚಿಂತಿಸುತ್ತಿರಬೇಕು.ನಿಜವಾಗಿ ನೋಡಿದರೆ ಯಾವ ವಿಷಯವೂ ಇಲ್ಲವೇ ಇಲ್ಲ. ಅವನು ಅದ್ವಿತೀಯನಾಗಿರುತ್ತಾನೆ.ಇದನ್ನು ತಿಳಿಸುವ ಉಪನಿಷತ್ ವಾಕ್ಯಗಳನ್ನು ಚಿಂತಿಸಬೇಕು.(ಪುಟ 2)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

 

ಗ್ರಂಥದ ಅಡಿಟಿಪ್ಪಣಿಗಳಿಂದ ಆಯ್ದ ಕೆಲವು ವಾಕ್ಯಗಳು:

 

1)ಭಗವಂತನು ಜೀವನಿಗಿಂತ ಬೇರೆಯೇ ಆಗಿರುತ್ತಾನೆ.ಜೀವನು ಅವನನ್ನು ಸತತವೂ ಆರಾಧನೆ ಮಾಡಿ ಶರೀರವು ಬಿದ್ದ ಬಳಿಕಭಗವತ್ಸ್ವರೂಪವನ್ನೇ ಪಡೆಯುವನು ಎಂಬುದು ಭಾಗವತಮತವು.ಇದನ್ನು ಸೂತ್ರ ಭಾಷ್ಯದಲ್ಲಿಯೂ ಗೀತಾ ಭಾಷ್ಯದಲ್ಲಿಯೂ ಖಂಡಿಸಿದೆ.೯ಪುಟ 1)

 

2)ದೇಹದಲ್ಲಿ ಆರೋಪಿತನಾಗಿರುವವನು ಕಲ್ಪಿತಾತ್ಮನು.ಅಕಲ್ಪಿತಾತ್ಮನು ಯವುದರಲ್ಲಿಯೂ ಬೆರೆತುಕೊಂಡೇ ಇಲ್ಲ(ಪುಟ 4)

 

3)ಪ್ರಮಾಣಗಳು ಆತ್ಮಸಿದ್ಧಿಯಿಂದಲೇ  ಪ್ರಸಿದ್ಧವಾಗುತ್ತವೆ.ಆತ್ಮನು ಪ್ರಮಾಣಗಳನ್ನು  ಬಯಸಿ ಸಿದ್ಧನಾಗುವವನಲ್ಲ.(ಪುಟ 51)

 

4)ಯಾವುದು ಮತ್ತೊಂದಕ್ಕಾಗಿ ಇರುವುದೋ ಅದು ಪರಾಥ೯ವು.ಸ್ವತಂತ್ರವಲ್ಲ.ಯಾವುದು ತನಗಾಗಿ ತಾನು  ಮತ್ತೊಂದರ ಹಂಗಿಲ್ಲದಂತೆ ಇರುವುದೋ ಅದು ಸ್ವಾಥ೯ವು ಸ್ವತಂತ್ರವು.(ಪುಟ 52)

 

5)ಕೂಟಸ್ಥನಿತ್ಯ,ಪರಿಣಾಮಿ ನಿತ್ಯ-ಎಂದು ನಿತ್ಯವಸ್ತುಗಳು ಎರಡು ಬಗೆ.ಮಾಪ೯ಡದೇ ಇರುವುದು ಕೂಟಸ್ಥ ನಿತ್ಯ.ಮಾಪ೯ಡುತ್ತಿದ್ದರೂ ಅದೇ ಇದು ಎಂಬ ಬುದ್ಧಿಯು ಹಾಗೆಯೇ ಇದ್ದುಕೊಂಡಿರುವುದೋ ಅದು ಪರಿಣಾಮಿ ನಿತ್ಯ.(ಪುಟ56)

 

6)ಚೈತನ್ಯವೆಂದರೆ ಅರಿಯುವುದು,ಕಾಣುವುದು,ಕೇಳುವುದು,ಯೋಚಿಸುವುದು,ಅರಿತುಕೊಳ್ಳುವುದು-ಇವೇ ಚ್ಯತನ್ಯವು.(ಪುಟ64)

 

7)ವಸ್ತುವನ್ನು ನೋಡುವಾಗ ನೋಟಕ್ಕೆ ಚೈತನ್ಯವೆಂದು ಹೆಸರು ಬರುತ್ತದೆ.ತನಿ ನಿದ್ರೆಯಲ್ಲಿ ಅರಿಯುವ ಸ್ವರೂಪವಿದೆ,ಅರಿಯುವ ವಸ್ತುವಿಲ್ಲ.(ಪುಟ66)

 

8)ಆತ್ಮನೇ ಅವಗತಿಯು,ಅರಿವು;ಅದಕ್ಕೆ ಮತ್ತೊಂದರ ಅಪೇಕ್ಷೆಯಿಲ್ಲ.ಅದರ ಅಪೇಕ್ಷೆಯಿಂದಲೇ  ಮಿಕ್ಕದ್ದು ಸಿದ್ಧವಾಗುತ್ತದೆ.(ಪುಟ7)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಉಪದೇಶ ಸಾಹಸ್ರಿ:(ಗದ್ಯಭಾಗ):

ಲೇಖಕರು:ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿಗಳು:ಆಯ್ದ ಮುಖ್ಯವಾಕ್ಯಗಳು:

 

1) ಅನುಬಂಧ ಚತುಷ್ಟಯ:

 

1) ಪ್ರಯೋಜನ:ಜ್ಞಾನಕ್ಕೆ ಮೋಕ್ಷವೇ 'ಪ್ರಯೋಜನ.'

2) ಇದರಲ್ಲಿ ಮೋಕ್ಷಕ್ಕೆ ಸಾಧನವದ ಜ್ಞಾನವನ್ನು ವಿವರಿಸಿದೆ.ಇದೇ 'ವಿಷಯ'

3)ಮೋಕ್ಷವನ್ನು ಬಯಸುವವರೇ 'ಅಧಿಕಾರಿ'ಗಳು

4) ಒಟ್ಟು ಶಾಸ್ತ್ರಾಥ೯ವನ್ನು  ಸಂಕ್ಷೇಪವಾಗಿ ತಿಳಿದುಕೊಳ್ಳಬೇಕೆಂದವರಿಗೆ ಮಾತ್ರ ಇದನ್ನು ಬರೆದಿದೆ.ಇದೇ ಗ್ರಂಥದ 'ಸಂಬಂಧ'.(ಪುಟ 3)

 

2)ಸಾಧನದಿಂದಾಗುವ  ಫಲವೆಲ್ಲ ಅನಿತ್ಯವೆಂದು ತಿಳಿದು ಅದರಲ್ಲಿ ವಿರಕ್ತನಾಗಬೇಕು(ಪುಟ೯3)

 

3) ಕಮ೯ಗಳನ್ನು ಧಮ೯ವೆಂದೂ ಅಧಮ೯ವೆಂದೂ ಎರಡು ಬಗೆಯಾಗಿ ವಿಂಗಡಿಸಬಹುದು.

ಧಮ೯ರೂಪವಾಗಿರುವ  ಕಮ೯ದಿಂದ-ಪಿತೃಲೋಕ

 ಉಪಾಸನ ಸಹಿತವಾದ ಕಮ೯ದಿಂದ-ದೇವಲೋಕ.ಇವರು ಧಮ೯ವನ್ನೇ ಹೆಚ್ಚುಮಾಡಿರುವರು.

 

ಅಧಮ೯ವೇ ಹೆಚ್ಚಾದರೆ-ಕೀಳುಪ್ರಾಣಿಗಳು ಅಥವಾ ಮರಗಿಡಗಳು                                 ್ರ

ಧಮ೯ಅಧಮ೯ಗಳು ಸಮನಾದಾಗ-ಮನುಷ್ಯಜನ್ಮ ಬರುತ್ತದೆ.

 

4) ಜಿಜ್ಞಾಸುಗಳಿಗೆ ಗುಣಗಳು ಇರಬೇಕು:

 

1) ವಿವೇಕ,ವೈರಾಗ್ಯ,ಶಮಾದಿ ಷಟ್ಕ,ಮುಮುಕ್ಷತ್ವ.

2)ವಿಚಾರದಲ್ಲಿ ಶಿಷ್ಯನ ಗುಣವು ಇರಬೇಕು:ಎಂದರೆ ಗುರ್ರುಗಳ ಬಳಿ ಹೋಗಿ ಅವರನ್ನು ಶುಶ್ರೂಷೆಯಿಂದ ಒಲಿಸಿಕೊಂಡು ಸಮಯವನ್ನು ಕಾದಿದ್ದು ಪ್ರಶ್ನೆ ಮಾಡುವವನಾಗಿರಬೇಕು.

3) ವೇದಾಂತಕ್ಕೆ ಯಾವುದಾದರೊಂದು ಜಾತಿಯಮೇಲೆ ಹೆಚ್ಚಿನ ಒಲವಿಲ್ಲ.(ಪುಟ೯4)

4)ಪರಮಹಂಸ ಪರಿವ್ರಾಜಕನಾಗಿರಬೇಕು:ಎಷ್ಟೋಜನ ಋಷಿಗಳೂ ರಾಜರೂ ಗೃಸಸ್ಥರಾಗಿಯೇ ಇದ್ದು  ವೇದಾಂತವನ್ನು ವಿಚಾರ ಮಾಡಿಜ್ಞಾನವನ್ನು ಪಡೆದರೆಂಬುದು  ನಮ್ಮ ಪುರಾಣಗಳಿಂದ ತಿಳಿದು ಬರುತ್ತದೆ(ಪುಟ೯5)

 

5) ಸನ್ಯಾಸಿಯಾಗಿ ತನ್ನಲ್ಲಿ ಬಂದ ಮಾತ್ರದಿಂದ ಅವನು ವೇದಾಂತ ವಿಚಾರಕ್ಕೆ ತಕ್ಕವನೆಂದು ಭಾವಿಸಬಾರದು.(ಪುಟ೯5)

 

6)ವೇದಾಂತವಿಚಾರಕ್ಕೆ ಜಾತಿಯ ನಿಬ೯ಂಧವು ಹೇಗೆ ಅತ್ಯವಶ್ಯಕವಲ್ಲವೋ ಹಾಗೆಯೇ ಆಶ್ರಮದ ನಿಬ೯ಂಧವೂ ಅತ್ಯವಶ್ಯವಲ್ಲ.(ಪುಟ೯5)

 

7)ವಿರಕ್ತನಾಗಿ ತತ್ವವನ್ನು ಅರಿಯಬೇಕೆಂಬಾತನಿಗೇ ಜ್ಞಾನದಲ್ಲಿ ಅಧಿಕಾರವು.(ಪುಟ 5)

 

8) ಬುದ್ಧಿಯು ಚುರುಕಾಗಿಲ್ಲದಿದ್ದರೆ ವಿಷಯವು ಹಿಡಿಯುವುದೇ ಇಲ್ಲ.(ಪುಟ 5)

 

) ಆಚಾಯ೯ನನ್ನು ಸೇರಿದ ಪುರುಶನು ತಿಳಿಯುತ್ತಾನೆ ಎಂಬ ವಾಕ್ಯವು ಛಾಂದೋಗ್ಯದಲ್ಲಿದೆ.(ಪುಟ 6).

 

10)ಗುರುಃ ಪ್ಲಾವಯಿತಾ ತಸ್ಯ ಜ್ಞಾನಂಪ್ಲವ ಇಹೋಚ್ಯತೇ|

ವಿಜ್ಞಾಯ  ಕೃತಕೃತ್ಯಸ್ತು ತೀಣ೯ಸ್ತದುಭಯಂ ತ್ಯಜೇತ್|

 

ಗುರುವೇ ಆತನನ್ನು ದಾಟಿಸುವವನು.ಜ್ಞಾನವು ಇಲ್ಲಿ ತೆಪ್ಪವೆನಿಸುವುದು.ತತ್ವವನ್ನರಿತು ಕೃತಕೃತ್ಯನಾಗಿ ದಾಟಿದವನುಇವೆರಡನ್ನೂ ಬಿಡಬೇಕು.ಎಂದರೆ ತೀಣ೯ನಾಗುವವರೆಗೂ  ಗುರುಸೇವೆಯನ್ನೂತತ್ವಜ್ಞಾನದ ಅನುಸಂಧಾನವನ್ನೂ ಬಿಡದೆ ಮಾಡಬೇಕು.(ಪುಟ೯6)

 

 ಕೆಲವರಿಗೆ ಹಿಡಿಸದಿರುವುದಕ್ಕೆ ಕಾರಣ:

ಆಪಸ್ತಂಬರೇ ಮುಂತಾದವರು ಯಮಗಳನ್ನು ರೀತಿ ಹೇಳಿರುತ್ತಾರೆ.

1)ಅಕ್ರೋಧ:ಸಿಟ್ಟು ಬರುವಂಥ ಸಂದಭ೯ದಲ್ಲೂ ಸಿಟ್ಟು ಮಾಡದೆ ಇರುವುದು.

2)ಅಹಷ೯: ಹಿಗ್ಗದಿರುವುದು

3)ಅರೋಷ:ಮನಸ್ಸಿನಲ್ಲಿ ಉದ್ವೇಗವನ್ನು ಹೊಂದದೆ ಇರುವುದು.

4) ಅಲೋಭ;ಆಸೆಇಲ್ಲದಿರುವುದು.(ತೃಪ್ತಿ)

5)ಅಮೋಹ:ಕಾಯಾ೯ಕಾಯ೯ ವಿವೇಕ.

6) ಅದಂಭ: ತೋರಿಕೆ ಇಲ್ಲದಿರುವುದು.

7)ಅಪಕಾರ ಮಾಡಿದರೂ  ಕೆಟ್ಟದ್ದು ಮಾಡದಿರುವಿಕೆ.

8) ಸತ್ಯವಚನ:ನಿಜವನ್ನೇ ನುಡಿಯುವುದು.

)ಅನತ್ತಾಶಾ:ಮಾಡಬಾರದ ಕೆಲಸಕ್ಕೆ ಅತ್ಯಾಸೆಯಿಂದ ಕೈ ಹಾಕದೆ ಇರುವುದು.

10) ಅನಸೂಯಾ:ಅಸೂಯೆ ಇಲ್ಲದಿರುವುದು.ಮತ್ತೊಬ್ಬರ ಗುಣವನ್ನು ಮೆಚ್ಚುವುದು.

11)ಅಪೈಶುನ:ಚಾಡಿಕೋರತನವನ್ನು ಗೆಲ್ಲುವುದು.

12)ಸಂವಿಭಾಗ:ತನಗೆ ತೊಂದರೆಯಾದಾಗಲೂ ಇತರರಿಗೆ ಒಳ್ಳೆಯದನ್ನೇ ಮಾಡುತ್ತಿರುವುದು.

13) ತ್ಯಾಗ:ಪರಿಗ್ರಹ ಮಾಡದೆ ಇರುವುದು.

14)ಆಜ೯ವ:ಮನೋವಾಕ್ಕಾಯಗಳಲ್ಲಿ ಒಂದೇ ರೂಪವಾಗಿರುವುದು.

15) ಮಾದ೯ವ:ಮೃದುವಾಗಿರುವುದು.

16)ಶಮ: ಮನಸ್ಸನ್ನು ಬಿಗಿಹಿಡಿದಿರುವುದು.

17)ದಮ: ಇಂದ್ರಿಯಗಳನ್ನು ಬಿಗಿಹಿಡಿದಿರುವುದು.

18)ಸವ೯ಭೂತವಿರೋಧ:ಸವ೯ಪ್ರಾಣಿಗಳಲ್ಲಿ ದಯೆ.

1)ಯೋಗ:ಮನಸ್ಸನ್ನು ಏಕಾಗ್ರವಾಗಿಟ್ಟುಕೊಳ್ಳುವುದು.

20) ಆಯ೯: ಶಿಷ್ಟಾಚಾರವನ್ನು ಪಾಲಿಸುವುದು.

21) ಅನೃಶಂಸ್ಯ:ನಿಷ್ಠುರ ಮಾಡದಿರುವುದು.

22) ತುಷ್ಟಿ:ಬೇಸರ ಪಡದಿರುವುದು.(ಪುಟ೯8)

23) ಅಹಿಂಸಾದಿಗಳು:ಎಂದರೆ ಅಹಿಂಸೆ,ಸತ್ಯ,ಅಸ್ತೇಯ,ಬ್ರಹ್ಮಚಯ೯,ಅಪರಿಗ್ರಹ-ಎಂಬ ಸಾಧನಗಳು.

 

ಆಚಾಯ೯ನ ಲಕ್ಷಣಗಳು:

 

1)ಆಚಾಯ೯ನು ಮುಖ್ಯವಾಗಿ ಶಾಸ್ತ್ರಾಥ೯ಗಳನ್ನು ಬಲ್ಲವನಾಗಿಯೂ ಅದನ್ನು ಮತ್ತೊಬ್ಬರಿಗೆ ಹೇಳುವುದಕ್ಕೆ ಶಕ್ತನಾಗಿಯೂ ಇರಬೇಕು

 

2)ಯಾವ ಕೆಟ್ಟ ನಡತೆಯೂ ಇರಬಾರದು.

 

3)ಪರಾನುಗ್ರಹವನ್ನು ಮಾಡಬೇಕೆಂಬ ಒಂದೇ ಕಾರಣವಲ್ಲದೆಅವನ ಉಪದೇಶಕ್ಕೆ ಬುಡದಲ್ಲಿ ಯಾವೊಂದು ಆಸೆಯೂ ಇರಬಾರದು(ಪುಟ೯೯)

 

4)ಶಿಷ್ಯನಿಗೆ ಸಾಧನವಾಗಿರುವ ಅಮಾನಿತ್ವಾದಿಗಳು ಗುರುವಿಗೆ ಸ್ವಭಾವ ಲಕ್ಷಣವಾಗಿರುವುವೆಂಬುದನ್ನುಇಲ್ಲಿ ತಿಳಿಸಿದೆ.(ಪುಟ ೯೯)

 

5)ಶಿಷ್ಯನಿಗೆ ಇರಬೇಕೆಂದು ಹೇಳಿದ ಶಾಂತಿ ದಾಂತಿ ಮುಂತಾದ ಗುಣಗಳು ಗುರುವಿನಲ್ಲಿಯೂ ಇರಬೇಕು.

(ಪುಟ ೯೯)

 

ಪರಮಾತ್ಮ ಲಕ್ಷಣದ ಉಪದೇಶ:

 

1)'ಎಲೈ ಸೋಮ್ಯನೆ,ಮೊದಲು ಇದು ಸತ್ ಸ್ವರೂಪವೇ ಆಗಿತ್ತು.(ಛಾಂದೋಗ್ಯ ವಾಕ್ಯ)

 

2)'ಎಲ್ಲಿ ಬೇರೊಂದನ್ನು ಕಾಣುವುದಿಲ್ಲವೋ(ಛಾಂದೋಗ್ಯ)

 

3)ಇದೆಲ್ಲವೂ ಆತ್ಮನೆ(ಛಾಂದೋಗ್ಯ)

 

4)'ಇದು ಮೊದಲು ಆತ್ಮನೊಬ್ಬನೇ ಆಗಿತ್ತು(.)

 

5)'ಇದೆಲ್ಲವೂ ಬ್ರಹ್ಮವಲ್ಲವೆ?'ಎಂಬುದು ಛಾಂದೋಗ್ಯದಲ್ಲಿರುವ ಶಾಂಡಿಲ್ಯವಿದ್ಯೆ ಎಂಬ ಸಗುಣ ವಿದ್ಯೆಯ ವಾಕ್ಯ.

 

ಮೇಲೆ ಹೇಳಿದ ವಾಕ್ಯಗಳೆಲ್ಲವೂ ಆತ್ಮನೊಬ್ಬನೇ ವಿವಿಧವಾದಪ್ರಪಂಚವಾಗಿ ತೋರ್ಯತ್ತಿರುವನೆಂಬುದನ್ನು ಹೇಳು ವಾಕ್ಯಗಳು(ಪುಟ101).

 

-ದೇಹಾತ್ಮವಾದ ನಿರಾಸ:ಇಲ್ಲಿ ದೇಹಾತ್ಮವಾದವನ್ನು ತಳ್ಳಿಹಾಕಿದೆ(ದೇಹವೇ ಆತ್ಮನೆಂಬ ವಾದ)(ಪುಟ 101)

 

-ಆತ್ಮನಿಗೆ ಜಾತಿ,ವಂಶ,ಸಂಸ್ಕಾರಗಳಿರುವುದಿಲ್ಲ.

 

-ಆಕಾಶವೆಂಬ ಮಾತಿಗೆ ಎಲ್ಲೆಲ್ಲಿಯೂ ಬೆಳಗುತ್ತಿರುವುದು.(ಎಂದು ಅವಯವಾಥ೯)

 

-ಏನಾದರೂ ಕಾಯ೯ವನ್ನು ಮಾಡುವಾತನು ಏನಾದರೊಂದು ಕರಣವನ್ನು  ಉಪಯೋಗಿಸಿಕೊಂಡು ಕೆಲಸಮಾಡುತ್ತಾನೆ.ಆದರೆ ಪರಮಾತ್ಮ ಹಾಗಲ್ಲ.ಯಾವ ಕರಣವನ್ನೂ ಉಪಯೋಗಿಸದೆ ,ತಾನು ಯಾವ ಕೆಲಸದ ಆಯಾಸವನ್ನೂ  ವಹಿಸದೆ,ತನ್ನ ಇರುವಿಕೆಯೊಂದರಿಂದಲೇ ನಾಮರೂಪಗಳು ಹೊರತೋರುವಂತೆ ಮಾಡುತ್ತಾನೆ.ನಾಮರೂಪಗಳು ಅವನ ಸ್ವರೂಪವೇ ಆಗಿರುತ್ತವೆ.(ಪುಟ 104)

 

-1)ನಾಮರೂಪಗಳ ಬೀಜ ಶಕ್ತಿಯು 'ಅವ್ಯಾಕೃತ' 'ಮಾಯೆ' 'ಶಕ್ತಿ' 'ಪ್ರಕೃತಿ'ಎನಿಸುವುದು.

 

2)ಇದು ಅವಿದ್ಯೆಯಿಂದ ಕಲ್ಪಿತವಾಗಿರುವುದು.

 

3)ಅವಿದ್ಯಾ ದೃಷ್ಟಿಯಿಂದಲೆ ಪರಮಾತ್ಮನು ಜಗತ್ಕಾರಣನೆಂದು  ವ್ಯವಹಾರವಾಗಿರುವುದು.ನಿಜವಾಗಿ ನಾಮರೂಪಗಳ ಪ್ರಪಂಚವು ಆತ್ಮನಿಗಿಂತ ಬೇರೆ ಇಲ್ಲವೇ ಇಲ್ಲ.(ಪುಟ(106)

 

-ವಾಯು ಇತ್ಯಾದಿಗಳ ಉತ್ಪತ್ತಿ,ಮನಸ್ಸು ಇಂದ್ರಿಯಗಳೂ ನಾಮರೂಪಾತ್ಮಕವೇ.

 

ಆಕಾಶ;ಶಬ್ದ

ವಾಯು:ಶಬ್ದ,ಸ್ಪಶ೯ ಎಂಬ ಎರಡು ಗುಣ

ತೇಜಸ್ಸು:ಶಬ್ದ,ಸ್ಪಶ೯,ರೂಪ ಎಂಬ ಮೂರು ಗುಣಗಳು

ನೀರು:ಶಬ್ದ,ರಸ,ರೂಪ ಸ್ಪಶ೯ಎಂಬ ನಲ್ಕು ಗುಣಗಳು

ಪೃಥ್ವಿ:ಶಬ್ದ,ರಸ,ರೂಪ,ಗಂಧ,ಸ್ಪಶ೯ ಎಂಬ ಐದು ಗುಣಗಳು (ಪುಟ 106)

 

-ಮನಸ್ಸು,ಪ್ರಾಣ,ಇಂದ್ರಿಯಗಳೂ-ಇವುಗಳೂ ಭೌತಿಕ ಪ್ರಪಂಚವೆ.(ಪುಟ 107)

 

-ನಮ್ಮ ಆತ್ಮನೂ ಪರಮೇಶ್ವರನೂ ಬೇರೆ ಅಲ್ಲ.(ಪುಟ 107)

 

-ಬೇರೆ ಒಬ್ಬ ಈಶ್ವರನಿದ್ದಾನೆಂದು ಹೇಳುವ ವಾದಕ್ಕೆ 'ತಟೇಶ್ವರವಾದ'ಎಂಉ ಹೆಸರು'(ಪುಟ107)ಹಿಂದೆ ತಾಕಿ೯ಕರು, ಯೋಗಿಗಳು- ಪಕ್ಷವನ್ನವಲಂಬಿಸಿದ್ದರು.ಈಗ ಮಧ್ವ ರಾಮಾನುಜ ಸಂಪ್ರದಾಯಗಳ  ವೈದಿಕರೂ  ವಾದವನ್ನೇ ಇಟ್ಟುಕೊಂಡಿರುತ್ತಾರೆ.(ಪುಟ108)

 

-ಈಶ್ವರನೇ ನಮ್ಮ ಆತ್ಮನೆಂದು ತಿಳಿದರೆ ಮೋಕ್ಷವಾಗುವುದೆಂದು,ಈಶ್ವರನು ನಮಗಿಂತ ಬೇರೆಯೆಂದು ತಿಳಿದರೆ ಸಂಸಾರದಲ್ಲಿ ತೊಳಲಬೇಕಾಗುತ್ತದೆಯೆಂದೂ ಶ್ರುತಿಗಳು ಸಾರುತ್ತವೆ.(ಪುಟ10)

 

- ದೇವತೆಯು ಬೇರೆ ,ನಾನು ಬೇರೆ -ಎಂದು ಉಪಾಸನೆ ಮಡುವವನು ತತ್ವವನ್ನು ತಿಳಿಯನು.ಅವನು ದೇವತೆಗಳ ಪಶುವಿನಂತೆ ದುಡಿಯುತ್ತಿರುವನು'ಎಂದು ಬೃಹದಾರಣ್ಯಕವು ಹೇಳುತ್ತದೆ.(ಪುಟ108)

 

-ಸಕಲ ಜಗತ್ತಿಗೂ ಕಾರಣವಾಗಿರುವ  ಪರಮಾತ್ಮನೇ ನಾನು -ಎಂದು ತಿಳಿದಾತನಿಗೆ ಶರೀರವು ಬಿದ್ದುಹೋದಮೇಲೆ ಮತ್ತೆ ಜನ್ಮವುಂಟಾಗುವುದಿಲ್ಲ.(ಪುಟ108)

 

-ಬ್ರಹ್ಮವೇ ತಾನೆಂಬ ಜ್ಞಾನವು ಕಮ೯ದ ಕಟ್ಟನ್ನು ಕಳಚಿಹಾಕುತ್ತದೆ(ಪುಟ 108)

 

-ಅವನು ಸ್ವಯಂ ರಾಜನಾಗುವನು(ಪುಟ10)

 

-ಪ್ರತಿಯೊಂದು ಶಾಖೆಯಲ್ಲಿಯೂ ಭೇದವಿಜ್ಞಾವನ್ನು ನಿಂದಿಸಿ ಅಭೇದವಿಜ್ಞಾನವ್ನು ಹೊಗಳಿರುವುದರಿಂದ  ಬ್ರಹ್ಮಾತ್ಮೈಕ್ಯವೇ ಶ್ರುತಿಸಮ್ಮತವೆಂದು ತಿಳಿಯಬೇಕು.(ಪುಟ10)

 

-ಭಗವಂತನು ಜೀವಿಗಿಂತ ಬೇರೆಯೇ ಇರುವನೆಂದೂ ಅವನನ್ನು ಬಗೆ ಬಗೆಯಾಗಿ ಆರಾಧನೆ ಮಾಡಿ ಒಲಿಸಿಕೊಂಡರೆ ಮುಕ್ತಿಯಲ್ಲಿ ಆರಾಧಕನು  ಬ್ರಹ್ಮವೇ ಆಗಿಬಿಡುವನೆಂದೂ ಕೆಲವರ ಮತವಿತ್ತು.ಇದಕ್ಕೆ ಭಾಗವತಮತ ಎಂದು ಹೆಸರು.

1)ಪುಷ್ಪ,ಉದಕ-ಮುಂತಾದವುಗಳನ್ನು ಅಪಿ೯ಸುವುದು,

2)ಕೈ ಮುಗಿಯುವುದು,

3)ಸ್ತೋತ್ರ ಮಾಡುವುದು

4)ನಮಸ್ಕಾರ ಮಾಡುವುದು

5)ಬಲಿಯನ್ನೊಪ್ಪಿಸುವುದು

6)ಅಧ್ಯಯನ ಮಾಡುವುದು,

7)ಹೋಮ ಮಾಡುವುದು

8) ಧ್ಯಾನ ಮಾಡುವುದು-ಮುಂತಾದ ಸಧನೆಗಳಿಂದ ಪರಮೇಶ್ವರನನ್ನು  ಆರಾಧನೆ ಮಾಡಬೇಕೆಂದು  ಮತದವರು ಹೇಳುತ್ತಾರೆ.(ಪುಟ10)

 

-ಅರಾಧನೆಯು ಕೂಡದೆಂಬುದು ಅದ್ವೈತ ಸಿದ್ಧಾಂತಿಯ  ಅಭಿಪ್ರಾಯವಲ್ಲ.ಆರಾಧನೆಯಿಂದ ಪಾಪಕ್ಷಯವಾಗಿ  ಚಿತ್ತಶುದ್ಧಿಯಾಗುವುದು.ಆದರೆ  ಉಪಾಸನೆಗಾಗಿ ಕಲ್ಪಿತವಾದ ಭೇದವನ್ನು ಸತ್ಯವೆಂದು ಮಾತ್ರ ತೀಳಿಯಬಾರದು.(ಪುಟ10)

 

-ಆತ್ಮನಿಗೆ ಕಮ೯ಸಂಬಂಧವಿಲ್ಲವೆಂಬುದೇ ಆತ್ಮದ ಉಪದೇಶ.(110)

 

-ಐಕ್ಯಜ್ಞಾನವಾದ ಮೇಲೆ ಪ್ರಮಾಣ ಪ್ರಮೇಯ ವ್ಯವಹಾರವೇ ಅಸತ್ಯವಾಗಿ ಬಿಡುವುದು.(ಪುಟ110)

 

-ಕಾಣುವ ದ್ವೈತವು ಅವಿದ್ಯಾಕೃತವಾದದ್ದು.(ಪುಟ113)

 

ಉಪಸಂಹಾರ:

 

-ಸನ್ಯಾಸವೆಂಬುದು ಎರಡುವಿಧ:

1)ವಿವಿದಿಷಾ ಸನ್ಯಾಸ-ಜ್ಞಾನಕ್ಕಗಿ ಸನ್ಯಾಸ

2) ವಿದ್ವತ್ ಸನ್ಯಾಸ-ಜ್ಞ್ಞಾನದ ಫಲವಾದ ಸನ್ಯಾಸ.(ಪುಟ 115)

 

-'ನಾನು ಕತೃ೯ವಲ್ಲ,ಭೋಕ್ತøವಲ್ಲ ಸವ೯ರಿಗೂ ಆತ್ಮನಾಗಿರುವ ಬ್ರಹ್ಮವು ನಾನು-ಎಂಬ ಜ್ಞಾನವು ಉಂಟಾದ ಮೇಲೆ ಕಮ೯ವನ್ನು ಮಾಡುವುದರಿಂದಾಗಲೀ ಬಿಡುವುದರಿಂದಾಗಲೀ  ಯಾವ ಪ್ರಯೋಜನವೂ ಇರುವುದಿಲ್ಲ.(ಪುಟ 115)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

2)ಕೂಟಸ್ಥಾದ್ವಯಾತ್ಮಬೋಧ:(ಕೂಟಸ್ಥ ಅದ್ವಯಾತ್ಮಬೋಧ):

 

1) ಆತ್ಮನು ಕೂಟಸ್ಥನಾಗಿರುವನು ಎಂದರೆ ಯಾವ ಮಾಪಾ೯ಡುಗಳೂ ಇಲ್ಲದವನು.(ಪುಟ117)

 

2)ಅದ್ವಯಾತ್ಮ;ತನಗೆ ಎರಡನೆಯದಿಲ್ಲದವನು(ಪುಟ 117)

 

3) ಇದಕ್ಕೆ ಅವಗತಿ ಪ್ರಕರಣವೆಂದು ಹೆಸರು.ಅವಗತಿ ಎಂದರೆ ಜ್ಞಾನ.(ಪುಟ 117)

 

4)ಅವಸ್ಥಾತ್ರಯ(ಎಂದರೆ ಎಚ್ಚರ,ಕನಸು,ನಿದ್ರೆ) ಪರೀಕ್ಷೆಯೆ ಆತ್ಮತತ್ವವನ್ನು ಕಂಡುಕೊಳ್ಳುವುದಕ್ಕೆ ಮಾಗ೯ವು.(ಪುಟ 117)

 

5)ಪ್ರಪಂಚದಲ್ಲಿ ಇದುವರೆಗೆ ಹುಟ್ಟಿರುವ ಎಲ್ಲ ದಶ೯ನಗಳೂ  ಎಚ್ಚರವೆಂಬ ಒಂದೇ ಒಂದು ಅನುಭವವನ್ನು ಪರೀಕ್ಷಿಸಿತಮ್ಮ ತಮ್ಮಸಿದ್ಧಾತವನ್ನು ವಿಚಾರಕರ ಮು<ದಿಡುವವು.(ಪುಟ 117)

 

6) ಅವಸ್ಥಾತ್ರಯ ದೃಷ್ಟಿಯೇ ಪೂಣ೯ ದೃಷ್ಟಿಯು(ಪುಟ 118)

 

7)ಎಚ್ಚರ,ಕನಸು,ನಿದ್ರೆ -ಇವುಗಳನ್ನು  ಮತ್ತೆ ಮತ್ತೆ ಅನುಭವಿಸುವುದೇ ಸಂಸಾರವು.(ಪುಟ 118)

 

8)ವಿದ್ಯೆ ಎಂದರೆ ಸರಿಯಾದ ತಿಳುವಳಿಕೆ.- ತಿಳುವಳಿಕೆಯು ಉಂಟಾದರೆ ಸಂಸಾರ ಭ್ರಾಂತಿಯು ತೊಲಗುವುದು.(ಪುಟ120)

 

)ಅವಿದ್ಯೆಗೆ ಆತ್ಮನೇ ವಿಷಯ(ಪುಟ122)

 

10)ಅವಿದ್ಯೆಯೆಂದರೆ ಅಧ್ಯಾಸವು.ಒಂದನ್ನು ಮತ್ತೊಂದೆಂದು ತಿಳಿಯುವುದು.(ಪುಟ122)

 

11)ಆತ್ಮನು ನಮ್ಮ ಸ್ವರೂಪವೆ ಆಗಿರುತ್ತಾನೆ.(ಪುಟ124)

 

12)ಆತ್ಮನು ಸ್ವತಃಸಿದ್ಧನು.ಎಂದರೆ ಮತ್ತೊಂದು ಪ್ರಮಾಣವನ್ನು ಬಯಸದೆ ಪ್ರಸಿದ್ಧನಾಗಿರುವವನು.(ಪುಟ124)

 

13)ಯಾವುದರಲ್ಲಿ ಕಲ್ಪಿಸುತ್ತಾರೋ ಅದು ಅಧಿಷ್ಠಾನವು.ಯಾವುದನ್ನು ಕಲ್ಪಿಸುತ್ತಾರೋ ಅದು ಆರೋಪಿತವು.(ಪುಟ128)

 

14)ಯಾವ ಪದಾಥ೯ವೂ ಸತ್ಯವಾಗಿರುವುದಿಲ್ಲೆಂಬ ವಾದವೇ 'ಶೂನ್ಯವಾದ'.(ಪುಟ 130)

 

15)ಆತ್ಮನು ಅಪ್ರಸಿದ್ಧನೆಂಬುದು ಸರಿಯಲ್ಲ.(ಪುಟ132)

 

16)ಇಂದ್ರಿಯಕ್ಕೆ ಗೋಚರವಾದ ಸಿದ್ಧವಸುವಿನಲ್ಲಿಯೇ ಅಧ್ಯಾಸ ಮಾಡಬೇಕೆಂಬ ನಿಯಮವೇನೂ ಇಲ್ಲ.ಆಕಾಶವು ಇಂದ್ರಿಯಕ್ಕೆ ಗೋಚರವಲ್ಲ.ಆದರೂ 'ಆಕಾಶವು ನೀಲವಾಗಿದೆ' ಎಂದು ಪ್ರತ್ಯಕ್ಷವಾದ ನೀಲವಣ೯ವನ್ನು ಅದರಲ್ಲಿ ಆರೋಪಿಸುತ್ತಾರಲ್ಲವೇ?ಅದರಂತೆ ಆತ್ಮನಲ್ಲಿ ಪ್ರತ್ಯಕ್ಷಗೋಚರವಾದ ದೇಹಾದಿಗಳನ್ನು  ಆರೋಪಿಸಬಹುದಾಗಿದೆ.ಇದು ಯುಕ್ತಿ ವಿದ್ಧವೇನೂ ಅಲ್ಲ.(ಪುಟ133)

 

17)ಅವಿದ್ಯೆಗೆ ಆತ್ಮನೇ ಆಶ್ರಯನು.(ಪುಟ133)

 

18)ದೃಷ್ಟಿಯು ಎರಡು ವಿಧ.1) ಪಾರಮಾಥಿ೯ಕ ದೃಷ್ಟಿ  2) ವ್ಯಾವಹಾರಿಕ ದೃಷ್ಟಿ(ಪುಟ134)

 

1)ನಿತ್ಯ ಶುದ್ಧಬುದ್ಧ ಮುಕ್ತ ಸ್ವಭಾವದ ಪರಬ್ರಹ್ಮ ವಸ್ತುವಿಗಿಂತ  ಬೇರೆಯಾದ ಚೇತನವೇ ಇಲ್ಲವೆಂದು ಶ್ರುತಿಯಲ್ಲಿ ಸ್ಪಷ್ಟವಾಗಿ ಹೇಳಿರುತ್ತದೆ.(ಬೃ.3-7-23)(ಪುಟ 136)

 

20)ಶರೀರ,ಪ್ರಾಣ,,ಇಂದ್ರಿಯ,ಅಂತಃಕರಣ-ಇವು ಜಡವಸ್ತುಗಳು.ಇವು ಒಂದಕ್ಕೊಂಉ ಸೇರಿ  ಜೀವನಿಗೆ ಪ್ರಪಂಚಾನುಭವವನ್ನು ಉಂಟುಮಾಡುತ್ತಿವೆ.(ಪುಟ136)

 

21)ಆತ್ಮನು ಚೇತನಸ್ವರೂಪನಾಗಿರುವನೇ ಹೊರತು ಚೈತನ್ಯ ಗುಣವುಳ್ಳವನಾಗಿರುವುದಿಲ್ಲ.(ಪುಟ 138)

 

22)ಆತ್ಮನ ಚೈತನ್ಯದಲ್ಲಿ ಮಾಪಾ೯ಡುಗಳಿಲ್ಲ.(ಪುಟ13)

 

23)ಎಚ್ಚರ ಕನಸುಗಳಿಂದ ಅತ್ಮನಲ್ಲಿ ಮಾಪಾ೯ಡಿಲ್ಲ.(ಪುಟ145)

 

24) ಸುಷುಪ್ತಿಯಲ್ಲಿಯೂ ಆತ್ಮನ ಚೈತನ್ಯವು ಬೇಪ೯ಡದಿರುವುದು.(ಪುಟ148)

 

25) ಸುಷುಪ್ತಿ ಅವಸ್ಥೆಯನ್ನು ಚೆನ್ನಾಗಿ ಪರೀಕ್ಷಿಸುವುದರಿಂದ ಅನೇಕ  ವಿಷಯಗಳು ಸಿದ್ಧವಾಗುವವು.

1) ಸುಷುಪ್ತಿಯಲ್ಲಿ  ನಮ್ಮ ಚೈತನ್ಯ ಸ್ವರೂಪವಾದ ಚೈತನ್ಯವು ಇದ್ದೆ ಇರುವುದು.

2) ಆಗ ನಾನು,ನೀನು,ಪ್ರಪಂಚ-ಎಂಬ ಭೇದಕ್ಕೆ ಆಸ್ಪದವಾದ ಯಾವ ವಿಷಯವೂ ಇರುವುದಿಲ್ಲ.

3)ಗ್ರಾಹ್ಯ ಗ್ರಾಹಕ ರೂಪವಾದ ಪ್ರಪಂಚವು ವಿಚಾರಕನ ಎಚ್ಚರ ಕನಸುಗಳಲ್ಲಿ ಮಾತ್ರ  ಕಂಡುಬರುವಂಥ ಸ್ವಭಾವವಾದ್ದರಿಂದ ಸುಷುಪ್ತಿಯಲ್ಲಿ ಅದು ಮತ್ತೆಲ್ಲಿಯೂ ಇರುವುದಿಲ್ಲ.(ಪುಟ152)

 

4)ಸುಷುಪ್ತಿಯಲ್ಲಿರುವ  ಆತ್ಮಚೈತನ್ಯವು ಎಚ್ಚರ ಕನಸುಗಳಲ್ಲಿ ಗ್ರಾಹ್ಯ ಗ್ರಾಹಕ ರೂಪವಾಗಿ ಹರಡಿಕೊಳ್ಳುವುದರಿಂದ ಆತ್ಮಚೈತನ್ಯವೇ ಪ್ರಪಂಚಕ್ಕೆ ಕಾರಣವೆಂದು ಹೇಳಬೇಕಾಗಿದೆ.(ಪುಟ 152) 

 

ಆತ್ಮನು ಸ್ವತಃಸಿದ್ಧನು:

 

1) ಮೂರು ಅವಸ್ಥೆಗಳ ಪರೀಕ್ಷೆಯುನ್ನು ಮಾಡಿದ್ದರಲ್ಲಿ ಯಾವ ಅವಸ್ಥೆಯಲ್ಲಿಯೂ  ಚೈತನ್ಯ ಸ್ವರೂಪವು ಆತ್ಮನನ್ನು ಬಿಟ್ಟು ಹೋಗುವುದಿಲ್ಲವೆಂದು ನಿಣ೯ಯವಾಯಿತು.(ಪುಟ 153)

 

2) ಪ್ರಮೆ,ಪ್ರಮಾತೃತ್ವ-ಇವುಗಳು ಆತ್ಮನ ಸ್ವರೂಪವೇ.ಬೇರೆಯಲ್ಲ.-ಎಂಬುದನ್ನು ಯುಕ್ತಿಯ ಬಲದಿಂದ  ವಿವರಿಸುವುದು ಈಗಿನ ಗ್ರಂಥ ಸಂದಭ೯ಒಂದು ಉದ್ದೇಶವಾಗಿರುತ್ತದೆ.(ಒಉಟ153)

 

3)ಪ್ರಮೆಯೆಂದರೆ ಸರಿಯಾದ ಅರಿವು.ಪ್ರಮೆ ಎಂದರೆ ಜ್ಞಾನ.(ಪುಟ 153)

 

4) 'ಹಾಗದರೆ ಪ್ರಮಾತೃವನ್ನು ತಿಳಿಯುವುದೆಂದರೇನು?ಆತ್ಮಜ್ಞಾನವನ್ನು ಮಾಡಿಕೊಳ್ಳಬೇಕೆಂದು ಶಾಸ್ತ್ರದಲ್ಲಿ ಹೇಳಿರುವುದಕ್ಕೆ ಅಥ೯ವೇನು?' ಎಂದರೆ ಆತ್ಮನು ಚೇತನಸ್ವರೂಪನಾದ್ದರಿಂದ  ಅವನು ಎಲ್ಲವನ್ನೂ ವಿಷಯನನ್ನಾಗಿ ಮಾಡಿಕೊಳ್ಳುವನು.ಅವನು ಏತಕ್ಕೂ ವಿಷಯನಲ್ಲ.-ಎಂದು ಅರಿತುಕೊಳ್ಳುವುದೇ  ಅತ್ಮಜ್ಞಾನವು.(ಪುಟ165)

 

5) ಹೀಗೆ ಆತ್ಮನು ಸ್ವತಃ ಕತೃ೯ವಲ್ಲ.ಎಂದರೆ ತನಗೆ ತಾನೇ ಕೆಲಸಮಾಡುವವನಲ್ಲ.ಅವನನ್ನು ಕೆಲಸ ಮಾಡಿಸುವ ಮತ್ತೊಬ್ಬ ಆತ್ಮನಿಲ್ಲ.ಕೆಲಸವು ತನಗೆ ತನೆ ಉಂಟಾಗಲಾರದು. ಕಾರಣದಿಂದ ಆತ್ಮನಲ್ಲಿರುವ ಕತೃ೯ತ್ವವು ದೇಹೇಂದ್ರಿಯಗಳೆಂಬ  ಅಭಿಮಾನವೆಂಬ ಉಪಾಧಿಯಿಂದ ತೋರುತ್ತಿರುವ ಭ್ರಾಂತಿಯೇ ಎಂದು ಸಿದ್ಧವಾಯಿತು.(ಪುಟ172)

 

ಉಪಸಂಹಾರ:                                                                             

 

1)ಅವಗತಿಯು ಎಂದರೆ ಅರಿವು ಕೂಟಸ್ಥನಿತ್ಯವಾಗಿರುವುದು.ಇದು ಮತ್ತೊಂದು ಪ್ರಮಾಣವನ್ನು ಬಯಸುವುದಿಲ್ಲ.ತಾನೇ ಸಿದ್ಧವಾಗಿರುವುದು. ಪ್ರಮಾಣ ಪ್ರಮೇಯ ವ್ಯವಹಾರವೆಲ್ಲ ಇದರ ಬಲದಿಂದ ಸಿದ್ಧವಾಗತಕ್ಕದ್ದಾಗಿರುವುದು.ಇದೆ ಆತ್ಮನು.(ಪುಟ173)

 

2)ಅನಾತ್ಮ ವಸ್ತುವೆಂಬುದು  ನಿಜವಾಗಿ ಆತ್ಮನಿಗಿಂತ ಬೇರೆಯಾಗಿ ಇರುವುದಿಲ್ಲ.ಎಚ್ಚರ ಕನಸುಗಳೆಂಬ ಅವಸ್ಥೆಗಳೂ ಅವುಗಳಲ್ಲಿ ತೋರುವ ಗ್ರಾಹ್ಯ ಗ್ರಾಹಕ ರೂಪವಾದ  ವಸ್ತುಗಳೂ ನಿಜವಾಗಿ ಆತ್ಮ ಚೈತನ್ಯವೇ.(ಪುಟ173)

 

3) ಕನಸು, ಎಚ್ಚರ -ಎರಡೂ ಅಸತ್ಯವೇ.(ಪುಟ174)

 

4)ಆತ್ಮಚೈತನ್ಯವು ಎಲ್ಲವನ್ನೂ ಅರಿಯುವುದು.ಅದನ್ನು ಅರಿಯುವ ಮತ್ತೊಂದು ವಸ್ತುವಿಲ್ಲ.(ಪುಟ174)

 

ಉಪಸಂಹಾರ:ದಲ್ಲಿ ಗುರುವು ಹೇಳಿರುವ  ಎರಡು ಮುಖ್ಯ ವಿಷಯಗಳೆಂದರೆ

1)ಅವಸ್ಥೆಗಳನ್ನು ಪೂಣ೯ವಾಗಿ ವಿಚಾರಿಸದೆ  ಎಚ್ಚರದಲ್ಲಿ ತೋರುವ ಪ್ರಪಂಚವೇ ಸತ್ಯವೆಂದೂ ,ಅದರಲ್ಲಿ ದೇಹೇಂದ್ರಿಯಗಳಿಂದ ಕೂಡಿದ ತಾನು  ಅನೇಕರೊಂದಿಗೆ ಇರುವೆನೆಂದೂ  ಜಾಗ್ರತ ಸ್ವಪ್ನಗಳಲ್ಲಿ  ಅನೇಕ ದೃಷ್ಯಗಳನ್ನು ಕಾಣುತ್ತಿರುವವೆಂದೂ  ಅವುಗಳಿಂದ ತಮಗೆ ಸುಖದುಃಖಗಳು ಒದಗುತ್ತಿರುವವೆಂದೂ  ತಿಳಿಯುವುದೇ ಅವಿದ್ಯೆ. ಅವಿದ್ಯೆಯಿಂದ ಪಡೆಯುವ  ಜಾಗ್ರತ ಸ್ವಪ್ನಗಳ ಅನುಭವವೇ ಸಂಸಾರವು.(ಪುಟ 174)

 

2) ಅವಸ್ಥಾತ್ರಯಗಳ ಪೂಣ೯ಪರೀಕ್ಷೆಯಿಂದ  ಕೂಟಸ್ಥನಿತ್ಯವಾಗಿಯೂ ಸ್ವಯಂಜ್ಯೋತಿಯಾಗಿಯೂ  ಅದ್ವಯವಾಗಿಯೂ ಇರುವ  ಸ್ವರೂಪವ್ನು ಮನಗಾಣುವುದೇ ವಿದ್ಯೆ.ಇದರಿಂದ ಸಂಸಾರ ದುಃಖವು ಬಿಡುಗಡೆಯಾಗುವುದು.(ಪುಟ 174)

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

 

ಅಸಂಗಾತ್ಮ ಪರಿಸಂಖ್ಯಾನ:

 

1) ಹಿಂದೆ ಪ್ರಸಂಖ್ಯಾನವಾದಿಗಳೆಂಬ  ಕೆಲವರು ವೇದಾಂತಿಗಳಿದ್ರು.ಅವರು ಹೀಗೆಂದು ಹೇಳುತ್ತದ್ದರು:ಉಪನಿಷತ್ತುಗಳ ಅಭಿಪ್ರಾಯವನ್ನು ತಿಳಿದುಕೊಂಡ ಮಾತ್ರದಿಂದಲೇ  ಅಜ್ಞನವು ಹೋಗುವುದಿಲ್ಲ.ಶಾಸ್ತ್ರ ವಾಕ್ಯಾಥ೯ವನ್ನು ತಿಳಿದುಕೊಂಡಮೇಲೂ  ಮತ್ತೆ ಮತ್ತೆ ಅದೇ ವಿಷಯವನ್ನು ಧ್ಯನಮಾಡುತ್ತಿಬೇಕು.ಹೀಗೆ ಮಾಡುತ್ತಿದ್ದರೆ ಕೊನೆಯಲ್ಲಿ ಹುಟ್ಟುವ ಜ್ಞಾನದಿಂದ ಮೋಕ್ಷವಾಗುವುದು.ಇದೊಂದು ಪಕ್ಷ.(ಪುಟ175)

 

2)ಉಪನಿಷತ್ತಿನ ಅರಿವೆ ಬ್ರಹ್ಮಜ್ಞಾನವಾದರೂ  ಅದು ಪಕ್ವವಾಗಿ ಕಾಯ೯ಕಾರಿಯಾಗುವುದಕ್ಕಾಗಿ ಧ್ಯಾನವು ಅವಶ್ಯಕವಾಗಿರುವುದು.(ಪುಟ175)

 

3) ಎರಡು ಪಕ್ಷಗಳು ಸರಿಯಲ್ಲವೆಂದೂ ಧ್ಯಾನವಬುದು ವೇದಾಂತ ಜ್ಞಾನವನ್ನು ಸಂಪಾದಿಸಿಕೊಳ್ಳುವ ಮೊದಲು ಮಡತಕ್ಕದ್ದೆ ಹೊರತುಉಪನಿಷತ್ತಿನಲ್ಲಿ ಹೇಳಿರುವ ಬ್ರಹ್ಮದ ಜ್ಞಾನವು ಉಂಟಾದ ಮೇಲೆ  ಮೋಕ್ಷಕ್ಕಾಗಿ ಜ್ಞಾನಿಯು  ಏನೇನೂ ಮಾಡಬೇಕಾದ್ದಿಲ್ಲವೆಂದೂ ಉಪನಿಷತ್ತಿನಿಂದ ಆಗುವ ಸರಿಯಾದ ಅರಿವೇ  ಬ್ರಹ್ಮದ ಜ್ಞಾನವೆಂದೂ,ಅದು ಹುಟ್ಟಿದೊಡನೆಯೇ  ಎಲ್ಲ ವಿಧವಾದ ಅಜ್ಞಾನವೂ ಹುಟ್ಟಡಗಿ ಹೋಗುತ್ತದೆಂದೂ  ಭಗವತ್ಪಾದರು ಸೂತ್ರಭಾಷ್ಯದಲ್ಲಿಯೂ  ಬೃಹದಾರಣ್ಯಕ ಭಾಷ್ಯ

ದಲ್ಲಿಯೂ ಹೇಳಿರುತ್ತಾರೆ. ಂದ ವೆದಾಂತ ಶಾಸ್ತ್ರೋಕ್ತ ಜ್ಞಾನವು ಇನ್ನೂ ಉಂಟಾಗದೇ ಇರುವ  ಮುಮುಕ್ಷುಗಳಿಗಾಗಿಯೇ ಧ್ಯಾನವನ್ನು ಹೇಳಿದೆ ಎಂದು ತಿಳಿಯಬೇಕು.(ಪುಟ 176)

 

4)ತತ್ವಸ್ವರೂಪವನ್ನು ಮತ್ತೆ ಮತ್ತೆ ನೆನಪಿಗೆ ತಂದುಕೊಳ್ಲುವುದೇ ಪರಿಸಂಖ್ಯಾನವು.(ಪುಟ 177)

 

5)ಪುಣ್ಯ ಕಮ೯ಗಳಿಂದ-ದೇವತೆಗಳೇ ಮೇಲ್ತರದ ಜನ್ಮಗಳು ದೊರೆಯುವವು.

ಪಾಪಕಮ೯ಗಳಿಂದ-ಮರಗಿಡಗಳು ಮತ್ತು ಮೂಕಪ್ರಾಣಿಗಳು.

ಮಿಶ್ರಕಮ೯ಗಳಿಂದ -ನಡುತರದ ಮಾನವ ಜನ್ಮವು ಸಿಗುವುದು.(ಪುಟ 177) 

 

6) ವಿಷಯಿ-ಅರಿಯುವವನು

ವಿಷಯ-ಅರಿಯಲ್ಪಡುವ ವಸ್ತು.(178)

 

ಪರಿಸಂಖ್ಯಾನವನ್ನು ಮಾಡುವುದು ಹೇಗೆ?:

 

7) ಶರೀರವೂ ಇಂದ್ರಿಯಗಳೂ ಮನಸ್ಸೂ ವಿಷಯಗಳೆಂಬುದನ್ನು ,ಅವುಗಳು ಒಂದಕ್ಕೊಂದು ಸೇರಿಕೊಂಡು ಆತ್ಮನುಗಾಗಿಯೇ ಕೆಲಸ ಮಾಡುತ್ತಿವೆಯಾದ್ದರಿಂದ  ಇವುಗಳೆಲ್ಲ ಜಡವೇ ಎಂದು ಹಿಂದಿನ ಪ್ರಕರಣಗಳಲ್ಲಿ  ವಿವರಿಸಿದೆ.ಅದನ್ನು ಮತ್ತೊಮ್ಮೆ ಮನಸ್ಸಿಗೆ ತಂದುಕೊಳ್ಳಬೇಕು.ವಿಷಯಗಳಿಂದ ಆತ್ಮನಿಗೆ  ಯಾವ ಹಾನಿಯೂ ವೃದ್ಧಿಯೂ  ಆಗುವ ಹಾಗಿಲ್ಲವೆಂಬುದು  ಅದರಿಂದ ವ್ಯಕ್ತವಾಗುತ್ತದೆ.(ಪುಟ180)

 

8)ವಿಷಯದಲ್ಲಿ ಅಭಿಮಾನವಿರುವವನಿಗೇ ಧಮಾ೯ಧಮ೯ಗಳು  ಆಗುವುವು.ಆದ್ದರಿಂದ ಯಾರು ಅಭಿಮಾನದಿಂದ ಒಳ್ಳೆಯದನ್ನು ಅಥವ ಕೆಟ್ಟದನ್ನು  ಮಾಡಲು ಹೊರಟಿರುವರೋ ಅವರಿಗೆ ಆಯಾ ಕಮ೯ದ ಫಲವೇ ಹೊರತು ನನಗೇನೂ ಅಲ್ಲ ಎಂದು ಭಾವಿಸಿಕೊಳ್ಳಬೇಕು.(ಪುಟ181)

 

) ಅದ್ವಿತೀಯ ಧ್ಯಾನ:ಆತ್ಮನಿಗಿಂತ ಬೇರೆಯಾಗಿರುವ  ಎರಡನೆಯ ವಸ್ತುವೇ ಇಲ್ಲವೆಂದು  ಪ್ರಬಲವಾದ ಯುಕ್ತಿಯನ್ನು ಖಂಡದಲ್ಲಿ  ಹೇಳಿರುತ್ತದೆ(ಪುಟ181)

 

,,,,,,,,,,,,,,,,,,,,,,,,,,,,,,,,ಉಪದೇಶಸಾಹಸ್ರಿ ಗ್ರಂಥವು ಸಂ,,,,,,,,,,,,,,,,,,,,,,,,,,,,,,,,,,,,,,,,,,,ಪೂಣ೯ವಾಯಿತು,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,

 

ಕೆಲವು ಕಠಿಣ ಪದಗಳ ಅಥ೯:

 

1)ಅಕ್ರೋಧಾದಯಃ -ಸಿಟ್ಟು ಮುಂತಾದ(ತತ್ವವನ್ನು ತಿಳಿಯದೆ ಇರುವುದಕ್ಕೆ ಕಾರಣವಾದ ಅಡ್ಡಿಗಳು

 

2)ಅಗ್ರಹಣೇ ಹೇತವಃ-ತತ್ವವನ್ನು ತಿಳಿಯದೇ ಇರುವ ಕಾರಣಗಳು.

 

3)ಅಚಿತಿಮತ್-ಅಚೇತನ,ಚೈತನ್ಯವಿಲ್ಲದ,ಅರಿವಿಲ್ಲದ.

 

4)ಅಚಿಂತ್ಯ ಶಕ್ತಿ-ಇಂಥದ್ದೆಂದು  ತಕಿ೯ಸುವುದಕ್ಕೆ  ಶಕ್ತಿಯುಳ್ಳ ಪರಮಾತ್ಮ

 

5)ಅಜ್ಞಾನಮ್-ತಿಳಿಯದೇ ಇರುವುದು,ತಪ್ಪಾಗಿ ತಿಳಿಯುವುದು.

 

6)ಅದ್ವಯತ್ವಮ್,ಅದ್ವೈತ ಭಾವ-ತನಗೆ ಎಡಡನೆಯದು ಇಲ್ಲದಿರುವಿಕೆ.ಆತ್ಮಸ್ವಭಾವ.

 

7)ಅಧ್ಯಾರೋಪಣ,ಆರೋಪಣಾ-ಒಂದರ ಮೇಲೆ  ಅದರಲ್ಲಿಲ್ಲದ್ದನ್ನು ಹಾಕಿ ಹುಟ್ಟ್ಗಟ್ಟುವುದು,ಅಧ್ಯಾಸ,ಅದಲ್ಲದ್ದನ್ನು ಅದು ಎಂದು ತಿಳಿಯುವುದು.

 

 

 

 

8)ಅಧ್ಯಾರೋಪಿತ-ಒಂದರಲ್ಲಿ ಹುಟ್ಟುಗಟ್ಟಿದ ಕಪ್ಪೆಯ ಚಿಪ್ಪಿನ ಬೆಳ್ಳಿಯಂಥ ವಸ್ತು.

 

)ಅನಥ೯ಬೀಜ ಭೂತ:ತೊಂದರೆಗಳಿಗೆಲ್ಲ ಕಾರಣವಾಗಿರುವ (ಅಧ್ಯಾರೋಪ)

 

10)ಅನವಸ್ಥಾ-ಹಿಂದು ಹಿಂದಿನದು ಸಿದ್ಧಿಯಾಗದೆ ಇರುವುದರಿಂದ ಮುಂದು ಮುಂದಿನದು  ಸಿದ್ಧವಾಗದೆ ಇರುವುದು.

 

11) ಅನಾತ್ಮೇ-ಆತ್ಮನಲ್ಲದ್ದು,ವಿಷಯ

 

12)ಅನ್ಯೋನ್ಯಾಥ೯ತ್ವಮ್-ಎರಡು ಪದಾಥ೯ಗಳಲ್ಲಿ ಪ್ರತಿಯೊಂದೂ ಇನ್ನೊಂದಕ್ಕಾಗಿರುವುದು.

 

13)ಅಂತಃಕರಣದ್ವಯಮ್-ಮನಸ್ಸು,ಬುದ್ಧಿ ಎಂಬ ಮನಸ್ಸಿನ ಎರಡು  ವೃತ್ತಿಗಳು.

 

14)ಅಭೇದ ದಶ೯ನಮ್,ಅಭೇದ ಪ್ರತಿಪತ್ತಿ,ಅಭೇದ ವಿಜ್ಞಾನಮ್-ಆತ್ಮನೂ ಬ್ರಹ್ಮವೂ ಒಂದೇ ಎಂದು ಅರಿತುಕೊಳ್ಳುವುದು.

 

15)ಅಭೇದ ದಶ೯ನಮ್-ತಾನೂ ಪರಮಾತ್ಮನೂ ಒಂದೇ ಎಂದು ಅರಿತುಕೊಳ್ಳುವುದು

 

16)ಅಭ್ಯುದಯ ನಿಃಶ್ರೇಯಸ ಸಾಧನಾನಿ-ಸ್ವಗಾ೯ದಿ ಫಲಕ್ಕೂ ,ಪರಮ ಪುರುಷಾಥ೯ಕ್ಕೂ ಸಾಧನಗಳು.

 

17)ಅಮಾನಿತ್ವಾದಿ ಗಣಃ-ಅಮಾನಿತ್ವವೇ ಮುಂತಾದ ಜ್ಞಾನಸಾಧನಗಳ ಗುಂಪು.

 

18)ಅವಗತಿ-ಜ್ಞಾನ,ಪ್ರಮಾಣದ ಫಲವಾದ ಅರಿವು.

 

1)ಅವಗತ್ಯವಸಾನ ಪ್ರತ್ಯಯ:ವಸ್ತುವಿನ ಅರಿವಿನಲ್ಲಿ ಕೊನೆಗಾಣುವ ಅಂತಃಕರಣದ ವೃತ್ತಿ.

 

20)ಅವಗಂತಾ-ಅರಿತುಕೊಳ್ಳುವವನು.

 

21)ಅವಿದ್ಯಾ-ತಪ್ಪು ತಿಳಿವಳಿಕೆ,ಆತ್ಮನ ಸ್ವರೂಪವನ್ನು ತಪ್ಪಾಗಿ ತಿಳಿದುಕೊಂಡಿರುವವನು.

 

22)ಅವಿದ್ಯಾದ್ಯಾರೋಪಿತ-ಅವಿದ್ಯಾಕಾಯ೯,ಅವಿದ್ಯಾಕೃತ-ಆತ್ಮನನ್ನು ತಪ್ಪಾಗಿ ತಿಳಿದುಕೊಂಡಿದ್ದರಿಂದ

ಕಲ್ಪಿಸಿಕೊಂಡಿರುವ.

 

23)ಅವ್ಯಾಕೃತ-ನಾಮರೂಪಗಳೆಂದು ವಿಂಗಡವಾಗದ,ಸೃಷ್ಟಿಸಲ್ಪಡದ,

 

24)ಅಶನಾಯಾದಿ ವಜಿ೯ತ-ಹಸಿವು ಬಾಯಾರಿಕೆ,ಮುಪ್ಪು-ಮರಣ,ಶೋಕಮೋಹ ಇವುಗಳಿಲ್ಲದ ಪರಮಾತ್ಮ

 

25)ಅಸಂಸಗೀ೯:ಯಾವುದರ ಸಂಬಂಧವೂ ಇಲ್ಲದ,ಅಸಂಗನಾದ.

 

26)ಅಸಂಸಾರೀ;ಜನನಮರಣಾದಿ ಸಂಸಾರವಿಲ್ಲದ ಪರಮಾತ್ಮ

 

27)ಅಸತ್ವಮ್,ನಾಸ್ತಿತ್ವಮ್-ನಿಜವಾಗಿಲ್ಲದ,ತೋರಿಕೆಯ,

 

28) ಅಹಂ ಪ್ರತ್ಯಯವಿಷಯ-ನಾನು ಎಂಬ ಅರಿವಿನಿಂದ ತಿಳಿದು ಬರುವ ಆತ್ಮ

 

2)ಅಸಂಹತ-ಮತ್ತೊಂದರೊಡನೆ ಸೇರಿಕೊಂಡು  ತಮಗಿಂತ ಬೇರೆಯಾದವನ ಪ್ರಯೋಜನಕ್ಕಾಗಿ ಕೆಲಸ ಮಾಡದ ಆತ್ಮ.

 

30)ಅಹಂಪ್ರತ್ಯಯ-ಅಂತಃಕರಣದ ವೃತ್ತಿಗಳಾದ  ನೀಲ ಪೀತಾದಿ ಪ್ರತ್ಯಯಗಳು.

 

31)ಅಹಿಂಸಾದಯ-ಯೋಗಸೂತ್ರದಲ್ಲಿ ಹೇಳಿರುವ ಅಹಿಂಸೆ ಮುಂತಾದ ಯಮಗಳು.

 

32)ಆಕಾಶಃ-ಪಂಚಭೂತಗಳಲ್ಲೊಂದು.

 

33)ಆಗಂತುಕ-,ಸಹಜವಲ್ಲದ,ನಡುವೆ ಬಂದಿರುವ,ಅನಿರೀಕ್ಷಿತ.

 

34)ಆಚಾಯ೯-ತತ್ವವನ್ನು ತಾನೂ ತಿಳಿದುಕೊಂಡು ಶಾಸ್ತ್ರಕ್ಕನುಗುಣವಾಗಿ ಬೋಧಿಸಬಲ್ಲ ಗುರು.

 

35)ಆತ್ಮ-ಇಈವ ಸ್ವರೂಪ,ಪರಮಾತ್ಮ.

 

36)ಆತ್ಮೈಕ್ಯಮ್- ಆತ್ಮಬು ಒಬ್ಬನೇ ಎಂಬುದು.

 

37)ಆವಿಭಾವ ತಿರೋಭಾವ ವಜಿ೯ತ -ತೋರಿಕೊಳ್ಳುವುದು ಮರೆಯಾಗುವುದು ಎಂಬ ವಿಕಾರವಿಲ್ಲದ.

 

38)ಇತರೇತರಾಧ್ಯಾರೋಪಣಾ-ಎರಡುವಸ್ತುಗಳನ್ನು ಒಂದರಲ್ಲೊಂದನ್ನು ಕಲ್ಪಿಸುವುದು.ಆತ್ಮನನ್ನೂ ಅನಾತ್ಮನನ್ನೂ  ಒಂದರಲ್ಲೊದನ್ನು ಹುಟ್ಟುಗಟ್ಟುವ ಅಧ್ಯಾಸ.

 

3)ಇಂದ್ರಿಯಾಣಿ-ಇಂದ್ರಿಯಗಳು

 

40)ಇಷ್ಟಾನಿಇಚ್ಟಪ್ರಾಪ್ತಿ  ಪರಿಹಾರೋಪಾಯಃ-ಬೇಕಾದದ್ದನ್ನು ಪಡೆದುಕೊಳ್ಳುವುದಕ್ಕೂ  ಬೇಡವಾದ್ದನ್ನು ತೊಲಗಿಸಿಕೊಳ್ಳವುವುದಕ್ಕೂ  ಸಾಧನ.

 

41)ಉಪಸನ್ನಃ-ಶಾಸ್ತ್ರದಲ್ಲಿ ವಿಹಿತವಾಗಿರುವಂತೆ  ಗುರುವಿನ ಬಳಿಗೆ ಶಿಷ್ಯನಾಗಿ ಬಂದವನು.

 

42)ಏಕರಸಃ-ಮತ್ತೊಂದರ ಮಿಶ್ರವಿಲ್ಲದೆ  ಒಂದೇ ಜಾತಿಯಾಗಿರುವ

 

43)ಏಷಣಾ-ಪುತ್ರ ವಿತ್ತ ಲೋಕ-ಇವುಗಳ ಬಯಕೆ.

 

44)ಏಕದೇಶೋಪಲಬ್ಧಿಃ-ಸ್ವಲ್ಪಭಾಗವನ್ನು ಅರಿಯುವುದು

 

45)ಕಮ೯ಸಾಧನಾನಿ-ಯಜ್ಞೋಪವೀತಾಗಿಗಳು.

 

46)ಕಮೋ೯ಪದಾನಮ್-ಕಮ೯ವನ್ನು ಮಾಡುವುದು, ಕಮ೯ವನ್ನು ಸ್ವೀಕರಿಸುವುದು.

 

47)ಕಾದಾಚಿತ್ಕಸಿಧ್ಧಿಃ-ಯವಗಲೂ ಇಲ್ಲದೆ ಯಾವಾಗಲೋ  ಪ್ರಮಾಣದಿಂದ ಸಿದ್ಧವಾಗತಕ್ಕದ್ದು.

 

48)ಕಾಯ೯ಕರಣಾನಿ- ದೇಹವೂ ಇಂದ್ರಿಯಗಳೂ.

 

4)ಕೂಟಸ್ಥ -ಯಾವ ವಿಕಾರವೂ ಇಲ್ಲದೆ ಇದ್ದಂತಿರುವ(ಕಮ್ಮಾರನ ಅಡಿಗಲ್ಲಿನಂತೆ ಸ್ಥಿರವಾಗಿರುವ).

 

50)ಕೂಟಸ್ಥನಿತ್ಯ-ಮಾಪ೯ಡದೆಯೂ ನಾಶವಾಗದೆಯೂ ಇರುವುದು.

 

51)ಕ್ಷೇತ್ರಮ್-ಅನತ್ಮವಾದ ದೇಹಾದಿ ವಿಷಯ

 

52)ಘಟೀಯಂತ್ರಮ್-ನೀರಿನಪಾತ್ರೆಯನ್ನು ಬಾವಿಗೆ ಬಿಡುವುದಕ್ಕೂ  ಎತ್ತುವುದಕ್ಕೂ ಉಪಯೋಗಿಸುವ  ರಾಟೆ.

 

53)ಚಿತಿಮತ್,ಚೈತನ್ಯಂ-ಚೈತನ್ಯವುಳ್ಳದ್ದು,,ಆತ್ಮ

 

54)ಚಿತ್ತಪ್ರಚಾರಾಃ-ಮನಸ್ಸಿನ ವೃತ್ತಿಗಳು.

 

55)ಜಗದ್ಬೀಜಭೂತೇ-ನಾಮರೂಪಗಳಿಂದ ವಿಂಗಡವಾಗಿರುವ  ಜಗತ್ತಿಗೇ ಉಪಾದಾನ ಕಾರಣವಾಗಿರುವ ಅವ್ಯಕ್ತ ನಾಮರೂಪಗಳು.

 

56)ಜಾತ್ಯನ್ವಯ ಸಂಸ್ಕಾರ ವಜಿ೯ತಃ-ಜಾತಿ,ವಂಶ,ಬ್ರಹ್ಮಚಯಾ೯ಶ್ರಮ ಸಂಸ್ಕಾರ -ಇವುಗಳಿಲ್ಲದ ಆತ್ಮ.

 

57)ಜ್ಞಾನಮ್-ಆತ್ಮನನ್ನು ಅರಿತುಕೊಳ್ಳುವುದು.

 

58)ತತ್ತ್ವಾನ್ಯತ್ವಾಭ್ಯಾಮ್-ಪರಮಾತ್ಮನೆಂದಾಗಲೀ ಅವನಿಗಿಂತ ಬೇರೆಯವನೆಂದಾಗಲೀ ಗೊತ್ತುಪಡಿಸಿ ಹೇಳಲಿಕ್ಕಾಗದ್ದು.

 

5)ತಲಮಲಿನತ್ವಮ್-ಆಕಾಶದಲ್ಲಿ ಕಲ್ಪಿಸಿದ ತಳದ ಕಪ್ಪು.

 

60)ತಿಮಿರದೃಷ್ಟಿ-ಪರೆಗಣ್ಣಿನವನು(ಅವನು ನೋಡುವ ಅನೇಕ ಚಂದ್ರರು ದ್ವೈತಕ್ಕೆ ದೃಷ್ಟಾಂತ)

 

61)ದೃಷ್ಟಾದೃಷ್ಟಭೋಗಾಃ-ಕಾಣಬಹುದಾದ( ಲೋಕದ) ಕಾಣಲಿಕ್ಕಾಗದ(ಪರಲೋಕದ) ಭೋಗಗಳು.

 

62)ದೇವಃ-ಪರಮಾತ್ಮ

 

63)ಧಮಾ೯ಧಮೌ೯-ಬೇರೆ ಬೇರೆಯ ಶರೀರಕ್ಕೆ ಕಕಾರಣವಾದ ಪುಣ್ಯ ಪಪಗಳು.

 

 

64)ನಾಮರೂಪ-ಆಕಾಶವೇ ಮುಂತಾದ ಜಗತ್ತಿನ  ಮೂಲರೂಪವಾದ  ನಾಮ ಮತ್ತು ರೂಪಗಳು.

 

65)ನಿತ್ಯಾವಗತಿ ಸ್ವರೂಪಃ,ಚೈತನ್ಯ ಸ್ವರೂಪಃ-ನಿತ್ಯವಾಗಿರುವ ಅರಿವಿನ ಸ್ವರೂಪದ ಆತ್ಮನು.

 

66)ನಿವಿ೯ಶೇಷತ್ವಮ್-ಇಂಥದ್ದು ಅಂಥದ್ದು ಎಂಬ  ವಿಶೇಷವಿಲ್ಲದಿರುವುದು.

 

67)ಪಂಚಮಹಾಭೂತಾನಿ- ಆಕಾಶಾದಿ ಸೂಕ್ಷ್ಮ ಭೂತಗಳು.

 

68)ಪರಮಾತ್ಮ,ಪರಬ್ರಹ್ಮ-ಪರಮಾಥ೯ವಾಗಿರುವ ಅಪರಿಚ್ಛಿನ್ನ ಚೈತನ್ಯರೂಪವಾದ ಆತ್ಮನು.

 

6)ಪರಮಥ೯ದಶ೯ನಮ್-ನಿಜವಾಗಿರುವ ಜ್ಞಾನವು.ಅದ್ವೈತ ಜ್ಞಾನವು.

 

70)ಪರಮಾಥ೯ದಶೀ೯-ನಿಜವಾದ ಜ್ಞಾನವುಳ್ಳವನು,ಅದ್ವೈತ ಜ್ಞಾನಿ.

 

71)ಪರಾಥ೯-ಮತ್ತೊಂದಕ್ಕಾಗಿರುವ,ಸ್ವತಂತ್ರವಲ್ಲದ ಅನಾತ್ಮ.

 

72)ಪರಿಚ್ಛಿತ್ತಿ-ಗೊತ್ತುಪಡಿಸಿ ಅರಿತುಕೊಳ್ಳುವುದು.

 

73)ಪರಿವ್ರಾಟ್-ಸನ್ಯಾಸಿ ಸವ೯ಕಮ೯ಗಳನ್ನೂ ಕಮ೯ಸಾಧನಗಳನ್ನೂ ತೊರೆದ ಮುಮುಕ್ಷು.

 

74)ಪರಿಸಂಖ್ಯಾನಮ್-ತತ್ವವನ್ನು ಮನದಲ್ಲಿಯೇ ಚಿಂತಿಸಿಕೊಳ್ಳುವುದು.

 

75) ಪ್ರತ್ಯಕ್ಷ:ಎದುರಿಗಿರುವ,ಅನುಭವಕ್ಕೆ ಗೋಚರವಾಗಿರುವ

 

76)ಪ್ರತ್ಯಕ್ಷಾದೀನಿ-ಪ್ರತ್ಯಕ್ಷ,ಅನುಮಾನ ಮುಂತಾದ  ಶಬ್ದೇತರ ಪ್ರಮಾಣಗಳು.

 

77)ಪ್ರತ್ಯಯಃ:ಅಂತಃಕರಣದ ವೃತ್ತಿಗಳು.

 

78)ಪ್ರಮಾಣಮ್-ಅರಿಯುವುದಕ್ಕೆ ಸಾಧನವಾದ  ಪ್ರತ್ಯಕ್ಷವೇ ಮುಂತಾದದ್ದು.

 

7)ಪ್ರಮಾಣ ನಿರಪೇಕ್ಷ- ಪ್ರಮಾಣವನ್ನು ಬಯಸದೆ ಸಿದ್ಧವಾಗುವ.

 

80)ಪ್ರಮಾಣಾಪೇಕ್ಷ-ಪ್ರಮಾಣಗಳಿಂದಲೇ ಸಿದ್ಧವಾಗುವ

 

81)ಪ್ರಮಾ-ಪ್ರಮಾಣದಿಂದಾಗುವ ಅರಿವು.

 

82)ಪ್ರಮೇಯಮ್-ಪ್ರಮಾಣಕ್ಕೆ ಗೋಚರವಾದದ್ದು,ವಿಷಯ

 

83)ಪ್ರಸಿದ್ಧ-ಪ್ರಮಾಣದಿಂದ ಅಥವಾ ತಾನೇ ಸಿದ್ಧವಾಗಿರುವ

 

84)ಫಲಮ್,ಪ್ರಮಾಣಫಲಮ್-ಪ್ರಮಾಣದವ್ಯಾಪಾರದ ಕೊನೆಯಲ್ಲಿ ಕಾಣಿಸಿಕೊಳ್ಳುವ ಅರಿವು.

 

85)ಫೇನಸ್ಥಾನೀಯೇ-ನೀರಿಗಿಂತ ಬೇರೆಯೆಂದಾಗಲೀ  ಬೇರೆಯಲ್ಲವೆಂದಾಗಲೀ ಹೇಳುವುದಕ್ಕೆ ಬಾರದಿ

ರುವ  ನೊರೆಯಂತೆ  ಪರಮಾತ್ಮನಿಂದ ಬೇರೆಯೆಂದು  ಅಥವಾ ಬೇರೆಯಲ್ಲವೆಂದು ಹೇಳುವದಕ್ಕಾಗದಿರುವ ನಾಮರೂಪಗಳು.

 

86)ಬಲ್ಯುಪಹಾರ ನಮಸ್ಕಾರಾದಯಃ-ತನಗಿಂತ ಬೇರೆಯೆಂದು ಭಾವಿಸುವ  ಪರಮೇಶ್ವರನ ಆರಾಧನೆಗೆ ಉಪಯೋಗಿಸು ಬಲಿಯೇ ಮುಂತಾದ ಸಾಧನಗಳು.

 

87)ಬಾಧ್ಯ-ಜ್ಞಾನದಿಂದ ಅಸತ್ಯವಾಗಿತೋರುವ

 

88)ಬೌದ್ಧ ಪ್ರತ್ಯಯ-ಅಂತಃಕರಣದಲ್ಲಾಗುವ ವೃತ್ತಿ.

 

8)ಬ್ರಹ್ಮ-ಪರಮಾತ್ಮ

 

0)ಬ್ರಹ್ಮವಿತ್-ಬ್ರಹ್ಮಜ್ಞಾನಿ

 

1)ಬ್ರಹ್ಮವಿದ್ಯಾ-ಬ್ರಹ್ಮದ ಜ್ಞಾನ.

 

2)ಬ್ರಹ್ಮಣಿಸ್ಥಿತಃ-ಬ್ರಹ್ನವೇ ತಾನೆಂಬ  ಬುದ್ಧಿಯಿಂದ ಅದರಲ್ಲಿ ನೆಲೆನಿಂತವನು.

 

3)ಭಾವರೂಪ-ಕ್ರಿಯಾರೂಪವಾದ

 

4)ಭಿನ್ನಜಾತ್ಯನ್ವಯಮ್ ಸಂಸ್ಕಾರಮ್-ಬೇರೆ ಬೇರೆಯ ಜಾತಿ,ವಂಶ,ಕಮ೯ದಿಂದಾಗುವ ಸಂಸ್ಕಾರ-ಇವುಗಳುಳ್ಳ ಶರೀರ

 

5)ಭೇದದಶ೯ನಮ್,ಭೇದ ಪ್ರತಿಪತ್ತಿಃ-ಭೇದವನ್ನು ಸತ್ಯವೆಂದು ತಿಳಿಯುವ ತಪ್ಪು ತಿಳುವಳಿಕೆ.

 

6)ಮನಃ-ಅಂತಃಕರಣ

 

7)ಮಿಥ್ಯಾಜ್ಞಾನಮ್-ತಪ್ಪು ತಿಳುವಳಿಕೆ.

 

8)ಮಿಥ್ಯಾಧ್ಯಾರೋಪಣ-ಹುಸಿವಸ್ತುವನ್ನೇ ಕಲ್ಪಿಸಿಕೊಳ್ಳುವುದು.

 

೯೯)ಮುಮುಕ್ಷುಃ -ಮೋಕ್ಷವನ್ನು ಬಯಸುವವನು

 

100)ಮೋಕ್ಷಃ-ಸಂಸಾರಭಯದಿಂದ ಬಿಡುಗಡೆ

 

101)ಲಬ್ದಾಗಮಃ-ಸಾಂಪ್ರದಯಿಕವಾದ ಉಪದೇಶವನ್ನು ಪಡೆದವನು.

 

102)ವಿದ್ಯಾ-ತಿಳುವಳಿಕೆ -ಬ್ರಹ್ಮಜ್ಞಾನ

 

103)ವಿದ್ಯಾಸಂತತಿಃ-ವಿದ್ಯೆಯು ಗುರು ಶಿಷ್ಯ ಸಂಪ್ರದಾಯದಿಂದ ಒಂದೇಸಮನೆ ಮುಂದೆ ಸಾಗುವುದು.

 

104)ವಿಷಯ-ಶಬ್ದಾದಿ ಇಂದ್ರಿಯಾಥ೯ಗಳು

 

105)ಶಾಸ್ತ್ರಮ್-ವೇದ

 

106)ಶುಕ್ತಿಕಾಯಾಂ ರಜತಮ್-ಕಪ್ಪಚಿಪ್ಪಿನಲ್ಲಿ ಹುಟ್ಟುಗಟ್ಟಿದ ಬೆಳ್ಳಿ.

 

107)ಸಂಸಾರ-ಹುಟ್ಟುಸಾವುಗಳು,ಎಚ್ಚರಕನಸುಗಳು

 

108)ಸಂಸಾರಗಮನಂ-ಸಂಸಾರವನ್ನು ಹೊಂದುವುದು.

 

10)ಸಂಸಾರೀ-ಸಂಸರದಲ್ಲಿ ತೊಳಲುತ್ತಿರುವ ಜೀವ

 

110)ಸಂಸ್ಕಾರ-ಮಂತ್ರದಿಂದಲೂ ಕಮ೯ದಿಂದಲೂ ಆಗುವ ಗುಣವಿಶೇಷ

 

111)ಸಂಹತ-ಮತ್ತೊಂದರೊಡನೆ ಸೇರಿಕೊಂಡು  ತನಗಿಂತ ಬೇರೆಯಾದದ್ದರ ಪ್ರಯೋಜನಕ್ಕಾಗಿರುವ ವಸ್ತು.

 

112)ಸಂಘಾತ-ಸಂಹತವಾದ ಪರತಂತ್ರವಾದ ದೇಹ,ಇಂದ್ರಿಯಾದಿಗಳ ಗುಂಪು.

 

113)ಸಮ್ಯಜ್ಞಾನಮ್-ಸರಿಯಾದ ತಿಳುವಳಿಕೆ,ಆತ್ಮಜ್ಞಾನ

 

114)ಸವಾ೯ತ್ಮಾ-ಎಲ್ಲರಿಗೂ ಆತ್ಮವಾಗಿರುವ ಪರಮಾತ್ಮ

 

115)ಸಾದನಸಾಧ್ಯ-ಸಾಧನದಿಂದ ಪಡೆಯತಕ್ಕ ಅನಿತ್ಯ ಫಲ

 

116)ಸಾಧ್ಯಸಾಧನೇ-ಪುತ್ರ,ಕಮ೯,ಉಪಸನೆ -ಎಂಬ ಸಾಧನೆ,ಮನುಷ್ಯಲೋಕ,ಪಿತೃಲೋಕ,ದೇವಲೋಕ-ಎಂಬ ಸಾಧನೆ.

 

117)ಸಿದ್ಧಿಃ-ಪ್ರಮಾಣದ ಫಲವಾದ ಅರಿವು.

 

118)ಸುಷುಪ್ತಿಃ-ಅರಿವಿಲ್ಲದ ಗಾಢನಿದ್ರೆ

 

11)ಸ್ಮøತಿಃ-ಶ್ರುತ್ಯಥ೯ವನ್ನು ತಿಳಿಸುವ  ಪೌರುಷೇಯ ಗ್ರಂಥವಿಶೇಷ

 

120)ಸ್ವತಃಸಿದ್ಧ,ಸ್ವಯಂಸಿದ್ಧ.ಪ್ರಮಾಣಿಕ-ಪ್ರಮಾಣವನ್ನು ಬಯಸದೆ ತಾನೇ ಸಿದ್ಧವಾಗಿರುವ ಆತ್ಮ

 

121)ಸ್ವತಃಸ್ಸಿದ್ಧಿಃ,ನಿತ್ಯಸಿದ್ಧಃ-ಪ್ರಮಾಣವನ್ನು ಬಯಸದೆ ತಾನೇ ಸಿದ್ಧವಾಗುವಿಕೆ.

 

122)ಸ್ವಭಾವಃ-ತನ್ನ ಸ್ವರೂಪ

,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,ಸಂಪೂಣ೯ಂ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,