Monday, 28 September 2020
ಮೂರನೆಯ ಅಧ್ಯಾಯ(ಮಧುವಿದ್ಯೆ):
ಮೊದಲನೆಯ ಖಂಡ:
1)ಓಂ. ಆದಿತ್ಯನೇ ದೇವತೆಗಳ ಮಧು.ಈ ಮಧುವಿಗೆ ದ್ಯುಲೋಕವೇ ಅಡ್ಡತೊಲೆ.ಅಂತರಿಕ್ಷವೇ ಜೇನುಗೂಡು.ರಶ್ಮಿಗಳಲ್ಲಿರುವ ಪ್ರಕಾಶಮಾನವಾದ ಜಲಬಿಂದುಗಳೇ ಮೊಟ್ಟೆಗಳು.(ಪುಟ 115)
2)ಆದಿತ್ಯನು ದೇವತೆಗಳಿಗೆ ಜೇನುತುಪ್ಪದಂತೆ ಮೋದವನ್ನುಂಟು ಮಾಡುವುದರಿಂದ ಮಧು.
3)ಆದಿತ್ಯನ ಪೂವ೯ದಿಕ್ಕಿನ ರಶ್ಮಿಗಳು ಅವನ ಪೂವ೯ದ ಮಧುನಾಡಿಗಳು.
ಋಕ್ಕುಗಳೇ ಜೇನುಹುಳುಗಳು
ಋಗ್ವೇದದಲ್ಲಿ ವಿಹಿತವಾದ ಕಮ೯ವು ಪುಷ್ಪ.
ಆ ಕಮ೯ದಲ್ಲಿ ಪ್ರಯೋಗಿಸುವ ಸೋಮಾಜ್ಯ ಪಯೋರೂಪದ ನೀರೇ ಅಮೃತ.
ಜೇನುಹುಳುಗಳೆನಿಸಿದ ಆ ಈ ಋಕ್ಕುಗಳೇ ಪುಷ್ಪರೂಪವಾದ ಕಮ೯ವನ್ನು ಅಭಿತಪಿಸಿದುವು.
ಹಾಗೆ ಅಭಿತಪ್ತವಾದ ಕಮ೯ಗಳಿಂದ ಯಶಸ್ಸು ತೇಜಸ್ಸು ಇಂದ್ರಿಯ ವೀಯ೯ ಅನ್ನಾದ್ಯ ಎಂಬ ರಸವು ಉಂಟಾಯಿತು. (ಪುಟ 116)
4)ಕಮ೯ದಿಂದಲೇ ರಸವು ಉತ್ಪನ್ನವಾಗುತ್ತದೆ.(ಪುಟ 116)
5) ಆ ರಸವು ಹೊರಟು ಹೋಯಿತು.ಅದು ಅದಿತ್ಯನ ಪಾಶ್ವ೯ದಲ್ಲಿ ಆಶ್ರಯವನ್ನು ಪಡೆಯಿತು.ಆದಿತ್ಯನ ಯಾವ ಈ ಲೋಹಿತ ರೂಪವಿದೆಯೊ ಇದೇ ಅದು.(ಪುಟ 117)
ಎರಡನೆಯ ಖಂಡ:
6)ಆದಿತ್ಯನ ದಕ್ಷಿಣದಿಕ್ಕಿನ ರಶ್ಮಿಗಳು ಅವನ ದಕ್ಷಿಣದ ಮಧು ನಾಡಿಗಳು.ಯಜುಸ್ಸುಗಳೇಜೇನುಹುಳುಗಳು.ಯಜುವೇ೯ದದಲ್ಲಿ ವಿಹಿತವಾದ ಕಮ೯ವು ಪುಷ್ಪ,ಆ ನೀರೇ ಅಮೃತ.(ಪುಟ 117)
7)ಜೇನುಹುಳುಗಳೆನಿಸಿದ ಈ ಯಶಸ್ಸುಗಳೇ ಪುಷ್ಪರೂಪವಾದ ಕಮ೯ವನ್ನು ಅಭಿತಪಿಸಿದವು. ಹಗೆ ಅಭಿತಪ್ತವಾದ ಕಮ೯ದಿಂದ ಯಶಸ್ಸು ತೇಜಸ್ಸು ಇಂದ್ರಿಯ ವೀಯ೯ ಅನ್ನಾದ್ಯ ಎಂಬ ರಸವು ಉಂಟಾಯಿತು.(ಪುಟ 118)
8) ಆ ರಸವು ಹೊರಟು ಹೋಯಿತು.ಅದು ಆದಿತ್ಯನ ಪಾಶ್ವ೯ದಲ್ಲಿ ಆಶ್ರಯವನ್ನು ಪಡೆಯಿತು.ಆದಿತ್ಯನ ಯಾವ ಈ ಶುಕ್ಲ ರೂಪವಿದೆಯೊ ಇದೇ ಅದು.(ಪುಟ118)
ಮೂರನೆಯ ಖಂಡ:
೯)ಈ ಆದಿತ್ಯನ ಪಶ್ಚಿಮದಿಕ್ಕಿನ ರಶ್ಮಿಗಳು ಅವನ ಪಶ್ಚಿಮದ ಮಧುನಾಡಿಗಳು.ಸಾಮಗಳೇ ಜೇನುಹುಳುಗಳು.ಸಾಮವೇದದಲ್ಲಿ ವಿಹಿತವಾದ ಕಮ೯ವು ಪುಷ್ಪ,ಆ ನೀರೇ ಅಮೃತ(ಪುಟ 118)
10)ಜೇನುಹುಳುಗಳೆನಿಸಿದ ಈ ಸಾಮಗಳೇ ಪುಷ್ಪರೂಪವಾದ ಕಮ೯ವನ್ನು ಅಭಿತಪಿಸಿದವು.ಹಾಗೆ ಅಭಿತಪ್ತವಾದ ಕಮ೯ದಿಂದ ಯಶಸ್ಸು ಇಂದ್ರಿಯ ವೀಯ೯ ಅನ್ನಾದ್ಯ ಎಂಬ ರಸವು ಉಂಟಾಯಿತು.(ಪುಟ 11೯)
11)ಆ ರಸವು ಹೊರಟು ಹೋಯಿತು.ಅದು ಆದಿತ್ಯನ ಪಾಶ್ವ೯ದಲ್ಲಿ ಆಶ್ರಯವನ್ನು ಪಡೆಯಿತು.ಆದಿತ್ಯನ ಯಾವ ಈ ಕರಿಯ ರೂಪವಿದೆಯೊ ಇದೇ ಅದು.(ಪುಟ 11೯)
ನಾಲ್ಕನೆಯ ಖಂಡ:
12)ಇನ್ನು ಈ ಆದಿತ್ಯನ ಉತ್ತರ ದಿಕ್ಕಿನ ರಶ್ಮಿಗಳು.ಅವನ ಉತ್ತರದ ಮಧುನಾಡಿಗಳು.ಅಥಯ೯ ಅಂಗಿರಸ್ಸುಗಳೇ ಜೇನುಹುಳುಗಳು.ಇತಿಹಾಸ ಪುರಾಣಗಳು ಪುಷ್ಪ,ಆ ನೀರೇ ಅನೃತ.(ಪುಟ 120)
13)ಜೆನು ಹುಳುಗಳೆನಿಸಿದ ಆ ಈ ಅಥವ೯ ಅಂಗಿರಸ್ಸುಗಳೇ ಪುಷ್ಪರೂಪವಾದ ಇತಿಹಾಸ-ಪುರಾಣಗಳನ್ನು ಅಭಿತಪಿಸಿದವು.ಹಾಗೆ ಅಭಿತಪ್ತವಾದ ಅವುಗಳಿಂದ ಯಶಸ್ಸು ತೇಜಸ್ಸು ಇಂದ್ರಿಯ ವೀಯ೯ ಅನ್ನಾದ್ಯ ಎಂಬ ರಸವು ಉಂಟಾಯಿತು.(ಪುಟ120)
14) ಆ ರಸವು ಹೊರಟು ಹೋಯಿತು.ಅದು ಆದಿತ್ಯನ ಪಾಶ್ವ೯ದಲ್ಲಿ ಆಶ್ರಯವನ್ನು ಪಡೆಯಿತು.ಆದಿತ್ಯನ ಯಾವ ಈ ಅತ್ಯಂತ ಕರಿಯ ರೂಪವಿದೆಯೊ ಇದೇ ಅದು.(ಪುಟ 120)
ಐದನೆಯ ಖಂಡ:
15)ಆದಿತ್ಯನ ಊಧ್ವ೯ಭಾಗದ ರಶ್ಮಿಗಳು ಅವನ ಊಧ್ವ೯ದ ಮಧುನಾಡಿಗಳು. ಉಪನಿಷತ್ತಿನ ರಹಸ್ಯವಾದ ಆದೇಶಗಳೇ ಜೇನುಹುಳುಗಳು.ಪ್ರಣವವೇ ಪುಷ್ಪ.ಆ ನೀರೇ ಅಮೃತ.(ಪುಟ 121)
16)ಆ ಈ ರಹಸ್ಯವಾದ ಆದೇಶಗಳೇ ಪುಷ್ಪರೂಪವಾದ ಪ್ರಣವವನ್ನು ಅಭಿತಪಿಸಿದವು.ಹಾಗೆ ಅಭಿತಪ್ತವಾದ ಅದರಿಂದ ಯಶಸ್ಸು ತೇಜಸ್ಸು ಇಂದ್ರಿಯ ವೀಯ೯ ಅನ್ನಾದ್ಯ ಎಂಬ ರಸವು ಉಂಟಾಯಿತು.(ಪುಟ 121)
17)ಆ ರಸವು ಹೊರಟು ಹೋಯಿತು.ಅದು ಆದಿತ್ಯನ ಪ್ಆಶ್ವ೯ದಲ್ಲಿ ಆಶ್ರಯವನ್ನು ಪಡೆಯಿತು.ಆದಿತ್ಯಮ ಮಧ್ಯದಲ್ಲಿ ಯಾವ ಇದು ಕ್ಷೋಭಿಸುವಂತೆ ಕಾಣುವುದೊ ಅದೇ ಇದು.(ಪುಟ 122)
18)ಈ ಲೋಹಿತಾದಿ ವಣ೯ವಿಶೇಷಗಳು ರಸಗಳು.ಏಕೆಂದರೆ ವೇದಗಳು ಲೋಕಗಳ ರಸಗಳು ಮತ್ತು ಈ ವಣ೯ವಿಶೇಷಗಳು ಅವುಗಳಿಗೂ ರಸಗಳು.ಈ ಲೋಹಿತಾದಿ -ವಣ೯ವಿಶೇಷಗಳೇ ಅಮೃತಗಳ ಅಮೃತಗಳು.ಏಕೆಂದರೆ ವೇದಗಳು ಅಮೃತಗಳು ಮತ್ತು ಈ ವಣ೯ವಿಶೇಷಗಳು ಅವುಗಳಿಗೂ ಅಮೃತಗಳು.(ಪುಟ 122)
1೯) ವೇದಗಳು ನಿತ್ಯವಾಗಿರುವುದರಿಂದ ಅಮೃತಗಳು.(ಪುಟ 122)
ಆರನೆಯ ಖಂಡ:
20) ದೇವತೆಗಳು ತಿನ್ನುವುದೂ ಇಲ್ಲ,ಕುಡಿಯುವುದೂ ಇಲ್ಲ;ಅಮೃತವನ್ನು ನೋಡಿಯೇ ತೃಪ್ತರಾಗುತ್ತಾರೆ.(ಪುಟ 123)
21)ಧ್ಯೇಯವಾದ ಅಮೃತಗಳನ್ನು ಹೇಳಿದಮೇಲೆ ಈಗ ಅವುಗಳ ಉಪಜೀವಿಗಳಾದ ಗಣಗಳನ್ನು ಉಪಾಸಿಸಬೇಕೆಂದು ಶ್ರುತಿಯು ಹೇಳುತ್ತದೆ.(ಪುಟ 123)
22)ಭೋಗಕಾಲವು ಬರುವವರೆಗೆ ದೇವತೆಗಳು ಉದಾಸೀನರಾಗಿರುತ್ತಾರೆ..ಯಾವಾಗ ಅಮೃತದ ಭೋಗಕಾಲವು ಬರುವುದೊ ಆಗ ಅದರ ಭೋಗಕ್ಕಾಗಿ ಉತ್ಸಾಹಿಗಳಾಗುತ್ತಾರೆ..ಏಕೆಂದರೆ ಉತ್ಸಾಹ ರಹಿತರಿಗೆ ಭೋಗಪ್ರಾಪ್ತಿಯಿಲ್ಲ.(ಪುಟ 123)
23)ಯಾವನು ಈ ಅಮೃತವನ್ನು ಹೀಗೆ ಅರಿತುಕೊಂಡಿರುವನೊ ಅವನು ವಸುಗಳಲ್ಲಿಯೇ ಒಂದಾಗಿ ಅಗ್ನಿಯನ್ನು ಪ್ರಧಾನವಾಗಿ ಮಾಡಿಕೊಂಡು ಇದೇ ಅಮೃತವನ್ನು ನೋಡಿಯೇ ತೃಪ್ತನಾಗುತ್ತಾನೆ.ಅವನು ಇದೇ ರೂಪವನ್ನು ಪ್ರವೇಶಿಸುತ್ತಾನೆ.ಈ ರೂಪದಿಂದಲೇ ಮೇಲಕ್ಕೆ ಏಳುತ್ತಾನೆ.(ಪುಟ 124)
24)ದೇವತೆಗಳ ಧ್ಯೇಯ ಸ್ವರೂಪವನ್ನು ಹೇಳಿದಮೇಲೆಈಗ ಶ್ರುತಿಯು ಧ್ಯಾನವಿಧಿಯನ್ನು ತಿಳಿಸುತ್ತದೆ.(ಪುಟ 124)
25)ಆದಿತ್ಯನು ಎಲ್ಲಿಯವರೆಗೆ ಪೂವ೯ದಲ್ಲಿ ಉದಯಿಸುತ್ತಾನೋ ಮತ್ತು ಪಶ್ಚಿಮದಲ್ಲಿ ಅಸ್ತಮಿಸುತ್ತಾನೊ ಅಲ್ಲಿಯವರೆಗೆ ಉಪಾಸಕನು ವಸ್ತುಗಳ ಅಧಿಪತ್ಯವನ್ನೂ ಸ್ವಾರಾಜ್ಯವನ್ನೂ ಹೊಂದುತ್ತಾನೆ(ಪುಟ 125)
26)ಹೀಗೆ ಅರಿತಿರುವವನು ಅಧಿಪತ್ಯವನ್ನೂ ಮತ್ತು ಸಾಮ್ರಾಡ್- ಭಾವವನ್ನೂ ಪಡೆಯುತ್ತಾನೆ.(ಪುಟ 125)
27)ಚಂದ್ರಮಂಡಲದಲ್ಲಿರುವ ಕೇವಲ ಕಮಿ೯ಯು ಪರತಂತ್ರನಾಗಿ ದೇವತೆಗಳಿಗೆ ಅನ್ನವಾಗುತ್ತಾನೆ.(ಪುಟ 125)
ಏಳನೆಯ ಖಂಡ:
ಎಂಡನೆಯ ಖಂಡ
ಒಂಬತ್ತನೆಯ ಖಂಡ
ಹತ್ತನೆಯ ಖಂಡ
ಹನ್ನೊಂದನೆಯ ಖಂಡ:
28)ಹೀಗೆ ಮಧು ವಿದ್ಯೆಯನ್ನು ಹೇಳಿದ್ದಾಯಿತು.ಈಗ ಅದು ಕ್ರಮೇಣ ಮುಕ್ತಿ ಎಂಬ ಫಲದಲ್ಲಿ ಹೇಗೆ ಕೊನೆಗೊಳ್ಳುತ್ತದೆ ಎಂಬುದನ್ನು ಹೇಳಿದೆ.(ಪುಟ 132)
2೯)ಆದಿತ್ಯನು ತನ್ನ ಉದಯಾಸ್ತಗಳೆಂಬ ಕ್ರಿಯೆಗಳಿಂದ ಪ್ರಾಣಿಗಳಿಗೆ ಅವುಗಳ ಕಮ೯ಕ್ಕನುಸಾರವಾಗಿ ಫಲ ಭೋಗಗಳನ್ನು ಅನುಗ್ರಹಿಸುತ್ತಾನೆ.ಅವುಗಳ ಕಮ೯ ಫಲ ಭೋಗವು ಕ್ಷಯಿಸಿದ ಮೇಲೆ ಆ ಪ್ರಾಣಿ ಸಮೂಹಗಳನ್ನು ತನ್ನಲ್ಲಿಯೇ ಉಪಸಂಹರಿಸಿಕೊಳ್ಳುತ್ತಾನೆ.ಹೀಗೆ ಪ್ರಾಣಿಗಳನ್ನು ಅನುಗ್ರಹಿಸಿದ ಮೇಲೆ ಆದಿತ್ಯನು ತಾನು ಮಾಡುವ ಕ್ರಿಯೆಗಳನ್ನು ಅತಿಕ್ರಮಿಸಿ ಉದಯಾಸ್ತಗಳಿಲ್ಲದ ಏಕನೂ ಅದ್ವಿತೀಯನೂ ಅವಯವರಹಿತನೂ ಆಗಿ ತನ್ನ ಸ್ವರೂಪವಾದ ಬ್ರಹ್ಮದಲ್ಲಿಯೇ ನಿಲ್ಲುತ್ತಾನೆ.(ಪುಟ 132)
30)'ಆ ಬ್ರಹ್ಮಲೋಕದಲ್ಲಿ ಉದಯಾಸ್ತಗಳಿಂದ ಉಂಟಾಗುವ ಆಯುಃಕ್ಷಯವಿಲ್ಲ.ಅಲ್ಲಿ ಆದಿತ್ಯನು ಎಂದಿಗೂ ಅಸ್ತಮಿಸುವುದಿಲ್ಲ.ಎಂದಿಗೂ ಉದಯಿಸುವುದಿಲ್ಲ.ಓ ದೇವತೆಗಳೆ,ಈ ಸತ್ಯವಚನಗಳಿಂದ ನಾನು ಬ್ರಹ್ಮಸ್ವರೂಪಕ್ಕೆ ವಿರುದ್ಧವಾಗದಿರಲಿ.(ಪುಟ 133)
31)ಯಾವನು ಈ ಬ್ರಹ್ಮೋಪನಿಷತ್ತನ್ನು ಹೀಗೆ ಅರಿತುಕೊಂಡಿರುವನೊ ವನಿಗೆ ಆದಿತ್ಯನು ಉದಯಿಸುವುದೇ ಇಲ್ಲ.ಅಸ್ತಮಿಸುವುದೇ ಇಲ್ಲ.ಇವನಿಗೆ ಯಾವಾಗಲೂ ಹಗಲೇ ಆಗಿರುತ್ತದೆ.(ಪುಟ133)
32)ಹಿರಣ್ಯಗಭ೯ನು ಈ ಮಧುಜ್ಞಾನವನ್ನು ಪ್ರಜಾಪತಿಗೆ ಹೇಳಿದನು.ಪ್ರಜಾಪತಿಯು ಮನುವಿಗೂ ಮನುವು ಪ್ರಜೆಗಳಿಗೂ ಹೇಳಿದನು.ಮಧುಜ್ಞಾನವನ್ನು ಉದಧಾಲಕ ಅರುಣಿ ಎಂಬ ಜ್ಯೇಷ್ಟಪುತ್ರನಿಗೆ ಅವನ ತಂದೆಯು ಹೇಳಿದನು.(ಪುಟ 134)
33)ಈ ಮಧುಜ್ಞಾನವನ್ನು ತಂದೆಯು ಜ್ಯೇಷ್ಟಪುತ್ರನಿಗೆ ಅಥವಾ ಯೋಗ್ಯನಾದಶಿಷ್ಯನಿಗೆ ಹೇಳಬಹುದು.(ಪುಟ 134)
34)ಈ ಮಧುಜ್ಞಾನವನ್ನು ಬೇರೆ ಯಾರಿಗೂ ಉಪದೇಶಿಸಕೂಡದು.ಏಕೆಂದರೆ ಸಮುದ್ರ ಪರಿವೇಷ್ಟಿತವೂ ಧನದಿಂದ ಪೂಣ೯ವೂ ಆದ ಈ ಪೃಥ್ವಿಯನ್ನು ಯಾರಾದರೂ ಆಚಾಯ೯ನಿಗೆ ಕೊಟ್ಟರೆ ಅದಕ್ಕಿಂತಲೂ ಈ ವಿದ್ಯೆಯೇ ಶ್ರೇಷ್ಠವಾಗಿರುತ್ತದೆ.(ಪುಟ 134)
ಹನ್ನೆರಡನೆಯ ಖಂಡ (ಗಾಯತ್ರೀ ಉಪಾಸನೆ):
35)ಇಲ್ಲಿ ಏನೇನಿದೆಯೊ ಅದೆಲ್ಲವೂ ಗಾಯತ್ರಿಯೇ.ವಾಕ್ಕೇ ಗಾಯತ್ರಿ.ಏಕೆಂದರೆ ವಾಕ್ಕೇ ಪ್ರಾಣಿಗಳನ್ನೆಲ್ಲಾ ಹೆಸರಿಸುತ್ತದೆ.ಇಲ್ಲಿ ಗಾಯತ್ರಿ ದ್ವಾರದಿಂದ ಬ್ರಹ್ಮವನ್ನು ಉಪದೇಶಿಸುವುದಕ್ಕೆ ಅನೇಕ ಕಾರಣಗಳಿವೆ.
1) ದೇವತೆಗಳು ತ್ರಿಷ್ಟುಪ್,ಜಗತೀ ಮೊದಲಾದವುಗಳ ಮೂಲಕ ಸೋಮನನ್ನು ತರಲು ವಿಫಲರಾದಾಗ ಗಾಯತ್ರಿಯು ಅದನ್ನು ದ್ಯುಲೋಕದಿಂದ ತಂದಿತು.
2)ಜಗತೀ ತ್ರಿಷ್ಟುಪ್ ಈ ಛಂದಸ್ಸುಗಳು ತಮ್ಮ ಕೆಲವು ಅಕ್ಷರಗಳನ್ನು ಬಿಟ್ಟು ಬಂದಾಗ ಗಾಯತ್ರಿಯು ಅವುಗಳನ್ನು ತಂದಿತು.
3)ಇದು ಎಲ್ಲ ಸವನಗಳನ್ನೂ ವ್ಯಾಪಿಸಿಕೊಂಡಿದೆ.
4) ಇದಕ್ಕೆ ಯಜ್ಞದಲ್ಲಿ ಪ್ರಾಧಾನ್ಯವಿದೆ.
5) ಇದು ಬ್ರಾಹ್ಮಣನಿಗೆ ಸಾರವಾಗಿದೆ.(ಪುಟ 135)
36)ಈ ಗಾಯತ್ರಿಯೇ ಈ ಪೃಥ್ವಿ.ಏಕೆಂದರೆ ಈ ಪೃಥ್ವಿಯಲ್ಲಿಯೇ ಭೂತವೆಲ್ಲವೂ ಪ್ರತಿಷ್ಠಿತವಾಗಿದೆ ಮತ್ತು ಇದನ್ನು ಅತಿಕ್ರಮಿಸುವುದಿಲ್ಲ.(ಪುಟ 135)
37)ಆ ಪೃಥ್ವಿಯೇ ಪುರುಷನಲ್ಲಿರುವ ಈ ಶರೀರವು.ಏಕೆಂದರೆ ಇದರಲ್ಲಿ ಈ ಪ್ರಾಣಗಳು ಪ್ರತಿಷ್ಠಿತವಾಗಿವೆ ಮತ್ತು ಇದನ್ನು ಅತಿಕ್ರಮಿಸುವುದಿಲ್ಲ.(ಪುಟ 136)
38)ಪುರುಷನಲ್ಲಿರುವ ಈ ಶರೀರವೇ ಪುರುಷನಲ್ಲಿರುವ ಈ ಹೃದಯವು.ಏಕೆಂದರೆ ಇದರಲ್ಲಿ ಈ ಪ್ರಾಣಿಗಳು ಪ್ರತಿಷ್ಠಿತವಾಗಿವೆ ಮತ್ತು ಇದನ್ನು ಅತಿಕ್ರಮಿಸುವುದಿಲ್ಲ.(ಪುಟ 136)
3೯)ಈ ಗಾಯತ್ರಿಯು ನಾಲ್ಕು ಪಾದಗಳನ್ನು ಹೊಂದಿದೆ ಮತ್ತು ವಿಧವಗಿದೆ.ಈ ಗಾಯತ್ರೀ ಬ್ರಹ್ಮವು ಈಋಕ್ಕಿನಿಂದ (11.೯0.3) ಉಕ್ತವಾಗಿದೆ.(ಪುಟ ಪುಟ 137)
40)ನಾಲ್ಕು ಪಾದಗಳು ಎಂದರೆ ಆರು ಅಕ್ಷರಗಳುಳ್ಳ ನಾಲ್ಕು ಪಾದಗಳು(ಪುಟ 137)
42) ವಾಕ್ಕು ,ಭೂತ,ಪೃಥ್ವಿ,ಶರೀರ,ಹೃದಯ,ಪ್ರಾನೆಂಬ ರೂಪದಲ್ಲಿ ವಾಕ್ ಪ್ರಾಣಗಳು ಗಾಯತ್ರೀ -ಹೃದಯಗಳ ಸಂಬಂಧವನ್ನು ಭೂತದೊಂದಿಗೆ ತೋರಿಸಲು ಪ್ರಯೋಗಿಸಲ್ಪಟ್ಟಿದ್ದರೂ ಇಲ್ಲಿ ಅವು ಗಾಯತ್ರಿಯ ಪ್ರಕಾರಗಳೆಂದು ತಿಳಿಯಬೇಕು.(ಪುಟ 137)
43)ಇದರ ಮಹಿಮೆಯು ಅಷ್ಟು.ಆದರೆ ಪುರುಷನು ಅದಕ್ಕಿಂತಲೂ ದೊಡ್ಡವನು.ಈ ಜಗತ್ತೆಲ್ಲ ಇವನ ಒಂದು ಪಾದವಾಗಿದೆ.ಇವನ ಅಮೃತವಾದ ಮೂರು ಪಾದಗಳು ದ್ಯುಲೋಕದಲ್ಲಿವೆ.(ಪುಟ 137)
44)ಎಲ್ಲವನ್ನು ತುಂಬಿಕೊಂಡಿರುವುದರಿಂದಲೂ ಪುರ(ಶರೀರ) ದಲ್ಲಿ ಇರುವುದರಿಂದಲೂ ಪುರುಷನು.(ಪುಟ 138)
45) ಆ ಈ ಬ್ರಹ್ಮವೇ ಪುರುಷನ ಹೊರಗಿರುವ ಆಕಾಶವು.ಪುರುಷನ ಹೊರಗಿರುವ ಆಕಾಶವೇ ಪುರುಷನ ಒಳಗಿರುವ ಆಕಾಶವು.ಪುರುಷನ ಒಳಗಿರುವ ಆಕಾಶವೇ ಹೃದಯದಲ್ಲಿರುವ ಆಕಾಶವು.ಹೃದಯದಲ್ಲಿರುವ ಈ ಆಕಾಶವೇ ಪೂಣ೯ವೂ ಅವಿನಾಶಿಯೂ ಆದ ಶ್ರೀಯನ್ನು ಹೊಂದುತ್ತಾನೆ.(ಪುಟ138)
46)ಆಕಾಶವು ಒಂದೇ ಆಗಿದ್ದರೂ ಇದಕ್ಕೆ ಇಲ್ಲಿ ಮೂರು ಭೇದಗಳನ್ನು ಕಲ್ಪಿಸಿದೆ.
1) ಬಾಹ್ಯೇಂದ್ರಿಯ ವಿಷಯವಾದ ಜಾಗ್ರತ ಸ್ಥಾನದಲ್ಲಿರುವ ಭೌತಿಕವಾದ ಆಕಾಶ.
2) ಶರೀರದಲ್ಲಿರುವ ಸ್ವಪ್ನ ಸ್ಥಾನವಾದ ಆಕಾಶ
3)ಹಾದಾ೯ಕಾಶ:ಇಲ್ಲಿ ಯಾವಕಾಮವನ್ನೂ ಬಯಸುವುದಿಲ್ಲ.ಯಾವ ಸ್ವಪ್ನವನ್ನೂ ನೋಡುವುದಿಲ್ಲ.ಆದುದರಿಂದ ಸವ೯ ದುಃಖ ನಿವೃತ್ತಿ ರೂಪವಾದ್ದು ಸುಷಿಪ್ತಿ ಸ್ಥಾನದಲ್ಲಿರುವ ಆಕಾಶವು.(ಪುಟ 13೯)
47)ಹೃದಯದಲ್ಲಿ ಆಕಾಶವನ್ನು ಸಂಕೋಚಗೊಳಿಸಿರುವುದು ಚಿತ್ತ ಸಮಾಧಾನ ಸ್ಥಾನದ ಸ್ತುತಿಗಾಗಿ..ಹೃದಯದಲ್ಲಿ ಮಾತ್ರ ಆಕಾಶವಿದೆಯೆಂದು ತಿಳಿಯಬಾರದು.(ಪುಟ 13೯)
ಹದಿಮೂರನೆಯ ಖಂಡ:
4೯)ಆ ಈ ಹೃದಯಕ್ಕೆ ಐದು ದೇಹ ದ್ವಾರಗಳಿವೆ.
ಹೃದಯದ ಪೂವ೯ ದ್ವಾರವು ಪ್ರಾಣವು.ಅದು ಕಣ್ಣು,ಆದಿತ್ಯನು. ಆ
ಇದನ್ನು ತೇಜಸ್ಸು, ಅನ್ನಾದ್ಯ ಎಂದು ಉಪಾಸಿಸಬೇಕು.ಯಾವನು ಹೀಗೆ ಅರಿತುಕೊಂಡಿರುವನೊ ಅವನು ಅನ್ನಾದನೂ ತೇಜಸ್ವಿಯೂ ಆಗುವನು.(ಪುಟ 13೯)
50)ವಾಯುವು 'ಪ್ರಾಕ್'ಎಂದರೆ ಮುಂದುಗಡೆ 'ಅನಿತಿ'ಬಲಿಸುತ್ತಿರುವುದರಿಂದ ಪ್ರಾಣವೆನಿಸುತ್ತದೆ.(ಪುಟ 140)
51)ಆದಿತ್ಯನಿಂದ ಮಳೆಯೂ ,ಮಳೆಯಿಂದ ಅನ್ನವೂ,ಅನ್ನದಿಂದ ಪ್ರಾಣಿಗಳೂ ಉಂಟಾಗುತ್ತವೆ.ಆದುದರಿಂದ ಆದಿತ್ಯನು ಅನ್ನಕ್ಕೆ ಆದಿಯು.(ಪುಟ 140)
52)'ಆದಿತ್ಯನೇ ಹೊರಗಿನ ಪ್ರಾಣವು' (ಆದಿತ್ಯೋ ಹ ವೈ ಬಾಹ್ಯಪ್ರಾಣಃ) ಎಂದು ಶ್ರುತ್ಹಿಯು ಹೇಳುತ್ತದೆ.(ಪುಟ 140)
53)ಇನ್ನು ಈ ಹೃದಯದ ದಕ್ಷಿಣ ದ್ವಾರವು ವ್ಯಾನವು.ಅದು ಶ್ರವಣೇಂದ್ರಿಯವು.ಅದು ಚಂದ್ರನು.ಈ ವ್ಯಾನವನ್ನು ಶ್ರೀ,ಯಶಸ್ಸು ಎಂದು ಉಪಾಸಿಸಬೇಕು.ಯಾವನು ಹೀಗೆ ಅರಿತುಕೊಂಡಿರುವನೊ ಅವನು ಶ್ರೀಮಂತನೂ ಯಶಸ್ವಿಯೂ ಆಗುತ್ತಾನೆ.(ಪುಟ 141)
54)ಇನ್ನು ಹೃದಯದಲ್ಲಿರುವ ಪಶ್ಚಿಮ ದ್ವಾರವು ಅಪಾನವುಅದು ವಾಗಿಂದ್ರಿಯವು.ಅಗ್ನಿಯು.ಈ ಅಪಾನವನ್ನು ಬ್ರಹ್ಮವಚ೯ಸ್ಸು ,ಅನ್ನಾದ್ಯ ಎಂದು ಉಪಾಸಿಸಬೇಕು.ಯವನು ಹೀಗೆ ಅರಿತುಕೊಂಡಿರುವನೊ ಅವನು ಬ್ರಹ್ಮವಚ೯ಸ್ವಿಯೂ ಅನ್ನಾದನೂ ಆಗುತ್ತಾನೆ.(ಪುಟ 141)
55) ಶ್ರೋತ್ರದಿಂದ ದಿಕ್ಕುಗಳೂ ಚಂದ್ರನೂ ಸೃಷ್ಟವಾಗುತ್ತಾರೆ ಎಂದು ಶೃತಿಯು ಹೇಳುತ್ತದೆ.(ಶ್ರೋತ್ರೇಣ ಸೃಷಾ ದಿಶಶ್ಚ ಎಂದು (ಐ.ಅ.1.7)ಹೇಳುತ್ತದೆ.(ಪುಟ 141)
56)ಅಪಾನವೆಂದರೆ ಮೂತ್ರ-ಪುರೀಷಾದಿಗಳನ್ನು ವಾಯು ವಿಶೇಚ.(ಪುಟ 141)
57)ವಾಕ್ಕೇ ಅಪಾನವೆಂದು ಶ್ರುತಿಯು ಹೇಳುತ್ತದೆ.(5.21.2).ಆದುದರಿಂದ ಅಪಾನ ,ವಾಕ್ಕು,ಅಗ್ನಿ ಇವೆಲ್ಲ ಒಂದೇ ಆಗಿವೆ(ಪುಟ 141)
58) ಅಧ್ಯಯನ-ನಿಮಿತ್ತವಾದ ತೇಜಸ್ಸಿಗೆ ಬ್ರಹ್ಮವಚ೯ಸ್ ಎಂದು ಹೆಸರು.(ಪುಟ 141)
5೯)ಅನ್ನವನ್ನು ನುಂಗುವುದಕ್ಕೆ ಕಾರಣವಾದುದರಿಂದ ಅಪಾನವು ಅನ್ನಾದ.(ಪುಟ 141)
60) ಈ ಹೃದಯದ ಉತ್ತ್ರ ದ್ವಾರವು ಸಮಾನವು.ಅದು ಮನಸ್ಸು.ಅದು ಪಜ೯ನ್ಯನು.ಈ ಸಮಾನವನ್ನು ಕೀತಿ೯ ದೇಹಲಾವಣ್ಯ ಎಂದು ಉಪಾಸಿಸಬೇಕು.ಯವನು ಹೀಗೆ ಅರಿತುಕೊಂಡಿರುವನೊ ಅವನು ಕೀತಿ೯ವಂತನೂ ಕಾಂತಿವಂತನೂ ಆಗುತ್ತಾನೆ.(ಪುಟ 142)
62)ದೇಹದ ಊಧ್ವ೯ದ್ವಾರವು ಉದಾನ.ಅದು ವಾಯು .ಅದು ಆಕಾಶ.ಈ ಉದಾನವನ್ನು ಓಜಸ್ಸೆಂದೂ ಮಹಸ್ಸೆಂದೂ ಉಪಾಸಿಸಬೇಕು.ಯಾವನು ಹೀಗೆ ಅರಿತುಕೊಂಡಿರುವನೊ ಅವನು ಓಜಸ್ವಿಯೂ ಮಹಸ್ವಂತನೂ ಆಗುವನು.(ಪುಟ 142)
63)ಈ ಪಂಚ ಬ್ರಹ್ಮ ಪುರುಷರೇ ಸ್ವಗ೯ಲೋಕದ ದ್ವಾರಪಾಲಕರು.ಯರು ಹೀಗೆ ಅರಿತುಕೊಂಡಿರುವನೊಅವನ ಕುಲದಲ್ಲಿ ವೀರರು ಹುಟ್ಟುತ್ತಾರೆ.(ಪುಟ 146)
64) ಅರಿತುಕೊಳ್ಳುವುದು ಎಂದರೆ ಉಪಾಸನೆಯ ಮೂಲಕ ಇಂದ್ರಿಯಗಳನ್ನು ವಶಪಡಿಸಿಕೊಳ್ಳುವುದು.(ಪುಟ144).
65)ಚೈತನ್ಯಾತ್ಮಜ್ಯೋತಿಯು ನಾಮ ರೂಪಗಳನ್ನು ವಿಂಗಡಿಸಲು ಶರೀರವನ್ನು ಪ್ರವೇಶಿಸಿದೆ.ಈ ಶರೀರದ ಉಷ್ಣವು ಆತ್ಮಜ್ಯೋತಿಯ ಪ್ರತೀಕವಾಗಿದೆ.(ಪುಟ 145)
66).ಈ ಔಷ್ಣ್ಯವು ಪ್ರಾಣಿ ಜೀವನದ ಪ್ರತೀಕವಾಗಿದೆ.ಏಕೆಂದರೆ ಪ್ರಾಣಿಗಳು ಮೃತವಾದಾಗ ಅವುಗಳ ಶರೀರಗಳು ತಣ್ಣಗಗುತ್ತವೆ.(ಪುಟ 145)
67)ಮರಣ ಕಾಲದಲ್ಲಿ ತೇಜಸ್ಸು ಪರದೇವತೆಯಲ್ಲಿ ಸೇರುತ್ತದೆ.ತೇಜಃ ಪರಸ್ಯಾಂ ದೇವತಾಯಾಂಎಂದು ಶ್ರುತಿಯು (6.8.6)ರಲ್ಲಿ ಹೇಳಿದೆ.ಆದುದರಿಂದ ಈ ಒಔಷ್ಣ್ಯವು ಅತ್ಮಜ್ಯೋತಿಯ ಲಿಂಗವಾಗಿದೆ.(ಪುಟ 145)
ಹದಿನಾಲ್ಕನೆಯ ಖಂಡ:
68) ತಜ್ಜಲಾನ್ ಆಗಿರುವುದರಿಂದ ಇದೆಲ್ಲವೂ ಬ್ರಹ್ಮವೇ.ಆದುದರಿಂದ ಶಾಂತನಾಗಿ ಉಪಾಸಿಸಬೇಕು..ಇನ್ನು ಈ ಪುರುಷನು ಕ್ರತುಮಯನೇ.ಈ ಲೋಕದಲ್ಲಿ ಪುರುಷನು ಎಂಥ ಕ್ರತುವುಳ್ಳವನೊ ಇಲ್ಲಿಂದ ಹೋದಮೇಲೆ ಹಾಗೆಯೇ ಆಗುತ್ತಾನೆ. ಆದುದರಿಂದ ಅವನು ಕ್ರತುವನ್ನು ಮಾಡಬೇಕು.(ಪುಟ 146)
(ಕ್ರತು ಎಂದರೆ ನಿಶ್ಚಯ).
6೯) ಅನಂತಗುಣಗಳಿಂದ ಕೂಡಿರುವುದೂ ಅನಂತ ಶಕ್ತಿಯುಳ್ಳದ್ದೂ ಅನೇಕ ಭೇದಗಳಿಂದ ಉಪಾಸ್ಯವಾಗಿರುವುದೂ ಆದ ಬ್ರಹ್ಮವನ್ನು ವಿಶಿಷ್ಟಗುಣಶಕ್ತಿಯುಳ್ಳದ್ದೆಂದು ಉಪಸಿಸಬೇಕು ಎಂದು ಶುತಿಯು ಹೇಳುತ್ತದೆ.(ಪುಟ 146)
70)ಸವ೯ವೂ ಬ್ರಹ್ಮವೆಂಬುದು ಹೇಗೆ ಎಂಬ ಪ್ರಶ್ನೆಗೆ ಶ್ರುತಿಯು ಉತ್ತರ ಕೊಡುತ್ತದೆ.ಆ ಬ್ರಹ್ಮದಿಂದಲೇ ತೇಜಸ್ಸು,ನೀರು,ಅನ್ನ ಇವೇ ಮೊದಲಾದ ಕ್ರಮದಿಂದ ಎಲ್ಲವೂ ಹುಟ್ಟಿವೆ.ಆದುದರಿಂದ ತಜ್ಜಂ.ಹೀಗೆ ಎಲ್ಲವೂ ಕ್ರಮದಿಂದ ಬ್ರಹ್ಮದಲ್ಲಿಯೇ ಲಯವಾಗಿ ಅದರ ರೂಪದಿಂದ ಉಳಿದುಕೊಳ್ಳುತ್ತದೆ.ಆದುದರಿಂದ ತಲ್ಲಂ.ಇದೇ ರೀತಿ ಎಲ್ಲವೂ ಬ್ರಹ್ಮದಲ್ಲಿಯೇ ಪ್ರಾಣನ ಕ್ರಿಯೆಯನ್ನು ಮಾಡಿಕೊಂಡು ಇರುತ್ತವೆ.ಆದುದರಿಂದ ತದನಂ.ಹೀಗೆ ಜಗತ್ತು ಮೂರು ಕಾಲದಲ್ಲಿಯೂ ಬ್ರಹ್ಮದ ಸ್ವರೂಪದಲ್ಲಿಯೇ ಇರುವುದರಿಂದ ಅದು ಬ್ರಹ್ಮವೇ.('ತಜ್ಜಂ,ತಲ್ಲಂ ತದನಂ')(ಪುಟ 146)
71)ರಾಗದ್ವೇಷಗಳಿಲ್ಲದ ಸಂಯಮಿಯೂ ಆದ ಬ್ರಹ್ಮವನ್ನು ಮುಂದೆ ಹೇಳುವ ಮನೋನಯತ್ವಾದಿ ಗುಣಗಳಿಂದ ಉಪಾಸಿಸಬೇಕು.(ಪುಟ 146)
72)ಕ್ರತು-ಪದಕ್ಕೆ ನಿಶ್ಚಯ,ಅಧ್ಯವಸಾಯ ಎಂಬ ಅಥ೯ಗಳಿವೆ.ಇದು ಹೀಗೆಯೇ.ಬೇರೆ ರೀತಿಅಲ್ಲ ಎಂಬ ಅಚಲನಾದ ಪ್ರತ್ಯಯವೇ ಕ್ರತು.ಸಾಧಕನಿಗೆ ಅಧ್ಯವಸಾಯಾತ್ಮಕವಾದ ಬುದ್ಧಿಯೂ ಇರಬೇಕು.ಮತ್ತು ಉಪದೇಶದಲ್ಲಿ ಶ್ರದ್ಧೆಯೂ ಇರಬೇಕು ಎಂದಥ೯. (ಪುಟ 146)
73)ಸಾಧಕನು ಮರಣಕಾಲದಲ್ಲಿ ಯಾವ ಯಾವ ಭಾವವನ್ನು ಸ್ಮರಿಸಿಕೊಂಡು ದೇಹವನ್ನು ಬಿಡುವನೊ ಅವನು ಅದನ್ನೇ ಹೊಂದುವನು' ಎಂದು ಗೀತೆಯಲ್ಲಿ ಹೇಳಿದೆ.ಕ್ರತುವಿಗೆ ಅನುಗುಣವಾದ ಫಲವನ್ನು ಹೊಂದುತ್ತಾನೆ ಎಂದಥ೯.(8.7)
74)ಆ ಈಶ್ವರನು ಮನೋಮಯನು,ಪ್ರಾಣಶರೀರನು,ಭಾರೂಪನು,ಸತ್ಯಸಂಕಲ್ಪನು, ಆಕಾಶಾತ್ಮನು,ಸವ೯ಕಮ೯ನು,ಸವ೯ಕಾಮನು,ಸವ೯ಗಂಧನು,ಸವ೯ರಸನು ಸವ೯ವ್ಯಾಪಿಯು ಸವೇ೯ಂದ್ರಿಯ ರಹಿತನು,ಮತ್ತು ಸಂಭ್ರಮಹಹಿತನು.(ಪುಟ147)
75)ಮನೋಮಯನು-ಎಂದರೆ ಮನಸ್ಸೇ ಯಾವನ ಪ್ರವೃತ್ತಿ-ನಿವೃತ್ತಿಗಳಿಗೆ ಕಾರಣವೊಅವನು ಮನೋಮಯನು.(ಪುಟ 147)
76)ಜ್ಞಾನ ಕ್ರಿಯೆ ಎಂಬ ಶಕ್ತಿದ್ವಯದಿಂದ ಕೂಡಿರುವ ಲಿಂಗ ಶರೀರಕ್ಕೆ ಪ್ರಾಣವೆಂದು ಹೆಸರು.ಆ ಪ್ರಾಣವು ಯಾರಿಗೆ ಶರೀರವೊ ಅವನು ಪ್ರಾಣಶರೀರನು.(ಪುಟ 147)
77) ಈ ವಿಶೇಷಣವು ಜೀವನಿಗೆ ಅನ್ವಯಿಸಿದರೂ ಜೀವ- ಬ್ರಹ್ಮೈಕ್ಯ-ದೃಷ್ಟಿಯಿಂದ ಬ್ರಹ್ಮಕ್ಕೂ ಅನ್ವಯಿಸುತ್ತದೆ.(ಪುಟ147)
78)ಭಾ ಎಂದರೆ ಪ್ರಕಾಶ.ಚೈತನ್ಯ ಲಕ್ಷಣವಾದ ದೀಪ್ತಿಯು ಯಾವನಿಗೆ ರೂಪವೊ ಅವನು ಭಾರೂಪನು.(ಪುಟ 147)
75)ಆಕಾಶದಂತೆ ಸ್ವರೂಪವು ಯಾವನಿಗಿರುವುದೊ ಅವನು ಆಕಾಶಾತ್ಮನು.ಈಶ್ವರನು ಸವ೯ಗತನೂ ಸೂಕ್ಷ್ಮನೂ ರೂಪಾದಿರಹಿತನೂ ಅಗಿರುವುದರಿಂದ ಇವನಿಗೂ ಆಕಾಶಕ್ಕೂ ಹೋಲಿಕೆಯನ್ನು ಹೇಳಿದೆ.(ಪುಟ 147)
76)ಸವ೯ವೂ ಎಂದರೆ ವಿಶ್ವವೆಲ್ಲ ಈಶ್ವರನಿಂದ ಸೃಷ್ಟಿಸಲ್ಪಟ್ಟಿರುವುದರಿಂದ ಜಗತ್ತೆಲ್ಲ ಅವನ ಕಮ೯ವಾಗಿದೆ.ಆದುದರಿಂದ ಅವನು ಸವ೯ಕಮ೯ನು.'ಅವನು ಸವ೯ಕತೃ೯' 'ಸ ಹಿ ಸವ೯ಸ್ಯ ಕತಾ೯' (ಬೃ.ಉ.4.4.13)ಎಂದು ಶ್ರುತಿಯು ಹೇಳುತ್ತದೆ.(ಪುಟ 147)
77)ದೋಷರಹಿತವಾದ ಸವ೯ಕಾಮಗಳೂ ಇವನಿಗೆ ಇರುವುದರಿಂದ ಸವ೯ಕಾಮನು.'ಪ್ರಾಣಿಗಳಲ್ಲಿರುವ ಧಮ೯ಕ್ಕೆ ಅವಿರುದ್ಧವಾದ ಕಾಮನಾಗಿರುತ್ತೇನೆ.')'ಧಮೋ೯ ವಿರುದ್ಧೋ ಭೂತೇಷು ಕಾಮೋಸ್ಮಿ 'ಎಂದು ಗೀತೆಯಲ್ಲಿ(7.11) ಹೇಳಿದೆ.(ಪುqಟ 147).
78) ಸುಖಕರವಾದ ಎಲ್ಲ ಗಂಧಗಳೂ ಇವನಿಗೆ ಇರುವುದರಿಂದ ಇವನು ಸವ೯ಗಂಧನು.'ನಾನು ಪೃಥ್ವಿಯಲ್ಲಿರುವ ಒಳ್ಳೆಯ ಗಂಧವು'ಪುಣೋಗಂಧ ಪೃಥಿವ್ಯಾಂ'ಎಂದು ಗೀತೆಯು(7.೯) ಹೇಳುತ್ತದೆ.
(ಪುಟ 147)
7೯)ಹಿಗೆಯೇ ಸವ೯ರಸನು.
80)ಪ್ರಾಣಿ-ಪಾದಗಳಿಲ್ಲದೆ ವೇಗವುಳ್ಳವನೂ ,ವಸ್ತುಗಳನ್ನು ಗ್ರಹಿಸುವವನೂ ಆಗಿರುತ್ತಾನೆ.ಕಣ್ಣಿಲ್ಲದೆ ನೋಡುತ್ತಾನೆ.ಕಿವಿಯಿಲ್ಲದೆ ಕೇಳುತ್ತಾನೆ.'ಅಪಾಣಿಪಾದೋ ಜವನೋ ಗ್ರಹೀತಾ ಪಶ್ಯತ್ಯಚಕ್ಷುಃ ಸ ಶೃಣೋತ್ಯಕಣ೯ಃ'(ಶ್ವೇ.ಉ.3.1೯)ಎಂದು ಶ್ರುತಿಯು ಹೇಳುತ್ತದೆ.(ಪುಟ 148)
81) ಸಂಭ್ರಮರಹಿತ:ಅನಾಪ್ತ ಕಾಮನಿಗೆ ಇಲ್ಲದೆ ಇರುವುದನ್ನು ಪಡೆಯುವುದಕ್ಕೆ ಸಂಭ್ರಮವಾಗುತ್ತದೆ.ಆದರೆ ನಿತ್ಯ ತೃಪ್ತನಾದ ಈಶ್ವರನು ಆಪ್ತಕಾಮನಾಗಿರುವುದರಿಂದ ಸಂಭ್ರಮವಿಲ್ಲ.(ಪುಟ 188)
82)ಹೃದಯ ಪುಂಡಲೀಕದಲ್ಲಿರುವ ಇವನು ನನ್ನ ಆತ್ಮನು.ಇವನು ಬತ್ತದ ಕಾಳಿಗಿಂತಲೂ ಯವೆಯ ಕಾಳಿಗಿಂತಲೂ ಅಣುವಾಗಿರುವನು.ಹೃದಯ ಪುಂಡರೀಕದಲ್ಲಿರುವ ಈ ನನ್ನ ಅತ್ನು ಪೃಥ್ವಿಗಿಂತಲೂ ದೊಡ್ಡವನು,ದ್ಯುಲೋಕಕ್ಕಿಂತಲೂ ದೊಡ್ಡವನು.ಈ ಎಲ್ಲಾ ಲೋಕಗಳಿಗಿಂತಲೂ ದೊಡ್ಡವನು.(ಪುಟ 148)
88) ಆತ್ಮನು ಕೇವಲ ಅಣು ಪರಿಣಾಮದವನಲ್ಲ.ವಿಭುವೂ ಆಗಿದ್ದಾನೆ ಎಂಬುದನ್ನು ತಿಳಿಸಲು 'ಜ್ಯಾಯಾನ್'ಎಂದು ಹೇಳಿದೆ.(ಪುಟ 148)
8೯)ಪ್ರತ್ಯಗಾತ್ಮನಿಗೂ ಪರಮಾತ್ಮನಿಗೂ ಯಾವ ಭೇದವೂ ಇಲ್ಲ ಎಂಬುದನ್ನು ಹೇಳಿದೆ.(ಪುಟ 148)
೯0)ಈಶ್ರನು ಸವ೯ಕಮ೯ನು ಸವ೯ಕಾಮನು ಸವ೯ಗಂಧನು ಸವ೯ರಸನು,ಸವ೯ವ್ಯಾಪಿಯು,ಸವೇ೯ಂದ್ರಿಯ ರಹಿತನು ಮತ್ತು ಸಂಭ್ರಮರಹಿತನು.ಹೃದು ಪುಂಡರೀಕದಲ್ಲಿರುವ ಇವನು ನನ್ನ ಆತ್ಮನು.ಇವನೇ ಬ್ರಹ್ಮ.ಇಲ್ಲಿಂದ ಹೊರಟುಹೋಗಿ ಇವನನ್ನು ಹೊಂದುವವನಾಗಿರುತ್ತೇನೆ.ಯವನಿಗೆ ಇಂಥ ನಿಶ್ಚಯವಿರುವಿದೊ ,ಸಂಶಯವಿರುವುದಿಲ್ಲವೊ ಅವನು ಈಶ್ವರ ಭಾವವನ್ನು ಹೊಂದುತ್ತಾನೆ ಎಂದು ಶಾಂಡಿಲ್ಯನು ಹೇಳಿದನು,ಶಾಂಡಿಲ್ಯನು ಹೇಳಿದನು.(ಪುಟ14೯)
ಹದಿನೈದನೆಯ ಖಂಡ(ಕೋಶ ವಿಜ್ಞಾನ):
೯1)ಅಂತರಿಕ್ಷವೇ ಉದರವಾಗಿರುವ ಭೂಮಿಯೇ ತಳವಾಗಿರುವ ಕೋಶವು ನಾಶವಾಗುವುದಿಲ್ಲ.ಏಕೆಂದರೆ ದಿಕ್ಕುಗಳು ಅದರ ಕೋನಗಳು.ದ್ಯುಲೋಕವು ಇದರ ಮೇಲಿನ ಮುಚ್ಚಳವು.ಆ ಈ ಕೋಶವು ಬೊಕ್ಕಸವು.ಅದರಲ್ಲಿ ಇದೆಲ್ಲವೂ ಆಶ್ರಿತವಾಗಿದೆ.(ಪುಟ 150)
೯2) ಅನುಶಿಷ್ಟನಾದ ಪುತ್ರನನ್ನು "ಲೋಕಪ್ರಾಪ್ತಿಗೆ ಉಪಾಯನು"ಎಂದು ಹೇಳಲ್ಪಟ್ಟಿದೆ.(ತಸ್ಮಾತ್ ಪುತ್ರಂ ಅನುಶಿಷ್ಟಂ ಲೋಕ್ಯಂ ಆಹುಃ) ಎಂದು ಬೇರೊಂದು (ಬೃ.ಉ1.5.17)ಶ್ರುತಿಯು ಹೇಳುತ್ತದೆ.(ಪುಟ 150)
೯3) ಅನುಶಿಷ್ಟನೂ ದೀಘಾ೯ಯುವೂ ಆದ ಪುತ್ರನಿದ್ದರೆಅವನು ತನಗೂ ತನ್ನ ಪಿತೃಗಳಿಗೂ ಒಳ್ಳೆಯದನ್ನು ಮಾಡಲು ಶಕ್ತನಾಗುತ್ತಾನೆ.ಕೇವಲ ವೀರನು ಹುಟ್ಟಿದ ಮಾತ್ರಕ್ಕೇ ತಂದೆಯನ್ನು ಕಾಪಾಡಿದಂತಾಗುವುದಿಲ್ಲ.ಆದ್ದರಿಂದ ದೀಘಾ೯ಯುಸ್ಸಿಗೋಸ್ಕರ ಕೋಶ ವಿಜ್ಞಾನವು ಹೇಳಲ್ಪಟ್ಟಿದೆ.(ಪುಟ 150)
೯4)ಕೋಶದಂತಿರುವುದರಿಂದ ಕೋಶವು.(ಚೀಲ)(ಪುಟ 150)
೯5)ತ್ರೈಲೋಕ್ಯ ಸ್ವರೂಪವಾಗಿರುವುದರಿಂದ ನಾಶವಾಗುವುದಿಲ್ಲ.(ಪುಟ 150)
೯6)ಪ್ರಾಣಿಗಳ ಕಮ೯ಫಲವು (ಹಣವು) ಇದರಲ್ಲಿ ಇಡಲ್ಪಡುವುದರಿಂದ ಬೊಕ್ಕಸ ಅಥವಾ ವಸುಧಾನ ಎನಿಸಿದೆ.(ಬೊಕ್ಕಸ=ವಸುಧಾನ)(ಪುಟ 150)
೯7)ಆ ಕೋಶದ ಪೂವ೯ ದಿಕ್ಕಿಗೆ 'ಜುಹೂ' ಎಂದು ಹೆಸರು.
ದಕ್ಷಿಣದಿಕ್ಕಿಗೆ ಸಹಮಾನಾ ಎಂದು ಹೆಸರು
ಪಶ್ಚಿಮ ದಿಕ್ಕು ರಾಜ್ಞೀ ಎಂದು ಹೆಸರು.
ಉತ್ತರ ದಿಕ್ಕಿಗೆ ಸುಭೂತಾ ಎಂದು ಹೆಸರು.
ವಾಯು ಅವುಗಳ ಮಗು.(ಪುಟ 151)
೯8)ಯಾವನು ಹೀಗೆ ವಾಯುವು ಅವುಗಳ ಮಗು ಎಂದು ಅರಿತುಕೊಂಡಿರುವನೊ ಅವನು ಪುತ್ರ ರೋದನವನ್ನು ಮಾಡುವುದಿಲ್ಲ.(ಪುಟ151)
೯೯)ವಾಯುವು ದಿಕ್ಕುಗಳಲ್ಲಿ ಉತ್ಪನ್ನವಾಗುತ್ತದೆ.(ಪುಟ 151)
100) ಯಜ್ಞಕಮ೯ದಲ್ಲಿ ಧ್ರುವ,ಉಪಭೃತ್,ಜುಹೂ ಸ್ರುಕ್ ಎಂಬ ನಾಲ್ಕು ಚಮಸಗಳಿಂದ ಆಹುತಿಗಳನ್ನು ಕೊಡುತ್ತಾರೆ.(ಪುಟ 151)
101) ಅಧ್ವಯು೯ವು -ಜುಹೂ ಎಂಬ ದಕ್ಷಿಣ ಹಸ್ತದಲ್ಲಿರುವ ಚಮಸದಿಂದ ದ್ರವ್ಯವನ್ನು ಆಹುತಿ ಕೊಡುತ್ತಾನೆ.ಇವನು ಪೂವಾ೯ಭಿಮುಖವಾಗಿ ಹೋಮ ಮಾಡುವುದರಿಂದ ಪೂವ೯ದಿಕ್ಕು ಜುಹೂ ಎನಿಸಿದೆ.(ಪುಟ 151)
102) ದಕ್ಷಿಣ ದಿಕ್ಕಿನಲ್ಲಿರುವ ಯಮಪುರಿಯಲ್ಲಿ ಪ್ರಾಣಿಗಳು ಪಾಪಕಮ೯ದ ಫಲವನ್ನು ಸಹಿಸುವುದರಿಂದ 'ಸಹಮಾನಾ' ಎನಿಸಿದೆ.(ಪುಟ 151)
103)ಈ ದಿಕ್ಕು ರಾಜನಾದ ವರುಣನಿಂದ ಅಧಿಷ್ಠಿತವಾಗಿರುವುದರಿಂದ 'ರಾಜ್ಞೀ'ಎನಿಸಿದೆ.(ಪುಟ 151)
114) ಭೂತಿಯುಳ್ಳ ಈಶ್ವರ ಕುಬೇರ ಮೊದಲಾದವರು ಆಳುತ್ತಿರುವುದರಿಂದ ಉತ್ತರ ದಿಕ್ಕು ಸುಭೂತಾ ಎನಿಸಿದೆ.(ಪುಟ 151)
115) ಇವನಿಗಾಗಿ ಇವನಿಗಾಗಿ ಇವನಿಗಾಗಿ ಅವಿನಾಶಿಯಾದ ಕೋಶವನ್ನು ಶರಣು ಹೊಕ್ಕಿರುವೆನು.
ಇವನಿಗಾಗಿ ಇವನಿಗಾಗಿ ಇವನಿಗಾಗಿ ಪ್ರಾಣವನ್ನು ಶರಣು ಹೊಕ್ಕಿರುವೆನು.
ಇವನಿಗಾಗಿ ಇವನಿಗಾಗಿ ಇವನಿಗಾಗಿ ಭೂಃ ಎಂಬುದನ್ನು ಶರಣು ಹೊಕ್ಕಿರುವೆನು.
ಇವನಿಗಾಗಿ ಇವನಿಗಾಗಿ ಇವನಿಗಾಗಿ ಭುವಃ ಎಂಬುದನ್ನು ಶರಣು ಹೊಕ್ಕಿರುವೆನು.
ಇವನಿಗಾಗಿ ಇವನಿಗಾಗಿ ಇವನಿಗಾಗಿ ಸ್ವಃ ಎಂಬುದನ್ನು ಶರಣು ಹೊಕ್ಕಿರುವೆನು.
ಇಲ್ಲಿ ಅಮುನಾ ಎಂಬ ಸ್ಥಳದಲ್ಲಿ ಮಗನ ಹೆಸರನ್ನು ಹೇಳಬೇಕು.ಮಗನ ಆಯಸ್ಸಿಗಾಗಿ ಶರಣು ಹೊಕ್ಕಿರುವೆನು ಎಂದಥ೯.(ಪುಟ 152)
116) 'ಹೇಗೆ ಅರೆಕಾಲುಗಳು ಗುಂಬದಲ್ಲಿ ಸೇರಿಕೊಂಡಿವೆಯೊ ಹಾಗೆ ಈಪ್ರಾಣನಲ್ಲಿ ಎಲ್ಲವೂ ಸೇರಿಕೊಂಡಿದೆ' ಎಂದಥ೯.(ಪುಟ 152)
117)'ಭೂಃ ವನ್ನು ಶರಣು ಹೊಕ್ಕಿರುವೆನು' ಎಂದು ಹೇಳಿದಾಗ ಪೃಥ್ವಿ ಅಂತರಿಕ್ಷ ದ್ಯುಲೋಕ ಇವುಗಳಿಗೂ ಅನ್ವಯಿಸುತ್ತದೆ.(ಪುಟ 153)
118) 'ಭುವಃ ಎಂಬುದನ್ನು ಶರಣು ಹೊಕ್ಕಿರುವೆನು' ಎಂದು ಹೇಳಿದಾಗ ಅಗ್ನಿ ವಾಯು ಆದಿತ್ಯರಿಗೂ ಅನ್ವಯಿಸುತ್ತದೆ.(ಪುಟ 153)
11೯)'ಸ್ವಃ ಎಂಬುದನ್ನು ಶರಣು ಹೊಕ್ಕಿರುವೆನು'ಎಂದು ಹೇಳಿದಾಗ ಋಗವೇದ,ಯಜುವೇ೯ದ ಸಾಮವೇದ ಇವುಗಳಿಗೂ ಅನ್ವಯಿಸುತ್ತದೆ.(ಪುಟ 153)
ಹದಿನಾರನೆಯ ಖಂಡ:
120)ಪುರುಷನೇ ಯಜ್ಞ.ಅವನ ಮೊದಲನೆಯ ಇಪ್ಪತ್ತನಾಲ್ಕು ವಷ೯ಗಳು ಪ್ರಾತಃಸವನ.ಗಾಯತ್ರಿಗೆ ಇಪ್ಪತ್ತನಾಲ್ಕು ಅಕ್ಷರಗಳಿವೆ.ಪ್ರಾತಃ ಸವನವು ಗಾಯತ್ರ.ಈ ಪುರುಷಯಜ್ಞದ ಪ್ರಾತಃಸವನದಲ್ಲಿ ವಸುಗಳು ಅನುಗತರಾಗಿರುವರು.ಪ್ರಾಣಗಳೇ ವಸುಗಳು.ಏಕೆಂದರೆ ಇವು ಇದೆಲ್ಲವನ್ನೂ ವಾಸಮಾಡಿಸುತ್ತವೆ.(ಪುಟ 154)
121)ಪ್ರಾಣಗಳು ದೇಹದಲ್ಲಿ ವಾಸಮಾಡಿಕೊಂಡಿದ್ದರೆ ಇವೆಲ್ಲವೂ ವಾಸಿಸುತ್ತವೆ.ಆದುದರಿಂದ ತಾವು ವಾಸವಾಸಿಸುವುದರಿಂದಲೂ ,ಎಲ್ಲವನ್ನೂ ವಾಸಮಾಡುವುದರಿಂದಲೂ ಪ್ರಾಣಗಳು ವಸುಗಳು.(ಪುಟ 154)
122)ಮನುಷ್ಯನ ಇಡೀ ಜೀವನವನ್ನು ಯಜ್ಞವಾಗಿ ಕಲ್ಪಿಸಿರುವುದರಿಂದ ಮನುಷ್ಯನನ್ನೇ ಯಜ್ಞವೆಂದು ಕರೆದಿದೆ.ಯಜ್ಞದಲ್ಲಿ ಯಾವುದಾದರೂ ಲೋಪವುಂಟಾದರೆ ಅದು ಫಲರಹಿತವಾಗಿರುತ್ತದೆ.ಹಾಗೆಯೆ ರೋಗ ಅಥವಾ ಮೃತ್ಯು ಮನುಷ್ಯನ ಪೂಣಾ೯ಯುಸ್ಸನ್ನು ಲೋಪಗೊಳಿಸಿದರೆ ಮನುಷ್ಯನೆಂಬ ಯಜ್ಞವು ಅಸಂಪೂಣ೯ವಾಗುವುದು.(ಪುಟ155)
123)ಇನ್ನು ಅವನ ಮುಂದಿನ ನಲವತ್ತನಾಲ್ಕು ವಷ೯ಗಳು ಮಾಧ್ಯಂದಿನ ಸವನ.ತ್ರಿಷ್ಟುಪ್ಪಿಗೆ ನಲವತ್ತನಾಲ್ಕು ಅಕ್ಷರಗಳಿವೆ.ಮಾಧ್ಯಂದಿನ ಸವನವು ತ್ರಿಷ್ಟುಪ್ ಛಂದಸ್ಸಿಗೆ ಸೇರಿದೆ.ಈ ಪುರುಷ ಯಜ್ಞದ ಮಾಧ್ಯಂದಿನ ಸವನದಲ್ಲಿ ರುದ್ರರು ಅನುಗತರಾಗಿರುವರು.ಪ್ರಾಣಗಳೇ ರುದ್ರರು.ಏಕೆಂದರೆ ಇವು ಇವೆಲ್ಲವನ್ನೂ ರೋದಿಸುವಂತೆ ಮಾಡುತ್ತವೆ.(ಪುಟ 156)
124)ಅವನನ್ನು ಯಾವುದಾದರೂ ರೋಗವು ಈ ವಯಸ್ಸಿನಲ್ಲಿ ಉಪತಾಪಗೊಳಿಸಿದರೆ ಅವನು ಈ ಮಂತ್ರವನ್ನು ಹೇಳಬೇಕು.'ಪ್ರಾಣ ರುದ್ರರೆ ನನ್ನ ಈ ಮಾಧ್ಯಂದಿನ ಸವನವನ್ನು ತೃತೀಯಸವನಕ್ಕೆ ಸೇರಿಸಿರಿ.ಯಜ್ಞರೂಪವಾದ ನಾನು ಪ್ರಾಣರೂಪವಾದ ರುದ್ರರ ಮಧ್ಯದಲ್ಲಿ ನಾಶವಾಗದಿರಲಿ'ಅವನು ಆರೋಗದಿಂದ ಪಾರಾಗುತ್ತಾನೆ.ಆರೋಗ್ಯವಂತನಾಗುತ್ತಾನೆ.(ಪುಟ 156)
125)ಇನ್ನು ಅವನ ಕೊನೆಯ ನಲವತ್ತನಾಲ್ಕು ವಷ೯ಗಳು ಮಾಧ್ಯಂದಿನ ಸವನ.ಜಗತೀ ಛಂದಸ್ಸಿಗೆ ನಲವತ್ತೆಂಟು ಅಕ್ಷರಗಳಿವೆ.ತೃತೀಯಸವನವು ಜಗತೀ ಛಂದಸ್ಸಿಗೆ ಸೇರಿದೆ.ಈ ಪುರುಷಯಜ್ಞದ ತೃತೀಯ ಸವನದಲ್ಲಿ ಆದಿತ್ಯರು ಅನುಗತರಾಗಿರುವರು.ಪ್ರಾಣಗಳೇ ಆದಿತ್ಯರು.(ಪುಟ157)
126)ಅವನನ್ನು ಯಾವುದಾದರೂ ರೋಗವು ಈ ವಯಸ್ಸಿನಲ್ಲಿ ಉಪತಾಪಗೊಳಿಸಿದರೆ ಅವನು ಈ ಮಂತ್ರವನ್ನು ಹೇಳಬೇಕು.'ಪ್ರಾಣ ಆದಿತ್ಯ್ರರೆ ನನ್ನ ಈ ತೃತೀಯ ಸವನವನ್ನು ಆಯುಸ್ಸಿಗೆ ಸೇರಿಸಿರಿ.ಯಜ್ಞರೂಪವಾದ ನಾನು ಪ್ರಾಣರೂಪವಾದ ಆದಿತ್ಯರ ಮಧ್ಯದಲ್ಲಿ ನಾಶವಾಗದಿರಲಿ'ಅವನು ಆರೋಗದಿಂದ ಪಾರಾಗುತ್ತಾನೆ.ಆರೋಗ್ಯವಂತನಾಗುತ್ತಾನೆ.(ಪುಟ 157)
127)ಮಹಿದಾಸ ಐತರೇಯನು ಈ ಯಜ್ಞವನ್ನು ಅರಿತುಕೊಂಡು ರೋಗವನ್ನು ಕುರಿತು ಹೀಗೆ ಹೇಳಿದನು.'ಆ ನೀನು ನನ್ನನ್ನು ಹೀಗೇಕೆ ಉಪತಪಿಸುತ್ತೀಯೆ.?ಏಕೆಂದರೆ ನಾನು ಇದರಿಂದ ಸಾಯುವುದಿಲ್ಲ.ಅವನು ನೂರಾಹದಿನಾರು ವಷ೯ಗಳು ಬದುಕಿದ್ದನು.ಯಾವನು ಹೀಗೆ ಅರಿತುಕೊಂಡಿರುವನೊ ಅವನು ನೂರಾ ಹದಿನಾರು ವಷ೯ಗಳವರೆಗೆ ಜೀವಿಸಿರುತ್ತಾನೆ.(ಪುಟ 158)
ಹದಿನೇಳನೆಯ ಖಂಡ:
128) ಪುರುಷ ಯಜ್ಞವನ್ನು ಮಾಡುವವನಿಗೆ ಉಂಟಾಗುವ ಹಸಿವು,ನೀರಡಿಕೆ,ಆನಂದದ ಅಭಾವ-ಇವೆಲ್ಲ ಈ ಯಜ್ಞದ ದೀಕ್ಷೆಗಳು.(ಪುಟ 15೯)
12೯)ಇನ್ನು ಅವನ ತಪಸ್ಸು ,ದಾನ,ಋಜುತ್ವ,ಅಹಿಂಸೆ,ಸತ್ಯವಚನ,-ಇವನ ಯಜ್ಞದ ದಕ್ಷಿಣೆಗಳು.(ಪುಟ 160)
130)ಆದುದರಿಂದ ಜನರು 'ಸೋಷ್ಯತಿ,ಅಸೋಷ್ಟ'ಎಂದು ಹೇಳುವಾಗ ಅದು ಇದರ ಪುನರುತ್ಪಾದನೆಯೆ.ಮರಣವೇ ಇದರ ಅವಭೃತ.(ಪುಟ 160)
131)ಯಜ್ಞವು ಅವಭೃತದಲ್ಲಿ ಕೊನೆಗೊಳ್ಳುವಂತೆ ಪುರುಷಯಜ್ಞವು ಮೃತ್ಯುವಿನಲ್ಲಿ ಕೊನೆಗೊಳ್ಳತ್ತದೆ.( ಪುಟ 160)
132)ಘೋರ ಅಂಗ್ರಸನು ಈ ಯಜ್ಞದಶ೯ನವನ್ನು ದೇವಕೀ ಪುತ್ರನಾದ ಕೃಷ್ಣನಿಗೆ ಉಪದೇಶಿಸಿ ಹೇಳಿದನು:ಇಂಥ ಯಜ್ಞವಿದನು ಅಂತಕಾಲದಲ್ಲಿ ಮೂರು ಮಂತ್ರಗಳನ್ನು ಶರಣು ಹೋಗಬೇಕು.-" ನೀನು ಅಕ್ಷಯವಾಗಿದ್ದೀಯೆ,ನೀನು ಅಚ್ಯುತನಾಗಿದ್ದೀಯೆ,ನೀನು ಪ್ರಣ ಸ್ವರೂಪನಗಿದ್ದೀಯೆ."ಕೃಷ್ಣನು ಇದನ್ನು ಕೇಳಿ ಇತರ ವಿದ್ಯೆಯಲ್ಲಿ ನಿಸ್ಪøಹನಾದನು.ಈ ವಿಷಯದಲ್ಲಿ ಎರಡು ಋಕ್ಕುಗಳಿವೆ.(ಪುಟ 162)
133)ಯಾವುದು ಸ್ವಯಂಪ್ರಕಾಶವಾದ ಬ್ರಹ್ಮದಲ್ಲಿ ಪ್ರಕಾಶಿಸುವುದೊ ಆ ಪುರಾತನವೂ ಜಗತ್ಕಾರಣವೂಹಗಲಿನಂತೆ ಸವ೯ವ್ಯಾಪಿಯೂ ಆದ ಪರಮ ಜ್ಯೋತಿಯನ್ನು ಬ್ರಹ್ಮಜ್ಞನಿಗಳು ಎಲ್ಲೆಲ್ಲಿಯೂ ನೋಡುತ್ತಾರೆ.(ಪುಟಚ162)
ಹದಿನೆಂಟನೆಯ ಖಂಡ:
134) ಮನಸ್ಸನ್ನು ಬ್ರಹ್ಮವೆಂದು ಉಪಾಸಿಸಬೇಕು.ಇದು ಅಧ್ಯಾತ್ಮ.ಇನ್ನು ಅಧಿದೈವತ.ಆಕಾಶವನ್ನು ಬ್ರಹ್ಮವೆಂದು ಉಪಾಸಿಸಬೇಕು.ಹೀಗೆ ಅಧ್ಯಾತ್ಮ,ಅಧಿದೈವತ-ಎರಡೂ ಉಪದಿಷ್ಟವಾಗಿವೆ.(ಪುಟ 163)
135) ಈ ಬ್ರಹ್ಮಕ್ಕೆ ನಾಲ್ಕು ಪಾದಗಳಿವೆ.ವಾಗಿಂದ್ರಿಯವು ಒಂದು ಪಾದ.ಚಕ್ಷುರಿಂದ್ರಿಯವು ಒಂದು ಪಾದ.ಶ್ರೋತ್ರೇಂದ್ರಿಯವು ಒಂದು ಪಾದಿದು ಅಧ್ಯಾತ್ಮ.ಇನ್ನು ಅಧಿದೈವತ!ಅಗ್ನಿ ಒಂದು ಪಾದ,ವಾಯು ಒಂದುಪಾದ,ಆದಿತ್ಯ ಒಂದು ಪಾದ,ದಿಕ್ಕುಗಳು ಒಂದುಪಾದ,ಹೀಗೆ ಅಧ್ಯಾತ್ಮಧಿದೈವತ-ಇವೆರಡೂ ಉಪದಿಷ್ಟವಾಗಿವೆ.(ಪುಟ 164)
136)ವಾಗಿಂದ್ರಿಯವೇ ಮನೋಬ್ರಹ್ಮದ ನಾಲ್ಕನೆಯ ಪಾದ.ಅದು ಅಗ್ನಿಜ್ಯೋತಿಯಿಂದ ಪ್ರಕಾಶಿಸುತ್ತದೆ ಮತ್ತು ತಪಿಸುತ್ತದೆ.ಯಾವನು ಹೀಗೆ ಅರಿತುಕೊಂಡಿರುವನೊ ಅವನು ಕೀತಿ೯ಯಿಂದಲೂ ಯಶಸ್ಸಿನಿಂದಲೂ ಬ್ರಹ್ಮವಚ೯ಸ್ಸಿನಿಂದಲೂ ಪ್ರಕಾಶಿಸುತ್ತಾನೆ ಮತ್ತು ತಪಿಸುತ್ತಾನೆ.(ಪುಟ 165)
137) ಘ್ರಾಣೇಂದ್ರಿಯವೇ ಬ್ರಹ್ಮದ ನಾಲ್ಕನೆಯ ಪಾದ.ಅದು ವಾಯುಜ್ಯೋತಿಯಿಂದ ಪ್ರಕಾಶಿಸುತ್ತದೆ.ಯಾವನು ಹೀಗೆ ಅರಿತುಕೊಂಡಿರುವನೊ ಅವನು ಕೀತಿ೯ಯಿಂದಲೂ ಯಶಸ್ಸಿನಿಂದಲೂ ಬ್ರಹ್ಮವಚ೯ಸ್ಸಿನಿಂದಲೂ ಪ್ರಕಾಶಿಸುತ್ತಾನೆ ಮತ್ತು ತಪಿಸುತ್ತಾನೆ.(ಪುಟ 165)
138) ಚಕ್ಷುರಿಂದ್ರಿಯವೇ ಬ್ರಹ್ಮದ ನಾಲ್ಕನೆಯ ಪಾದ. ಅದು ಆದಿತ್ಯ ಜ್ಯೋತಿಯಿಂದ ಪ್ರಕಾಶಿಸುತ್ತದೆ. ಯಾವನು ಹೀಗೆ ಅರಿತುಕೊಂಡಿರುವನೊ ಅವನು ಕೀತಿ೯ಯಿಂದಲೂ ಯಶಸ್ಸಿನಿಂದಲೂ ಬ್ರಹ್ಮವಚ೯ಸ್ಸಿನಿಂದಲೂ ಪ್ರಕಾಶಿಸುತ್ತಾನೆ ಮತ್ತು ತಪಿಸುತ್ತಾನೆ.(ಪುಟ 165)
13೯)ಶ್ರೋತ್ರೇಂದ್ರಿಯವೇ ಬ್ರಹ್ಮದ ನಾಲ್ಕನೆಯಪಾದ.ಅದು ದಿಕ್ಕುಗಳ ಜ್ಯೋತಿಯಿಂದ ಶಬ್ದ ಗ್ರಹಣಕ್ಕಾಗಿ ಪ್ರಕಾಶಿಸುತ್ತದೆ.ಯಾವನು ಹೀಗೆ ಅರಿತುಕೊಂಡಿರುವನೊ ಅವನು ಕೀತಿ೯ಯಿಂದಲೂ ಯಶಸ್ಸಿನಿಂದಲೂ ಬ್ರಹ್ಮವಚ೯ಸ್ಸಿನಿಂದಲೂ ಪ್ರಕಾಶಿಸುತ್ತಾನೆ ಮತ್ತು ತಪಿಸುತ್ತಾನೆ.(ಪುಟ 166)
140)ಬ್ರಹ್ಮಪ್ರಾಪ್ತಿಯೆಂಬುದು ಅದೃಷ್ಟಫಲವಾಗಿದೆ(ಪುಟ166)
ಹತ್ತೊಂಬತ್ತನೆಯ ಖಂಡ:
142)ಆದಿತ್ಯನು ಬ್ರಹ್ಮದ ಪಾದವೆಂದು ಹೇಳಿದ್ದಾಯಿತು.ಈಗ ಆದಿತ್ಯನಲ್ಲಿ ಸಕಲ ಬ್ರಹ್ಮದೃಷ್ಟಿಯನ್ನು ವಿಧಿಸಲು ಈ ಭಾಗವನ್ನು ಆರಂಭಿಸಿದೆ.(ಪುಟ 167)
143)ಆ ಅಂಡಕಪಾಲಗಳ ರಜತಭಾಗವು ಪೃಥ್ವಿಯಾಯಿತು.ಸುವಣ೯ ಭಾಗವು ದ್ಯುಲೋಕವಾಯಿತು.ಜರಾಯುವು ಪವ೯ತಗಳಾಯಿತು.ಉಲ್ಬವು ಮೇಘಗಳಿಂದ ಕೂಡಿದ ಮಂಜಾಯಿತು.ಧಮನಿಗಳು ನದಿಗಳಾದವು.ಮೂತ್ರಕೋಶದಲ್ಲಿದ್ದ ಉದಕವು ಸಮುದ್ರವಾಯಿತು.(ಪುಟ 168)(ಜರಾಯು ಎಂದರೆ ಮೊಟ್ಟೆಯ ಮೇಲಿರುವ ಸ್ಥೂಲವಾದ ಪೊರೆ.ಉಲ್ಬ ಎಂದರೆ ಗಭ೯ದಮೇಲಿನ ಸೂಕ್ಷ್ಮವಾದ ಪೊರೆ.ಧಮನಿ ಎಂದರೆ ರಕ್ತನಾಳಗಳು)
144)ಇನ್ನು ಅದರಿಂದ ಯಾವುದು ಹುಟ್ಟಿತೋ ಅವನೇ ಆದಿತ್ಯನು.(ಪುಟ 168)
145)ಯಾವನು ಇದನ್ನು ಹೀಗೆ ಅರಿತುಕೊಂಡು ಉಪಾಸಿಸುವನೊಅವನು ಬ್ರಹ್ಮ ಸ್ವರೂಪವನ್ನು ಹೊಂದುತ್ತಾನೆ.ಅವನ ಬಳಿಗೆ ಶೀಘ್ರವಾಗಿ ಮಂಗಳಘೋಷಗಳು ಬರುವುವು ಮತ್ತು ಸುಖವನ್ನುಂಟು ಮಾಡುವುವು.ನಿಜವಾಗಿ ಸುಖವನ್ನುಂಟು ಮಾಡುವುವು.(ಪುಟ 16೯)
,,,,,,,,,,,,,,,,,,,,,,,,,,,,,,,,,,,,,,,,,,,,,,ಮೂರನೇ ಅಧ್ಯಾಯ ಮುಕ್ತಾಯವಾಯಿತು.,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಅಧ್ಯಾಯ ನಾಲ್ಕು:(ರೈಕ್ವ-ಜಾನುಶ್ರುತಿ ಸಂವಾದ)(ಸಂವಗ೯ ವಿದ್ಯೆ)
1)ಜಾನುಶ್ರುತಿ ಪೌತ್ರಾಯಣನು ಶ್ರದ್ಧಾದೇಯನೂ ಬಹುದಾಯಿಯೂ ಬಹುಪಾಕ್ಯನೂ ಆಗಿದ್ದನು.ಅವನು ಎಲ್ಲೆಲ್ಲಿಯೂ ಅನ್ನಸತ್ರಗಳನ್ನು ಕಟ್ಟಿಸಿದ್ದನು.(ಪುಟ170)
ಇಲ್ಲಿ ವಾಯು ಮತ್ತು ಪ್ರಾಣಗಳು ಸಾಕ್ಷಾತ್ ಬ್ರಹ್ಮವೆಂದೇ ಉಪಾಸಿಸಬೇಕೆಂದು ಹೇಳುತ್ತದೆ.ಶ್ರದ್ಧೆ ಮತ್ತು ಅನ್ನದಾನ ಇವು ವಿದ್ಯಾಪ್ರಾಪ್ತಿಗೆ ಸಾಧನಗಳೆಂಬುದನ್ನೂ ಇಲ್ಲಿ ತಿಳಿಸಿದೆ.(ಪುಟ 170)
ಒಂದುಸಲ ಹಂಸಗಳು ರಾತ್ರಿಕಾಲದಲ್ಲಿ ಮನೆಯಮೇಲೆ ಹಾರಿಹೋದವು.ಒಂದು ಹಂಸವು ಇನ್ನೊಂದು ಹಂಸವನ್ನು ಕುರಿತು ಹೇಳಿತು. ಜಾನುಶ್ರುತಿ ಪೌತ್ರಾಯಣನ ಜ್ಯೋತಿಯು ದ್ಯುಲೋಕದಂತೆ ಹರಡಿಕೊಂಡಿದೆ.ಅದನ್ನು ಸೋಂಕಬೇಡ.ಅದು ನಿನ್ನನ್ನು ಸುಡದಿರಲಿ.ಆಗ ಇನ್ನೊಂದು ಹಂಸವು ಹೇಳಿತು.
'ಜಾನುಶ್ರುತಿಯನ್ನು ಗಾಡಿಯೊಂದಿಗೆ ಇರ್ವ ರೈಕ್ವನಂತೆ -ಯಾವನೆಂದು ಹೇಳುತ್ತೀಯೆ?' 'ಗಾಡಿಯೊಂದಿಗೆ ಇರುವ ರೈಕ್ವನು ಎಂಥವನು?' (ಪುಟ 172)
'ಕೃತವನ್ನು ಜಯಿಸಿದವನಿಗೆ ಕೆಳಗಿನದಾಳದ ಸಂಖ್ಯೆಗಳು ಸೇರುವಂತೆ ಜನರು ಏನೇನು ಒಳ್ಳೆಯದನ್ನು ಮಾಡುವರೊ ಅವೆಲ್ಲವೂ ರೈಕ್ವನನ್ನು ಸೇರುತ್ತದೆ.ರೈಕ್ವನು ಯಾವುದನ್ನು ಅರಿತುಕೊಂಡಿರುವನೊ ಅದನ್ನು ಅರಿತುಕೊಂಡವನಿಗೂ ಹಾಗೇ.ಅವನನ್ನೇ ನಾನು ಹೀಗೆ ಹೇಳಿದ್ದು'ಎಂದು ಇನ್ನೊಂದು ಹಂಸವು ಹೇಳಿತು.(ಪುಟ172)
2) ನಾಲ್ಕನೆಯ ಸಂಖ್ಯೆಯನ್ನು ಹೊಂದಿರುವ ದಾಳದ ಭಾಗಕ್ಕೆ ಕೃತವೆಂದು ಹೆಸರು.(ಪುಟ172)
3)ಜಾನುಶ್ರುತಿಯು ರೈಕ್ವನನ್ನು ಹುಡುಕಿ ಕಂಡನು.ರೈಕ್ವನು ಗಾಡಿಯ ಕೆಳಗೆ ಕುಳಿತುಕೊಂಡು ಕಜ್ಜಿಯನ್ನು ಕೆರೆಯುತ್ತಿದ್ದನು.ಅವನು ರೈಕ್ವನಿಗೆ ಹೇಳಿದನು."ಇಗೋ ಆರುನೂರು ಗೋವುಗಳು ,ಇದು ಕಂಠಹಾರ,ಇದು ಅಶ್ವತರೀರಥ'.ಭಗವಂತನೆ ನೀನು ಯಾವದೇವತೆಯನ್ನು ಉಪಾಸಿಸುತ್ತಿರುವೆಯೋ ಆ ದೇವತೆಯನ್ನು ನನಗೆ ಉಪದೇಶಿಸು." ರೈಕ್ವನು ಅವುಗಳನ್ನು ಸ್ವೀಕರಿಸಲಿಲ್ಲ.(177)
4)ನಂತರ ಯಾವ ಯಾವ ಗ್ರಾಮಗಳಲ್ಲಿ ರೈಕ್ವನು ವಾಸವಾಗಿದ್ದೊ ಅವುಳೆಲ್ಲವನ್ನೂ ರಾಜನು ರೈಕ್ವನಿಗೆದಾನ ಮಾಡಿದನು.(ಪುಟ 178)
5) ವಿದ್ಯಾದಾನಕ್ಕೆ ಈ ಆರು ಜನ ತೀಥ೯ಗಳು ಅಥವಾ ದ್ವಾರಗಳು:
1)ಬ್ರಹ್ಮಚಾರಿ 2)ಧನದಾಯಿ 3)ಮೇಧಾವಿ 4)ಶ್ರೋತ್ರಿಯ, 5)ಪ್ರಿಯ 6)ವಿದ್ಯೆಗೆ ವಿದ್ಯೆಯನ್ನು ಕೊಡುವವನು. ಈ ಆರೂ ತೀಥ೯ಗಳು.(ಪುಟ178)
6)ಯವುದು ತನ್ನಲ್ಲಿ ಎಳೆದುಕೊಳ್ಳುವುದೊ ಅಥವಾ ಲಯಮಾಡಿಕೊಳ್ಳುವುದೊ ಅಥವಾ ಎಲ್ಲವನ್ನೂ ಒಳಗೊಳ್ಳುವುದೋ ಅದು ಸಂವಗ೯.ವಾಯುವೇ ಸಂವಗ೯ಗುಣದಿಂದ ಕೂಡಿರುವುದೆಂದು ತಿಳಿಯಬೇಕು. ಯಾವಾಗ ಅಗ್ನಿಯು ನಂದಿಹೋಗುತ್ತದೆಯೊ ಆಗ ವಾಯುವಿನಲ್ಲಿಯೇ ಲೀನವಗುತ್ತದೆ.ಯಾವಾಗ ಸೂಯ೯ನು ಅಸ್ತಮಿಸುತ್ತಾನೋ ಆಗ ಆಗ ವಾಯುವಿನಲ್ಲಿಯೇ ಲೀನವಾಗಿ ಹೋಗುತ್ತಾನೆ.ಚಂದ್ರನೂ ಕೂಡ ಅಸ್ತಮಿಸಿದಗ ವಾಯುವಿನಲ್ಲಿಯೇ ಲೀನವಾಗುತ್ತಾನೆ.(ಪುಟ 178)
7)ಪ್ರಲಯಕಾಲದಲ್ಲಿ ಸೂಯ೯ಚಂದ್ರರ ಸ್ವರೂಪವು ನಾಶವಾಗುವಾಗ ತೇಜೋರೂಪವನ್ನು ಪಡೆದು ಅವರು ವಾಯುವಿನಲ್ಲಿಯೇ ಲೀನವಾಗುತ್ತಾರೆ.(ಪುಟ17೯)
8)ಯಾವಾಗ ನೀರು ಒಣಗುತ್ತದೆಯೊ ಆಗ ವಾಯುವಿನಲ್ಲಿಯೇ ಲೀನವಾಗುತ್ತದೆ.ಏಕೆಂದರೆ ವಾಯುವೇ ಇವೆಲ್ಲವನ್ನು ಒಳಗುಳ್ಳುತ್ತದೆ.ಇದು ದೇವತಾ ವಿಷಯಕವಾದ ಸಂವಗ೯ದಶ೯ನ.(ಪುಟ17೯)
೯)ಇನ್ನು ಶರೀರವಿಷಯವಾದ ಸಂವಗ೯ದಶ೯ನ.ಮುಖ್ಯಪ್ರಾಣವೇ ಸಂವಗ೯.ಮನುಷ್ಯನು ಯಾವಾಗ ನಿದ್ರಿಸುವನೊ ಆಗ ವಾಕ್ಕು ಪ್ರಾಣದಲ್ಲಿಯೇ ಲೀನವಾಗಿ ಹೋಗುತ್ತದೆ.ಹೀಗೆಯೇ ಚಕ್ಷುಸ್ಸು,ಶ್ರೋತ್ರ ಮತ್ತು
ಮನಸ್ಸು ;ಏಕೆಂದರೆ ಪ್ರಾಣವೇ ಇವೆಲ್ಲವನ್ನೂ ಒಳಗೊಳ್ಳುತ್ತವೆ.(ಪುಟ17೯)
10)ಆ ಇವೆರಡೇ ಸಂವಗ೯ಗಳು :ದೇವತೆಗಳಲ್ಲಿ ವಾಯುವೇ,ಇಂದ್ರಿಯಗಳಲ್ಲಿ ಪ್ರಾಣವೇ.(ಪುಟ180)
11)ಒಂದು ಸಲ ಶೌನಕ, ಕಾಪೇಯ, ಅಭಿಪ್ರತಾರಿ ಕಾಕ್ಷಸೇನಿ-ಇವರು ಭೋಜನ ಮಡುತ್ತಿರುವಾಗ ಪಬ್ಬ ಬ್ರಹ್ಮಚಾರಿಯು ಭಿಕ್ಷೆ ಬೇಡಿದನು.ಅವರು ಅವನಿಗೆ ಏನನ್ನೂ ಕೊಡಲಿಲ್ಲ.
(ಶುನಕನ ಮಗನು ಶೌನಕ,ಕಪಿ-ಗೋತ್ರದವನು ಕಾಪೇಯ,ಕಕ್ಷಸೇನನ ಮಗನು ಕಾಕ್ಷಸೇನಿ. ಇವರೆಲ್ಲರೂ ಸಂವಗ೯ವಿದ್ಯಾ ಉಪಾಸಕರು)(ಪುಟ180)
12)ಬ್ರಹ್ಮಚಾರಿಯು ಹೀಗೆ ಹೇಳಿದನು.'ಒಬ್ಬನೇ ದೇವನಾದ ಪ್ರಜಾಪತಿಯು ನಾಲ್ವರು ಮಹಾತ್ಮರನ್ನು ನುಂಗಿದ್ದಾನೆ.ಓ ¥ಕಾಪೇಯ,ಓ ಅಭಿಪ್ರತಾರಿ,ಬಹುರೂಪದಿಂದ ಇರುತ್ತಿರುವ ಅವನನ್ನು ಮತ್ಯ೯ರು ನೋಡಲಾರರು.ಯಾವನಿಗೆ ಅನ್ನವು ಸೇರಿದೆಯೊ ಅವನಿಗೆ ಅನ್ನವನ್ನು ಕೊಡಲಿಲ್ಲ.(ಪುಟ 181)
13)'ನನಗೆ ಭಿಕ್ಷೆಯನ್ನು ಕೊಡದಿರುವುದು ಆ ದೇವನಿಗೆ ಕೊಡದಿದ್ದಂತೆಯೆ'(ಪುಟ 181)
14)ಅವರು ಅವನಿಗೆ ಅನ್ನವನ್ನು ಕೊಟ್ಟರು. ಶ್ರುತಿಯ ಪ್ರಕರ ಅನ್ನಕ್ಕೆ ವಿರಾಟ್ ಎಂಬ ಹೆಸರಿದೆ.(ವಿರಾಡನ್ನಂ)(ಪುಟ 183)
ನಾಲ್ಕನೆಯ ಖಂಡ(ಸತ್ಯಕಾಮಜಾಬಾಲನ ಕಥೆ):
15)ಅನ್ನ-ಅನ್ನಾದತ್ವ-ರೂಪದಿಂದ ಸಂಸ್ತುತವೂ ವಾಗಾದಿ-ಅಗ್ನ್ಯಾದಿರೂಪದಿಂದಿರುವುದೂ ಆದ ಜಗತ್ತನ್ನು ಕಾರಣರೂಪದಿಂದ ಏಕವೆಂದು ಭಾವಿಸಿ,ಹದಿನಾರು ಪ್ರಕಾರದಿಂದ ವಿಂಗಡಿಸಿ ಅದರಲ್ಲಿ ಬ್ರಹ್ಮದೃಷ್ಟಿಯನ್ನು ವಿಧಿಸಬೇಕೆಂದು ಈ ಭಾಗವು ಆರಂಭವಾಗಿದೆ.ಶ್ರದ್ಧಾ ತಪಸ್ಸುಗಳು ಬ್ರಹ್ಮೋಪಾಸನೆಗೆ ಅಂಗವೆಂಬುದನ್ನು ತಿಳಿಸಲು ಈ ಆಖ್ಯಾಯಿಕೆಯು ಬಂದಿದೆ(ಪುಟ 184)
16)ಜಾಬಾಲೆಯು ಸತ್ಯಕಾಮನನ್ನು ಕುರಿತು ಹೇಳಿದಳು.'ನೀನು ಯಾವಗೋತ್ರದವನೊ ನಾನು ಅರಿಯೆನು.
ನಾನು ಯೌವನದಲ್ಲಿ ಪರಿಚಾರಿಕೆಯಾಗಿದ್ಧಾಗ ನಿನ್ನನ್ನು ಪಡೆದೆನು.ನೀನು ಯಾವ ಗೋತ್ರದವನೊ ನಾನು ಅದನ್ನು ಅರಿಯೆನು.ನಾನು ಜಬಾಲಾ ಎಂಬ ಹೆಸರಿನವಳು.ನೀನು ಸತ್ಯಕಾಮನೆಂಬ ಹೆಸರಿನವನು.ಆದ್ದರಿಂದ ಸತ್ಯಕಾಮ ಜಾಬಾಲಾ ಎಂದು ಹೇಳಿಕೊ.'(ಪುಟ 184)
17)ಸತ್ಯಕಾಮನು ಗುರು ಗೌತಮ ಹಾರಿದ್ರುಮನ ಬಳಿ ಬಂದು ಹೇಳಿದನು."ಭಗವಂತನಾದ ತಮ್ಮಲ್ಲಿ ಬ್ರಹ್ಮಚಯ೯ವಾಸ ಮಾಡಬೇಕೆಂದಿರುವೆನು.
ಗೌತಮ:'ನೀನು ಯಾವ ಗೋತ್ರದವನು?'
ಸತ್ಯಕಾಮ: 'ನಾನು ಯಾವ ಗೋತ್ರದವನೊ ಅದನ್ನು ನಾನು ಅರಿಯೆನು.ನಾನು ತಾಯಿಯನ್ನು ಪ್ರಶ್ನಿಸಿದೆನು.ಅವಳು ಗೊತ್ತಿಲ್ಲವೆಂದು ಹೇಳಿದಳು.ನಾನು ಜಾಬಾಲಳ ಮಗನಾದ್ದರಿಂದ ಸತ್ಯಕಾಮ ಜಾಬಾಲನು'.
(ಪುಟ 186)
ಗೌತಮ:ಅಬ್ರಾಹ್ಮಣನು ಇದನ್ನು ಹೇಳಲಾರನು.ಸೋಮ್ಯ,ಸಮಿತ್ತನ್ನು ತೆಗೆದುಕೊಂಡು ಬಾ.ನಿನಗೆ ಉಪನಯನ ಮಾಡಿಸುವೆನು.ನೀನು ಸತ್ಯದಿಂದ ಚಲಿಸಲಿಲ್ಲ.(ಇಲ್ಲಿ ನಾವು ತಿಳಿದಿರುವಂತೆ ಜಾತಿಯು ಹುಟ್ಟಿನಿಂ ದ ನಿಧ೯ರವಾಗುತ್ತಿರಲಿಲ್ಲ ಎಂಬುದು ತಿಳಿಯುತ್ತದೆ.)(ಪುಟ 186)
18) ಗೌತಮನು ಸತ್ಯಕಾಮನಿಗೆ ಕೃಶವೂ ದುಬ೯ಲವೂ ಆದ ನಾನೂರು ಗೋವುಗಳನ್ನು ಕೊಟ್ಟು ಹೀಗೆ ಹೇಳಿದನು:'ಸೋಮ್ಯ ,ನೀನು ಇವುಗಳನ್ನು ಹಿಂಬಾಲಿಸು'.(ಪುಟ 186)
1೯) ಸತ್ಯಕಾಮನು 'ಸಹಸ್ರವಾಗದೆ ನಾನು ಹಿಂತಿರುಗುವುದಿಲ್ಲ'ವೆಂದು ತನಗೆ ತಾನೇ ಹೇಳಿಕೊಂಡನು.ಅವನು ಅನೇಕ ವಷ೯ಗಳವರೆಗೆ ಕಾಡಿನಲ್ಲಿ ವಾಸಮಾಡಿದನು. ಅವು ಸರಸ್ರವಾದಾಗ-(ಪುಟ 186)
ಐದನೆಯ ಖಂಡ:
20) ಮಂದೆಯಲ್ಲಿದ್ದ ಒಂದು ಹೋರಿಯು ಇವನನ್ನು ಕುರಿತು ಹೇಳಿತು."ಸತ್ಯಕಾಮ,ನಾವು ಸಾವಿರವಾಗಿದ್ಧೇವೆಆಚಾಯ೯ರ ಮನೆಗೆ ನಮ್ಮನ್ನು ಸೇರಿಸು.'.
(ಶ್ರದ್ಧಾ ತಪಸ್ಸುಗಳಿಂದ ಸಿದ್ಧವಾಗಿದ್ದ ಸತ್ಯಕಾಮನಲ್ಲಿ ದಿಕ್ಸಂಬಂಧವಾದ ವಾಯು ದೇವತೆಯು ತೃಪ್ತವಾಗಿ ಅವನನ್ನು ಅನುಗ್ರಹಿಸುವುದಕ್ಕೆ ಹೋರಿಯನ್ನು ಪ್ರವೇಶಿಸಿ ಋಷಭ ಭಾವವನ್ನು ಪಡೆಯಿತು.(ಪುಟ 187)
21)ನಿನಗೆ ಬ್ರಹ್ಮದ ಒಂದು ಪಾದವನ್ನು ಉಪದೇಶಿಸುತ್ತೇನೆ.'ಪೂವ೯ದಿಕ್ಕು ಒಂದುಕಲೆ,ಪಶ್ಚಿಮದಿಕ್ಕು ಒಂದುಕಲೆ.ದಕ್ಷಿಣ ದಿಕ್ಕು ಒಂದು ಕಲೆ,ಉತ್ತರದಿಕ್ಕು ಒಂದು ಕಲೆ. ಇದೇ 'ಪ್ರಕಾಶವಾನ್' ಎಂಬ ನಾಲ್ಕು ಕಲೆಗಳುಳ್ಳ ಪಾದವು.(ಪುಟ100)
22) ಯಾವನು ಹೀಗೆ ಬ್ರಹ್ಮದ ಈ ಚತುಷ್ಕಲ ಪಾದವನ್ನು ಹೀಗೆ ಉಪಾಸಿಸುವನೊ ಅವನು ಈ ಲೋಕದಲ್ಲಿ ಪ್ರಖ್ಯಾತನಾಗುವನು.(ಪುಟ 188)
ಐದು,ಆರು ಏಳು ಎಂಟನೆಯ ಖಂಡ(ಸಾರಾಂಶ):
23)ಸಾರಾಂಶ:(ಷೋಡಶಕಲವಿದ್ಯೆ,ಹದಿನಾರು ಕಲೆಗಳು)
10 ವಾಯುದೇವತೆ-ಹೋರಿಯ ರೂಪ- ಪೂವ೯,ಪಶ್ಚಿಮ,ದಕ್ಷಿಣ,ಉತ್ತರ-'ಪ್ರಕಾಶವಾನ್'
2) ಅಗ್ನಿದೇವತೆ-ಅಗ್ನಿ ರೂಪ-ಪೃಥ್ವಿ,ಅಂತರಿಕ್ಷ,ದ್ಯುಲೋಕ,ಸಮುದ್ರ ಇವು ನಾಲ್ಕು ಕಲೆಗಳು.-'ಅನಂತವಾನ್'
3) ಆದಿತ್ಯ-ಹಂಸದ ರೂಪ-ಅಗ್ನಿ,ಸೂಯ೯,ಚಂದ್ರ,ವಿದ್ಯುತ್ತು ನಾಲ್ಕು ಕಲೆಗಳು-'ಜ್ಯೋತಿಷ್ಮಾನ್'
4)ಪ್ರಾಣ - ಮದ್ಗು(ಇದೊಂದು ಪಕ್ಷಿ)-ಪ್ರಾಣ,ಚಕ್ಷುಸ್ಸು,ಶ್ರೋತ,್ರಮನಸ್ಸು ಎಂಬ ನಾಲ್ಕು ಕಲೆಗಳು.-ಇದೇ ಬ್ರಹ್ಮದ 'ಆಯತನವಾನ್' ಎಂಬ ಪಾದ.(ಪುಟ1೯4)
ಒಂಬತ್ತನೆಯ ಖಂಡ:
24) ಸತ್ಯಕಾಮನು ಆಚಾಯ೯ ಗೃಹವನ್ನು ಸೇರಿದನು.(ಪುಟ 1೯5)
25)ಬ್ರಹ್ಮಜ್ಞಾನಿಯು ಪ್ರಸನ್ನವಾದ ಮುಖವುಳ್ಳವನೂ ನಗುಮುಖದವನೂ ವಿಶ್ಚಿಂತನೂ ಕೃಥಾಥ೯ನೂ ಆಗಿರುತ್ತಾನೆ.(ಪುಟ 1೯5)
26) ದೇವತೆಗಳು ಉಪದೇಶಿಸಿದ್ದರೂ ಆಚಾಯ೯ನು ಹೇಳಿಕೊಟ್ಟ ಮೇಲೆಯೇ ಅದಕ್ಕೆ ಬೆಲೆಯಿರುವುದು.ಆಚಾಯ೯ನು ಸತ್ಯಕಾಮನಿಗೆ ಇದನ್ನೇ ಉಪದೇಶಿಸಿದನು.(ಪುಟ 1೯5)
ಹತ್ತನೆಯ ಖಂಡ:
27) ಒಂದಾನೊಂದು ಕಾಲದಲ್ಲಿ ಉಪಕೋಸಲ ಕಾಮಲಾಯನನು ಸತ್ಯಕಾಮ ಜಾಬಾಲನ ಮನೆಯಲ್ಲಿ ಬ್ರಹ್ಮಚಯ೯ವಾಸ ಮಾಡಿದನು.ಉಪಕೋಸಲನು ಸತ್ಯಕಾಮನ ಅಗ್ನಿಗಳನ್ನು ಹನ್ನೆರಡು ವಷ೯ ನೋಡಿಕೊಂಡನು.ಸತ್ಯಕಾಮನು ಇತರ ಶಿಷ್ಯರಿಗೆ ಅಧ್ಯಯನವನ್ನು ಮಾಡಿಸಿ ಕಳುಹಿಸಿಕೊಟ್ಟನು.ಆದರೆ ಉಪಕೋಸಲನನ್ನು ಮಾತ್ರ ಕಳುಹಿಸಿಕೊಡಲಿಲ್ಲ.(ಪುಟ 1೯7)
28) ಆಗ ಅಗ್ನಿಗಳು ತಪೋನಿಷ್ಠನಾದ ಬ್ರಹ್ಮಚಾರಿಯು ನಮಗೆ ಚೆನ್ನಾಗಿ ಸೇವೆ ಮಾಡಿದ್ದಾನೆ.ಇವನಿಗೆ ಉಪದೇಶಿಸೋಣ ಎಂದು ಈ ರೀತಿ ಉಪದೇಶಿಸಿದವು.'ಪ್ರಾಣವು ಬ್ರಹ್ಮ,ಸುಖವು ಬ್ರಹ್ಮ,ಆಕಾಶವು ಬ್ರಹ್ಮ,'ಎಂದು ಅಗ್ನಿಗಳು ಅವನಿಗೆ ಉಪದೇಶಿಸಿದವು.(ಪುಟ 1೯8)
2೯)ಅಗ್ನಿಗಳು 'ಯಾವುದು ಕಮ್ ಎಂಬುದೊ ಅದೇ ಖಮ್,ಯಾವುದು ಖಮ್ ಎಂಬುದೊ ಅದೇ ಕಮ್'ಎಂದು ಪ್ರಾಣವನ್ನೂ ಅದರ ಆಕಾಶವನ್ನೂ ಅವನಿಗೆ ಉಪದೇಶಿಸಿದುವು.(ಪುಟ 1೯೯)
30)ಕ ಎಂದರೆ ಸುಖ,ಖ ಎಂದರೆ ಆಕಾಶ.ಈ ಎರಡು ಪದಗಳು ಒಂದಕ್ಕೊಂದು ವಿಶೇಷಣವಾಗಿ ಬ್ರಹ್ಮಾನಂದವೆಂಬ ಒಂದೇ ಅಥ೯ವನ್ನು ಕೊಡುತ್ತವೆ.೯ಪುಟ 1೯೯)
ಹನ್ನೊಂದನೆಯ ಖಂಡ:
31)ಅನಂತರ ಗಾಹ೯ಪತ್ಯಾಗ್ನಿಯು ಉಪಕೋಸಲನಿಗೆ ಅನುಶಾಸನ ಮಾಡಿತು:ಪೃಥ್ವಿ,ಅಗ್ನಿ,ಅನ್ನ,ಆದಿತ್ಯ -ಇವು ನನ್ನ ನಾಲ್ಕು ರೂಪಗಳು. ಆದಿತ್ಯನಲ್ಲಿ ಕಂಡುಬರುವ ಪುರುಷನೇ ನಾನಾಗಿದ್ದೇನೆ.ಅವನೇ ನಾನಾಗಿದ್ದೇನೆ.'(ಪುಟ 200)
32)ಪೃಥ್ವಿ ಅನ್ನ ಇವು ಭೋಜ್ಯರೂಪವಾಗಿವೆ.ಆದರೆ ಅಗ್ನಿ ಆದಿತ್ಯ ಇವು ಭೋಕ್ತø ರೂಪಗಳು.
ಆದರೆ ಬ್ರಹ್ಮವು ಈ ನಾಲ್ಕು ರೂಪಗಳಲ್ಲಿಯೂ ವ್ಯಕ್ತವಾಗಿರುವುದು.(ಪುಟ 200)
33)ಯಾವನು ಹೀಗೆ ಅರಿತುಕೊಂಡು ಉಪಾಸಿಸುವನೊ ಅವನು ಪಾಪಕಮ೯ವನ್ನು ನಾಶಗೊಳಿಸಿಕೊಳ್ಳುತ್ತಾನೆ.ಅಗ್ನಿಲೋಕವನ್ನು ಹೊಂದುತ್ತಾನೆ.ಪೂಣಾ೯ಯಸ್ಸನ್ನು ಪಡೆಯುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಇವನ ಸಂತತಿಯು ನಾಶವಾಗುವುದಿಲ್ಲ.ಯಾವನು ಇದನ್ನು ಹೀಗೆ ಅರಿತುಕೊಂಡು ಉಪಾಸಿಸುವನೊ ಅವನನ್ನು ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಕಾಪಾಡುತ್ತೇವೆ.(ಪುಟ 201)
ಹನ್ನೆರಡನೆಯ ಖಂಡ:
34) ಅನಂತರ ಅನ್ವಾಹಾಯ೯ ಪಚನವು ಉಪಕೋಸಲನಿಗೆ ಅನುಶಾಸನ ಮಾಡಿತು:'ನೀರು,ದಿಕ್ಕುಗಳು,ನಕ್ಷತ್ರಗಳು,ಚಂದ್ರ-ಇವು ನನ್ನ ನಾಲ್ಕು ರೂಪಗಳು.ಚಂದ್ರನಲ್ಲಿ ಕಂಡುಬರುವ ಪುರುಷನೇ ನಾನಾಗಿದ್ಧೇನೆ;
ಅವನೇ ನಾನಾಗಿದ್ದೇನೆ.(ಪುಟ 201)
35)ಇಷ್ಟಿ-ಯಜ್ಞದಲ್ಲಿ ಋತ್ವಿಕ್ಕುಗಳು ಯಾವ ಅನ್ನ ದಕ್ಷಿಣೆಯನ್ನು ಪಡೆಯುತ್ತಾರೆಯೊ ಅದಕ್ಕೆ ಅನ್ವಾಹಾಯ೯ವೆಂದು ಹೆಸರು.(ಪುಟ201)
36ಯಾವನು ಹೀಗೆ ಅರಿತುಕೊಂಡು ಉಪಾಸಿಸುವನೊ ಅವನು ಪಾಪಕಮ೯ವನ್ನು ನಾಶಗೊಳಿಸಿಕೊಳ್ಳುತ್ತಾನೆ.ಅಗ್ನಿಲೋಕವನ್ನು ಹೊಂದುತ್ತಾನೆ.ಪೂಣಾ೯ಯಸ್ಸನ್ನು ಪಡೆಯುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಇವನ ಸಂತತಿಯು ನಾಶವಾಗುವುದಿಲ್ಲ.ಯಾವನು ಇದನ್ನು ಹೀಗೆ ಅರಿತುಕೊಂಡು ಉಪಾಸಿಸುವನೊ ಅವನನ್ನು ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಕಾಪಾಡುತ್ತೇವೆ.(ಪುಟ 202)
ಹದಿಮೂರನೆಯ ಖಂಡ:
37)ಅನಂತರ ಅಹನೀಯಾಗ್ನಿಯು ಅನುಶಾಸನ ಮಾಡಿತು.ಪ್ರಾಣ ಆಕಾಶ ದ್ಯುಲೋಕ ಮಿಂಚು-ಇವು ನನ್ನ ನಾಲ್ಕು ರೂಪಗಳು.ಮಿಂಚಿನಲ್ಲಿ ಕಾಣಬರುವ ಪುರುಷನೇ ನಾನಾಗಿದ್ದೇನೆ.(ಪುಟ 202)
38)
ಯಾವನು ಹೀಗೆ ಅರಿತುಕೊಂಡು ಉಪಾಸಿಸುವನೊ ಅವನು ಪಾಪಕಮ೯ವನ್ನು ನಾಶಗೊಳಿಸಿಕೊಳ್ಳುತ್ತಾನೆ.ಅಗ್ನಿಲೋಕವನ್ನು ಹೊಂದುತ್ತಾನೆ.ಪೂಣಾ೯ಯಸ್ಸನ್ನು ಪಡೆಯುತ್ತಾನೆ.ಉಜ್ವಲವಾಗಿ ಜೀವಿಸುತ್ತಾನೆ.ಇವನ ಸಂತತಿಯು ನಾಶವಾಗುವುದಿಲ್ಲ.ಯಾವನು ಇದನ್ನು ಹೀಗೆ ಅರಿತುಕೊಂಡು ಉಪಾಸಿಸುವನೊ ಅವನನ್ನು ಈ ಲೋಕದಲ್ಲಿಯೂ ಪರಲೋಕದಲ್ಲಿಯೂ ಕಾಪಾಡುತ್ತೇವೆ.(ಪುಟ 203)
ಹದಿನಾಲ್ಕನೆಯ ಖಂಡ:
3೯)ಅನಂತರ ಅಗ್ನಿಗಳು ಒಟ್ಟಾಗಿ ಇವನಿಗೆ ಹೇಳಿದವು:ಉಪಕೋಸಲ ಇದು ನಿ£ಗೆನಾವು ಉಪದೇಶಿಸಿರುವ ನಮ್ಮ ವಿದ್ಯೆ ಮತ್ತು ಆತ್ಮವಿದ್ಯೆ.ಆದರೆ ಆಚಾಯ೯ನು ವಿದ್ಯಾಫಲ ಪ್ರಾಪ್ತಿಗಾಗಿ ನಿನಗೆ ಗತಿಯನ್ನು ಉಪದೇಶಿಸುವನು..ಇವನ ಆಚಾಯ೯ನು ಹಿಂತಿರುಗಿ ಬಂದನು. ಮತ್ತು ಉಪಕೋಸಲನನ್ನು ಕೇಳಿದನು.(ಪುಟ 204)
40)ಸೋಮ್ಯ ನಿನ್ನ ಮುಖವು ಬ್ರಹ್ಮಜ್ಞಾನಿಯ ಮುಖದಂತೆ ಹೊಳೆಯುತ್ತಿದೆ.ನಿನಗೆ ಯಾವನು ಉಪದೇಶಿಸಿದನು?ಅವು ನಿನಗೆ ಏನನ್ನು ಹೇಳಿದವು?೯ಪುಟ 205)
41)ಆಚಾಯ೯: ಸೋಮ್ಯ,ನಿನಗೆ ಅಗ್ನಿಗಳು ಲೋಕಗಳನ್ನೇ ಉಪದೇಶಿಸಿವೆ.ಆದರೆ ನಾನು ನಿನಗೆ ಬ್ರಹ್ಮವನ್ನು ಉಪದೇಶಿಸುತ್ತೇನೆ.ಹೇಗೆ ಪದ್ಮಪತ್ರಕ್ಕೆ ನೀರು ಅಂಟಿಕೊಳ್ಳುವುದಿಲ್ಲವೊ ಹಾಗೆಯೇ ಬ್ರಹ್ಮವನ್ನು ಅರಿತುಕೊಂಡಿರುವವನಿಗೆ ಪಾಪಕಮ೯ವು ಅಂಟಿಕೊಳ್ಳುವುದಿಲ್ಲ.(Àುಟ 205)
ಹದಿನೈದನೆಯ ಖಂಡ:
42) ಕಣ್ಣಿನಲ್ಲಿ ಯಾವ ಪುರುಷನು ಕಾಣಿಸಿಕೊಳ್ಳುತ್ತಾನೆಯೊ ಅವನೇ ಆತ್ಮನು.ಇದೇ ಅಮೃತ,ಅಭಯ;ಇದು ಬ್ರಹ್ಮ.ಆದುದರಿಂದ ಪುರುಷಸ್ಥಾನವಾದ ಕಣ್ಣಿನಲ್ಲಿ ತುಪ್ಪವನ್ನಾಗಲಿ ನೀರನ್ನಾಗಲೀ ಚಿಮುಕಿಸಿದರೆ ಅದು ಕಣ್ಣಿನ ಅಂಚುಗಳಲ್ಲಿ ಹರಿದುಹೋಗುತ್ತದೆ.' ಎಂದು ಆಚಾಯ೯ನು ಹೇಳಿದನು.(ಪುಟ 206)
43)ಇವನನ್ನು 'ಸಂಯದ್ವಾಮ'ನೆಂದು ಕರೆಯುತ್ತಾರೆ.ಏಕೆಂದರೆ ಎಲ್ಲಾ ಶುಭವಸ್ತುಗಳೂ ಇವನನ್ನು ಬಂದು ಸೇರುತ್ತವೆ.(ಪುಟ 207)
44)ಪುನಃ ಇವನೇ ವಾಮನಿಯು.ಏಕೆಂದರೆ ಇವನು ಶುಭಗಳನ್ನೆಲ್ಲ ನಡೆಸಿಕೊಂಡು ಹೋಗುತ್ತಾನೆ.ಯಾವನು ಹೀಗೆ ಅರಿತುಕೊಂಡಿರುವನೊ ಅವನು ಎಲ್ಲಾ ಶುಭಗಳನ್ನೂ ನಡೆಸುತ್ತಾನೆ.(ಪುಟ 207)
45)ಪುನಃ ಇವನೇ ಭಾಮನಿಯು.ಏಕೆಂದರೆ ಇವನು ಎಲ್ಲ ಲೋಕಗಳಲ್ಲಿಯೂ ಪ್ರಕಾಶಿಸುತ್ತಾನೆ.ಯಾವನು ಹೀಗೆ ಅರಿತುಕೊಂಡಿರುವನೊ ಅವನು ಎಲ್ಲ ಲೋಕಗಳಲ್ಲಿಯೂ ಪ್ರಕಾಶಿಸುತ್ತಾನೆ.(ಪುಟ 208)
46)'ಅವನ ಪ್ರಕಾಶದಿಂದಲೇ ಇವೆಲ್ಲವೂ ಪ್ರಕಾಶಿಸುವುದು'(ತಸ್ಯ ಭಾಸಾ ಸವ೯ಮಿದಂ ವಿಭಾತಿ(ಮುಂ.ಉ.
2.2.11)
47) ಇಂಥ ಉಪಾಸಕರು ಮೃತರಾದಾಗ (ಇವರಿಗೆ ಋತ್ವಿಕ್ಕುಗಳು ಶವದಹನ ಕಮ೯ವನ್ನು ಮಾಡಲಿ ಮಾಡದಿರಲಿ ಇವರು ಅಚಿ೯ದೇವತೆಯನ್ನು ಸೇರುತ್ತಾರೆ. ಅಲ್ಲಿಂದ ಅಹ೯ದೇವತೆ -ಶುಕ್ಲಪಕ್ಷದೇವತೆ-ಉತ್ತರಾಯಣ ದೇವತೆಗಳನ್ನು- ಸಂವತ್ಸರ ದೇವತೆಯನ್ನು-ಆದಿತ್ಯ-ಚಂದ್ರ-ವಿದ್ಯುದ್ದೇವತೆಯನ್ನು ಸೇರುತ್ತಾರೆ.ಅಲ್ಲಿರುವ ಅಮಾನುಷ ಪುರುಷನೊಬ್ಬನು ಸತ್ಯಲೋಕದಲ್ಲಿರುವ ಬ್ರಹ್ಮದ ಬಳಿಗೆ ಸೇರಿಸುತ್ತಾನೆ.ಇದು ದೇವಪಥವು,ಬ್ರಹ್ಮಪಥವು.ಇದರಿಂದ ಹೋಗಿ ಬ್ರಹ್ಮವನ್ನು ಸೇರುವವರು ಈ ಸಂಸಾರ ಚಕ್ರಕ್ಕೆ ಹಿಂತಿರುಗುವುದಿಲ್ಲ.(ಪುಟ20೯)
ಹದಿನಾರನೆಯ ಖಂಡ:
48)ಯಾವನು ಬೀಸುತ್ತಾನೆಯೊ ಇವನೇ ಯಜ್ಞ.ಇವನೇ ಹೋಗುತ್ತಾ ಇದೆಲ್ಲವನ್ನೂ ಪವಿತ್ರಗೊಳಿಸುತ್ತಾನೆ.ಇವನು ಹೋಗುತ್ತ ಇದೆಲ್ಲವನ್ನೂ ಪವಿತ್ರಗೊಳಿಸುವುದರಿಂದ ಇವನೇ ಯಜ್ಞ.ಮನಸ್ಸು ಮತ್ತು ಯಜ್ಞ ಇವೆರಡೂ ಈ ಯಜ್ಞಕ್ಕೆ ದಾರಿಗಳು.(ಪುಟ 211)
4೯) ವಾಯುವು ಚಲನಾತ್ಮಕವಾದುದು.ಯಜ್ಞವು ಕ್ರಿಯಾತ್ಮಕವಾದುದು.ಆದುದರಿಂದ ವಾಯುವೇ ಯಜ್ಞವು.(ಪುಟ 211)
50)ವಾಕ್ ಮನಸ್ಸುಗಳಿಂದ ಯಜ್ಞವು ಸಾಗುವುದರಿಂದ ಅವು ಯಜ್ಞಕ್ಕೆ ದಾರಿಗಳು.(ಪುಟ 211)
51) ಈ ಎರಡು ದಾರಿಗಳಲ್ಲಿ ಒಂದನ್ನು ಬ್ರಹ್ಮನೆಂಬ ಋತ್ವಿಕ್ಕು ವಿವೇಚನಾ ಜ್ಞಾನವುಳ್ಳ ಮನಸ್ಸಿನಿಂದ ಸಂಸ್ಕರಿಸುತ್ತಾನೆ. ಹೋತ್ರ ಅಧ್ವಯು೯ ಉದ್ಗಾತೃ ಎಂಬ ಋತ್ವಿಕ್ಕುಗಳು ಇನ್ನೊಂದನ್ನು ವಾಕ್ಕಿನಿಂದ ಸಂಸ್ಕರಿ¸ುತ್ತಾರೆ.(ಪುಟ 212)
52) ಮೌನವಿಜ್ಞಾನವನ್ನು ಅರಿತುಕೊಂಡಿರುವ ಬ್ರಹ್ಮವೆಂದು ಋತ್ವಿಕ್ಕಿನಿಂದ ಕೂಡಿದ ಯಜ್ಞವನ್ನು ಮಾಡಿದುದರಿಂದ ಯಜಮಾನನು ಶ್ರೇಷ್ಠನಗುವನು.(ಪುಟ 213)
ಹದಿನೇಳನೆಯ ಖಂಡ:
53) ಪ್ರಜಾಪತಿಯು ಲೋಕಗಳನ್ನು ಉದ್ದೇಶಿಸಿ ತಪಸ್ಸು ಮಾಡಿದನು.ಹೀಗೆ ತಪ್ಯಮಾನವಾದ ಆ ಲೋಕಗಳಿಂದ ರಸಗಳನ್ನು ಹಿಂಡಿ ತೆಗೆದನು.
ಪೃಥ್ವಿಯಿಂದ-ಅಗ್ನಿ ರೂಪವಾದ ರಸ
ಅಂತರಿಕ್ಷದಿಂದ -ವಾಯುರೂಪವಾದ ರಸ
ದ್ಯುಲೋಕದಿಂದ -ಆದಿತ್ಯ ರೂಪವಾದ ರಸ.(ಪುಟ 214)
54) ಪ್ರಜಾಪತಿಯು ಈ ಮೂರು ದೇವತೆಗಳನ್ನು ಉದ್ದೇಶಿಸಿ ತಪಸ್ಸು ಮಾಡಿದನು.ಆ ದೇವತೆಗಳಿಂದ ರಸವನ್ನು ಹಿಂಡಿ ತೆಗೆದನು.
ಅಗ್ನಿಯಿಂದ-ಋಕ್ಕುಗಳನ್ನು
ವಾಯುವಿನಿಂದ- ಯಜುಸ್ಸುಗಳನ್ನು
ಆದಿತ್ಯನಿಂದ- ಸಾಮಗಳನ್ನು.
ತ್ರಯೀ ವಿದ್ಯೆಗಳನ್ನು ಉದ್ಧರಿಸಿದನು ಎಂದಥ೯(ಪುಟ 214)
55) ಪ್ರಜಾಪತಿಯು ಈ ತ್ರಯೀ ವಿದ್ಯೆಯನ್ನು ಕುರಿತು ತಪಸ್ಸು ಮಾಡಿದನು.ಹೀಗೆ ತಪ್ಯಮಾನವಾದ ಆ ಲೋಕಗಳಿಂದ ರಸವನ್ನು ಹಿಂಡಿ ತೆಗೆದನು.
ಋಕ್ಕುಗಳಿಂದ ಭೂಃ ಎಂಬ ವ್ಯಾಹೃತಿ ರೂಪವಾದ ರಸವನ್ನು,,
ಯಜುಸ್ಸುಗಳಿಂದ-ಭುವಃ ಎಂಬ ವ್ಯಾಹೃತಿರೂಪವದ ರಸವನ್ನು
ಸಾಮಗಳಿಂದ-ಸ್ವಃ ಎಂಬ ವ್ಯಾಹೃತಿರೂಪವಾದ ರಸವನ್ನು.
ಆದುದರಿಂದ ಈ ಮಹಾ ವ್ಯಾಹೃತಿಗಳು ಲೋಕಗಳ ದೇವತೆಗಳ ಮತ್ತು ವೇದಗಳ ರಸಗಳಾಗಿವೆ.(ಪುಟ 215)
56) ಹೇಗೆ ಹೆಣ್ಣು ಕುದುರೆಯು ಯೋಧರನ್ನು ಕಾಪಾಡುತ್ತದೆಯೊ ಹಾಗೆಯೇ ಮಾನವನೂ ಬ್ರಹ್ಮನೂ ಆದ ಋತ್ವಿಕ್ಕನೊಬ್ಬನೇ ಕತೃ೯ಗಳನ್ನು ಕಾಪಡುತ್ತಾನೆ.ಹೀಗೆ ಅರಿತುಕೊಂಡಿರುವ ಬ್ರಹ್ಮನೇ ಯಜ್ಞವನ್ನೂ ಯಜಮಾನನ್ನೂ ಎಲ್ಲ ಋತ್ವಿಕ್ಕುಗಳನ್ನು ಕಾಪಡುತ್ತಾನೆ.ಆದುದರಿಂದ ಹೀಗೆ ಅರಿತುಕೊಂಡಿರುವವನನ್ನೇ ಬ್ರಹ್ಮನನ್ನಾಗಿ ನಿಯಮಿಸಬೇಕು.ಹೀಗೆ ಅರಿಯದವನನ್ನಲ್ಲ. (ಪುಟ20೯)
57)ಮೌನಾಚರಣೆಯಿಂದ ಅಥವಾ ಮನನದಿಂದ ಅಥವಾ ಜ್ಞಾನವುಳ್ಳವನಾದುದರಿಂದ ಮಾನವನು ಎನಿಸಿದ್ದಾನೆ.(ಪುಟ 21೯)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,ನಾಲ್ಕನೆಯ ಅಧ್ಯಾಯ ಮುಕ್ತಾಯವಾಯಿತು,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಐದನೆಯ ಅಧ್ಯಾಯ:
1) ಪ್ರಾಣಸಂವಾದ: ಯಾವನು ಜ್ಯೇಷ್ಠವೂ ಶ್ರೇಷ್ಠವೂ ಆಗಿರುವುದನ್ನು ತಿಳಿದಿರುವನೊ ಅವನು ಜ್ಯೇಷ್ಠವೂ ಶ್ರೇಷ್ಠವೂ ಆಗುತ್ತಾನೆ.ಪ್ರಾಣವೇ ಜ್ಯೇಷ್ಠವೂ ಶ್ರೇಷ್ಠವೂ ಆಗಿದೆ.(ಪುಟ 220)
2)ಹಿಂದೆ ಸಗುಣ ಬ್ರಹ್ಮೋಪಾಸನೆಗೆ ಉತ್ತರಾಯಣದ ಗತಿಯು ಫಲವೆಂದು ಹೇಳಿದೆ.(ಪುಟ 220)
3)ಈಗ ಪಂಚಾಗ್ನಿಗಳನ್ನು ಅರಿತುಕೊಂಡಿರುವ ಗೃಹಸ್ಥರಿಗೂ ಮತ್ತು ಅನ್ಯೋಪಾಸಕರಾದ ಊಧ್ವ೯ರೇತಸ್ಕರಿಗೂ ಉತ್ತರಮಾಗ೯ವೇ ಗತಿಯೆಂದು ಹೇಳಿದೆ.(ಪುಟ 220)
4)ಅನಂತರ ಕೇವಲ ಕಮಿ೯ಗಳಿಗೆ ಪುನರಾವೃತ್ತಿರಹಿತವಾದ ಮತ್ತು ಧೂಮಾದಿ ಲಕ್ಷಣಗಳುಳ್ಳ ದಕ್ಷಿಣಗತಿಯನ್ನು ಹೇಳುತ್ತದೆ.(ಪುಟ 220)
5)ಕೊನೆಯಲ್ಲಿ ಉಪಾಸನಾ ರಹಿತರೂ ಶಾಸ್ತ್ರೀಯ ಕಮ೯ರಹಿತರೂ ಆದ ಪ್ರಾಕೃತ ಮನುಷ್ಯರಿಗೆ ಧೂಮಮಾಗ೯ಕ್ಕಿಂತಲೂ ಕಷ್ಟಕರವಾದ ಸಂಸಾರಗತಿಯನ್ನು ಹೇಳಿದೆ.ಬ್ರಹ್ಮಜ್ಞಾನಕ್ಕೆ ಸಾಧನವಾದ
ವೈರಾಗ್ಯವನ್ನುಂಟು ಮಾಡುವುದೇ ಈ ಸಮಸ್ತ ವಣ೯ನೆಯ ಉದ್ದೇಶ.(ಪುಟ 220)
6)ಯಾವನು ವಸಿಷ್ಠನನ್ನು ತಿಳಿದಿರುವನೊ ಅವನು ತನ್ನ ಸಂಬಂಧಿಗಳಲ್ಲಿ ವಸಿಷ್ಠನಾಗುತ್ತಾನೆ.ವಾಕ್ಕೇ ವಸಿಷ್ಠವು(ಪುಟ 221)
7)ಯಾವನು ಪ್ರತಿಷ್ಠೆಯನ್ನು ತಿಳಿದಿರುವನೊ ಅವನು ಈ ಲೋಕದಲ್ಲಿಯೂ ಆಲೋಕದಲ್ಲಿಯೂ ಪ್ರತಿಷ್ಠಿತನಾಗುತ್ತಾನೆ.ಚಕ್ಷುಸ್ಸೇ ಪ್ರತಿಷ್ಠೆ.(ಪುಟ 221)
8)ಯಾವನು ಸಂಪತ್ತನ್ನು ತಿಳಿದಿರುವನೊ ಅವನಿಗೆ ದೈವಕಾಮಗಳೂ ಮಾನುಷಕಾಮಗಳೂ ಸಂಪಾದಿತವಾಗುತ್ತವೆ.ಶ್ರೋತ್ರವೇ ಸಂಪತ್ತು.(ಪುಟ 221)
೯)ಯಾವನು ಆಶ್ರಯವನ್ನು ತಿಳಿದಿರುವನೊ ಅವನು ತನ್ನ ಸಂಬಂಧಿಗಳಿಗೆ ಆಶ್ರಯವಾಗುವನು.ಮನಸ್ಸೇ ಆಶ್ರಯವು.(ಪುಟ 222)
10) ಒಂದುಸಲ ಪಂಚೇಂದ್ರಿಯಗಳು ತಮ್ಮ ತಮ್ಮ ಶ್ರೇಷ್ಠತ್ವ ವಿಷಯದಲ್ಲಿ 'ನಾನು ಶ್ರೇಷ್ಠನಾಗಿರುವೆನು ನಾನು ಶ್ರೇಷ್ಠನಾಗಿರುವೆನು' ಎಂದು ವಾದಿಸಿದವು.ಆ ಇಂದ್ರಿಯಗಳು ತಂದೆಯಾದ ಪ್ರಜಾಪತಿಯ ಬಳಿಗೆ ಹೋಗಿ ಕೇಳಿದವು.'ಭಗವಂತನೆ,ನಮ್ಮಲ್ಲಿ ಯಾವುದು ಶ್ರೇಷ್ಠವು.'ಅವನು ಹೇಳಿದನು.'ನಿಮ್ಮಲ್ಲಿ ಯಾರು ಉತ್ಕ್ರಮಿಸಿದರೆ ಶರೀರವು ಪಾಪಿಷ್ಠತರವಾದಂತೆ ಕಾಣುವುದೊ ಅದು ನಿಮ್ಮಲ್ಲಿ ಶ್ರೇಷ್ಠವು.'(ಪುಟ 223)
11)ಮೊದಲು ವಾಕ್ಕು ಉತ್ಕ್ರಮಿಸಿತು.ಅದು ಒಂದು ವಷ೯ ಹೊರಗಿದ್ದು ಹಿಂತಿರುಗಿ ಬಂದು ಹೇಳಿತು:'ನಾನಿಲ್ಲದೆ ನೀವು ಇರಲು ಹೇಗೆ ಶಕ್ಯವಾಗಿದ್ದಿರಿ?'ಅವು ಹೇಳಿದವು: ಹೇಗೆ ಮೂಕನು ಮಾತನಾಡದೆ,ಪ್ರಾಣದಿಂದ ಜೀವಿಸುತ್ತ ,ಕಣ್ಣಿಂದ ನೋಡುತ್ತ,ಕಿವಿಯಿಂದ ಕೇಳುತ್ತ,ಮನಸ್ಸಿನಿಂದ ಯೋಚಿಸುತ್ತ ,ಇರುವರೊ ಹಾಗೆಯೇ ಜೀವಿಸಿದ್ದೆವು.ಆಗ ವಾಗಿಂದಿಯ್ರವು ಶರೀರವನ್ನು ಪ್ರವೇಶಿಸಿತು(ಪುಟ 224)
12) ಕಣ್ಣು ಉತ್ಕ್ರಮಿಸಿತು. ಕ್ರಮವಾಗಿ ಕಿವಿ,ಮನಸ್ಸುಗಳೊ ಒಂದೊಂದಾಗಿ ಉತ್ಕ್ರಮಿಸಿದವು.ಇವೆಲ್ಲವುಗಳಿಗೂ ಮೇಲೆ ಹೇಳಿದ ರೀತಿಯೇ ಅನ್ವಯಿಸುತ್ತದೆ.(ಪುಟ 225)
13)ಅನಂತರ ಪ್ರಾಣವು ಉತ್ಕ್ರಮಿಸಲು ಸಿದ್ಧವಾದಾಗ ಇತರೆ ಇಂದ್ರಿಯಗಳನ್ನು ಕಿತ್ತು ಹಾಕಿತು.ಅವು ಪ್ರಾಣದ ಬಳಿಗೆ ಒಟ್ಟಾಗಿ ಬಂದು ಹೇಳಿದವು.'ಭಗವಂತನೆ,ನೀನು ನಮ್ಮ ಸ್ವಾಮಿಯಾಗು.ನೀನು ನಮ್ಮಲ್ಲಿ ಶ್ರೇಷ್ಠನಾಗಿರುವೆ.ಉತ್ಕ್ರಮಿಸಬೇಡ.!'
14) ಜನರು ಇವುಗಳನ್ನು ವಾಕ್ಕುಗಳೆಂದಾಗಲಿ,ಕಣ್ಣುಗಳೆಂದಾಗಲಿ,ಕಿವಿಗಳೆಂದಾಗಲಿ,ಮನಸ್ಸುಗಳೆಂದಾಗಲಿ ಕರೆಯುವುದಿಲ್ಲ.ಪ್ರಾಣಗಳೆಂದೇ ಕರೆಯುತ್ತಾರೆ.ಏಕೆಂದರೆ ಪ್ರಾಣವೇ ಇವೆಲ್ಲವೂ ಆಗಿದೆ.(ಪುಟ 227).
ಎರಡನೆಯ ಖಂಡ(ಪ್ರಾಣದಶ೯ನ):
15)ಪ್ರಾಣವು ಹೇಳಿತು'ನನಗೆ ಅನ್ನವು ಯಾವುದು?'.ಇಂದ್ರಿಯಗಳು ಹೇಳಿದವು:'ನಾಯಿ ಪಕ್ಷಿ-ಇವುಗಳವರೆಗೆ ಯಾವ ಯಾವ ಅನ್ನವಿದೆಯೊ ಅದೆಲ್ಲವೂ ನಿನ್ನ ಅನ್ನ..ಆ ಇದೇ ಪ್ರಾಣದ ಅನ್ನ.ಅನ್ನ ಎಂಬುದೇ ಪ್ರತ್ಯಕ್ಷವಾದ ಹೆಸರು.ಹೀಗೆ ಅರಿತುಕೊಂಡವನಿಗೆ ಯಾವುದೂ ಅನನ್ನವಾಗುವುದಿಲ್ಲ.(ಪುಟ 228)
16)ಪ್ರಾಣವು ಎಲ್ಲ ವಿಧವಾದ ಅನ್ನವನ್ನು ತಿನ್ನುತ್ತದೆ.ಸವ೯ ಪ್ರಾಣಿಗಳಲ್ಲಿಯೂ ಪ್ರಾಣವಾಗಿರುವ ನಾನೇ
ಎಲ್ಲಾ ಅನ್ನಗಳನ್ನೂ ತಿನ್ನುತ್ತೇನೆ.(ಪುಟ228)
17)ನೀರೇ ಪ್ರಾಣಕ್ಕೆ ಬಟ್ಟೆಯು.ಆದುದರಿಂದಲೇ ಭೋಜನ ಮಾಡುವವರು ಭೋಜನಕ್ಕೆ ಮೊದಲೂ ಮತ್ತು ಅನಂತರವೂ ನೀರಿನ ಮೂಲಕ ಆಚಮನ ಮಾಡಿ ಪ್ರಾಣವನ್ನು ಮುಚ್ಚುತ್ತಾರೆ.ಪ್ರಾಣವು ಹೀಗೆ ಬಟ್ಟೆಯನ್ನು ಪಡೆಯುತ್ತದೆ.ನಗ್ನವಾಗುವುದಿಲ್ಲ.(ಪುಟ 22೯)
18)ಸತ್ಯಕಾಮ-ಜಾಬಾಲನು ಈ ಪ್ರಾಣ ದಶ೯ನವನ್ನು ಗೋಶ್ರುತಿವೈಯಾಘ್ರನಿಗೆ ಉಪದೇಶಿಸಿ ಹೀಗೆ ಹೇಳಿದನು.'ಇದನ್ನು ಒಣಗಿದ ಮೋಟು ಮರಕ್ಕೆ ಹೇಳಿದರೂ ಅದರಲ್ಲಿ ಕೊಂಬೆಗಳು ಹುಟ್ಟಿಯೇ ಹುಟ್ಟುವುವು.ಎಲೆಗಳು ಚಿಗುರುವುವು.'(ಪುಟ 230)
1೯)ಒಂದು ಮಂತ್ರವು ಹೀಗಿದೆ.'ನಿನಗೆ ಅಮ ಎಂಬ ಹೆಸರಿದೆ.ಏಕೆಂದರೆ ಈ ಜಗತ್ತೆಲ್ಲವೂ ನಿನ್ನಲ್ಲಿದೆ.ಪ್ರಾಣನಾದ ನೀನು ಜ್ಯೇಷ್ಠನೂ ಶ್ರೇಷ್ಠನೂ ರಾಜನೂ ಅಧಿಪತಿಯೂ ಆಗಿರುವೆ.ಪ್ರಾಣನಾದ ನೀನು ನನ್ನನ್ನು ಜ್ಯೇಷ್ಠನನ್ನಾಗಿಯೂ ಶ್ರೇಷ್ಠನನ್ನಾಗಿಯೂ ಮಾಡು ರಾಜನನ್ನಾಗಿಯೂ ಅಧಿಪತಿಯನ್ನಾಗಿಯೂ ಮಾಡು.
ನಾನೇ ಇದೆಲ್ಲವೂ ಆಗಿರುವಂತಾಗಲಿ.(ಪುಟ 232)
20)ಅಮ ಎಂಬುದು ಪ್ರಾಣನ ಹೆಸರು.ಪ್ರಾಣವು ಅನ್ನದಿಂದಲೇ ದೇಹದಲ್ಲಿನ ಪ್ರಾಣನ ಕ್ರಿಯೆಯನ್ನು ಮಾಡುತ್ತದೆ.ಆದುದರಿಂದ ಪ್ರಾಣದ ಆಹಾರವಾದ ಮಂಥವನ್ನೇ ಇಲ್ಲಿ ಅಮ ಅಥವಾ ಪ್ರಾಣ ಎಂದು ಹೊಗಳಿದೆ.(ಪುಟ 232)
ಮೂರನೆಯ ಖಂಡ:
21)ಬ್ರಹ್ಮನಿಂದ ಆರಂಭಿಸಿ ಸ್ಥಾವರದವರೆಗೆ ಇರುವ ಸಂಸಾರಗತಿಯನ್ನು ಮುಮುಕ್ಷುಗಳಿಗೆ ವೈರಾಗ್ಯವನ್ನುಂಟು ಮಾಡಲು ಇಲ್ಲಿ ಹೇಳಿದೆ.ಈ ವಿಷಯವೇಬೃಹದಾರಣ್ಯಕ ಉಪನಿಷತ್ತಿನ 6.2 ರಲ್ಲಿ ಬಂದಿದೆ(ಪುಟ 234)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
(ಬೃಹದಾರಣ್ಯಕದಿಂದ)
(ಆರನೆಯ ಅಧ್ಯಾಯ,ಎರಡನೆಯ ಬ್ರಾಹ್ಮಣದಿಂದ ಆಯ್ದುಕೊಳ್ಳಲಾಗಿದೆ)
1) ಒಂದು ಸಲ ಅರುಣನ ಮೊಮ್ಮಗನಾದ ಶ್ವೇತಕೇತುವು ಪಂಚಾಲರ ಪರಿಷತ್ತಿಗೆ ಬಂದನು.ಅಲ್ಲಿ ಜೀವಲನ ಮಗನಾದ ಪ್ರವಾಹಣನನ್ನು ಎದುರುಗೊಂಡನು.'ನಿನ್ನ ತಂದೆಯವರಿಂದ ಉಪದಿಷ್ಟನಾಗಿರುವೆಯೊ?'ಎಂದು ರಾಜನು ಪ್ರಶ್ನಿಸಿದನು.'ಹೌದು'ಎಂದು ಶ್ವೇತಕೇತುವು ಹೇಳಿದನು.(ಪುಟ 403)
2) ಇದು ಖಿಲ ಪ್ರಕರಣ.ಹಿಂದೆ ಹೇಳದ ಕೆಲವು ವಿಷಯಗಳನ್ನು ಇಲ್ಲಿ ಹೇಳಿದೆ. ಇಲ್ಲಿ ಮುಖ್ಯವಾಗಿ ಕಮ೯ವಿಪಾಕವನ್ನು ಪಡೆಯುವುದಕ್ಕೆ ಇರುವ ಸಂಸಾರಗತಿಗಳನ್ನೆಲ್ಲ ಉಪಸಂಹರಿಸಿದೆ(ಪುಟ 403)
3)ಪ್ರವಾಹಣ ರಾಜನು ಈ ಐದು ಪ್ರಶ್ನೆಗಳನ್ನು ಕೇಳಿದನು:
1) ಈ ಜನರು ಮೃತರಾದ ಮೇಲೆ ಬೇರೆ ಬೇರೆ ಮಾಗ೯ಗಳಲ್ಲಿ ಹೇಗೆ ಹೋಗುವರು?
2)ಮತ್ತೆ ಇವರು ಈ ಲೋಕಕ್ಕೆ ಹೇಗೆ ಹಿಂತಿರುಗುವರು?
3) ಹೀಗೆ ಬಹು ಜನರು ಪುನಃ ಪುನಃ ಸಾಯುತ್ತಿದ್ದರೂ ಹೇಗೆ ಈ ಲೋಕವು ತುಂಬುತ್ತಿಲ್ಲ?
4)ಎಷ್ಟನೆಯ ಆಹುತಿಯನ್ನು ಹೋಮಮಾಡಿದ ಮೇಲೆ ನೀರು ಪುರುಷವಾಕ್ಕಾಗಿ ಎದ್ದು ನಿಂತು ಮಾತಾಡುತ್ತದೆ?
5)ಯಾವ ಕಮ೯ದಿಂದ ದೇವಯಾನ ಅಥವಾ ಪಿತೃಯಾನೆವೆಂಬ ಪಥವನ್ನು ಜನರು ಪಡೆಯುತ್ತಾರೊ ಅದನದನು ನೀನು ಅರಿತಿರುವೆಯಾ?
ಎಂಬುದಾಗಿ ಐದು ಪ್ರಶ್ನೆಗಳನ್ನು ಕೇಳಿದನು.ಇವುಗಳಲ್ಲಿ ಯಾವ ಒಂದು ಪ್ರಶ್ನೆಯೂ ಶ್ವೇತಕೇತುವಿಗೆ ಗೊತ್ತಿರಲಿಲ್ಲ.
ಶೇತಕೇತುವು ತಂದೆಯ ಬಳಿ ಬಂದು ಇವುಗಳಲ್ಲಿ ಒಂದು ಪ್ರಶ್ನೆಯೂ ತನಗೆ ತಿಳಿದಿರಲಿಲ್ಲವೆಂದು ಹೇಳಿದನು.(ಪುಟ 415)
6)'ಕುಮಾರ ನನ್ನಲಿ ನಂಬಿಕೆಯಿದು.ನಾನು ಏನೇನನ್ನು ತಿಳಿದಿರುವೆನೊ ಅದೆಲ್ಲವನ್ನೂ ನಿನಗೆ ಹೇಳಿರುವೆನು.ಬಾ ಅಲ್ಲಿಗೆ ಹೋಗಿ ಬ್ರಹ್ಮಚಯ೯ವಾಸ ಮಾಡೋಣ' ಎಂದು ಹೇಳಿದನು.ಅವನು ಒಪ್ಪಲಿಲ್ಲ.ಗೌತಮನು ಪ್ರವಾಹಣ ಜೈವಲಿಯ ಸಭೆಗೆ ಬಂದನು.(ಪುಟ 40೯)
7) ಪೂವಿ೯ಕರು ವಾಕ್ಕಿನಿಂದಲೇ ಶಿಷ್ಯತ್ವವನ್ನು ಗ್ರಹಿಸುತ್ತಿದ್ದರು. ಗೌತಮನು 'ಶಿಷ್ಯತ್ವವನ್ನು ಗ್ರಹಿಸಿದ್ದೇನೆ' ಎಂದು ವಾಕ್ಕಿನಿಂದಲೇ ಹೇಳಿ ಬ್ರಹ್ಮಚಾರಿಯಾಗಿ ವಾಸಿಸಿದನು.
8) ಪಂಚಾಗ್ನಿ ವಿದ್ಯೆ: 1) ದ್ಯುಲೋಕ 2)ಪಜ೯ನ್ಯ 3)ಈ ಲೋಕ 4)ಪುರುಷ 5) ಸ್ತ್ರೀ ಇವೆ ಪಂಚಾಗ್ನಿಗಳು.ಇವುಗಳಲ್ಲಿ ಕ್ರಮವಾಗಿ ಶ್ರದ್ಧೆ,ಸೋಮ,ಮಳೆ,ಅನ್ನ,ರೇತಸ್ಸುಎಂಬ ರೂಪದಿಂದ ಸ್ಥೂಲ ತಾರತಮ್ಯ ಕ್ರಮವನ್ನು ಹೊಂದುವ ಶ್ರದ್ಧಾಶಬ್ದ ವಾಚ್ಯವಾದ ನೀರು ಪುರುಷನನ್ನು ಉಂಟುಮಾಡುತ್ತದೆ.
ಐದನೆಯ ಆಹುತಿಯನ್ನು ಸ್ತ್ರೀ ಎಂಬ ಅಗ್ನಿಯಲ್ಲಿ ಹೋಮಮಾಡಲಾಗಿ ರೇತಸ್ಸಾದ ನೀರು ಪುರುಷವಾಕ್ಕಾಗಿ ಎದ್ದು ನಿಲ್ಲುವುದು.(ಪುಟ414)
೯)ಸೂಕ್ಷ್ಮರೂಪದಲ್ಲಿರುವ ಹಾಲು ಮುಂತಾದ ಆಹುತಿ ದ್ರವ್ಯವನ್ನು ಶ್ರದ್ಧೆಯೆಂದು ಹೇಳಿದೆ.'ಶ್ರದ್ಧೆಯೇ ನೀರು' (ಶ್ರದ್ಧಾ ವಾ ಆಪಃ)ಎಂದು ತೈತ್ತಿರೀಯ ಸಂಹಿತೆಯು (1,6,8)ಹೇಳುತ್ತದೆ.(ಪುಟ 411)
10)ಇವನ ಹಿಂದಿನ ಕಮ೯ವು ಈಶರೀರದಲ್ಲಿ ಎಲ್ಲಿತವರೆಗೆ ಇವನನ್ನು ಇರುವಂತೆ ಮಾಡುವುದೊ ಅಲ್ಲಿಯವರೆಗೆ ಇರುತ್ತಾನೆ.(ಪುಟ 414)
11)ಆಗ ಋತ್ವಿಕ್ಕುಗಳು ಇವನನ್ನು ಅಗ್ನಿಯಲ್ಲಿ ಆಹುತಿ ಮಾಡಲು ಒಯ್ಯುತ್ತಾರೆ.ಅವನಿಗೆ ಅಗ್ನಿಯೇ ಅಗ್ನಿಯಾಗುತ್ತದೆ.ಈ ಅಗ್ನಿಯಲ್ಲಿ ದೇವತೆಗಳು ಪುರುಷನನ್ನು ಹೋಮ ಮಾಡುತ್ತಾರೆ.ಆ ಆಹುತಿಯಿಂಒದ ಪುರುಷನು ದೀಪ್ತಿವಂತನಾಗುತ್ತಾನೆ.(ದಹಮಕ್ರಿಯೆ)(ಪುಟ 415)
12)ಶ್ರದ್ಧೆಯಿಂದ ಹೀಗೆ ಪಂಚಾಗ್ನಿ ವಿದ್ಯೆಯನ್ನು ಅರಿತುಕೊಂಡಿರುವವರು ಮತ್ತು ಅರಣ್ಯದಲ್ಲಿ ಸತ್ಯಬ್ರಹ್ಮವನ್ನು ಉಪಾಸಿಸುವವರು ಅಚಿ೯ದೇವತೆಯನ್ನು ಸೇರುತ್ತಾರೆ.
ಅಚಿ೯ದೇವತೆಯಿಂದ -ಅಹದೇ೯ವತೆ-ಶುಕ್ಲ ಪಕ್ಷದೇವತೆ-ಉತ್ತರಾಯಣದೇವತೆ-ದೇವಲೋಕಾಭಿಮಾನೀ ದೇವತೆ--ಆದಿತ್ಯ-ವಿದ್ಯುದ್ದೇವತೆಯನ್ನು ಸೇರುತ್ತಾರೆ.ಮ್ರಹ್ಮನ ಮನಸ್ಸಿನಿಂದ ಸೃಷ್ಟವಾಗಿರುವ ಪುರುಷನೊಬ್ಬನು ಬಂದು ವಿದ್ಯುದ್ದೇವತೆಯನ್ನು ಹೊಂದಿದ(ಸೇರಿದ) ಅವರನ್ನು ಬ್ರಹ್ಮಲೋಕಗಳಿಗೆ ಕರೆದುಕೊಂಡು ಹೋಗುತ್ತಾನೆ.ಅವರು ಆ ಬ್ರಹ್ಮಲೋಕದಲ್ಲಿ ಪ್ರಕೃಷ್ಟರಾಗಿ ಅನೇಕ ಸಂವತ್ಸರಗಳವರೆಗೆ ವಾಸಿಸುತ್ತಾರೆ. ಅವರು ಸಂಸಾರಕ್ಕೆ ಹಿಂದಿರುಗುವುದಿಲ್ಲ.(ಪುಟ416)
13)ಯಾರು ಯಜ್ಞದಿಂದಲೂ ದಾನದಿಂದಲೂ ತಪಸ್ಸಿನಿಂದಲೂ ಲೋಕಗಳನ್ನು ಜಯಿಸಿಕೊಳ್ಳುತ್ತಾರೆಯೋ ಅವರು ಧೂಮದೇವತೆಯನ್ನು ಸೇರುತ್ತಾರೆ.ಧೂಮದೇವತೆಯಿಂದ -ರಾತ್ರಿದೇವತೆ,-ಕೃಷ್ಣಪಕ್ಷದೇವತೆ-ದಕ್ಷಿಣಾಯನ ದೇವತೆಗಳನ್ನು- ಪಿತೃಲೋಕದೇವತೆಯನ್ನು-ಚಂದ್ರನನ್ನು
ಸೇರುತ್ತಾರೆ.ಅವರು ಚಂದ್ರನನ್ನು ಸೇರಿ ಅನ್ನವಾಗುತ್ತಾರೆ.ಅವರ ಕಮ೯ವು ಕ್ಷಯವಾದ ಮೇಲೆ ಅವರು ಆಕಾಶದಂತೆ ಆಗುತ್ತಾರೆ. ಆಕಾಶದಿಂದ ವಾಯು,ವಾಯುವಿನಿಂದ ಮಳೆ,ಮಳೆಯಿಂದ ಪೃಥ್ವಿಯನ್ನು ಸೇರಿ ಅವರು ಅನ್ನವಾಗುತ್ತಾರೆ.ಅವರು ಪುನಃ ಪುರುಷಾಗ್ನಿಯಲ್ಲಿ ಹುತರಾಗುತ್ತಾರೆ.ಅನಂತರ ಸ್ತೀ ಎಂಬ ಅಗ್ನಿಯಲ್ಲಿ (ಹುತರಾಗಿ ಎಂದರೆ ಆಹುತಿಯಾಗಿ) ಹುಟ್ಟುತ್ತಾರೆ. ಲೋಕಗಳನ್ನು ಹೊಂದುವುದಕ್ಕಾಗಿ ಅವರು (ಅಗ್ನಿಹೋತ್ರಾದಿ ಕಮ೯ಗಳನ್ನು ಮಾಡುತ್ತಾರೆ.ಹೀಗೆಯೇ ಅವರು ಸುತ್ತುತ್ತಾರೆ.ಇನ್ನು ಯಾರು ಈ ಎರಡೂ ಮಾಗ೯ಗಳನ್ನು ಅರಿಯರೊ ಅವರು ಕೀಟಗಳೂ ಪತಂಗಗಳೂ ಮತ್ತು ಸೊಳ್ಳೆಯೂ ಆಗುತ್ತಾರೆ.(ಪುಟ 41೯)
(ಆಕಾಶ,ವಾಯು, ಮಳೆ,ಮಳೆಯಿಂದ ಪೃಥ್ವಿ,ಪೃಥ್ವಿಯಲ್ಲಿ ಅನ್ನ,ಪುರುಷ,ಸ್ತೀಯಲ್ಲಿ ಜನನ)
14)ಕೀಟಗಳಗತಿಯು ಅತ್ಯಂತ ಕಷ್ಟವಾಗಿರುತ್ತದೆ.ಏಕೆಂದರೆ ಇದರಲ್ಲಿ ಬಿದ್ದವನನ್ನು ಉದ್ಧರಿಸುವುದು ದುಲ೯ಭವಾಗಿರುತ್ತದೆ.(ಛಾ.ಉ.5,10,8).ಆದುದರಿಂದ ಸವೋ೯ತ್ಸಾಹದಿಂದ ದಕ್ಷಿಣೋತ್ತರ ಮಾಗ೯ಗಳನ್ನು ಹೊಂದಲು ಸಾಧನವಾದ ಶಾಸ್ತ್ರೀಯ ಕಮ೯ವನ್ನು ಅಥವಾ ಜ್ಞಾನವನ್ನು ಅನುಷ್ಠಿಸಬೇಕು.
ಇಲ್ಲಿ ಎರಡನೆಯ ಮತ್ತು ಮೂರನೆಯ ಪ್ರಶ್ನೆಗಳಿಗೆ ಪರಿಹಾರವನ್ನು ಹೇಳಿದೆ.ಅನೇಕರು ಈ ಲೋಕಕ್ಕೆ ಹಿಂದಿರುಗುತ್ತಿರುವುದರಿಂದಲೂ ಮತ್ತೆ ಕೆಲವರು ಕೀಟ ಪತಂಗಾದಿ ಜನ್ಮವನ್ನು ಪಡೆಯುತ್ತಿರುವುದರಿಂದಲೂ ಆ ಲೋಕವು ತುಂಬುತ್ತಿಲ್ಲ.(ಪುಟ 420)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ನಾಲ್ಕನೆಯ ಖಂಡ:
36)ಗೌತಮನು ಈ ವಿದ್ಯೆಗೆ ಸರಿಯಾದ ಪಾತ್ರನೆಂದು ಅರಿತುಕೊಂಡು ರಾಜನು ಅಲ್ಲಿಯವರೆಗೂ ಕ್ಷತ್ರಿಯರಲ್ಲಿಯೇ ಇದ್ದ ಈ ವಿದ್ಯೆಯನ್ನು -ಗೌತಮನಿಗೆ ಉಪದೇಶಿಸಿದನು.
37)'ಗೌತಮ ,ದ್ಯುಲೋಕವೇ ಅಗ್ನಿಯು;ಆದಿತ್ಯನೇ ಅದಕ್ಕೆ ಸಮಿತ್ತು.ಅವನ ರಶ್ಮಿಗಳೇ ಅದಕ್ಕೆ ಹೊಗೆ.ಹಗಲು ಅದಕ್ಕೆ ಜ್ವಾಲೆ.ಚಂದ್ರನು ಅದಕ್ಕೆ ಕೆಂಡ.ನಕ್ಷತ್ರಗಳು ಅದಕ್ಕೆ ಕಿಡಿಗಳು(ಪುಟ 23೯)
38) ಆ ಈ ಅಗ್ನಿಯಲ್ಲಿ ದೇವತೆಗಳು ಶ್ರದ್ಧೆಯನ್ನು ಹೋಮಮಾಡುತ್ತಾರೆ.ಆ ಆಹುತಿಯಿಂದ ಸೋಮರಾಜನು ಹುಟ್ಟುತ್ತಾನೆ.(ಪುಟ 240)
3೯)ಅಗ್ನಿಹೋತ್ರದ ಆಹುತಿಗಳ ಪರಿಣಾಮಾವಸ್ಥೆಯ ರೂಪದಲ್ಲಿರುವ ಸೂಕ್ಷ್ಮವಾದ 'ಶ್ರದ್ಧಾ ವಾ ಆಪಃ'
'ಶ್ರದ್ಧೆಯೇ ನೀರು' ಎಂದು ತೈತ್ತಿರೀಯ ಸಂಹಿತೆಯು(1.6.8) ಹೇಳುತ್ತದೆ.(ಪುಟ 240)
ಐದನೆಯ ಖಂಡ:
40)ಗೌತಮ,ಪಜ೯ನ್ಯನೇ ಅಗ್ನಿಯು;ವಾಯುವೇ ಅವನಿಗೆ ಸಮಿತ್ತು.ಮೇಘವು ಅವನಿಗೆ ಹೊಗೆ.ಮಿಂಚು ಅವನಿಗೆ ಜ್ವಾಲೆ.ಸಿಡಿಲು ಅವನಿಗೆ ಕೆಂಡ.ಗುಡುಗುಗಳು ಅವನಿಗೆ ಕಿಡಿಗಳು.'(ಪುಟ 240)
41)ಆ ಈ ಅಗ್ನಿಯಲ್ಲಿ ದೇವತೆಗಳು ಸೋಮರಾಜನನ್ನು ಹೋಮ ಮಾಡುತ್ತಾರೆ.ಆ ಆಹುತಿಯಿಂದ ಮಳೆಯು ಹುಟ್ಟುತ್ತದೆ.(ಪುಟ 241)
ಆರನೆಯ ಖಂಡ:
42)ಗೌತಮ,ಪೃಥ್ವಿಯೇ ಅಗ್ನಿಯು;ಸಂವತ್ಸರವೇ ಅದಕ್ಕೆ ಸಮಿತ್ತು.ಆಕಾಶವು ಅದಕ್ಕೆ ಹೊಗೆ.ರಾತ್ರಿ ಅದಕ್ಕೆ ಜ್ವಾಲೆ.ದಿಕ್ಕುಗಳು ಅದಕ್ಕೆ ಕೆಂಡಗಳು,ಅವಾಂತರ ದಿಕ್ಕುಗಳು ಅದಕ್ಕೆ ಕಿಡಿಗಳು.(ಪುಟ 241)
43) ಈ ಅಗ್ನಿಯಲ್ಲಿ ದೇವತೆಗಳು ಮಳೆಯನ್ನು ಹೋಮಮಾಡುತ್ತಾರೆ.ಆ ಆಹುತಿಯಿಂದ ಅನ್ನವು ಉಂಟಾಗುತ್ತದೆ.(ಪುಟ 242)
(ಮಳೆಯಿಂದ ಬತ್ತ ,ಜವೆಮೊದಲಾದುವು ಉತ್ಪನ್ನವಾಗುತ್ತವೆ.)
ಏಳನೆಯ ಖಂಡ:
43)ಗೌತಮ,ಪುರುಷನೇ ಅಗ್ನಿಯು,ವಾಕ್ಕೇ ಅವನಿಗೆ ಸಮಿತ್ತು.ಪ್ರಾಣವು ಅವನಿಗೆ ಹೊಗೆ.ಜಿಹ್ವೆ ಅವನಿಗೆ ಜ್ವಾಲೆ,ಚಕ್ಷುಸ್ಸು ಅವನಿಗೆ ಕೆಂಡ.ಶ್ರೋತ್ರವು ಅವನಿಗೆ ಕಿಡಿಗಳು.(ಪುಟ 242)
44)ಆ ಈ ಅಗ್ನಿಯಲ್ಲಿ ದೇವತೆಗಳು ಅನ್ನವನ್ನು ಹೋಮ ಮಾಡುತ್ತಾರೆ.ಆ ಆಹುತಿಯಿಂದ ರೇತಸ್ಸು ಉಂಟಾಗುತ್ತದೆ.(ಪುಟ 243)
ಎಂಟನೆಯ ಖಂಡ:
45)ಗೌತಮ ,ಸ್ತೀಯೇ ಅಗ್ನಿಯು...ಆ ಅಗ್ನಿಯಲ್ಲಿ ದೇವತೆಗಳು ಹೋಮಮಾಡುತ್ತಾರೆ.ಆ ಆಹುತಿಯಿಂದ ಗಭ೯ವು ಉಂಟಾಗುತ್ತದೆ.(ಪುಟ 243)
46) ಹೀಗೆ ದ್ಯುಲೋಕ,ಪಜ೯ನ್ಯ,ಈ ಲೋಕ,ಪುರುಷ,ಸ್ತ್ರೀ ಎಂಬ ಪಂಚಾಗ್ನಿಯಲ್ಲಿ ಕ್ರಮೇಣ ಹುತವಾಗುವ ಮತ್ತು ಶ್ರದ್ಧ-ಸೋಮ-ವಷಾ೯ನ್ನ-ರೇತೋರೂಪದಿಂದ ಸ್ಥೂಲ-ತಾರತಮ್ಯ-ಕ್ರಮವನ್ನು ಹೊಂದುವ ಶ್ರದ್ಧಾ ಶಬ್ದವಾಚ್ಯವಾದ ನೀರು ಗಭ೯ವಾಗುತ್ತದೆ.(ಪುಟ 243)
ಒಂಬತ್ತನೆಯ ಖಂಡ:
47) ಐದನೆಯ ಆಹುತಿಯಲ್ಲಿ ನೀರು ಪುರುಷನೆಂಬ ಹೆಸರನ್ನು ಪಡೆಯುತ್ತದೆ.ಆ ಗಭ೯ವು ಜರಾಯುವೆಂಬ ಜರೆಯಿಂದ ಆವೃತವಾಗಿ ಒಂಬತ್ತೋ ಹತ್ತೋ ತಿಂಗಳವರೆಗೆ ಅಥವಾ ಎಷ್ಟುಕಾಲವಿರಬೇಕೋ ಅಷ್ಟು ಒಳಗಿದ್ದುಅನಂತರ ಹುಟ್ಟುತ್ತದೆ.(ಪುಟ 244)
48) 'ಅವನು ಹುಟ್ಟಿದಮೇಲೆ ಆಯಸ್ಸು ಇರುವವರೆಗೆ ಬದುಕಿರುತ್ತಾನೆ.ಕಮ೯ದಿಂದ ನಿದಿ೯ಷ್ಟವಾದ ಪರಲೋಕಕ್ಕೆ ಹೋಗಲು ಮೃತವಾದಾಗ ಅವನನ್ನು -ಯಾವ ಅಗ್ನಿಯಿಂದ ಇಲ್ಲಿಗೆ ಬಂದಿದ್ದನೊ ಯಾವುದರಿಂದ ಹುಟ್ಟಿರುತ್ತಾನೆಯೊ-ಆ ಅಗ್ನಿಗೇ ಇಲ್ಲಿಂದ ಒಯ್ಯುತ್ತಾರೆ.' (ಪುಟ 244)
ಹತ್ತನೆಯ ಖಂಡ:
4೯)ಅವರಲ್ಲಿ ಹೀಗೆ ಅರಿತುಕೊಂಡಿರುವವರು (ಪಂಚಾಗ್ನಿ ವಿದ್ಯೆಯನ್ನು ಅರಿತವರು) ಹಾಗೂ ಅರಣ್ಯದಲ್ಲಿ ಶ್ರದ್ದೆ,ತಪಸ್ಸು,ಮೊದಲಾದುವನ್ನು ಉಪಾಸಿಸುವವರು ಅಚಿ೯ದೇವತೆಯನ್ನು ಸೇರುತ್ತಾರೆ. ಅಚಿ೯ದೇವತೆಯಿಂದ ಅಹದೇ೯ವತೆ-ಶುಕ್ಲಪಕ್ಷದೇವತೆ-ಉತ್ತರಾಯಣ ದೇವತೆ-ಸಂವತ್ಸರ ದೇವತೆಯನ್ನು-ಆದಿತ್ಯದೇವತೆ-ಚಂದ್ರನನ್ನು-ವಿದ್ಯುದ್ದೇವತೆಯನ್ನು ಸೇರುತ್ತಾರೆ.
ಅಲ್ಲಿರುವ ಇವರನ್ನು ಅಮಾನುಷ ಪುರುಷನೊಬ್ಬನು ಸತ್ಯಲೋಕದಲ್ಲಿರುವ ಬ್ರಹ್ಮದ ಬಳಿಗೆ ಸೇರಿಸುತ್ತಾನೆ.ಇದು ದೇವಯಾನ ಮಾಗ೯.(ಪುಟ 245)
50)ಇಲ್ಲಿಂದ ಜನರು ಎಲ್ಲಿಗೆ ಹೋಗುತ್ತಾರೆ ಎಂಬುದನ್ನು ಅರಿತಿರುವೆಯಾ?ಎಂಬ ಪ್ರಶ್ನೆಗೆ ಇಲ್ಲಿ ಉತ್ತರವನ್ನು ಹೇಳಿದೆ.(ಪುಟ 245)
51)ಇನ್ನು ಗ್ರಾಮಗಳಲ್ಲಿ ವಾಸಮಾಡುತ್ತ ಇಷ್ಟಾ-ಪೂತ೯-ದತ್ತಾದಿಗಳನ್ನು ಉಪಾಸಿಸುವವರು ಧೂಮಾಭಿಮಾನೀ ದೇವತೆಯನ್ನು ಸೇರುತ್ತಾರೆ.-ಅಲ್ಲಿಂದ-ರಾತ್ರಿದೇವತೆ-ಕೃಷ್ಣಪಕ್ಷದೇವತೆ-ದಕ್ಷಿಣಾಯನದ ಆರುತಿಂಗಳ ಅಭಿಮಾನಿ ದೇವತೆಯನ್ನು ಸೇರುತ್ತಾರೆ.ಅವರು ಸಂವತ್ಸರ ದೇವತೆಯನ್ನು ಹೊಂದುವುದಿಲ್ಲ.(ಪುಟ 246)
52)ಇಷ್ಟವೆಂದರೆ ಅಗ್ನಿಹೋತ್ರಾದಿ ವೈದಿಕ ಕಮ೯,ಪೂತ೯ವೆಂದರೆವಾಪಿ-ಕೂಪ-ತಡಾಗಾದಿಗಳನ್ನು ಮಾಡಿಸುವುದು.ದತ್ತವೆಂದರೆ ಯಜ್ಞದಲ್ಲಿ ಕೊಡುವ ದಕ್ಷಿಣೆಯಲ್ಲದೆ ವೇದಿಯ ಹೊರಗೆ ಮಾಡುವ ದಾನ)(ಪುಟ 246)
53)ದಕ್ಷಿಣಾಯನದೇವತೆಗಳಿಂದ -ಪಿತೃಲೋಕದೇವತೆ-ಆಕಾಶವನ್ನು-ಚಂದ್ರನನ್ನು ಸೇರುತ್ತಾರೆ.ಇವನು ಸೋಮರಾನು.ಇವನು ದೇವತೆಗಳಿಗೆ ಅನ್ನವು.ಇವನನ್ನು ದೇವತೆಗಳು ತಿನ್ನುತ್ತಾರೆ.(ಪುಟ 247)
54)ಹಿಂದೆ ಶ್ರದ್ಧಾ ಶಬ್ದವಾಚ್ಯವಾದ ನೀರು ದ್ಯುಲೋಕಾಗ್ನಿಯಲ್ಲಿ ಹುತವಾಗಿ ಸೋಮವಾಗುತ್ತದೆ ಎಂದು ಹೇಳಿತ್ತು.ಚಂದ್ರತ್ವವನ್ನು ಪಡೆದುಕೊಂಡ ಆ ನೀರು ಇಷ್ಟವೇ ಮೊದಲಾದ ಕಮ೯ಗಳನ್ನು ಮಾಡುವ ಶರೀರಾದಿಗಳನ್ನು ಉಂಟು ಮಾಡುತ್ತದೆ.ಇವರು ಇಷ್ಟವೇ ಮೊದಲಾದವುಗಳ ಫಲಗಳನ್ನು ಭೋಗಿಸುತ್ತ ದೇವತೆಗಳಿಗೂ ಭೋಗ್ಯವಾಗಿ ಕಮ೯ಕ್ಷಯವಾಗುವವರೆಗೂ ಅಲ್ಲಿಯೇ ಇರುವರು.(ಪುಟ 247)
55)ಅಲ್ಲಿ ಕಮ೯ಕ್ಷಯವಾಗುವವರೆಗೂ ಇದ್ದು ಅನಂತರ ಬಂದ ಮಾಗ೯ದಿಂದಲೇ ಪುನಃ ಹಿಂತಿರುಗುವರು.ಅವರು ಭೌತಿಕಾಕಾಶವನ್ನು ಸೇರುತ್ತಾರೆ.ಭೌತಿಕಾಕಾಶದಿಂದ ವಾಯುವನ್ನು;ವಾಯುವಾಗಿ ಧೂಮವಾಗುತ್ತಾರೆ.ಧೂಮವಾಗಿ ಅಭ್ರವಾಗುತ್ತಾರೆ.(ಅಭ್ರ ಎಂದರೆ ಮೋಡ)
(ಪುಟ 248)
56)ಅಭ್ರವಾಗಿ ಮೇಘವಾಗುತ್ತಾರೆ.ಮೇಘವಾಗಿ ಮಳೆಯ ಧಾರೆಯ ರೂಪದಿಂದ ಕೆಳಗೆ ಬೀಳುತ್ತಾರೆ.ಅವರು ಅಲ್ಲಿ ಬತ್ತ,ಜವೆ,ಮೂಲಿಕೆಮರಗಳು,ಎಳ್ಳುದ್ದುಗಳು ಆಗಿಹುಟ್ಟುತ್ತಾರೆ.ಆದುದರಿಂದಲೇ ಇವುಗಳಿಂದ ತಪ್ಪಿಸಿಕೊಳ್ಳುವುದು ಕಷ್ಟ.ಏಕೆಂದರೆ ಯಾವ ಯಾವನು ಅನ್ನವನ್ನು ತಿನ್ನುತ್ತಾನೆಯೊ ರೇತಸ್ಸನ್ನು ಸೇಚಿಸುತ್ತಾನೆಯೊ ಅವನಂತೆಯೇ ಆಗುತ್ತಾರೆ.(ಪುಟ 248)
57)ಮೂಲದಲ್ಲಿ ಏಕವಚನ ನಿದೇ೯ಶವಿರುವುದು ಜೀವರೆಲ್ಲ ಮೇಘದಲ್ಲಿ ಒಂದಾಗಿರುವುದರಿಂದ(ಪುಟ 248)
58)ಗೋವಿನಿಂದ ಗವಾಕೃತಿಯು ಹುಟ್ಟುತ್ತದೆಯೇ ಹೊರತು ಬೇರೊಂದು ಜಾತಿಯ ಆಕೃತಿಯು ಹುಟ್ಟುವುದಿಲ್ಲ.(ಪುಟ 24೯)
5೯)ಅವರಲ್ಲಿ ಯಾರು ಇಲ್ಲಿ ರಮಣೀಯಚರಣರೊ ಅವರು ರಮಣೀಯ ಯೋನಿಯನ್ನು -ಬ್ರಾಹಣ ಯೋನಿಯನ್ನಾಗಲಿ,ಕ್ಷತ್ರಿಯ ಯೋನಿಯನ್ನಾಗಲಿ ಅಥವಾ ವೈಶ್ಯಯೋನಿಯನ್ನಗಲಿ- ಪಡೆಯುತ್ತಾರೆ. ಆದರೆ ಯಾರು ಇಲ್ಲಿ ಕಪೂರಚರಣರೊ ಅವರು ಕೆಟ್ಟ ಯೋನಿಯನ್ನು-ನಾಯಿಯ ಯೋನಿಯನ್ನಾಗಲಿ ಸೂಕರ ಯೋನಿಯನ್ನಾಗಲಿ ಅಥವಾ ಚಂಡಾಲ ಯೋನಿಯನ್ನಾಗಲಿ ಪಡೆಯುತ್ತಾರೆ.(ಪುಟ 24೯)
60)ಇನ್ನು ಈ ಎರಡು ಪಥಗಳಲ್ಲಿ ಯಾವೊಂದರಿಂದಲೂ ಹೋಗದವರು ಪುನಃ ಪುನಃ ಹಿಂತಿರುಗುವ ಕ್ಷುದ್ರವಾದ ಜಂತುಗಳಾಗಿ ಹುಟ್ಟುತ್ತಾರೆ."ಹುಟ್ಟು ಸಾಯಿ"ಎಂಬುದು ಇವರ ಮೂರನೆಯ ಸ್ಥಾನವು.ಆದ ಕಾರಣ ಆ ಚಂದ್ರಲೋಕವು ತುಂಬುವುದಿಲ್ಲ.ಆದುದರಿಂದ ಜಿಗುಪ್ಸೆಪಡಬೇಕು.(ಪುಟ 250)
61) ಇಷ್ಟಾದಿ ಕಮ೯ಗಳನ್ನು ಮಾಡಿ ಧೂಮಾದಿಮಾಗ೯ದಲ್ಲಿ ಹೋಗಿ ಬರುವವರು ಒಂದು ಪಥ. ಪಂಚಾಗ್ನಿ ವಿದ್ಯೆಯೇ ಮೊದಲಾದವನ್ನು ಪಡೆದು ಅಚಿ೯ರಾದಿ ಮಾಗ೯ದಿಂದ ಹೋಗುವವರು ಎರಡನೆಯ ಪಥದವರು.ಉಭಯಮಾಗ೯ ಭ್ರಷ್ಟರು ಎಂದಥ೯.ಸಂಸಾರಗತಿಯಲ್ಲಿ ಜಿಗುಪ್ಸೆ ಮಾಡಬೇಕು ಎಂದು ವ್ಯರಾಗ್ಯ ಉಪದೇಶವನ್ನು ಹೇಳಿದೆ. (ಪುಟ 250)
62)ಚಿನ್ನವನ್ನು ಕದಿಯುವವನು,ಹೆಂಡವನ್ನು ಕುಡಿಯುವವನು,ಗುರುತಲ್ಪಗಮನ ಮಾಡುವವನು,ಬ್ರಹ್ಮಹತ್ಯೆ ಮಾಡುವವನು -ಈ ನಾಲ್ವರು ಮತ್ತು ಇವರೊಂದಿಗೆ ಆಚರಿಸುವ ಐದನೆಯವನು ಪತಿತರಾಗುವರು.(ಪುಟ 251)
ಹನ್ನೊಂದನೆ ಖಂಡ:
63)ಪ್ರಾಚೀನಶಾಲ ಔಪಮನ್ಯವ,ಸತ್ಯಯಜ್ಞ ಪೌಲುಷಿ,ಇಂದ್ರದ್ಯುಮ್ನ ಭಾಲ್ಲವೇಯ,ಜನಶಾಕ೯ರಾಕ್ಷ್ಯ,ಬುಡಿಲ ಅಶ್ವತರಾಸ್ವಿ ಎಂಬ ಮಹಾ ಗೃಹಸ್ಥರೂ ಮಹಾ ಶ್ರೋತ್ರಿಯರೂ ಆದ ಐವರು ಒಟ್ಟುಗೂಡಿ ನಮ್ಮ ಆತ್ಮನು ಯಾರು?ಬ್ರಹ್ಮವು ಯಾವುದು?ಎಂದು ವಿಚಾರ ಮಾಡಿದರು.(ಪುಟ 252)
64) ಆತ್ಮಬ್ರಹ್ಮ ಶಬ್ದವು ಶರೀರದಿಂದ ಪರಿಚ್ಚಿನ್ನವಾದ ಆತ್ಮನನ್ನು ಪ್ರತ್ಯೇಕಿಸುತ್ತದೆ.ಇವೆರಡರಲ್ಲಿ ಯಾವ ಭೇದವೂ ಇಲ್ಲದಿರುವುದರಿಂದ ಆತ್ಮನೇ ಬ್ರಹ್ಮ.ಬ್ರಹ್ಮವೇ ಆತ್ಮ. ಬ್ರಹ್ಮ ಎಂಬ ಶಬ್ದಗಳು ಒಂದಕ್ಕೊಂದು ವಿಶೇಷ -ವಿಶೇಷ್ಯಗಳಾಗಿವೆ.ಆದುದರಿಂದ ವೈಶ್ವಾನರ ಬ್ರಹ್ಮವೇ ನಮ್ಮ ನಮ್ಮ ಆತ್ಮನೆಂಬುದು ಸಿದ್ಧವಾಗುತ್ತದೆ.(ಪುಟ 253)
65)ಅವರೆಲ್ಲರೂ ಸೇರಿ ವಿಚಾರಮಾಡಿದರೂ ನಿಶ್ಚಯವನ್ನು ಹೊಂದದೆ ಒಬ್ಬ ಉಪದೇಶಕನನ್ನು ಗೊತ್ತುಪಡಿಸಿಕೊಂಡರು.'ಉದ್ಧಾಲಕ ಅರುಣಿಯು ಈ ವೈಶ್ವಾನರಾತ್ಮನನ್ನು ಚೆನ್ನಾಗಿ ಅರಿತುಕೊಂಡಿರುತ್ತಾನೆ.ಸರಿ ಅವನ ಬಳಿಗೆ ಹೋಗೋಣ'ಎಂದು ಅವರು ಅವನ ಬಳಿಗೆ ಹೋದರು.(ಪುಟ 253)
66)ಉದ್ಧಾಲಕನು ಇನ್ನೊಬ್ಬ ಆಚಾಯ೯ ಅಶ್ವಪತಿ ಕೈಕೇಯನು ಈ ವ್ಯಶ್ವಾನರ ಆತ್ಮವನ್ನು ಚೆನ್ನಾಗಿ ಅರಿತುಕೊಂಡಿರುತ್ತಾನೆ.ಅವನ ಬಳಿಗೆ ಹೋಗೋಣ' ಎಂದು ಎಲ್ಲರೂ ಅವನ ಬಳಿಗೆ ಹೋದರು.
(ಪುಟ 254)
67) ಮರುದಿನ ಬೆಳಿಗ್ಗೆ ಸಮಿತ್ಪಾಣಿಯಾಗಿ ರಾಜನಲ್ಲಿಗೆ ಬಂದರು.ಅವರಿಗೆ ಉಪನಯನವನ್ನು ಮಾಡದೆಯೇ ಇದನ್ನು (ವೈಶ್ವಾನರವಿದ್ಯೆಯನ್ನು) ಹೇಳುದನು(ಪುಟ 256)
ಹನ್ನೆರಡನೆಯ ಖಂಡ:
68)ರಾಜ:ಹೇ ಔಪಮನ್ಯುವ,'ನೀನು ಯಾರನ್ನು ವ್ಯಶ್ವಾನರಾತ್ಮನೆಂದು ಉಪಾಸಿಸುತ್ತೀಯೆ?'
ಔಪಮನ್ಯವ:ಭಗವಂತನಾದ ರಾಜನೆ ದ್ಯುಲೋಕವನ್ನೇ'
ರಾಜ:ನೀನು ಯಾರನ್ನು ಆತ್ಮನೆಂದು ಉಪಾಸಿಸುತ್ತೀಯೊ ಅವನು ಸಂತೇಜಸ್ಸನೆಂಬ ವೈಶ್ವಾನರಾತ್ಮನು.ಆದುದರಿಂದ ನಿನ್ನ ಕುಲದಲ್ಲಿ ಸುತ,ಪ್ರಸುತ,ಆಸುತ ಎಂಬ ಸೋಮಪಾನೀಯಗಳು ಕಂಡುಬರುತ್ತವೆ.ನೀನು ಅನ್ನವನ್ನು ತಿನ್ನುತ್ತೀಯೆ.ಪುತ್ರ ಪೌತ್ರಾದಿ ಪ್ರಿಯರನ್ನು ನೋಡುತ್ತೀಯೆ.ಯಾವನು ಹೀಗೆ ವೈಶ್ವಾನರನನ್ನು ಉಪಾಸಿಸುವನೊ ಅವನು ಅನ್ನವನ್ನು ತಿನ್ನುತ್ತಾನೆ.,ಪ್ರಿಯವನ್ನು ನೋಡುತ್ತಾನೆ.ಅವನ ಕುಲದಲ್ಲಿ ಬ್ರಹ್ಮವಚ೯ಸ್ಸು ಇರುತ್ತದೆ.ಆದರೆ ಇವನು ವೈಶ್ವನರಾತ್ಮನ ತಲೆಯೇ.ನೀನು ನನ್ನ ಬಳಿಗೆ ಬಾರದೇ ಇದ್ದರೆ ನಿನ್ನ ತಲೆ ಬಿದ್ದು ಹೋಗುತ್ತಿತ್ತು.'(ಪುಟ 257)
ಹದಿಮೂರನೆಯ ಖಂಡ:
6೯) ರಾಜನು ಸತ್ಯಯಜ್ಞ ಪೌಲುಶಿಯನ್ನು ಕೇಳಿದನು.ನೀನು ಯಾರನ್ನು ವೈಶ್ವಾನರನೆಂದು ಉಪಾಸಿಸುತ್ತೀಯೆ?
ಸತ್ಯಯಜ್ಞ:ಭಗವಂತನಾದ ರಾಜನೆ,ಆದಿತ್ಯನನ್ನೇ'.
ಸತ್ಯಯಜ್ಞ:ಭಗವಂತನಾದ ರಾಜನೆ ಆದಿತ್ಯನನ್ನೇ'
ರಾಜ:ನೀನು ಯಾರನ್ನು ಆತ್ಮನೆಂದು ಉಪಾಸಿಸುತ್ತೀಯೊ ಅವನು ವಿಶ್ವರೂಪನೆಂಬ ವೈಶ್ವಾನರಾತ್ಮನು.ಆದುದರಿಂದ ನಿನ್ನ ಕುಲದಲ್ಲಿ ಬಹು ವಿಶ್ವರೂಪವು ಕಂಡುಬರುತ್ತವೆ.ನೀನು ಅನ್ನವನ್ನು ತಿನ್ನುತ್ತೀಯೆ.ಪುತ್ರ ಪೌತ್ರಾದಿ ಪ್ರಿಯರನ್ನು ನೋಡುತ್ತೀಯೆ.ಯಾವನು ಹೀಗೆ ಈ ವೈಶ್ವಾನರಾತ್ಮನನ್ನು ಉಪಾಸಿಸುವನೊ ಅವನು ಅನ್ನವನ್ನು ತಿನ್ನುತ್ತಾನೆ,ಪ್ರಿಯವನ್ನು ನೋಡುತ್ತಾನೆ.ಅವನ ಕುಲದಲ್ಲಿ ಬ್ರಹ್ಮವಚ೯ಸ್ಸು ಇರುತ್ತದೆ.ಆದರೆ ಇವನು ವೈಶ್ವನರಾತ್ಮನ ಕಣ್ಣೇ.ನೀನು ನನ್ನ ಬಳಿಗೆ ಬಾರದೇ ಇದ್ದರೆ ನಿನ್ನ ಕಣ್ಣು ಕುರುಡಾಗುತ್ತಿತ್ತು.'(ಪುಟ 257)
ಹದಿನಾಲ್ಕನೆಯ ಖಂಡ:
70)ರಾಜನು ಇಂದ್ರದ್ಯುಮ್ನ ಭಾಲ್ಲವೇಯನನ್ನು ಕೇಳಿದನು.ಹೇ ವೈಯಾಗ್ರ ಪದ್ಯ,ನೀನು ಯಾರನ್ನು ವೈಶ್ವಾನರಾತ್ಮನೆಂದು ಉಪಾಸಿಸುತ್ತೀಯೆ?
ಇಂದ್ರದ್ಯುಮ್ನ:'ಭಗವಂತನಾದ ರಾಜನೆ ವಾಯುವನ್ನೆ'
ರಾಜ:ನೀನು ಯಾರನ್ನು ಆತ್ಮನೆಂದು ಉಪಾಸಿಸುತ್ತೀಯೊ ಅವನು ಪೃಥಗ್ವಥ೯ನೆಂಬ ವೈಶ್ವಾನರಾತ್ಮನು.ಆದುದರಿಂದ ನಿನಗೆ ಕಾಣಿಕೆಗಳು ನಾನಾ ಕಡೆಯಿಂದ ಬರುತ್ತಿವೆ.ರಥಶ್ರೇಣಿಗಳು ನಾಮಾ ವಿಧವಾಗಿ ನಿನ್ನನ್ನು ಅನುಸರಿಸುತ್ತಿವೆ.ನೀನು ಅನ್ನವನ್ನು ತಿನ್ನುತ್ತೀಯೆ.ಪುತ್ರ ಪೌತ್ರಾದಿ ಪ್ರಿಯರನ್ನು ನೋಡುತ್ತೀಯೆ.ಯಾವನು ಹೀಗೆ ಈ ವೈಶ್ವಾನರಾತ್ಮನನ್ನು ಉಪಾಸಿಸುವನೊ ಅವನು ಅನ್ನವನ್ನು ತಿನ್ನುತ್ತಾನೆ,ಪ್ರಿಯವನ್ನು ನೋಡುತ್ತಾನೆ.ಅವನ ಕುಲದಲ್ಲಿ ಬ್ರಹ್ಮವಚ೯ಸ್ಸು ಇರುತ್ತದೆ.ಆದರೆ ಇವನು ವೈಶ್ವನರಾತ್ಮನ Pಪ್ರಾಣವೇ.ನೀನು ನನ್ನ ಬಳಿಗೆ ಬಾರದೇ ಇದ್ದರೆ ನಿನ್ನ ಪ್ರಾಣವು ಉತ್ಕ್ರಮಿಸುತ್ತಿತ್ತು.'(ಪುಟ 260)
ಹದಿನೈದನೆಯ ಖಂಡ:
71)ರಾಜನು ಜನನನ್ನು ಕೇಳಿದನು ಹೇ, ಶಾಕ೯ರಾಕ್ಷ್ಯ'ನೀನು ಯಾರನ್ನು ವೈಶ್ವಾನರನೆಂದು ಉಪಾಸಿಸಿತ್ತೀಯೆ?
ಜನ:ಭಗವಂತನಾದ ರಾಜನೆ ಆಕಾಶವನ್ನೇ'.
ರಾಜ:ನೀನು ಯಾರನ್ನು ಆತ್ಮನೆಂದು ಉಪಾಸಿಸುತ್ತೀಯೊ ಅವನು ಬಹುಲನೆಂಬ ವೈಶ್ವಾನರಾತ್ಮನು.ಆದುದರಿಂದ ನೀನು ಸಂತತಿಯಿಂದಲೂ ಧನದಿಂದಲೂ ಪೂಣ೯ನಾಗಿರುವೆ.ನೀನು ಅನ್ನವನ್ನು ತಿನ್ನುತ್ತೀಯೆ.ಪುತ್ರ ಪೌತ್ರಾದಿ ಪ್ರಿಯರನ್ನು ನೋಡುತ್ತೀಯೆ.ಯಾವನು ಹೀಗೆ ಈ ವೈಶ್ವಾನರಾತ್ಮನನ್ನು ಉಪಾಸಿಸುವನೊ ಅವನು ಅನ್ನವನ್ನು ತಿನ್ನುತ್ತಾನೆ,ಪ್ರಿಯವನ್ನು ನೋಡುತ್ತಾನೆ.ಅವನ ಕುಲದಲ್ಲಿ ಬ್ರಹ್ಮವಚ೯ಸ್ಸು ಇರುತ್ತದೆ.ಆದರೆ ಇವನು ವೈಶ್ವನರಾತ್ಮನ ಮುಂಡವೇ.ನೀನು ನನ್ನ ಬಳಿಗೆ ಬಾರದೇ ಇದ್ದರೆ ನಿನ್ನ ಮುಂಡವು ನಾಶವಾಗುತ್ತಿತ್ತು.'(ಪುಟ 260)
ಹದಿನಾರನೆಯ ಖಂಡ:
72)ರಾಜನು ಬುಡಿಲ ಅಶ್ವತರಾಶ್ವಿಯನ್ನು ಕೇಳಿದನು:ಹೇ,ವೈಯಾಗ್ರಪದ್ಯ,ನೀನು ಯಾರನ್ನು ವೈಶ್ವಾನರನೆಂದು ಉಪಾಸಿಸುತ್ತೀಯೆ?'
ಜನ: 'ಭಗವಂತನಾದ ರಾಜನೆ,ಆಕಾಶವನ್ನೆ'
ರಾಜ:ನೀನು ಯಾರನ್ನು ಆತ್ಮನೆಂದು ಉಪಾಸಿಸುತ್ತೀಯೊ ಅವನು ರಯಿ ಎಂಬ ವೈಶ್ವಾನರಾತ್ಮನು.ಆದುದರಿಂದ ನೀನು ಧನವಂತನೂ ಪುಷ್ಟಿವಂತನೂ ಆಗಿರುವೆ.ನೀನು ಅನ್ನವನ್ನು ತಿನ್ನುತ್ತೀಯೆ.ಪುತ್ರ ಪೌತ್ರಾದಿ ಪ್ರಿಯರನ್ನು ನೋಡುತ್ತೀಯೆ.ಯಾವನು ಹೀಗೆ ಈ ವೈಶ್ವಾನರಾತ್ಮನನ್ನು ಉಪಾಸಿಸುವನೊ ಅವನು ಅನ್ನವನ್ನು ತಿನ್ನುತ್ತಾನೆ,ಪ್ರಿಯವನ್ನು ನೋಡುತ್ತಾನೆ.ಅವನ ಕುಲದಲ್ಲಿ ಬ್ರಹ್ಮವಚ೯ಸ್ಸು ಇರುತ್ತದೆ.ಆದರೆ ಇವನು ವೈಶ್ವನರಾತ್ಮನ ಮೂತ್ರಾಶಯವೇ.ನೀನು ನನ್ನ ಬಳಿಗೆ ಬಾರದೇ ಇದ್ದರೆ ನಿನ್ನ ಮೂತ್ರಾಶಯವು ನಾಶವಾಗುತ್ತಿತ್ತು.'(ಪುಟ 262)
ಹದಿನೇಳನೆಯ ಖಂಡ:
73)ರಾಜನು ಉದ್ಧಾಲಕ ಅರುಣಿಯನ್ನು ಕೇಳಿದನು:'ಹೇ ಗೌತಮ.ನೀನು ಯಾರನ್ನು ವೈಶ್ವಾನರನೆಂದು ಉಪಾಸಿಸುತ್ತೀಯೆ?'
ಉದ್ಧಾಲಕ:'ಭಗವಂತನಾದ ರಾಜನೆ,ಪೃಥ್ವಿಯನ್ನೇ.'
ರಾಜ:ನೀನು ಯಾರನ್ನು ಆತ್ಮನೆಂದು ಉಪಾಸಿಸುತ್ತೀಯೊ ಅವನು ಪ್ರತಿಷ್ಠೆ ಎಂಬ ವೈಶ್ವಾನರಾತ್ಮನು.ಆದುದರಿಂದ ನೀನು ಸಂತತಿಯಿಂದಲೂ ಪಶುಗಳಿಂದಲೂ ಪ್ರತಿಷ್ಠಿತನಾಗಿರುವೆ.ನೀನು ಅನ್ನವನ್ನು ತಿನ್ನುತ್ತೀಯೆ.ಪುತ್ರ ಪೌತ್ರಾದಿ ಪ್ರಿಯರನ್ನು ನೋಡುತ್ತೀಯೆ.ಯಾವನು ಹೀಗೆ ಈ ವೈಶ್ವಾನರಾತ್ಮನನ್ನು ಉಪಾಸಿಸುವನೊ ಅವನು ಅನ್ನವನ್ನು ತಿನ್ನುತ್ತಾನೆ,ಪ್ರಿಯವನ್ನು ನೋಡುತ್ತಾನೆ.ಅವನ ಕುಲದಲ್ಲಿ ಬ್ರಹ್ಮವಚ೯ಸ್ಸು ಇರುತ್ತದೆ.ಆದರೆ ಇವನು ವೈಶ್ವನರಾತ್ಮನ ಪಾದಗಳೇ.ನೀನು ನನ್ನ ಬಳಿಗೆ ಬಾರದೇ ಇದ್ದರೆ ನಿನ್ನ ಪಾದಗಳು ಶಿಥಿಲವಾಗುತ್ತಿತ್ತು.'(ಪುಟ 26
ಹದಿನೆಂಟನೆಯ ಖಂಡ:
74) ರಾಜನು ಅವನನ್ನು ಕುರಿತು ಹೇಳಿದನು.'ನೀವೆಲ್ಲರೂ ಈ ವೈಶ್ವಾನರಾತ್ಮನನ್ನು ಬೇರೆಯಾಗಿದ್ದಂತೆ
ಅರಿತವರಾಗಿ ಅನ್ನವನ್ನು ತಿನ್ನುತ್ತಿದ್ದೀರಿ.ಆದರೆ ಆವನು ಪ್ರಾದೇಶಮಾತ್ರನೊ,ಅಭಿವಿಮಾನಿಯೂ ಆದ ಈ ವೈಶ್ವಾನರಾತ್ಮನನ್ನು ಹೀಗೆ ಉಪಾಸಿಸುವನೊ ಅವನು ಸವ೯ಲೋಕಗಳಲ್ಲಿಯೂ ಸವ೯ಪ್ರಾಣಿಗಳಲ್ಲಿಯೂ ,ಎಲ್ಲ ಆತ್ಮಗಳಲ್ಲಿಯೂ ಅನ್ನವನ್ನು ತಿನ್ನುತ್ತಾನೆ.(ಪುಟ 264)
75) ಎಲ್ಲ ನರರನ್ನೂ ಪಾಪಪುಣ್ಯಾನುರೂಪವಾದ ಗತಿಗೆ ಒಯ್ಯುವುದರಿಂದ ಸವಾ೯ತ್ಮನಾದ ಈಶ್ವರನು ವೈಶ್ವಾನರನು ಎನಿಸಿರುವನು.ಅಥವಾ ಎಲ್ಲಾ ನರರೂ ಅವನೇ ಆಗಿರುವುದರಿಂದ ವೈಶ್ವಾನರನು.(ಪುಟ 264)
76)ಈ ವೈಶ್ವಾನರಾತ್ಮ ತಲೆಯೇ ಸಂತೇಜಸ್ಸು,ಕಣ್ಣೇ ವಿಶ್ವರೂಪವುಪ್ರಾಣನು ಪೃಥಗ್ವತ್ಮಾತ್ಮನು.ಮುಂಡವೇ ಬಹುಲನು,ಮೂತ್ರಾಶಯವೇ ರಯಿಯು,ಪಾದಗಳೇ ಪೃಥ್ವಿಯು,ಎದೆಯೇ ವೇದಿ.(ಎದೆಯಮೇಲೆ ಹರಡಿಕೊಂಡಿರುವವನು),ರೋಮಗಳೇ ಬಹಿ೯,ಹೃದಯವೇ ಗಾಹ೯ಪತ್ಯ,ಮನಸ್ಸೇ ದಕ್ಷಿಣಾಗ್ನಿ.ಬಾಯೇ ಅಹವನೀಯವು.(ಪುಟ 266)
ಹತ್ತೊಂಬತ್ತನೆಯ ಖಂಡ:
77) ಭೋಜನಕಾಲದಲ್ಲಿ ಮೊದಲು ತೆಗೆದುಕೊಂಡ ಅನ್ನವನ್ನು ಹೋಮಮಾಡಬೇಕು.
1) ಪ್ರಾಣಾಯ ಸ್ವಾಹಾ-ಪ್ರಾಣವು ತೃಪ್ತವಾಗುತ್ತದೆ.
2)ವ್ಯಾನಾಯ ಸ್ವಾಹಾ-ಕಿವಿಯು ತೃಪ್ತವಾಗುತ್ತದೆ.
3)ಅಪಾನಾಯ ಸ್ವಾಹಾ-ವಾಕ್ಕು ತೃಪ್ತವಾಗುತ್ತದೆ.
4)ಸಮಾನಾಯ ಸ್ವಾಹಾ-ಮನಸ್ಸು ತೃಪ್ರವಾಗುತ್ತದೆ.
5)ಉದಾನಾಯ ಸ್ವಾಹಾ-ಚಮ೯ವು ತೃಪ್ತವಾಗುತ್ತದೆ (ಪುಟ272)
78) ಆದರೆ ಯಾವ ವೈಶ್ವಾನರೋಪಾಸಕನು ಇದನ್ನು ಹೀಗೆ ಅರಿತುಕೊಂಡು ಅಗ್ನಿಹೋತ್ರವನ್ನು ಅರಿತುಕೊಂಡು ಹೋಮಮಾಡುವನೊ ಅZವನ ಆಹುತಿಯು ಸವಲೋಕಗಳಲ್ಲಿಯೂ ಸವ೯ಪ್ರಾಣಿಗಳಲ್ಲಿಯೂ ಸವ೯ ಆತ್ಮಗಳಲ್ಲಿಯೂ ಹುತವಾಗುತ್ತದೆ.(ಪುಟ 273)
7೯)ಯಾವನು ಇದನ್ನು ಹೀಗೆ ಅರಿತುಕೊಂಡು ಅಗ್ನಿಹೋತ್ರವನ್ನು ಹೋಮಮಾಡುವನೊ ಅವನ ಎಲ್ಲ ಪಾಪಗಳೂ -ಅಗ್ನಿಯಲ್ಲಿ ಹಾಕಿದ ಇóಷೀಕದ ಕಡ್ಡಿಗಳಂತೆ -ಸುಟ್ಟುಹೋಗುತ್ತವೆ.(ಪುಟ 274)
80) "ಹಸಿದ ಮಕ್ಕಳು ತಾಯಿಯನ್ನೇ ಹೇಗೆ ಉಪಾಸಿಸುವರೊ ಹಾಗೆಯೇ ಸವ೯ಪ್ರಾಣಿಗಳು ಅಗ್ನಿಹೋತ್ರವನ್ನು ಉಪಾಸಿಸುತ್ತವೆ.ನಿಜವಾಗಿ ಅಗ್ನಿಹೋತ್ರವನ್ನು ಉಪಾಸಿಸುತ್ತವೆ.(ಪುಟ275)
81)ತಾಯಿಯಸುತ್ತಲೂ ಕುಳಿತುಕೊಂಡು 'ತಾಯಿಯು ನಮಗೆ ಯಾವಾಗ ಅನ್ನವನ್ನು ಕೊಡುವಳೊ'ಎಂದು ನಿರೀಕ್ಷಿಸುವರೊ(ಪುಟ275)
82)ಇವನು ಯಾವಾಗ ಭೋಜನವನ್ನು ಮಾಡುವನೊ ಎಂದು ಕಾದುಕೊಂಡಿರುತ್ತವೆ.(ಪುಟ 275)
83)ಜಗತ್ತೆಲ್ಲವೂ ಇಂಥ ಉಪಾಸಕನ ಭೋಜನದಿಂದ ತೃಪ್ತವಾಗುತ್ತವೆ ಎಂದಥ೯(ಪುಟ 275)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,ಐದನೆಯ ಅಧ್ಯಾಯ ಮುಕ್ತಾಯ,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಆರನೆಯ ಅಧ್ಯಾಯ: (ಇಲ್ಲಿಂದ ಬ್ರಹ್ಮವಿದ್ಯೆ ಪ್ರಾರಂಭ)
ಮೊದಲನೆಯ ಖಂಡ:
1)ಒಂದಾನೊಂದು ಕಾಲದಲ್ಲಿ ಶ್ವೇತಕೇತು ಆರುಣೇಯ ಎಂಬುವವನು ಇದ್ದನು.ಅವನ ತಂದೆಯಾದ ಉದ್ಧಾಲಕ ಆರುಣಿಯು ಅವನಿಗೆ ಹೇಳಿದನು:'ಶ್ವೇತಕೇತು ,ಬ್ರಹ್ಮಚಯ೯ವನ್ನು ವಾಸಮಾಡು.ಸೋಮ್ಯ,ನಮ್ಮ ಕುಲದಲ್ಲಿ ಹುಟ್ಟಿದ ಯಾವನೂ ಅಧ್ಯಯನ ಮಾಡದೆ ಬ್ರಹ್ಮಬಂಧುವಿನಂತೆ ಇರುವುದಿಲ್ಲ.'(ಪುಟ 276)
(ನಮ್ಮ ಕುಲಕ್ಕೆ ಅನುರೂಪನಾದ ಗುರುವಿನ ಬಳಿಗೆ ಹೋಗಿಬ್ರಹ್ಮಚಯ೯ವನ್ನು ಅವಲಂಬಿಸು ಎಂದಥ೯)
(ಸ್ವಯಂ ಬ್ರಾಹ್ಮಣ ಶೀಲವಿಲ್ಲದವನಾಗಿ ಇತರ ಬ್ರಾಹ್ಮಣರನ್ನು ತನ್ನ ನೆಂಟರೆಂದು ಹೇಳಿಕೊಳ್ಳುವವನು.)
2)ಶ್ವೇತಕೇತುವು ತಾನು ಹನ್ನೆರಡು ವಷ೯ದವನಾದಾಗ ಆಚಾಯ೯ನ ಬಳಿ ಸಾರಿ ಇಪ್ಪತ್ತನಾಲ್ಕು ವಷ೯ದವನಾಗುವವರೆಗೆ ವೇದಗಳನ್ನೆಲ್ಲ ಅಧ್ಯಯನ ಮಾಡಿ ಗಂಭೀರಮನಸ್ಸುಳ್ಳವನೂ ವೇದಜ್ಞಾನಾಭಿಮಾನಿಯೂ ಅವಿನೀತ ಸ್ವಭಾವದವನೂ ಆಗಿ ಹಿಂತಿರುಗಿದನು.ಅವನ ತಂದೆಯು ಅವನಿಗೆ ಹೀಗೆ ಹೇಳಿದನು: 'ಶ್ವೇತಕೇತು ,ಸೋಮ್ಯ,ನೀನು ಗಂಭೀರಮನಸ್ಸುಳ್ಳವನೂ ವೇದಜ್ಞಾನಾಭಿಮಾನಿಯೂ ಅವಿನೀತ ಸ್ವಭಾವದವನೂಆಗಿರುವುದರಿಂದ-,ಯಾವುದರಿಂದ ಶ್ರುತವು ಅಶ್ರುತವಾಗುವುದೊ, ಅಮೃತವು ಮೃತವಾಗುವುದೊ,ಅವಿಜ್ಞಾತವು ವಿಜ್ಞಾತವಾಗುವುದೊ -ಆ ಆದೇಶವನ್ನು ಕೇಳಿದೆಯೊ?'(ಪುಟ 278)
(ವೇದಗಳನ್ನೆಲ್ಲ ಅಧ್ಯಯನ ಮಾಡಿದ್ದರೂ ಆತ್ಮತತ್ವವನ್ನು ಅರಿತುಕೊಳ್ಳದೆ ಇರುವವರೆಗೆ ಮನುಷ್ಯನು ಅಕೃತಾಥ೯ನಾಗಿರುತ್ತಾನೆ ಎಂದಥ೯.)
ಶ್ವೇತಕೇತು:'ಭಗವಂತನೆ ಆ ಆದೇಶವು ಯಾವುದು?'
3)'ಸೋಮ್ಯ.ಹೇಗೆ ಒಂದು ಮಣ್ಣುಮುದ್ದೆಯನ್ನು ಅರಿತುಕೊಂಡಿದ್ದರಿಂದ ಮಣ್ಣಿನಿಂದ ಮಾಡಿದ ವಸ್ತುಗಳೆಲ್ಲ ತಿಳಿಯಲ್ಪಟ್ಟದ್ದಾಗುವುದೊ-(ಏಕೆಂದರೆ) ವಸ್ತುವಿನ ಪರಿಣಾಮವು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ:
ಸೋಮ್ಯ,ಹೇಗೆ ಒಂದು ಚಿನ್ನದ ಗಟ್ಟಿಯನ್ನು ಅರಿತುಕೊಂಡಿದ್ದರಿಂದ ಚಿನ್ನದಿಂದ ಮಾಡಿದ ವಸ್ತುಗಳೆಲ್ಲಾ ತಿಳಿಯಲ್ಪಟ್ಟದ್ದಾಗುವುದೊ-(ಏಕೆಂದರೆ) ವಸ್ತುವಿನ ಪರಿಣಾಮವು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ;
ಸೋಮ್ಯ,ಹೇಗೆ ಒಂದು ಕಬ್ಬಿಣದ ಉಗುರುಕತ್ತರಿಯನ್ನು ತಿಳಿದುಕೊಂಡಿದ್ದರಿಂದ ಕಬ್ಬಿಣದಿಂದ ಮಾಡಿದ ವಸ್ತುಗಳೆಲ್ಲ ತಿಳಿಯಲ್ಪಟ್ಟಿದ್ದಾಗುವುದೊ -(ಏಕೆಂದರೆ) ವಸ್ತುವಿನ ಪರಿಣಾಮವು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ;ಹಾಗೆಯೇ ಸೋಮ್ಯನೆ,ಆ ಆದೇಶ.'(ಪುಟ 27೯)
(ಗಡಿಗೆ ಮೊದಲಾದುವಕ್ಕೆ ಕಾರಣವಾಗಿರುವ ಮಣ್ಣು ಮುದ್ದೆ;ಕಾರಣವೂ ಕಾಯ೯ವೂ ಅನನ್ಯ ವಾಗಿರುವುದರಿಂದ ಒಂದನ್ನು ಅರಿತುಕೊಂಡರೆ ಇನ್ನೊಂದನ್ನು ಅರಿತುಕೊಂಡಂತಾಗುತ್ತದೆ.'ಇದು ಕಾರಣ,ಇದು ಇದರ ಪರಿಣಾಮ'ಎಂಬ ಲೋಕ ವ್ಯವಹಾರಕ್ಕೆ ಇದು ಉತ್ತರ.)(ಪುಟ 27೯)
3)ಶ್ವೇತಕೇತು:ಪೂಜ್ಯರಾದ ಆಚಾಯ೯ರು ಇದನ್ನು ತಿಳಿದುಕೊಂಡಿರಲಿಲ್ಲ.ಏಕೆಂದರೆ ಇದನ್ನು ಅವರು ಅರಿತಿದ್ದರೆ ನನಗೆ ಹೇಳದೆ ಇರುತ್ತಿರಲಿಲ್ಲ.ಭಗವಂತನೇ ನನಗೆ ಅದನ್ನು ಉಪದೇಶಿಸಬೇಕು.(ಪುಟ 27೯)
4)ಉದ್ಧಾಲಕ:ಹಾಗೆಯೇ ಆಗಲಿ.
ಎರಡನೆಯ ಖಂಡ:
ಉದ್ಧಾಲಕ:ಸೋಮ್ಯನೆ,ಸೃಷ್ಟಿಗೆ ಮೊದಲು ಈ ಜಗತ್ತು ಏಕವೂ ಅದ್ವಿತೀಯವೂ ಆದ ಸತ್ ಸ್ವರೂಪವೇ ಆಗಿತ್ತು.(ಸದೇವ ಸೋಮ್ಯೇದಮಗ್ರಾಸೀದೇಕಮೇವಾದ್ವಿತೀಯಮ್)(ಪುಟ280)
2)ಏಕವೆಂದರೆ ಸ್ವಜಾತೀಯ ಭೇದವಾಗಲಿ ಸ್ವಗತ ಭೇದವಾಗಲೀ,ವಿಜಾತೀಯ ಭೇದವಾಗಲೀ ಇಲ್ಲದ್ದು.(ಪುಟ 280)
3)ಸವ೯ ವೇದಾಂತಗಳಿಂದಲೂ ತಿಳಿದುಬರುವ ಸೂಕ್ಷ್ಮವೂ ನಿವಿ೯ಶೇಷವೂ ಸವ೯ಗತವೂ ನಿರಂಜನವೂ ನಿರವಯವವೂ ಆದ ಚೈತನ್ಯ.(ಪುಟ280)
4)ಉದ್ಧಾಲಕ:ಸೋಮ್ಯನೆ,ಆದರೆ ಇದು ಹೇಗಾದೀತು?ಅಸದ್ವಸ್ತುವಿನಿಂದ ಸದ್ವಸ್ತುವು ಹೇಗೆ ಹುಟ್ಟುವುದು?ನಿಜವಾಗಿಯೂ ಸೃಷ್ಟಿಗೆ ಮೊದಲು ಈ ಜಗತ್ತು ಏಕವೂ ಅದ್ವಿತೀಯವೂ ಆದ ಸತ್ಸ್ವರೂಪವೇ ಆಗಿತ್ತು.(281)
5)"ಆ ಸದ್ವಸ್ತುವು 'ಬಹುವಾಗುವೆನು ,ಉತ್ಪನ್ನವಾಗುವೆನು' ಎಂದು ಯೋಚಿಸಿತು.ಅದು ತೇಜಸ್ಸನ್ನು ಸೃಷ್ಟಿಸಿತು.ತೇಜಸ್ಸಿನಿಂದ ನೀರು ಸೃಷ್ಟಿಯಾಯಿತು.ಆದುದರಿಂದ ಮನುಷ್ಯನು ಎಲ್ಲೆಲ್ಲಿ ಶೋಕಿಸುವನೊ ಅಥವಾ ಬೆವರುವನೊ ಅಲ್ಲಲ್ಲಿ ನೀರು ತೇಜಸ್ಸಿನಿಂದಲೇ ಉಂಟಾಗುತ್ತದೆ.(ಪುಟ 282)
6) ಅಕ್ಷರಶಃ'ನೋಡಿತು'ಎಂದಥ೯.ಇದರಿಂದ ಸ್ವಸ್ತುವು ಚೇತನವೆಂದು ತಿಳಿಯ ಬರುತ್ತದೆ.ಸಾಂಖ್ಯರು
ಕಲ್ಪಿಸಿರುವ ಅಚೇತನವಾದ ಪ್ರಧಾನವಲ್ಲ.(ಪುಟ 282)
7)ತೈತ್ತಿರೀಯದಲ್ಲಿ(2.1)'ಆ ಈ ಆತ್ಮನಿಂದ ಆಕಾಶವುಂಟಾಯಿತು.ಆಕಾಶದಿಂದ ವಾಯು,ವಾಯುವಿನಿಂದ ಅಗ್ನಿ,ಅಗ್ನಿಯಿಂದ ನೀರು,ನೀರಿನಿಂದ ಪೃಥ್ವಿ'ಎಂದು ಹೇಳಿದೆ.(ಪುಟ 282)
8)ಆನೀರು"ಬಹುವಾಗುವೆನು ,ಉತ್ಪನ್ನವಾಗುವೆನು "ಎಂದು ಯೋಚಿಸಿತು.ಅದು ಅನ್ನವನ್ನು ಸೃಷ್ಟಿಸಿತು.ಆದುದರಿಂದ ಎಲ್ಲೆಲ್ಲಿ ಹೆಚ್ಚು ಮಳೆಯಾಗುತ್ತದೆಯೋ ಅಲ್ಲಲ್ಲಿ ಹೆಚ್ಚ್ಚಾಗಿ ಅನ್ನವುಂಟಾಗುತ್ತದೆ.ನೀರಿನಿಂದಲೇ ಅಲ್ಲಿ ತಿನ್ನಲಿಕ್ಕೆ ಅನ್ನವು ಉಂಟಾಗುತ್ತದೆ'.(ಪುಟ (ಪುಟ 282)
ಮೂರನೆಯ ಖಂಡ:
೯) ಜೀವಾವಿಷ್ಟವಾದ ಆ ಈ ಪ್ರಾಣಿಗಳಿಗೆ 1)ಅಂಡಜ 2)ಜರಾಯುಜ 3)ಉದ್ಭಿಜ್ಜ ಎಂಬ ಮೂರು ಕಾರಣಗಳಿರುತ್ತವೆ.(ಪುಟ 283)
10)ಆ ಈ ದೇವತೆಯು ಯೋಚಿಸಿತು.:"ಸರಿ,ನಾನು ಈ ಜೀವಾತ್ಮ ರೂಪದಿಂದ ಈ ಮೂರು ದೇವತೆಗಳನ್ನು ಪ್ರವೇಶಿಸಿ ನಾಮರೂಪಗಳನ್ನು ವಿಂಗಡಿಸಿಸುವೆನು."(ಪುಟ 285)
11) ಇವುಗಳಲ್ಲಿ ಒಂದೊಂದನ್ನೂ ಮೂರುಮೂರಾಗಿ ಮಾಡುತ್ತೇನೆ"ಎಂದು ಯೋಚಿಸಿ ಆ ಈ ಜೀವಾತ್ಮ ರೂಪದಿಂದಲೇ ಈ ಮೂರು ದೇವತೆಗಳನ್ನು ಪ್ರವೇಶಿಸಿ ನಾಮರೂಪಗಳನ್ನು ವಿಂಗಡಿಸಿತು.(ಪುಟ 284)
12) ತ್ರಿವತ್ಕರಣದಲ್ಲಿ ಒಂದು ಭೂತದ ಅಂಶವು ಹೆಚ್ಚಾಗಿಯೂ ಉಳಿದ ಎರಡು ಭೂತಗಳ ಅಂಶಗಳು ಕಡಮೆಯಾಗಿಯೂ ಇರುತ್ತವೆ.ಇದು ಈ ರೀತಿ ಇರುತ್ತದೆ:
ತೇಜಸ್ಸು1/2 +ನೀರು1/4+ಪೃಥ್ವಿ1/4
ನೀರು 1/2+ಪೃಥ್ವಿ1/4+ತೇಜಸ್ಸು1/4
ಪೃಥ್ವಿ1/2+ತೇಜಸ್ಸು1/4+ನೀರು1/4
ಇದೇ ರೀತಿ ಪಂಚೀಕರಣವನ್ನೂ 1/2+1/8+1/8+1/8+1/8 ತಿಳಿದುಕೊಳ್ಳಬೇಕು.(ಪುಟ 284)
13) ಆ ದೇವತೆಯು ತೇಜಸ್ಸು ನೀರು ಪೃಥ್ವಿ ಇವುಗಳಲ್ಲಿ ಒಂದೊಂದನ್ನು ಮೂರುಮೂರು ಭಾಗಗಳುಳ್ಳದ್ದಾಗಿ ಮಾಡಿತು. ಸೋಮ್ಯ,ಹೇಗೆ ಈ ಮೂರು ದೇವತೆಗಳು ಒಂದೊಂದೂ ಮೂರು ಮೂರು ಭಾಗಗಳುಳ್ಳದ್ದಾಗುತ್ತದೆಯೊ ಅದನ್ನು ನನ್ನಿಂದ ತಿಳಿದುಕೊ.(ಪುಟ 285)
14)ತ್ರಿವೃತ್ಕರಣದಲ್ಲಿ ಹೊರಗಿನ ತ್ರಿವೃತ್ಕರಣ ಮತ್ತು ಒಳಗಿನ ತ್ರಿವೃತ್ಕರಣವನ್ನು ಹೇಳಲಾಗುತ್ತದೆ.6.5.1ರಿಂದ ಒಳಗಿನ ತ್ರಿವೃತ್ಕರಣವನ್ನು ಹೇಳಲಾಗುವುದು.(ಪುಟ 285)
ನಾಲ್ಕನೆಯ ಖಂಡ:
15)ಯಾವುದು ಅಗ್ನಿಯ -ಕೆಂಪು ಬಣ್ಣವೊ ಅದು ತೇಜಸ್ಸಿನ ಬಣ್ಣ.
ಯಾವುದು ಅಗ್ನಿಯ ಬಿಳಿಯ ಬಣ್ಣವೊ ಅದು ನೀರಿನ ಬಣ್ಣ
ಯಾವುದು ಅಗ್ನಿಯ ಕಪ್ಪು ಬಣ್ಣವೊ ಅದು ಪೃಥ್ವಿಯ ಬಣ್ಣ.
ಪರಿಣಾಮವೆಂಬುದು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ.ಮೂರು ಬಣ್ಣಗಳೆಂಬುದೇ ಸತ್ಯ.(ಪುಟ286)
16)ಯಾವುದು ಆದಿತ್ಯನಕೆಂಪು ಬಣ್ಣ-ತೇಜಸ್ಸಿನ ಬಣ್ಣ
ಆದಿತ್ಯನಬಿಳಿಯ ಬಣ್ಣ-ನೀರಿನ ಬಣ್ಣ
ಆದಿತ್ಯನ ಕಪ್ಪು ಬಣ್ಣ-ಅದು ಪೃಥ್ವಿಯ ಬಣ್ಣ
ಹೀಗೆ ಆದಿತ್ಯನಿಂದ ಆದಿತ್ಯತ್ವವು ಹೋಯಿತು.ಪರಿಣಾಮವೆಂಬುದು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ.ಮೂರು ಬಣ್ಣಗಳೆಂಬುದೇ ಸತ್ಯ.(ಪುಟ286)
17)ಅದೇ ರೀತಿಯಲ್ಲಿ:
ಯಾವುದು ಚಂದ್ರನ ಕೆಂಪು ಬಣ್ಣವೊ -ಅದು ತೇಜಸ್ಸಿನ ಬಣ್ಣ
ಯಾವುದು ಚಂದ್ರನ ಬಿಳಿಯ ಬಣ್ಣವೊ-ಅದು ನೀರಿನ ಬಣ್ಣ
ಯಾವುದು ಚಂದ್ರನಕಪ್ಪು ಬಣ್ಣವೊ-ಅದು ಪೃಥ್ವಿಯ ಬಣ್ಣ
ಹೀಗೆ ಚಂದ್ರನಿಂದ ಚಂದ್ರತ್ವವು ಹೋಯಿತು.ಪರಿಣಾಮವೆಂಬುದು ವಾಕ್ಕನ್ನು ಅವಲಂಬಿಸಿರುವ ಹೆಸರೇ.ಮೂರು ಬಣ್ಣಗಳೆಂಬುದೇ ಸತ್ಯ.(ಪುಟ 387)
18)ಇದೇ ತತ್ವವು ವಿದ್ಯುತ್ತಿಗೂ ಅನ್ವಯಿಸುತ್ತದೆ.
ವಿದ್ಯುತ್ತಿನ ಕೆಂಪು ಬಣ್ಣ -ತೇಜಸ್ಸಿನ ಬಣ್ಣ
ಯಾವುದು ವಿದ್ಯುತ್ತಿನ ಬಿಳಿಯ ಬಣ್ಣವೊ-ಅದು ನೀರಿನ ಬಣ್ಣ
ಯಾವುದು ವಿದ್ಯುತ್ತಿನ ಕಪ್ಪು ಬಣ್ಣವೊ- ಅದು ಪೃಥ್ವಿಯ ಬಣ್ಣ.
ಪರಿಣಾಮವೆಂಬುದು ವಾಕ್ಕನ್ನು ಅವಲಂಬಿಸಿರುವ ಕೇವಲ ಹೆಸರೇ.(ಪುಟ 287)
1೯) ಈ ತ್ರಿವೃತ್ಕರಣವನ್ನು ಅರಿತುಕೊಂಡ ಪೂವಿ೯ಕರಾದ ಮಹಾ ಗೃಹಸ್ಥರೂ ಮತ್ತು ಶ್ರೋತ್ರಿಯರೂ ಹೀಗೆ ಹೇಳಿದರು:"ಈಗ ನಮ್ಮಲ್ಲಿ ಯಾರೂ ಅಶ್ರುತವಾದುದನ್ನು ಅಚಿಂತಿತವಾದುದನ್ನು ಅವಿದಿತವಾದುದನ್ನು ಉದಾಹರಿಸುವುದಿಲ"್ಲ.ಅವರು ಹೀಗೆ ಹೇಳಲು ಸಮಥ೯ರಾಗಿದ್ದರು.ಏಕೆಂದರೆ ಈ ಮೂರು ರೂಪಗಳಿಂದಲೇ ಅವರು ಅರಿತುಕೊಂಡಿದ್ದರು.(ಪುಟ 288)
20)ಸತ್ ವಿಜ್ಞಾನದಿಂದ ಸವ೯ಜ್ಞರೇ ಆಗಿದ್ದರು.ಉಪಲಕ್ಷಣವಾಗಿ ಹೇಳಿದ ಅಗ್ನ್ಯಾದಿ ದೃಷ್ಟಾಂತಗಳಿಂದ ಉಳಿದಿದೆಲ್ಲವನ್ನೂ ಅರಿತುಕೊಂಡರು ಎಂದು ತಾತ್ಪಯ೯.(ಪುಟ 288)
21)ಯಾವುದು ಅವರಿಗೆ ಕೆಂಪಿನಂತೆ ಕಂಡಿತೊ ಅದನ್ನು ತೇಜಸ್ಸಿನ ಬಣ್ಣವೆಂದು ಅರಿತುಕೊಂಡರು.ಯಾವುದು ಅವರಿಗೆ ಭಿಳಿಯ ಬಣ್ಣದಂತೆ ಕಂಡಿತೊ ಅದನ್ನು ನೀರಿನ ಬಣ್ಣವೆಂದು ಅರಿತುಕೊಂಡರು.ಯಾವುದು ಅವರಿಗೆ ಕಪ್ಪಾಗಿ ಕಂಡುಬಂದಿತೊ ಅದನ್ನು ಪೃಥ್ವಿಯ ಬಣ್ಣವೆಂದು ಅರಿತುಕೊಂಡರು.(ಪುಟ 28೯)
22)ಯಾವುದು ಅವರಿಗೆ ಅವಿಜ್ಞಾತದಂತೆ ಕಂಡಿತೊ ಅದನ್ನು ಈ ದೇವತೆಗಳ ಸಮುದಾಯವೆಂದು ಅರಿತುಕೊಂಡರು.ಆದರೆ ಸೋಮ್ಯ,ಹೇಗೆ ಈ ಮೂರು ದೇವತೆಗಳು ಮನುಷ್ಯರಲ್ಲಿ ಸೇರಿಕೊಂಡು ಒಂದೊಂದೂ ಮೂರುಮೂರಾಗುವುದೊ ಅದನ್ನು ನನ್ನಿಂದ ತಿಳಿದುಕೊ.(ಪುಟ 28೯)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಐದನೆಯ ಖಂಡ(ಅಧ್ಯಾತ್ಮಿಕ ತ್ರಿವೃತ್ಕರಣ):
23) ಭುಕ್ತವಾದ ಅನ್ನವು ಜಾಠರಾಗ್ನಿಯಿಂದ ಪಕ್ಷವಾಗಿ ಮೂರು ಬಗೆಯಾಗುತ್ತದೆ.ಆ ಅನ್ನದಲ್ಲಿ ಯಾವುದು ಸ್ಥೂಲತಮವಾದ ಧಾತುವೊ ಅದು ಮಲವಾಗುತ್ತದೆ.ಯಾವುದು ಮಧ್ಯಮ ಧಾತುವೊ ಅದು ಮಾಂಸವಾಗುತ್ತದೆ.ಯವುದು ಸೂಕ್ಷ್ಮತಮ ಧಾತುವೊ ಅದು ಮನಸ್ಸಾಗುತ್ತದೆ.(ಪುಟ 2೯0)
24)ಕುಡಿಯಲ್ಪತ್ತನೀರು ಮೂರು ಬಗೆಯಾಗುತ್ತದೆ.ಯಾವುದು ಸ್ಥೂಲತಮ ಧಾತುವೊ ಅದು ಮೂತ್ರವಾಗುತ್ತದೆ.ಯಾವುದು ಮಧ್ಯಮ ಧಾತುವೊ ಅದು ರಕ್ತವಾಗುತ್ತದೆ.ಯಾವುದು ಸೂಕ್ಷ್ಮತಮಧಾತುವೊ ಅದು ಪ್ರಾಣವಾಗುತ್ತದೆ.(ಪುಟ 2೯1)
25)ಭುಕ್ತವಾದ ತೇಜಸ್ಸು ಮೂರು ಬಗೆಯಾಗುತ್ತದೆ.ಆ ತೇಜಸ್ಸಿನಲ್ಲಿ ಯವುದು ಸ್ಥೂಲತಮವಾದ ಧಾತುವೊ ಅದು ಅಸ್ಥಿಯಾಗುತ್ತದೆ.ಯಾವುದು ಮಧ್ಯಮ ಧಾತುವೊ ಅದು ಮಜ್ಜೆಯಾಗುತ್ತದೆ.
ತಾವುದು ಸೂಕ್ಷ್ಮತಮ ಧಾತುವೊ ಅದು ವಾಕ್ಕಾಗುತ್ತದೆ.(ಪುಟ2೯1)
26) ಸೋಮ್ಯ,ಮನಸ್ಸು ಅನ್ನಮಯ
ಪ್ರಾಣವು ಆಪೋಮಯ
ವಾಕ್ಕು ತೇಜೋಮಯ(ಪುಟ 2೯1)
27)ತ್ರಿವೃತ್ಕರಣವಾಗದ ವಸ್ತುವು ತಿನ್ನುವುದಕ್ಕೆ ಸಿಕ್ಕುವುದಿಲ್ಲ.ಆದುದರಿಂದ ಮನಃಪ್ರಾಣವಾಕ್ಕುಗಳ ಯಾವುದೇ ಒಂದು ಅಂಶವಾಗಲಿಪೃಥ್ವಿ,ನೀರು,ತೇಜಸ್ಸುಇವುಗಳನ್ನು ಒಳಗೊಂಡಿರುತ್ತದೆ.(ಪುಟ 2೯2)
ಆರನೆಯ ಖಂಡ:
28)ಸೋಮ್ಯ,ಮೊಸರನ್ನು ಕಡೆದಾಗ ಅದರಲ್ಲಿ ಯಾವುದು ಸೂಕ್ಷ್ಮ ಅಂಶವೊ ಅದು ಮೇಲೇಳುತ್ತದೆ ಮತ್ತು ಬೆಣ್ಣೆಯಾಗುತ್ತದೆ.(ಪುಟ 2೯2)
2೯) ಹೀಗೆಯೇ ಸೋಮ್ಯ,ಅನ್ನವನ್ನು ಭುಂಜಿಸಿದಾಗ ಅದರಲ್ಲಿ ಯಾವುದು ಸೂಕ್ಷ್ಮ ಅಂಶವೊ ಅದು ಮೇಲೇಳುತ್ತದೆ ಮತ್ತು ಮನಸ್ಸಾಗುತ್ತದೆ.(ಪುಟ 2೯3)
30)ಹೀಗೆಯೇ ನೀರನ್ನು ಕುಡಿದಾಗ ಅದರಲ್ಲಿ ಯಾವುದು ಸೂಕ್ಷ್ಮಾಂಶವೊ ಅದು ಮೇಲಕ್ಕೇಳುತ್ತದೆ ಮತ್ತು ಪ್ರಾಣವಾಗುತ್ತದೆ.(ಪುಟ 2೯3)
31)ಸೋಮ್ಯ,ತೇಜಸ್ಸನ್ನು ಭುಂಜಿಸಿದಾಗ ಅದರಲ್ಲಿ ಯಾವುದು ಸೂಕ್ಷ್ಮಾಂಶವೊ ಅದು ಮೇಲಕ್ಕೇಳುತ್ತದೆ. ಮತ್ತು ವಾಕ್ ಆಗುತ್ತದೆ.(ಪುಟ 2೯3)
32) ಸೋಮ್ಯ,
ಮನಸ್ಸು ಅನ್ನಮಯ
ಪ್ರಾಣವು ಆಪೋಮಯ
ವಾಕ್ಕು ತೇಜೋಮಯ(ಪುಟ 2೯6)
ಏಳನೆಯ ಖಂಡ:
33)ಸೋಮ್ಯ,ಮನುಷ್ಯನು ಹದಿನಾರು ಕಲೆಗಳುಳ್ಳವನು.ಹದಿನೈದು ದಿನಗಳವರೆಗೆ ಊಟಮಾಡಬೇಡ
ಬೇಕಾದಷ್ಟು ನೀರನ್ನು ಕುಡಿ.ಏಕೆಂದರೆ ಪ್ರಾಣವು ನೀರಿನ ಪರಿಣಾಮವಾಗಿದೆ.ನೀರು ಕುಡಿಯುವವನಿಗೆ ಪ್ರಾಣವು ವಿಚ್ಛೇದವಾಗುವುದಿಲ್ಲ.(ಪುಟ 34)
34)ಭುಕ್ತವಾದ ಅನ್ನ ಸೂಕ್ಷ್ಮತಮವಾದ ಧಾತುವು ಮನಸ್ಸಿನಲ್ಲಿ ಶಕ್ತಿಯನ್ನುಂಟು ಮಾಡುತ್ತದೆ.ಅನ್ನದಿಂದ ಬೆಳೆದ ಮಾನಸಿಕ ಶಕ್ತಿಯನ್ನು ಹದಿನಾರು ಪಾಲಾಗಿ ವಿಂಗಡಿಸಿ ಅದು ಪುರುಷನ ಕಲೆಗಳೆಂದು ಈ ಖಂಡದಲ್ಲಿ ತೋರಿಸಿದೆ.ಹದಿನಾರು ಕಲೆಗಳಿಂದ ಕೂಡಿದ ಕಾಯ೯ಕರಣ ಸಂಘಾತನೂ ಜೀವ-ವಿಶಿಷ್ಟನೂ ಆದ ಮನುಷ್ಯನನ್ನು ಷೋಡಶ-ಕಲನೆಂದು ಇಲ್ಲಿ ಹೇಳಿದೆ.ಈ ಶಕ್ತಿಯಿಂದಲೇ ಮನುಷ್ಯನು ಶ್ರೋತೃ,ಮಂತ್ರ,ಬೋದ್ಧø,ಕತೃ೯,ವಿಜ್ಞಾತೃ,ಎನಿಸಿ ಸವ೯ಕ್ರಿಯೆಗಳನ್ನೂ ಮಾಡಲು ಸಮಥ೯ನಾಗಿರುತ್ತಾನೆ..ಮಾನಸಬಲದಿಂದ ಕೂಡಿದ್ದರೆ ಶಾರೀರಕ ಬಲವೂ ಉಂಟಾಗುತ್ತದೆ.ಆದುದರಿಂದ ಮಾನುಸ
ವೀಯ೯ವು ಅನ್ನದಿಂದಲೇ ಉಂಟಾದದ್ದು.(ಪುಟ 2೯5)
35)ಶೇತಕೇತುವು ಹದಿನೈದು ದಿನಗಳವರೆಗೆ ಊಟಮಾಡಲಿಲ್ಲ.ಅನಂತರ ತಂದೆಯ ಬಳಿಗೆ ಬಂದನು.'ಭಗವಂತನೆ ನಾನು ಏನನ್ನು ಹೇಳಲಿ?'ಎಂದನು(ಪುಟ 2೯5)
36)ನಿನ್ನ ಹದಿನಾರು ಕಲೆಗಳಲ್ಲಿ ಒಂದು ಕಲೆಯು ಉಳಿದುಕೊಂಡಿದೆ.ಆ ಒಂದು ಕಲೆಯಿಂದ ಈಗ ನೀನು ವೇದಗಳನ್ನು ಅರಿಯದಿರುವೆ.ಅನಂತರ ನನ್ನ ಮಾತನ್ನು ಅರಿತುಕೊಳ್ಳುವೆ.(ಪುಟ 2೯6)
37)ಅವನು ಊಟ ಮಾಡಿದನು.ಅನಂತರ ತಂದೆಯನ್ನು ಬಳಿಸಾರಿದನು.ತಂದೆಯು ಅವನನ್ನು ಕುರಿತು ಏನೇನು ಪ್ರಶ್ನಿಸಿದನೊ ಅದೆಲ್ಲವನ್ನೂ ಅರಿತಿದ್ದನು.ಋಕ್ಕೇ ಮೊದಲಾದ ಎಲ್ಲವನ್ನೂ ಗ್ರಂಥರೂಪದಿಂದಲೂ ಅಥ೯ರೂಪದಿಂದಲೂ ಅರಿತುಕೊಂಡಿದ್ದನು.(ಪುಟ 2೯6)
38)ಉದ್ಧಾಲಕ:ಸೋಮ್ಯ,ಹೇಗೆ ಪ್ರಜ್ವಲಿತವದ ಮಹಾಗ್ನಿಯು ಮಿಣುಕು ಹುಳುವಿನ ಗಾತ್ರದಷ್ಟು ಉಳಿದಿರುವ ಕೆಂಡವೊಂದನ್ನು ಹುಲ್ಲು ಸೇರಿಸಿ ಪ್ರಜ್ವಲಿಸಬಹುದೊ ,ಆ ಕೆಂಡದಿಂದ ಅದಕ್ಕಿಂತಲೂ ದೊಡ್ಡದಾದುದನ್ನು ಸುಡಬಹುದೊ ಹಾಗೆಯೇ ಸೋಮ್ಯನೆ,ನಿನ್ನ ಹದಿನಾರು ಕಲೆಗಳಲ್ಲಿ ಒಂದು ಕಲೆಯು ಉಳಿದಿದ್ದು ,ಅದು ಅನ್ನದಿಂದ ವಧಿ೯ತವಾಗಿ ಪ್ರಜ್ವಲಿಸಿತು.ಆದ್ದರಿಂದ ಈಗ ವೇದಗಳನ್ನು ಅರಿತಿರುವೆ.ಆದುದರಿಂದ ಸೋಮ್ಯ,ಮನಸ್ಸು ಅನ್ನಮಯ,ಪ್ರಾಣವು ಆಪೋಮಯ,ವಾಕ್ಕು ತೇಜೋಮಯ.'
ಶ್ವೇತಕೇತುವು ತಂದೆಯ ಆ ಉಪದೇಶವನ್ನು ಅರಿತುಕೊಂಡನು.ಸರಿಯಾಗಿ ಅರಿತುಕೊಂಡನು.(ಪುಟ 2೯7)
3೯) ಹೀಗೆ ಅನ್ವಯ-ವ್ಯತಿರೇಕಗಳಿಂದ ಮನಸ್ಸು ಅನ್ನಮಯವೆಂಬುದು ಸಿದ್ಧವಾಗಿದೆ.(ಪುಟ 2೯7)
.,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
ಎಂಟನೆಯ ಖಂಡ:
40) ಉದ್ಧಾಲಕ ಅರು£ಣಿಯು ತನ್ನ ಪುತ್ರನಾದ ಶ್ವೇತಕೇತುವಿಗೆ ಹೇಳಿದನು:'ಸೋಮ್ಯ,ಸುಷುಪ್ತಿಯನ್ನು ನನ್ನಿಂದ ಅರಿತುಕೊ. ಯಾವಾಗ ಮನುಷ್ಯನು "ನಿದ್ರಿಸುತ್ತಾನೆ" ಎನಿಸಿಕೊಳ್ಳುವನೊ ಅಗ ಸದ್ವಸ್ತುವಿನೊಂದಿಗೆ ಏಕೀಭೂತನಾಗಿರುತ್ತಾನೆ.ಸ್ವರೂಪವನ್ನು ಹೊಂದಿರುತ್ತಾನೆ.ಆದುದರಿಂದ ಇವನನ್ನು "ಸ್ವಪಿತಿ" ಎಂದು ಹೇಳುತ್ತಾರೆ.ಏಕೆಂದರೆ ಸ್ವ-ರೂಪವನ್ನು ಹೊಂದಿರುತ್ತಾನೆ.(ಪುಟ 2೯8)
41)ಸ್ವರೂಪವೆಂಬ ಅವಸ್ಥೆಯನ್ನು ಬಿಟ್ಟರೆ ಇನ್ನೆಲ್ಲಿಯೂ ಶ್ರಮ ಪರಿಹಾರವು ಆಗಲಾರದು.(ಪುಟ 2೯೯)
42).ಹೇಗೆ ಪಕ್ಷಿಯು ದಾರದಿಂದ ಕಟ್ಟಲ್ಪಟ್ಟಿರುವಾಗ ದಿಕ್ಕು ದಿಕ್ಕಿಗೆ ಹಾರಾಡಿ'ಬೇರೆ ಕಡೆಯಲ್ಲಿ ಆಶ್ರಯವನ್ನು ಪಡೆಯದೆ,ತನ್ನ ಬಂಧನ ಸ್ಥಾನವನ್ನೇ ಆಶ್ರಯಿಸುವುದೊ ಹಾಗೆಯೇ ಸೋಮ್ಯ,ಆ ಮನಸ್ಸು ದಿಕ್ಕು ದಿಕ್ಕಿಗೆ ಹಾರಾಡಿ ಬೇರೆ ಕಡೆಯಲ್ಲಿ ಆಶ್ರಯವನ್ನು ಪಡೆಯದೆ ಪ್ರಾಣವನ್ನೇ ಆಶ್ರಯಿಸುತ್ತದೆ.ಏಕೆಂದರೆ ಸೋಮ್ಯ,ಮನಸ್ಸು ಪ್ರಾಣದಿಂದ ಬಂಧಿಸಲ್ಪಟ್ಟಿದೆ.(ಪುಟ 2೯೯)
43)ಸೋಮ್ಯ,ಹಸಿವು ಬಾಯಾರಿಕೆಗಳನ್ನು ನನ್ನಿಂದ ತಿಳಿದುಕೊಮನುಷ್ಯನು ಹಸಿದಿರುವನು ಎನಿಸಿಕೊಂಡಾಗ ನೀರೇ ಅವನು ತಿಂದಿದ್ದನ್ನು ಒಯ್ಯುತ್ತದೆ.ಮನುಷ್ಯರು ಗೋಪಾಲಕ,ಅಶ್ವಪಾಲಕ,ಮನುಷ್ಯನಾಯಕ ಎಂದು ಹೇಳುವಂತೆ ನೀರನ್ನೂ "ಅಶನಾಯಾ"ಎಂದು ಹೇಳುವರು.ಆದುದರಿಂದ ಸೋಮ್ಯ,ಈ ಶರೀರರೂಪವಾದ ಅಂಕುರವನ್ನು ಬೇರಿನಿಂದ ಹುಟ್ಟಿರುವುದೆಂದು ತಿಳಿದುಕೊ ;ಏಕೆಂದರೆ ಅದು ಬೇರಿಲ್ಲದೆ ಇರಲಾರದು.(ಪುಟ300)
44)ಶರೀರವು ಅನ್ನದ ಕಾಯ೯ವೆಂದು ತಿಳಿದು ಬರುತ್ತದೆ.(ಪುಟ 300)
45)'ಆದರೆ ಬೇರು ಅನ್ನವನ್ನು ಬಿಟ್ಟು ಮತ್ತೆಲ್ಲಿದ್ದೀತು.ಹೀಗೆಯೆ ಸೋಮ್ಯ,ಅನ್ನವೆಂಬ ಅಂಕುರದಿಂದ ನೀರೆಂಬ ಬೇರನ್ನು ಹುಡುಕು ನೀರೆಂಬ ಅಂಕುರದಿಂದ ತೇಜಸ್ಸೆಂಬ ಬೇರನ್ನು ಹುಡುಕು.ತೇಜಸ್ಸೆಂಬ ಅಂಕುರದಿಂದ ಸತ್ ಎಂಬ ಬೇರನ್ನು ಹುಡುಕು.ಸ್ಥಾವಬ-ಜಂಗಮ ರೂಪವಾದ ಈ ಪ್ರಾಣಿಗಳೆಲ್ಲ ಸದ್ವಸ್ತುವನ್ನೇ ಮೂಲವಾಗಿ ಪಡೆದಿವೆ.ಸದ್ವಸ್ತುವನ್ನೇ ಆಶ್ರಯವಾಗಿ ಪಡೆದಿವೆ ಮತ್ತು ಸದ್ವಸ್ತುವನ್ನೇ ಲಯಸ್ಥಾನವಾಗಿ ಪಡೆದಿವೆ.(ಪುಟ 301)
46)ಮನುಷ್ಯನು ದಾಹವಾಗಿರುವನು ಎನ್ನಿಸಿಕೊಂಡಾಗ ತೇಜಸ್ಸೇ ಅವನು ಕುಡಿದದ್ದನ್ನು ಒಯ್ಯುತ್ತದೆ.ಮನುಷ್ಯರು ಗೋಪಲಕ,ಅಶ್ವಪಾಲಕ,ಮನುಷ್ಯ ನಾಯಕ ಎಂದು ಹೇಳುವಂತೆ ಆ ತೇಜಸ್ಸನ್ನೂ "ಉನನ್ಯಾ""ಎಂದು ಕರೆಯುವರು.ಆದುದರಿಂದ ಈ ಶರೀರರೂಪವಾದ ಅಂಕುರವನ್ನು ಬೇರಿನಿಂದ ಹುಟ್ಟಿದುದೆಂದು ತಿಳಿದುಕೊ.ಏಕೆಂದರೆ ಅದು ಬೇರಿಲ್ಲದೆ ಇರಲಾರದು.(ಪುಟ 302)
47)'ಅದರ ಬೆರು ನೀರನ್ನು ಬಿಟ್ಟು ಮತ್ತೆಲ್ಲಿದ್ದೀತು?ನೀರೆಂಬ ಅಂಕುರದಿಂದ ತೇಜಸ್ಸೆಂಬ ಅಂಕುರದಿಂದ ಸತ್ ಎಂಬ ಬೇರನ್ನು ಹುಡುಕು.ಸ್ಥಾವರ -ಜಂಗಮ -ರೂಪವಾದ ಈ ಪ್ರಾಣಿಗಳೆಲ್ಲ ಸದ್ವಸ್ತುವನ್ನೇ ಆಶ್ರಯವಾಗಿ ಪಡೆದಿವೆ ಮತ್ತು ಸದ್ವಸ್ತುವನ್ನೇ ಲಯಸ್ಥಾನವಾಗಿ ಪಡೆದಿವೆ.ಹೇಗೆ ಪೃಥ್ವಿ,ವನೀರು,ತೇಜಸ್ಸು ಈ ಮೂರು ದೇವತೆಗಳು ಮನುಷ್ಯನನ್ನು ಹೊಂದಿ ಒಂದೊಂದು ಮೂರು ಮೂರಾಗುವುದೊ ಅದನ್ನು ಮೊದಲೇ ಹೇಳಿದ್ದಾಗಿದೆ.
ಸಾಯುತ್ತಿರುವ ಮನುಷ್ಯನ ಈ ವಾಕ್ಕು ಮನಸ್ಸಿನಲ್ಲಿಯೂ ,ಮನಸ್ಸು ಪ್ರಾಣದಲ್ಲಿಯೂ ಪ್ರಾಣವು ತೇಜಸ್ಸಿನಲ್ಲಿಯೂ ,ತೇಜಸ್ಸು ಪರದೇವತೆಯಲ್ಲಿಯೂ ,ಉಪಸಂಹೃತವಗುತ್ತದೆ.(ಪುಟ 303)
48)ಕನ್ನಡಿಯು ಒಡೆದು ಹೋದಾಗ ಕನ್ನಡಿಯಲ್ಲಿ ಪ್ರತಿಬಿಂಬಿತವಾದ ಮುಖವು ನಿಜವಾದ ಮುಖದಲ್ಲಿ ಲಯವಾಗುವಂತೆ ಮನಸ್ಸು ಮೊದಲಾದ ಇಂದ್ರಿಯಗಳು ಲಯಹೊಂದಿದಾಗ ಜೀವಾತ್ಮನೂ ಕೂಡ ತನ್ನ ಸ್ವರೂಪದಲ್ಲಿಯೇ ಸೇರುತ್ತಾನೆ.ಮುಕ್ತನಾದವನು ಹಿಂತಿರುಗುವುದಿಲ್ಲ.ಆದರೆ ಅಜ್ಞಾನಿಯು -ತನಿ ನಿದ್ರೆಯಿಂದ ಎಚ್ಚರವಾಗುವಂತೆ -ತನ್ನ ಮೂಲವಾದ ಸದ್ವಸ್ತುವಿನಿಂದಲೇ ಹೊರಟು ಪುನಃ ದೇಹಜಾಲವನ್ನು ಪಡೆಯುತ್ತಾನೆ.(ಪುಟ 304)
4೯)ಯಾವುದು ಸೂಕ್ಷ್ಮತಮವಾದ ಈ ಜಗನ್ಮೂಲವೊ ಅದರಿಂದಲೇ ಈ ಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ಸತ್ಯವು,ಅದು ಆತ್ಮನು,ಓ ಶ್ವೇತಕೇತು ,ಅದು ನೀನಾಗಿರುವೆ'.(ಪುಟ 304).
ಒಂಬತ್ತನೆಯ ಖಂಡ:(ಜೇನುಹುಳುಗಳ ಉದಾಹರಣೆ)
50)ಸೋಮ್ಯ,ಹೇಗೆ ಜೇನುಹುಳುಗಳು ನಾನಾ ದಿಕ್ಕಿನಲ್ಲಿರುವ ಮರಗಳ ರಸಗಳನ್ನು ಸಂಗ್ರಹಿಸಿ ಜೇನುತುಪ್ಪವನ್ನು ತಯಾರಿಸುವವೊ ಮತ್ತು ಅವುಗಳನ್ನು ಒಂದಾಗಿ ಮಾಡುವುವೊ ,ಆ ರಸಗಳು ಹೇಗೆ ಅಲ್ಲಿ "ನಾನು ಆ ಮರದ ರಸವಾಗಿರುವೆನು" "ನಾನು ಈ ಮರದ ರಸವಾಗಿರುವೆವನು "ಎಂದು ವಿವೇಕವನ್ನು ಪಡೆಯುವುದಿಲ್ಲವೊ ಹಾಗೆಯೇ ಸೋಮ್ಯ,ಈ ಪ್ರಾಣಿಗಳೆಲ್ಲ ಸದ್ವಸ್ತುವಿನಲ್ಲಿ ಲಯವಾಗಿ "ಸದ್ವಸ್ತುವಿನಲ್ಲಿ ಲಯವಾಗಿರುವೆವು" ಎಂದು ಅರಿಯವು.(ಪುಟ 305)
51)'ನಾನು ಮಾವಿನ ಮರದ ರಸ ,ಹಲಸಿನಮರದ ರಸ'ಇತ್ಯಾದಿ .(ಪುಟ 305)
52)ಇಲ್ಲಿಈ ಪ್ರಾಣಿಗಳು ಏನಾಗಿರುವುವೊ-ಹುಲಿ,ಸಿಂಹ,ತೋಳ,ವರಾಹ,ಕೀಟ ,ಪತಂಗ,ತೊಣಚಿ ಅಥವಾ ಸೊಳ್ಳೆ-ಅವು ಪುನಃ ಪುನಃ ಅವೇ ಆಗುವವು.(ಪುಟ 306)
51)ತಾನು ಹುಲಿ ಸಿಂಹ ಎಂಬ ಆಯಾ ಕಮ೯ಜ್ಞಾನಗಳ ವಾಸನೆಯಿಂದ ಅಂಕಿತವಾಗಿ ಸದ್ವಸ್ತುವನ್ನು ಪ್ರವೇಶಿಸಿದ್ದರೂ ,ಅದರ ಭಾವನೆಯಿಂದಲೇ ಪುನಃ ಹುಟ್ಟುತ್ತವೆ ಅಥವಾ ಎಚ್ಚರಗೊಳ್ಳುತ್ತವೆ.ಸಹಸ್ರ ಯುಗಗಳ ಅಂತರವಿದ್ದರೂ ಸಂಸಾರಿಯಾದ ಜೀವನಿಗೆ ಹಿಂದೆ ಭಾವಿತವಾದ ವಾಸನೆಯು ನಾಶವಾಗುವುದಿಲ್ಲ ಎಂದಥ೯.ಹಿಂದಿನ ಜನ್ಮದ ಜ್ಞಾನದಂತೆ ಹುಟ್ಟುತ್ತಾರೆ.('ಯಥಾ ಪ್ರಜ್ಞಂ ಹಿ ಸಂಭವಾಃ' ಎಂದು ಐತರೇಯ ಅರಣ್ಯಕವು ಹೇಳುತ್ತದೆ.(2.3.2))
52)ಯಾವುದು ಸೂಕ್ಷ್ಮತಮವಾದ ಈ ಜಗನ್ಮೂಲವೊ ಅದರಿಂದಲೇ ಈ ಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ಸತ್ಯವು.ಅದು ಆತ್ಮನು.ಓ ಶ್ವೇತಕೇತು ಅದು ನೀನಾಗಿರುವೆ.(ತತ್ವಮಸಿ).'
ಹತ್ತನೆಯ ಖಂಡ:
53)"ಸೋಮ್ಯ,ಪೂವ೯ವಾಹಿನಿಯಾದ ಈ ನದಿಗಳು ಪೂವ೯ದಿಕ್ಕಿಗೂ ಪಶ್ಚಿಮವಾಹಿಬಿಯಾದ ಈ ನದಿಗಳು ಪಶ್ಚಿಮದಿಕ್ಕಿಗೂ ಹರಿಯುತ್ತವೆ.ಅವು ಸಮುದ್ರದಿಂದಲೇ ಎದ್ದು ಸಮುದ್ರವನ್ನೇ ಸೇರುತ್ತವೆ.ಅವು ಸಮುದ್ರವೇ ಆಗುತ್ತವೆ.ಹೇಗೆ ಅವು ಅಲ್ಲಿ "ನಾನು ಈ ನದಿಯಾಗಿರುವೆನು""ನಾನು ಆ ನದಿಯಾಗಿರುವೆನು "ಎಂದು ಅರಿಯವೊ ಹಾಗೆಯೇ ಸೋಮ್ಯನೇ ಈ ಪ್ರಾಣಿಗಳೆಲ್ಲ ಸದ್ವಸ್ತುವಿನಿಂದ ಬಂದು "ನಾವು ಸದ್ವಸ್ತುವಿನಿಂದ ಬಂದಿದ್ದೇವೆ " ಎಂದು ಅರಿಯವು.ಇಲ್ಲಿ ಈ ಪ್ರಾಣಿಗಳು ಏನಾಗಿರುವುವೊ -ಹುಲಿ,ಸಿಂಹ,ವರಾಹ ಕೀಟ,ಪತಂಗ,ತೊಣಚಿ ಅಥವಾ ಸೊಳ್ಳೆ-ಅವು ಪುನಃ ಪುನಃ ಅದೇ ಆಗುವವು.'
(ಪುಟ 308)
54)ಸಮುದ್ರದಿಂದ ಆವಿಯ ರೂಪದಲ್ಲಿ ಎದ್ದು ವೃಷ್ಟಿರೂಪದಿಂದ ಕೆಳಗೆ ಬಿದ್ದು ನದಿಗಳ ರೂಪದಿಂದ ಪುನಃ ಸಮುದ್ರವನ್ನೇ ಸೇರುತ್ತವೆ.(ಪುಟ 308)
55)"ಯಾವುದು ಸೂಕ್ಷ್ಮತಮವಾದ ಈ ಜಗನ್ಮೂಲವೊ ಅದರಿಂದಲೇ ಈ ಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ಸತ್ಯವು,ಅದು ಆತ್ಮನು, ಓ ಶ್ವೇತಕೇತು,ಅದು ನೀನಾಗಿರುವೆ(ತತ್ವಮಸಿ)."
ಹನ್ನೊಂದನೆಯ ಖಂಡ:
56)ಸೋಮ್ಯ,ಯಾವನಾದರೂ ದೊಡ್ಡ ಮರದ ಬುಡವನ್ನು ಕೊಡಲಿಯಿಂದ ಹೊಡೆದರೆ ಅದು ರಸವನ್ನು ಸ್ರವಿಸುವುದು.ಆದರೆ ಬದುಕಿರುತ್ತದೆ.ಯಾವನಾದರೂ ಅದನ್ನು ಮಧ್ಯದಲ್ಲಿ ಹೊಡೆದರೆ ಅದು ರಸವನ್ನು ಸ್ರವಿಸುವುದು.ಆದರೆ ಬದುಕಿರುತ್ತದೆ.ಯಾವನಾದರೂ ಅದರ ತುದಿಯನ್ನು ಹೊಡೆದರೆ ಅದು ರಸವನ್ನು ಸ್ರವಿಸುವುದು.ಆದರೆ ಬದುಕಿರುತ್ತದೆ.ಆ ಮರವು ಜೀವಾತ್ಮನಿಂದ ವ್ಯಾಪ್ತವಾಗಿ ರಸವನ್ನು ಕುಡಿಯುತ್ತ ಹಷ೯ಪಡುತ್ತ ನಿಂತಿರುತ್ತದೆ.(ಪುಟ 30೯)
57)ಜೀವನು ಈ ಮರದ ಒಂದು ಕೊಂಬೆಯನ್ನು ಬಿಟ್ಟರೆ ಆಗ ಅದು ಒಣಗುತ್ತದೆ.ಎರಡನೆಯ ಕೊಂಬೆಯನ್ನು ಬಿಟ್ಟರೆ ಆಗ ಅದು ಒಣಗುತ್ತದೆ.ಮೂರನೆಯ ಕೊಂಬೆಯನ್ನು ಬಿಟ್ಟರೆ ಆಗ ಅದು ಒಣಗುತ್ತದೆ.ಜೀವನು ಇಡೀ ಮರವನ್ನು ಬಿಟ್ಟರೆ ಮರವೆಲ್ಲ ಒಣಗುತ್ತದೆ.(ಪುಟ 310)
58)'ಹೀಗೆಯೇ ಇದನ್ನು ತಿಳಿದಿಕೊ.ಜೀವನು ಶರೀರವನ್ನು ಬಿಟ್ಟರೆಇದು ಒಣಗಿ ಸಾಯುತ್ತದೆ.ಜೀವನು ಸಾಯುವುದಿಲ್ಲ.ಯಾವುದು ಈ ಸೂಕ್ಷ್ಮತಮವಾದ ಈ ಜಗನ್ಮೂಲವೊ ಅದರಿಂದಲೇ ಈ ಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ನಿತ್ಯವು ಅದು ಆತ್ಮನು. ಓ ಶ್ವೇತಕೇತು ಅದು ನೀನಾಗಿರುವೆ.'(ಪುಟ 311)
ಹನ್ನೆರಡನೆಯ ಖಂಡ:
5೯)'ಆ ದೊಡ್ಡ ಆಲದಮರದಿಂದ(ನ್ಯಗ್ರೋಧ) ಒಂದು ಹಣ್ಣನ್ನು ತೆಗೆದುಕೊಂಡು ಬಾ.
'ತಂದೆನು ಭಗವಂತನೆ.'
'ಒಡೆ'
'ಒಡೆದೆನು ಭಗವಂತನೆ'
'ಇದರಲ್ಲಿ ಏನನ್ನು ನೋಡುತ್ತೀಯೆ?'
'ಅಣುಗಳಂತಿರುವ ಬೀಜಗಳನ್ನು ನೋಡುತ್ತೇನೆ ಭಗವಂತನೆ'.
'ಇವುಗಳಲ್ಲಿ ಒಂದನ್ನು ಒಡೆ.'
'ಒದೆದೆನು ಭಗವಂತನೆ'
'ಇದರಲ್ಲಿ ಏನನ್ನು ನೋಡುತ್ತೀಯೆ?'
'ಏನೂ ಇಲ್ಲ ಭಗವಂತನೆ.'
60)ಉದ್ಧಾಲಕ: ಸೋಮ್ಯ,ಯಾವ ಈ ಸೂಕ್ಷ್ಮ ಅಂಶವನ್ನು ನೋಡದಿರುವೆಯೊ,ಈ ಸೂಕ್ಷ್ಮಾಂಶದಿಂದಲೇ ,ಸೋಮ್ಯ,ಈ ದೊಡ್ಡ ಆಲದಮರವು ಹುಟ್ಟಿದೆ..ಸೋಮ್ಯ,ಶ್ರದ್ಧೆಯಿಡು.ಶ್ರದ್ಧೆಯಿದ್ದರೆ ತಿಳಿದುಕೊಳ್ಳಬೇಕಾದ ಅಥ೯ವು ಮನಸ್ಸಿನಲ್ಲಿ ನಿಲ್ಲುವುದು.(ಪುಟ 312)
61)ಯಾವುದು ಈ ಸೂಕ್ಷ್ಮತಮವಾದ ಈ ಜಗನ್ಮೂಲವೊ ಅದರಿಂದಲೇ ಈಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ಸತ್ಯವು,ಅದು ಆತ್ಮನು ಓ ಶ್ವೇತಕೇತು ಅದುನೀನಾಗಿರುವೆ.(ಪ್ಟ 313)
ಹದಿಮೂರನೆಯ ಖಂಡ:(ಉಪ್ಪು-ನೀರಿನ ಉದಾಹರಣೆ)
62)'ಈ ಉಪ್ಪನ್ನು ನೀರಿನಲ್ಲಿಹಾಕಿ ಅನಂತರ ಬೆಳಿಗ್ಗೆನನ್ನ ಬಳಿಗೆ ಬಾ.' ಶ್ವೇತಕೇತುವು ಹಾಗೆಯೇ ಮಾಡಿದನು.
'ಉದ್ಧಾಲಕ:ವತ್ಸ,ನಿನ್ನೆ ರಾತ್ರಿ ಯಾವ ಉಪ್ಪನ್ನು ನೀರಿನಲ್ಲಿ ಹಾಕಿದೆಯೊ ಅದನ್ನು ತೆಗೆದುಕೊಂಡು ಬಾ"
ಶ್ವೇತಕೇತುವು ಅದನ್ನು ಹುಡುಕಿದರೂ ಸಿಗಲಿಲ್ಲ.ಏಕೆಂದರೆ ಅದು ನೀರಿನಲ್ಲಿ ಕರಗಿ ಹೋಗಿತ್ತು.
ನಂತ್ರ ಉದ್ಧಾಲಕನು ನೀರನ್ನು ಮೇಲ್ಭಾಗವನ್ನು ಕುಡಿಯಲು ಹೇಳಿದನು.
ಶ್ವೇತಕೇತು:'ಉಪ್ಪಾಗಿದೆ.'
ಉದ್ಧಾಲಕ:'ಈ ನೀರಿನ ಮಧ್ಯಭಾಗವನ್ನು ಕುಡಿ ಹೇಗಿದೆ?'
ಶ್ವೇತಕೇತು:' ಉಪ್ಪಾಗಿದೆ.'
ಉದ್ಧಾಲಕ:'ಈ ನೀರಿನ ಕೆಳಭಾಗವನ್ನು ಕುಡಿ'
ಶ್ವೇತಕೇತು: 'ಉಪ್ಪಾಗಿದೆ.'
ಉದ್ಧಾಲಕ: 'ಇದನ್ನು ಚೆಲ್ಲಿ ಅನಂತರ ನನ್ನ ಬಳಿಗೆ ಬಾ.'
ಅವನು ಹಗೆಯೇ ಮಾಡಿದ.'ರಾತ್ರಿ ನೀರಿನಲ್ಲಿ ಹಕಿದ ಉಪ್ಪು ಯವಾಗಲೂ ಅದೇ ನೀರಿನಲ್ಲಿಯೇ ಇರುತ್ತದೆ.
ಉದ್ಧಾಲಕ:'ಸೋಮ್ಯ,ಅದು ಅಲ್ಲಿಯೇ ಇದ್ದರೂ ನೀನು ಅದನ್ನು ನೋಡಲಿಲ್ಲ.ಹೀಗೆ ಸ್ವಸ್ತುವು ಈ ಶರೀರದಲ್ಲಿಯೇ ಇದೆ.'(ಪುಟ314)
63) ಯಾವುದು ಸೂಕ್ಷ್ಮತಮವಾದ ಈ ಜಗನ್ಮೂಲವೊ ಅದರಿಂದಲೇ ಈ ಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ಸತ್ಯವು.ಅದು ಆತ್ಮನು.ಓ ಶ್ವೇತಕೇತು ಅದೇ ನೀನಾಗಿರುವೆ(ತತ್ವಮಸಿ)(ಪುಟ 315).
ಹದಿನಾಲ್ಕನೆಯ ಖಂಡ:
64) ಗಂಧಾರ ದೇಶದ ಕಥೆ:
ಸೋಮ್ಯ,ದರೋಡೆಕೋರರು ಗಂಧಾರ ದೇಶದಿಂದ ಮನುಷ್ಯನೊಬ್ಬನನ್ನು ಕಣ್ಮುಚ್ಚಿ ಕರೆತಂದು ಅವನನ್ನು ನಿಜ೯ನವಾದ ಪ್ರದೇಶದಲ್ಲಿ ಬಿಟ್ಟರು.ಅವನು ದಾರಿಗಾಗಿ ತಡಕಾಡುತ್ತಿದ್ದನು.ಆಗ ಕಾರುಣಿಕನೊಬ್ಬನು ಬಂದು ಅವನ ಕಣ್ಣು ಕಟ್ಟುಗಳನ್ನು ಬಿಚ್ಚಿ "ಈ ದಿಕ್ಕಿನಲ್ಲಿ ಗಂಧಾರ ದೇಶ.ಈದಿಕ್ಕಿನಲ್ಲಿ ಹೋಗು ಎಂದು ಹೇಳಿದನು".ಅವನು ಹೀಗೆ ಅರಿತುಕೊಂಡು ಗಂಧಾರ ದೇಶವನ್ನು ಸೇರಿದನು.ಹಾಗೆಯೇ ಈ ಸಂಸಾರದಲ್ಲಿ ಆಚಾಯ೯ನನ್ನು ಪಡೆದ ಮನುಷ್ಯನೇ ಅರಿತುಕೊಳ್ಳುತ್ತಾನೆ.ಅವನಿಗೆ ಎಲ್ಲಿಯವರೆಗೆ ಮೋಕ್ಷವಾಗುವುದಿಲ್ಲವೂ ಅಲ್ಲಿಯವರೆಗೆ ವಿಳಂಬ.ಆಗಲೇ ಅವನು ಸದ್ವಸ್ತುವನ್ನು ಹೊಂದುತ್ತಾನೆ.(ಪುಟ 317)
65)ಹಿಂದಿನ ಯಾವುದೋ ಒಂದು ಪುಣ್ಯ ಕಮ೯ದ ವಶದಿಂದ ಪರಮ ಕಾರುಣಿಕನೂ ಮುಕ್ತನೂ ಆದ ಒಬ್ಬ ಬ್ರಹ್ಮವಿದನನ್ನು ಸಂಧಿಸುತ್ತೇವೆ.ಅವನು ಮಾಗ೯ವನ್ನು ತೋರಿಸುತ್ತನೆ.ಆಗ ನಾವು ಸಂಸಾರ ವಿಷಯಗಳಿಂದ ಮುಕ್ತರಾಗಿ ನಮ್ಮ ಆತ್ಮ ಸ್ವರೂಪವನ್ನು ಅರಿತುಕೊಂಡು ಸುಖಿಗಳಾಗುತ್ತೇವೆ.(ಪುಟ 317)
66)ಯವುದು ಸೂಕ್ಷ್ಮತಮವಾದ ಈ ಜಗನ್ಮೂಲವೊ ಅದರಿಂದ ಈಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ಸತ್ಯವು.ಅದು ಆತ್ಮನು.ಓ ಶ್ವೇತಕೇತು ಅದೇ ನೀನಾಗಿರುವೆ.(ಪುಟ 318)
ಹದಿನೈದನೆಯ ಖಂಡ:
67)'ಇನ್ನು ಯವಾಗ ಇವನ ವಾಕ್ಕು ಮನಸ್ಸಿನಲ್ಲಿ ಲಯವಾಗುವುದೊ ,ಮನಸ್ಸು ಪ್ರಾಣದಲ್ಲಿ ಲಯವಾಗುವುದೊ ,ಪ್ರಾಣವು ತೇಜಸ್ಸಿನಲ್ಲಿ ಲಯವಗುವುದೊ,ತೇಜಸ್ಸು ಪರದೇವತೆಯಲ್ಲಿ ಲಯವಾಗುವುದೊ ಆಗ ಅವರನ್ನು ಅರಿಯುವುದಿಲ್ಲ(ಪುಟ 31೯)
68)ಸಂಸಾರಿಯ ಮರಣಕ್ಕೂ ,ಜ್ಞಾನಿಯ ಸತ್ಸಂಪತ್ತಿ ಕ್ರಮಕ್ಕೂ ಯಾವ ಭೇದವೂ ಇಲ್ಲ,ಅಜ್ಞಾನಿಯು ತನ್ನ ಹಿಂದಿ ಕಮ೯ಫಲದ ಪ್ರಕಾರ ಪುನಃ ಹುಟ್ಟುತ್ತಾನೆ. ಆದರೆ ಜ್ಞನಿಯು ಶಾಸ್ತ್ರಾಚಾಯ೯ರ ಉಪದೇಶದಿಂದ ಉತ್ಪನ್ನವಾದ ಜ್ಞಾನದೀಪದಿಂದ ಪ್ರಕಾಶಮಾನವಾದ ಸದ್ಬ್ರಹ್ಮವನ್ನು ಪ್ರವೇಶಿಸಿ ಸಂಸಾರಕ್ಕೆ ಹಿಂದಿರುಗುದಿಲ್ಲ.(ಪುಟ 31೯)
6೯)ಯಾವುದು ಸೂಕ್ಷ್ಮತಮವಾದ ಈ ಜಗನ್ಮೂಲವೊ ಅದರಿಂದ ಈ ಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ಸತ್ಯವು.ಅದು ಆತ್ಮನು.ಓ ಶ್ವೇತಕೇತು ಅದು ನೀನಾಗಿರುವೆ.(ತತ್ವಮಸಿ)(ಪುಟ 320)
ಹದಿನಾರನೆಯ ಖಂಡ:
70)ಒಬ್ಬ ಮನುಷ್ಯನನ್ನು ಕೈಯಿಂದ ಹಿಡಿದುಕೊಂಡು ಕರೆತರುತ್ತಾರೆ;"ಇವನು ಅಪಹರಿಸಿರುತ್ತಾನೆ.ಇವನು ಕದ್ದಿರುತ್ತಾನೆ"ಎಂದು ಹೇಳುತ್ತಾರೆ.(ಅವನು ತಾನು ಕದ್ದಿಲ್ಲವೆಂದು ಹೇಳದರೆ "ಇವನಿಗಾಗಿ ಕೊಡಲಿಯನ್ನು ಕಾಯಿಸಿರಿ"ಎನ್ನುತ್ತಾರೆ.ಆ ಅನೃತವಾದಿಯು ಅನೃತದಿಂದ ತನ್ನನ್ನು ಮುಚ್ಚಿಕೊಂಡು ಕಾದ ಕೊಡಲಿಯನ್ನು ಹಿಡಿದುಕೊಳ್ಳುತ್ತಾನೆ.ಅವನು ದಹಿಸಲ್ಪಡುತ್ತಾನೆ.ರಾಜಭಟರಿಂದ ಹೊಡೆಯಲ್ಪಡುತ್ತಾನೆ.(ಪುಟ 321)
71)ಅವನು ಕಳ್ಳತನವನ್ನು ಮಾಡದಿದ್ದರೆ ಅದರಿಂದಲೇ ತನ್ನನ್ನು ಸತ್ಯವಾದಿಯನ್ನಾಗಿ ಮಾಡಿಕೊಳ್ಳುತ್ತಾನೆ.ಸತ್ಯವಾದಿಯು ಸತ್ಯದಿಂದ ತನ್ನನ್ನು ಮುಚ್ಛಿಕೊಂಡು ಕಾದ ಕೊಡಲಿಯನ್ನು ಹಿಡಿದುಕೊಳ್ಳುತ್ತಾನೆ.ಅವನು ದಹಿಸಲ್ಪಡುವುದಿಲ್ಲ.(ಪುಟ 321)
(ಈಗಿನ ಕಾಲಕ್ಕೆ ಇದು ಅನ್ವಯಿಸುವುದಿಲ್ಲ)
ಕಾದ ಕೊಡಲಿ ಮತ್ತು ಅದನ್ನು ಹಿಡಿದುಕೊಳ್ಳುವುದು ಸತ್ಯವಾದಿಗೂ ಅಮೃತವಾದಿಗೂ ಸಮಾನವಾಗಿದ್ದರೂ ಅನೃತವಾದಿಗೆ ಶಿಕ್ಷೆಯಾಗುತ್ತದೆ.ಸತ್ಯವದಿಗೆ ಬಿಡುಗಡೆ ಯಾಗುತ್ತದೆ.ಇದೇ ಪ್ರಕಾರ ಸಂಸಾರಿಯ ಮತ್ತು ಮುಮುಕ್ಷುವಿನ ಲಯಕ್ರಮವು ಸಮಾನವಾಗಿದ್ದರೂ ಮುಮುಕ್ಷುವು ಮೋಕ್ಷವನ್ನು ಪಡೆಯುತ್ತಾನೆಮತ್ತು ಸಂಸಾರಿಯು ಪುನಃ ಹುಟ್ಟುತ್ತಾನೆ.(ಪುಟ 321)
ಅವನು ಹೇಗೆ ಅಲ್ಲಿ ದಹಿಸಲ್ಪಡಲಿಲ್ಲವೊ (ಹಾಗೆಯೇ ಇಲ್ಲಿಯೂ ಕೂಡ)ಈ ಜಗತ್ತೆಲ್ಲವೂ ಆತ್ಮವಂತವಾಗಿದೆ.ಅದು ಸತ್ಯವು.ಅದು ಆತ್ಮನು.ಶ್ವೇತಕೇತು ಅದು ನೀನಾಗಿರುವೆ.(ಪುಟ 322)
ಶ್ವೇತಕೇತುವು ಉದ್ಧಾಲಕನ ಉಪದೇಶದಿಂದ ಸದ್ವಸ್ತುವನ್ನು ಅರಿತುಕೊಂಡನು.(ಪುಟ 322)
ಶ್ವೇತಕೇತುವು ಉದ್ಧಾಲಕನಿಂದ ಉಪದೇಶವನ್ನು ಪಡೆಯುವುದಕ್ಕೆ ಮೊದಲುತಾನು ಕಾಯ೯-ಕಾರಣಗಳಿಗಿಂತ ಭಿನ್ನವಾಗಿರುವ ಸದ್ರೂಪನು ಎಂಬುದನ್ನು ಅರಿತಿರಲಿಲ್ಲ.ತಂದೆಯು ತಕ೯ದಿಂದಲೂ,ದೃಷ್ಟಾಂತಗಳಿಂದಲೂ 'ಅದೇ ನೀನಾಗಿರುವೆ"ಎಂದು ಉಪದೇಶಿಸಲು ಆ ಸದ್ವಸ್ತುವೇ ತಾನು ಎಂಂಬುದನ್ನು ಅರಿತುಕೊಂಡನು.ವಿಕಾರವೂ ಅನೃತವೂ ಆದ ಕತೃ೯ತ್ವ-ಭೋಕ್ತøತ್ವಗಳಲ್ಲಿ ಅಧಿಕಾರಿಯು ತಾನು ಎಂಬ ಜೀವಾತ್ಮ ವಿಜ್ಞಾನವನ್ನು ಹೋಗಲಾಡಿಸುವುದು'ತತ್ವಮಸಿ'ವಾಕ್ಯಕ್ಕೆ ತಾತ್ಪಯ೯ವಾಗಿದೆ.(ಪುಟ 322)
,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,ಆರನೆಯ ಆಧ್ಯಾಯ ಮುಕ್ತಾಯವಾಯಿತು.,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,,
Subscribe to:
Post Comments (Atom)
No comments:
Post a Comment